ಒಟ್ಟು 93 ಕಡೆಗಳಲ್ಲಿ , 30 ದಾಸರು , 80 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವ ಬಾ ನಾರಾಯಣ ಬಾ ಬಾಮಾಧವಬಾ ಮಧುಸೂದನ ಬಾಪಗೋವಿಂದ ಬಾ ಬಾ ಗೋಪಾಲ ಬಾ ಬಾಗೋವರ್ಧನ ಗಿರಿಧಾರಿಯೆ ಬಾ ಅ.ಪರಂಗನೆ ಅಂದಿಗೆ ಗೆಜ್ಜೆಯಕಟ್ಟಿಚುಂಗುಬಿಟ್ಟು ರುಮಾಲನೆ ಸುತ್ತಿಶೃಂಗಾರದ ಹಾರ ಪದಕಗಳ್ಹಾಕಿಅಂಗಳದೊಳಗಾಡಲು ಕಳುಹುವೆನು 1ಚಂಡು ಬುಗುರಿ ಗೋಲಿ ಗಜ್ಜುಗ ಹರಿಯೆಗುಂಡು ಬಿಂದಲಿನಿಟ್ಟಿ ಕರದಲಿ ಕೊಡುವೆಹಿಂಡುಗೋಪಾಲರ ಕೂಡಿಸುವೆಪುಂಡರಿಕಾಕ್ಷನೆ ಪಾಲಿಸು ದೊರೆಯೆ 2ಹಸುಳೆ ನಿನಗೆ ಹೊಸ ಬೆಣ್ಣೆಯ ನೀವೆಬಿಸಿ ಬಿಸಿ ಕಡುಬು ಕಜ್ಜಾಯವ ಕೊಡುವೆಶಶಿಮುಖಿಯರ ಕೂಡಾಡದಿರೆನುವೆಮೊಸರು ಬೆಣ್ಣೆ ಪಾಲ್ಸಕ್ಕರೆ ಕೊಡುವೆ 3ಜರದವಲ್ಲಿ ಅಲಂಕರಿಸುತ ನಲಿವೆಪರಿಪರಿ ಗೆಳೆಯರ ಕೂಡಿಸಿ ಕೊಡುವೆಮುರಳಿ ನುಡಿಸೆನ್ನುತಕರಮುಗಿವೆಪರಮಾತ್ಮನೆ ಜಗನ್ಮೋಹನ ಹರಿಯೆ 4ಕಮಲಭವೇಂದ್ರಾದ್ಯಮರರು ಪೊಗಳೆಕಮಲಪುಷ್ಪ ಮಲ್ಲಿಗೆ ಮಳೆ ಕರೆಯೆಕಮಲನಾಭ ವಿಠ್ಠಲ ಶ್ರೀಹರಿಯೆಶ್ರಮ ಪರಿಹರಿಸೆನ್ನುತ ಪ್ರಾರ್ಥಿಸುವೆ 5
--------------
ನಿಡಗುರುಕಿ ಜೀವೂಬಾಯಿ
ಕೋಲಕೋಲೆಂದು ಕೋಮಲೆಯರೆಲ್ಲರಕಾಲುಗೆಜ್ಜೆಯು ಘಿಲ್ಲು ಘಿಲುಕೆಂದು ಇಲ್ಲೆ ಪ.ಸಿಂಧುಶಯನನ ಚಂದದಲೆ ನೋಡಿಆನಂದ ಭಾಷ್ಪದ ಬಿಂದು ಉದುರುತ ಪಾಡಿಮಂದಹಾಸದಿ ಮನೆಗೆ ಬಾರೆನಲುಕೂಡಿಕೊಂಡು ಕೃಷ್ಣನ ಸಭೆಯ ಪ್ರವೇಶಮಾಡಿ 1ಕರಲಾಘವ ಧರ್ಮ ಕೊಟ್ಟನು ರಾಜ ಶ್ರೇಷ್ಠನು ಮನನರಹರಿಯಲ್ಲಿಟ್ಟಿಹನು ವರಸಿಂಹಾಸನ ಏರಿದಶ್ರೇಷ್ಠ ತೋರಿದ ಬಲುಹರುಷ ಬೀರಿದರಾಜಗೋಪಾಲನ ನೋಡುವ ವರವ ಬೇಡುವ 2ಜಳಕುಜಳಕುರಂಗ ಜಳಜಳಿಸುತ ಬರಲುಬೆಳಕು ತುಂಬಿತು ಬಹಳೆಮಂದಿರದಲಿಥಳಕು ಥಳಕನೆ ಹೊಳೆವ ಸಿಂಹಾಸನದÀಲಿಕುಳಿತ ಕೃಷ್ಣನು ಅಣಕಿಸಿ ಸೂರ್ಯನ 3ಭೇರಿತುತ್ತೂರಿನಾನಾಪರಿವಾದÀ್ಯವಸಾರಿ ಕುಳಿತ ಧೀರ ಮುರಾರಿಚಾರುಮಲ್ಲಿಗೆ ಮಳೆಗರೆದ ಸುಖಸುರಿವರರಾಯರು ಏನು ಧನ್ಯರೆÉ ರಾಜಗೋಪಾಲನ್ನ ನೋಡುವ 4ಹಲವು ರಾಯರು ಹಲವು ಯಾದವರುಬಲುಸೊಗಸಿಲೆ ಬಂದು ಕುಳಿತಾರೆ ಅವರುಹಲಧರನ ಹತ್ತಿರೆ ರಾಮೇಶನವರುಜಲಜಾಕ್ಷನ ನೋಡುತಲೊಪ್ಪುತಿಹರು 5ಕಡು ಚಲ್ವ ರಾಮೇಶನ ಮಡದಿಯರುಉಡುರಾಜಮುಖಿಯರು ನಡೆದು ದ್ರೌಪತಿಸುಭದ್ರೆಯರ ಮಾನÀ ಶುದ್ಧೆಯರಹರಿಯ ಅಡಿಗೆರಗುವ ರಾಜಗೋಪಾಲನ ನೋಡುವ 6
--------------
ಗಲಗಲಿಅವ್ವನವರು
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ಪ.ಇಟ್ಟು ಹಣೆಯೊಳು ಉಗುರು ನಾಮವ ಗೋವಗಟ್ಟಿಗೆಯನು ಕರದೊಳು ಪಿಡಿದುಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆಮೆಟ್ಟಿ ಅಣ್ಣ ಬಲರಾಮ ನಡೆಯೆಂದು 1ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿಕೂಡಿಕೊಂಡು ಅಣ್ಣ ತಮ್ಮನೆಂದುಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ 2ಚಿಣ್ಣಿ ಪೊಂಬಗರ್ಚೆಂಡು ಗುಮ್ಮ ಗುಸಕು ಹಬ್ಬೆಅಣ್ಣೆಕಲ್ಲು ಹÀಲ್ಲೆ ಗಜಗ ಗೋಲಿಕಣ್ಣುಮುಚ್ಚಾಲೆ ಮರನೇರಾಟ ನೀರಾಟಸಣ್ಣರೊಳಾಡಿ ಸೋಲಿಪೆನೆಂಬ ತವಕದಿ 3ರಾಜಿಪ ರಾಜಬೀದಿಲಿನಿಂದುನೋಡುವರಾಜಮುಖಿಯರೊಳು ಸೆಣಸ್ಯಾಡುತರಾಜಕುಲಾಗ್ರಣಿ ಸರ್ವಭೂಷಣದಿ ವಿರಾಜಿತನಾಗಿ ಗೋಳಿಡುತ ಮುರಾರಿ 4ಜಗವ ಪುಟ್ಟಿಸಿ ನಲಿದಾಡುವಾಟವು ತನಗೆ ಸಾಲದೆಂದು ಆವಹಳ್ಳಿಲಿಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆಸುಗತಿನೀವೆನೆಂದು ಪ್ರಸನ್ವೆಂಕಟ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಜಯಮಂಗಳಂನಿತ್ಯಶುಭಮಂಗಳಂಪ.ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವಿಟ್ಟು ||ಪರತತ್ತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೆ ಆರತಿಯೆತ್ತಿರೆ 1ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳೆದುವೇದ ಮುಖವೆಂಬ ಕುಂಕುಮವನಿಟ್ಟು ||ಸಾಧು - ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಂ ಲಕ್ಷ್ಮೀಗಾರತಿಯೆತ್ತಿರೆ 2ತನುವೆಂಬ ತಟ್ಟಿಯಲಿ ಮನದ ಸೊಡರನು ಇಡಿಸಿಘನಶಾಂತಿಯೆಂಬ ಆಜ್ಯವನುತುಂಬಿ ||ಆನಂದವೆಂತೆಂಬ ಜ್ಯೋತಿಯನು ಹಚ್ಚಿತುಚಿನುಮಯ ಹರಿಗೆ ಆರತಿಯೆತ್ತಿರೆ 3ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನು ಕದಡಿ ||ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿಸೋಮಧರವರದಗಾರತಿಯೆತ್ತಿರೆ 4ನಾರದವಂದ್ಯಗೆನವನೀತ ಚೋರಗೆನಾರಾಯಣಗೆ ಶ್ರೀ ವರಲಕ್ಷ್ಮೀಗೆ ||ಸಾರಿದವರನು ಪೊರೆವ ಪುರಂದರವಿಠಲಗೆನೀರಜಮುಖಿಯರಾರತಿಯೆತ್ತಿರೆ5
--------------
ಪುರಂದರದಾಸರು
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆಪುಟ್ಟಬಾಲಕರೊಳುಪರಮಶ್ರೇಷ್ಠನಾದನಾಪಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನಕ್ನೂರರೂಪ ತೋರಿ ಭೂಮಿದಾನ ಬೇಡ್ದನ 1ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಮಾವ ಕಂಸನ ತರಿದ ಬಲರಾಮನನುಜನ 2ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ 3ಉಲಿವು ಮಾಡಬೇಡಿರಮ್ಮ ಚಲುವ ಮಲಗುವನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ 4ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ 5
--------------
ನಿಡಗುರುಕಿ ಜೀವೂಬಾಯಿ
ನಗಲುಬಹುದು ನಗಲುಬಹುದುನಗು ನಗು ರಂಗಯ್ಯಜಗದ ಮಾತು ಅ‌ಘದ ಧಾತುಬಗೆಯನರಿತು ಮುಗಳುನಗೆಯ ಪ.ಒರೆದು ಒರೆದು ಭಾರತದರ್ಥಅರಿದುಅರಿದುವರಭಾಗವತಪರಿಯ ಪರಿಯ ಪುರಾಣಶ್ರ್ರುತಿಯಪಾರಾಯಣ ಮಾಡಿ ಕುರುಡಬಧಿರನರರ ತೆರದಿಅರಹುಮರಹುಬೆರೆತು ಬೆರೆತು ತರತಮಿಲ್ಲದೆಹರಿಹರಜರು ಬೇರೆಬೇರಿಲ್ಲೆಂಬಪರಮಪಾತಕರಿರವ ನೋಡಿ 1ಮಕ್ಕಳ ಮಡದೇರಕ್ಕರ ಬಡಿಸಿರೊಕ್ಕದ ಮದದಿ ಸೊಕ್ಕಿ ಸಜ್ಜನರಲೆಕ್ಕಿಸದವಗೆ ರಕ್ಕಸರಂತೆನಿಕ್ಕರ ನುಡಿದು ಕಕ್ಕಸದಿಂದಪುಕ್ಕಟೆ ಪುಣ್ಯದ ಲೆಕ್ಕವ ಕಳೆದುಘಕ್ಕನೆ ಜವನೋರಿಕ್ಕಿದ ಬಲೆಗೆಸಿಕ್ಕಿ ಬಳಲುತ ನರ್ಕವನುಂಬಮೂರ್ಖರ ತಾಮಸಮುಖ್ಯರ ನೋಡಿ 2ಸುಂದೋಪಸುಂದ ಜಲಂಧರ ಕೀಚಕಕಂದರದಶಕ ಸೈಂಧವ ಜಟಾದ್ಯರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿಗುಂದಿ ಲಯವಾದರೆಂದುಕೇಳಿಇಂದುಮುಖಿಯರ ಚಂದಕೆ ಹುಚ್ಚಿಟ್ಟುಕಂದರ್ಪವಿಶಿಖವೃಂದ ವಶಾಗಿ ನೂರೊಂದುಕುಲ ಯಮಮಂದಿರ ಹೊಂದಿಪಮಂದರಮದೋನ್ಮತ್ತಾಂಧರ ನೋಡಿ3ಸುರರ ಸಂಪದ ಪರಮಪದಕೆಕಾರಣವಾಗಿರೆ ಸುರೇತರರೆಲ್ಲಇರುಳೆ ಹಗಲೆ ಸೈರಿಸಲಾರದೆಒರಗಿಹೋದ ವಿವರಕೇಳಿದುರುಳಕೌರವರ್ವರ ಪಾಂಡವರಸಿರಿತಮ್ಮದೆಂದ್ಹುರಿದು ಹೋಗಿರೆಪರರ ದ್ರವ್ಯಕ್ಕೆ ಮರುಗಿ ಬಯಸಿನರರು ಕೆಡುವ ಪರಿಯ ನೋಡಿ 4ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವಮತ ಮಹಿಮೆಯನತಿಕ್ರಮಿಸಿ ಕುತ್ಸಿತವೆನಿಸುವ ಪಥದಲಿಪತಿತರಾಗಿ ಸದ್ಗತಿಯ ಕಾಣದಚತುರ ಪರಿಯ ಅಮಿತ ಭಕ್ಷಕರಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟಪತಿಯೆ ನೀ ಮಂದಸ್ಮಿತದಲಿ 5
--------------
ಪ್ರಸನ್ನವೆಂಕಟದಾಸರು
ನಿನ್ನ ಮಗನ ಲೂಟಿ ಘನವಮ್ಮ-ಕರೆದು |ಚಿಣ್ಣಗೆ ಬುದ್ಧಿಯ ಹೇಳೇ ಗೋಪಮ್ಮ ಪಶಿಶುಗಳ ಕೈಲಿದ್ದ ಬೆಣ್ಣೆಗೆ ಉಳಿವಿಲ್ಲ |ಪಸು-ಕರುಗಳಿಗೆ ಮೀಸಲುಗಳಿಲ್ಲ ||ಮೊಸರ ಮಡಕೆಯಲಿಮಾರಿಹೊಕ್ಕಂತಾಯ್ತು |ಶಶಿಮುಖಿಯರು ಗೋಳಿಡುತಿಹರಮ್ಮ1ಮರೆತು ಮಲಗಿದ್ದವರ ಮೊಲೆಗಳ ತಾನುಂಬ |ಕಿರಿಯ ಮಕ್ಕಳಿಗೆ ಮೊಲೆಹಾಲಿಲ್ಲವೊ ||ಹೊರಗೆ ಲೂಟಿ ಒಳಗೆ ಈ ಲೂಟಿ-ಎ-|ಚ್ಚರದ ಬಟ್ಟೆಯ ಕಾಣೆವಮ್ಮ ಗೋಪಮ್ಮ 2ಊರೊಳಗಿರಲೀಸ ಊರ ಬಿಟ್ಟು ಹೋಗಲೀಸ |ಈರೇಳು ಭುವನಕೆ ಒಡೆಯನಂತೆ ||ವಾರಿಜನಾಭಶ್ರೀ ಪುರಂದರವಿಠಲನ |ಕೇರಿಯ ಬಸವನ ಮಾಡಿ ಬಿಟ್ಟೆಯಮ್ಮ 3
--------------
ಪುರಂದರದಾಸರು
ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವೆಂಕಟರಮಣಗಾರತಿಯತ್ತಿರೆ ಪ.ಮತ್ಸ್ಯಾವತಾರಗೆ ಮಂದರೋದ್ಧಾರಗೆಉತ್ಸಾಹದಿ ಭೂಮಿ ತಂದವಗೆ ||ವತ್ಸಗಾಗಿ ಕಂಬದಿಂದಲಿ ಬಂದಉತ್ಸವ ನರಸಿಂಹಗಾರತಿಯೆತ್ತಿರೆ 1ವಾಮನ ರೂಪದಿ ದಾನ ಬೇಡಿದವಗೆನೇಮದಿ ಕೊಡಲಿಯ ಪಿಡಿದವಗೆ ||ರಾಮನಾಗಿ ದಶಶಿರನನು ಕೊಂದಸ್ವಾಮಿ ಶ್ರೀ ಕೃಷ್ಣಗಾರತಿಯೆತ್ತಿರೆ 2ಬತ್ತಲೆ ನಿಂತಗೆ ಬೌದ್ಧಾವತಾರಗೆಉತ್ತಮ ಅಶ್ವವನೇರಿದಗೆ ||ಭಕ್ತರ ಸಲಹುವ ಪುರಂದರವಿಠಲಗೆಮುತ್ತೈದೆಯರಾರತಿಯೆತ್ತಿರೆ 3
--------------
ಪುರಂದರದಾಸರು
ಪೇಳಲಳವೆ ನಿನ್ನ ಮಹಿಮೆಯ-ಶ್ರೀರಂಗಧಾಮ|ಪೇಳಲಳವೆ ನಿನ್ನ ಮಹಿಮೆಯ ಪನೀಲಮೇಘಶ್ಯಾಮ ನಿನ್ನ |ಬಾಲಲೀಲೆಯಾಟವ ಅ.ಪವಿಷದ ಮೊಲೆಯ ಪೂತನಿಯ |ಅಸುವ ಹೀರಿದ ಶೂರನಾದೆ |||ಉಸಿರಲಳವೆ ನಿನ್ನ ಮಹಿಮೆ |ಅಮ್ಮಮ್ಮಮ್ಮಮ್ಮಮ್ಮ ||ಕೆಸರ ತಿನಬೇಡೆನುತ ತಾಯಿ |ಶಿಶುವಿನ ವದನವ ನೋಡಿದಳಾಗ |ದಶಚತುರ್ಭುವನವ ತೋರಿದ ಬಾಯೊಳ |ಗಲ್ಲಲ್ಲಲಲ್ಲಲ್ಲಲ್ಲೇ 1ಬಾಲಲೀಲೆಯ ಬಂಡಿ |ಕಾಲಿಲೊದ್ದು ಶಕಟಾಸುರನ ||ಮೂಲನಾಶ ಮಾಡಿದೆ ನೀ |ನಬ್ಬಬ್ಬಬ್ಬಬ್ಬಬ್ಬಬ್ಬ ||ತಾಳಮರದ ನಡುವೆಒರಳ|ಕಾಲಿಗೆ ಕಟ್ಟೆಳೆಯುತಿರಲು |ಬಾಲ ಸತ್ತನೆಂದುಗೋಪಿಅತ್ತ-|ಳಯ್ಯಯ್ಯಯ್ಯಯ್ಯಯ್ಯಯ್ಯೊ 2ಸಣ್ಣವನಿವನಲ್ಲ ನಮ್ಮ |ಬೆಣ್ಣೆ ಕದ್ದು ಗೊಲ್ಲರ ಮನೆಯ |ಹೆಣ್ಣು ಮಕ್ಕಳನು ಹಿಡಿದ ಕಳ್ಳ |ಎಲ್ಲೆಲ್ಲೆಲ್ಲೆಲ್ಲೆಲ್ಲೆಲ್ಲೆ ||ನಿನ್ನಾಣೆಯಿಲ್ಲೆಂಬ ರಂಗನ |ಬಿನ್ನಾಣಕೆ ನಕ್ಕವರನು ಬಯ್ಯುತ |ಎನ್ನ ಕಂದ ಹುಸಿಯನಾಡ |ನೆಂದೆಂದೆಂದೆಂದೆಂದು 3ನಾರಿಯರೆಲ್ಲ ಬತ್ತಲೆಯಾಗಿ |ನೀರಾಟವನಾಡುತಿರಲು |ಸೀರೆಗಳೊಯ್ದು ಮರವನೇರಿದ |ನತ್ತತ್ತತ್ತತ್ತತ್ತತ್ತ ||ವಾರಿಜಮುಖಿಯರು ಲಜ್ಜೆಯ ದೊರೆದು |ಸೀರೆಗಳನು ಬೇಡಲವರಮೋರೆ ನೋಡಿ ರಂಗ ನಕ್ಕ |ಅಬ್ಬಬ್ಬಬ್ಬಬ್ಬಬ್ಬಬ್ಬ 4ಕಾಡು ಕಿಚ್ಚು ಮುಸುಕಿ ಗೋವ-|ವಾಡಿಯು ಬೆಂದದ್ದು ನೋಡಿ |ಈಡಿಲ್ಲದ ಉರಿಯ ತೀಡಿದ |ಅತ್ತತ್ತತ್ತತ್ತತ್ತತ್ತ ||ಬೇಡಿದ ವರಗಳನೀವ |ಪುರಂದರವಿಠಲನ ಲೀಲೆಯ |ರೂಢಿಯೊಳೀಡನ ಸಮರು ಯಾರುಇಲ್ಲಿಲ್ಲಿಲ್ಲಿಲ್ಲಿಲ್ಲಿಲ್ಲ 5
--------------
ಪುರಂದರದಾಸರು
ಬಾರಮ್ಮ ಮನೆಗೆ ಸೌಭಾಗ್ಯದ ಮಹಲಕ್ಷ್ಮಿ ಪಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರುಮಾರನಯ್ಯನ ಕೂಡಿ ಮನ ಹರುಷದಿ ಬೇಗ ಅ.ಪಶಂಖು ಚಕ್ರ ಗದ ಪದ್ಮವು ಧರಿಸಿದಪಂಕಜಾಕ್ಷನಸಿರಿಪಟ್ಟದರಸಿದೇವಿಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆಬಿಂಕಮಾಡದಲೆ ಬಾ ವೆಂಕಟನರಸಿಯೆ1ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರಇಷ್ಟ್ಯಾರ್ಥಗಳ ಕೊಟ್ಟುದ್ಧರಿಪಭಾರ್ಗವಿತಾಯೆಭಕ್ತವತ್ಸಲನೊಡಗೂಡುತ ಬಾರಮ್ಮಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ 2ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿರನ್ನ ಪವಳ ಹಾರಾಲಂಕೃತ ಶೋಭಿತೆಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿಕರ್ನೇರು ಕರೆವರು ಕಮಲಾಕ್ಷನೊಡಗೂಡಿ 3ನಿಗಮವೇದ್ಯಳೆ ನಿನ್ನಅಗಣಿತಗುಣಗಳಪೊಗಳುವ ಸುಜನರಅಘಪರಿಹರಿಸುತ್ತಬಗೆ ಬಗೆ ನಾಮಗಳಿಂದ ಪೂಜೆಯಗೊಂಬಖಗವಾಹನನ ರಾಣಿ ಲಗುಬಗೆಯಿಂದಲಿ 4ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತಬಡನಡು ಬಳುಕುತ್ತ ಕೊಡುತ ವರಗಳನ್ನುಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರುಕಡಲೊಡೆಯನ ರಾಣಿ ಸಡಗರದಿಂದೊಮ್ಮೆ 5ಕ್ಷೀರವಾರಿಧಿಯ ಕುಮಾರಿಯೆ ಬಾರೆಂದುಸಾರಸಮುಖಿಯರು ಸರಸದಿ ಕರೆವರುಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆಚಾರುಮಂಗಳೆ ಸತ್ಯ ಶ್ರೀ ಭೂದುರ್ಗಾಂಬ್ರಣೆ 6ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದುನಮಿಸಿ ಬೇಡುವೆ ನಿನ್ನಭ್ರಮರಕುಂತಳೆ ತಾಯೆಕಮಲನಾಭ ವಿಠ್ಠಲನ ಕೂಡಿ ಹರುಷದಿಸುಮನಸರೊಡೆಯನಸತಿಸಾರ್ವಭೌಮಳೆ7
--------------
ನಿಡಗುರುಕಿ ಜೀವೂಬಾಯಿ
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
--------------
ಗೋವಿಂದದಾಸ
ಮೀಸಲ ಗುಣದೆಯರನೆಲ್ಲ ಮೋಸಗೈಸಿ ಕೊಳಲನೂದಿರಾಸಕ್ರೀಡೆ ಮಾಡಿದಾಭಾಸಬಹಳಯ್ಯಾ ಪ.ನೀನೆ ಎಂದವರೆದೊಡ್ಡ ಕಾನನದಿ ಬಿಟ್ಟು ಒಬ್ಬಮಾನಿನಿಯಜರಿದುನಡೆದಿ ಇನ್ನೇನು ಉಚಿತವಯ್ಯ ಕೃಷ್ಣ1ಎಳೆಯಬಳ್ಳಿ ಗಿಳಿಪಕ್ಷಿನಳಿನನಾಭನ ಕಂಡಿರೇನನಳಿನಮುಖಿಯರೆಲ್ಲ ತಿರುಗಿ ಬಳಲಿ ನಿಂತಾರೊ ಕೃಷ್ಣ2ಸೂಸು ಮಲ್ಲಿಗೆ ಸಂಪಿಗೆ ಜಾಜಿ ಹಾಸಿಕೆಯ ಮಾಡಿ ಅವಳಸೋಸುಪೂರೈಸುವ ಬಗಿಯು ಶ್ರೀಶ ರಮಸಿದಿಯೋ ಕೃಷ್ಣ3ಚಂದ್ರವದನೆಗೆ ಅಂಗದಲ್ಲಿ ಗಂಧ ಕಸ್ತೂರಿ ಕುಂಕುಮವಿಟ್ಟುಮಂದಾರಮಲ್ಲಿಗೆಯ ಮುಡಿಸಿ ಆನಂದ ಬಡಿಸಿದಿಯೊ ಕೃಷ್ಣ4ಇಂದಿರೇಶನ ಕಾಣದಲೆ ನೊಂದವರ ಮ್ಯಾಲೆ ಪರಿಮಳತಂದು ಹಾಕಿದ ವಾಯು ಪಾಪಿ ಎಂದು ಬಯ್ಯುತ ಕೃಷ್ಣ 5ತಂದು ಕನ್ನಡಿ ನಿಲ್ಲಿಸಿ ಒಳಗೆ ಚಂದ್ರನ್ಹೊಗಿಸಿಮ್ಯಾಲೆಕಲ್ಲುತಂದು ಹಾಕಿ ಅವನ ನಾವು ಕೊಂದರೆ ಪಾಪಿಲ್ಲ ಎನುತ6ಬೆಂದವರ ಮ್ಯಾಲೆ ಪರಿಮಳ ಚಂದ್ರನುಡಿಸಿದ ಕಂದನಿವನುಹಿಂದಿನ ವೈರವೇ ಸವತಿ ಇಂದಿನವನೆಂದು ಭವಿತ 7ಮಲ್ಲಿಗೆ ಸಂಪಿಗೆ ಜಾಜಿ ಚಲ್ವ ತುಳಸಿ ಯಮುನಾದೇವಿಫುಲ್ಲನಾಭನ ಕಂಡಿರೇನ ನಲ್ಲೆಯರು ಹಲಬುತ ಕೃಷ್ಣ 8ನೋಡುನೋಡುಕೆಳದಿ ಇಲ್ಲೆ ಜೋಡು ಹೆಜ್ಜಿ ತೋರುತಾವಮಾಡಿ ಕಪಟದಿ ರಂಗನ ಒಬ್ಬಳು ಓಡಿಸಿ ಒಯ್ದಾಳೆ ಎನುv 9ನಗಧರಒಬ್ಬ ಬಾಲೆಯಳ ಜಿಗಿದು ಎತ್ತಿದ ಹೆಜ್ಜೆ ನೋಡಿಸಿಗಲಿ ಅವಳು ರಂಗನ ಬೆರೆದ ಬಗಿಯ ತೋರೆನುತ ಕೃಷ್ಣ 10ಹಿಂಡುನಾರಿಯರೆಲ್ಲ ಕೂಡಿಕೊಂಡು ಅವಳ ಮಂಡೆಕುಕ್ಕಿಪುಂಡರಿಕಾಕ್ಷನ ತೋರೆದಿಂಡೆಮನುಜಳೆ ಎನುತ11ಇಷ್ಟು ನಾರಿಯರೊಳು ರಾಧೆ ಶ್ರೇಷ್ಠಳೆಂದು ಗರುವಿಸ್ಯಾಳುಅಷ್ಟರೊಳಗೆ ಅವಳ ನೀನು ಬಿಟ್ಟು ಪೋಗಿದ್ಯೊ ಕೃಷ್ಣ 12ಗಲ್ಲಕುಕ್ಕಿ ಅಂಜಿ ಅವಳು ಎಲ್ಲ ನಾರಿಯರಿಗೆ ಎರಗಿಫುಲ್ಲನಾಭಮಾಡಿದಪಾಟನಎಲ್ಲಿ ಉಸಿರಲೆ ಎನುತ13ವಿಧಿಗೆ ದಯವಿಲ್ಲ ನಮ್ಮ ಚದುರ ರಂಗನ ಅಗಲಿಸಿತುಮದನಬಾಣ ನೆಟ್ಟಿತೆಂದು ಸುದತೆಯರು ಹಲಬುತ ಕೃಷ್ಣ14ಶ್ರೀಶ ರಾಮೇಶನ ಯಾವ ದೇಶದಲ್ಲಿ ಹುಡುಕಲೆಂದುಕ್ಲೇಶಬಡಲು ಕೆಲದೆಯರೆಲ್ಲ ಸರ್ವೇಶ ಬಂದೆಂದ ಪಾರ್ಥ15
--------------
ಗಲಗಲಿಅವ್ವನವರು
ರನ್ನ ಚಿನ್ನದಕೋಲಹೊನ್ನು ಮುತ್ತಿನಕೋಲಪನ್ನಂಗಶಯನ ನಲಿದು ಒಲವೊ ಕೋಲ ಪ.ಇಂದಿರೇಶಗೆ ರಾಯ ಗಂಧ ಕಸ್ತೂರಿ ತೀಡಿಮಂದಾರಮಲ್ಲಿಗೆ ಮಾಲೆ ಚಂದದಲ್ಹಾಕಿ1ಶ್ರೀದೇವಿಯರಿಗೆ ಭದ್ರಾ ಕ್ಯಾದಿಗೆ ಮಲ್ಲಿಗೆ ಮುಡಿಸಿಊದು ಪರಿಮಳ ಮ್ಯಾಲೆ ಮೋದವ ಬಟ್ಟು 2ಅಂಬುಜಾಕ್ಷರಿಗೆ ರಾಯ ತಾಂಬೂಲ ಅಡಿಕೆಯ ಕೊಟ್ಟುಕಂಬುಕಂಠರಿಗೆ ಎರಗಿ ಸಂಭ್ರಮದಿಂದ 3ಸರಸಿಜಮುಖಿಯರಿಗೆ ಅರಿಷಿಣಕುಂಕುಮಹಚ್ಚಿಸರಸದ ವಸ್ತಗಳ ದ್ರೌಪತಿ ಅರಸಿಗೆ ಇಟ್ಟು 4ಪಚ್ಚಮುತ್ತಿನ ವಸ್ತ ಅಚ್ಯುತನಂಗದಲೆ ಇಟ್ಟುಉಚಿತ ವಸ್ತ್ರಗಳ ಕೊಟ್ಟು ಸ್ವಚ್ಚ ಮನದಿ 5ರುಕ್ಮಿಣಿ ಅರಸಿಯರಿಗೆ ಅನಘ್ರ್ಯ ವಸ್ತ್ರವಕೊಟ್ಟುಶೀಘ್ರದಿಂದ ಎರಗಿ ದ್ರೌಪತಿ ಹಿಗ್ಗಿದಳು 6ತಂದೆ ರಾಮೇಶಗೆ ಮಂದಗಮನೆಯರೆಲ್ಲಗಂಧ ಕುಂಕುಮ ವೀಳ್ಯ ವಸ್ತ ಅಂದದಿಕೊಟ್ಟು 7
--------------
ಗಲಗಲಿಅವ್ವನವರು
ರಾಜ ರಾಜರ ನೋಡ ಅಮ್ಮಯ್ಯಕೋಟಿ ತೇಜರು ನಿಂತಿಹರಮ್ಮಯ್ಯ ಪ.ಕುಂತಿ ಮಕ್ಕಳ ನೋಡ ಅಮ್ಮಯ್ಯಚಂದ್ರ ಕಾಂತಿಯಿಂದೊಪ್ಪುತ ಅಮ್ಮಯ್ಯನಿಂತ ಸೊಬಗು ನೋಡ ಅಮ್ಮಯ್ಯಲಕ್ಷ್ಮೀಕಾಂತನ ಇದುರಿಗೆ ಅಮ್ಮಯ್ಯ 1ಪಾಂಡವರ ನೋಡ ಅಮ್ಮಯ್ಯಸೂರ್ಯ ಮಂಡಲದಂತಿಹರ ಅಮ್ಮಯ್ಯದುಂಡಾಗಿ ನಿಂತಿಹರಮ್ಮಯ್ಯಅವರಕೊಂಡಾಡಲ್ವಶವಲ್ಲ ಅಮ್ಮಯ್ಯ2ಶಶಿಮುಖಿಯರ ನೋಡ ಅಮ್ಮಯ್ಯಕಾಂತೆ ದೇಶಲೆಲ್ಲ ಬೆಳಕು ನೋಡ ಅಮ್ಮಯ್ಯಹಸುಳೆಯರು ನಿಂತಿಹರಮ್ಮಯ್ಯನಮ್ಮ ಕುಸುಮನಾಭನ ಮುಂದೆ ಅಮ್ಮಯ್ಯ 3ಕಡು ಚಲುವೆಯರ ನೋಡಮ್ಮಯ್ಯನಿಂತಉಡುರಾಜಮುಖಿಯರಮ್ಮಯ್ಯಕಡಲಶಯನನ ಮುಂದೆ ಅಮ್ಮಯ್ಯಅವರಬೆಡಗು ಎಷ್ಟು ಹೇಳಲಮ್ಮಯ್ಯ4ಲಕ್ಷಣವಂತರಮ್ಮಯ್ಯನಿಂತು ನಕ್ಷತ್ರ ಮಾಲೆಯಂತೆ ಅಮ್ಮಯ್ಯವೀಕ್ಷಿಸಿ ರಾಮೇಶನ ಅಮ್ಮಯ್ಯಸುಖಅಕ್ಷಯಪಡೆದಿಹರಮ್ಮಯ್ಯ5
--------------
ಗಲಗಲಿಅವ್ವನವರು
ಶ್ರೀ ಮಂಗಳ ದೇವಿಗೆ ಜಯ ಜಯಶ್ರೀ ಮಂಗಳ ದೇವಿಗೆ ಜಯ ಜಯಸ್ವಾಮಿಗೆ ಜಯ ಸ್ವಾಮಿನಿಗೆ ಜಯ ಜಯವೆಂದು ಪಾಡಿ ಜಾನಕಿರಾಮಗಾರತಿಯ ಬೆಳಗಿರೆ ಪ.ಪದುಮಿಣಿಯರು ಪತಿವ್ರÀ್ರತಾಮಣಿಯರುವಿಧುಬಿಂಬದ ಮುಖಿಯರು ಸಖಿಯರುಪದುಮರಾಗದ ಹರಿವಾಣದಿ ಹರಿವಾಣದಿ ಹರಿಮಣಿದೀಪದಕದÀಡಿನಾರತಿಯ ಬೆಳಗಿರೆ 1ಉಲಿವಂದುಗೆಗಾಲಿನ ಮೇಲಿನಕಲಧೌತದ ಇತ್ತರದುತ್ತರಿಥಳಥಳಿಸುವ ಶಶಿರವಿ ಕೋಟಿಗಳ ಕೋಟಿಗಳಗೆಲುವ ರವಿಕುಲ ತಿಲಕಗಾರತಿಯ ಬೆಳಗಿರೆ 2ಅಂಗದವಲಯಾಂಗುಲಿಮುದ್ರಿಕೆರಂಗುಮಾಣಿಕ ಮುತ್ತಿನ ಸರಬಂಗಾರದ ಮೇಲೆವೈಜಯಂತಿವೈಜಯಂತಿ ಪದಕವು ತುಳಸಿಶೃಂಗಾರಗಾರತಿಯ ಬೆಳಗಿರೆ 3ಇಂದಿರೆಸೀತಾರ್ಪಿತಮಾಲಾಕಂಧರಭುವನಾವಳಿಗಪ್ರತಿಸುಂದರ ಸದ್ಗುಣಸಾಂದ್ರಉಪೇಂದ್ರ ಭೂಮಿಜೆÉೀಂದ್ರÀ ಲಕ್ಷ್ಮಣಾಗ್ರಜ ರಾಮ ಚಂದ್ರಗಾರತಿಯ ಬೆಳಗಿರೆ 4ಕುಂಡಲಮುಕುಟಾಂಕಿತ ಸನ್ಮುಖ ಸುಭ್ರೂಹಿತಮಂಡಲ ಗಂಡದಪುಂಡರೀಕಾಭಾನಯನದ ನಯನದ ಘನಶಾಮಲವರಕೋದಂಡಗಾರತಿಯ ಬೆಳಗಿರೆ 5ಋಷಿಮಖವನು ಈಕ್ಷಿಸಿ ರಕ್ಷಿಸಿವಿಷಕಂಠನ ಧನುವ ಮುರಿಹೊಯಿದು ಮುರಿಹೊಯಿದುತುಷಿಸಿದಗಾರತಿಯ ಬೆಳಗಿರೆ 6ಹನುಮನ ಕಂಠದ ಸನ್ಮಣಿಗೆಪಣೆಗಣ್ಣನ ಶ್ರೀ ಜಪಮಣಿಗೆನೆನೆವರ ಚಿಂತಾಮಣಿ ಸೀತಾಶಿರೋಮಣಿಗೆ ಶಿರೋಮಣಿಗೆಪ್ರಸನ್ನವೆಂಕಟ ವನಜೋದ್ಭವಪಿತಗಾರತಿಯ ಬೆಳಗಿರೆ 7
--------------
ಪ್ರಸನ್ನವೆಂಕಟದಾಸರು