ಒಟ್ಟು 156 ಕಡೆಗಳಲ್ಲಿ , 43 ದಾಸರು , 137 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾನವಿಲ್ಲ ಧರ್ಮವಿಲ್ಲ ಜ್ಞಾನವಿಲ್ಲಏನು ಹೇಳಿದರೇನು ವಿಷಯಮೆಚ್ಚಿದವಗೆ ಪ. ಕಂಡಕಂಡವರ ಅನ್ನಕೆ ಸಿಲುಕಿ ಅನುಗಾಲಭಂಡತನದಲಿ ಕಾಲವ ಕಳೆಯುತತಂಡ ತಂಡದಿ ಬಾಹ ಔತಣಕೆ ಮೈಯ್ಯುಬ್ಬಿಉಂಡು ಎನಗಿಂದಧಿಕ ಯೋಗ್ಯನಿಲ್ಲವೆಂದು 1 ಪರ್ವಕಾಲ ಪಿತೃದಿವ್ಸ ಗುರುಗÀಳ ಪುಣ್ಯದಿನಸರ್ವಕರ್ಮವ ತ್ಯಜಿಸಿ ಅತಿಥಿಗೀಯದೆಪರರ ಅನ್ನವ ಬಿಡದೆ ಉತ್ಸಾಹದಲಿ ಪೋಗಿನಲಿನಲಿದುಂಡು ಸ್ತೋತ್ರವ ಮಾಡಿ ದಿನಕಳೆವೆ 2 ಅನ್ಯರೊಡವೆಯು ತನಗೆ ಬಂದರೆ ಸಂತೋಷತನ್ನೊಡವೆ ಒಬ್ಬರಿಗೆ ಕೊಡಲು ಕ್ಲೇಶಉನ್ಮತ್ತನಾಗಿ ಉದರವ ಪೊರೆವ ಈ ದೋಷಮನ್ನಿಸಿ ದಯಮಾಡಿ ಸಲಹೋ ಹಯವದನ3
--------------
ವಾದಿರಾಜ
ದಾಸ ಪಟ್ಟವೋ ಸನ್ಯಾಸ ಪಟ್ಟವೋ ಪ ಆಸೆಯಿಂದ ನೆಲೆಯಾದಿಕೇಶವನ್ನ ನೆನೆಯದವಗೆಅ ಮಂಡೆ ಬೋಳು ಮಾಡಿ ನಾಮದುಂಡೆಯನ್ನು ಬರೆದು ಕೆಡಿಸಿಕಂಡಕಂಡವರನು ಕೂಡಿಭಂಡ ಜನ್ಮ ಹೊರೆಯುವವಗೆ 1 ಅವರಿವರ ಕೈಯ ನೋಡಿ ಹ-ಲವು ಕೆಲವು ಮಾತನಾಡಿ ಹ-ಲವ ಹಂಬಲಿಸಿ ದಿ-ನವ ಕಳೆದು ಉಳಿದು ಬಾಳುವಗೆ 2 ಬೆಂದ ಸಂಸಾರವೆಂಬಬಂಧನದೊಳಗೆ ಸಿಲುಕಿಕೊಂಡುಚೆಂದಾದಿಕೇಶವನ್ನಒಂದು ಬಾರಿ ನೆನೆಯದವಗೆ 3
--------------
ಕನಕದಾಸ
ದಾಸರಾಯರ ಪಾಡಿರೋ | ರಂಗನೊಲಿದ ಶ್ರೀ |ದಾಸರಾಯರ ಪಾಡಿರೋ ಪ ದಾಸರಾಯರ ಪಾಡಿ | ದೋಷಗಳೀಡಾಡಿಶಾಶ್ವತ ಲೋಕಗ | ಳಾಶಿಪ ಜನರೆಲ್ಲಾ ಅ.ಪ. ಮಾನವಿ ಕ್ಷೇತ್ರಸ್ಥಿತನೂ | ಘನಕರ್ಣೀಕ ನರಸಪ್ಪನೆಂಬ ದ್ವಿಜನೂ |ಜ್ಞಾನಿ ತಿಮ್ಮಣ್ಣನ ಸತಿಸಹಿತ ಸೇವಿಸೆಮಾನ್ಯ ಸಹ್ಲಾದ ತಾ ಸುತನಾಗಿ ಜನಿಸಿದ 1 ಶಾಲಿವಾಹನ ಶಕವೂ | ಮತ್ತೇಗಾಳಿಗಣಯುತ ಹತ್ತಾರ್ನೂರು |ಕೀಲಕವತ್ಸರ ಶುಕ್ಲ ಶ್ರಾವಣದಲ್ಲಿಶೀಲ ವೆರಡೆನೆ ದಿನ ಜನಿಸಿಹರನ್ನಾ 2 ಈತನು ಹರಿಭಕ್ತನೊ | ಪ್ರಹ್ಲಾದಗೆಪ್ರೀತಿಯ ಸೋದರನೋಧಾತ ಜನಕ ಹರಿ ಮಾತಿನಿಂದಲಿ ಇವಖ್ಯಾತನಾಗಿ ಶ್ರೀನಿವಾಸನೆಂದೆನಿಸಿದ 3 ಆದ ಸಕಾಲದಿ ದ್ವಿಜನು | ಸದ್‍ಬೋಧಿತ ವರದೇಂದ್ರರಿಂ |ಭೇದ ಮತದೊಳದ್ವಿತೀಯ ನೆಂದೆನಿಸುತ್ತವಾದಿ ನಿಗ್ರಹದೊಳತ್ಯಾದರವನೆ ಪೊತ್ತ4 ಒದಗಲುದ್ಧುøತ ಕಾಲವೂ | ಪ್ರಾಪ್ತಸಾಧು ವಿಜಯ ದಾಸರು | ಮುದದಿ ನರ್ತವಗೈದು ಕೀರ್ತನೆ ಪಾಡಲುಹದಗೆಟ್ಟನಿವನೆಂದು ಬಿರುನುಡಿ ನುಡಿದಂಥಾ5 ಒದಗಲುದರ ರೋಗವೂ | ಮುಂದೆಹದನ ಕಾಣದೆ ತಪಿಸಾಲು |ಮೋದ ತೀರ್ಥರ ರೂಪ ಆದರದಲಿ ಭಜಿಸಿಸಾಧು ಸೋತ್ತಮ ದ್ರೋಹ ಕಳವ ಮಾರ್ಗವ ತಿಳಿದ6 ವಿಜಯ ದಾಸರ ಪಾದವಾ | ತಮ್ಮಯನಿಜ ಶಿರದೊಳು ಪೊತ್ತು ಮೆರೆವಾ |ನಿಜ ಶಿಷ್ಯ ಗೋಪಾಲದಾಸರಲ್ಲಿಗೆ ಬಂದುಭಜಿಸೆ ಅವರ ಆಯು ನಾಲ್ವತ್ತು ಪಡೆದಂಥ 7 ಮಂತ್ರಿತ ಭಕ್ಕರಿಯಾ | ಭುಜಿಸೆ ದೇಹಯಂತ್ರ ಸಾಧನ ಕೊದಗಲೂ |ಮಂತ್ರೋಪದೇಶವ ಗೊಳ್ಳುತ ಮುದದಿಂದೆಯಂತ್ರೋದ್ಧಾರಕ ಪ್ರಿಯ ರಂಗನ ಒಲಿಸಿದ 8 ಇಂದು ಭಾಗದಿ ಸ್ನಾನವೂ | ಮಾಡುತಲಿರೆಸ್ಕಂಧಾ ರೋಹಿತ ಶಿಲೆಯಸ್ಥ |ಇಂದಿರಾ ರಮಣ ಶ್ರೀ ಜಗನ್ನಾಥ ವಿಠಲನಸುಂದರಾಂಕಿತವನ್ನು ಧರಿಸಿದ ಶಿರದಲ್ಲಿ 9 ಪಾಂಡುರಂಗನ ಕಾಣುತ | ತನ್ನಯದಿಂಡುಗೆಡಹಿದ ಆಕ್ಷಣಾ |ಅಂಡಜಾಧಿಪನುದ್ದುಂಡ ದೇವರ ದೇವಪುಂಡರೀಕಾಕ್ಷನ ಪಾದಕೆ ಶರಣೆಂದ 10 ಸ್ವಾದಿ ಕ್ಷೇತ್ರಕ್ಕ ಪೋಗೀ | ಪೂಜ್ಯರಾದವಾದಿರಾಜರ ಪೂಜಿಸೀ |ಸಾಧು ವರ್ಯರ ಆಜ್ಞಾಧಾರಕರಿವರಾಗಿಬುಧರಿಗೆ ಹರಿಕಥಾ ಸುಧೆಯ ಸಾರವನಿತ್ತ 11 ಪದ ಸುಳಾದಿಗಳಿಂದಲಿ | ಹರಿಯ ಪಾದಸದ್ವನಜವ ಸ್ತುತಿಸುತಲೀ |ಹೃದಯ ಸದ್ಮದಿ ತದ್ಧಿಮಿ ಧಿಮಿ ಧಿಮಿಕೆಂದುವಿಧಿಪಿತ ಹರಿಯನ್ನ ಕುಣಿಸಿ ಮೋದಿಸಿದಂಥ 12 ಸುವತ್ಸರವು ಶುಕ್ಲದೀ | ಸಿತಭಾದ್ರನವಮಿ ತಾರೆಯು ಮೂಲದೀ |ರವಿಯ ವಾರವು ಸಂದ ಶುಭದಿನದಲಿ ಗುರುಗೋವಿಂದ ವಿಠಲನ ಸೇರಿ ತಾಮೆರೆದಂಥ 13
--------------
ಗುರುಗೋವಿಂದವಿಠಲರು
ದಿನದಿನದೊಳು ಬಿಡದೊನಜಾಕ್ಷ ಪಾದ ಭಜಿಸಿ ನೀ ಸುಖಿಯಾಗೊ ಮನವೆ ಪ ನಂಬುಗೆ ಕಾರಣ ಅಂಬುಜಾಕ್ಷನ ಶ್ರೀಪಾ ದಾಂಬುಜ ಒಲಿಸಲು ಕುಂಭಿಣಿಯೊಳಗೆ ನಂಬಿ ಪ್ರಹ್ಲಾದ ಕರೆಯೆ ಕಂಬದಿಂ ಬಂದವನ ಬೆಂಬಿಡದಲೆ ಕಾಯ್ದನೆಂಬೋಕ್ತಿ ಕೇಳಿ ತಿಳಿದು 1 ದುರಿತದ ತವರಿದು ನರಕಕ್ಕೆ ಬೇರೆಲೊ ಮರವೆಸಂಸಾರ ಮಹಸರಸಿನಸರೋವರ ಸುರಸಿನೊಳ್ ಸಿಲ್ಕಲು ತಿರುಗರೆಂಬುವ ಹರಿಶರಣರ್ವಾಕ್ಯಗಳು ಸ್ಥಿರನಂಬೀ ಅರಿತು 2 ಕಿರಿಕಿರಿ ಸಂಸಾರ ಪರಿಪರಿಬಾಧಿಪ ಉರಿಕಿನ ತಿಂಡಿಯಿದು ನೆರೆನಂಬಬೇಡ ಜರಸುಖವಿಲ್ಲದ ಎರವಿನ ಕಾಯಕ್ಕೆ ಹಿರಿಹಿರಿ ಹಿಗ್ಗಿ ಕೆಡದಿರು ವಿವರಿಸಿನೋಡಿ 3 ಸತಿಸುತರಿವರೆಲ್ಲ ಅತಿಭಾಗ್ಯ ಇರುವನಕ ಸತತ ನಿನ್ನಯ ಸೇವೆ ಹಿತದಿಂ ಮಾಳ್ಪರು ಗತಿಸಿ ಪೋಗಲು ಭಾಗ್ಯ ಸತಿಸುತರೆ ನಿನ ಗತಿವೈರಿಗಳು ಕಾಣೊ ಮತಿಹೀನ ಮನಸೆ 4 ಇರುಳು ಹಲವು ಪಕ್ಷಿ ನೆರೆದುಂಡು ವೃಕ್ಷದಿ ತಿರುಗಿ ಉದಯದೊಳು ಹಾರಿಹೋಗ್ವ ತೆರದಿ ಸರುವ ಅಸ್ಥಿರವೆಂದು ಅರಿತು ವಿಚಾರಿಸಿ ಸ್ಥಿರಸುಖವನು ಪಡೆಯೊ ಶ್ರೀರಾಮನಡಿಗ್ಹೊಂದಿ 5
--------------
ರಾಮದಾಸರು
ದೀಪ ಬೆಳಗುವಾಗಾ ಉಣ್ಣುವರುಣ್ಣಿರೋ ಬೇಗ ಬೇಗಾ ದೀಪ ಲೋಪವಾದಮೇಲೆ ಬರಿದಪ್ಪುದು ಭೋಜನಶಾಲೆ ಪ ಚಿತ್ತಶುದ್ಧಿಎಂಬ ಎಳೆಬಾಳೆಎಲೆ ಎಡೆಮಾಡಿ ನಿತ್ಯನಿರ್ಮಲವೆಂಬ ರಾಜಾನ್ಹವ ನೀಡಿ ಸತ್ಯಸಾಧುಸಂಗವೆಂಬ ಘೃತಸಾರಾನ್ಹವ ನೀಡಿ ಪ್ರತ್ಯುಗಾತಮ ಆತ್ಮನ ನಿರಂತರ ತೃಪ್ತಿಬಡಿಸಿ ನೋಡಿ ದೀಪ 1 ಗುರುಕೃಪೆಯೆಂದೆಂಬ ಪರಡಿಯ ಪಾಯಸದಾಹಾರಾ ನಿರುತಾನ್ಹ ಉದಾನಮಾಡಲು ಷಡುರಸದುಪಚಾರಾ ಹರಿಹರ ಭೇದಗಳಡಗಿದನು ಭವಾಮೃತ ಸಾರಾ ಪೊಸದುಪ್ಪದಭಾರಾ ದೀಪ 2 ಕೆಂದ ಆಕಳÀ ಕರೆದು ಕಾಸಿದ ಕ್ಷೀರವ ಕೈಕೊಂಡು ತಂದೆ ತಾಯ್ಗಳ ಭಕುತಿ ಮಾಡಿದ ಮಸುರೋಗರ ಉಂಡು ವಂದಿಸಿ ಶ್ರೀ ಗುರು ವಿಮಲಾನಂದನ ಸೈಂದವನೊಳಗೊಂಡು ತೇಗುತ ಮೆರದುಂಡು 3
--------------
ಭಟಕಳ ಅಪ್ಪಯ್ಯ
ದುಂಡು ಮುಖವುಳ್ಳ ಹುಡುಗನ ಕಂಡಿರಾಚಂಡನಾಡುತ ಬಂದ ಚದುರೆಯರ ಓಣಿಯಲಿ ಪ ಕರದೊಳಗೆ ಕೊಳಲಿಹುದು ಚರಣದೊಳು ರುಳಿಗೆಜ್ಜೆಕೊರಳೊಳಗೆ ಸರಪದಕ ಗುರುಳು ಮುಖದಿಜರದೊಲ್ಲಿ ಹೊದ್ದಿಹನು ಸ್ಮರನ ಮೋಹಿಪ ರೂಪಸಿರಿಯ ಕಂಡರೆ ಅವನ ಪರರು ಬಿಡರಮ್ಮ 1 ವಾರಿಜಾಕ್ಷೆರೆ ಬಹಳ ಜಾರಚೋರೆನ್ನ ಮಗವಾರೆನೋಟದಿ ಮನಸು ಹಾರಿಸುವನುಸಾರಿದರೆ ಮನೆಗಳಿಗೆ ದ್ವಾರಯಿಕ್ಕುತೆ ಬನ್ನಿದೂರು ಪೇಳಲು ಕೇಳಿ ಸಾರಿದೆನು ಮೊದಲೆ 2 ಕಂದನಾಗುವ ಕ್ಷಣದಿ ಒಂದೆ ಪ್ರಾಯದ ಪುರುಷಸುಂದರಾಂಗಿಯಳಾಗಿ ಬರುವನಂದಬಾಲನ ಮಹಿಮೆ ಬಂದು ನಂಬಲಿ ಬೇಡಿಇಂದಿರೇಶನು ಬಹಳ ಮಂದಿ ಮೋಹಿಸುವ 3
--------------
ಇಂದಿರೇಶರು
ದುಂಡುಗಟ್ಟಿ ನಿಂತರಮ್ಮದುಂಡುಗಟ್ಟುತ ಎಲ್ಲರೂದುಂಡುಗಟ್ಟುತ ಪೆಂಡೆಯಗೆಜ್ಜೆಗಳು ಘಿಲ್ಲು ಘಿಲಕು ಎನ್ನುತ ಪ. ಕೋಗಿಲಂತೆ ಸ್ವರವನೆತ್ತಿಬಾಗಿ ಬಳಕುತ್ತ ಎಲ್ಲರೂಬಾಗಿ ಬಳುಕುತ್ತ ನಾಗವೇಣಿಯರುಚಂದ್ರನ್ಹಾಂಗೆ ಒಪ್ಪುತ ಚಂದ್ರನ್ಹಾಂಗೆ ಒಪ್ಪುತ1 ಕಮಲ ಮುದದಿ ಎತ್ತಿಮುಗಿಯುತರಂಗಗೆ ಎತ್ತಿ ಮುಗಿಯುತ 2 ಲಕುಮೇಶನಲ್ಲೆ ಸ್ನೇಹ ಉಕ್ಕಿ ಚೆಲ್ಲುತ ಶರದಿ ಉಕ್ಕಿಚಲ್ಲುತ ಅಕ್ಕನೇತ್ರವೆಂಬೊ ಕುಮುದ ಚಕ್ಕನೆ ಅರಳುತ ಚಕ್ಕನರಳುತ 3 ರಂಗನಂಫ್ರಿಗೆರಗುವಂತೆ ಭೃಂಗವಾಗುತ ಎರಗಿಭೃಂಗವಾಗುತ ತಮ್ಮಅಂಗ ಮರೆದು ಮುದದಿಉತ್ತುಂಗರಾಗುತ ಉತ್ತುಂಗರಾಗುತ4 ಹರವಿದ ಕ್ಯಾದಿಗೆಯು ನÀವಿಲು ಗರಿಯಂತೊಪ್ಪುತ ನವಿಲುಗರಿಯಂತೊಪ್ಪುತ ಶ್ರೀ ರಾಮೇಶನೆಂಬೊ ಮುಗಿಲಿಗೆ ಪರಿವೆ ನಲಿಯುತ ಪರಿವೆನಲಿಯುತ5
--------------
ಗಲಗಲಿಅವ್ವನವರು
ಧನವಂತನಾದವನೆ ಘನವಂತ ಜಗದಿ ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ ಮನ್ನಿಪರು ಅವನೊಚನ ಘನಭಕುತಿಲಿಂದ 1 ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ ತಿರುಗುವನು ಎಂದೆನುತ ತಿರಿಸುವರು ಹೀನ 2 ಬಂಧುಬಳಗವುಯೆಂದು ಬಂದು ಕರೆಯಲವನ ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು ಚಂದದಿಂದುಂಡೇವೇನೆಂದು ಜರೆವರು ಮನಕೆ ಬಂದ ತೆರದವನ ಮನನೊಂದಳಲುವಂತೆ 3 ಹತ್ತಿರದವರಾರು ಹತ್ತಿರಕೆ ಬಾರರು ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4 ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ ಚರಿಸುವ ಅಧಮಜನರಿರವೇನು ಜಗದಿ ಗರುವಿಕರ ಸಿರಿಗಿಂತ ಶರಣರ ಬಡತನವೇ ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5
--------------
ರಾಮದಾಸರು
ನಾರದ ಕೊರವಂಜಿ ಜಯ ಜಯ ದಯಾಕರನೆ ಹಯವದನ ಭಯಹರನೆ ಜಯ ಶೀಲಸಾಧ್ವರನೆ ಜಯ ದೀನೋದ್ಧರನೆ ಪ್ರಿಯಜನ ಮನೋಹರನೆÀ ಸುಯತಿ ಸಾಕಾರನೆ 1 ಹರಿಯೇ ಪತಿಯಾಗಬೇಕೆಂದು ರುಕುಮಿಣಿ ಪರದೇವತೆಯ ನೆನವುತಿರಲು ಕೊರವಂಜಿ ವೇಷದಿ ರುಕುಮಿಣಿದೇವಿಗೆ ಪರಮ ಹರುಷವೀವೆನೆಂದು ನಾರದ ಬಂದ 2 ಧರಣಿ ಮಂಡಲದಲ್ಲಿ ನಾರದ ಧರಿಸಿ ಕೊರವಂಜಿ ವೇಷವ ಸುರನರಾದಿಗಳೆಲ್ಲರಿಗೆ ತಾ ಪರಮ ಆಶ್ಚರ್ಯ ತೋರುತ್ತ 3 ಬಂದಳು ಕೊರವಂಜಿ ಚಂದದಿಂದಲಿ ಮಂದಹಾಸವು ತೋರುತ್ತ ಪಾದ ಧಿಂಧಿಮಿ ಧಿಮಿ- ಕೆಂದು ನಿಂದಭೀಷ್ಟವ ಪೇಳುತ 4 ಗಗನದಂತಿಹ ಮಧ್ಯವು ಸ್ತ- ನಘನ್ನ ಭಾರಕೆ ಬಗ್ಗುತ ಜಗವನೆಲ್ಲವ ಮೋಹಿಸಿ ಮೃಗ ಚಂಚಲಾಕ್ಷದಿ ನೋಡುತ 5 ಕನಕಕುಂಡಲ ಕಾಂತಿಯಿಂದಲಿ ಗಂಡಭಾಗವು ಹೊಳೆವುತ್ತ ಕನಕಕಂಕಣ ನಾದದಿಂದಲಿ ಕಯ್ಯ ತೋರಿ ಕರೆಯುತ್ತ 6 ಕುಂಕುಮಗಂಧದಿ ಮಿಂಚುವೈಯಾರಿ ಚುಂಗು ಜಾರಲು ಒಲವುತ್ತ ಕಿಂಕಿಣಿ ಸರಘಂಟೆ ಉಡಿಯೊಳು ಘಲ್ಲು ಘಲ್ಲೆಂದು ಬಂದಳು ಘಲ ಘಲ ಘಲ್ಲು ಘಲ್ಲೆಂದು ಬಂದಳು 7 ಕರೆದಾಳೆ ಸುಪಲ್ಲವ ಸುಪಾಣಿ ಕೀರವಾಣಿ ಪರಿಮಳಿಸುವ ಫಣಿವೇಣಿ 8 ಪರಿಪರಿ ಬೀದಿಯಲ್ಲಿ ನಿಂದು ಹಿಂದೂ ಮುಂದೂ ಸರಸವಾಡುತ್ತ ತಾನೆ ಬಂದು 9 ಕೊರವಂಜಿ ಯಾರೊಳಗೆ ನೋಡಿ ಕೂಡಿಯಾಡಿ ಸರಿಯಿಲ್ಲವೆಂದು ತನ್ನ ಪಾಡಿ 10 ಮನೆಮನೆಯಿಂದ ಬಂದಳು ಕೊರವಂಜಿ ತಾನು ಮನೆಮನೆಯಿಂದ ಬಂದಳು ರನ್ನವ ತೆತ್ತಿಸಿದ ಚಿನ್ನದ ದಿವ್ಯ ಬುಟ್ಟಿ ತನ್ನ ನೆತ್ತಿಯಲ್ಲಿಟ್ಟು ಬೆನ್ನಿಲಿ ಸಿಂಗಾನ ಕಟ್ಟಿ 11 ಗದ್ಯ : ಸುಗುಣಾಂಗಿಯರು ಪೇಳಲು ಮುದದಿಂದ ರುಕುಮಿಣಿದೇವಿ ತಾನೂ ಮುಗುಳು ನಗೆಯಂ ನಗುತ ಕೊರವಂಜಿಯನೆ ಅತಿಬೇಗ ಜಗವರಿಯೆ ಕರೆಯೆಂದಳು. ಶ್ರೀ ರುಗ್ಮಿಣಿ ತಾ ಬಂದಳು ಸ್ತ್ರೀಯರ ಕೂಡಿ ಚಾರುಹಾಸದಿಂದೊಪ್ಪುತ ಚೆಲ್ವ ದಿವ್ಯ ನೋಟಂಗಳಿಂದ ರಾಜಿಪ ಕಂಕಣದಿಂದ ರಮ್ಯ ನೂಪುರಗಳಿಂದ ರಾಜಚಿಹ್ನೆಗಳಿಂದ ರಾಜೀವನೇತ್ರೆ ಒಲವುತ್ತ12 ರಾಜಾಧಿರಾಜ[ರು]ಗಳಿಂದ ರಾಜಸಭೆಯಲ್ಲಿ ಪೂಜಿತಳಾದ ರಾಜಹಂಸಗ-ಮನೆಯು ಬರಲು ರಂಜಿತಳಾಗಿ ಒಲೆವುತ್ತ ಗದ್ಯ : ಆಗಲಾ ದೂತಿಕೆಯರು ಕೊರವಂಜಿಯನೆ ಅತಿ ಬೇಗ ಕರೆಯಲು ಬೇಕಾದ ವಜ್ರವೈಢೂರ್ಯ ರಾಗವಿಲಸಿತವಾದ ದ್ವಾರ ಭೂಭಾರದಿಂದೆಸೆವ ಭಾಗಧೇಯದಿಂ ರಾಜ ಸತ್ಕುಲವಾದ ದಿವ್ಯ ಮಂದಿರಕೆ ತ್ಯಾಗಿ ರುಕುಮಿದೇವಿ ನೋಡಲಾ ಶ್ರೀ- ರಾಗದಿಂ ಗಾನವಂ ಪಾಡುತ್ತ ಕೊರವಂಜಿಯು ಬಂದ ಚೆಂದ13 ಬಂದಾಳಂದದಲಿ ಬಾಗಿಲೊಳಗೆ ದಿಂಧಿಮಿಕೆನ್ನುತ 14 ಚೆಲುವ ತುರುಬಿನಿಂದಲಿ ಜಗುಳುವ ಚಲಿಸುವ ಪುಷ್ಪದಂದದಿ ನಲಿನಲಿ ನಲಿದಾಡುತ್ತ ಮಲ್ಲಿಗೆ ಝಲಝಲಝಲ ಝಲ್ಲೆಂದು ಉದುರುತ್ತ ಕಿಲಿಕಿಲಿ ಕಿಲಿ ಕಿಲಿ ಕಿಲಿಯೆಂದು ನಗುತ್ತ 15 ಗದ್ಯ :ಥಳಥಳನೆ ಹೊಳೆವುತ್ತ ನಿಗಿನಿಗೀ ಮಿಂಚುತ್ತ ರನ್ನದ ಬುಟ್ಟಿಯ ಕೊಂಕಳಲಿಟ್ಟು ಧಿಗಿಧಿಗಿಯೆಂದು ನೃತ್ಯವನ್ನಾಡುತ್ತ ಎತ್ತರದಲಿ ಪ್ರತಿಫಲಿಸುವ ಮುತ್ತಿನಹಾರ ಉರದೊಳಲ್ಲಾಡುತ ನಿಜಭಾಜ ಮಾರ್ತಾಂಡ ಮಂಡಲ ಮಂಡಿತಾ ಪ್ರಭು ಪ್ರತಿಮ ದಿಶದಿಶ ವಿಲಸಿತವಾದ ಭುಜಕೀರ್ತಿಯಿಂದೊಪ್ಪುವ ಆಕರ್ಣಾಂತ ಸುಂದರ ಇಂದೀವರದಳಾಯತ ನಯನ ನೋಟಗಳಿಂದ ಚಂಚಲಿಸುವÀ ಮಿಂಚಿನಂತೆ ಮಿಂಚುವ ಕಾಂತೀ ಸಂಚಯಾಂಚಿತ ಕಾಂಚನೋದ್ದಾಮ ಕಾಂಚೀ ಪೀತಾಂಬರಾವಲಂಬನಾಲಂಬಿತಾ ನಿತಂಬದಿಂದೊಪ್ಪುವ ಝೇಂಕರಿಸುವ ಭೃಂಗಾಂಗನಾಸ್ವಾದಿತ ಜಗುಳುವ ಜುಗುಳಿಸುವ ಪರಿಮಳಿಸುವ ಜಘನ ಪ್ರದೇಶಗಳಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತ ನಿತಾಂತಕಾಂತಿಕಾಂತಾ ಸುಧಾಕುಂತಳ ಸಂತತಭರದಿಂದೊಪ್ಪುವ ಪುಂಜೀಕೃತ ಮಂಜುಭಾಷಣ ಅಪರಂಜಿ ಬಳ್ಳಿಯಂತೆ ಮನೋರಂಜಿತಳಾದ ಕೊರವಂಜಿಯು ನಿಶ್ಶಂಕೆಯಿಂದ ಕಂಕಣಕ್ಷಣತೆಯಿಂದ ಕೊಂಕಳ ಬುಟ್ಟಿಯ ಪೊಂಕವಾಗಿ ತನ್ನಂಕದಲ್ಲಿಟ್ಟುಕೊಂಡು ಬೆನ್ನಸಿಂಗನ ಮುಂದಿಟ್ಟು ಚೆಂದವಾಗಿ ರುಕುಮಿಣಿ ದೇವಿಯ ಕೊಂಡಾಡಿದಳು. ಗದ್ಯ :ಅವ್ವವ್ವ ಏಯವ್ವ ಕೈಯ್ಯ ತಾರೆ ಕೈಯ್ಯ ತೋರೆ ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡ್ಹಾಗೆ ಪೇಳುವೆನವ್ವಾ. ಶಿಖಾಮಣಿ ಏನೇ ರುಕುಮಿಣಿ ನಿನ್ನ ಚೆಲುವಿಕೆಯನೇನೆಂತು ಬಣ್ಣಿಪೆ. ಮದನ ಶುಭ ಅಮಿತ ರಸಶೃಂಗಾರದಿಂದೊಪ್ಪುವ ನಿನ್ನ ಕೀರ್ತಿಯ ಕೇಳಿ ಬಂದೆನಮ್ಮಾ ಅಂಗ ವಂಗ ಕಳಿಂಗ ಕಾಶ್ಮೀರ ಕಾಂಭೋಜ ಸಿಂಧೂ ದೇಶವನೆಲ್ಲ ತಿರುಗಿ ಬಂದೆನಮ್ಮಾ 16 ಮಾಳವ ಸೌರಾಷ್ಟ್ರ ಮಗಧ ಬಾಹ್ಲೀಕಾದಿ ಚೋಳ ಮಂಡಲವನೆಲ್ಲ ಚರಿಸಿ ಬಂದೆನಮ್ಮಾ17 ಲಾಟ ಮರಾಟ ಕರ್ಣಾಟ ಸೌಮೀರಾದಿ ಅಶೇಷ ಭೂಮಿಯ ನಾನು ನೋಡಿ ಬಂದೆನಮ್ಮಾ 18 ಮಾಯಾ ಕಾಶೀ ಕಾಂಚಿ ಅವಂತಿಕಾಪುರೀ ದ್ವಾರಾವತೀ ಚೇದಿ|| ಮೆಚ್ಚಿ ಬಂದ ಕೊರವಿ ನಾನಮ್ಮ ಪುರಗಳಿಗೆ ಹೋಗಿ ನರಪತಿಗಳಿಗೆ ಸಾರಿ ಬರÀ ಹೇಳಿ ನಾ ಕಪ್ಪವ ತಂದೆ 19 ಸತ್ಯಮುಗಾ ಚೆಪ್ಪುತಾನಮ್ಮಾ ಸಂತೋಷಮುಗಾ ವಿನುವಮ್ಮ ಸತ್ಯ ಹರುಶ್ಚಂದ್ರನಿಕಿ ಚಾಲ ಚೆಪ್ಪಿತಿ 20 ಕನ್ನೆ ವಿನವೆ ನಾ ಮಾಟ ನಿನ್ನ ಕಾಲಂನೆ ನೇನಿಕ್ಕು(?) ಚಿನ್ನ ಸಿಂಗಾನೀ ತೋಡೂನೆ ಚೆಪ್ಪ್ಪೆಗಮ್ಮಾನೇ 21 ಗದ್ಯ :ಆಗ ರುಕುಮಿಣಿದೇವಿಯು ಚಿತ್ರವಿಚಿತ್ರ ಚಿತ್ತಾರ ಪ್ರತಿಮೋಲ್ಲಸಿತ ತಪ್ತ ರಜತರಂಜಿತಸ್ಫಟಿಕ ಮಣಿಗಣ ಪ್ರಚುರ ತಟಿಕ್ಕೋಟಿ ಜ್ವಾಲಾವಿಲಸಿತವಾದ ವಜ್ರಪೀಠದಲಿ ಕುಳಿತು ಚಿನ್ನದ ಮೊರಗಳಲ್ಲಿ ರನ್ನಗಳ ತಂದಿಟ್ಟುಕೊಂಡು ಕೊರವಂಜಿಯನೆ ಕುರಿತು ಒಂದು ಮಾತನಾಡಿದಳು. ವೊಲಿಸೀನ ಸೊಲ್ಮೂಲೆಲ್ಲ ವನಿತೆನೆ ನಿಂತೂ(?) 22 ಗದ್ಯ : ಆಗ ರುಕುಮಿಣಿದೇವಿಯಾಡಿದ ಮಾತ ಕೇಳಿ ಕೊರವಂಜಿಯುಯೇ-ನೆಂತೆಂದಳು. ನೆನೆಸಿಕೊ ನಿನ್ನಭೀಷ್ಟವ ಎಲೆ ದುಂಡೀ ನೆನೆಸಿಕೊ ವನಿತೆ ಶಿರೋಮಣಿಯೆ ಘನಮುದದಿಂದ ನೆನೆಸಿಕೊ 23 ರನ್ನೆ ಗುಣಸಂಪನ್ನೆ ಮೋಹನ್ನೆ ಚೆನ್ನಾಗಿ ಮುರುಹಿಯ ಮಾಡಿ ನೆನೆಸಿಕೊ 24 ಮಾಧವ ಸೇತುಮಾಧವ ವೀರರಾಘವ ಚಿದಂಬರೇಶ್ವರ ಅರುಣಾಚÀಲೇಶ್ವರ ಪಂಚನದೇಶ್ವರ ಶ್ರೀಮುಷ್ಣೇಶ್ವÀÀರ ಉಡುಪಿನ ಕೃಷ್ಣ ಮನ್ನಾರು ಕೃಷ್ಣ ಸೋದೆ ತ್ರಿವಿಕ್ರಮ ಬೇಲೂರು ಚೆನ್ನಪ್ರಸನ್ನ ವೆಂಕಟೇಶ್ವರ ಸೂರ್ಯನಾರಾಯಣ ಇವು ಮೊದಲಾದ ದೇವತೆಗಳೆಲ್ಲ ಎನ್ನ ವಾಕ್ಯದಲಿದ್ದು ಚೆನ್ನಾಗಿ ಸಹಕಾರಿಗಳಾಗಿ ಬಂದು ಪೇಳಿರಯ್ಯಾ ಮಂಗಳದ ಕೈಯ್ಯ ತೋರೇ ಎಲೆದುಂಡೀ ಕೈಯ ತೋರೆ ಕೈಯ ತೋರೆ 25 ಕೇಳೆ ರನ್ನಳೆ ಎನ್ನ ಮಾತ ಬೇಗ ಇಳೆಯರಸನಾದನು ಪ್ರಿಯ26 ಕಳಸಕುಚಯುಗಳೆ ಚಿಂತೆ ಬೇಡ ನಿನ್ನ ಕರೆದಿಂದು ಕೂಡ್ಯಾನು ರಂಗ 27 ನಾಡಿನೊಳಧಿಕನಾದ ನಾರಾಯಣನ ಪತಿ ನೀನು ಮಾಡಿ ಕೊಂಡೆನೆಂದು ಮನದಲ್ಲಿ ನೆನಸಿದೆ ಕಂಡ್ಯಾ ನಮ್ಮ ಕೃಷ್ಣ ಕುತೂಹಲದಿ 28 ಸುಂದರಶ್ಯಾಮ ಅಲ್ಲಿ ನÀಂದಾ ನಂದಾನಾಡುವಾನಂದಮುಗಾವಚ್ಚಿ ಕೂಡೇನಮ್ಮಾ 29 ಶಂಖಚಕ್ರಯುಗಲ ಪಂಕಜನಾಭುಂಡು ಪಂಕಜಮುಖೀ ನೀವು ಪ್ರಾಣಿಗ್ರಹಣಮು ಚೇಸಿ ಕೂಡೆನಮ್ಮಾ 30 ಚೆಲುವಾ ನಾ ಮಾಟಾ ನೀಕು ಪುಚ್ಚಾ ಚೆಲುವಾ ನಾ ಮಾಟ ಕಲ್ಲಗಾದು ನಾ ಕಣ್ಣೂಲಾನೂ ಪಿಲ್ಲ ವಿನುವಮ್ಮ ಪಲ್ಲವಪಾಣೀ ಚೆಲುವಾ ನಾ ಮಾಟ31 ದಮಯಂತೀಕೀನೇ ಚೆಪ್ಪಿತಿ ನಮ್ಮವೆ ಮಾಟ ಅಮರುಲಕೆಲ್ಲಾ ಅನುಮೈನವಾಡು ಚೆಪ್ಪೀ ಅಮಿತ ಬಹುಮಾನಾಮಂದೀತೀನಮ್ಮಾ ಚೆಲುವ ನಾ ಮಾಟ ಚೆಲುವ 32 ಬಂತೆ ಮನಸಿಗೆ ನಾ ಹೇಳಿದ್ದು ಚಿಂತೆ ಸಂತೋಷದಿ ನಾನಾಡಿದ ಶಾಂತ ಮಾತೆಲ್ಲ ಇದು ಪುಸಿಗಳಲ್ಲ ಬೇಗ ಬಂದಾನೋ ನಲ್ಲಾ ಆಹಾ ಆಹಾ ಬಂತೇ ಮನಸ್ಸಿಗೆ
--------------
ವಾದಿರಾಜ
ನಿನ್ನ ಸೇವೆಯನೊಂದನಿತ್ತು ಸಲಹೋಎನ್ನ ಮನ ನಿನ್ನಲ್ಲಿ ನಿಲುವಂತೆ ಮಾಡಿ ಪ ಅನ್ನವನು ಬೇಡಿಕೊಂಬುವದೆಂತು ವಿಪುಳ ವಿಷವನ್ನು ಕುಡಿದಿಹ ನೀಲಕಂಠನೊಡನೆಸನ್ನುತಾಂಬರವ ಬೇಡುವುದೆಂತು ಕರಿಚರ್ಮ-ವನ್ನು ಪೊದೆದಿಹ ದಿಗಂಬರನೊಡನೆ ಶಂಭೋ 1 ಮಿರುಗುವಾಭರಣಗಳ ಬೇಡಿಕೊಂಬುದೆಂತುಉರಗಕುಂಡಲಹಾರ ವಲಯನೊಡನೆಪರಮ ಭಾಗ್ಯವ ಬೇಡಿಕೊಂಡೆ ನಾನೆಂತು ವಿಧಿಶಿರದಿ ಭಿಕ್ಷವ ಬೇಡಿ ತಿರಿದುಂಡನೊಡನೆ 2 ಕರಿತುರಗ ಮುಖ್ಯವಾಹನವ ಬೇಡುವುದೆಂತುನಿರುತ ಬಸವನ ಮೇಲೆ ಚರಿಪನೊಡನೆಕರುಣದಿಂದೆನಗೆ ಕೊಡಲೇನುಂಟೊ ಕೆಳದಿಪುರ-ದೆರೆಯ ರಾಮೇಶ ಶ್ರೀಕರ ಪಾರ್ವತೀಶ 3
--------------
ಕೆಳದಿ ವೆಂಕಣ್ಣ ಕವಿ
ನೀರೆ ದ್ವಾರಕೆಯ ಸೊಬಗು ಬ್ರಹ್ಮರಾಯ ಬಟ್ಟಾನು ಬೆರಗು ನೀರೆಪ. ಚದುರೆ ಬಾಜಾರದಿ ಕುದುರೆ ಸಾಲುಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟು ಅಂಬಾರಿಸದರಿನ ಆನೆ ಸೊಬಗೆಷ್ಟು1 ಹಿಂಡು ಗೆಳತಿಯರೆಲ್ಲ ತಂಡ ತಂಡ ನೆರೆದುದುಂಡು ಮಲ್ಲಿಗೆಯ ತುರುಬಿನದುಂಡು ಮಲ್ಲಿಗೆ ತುರುಬಿನ ಕುವರಿಯರು ಚಂಡನಾಡುವÀರು ಕಡೆಯಿಲ್ಲ 2 ನೀಲಮಾಣಿಕ ಬಿಗಿದ ಮೇಲಾದ ಮನೆಗಳುಮ್ಯಾಲೆ ಕನ್ನಡಿಯ ನಿಲ್ಲಿಸ್ಯಾವಮ್ಯಾಲೆ ಕನ್ನಡಿಯ ನಿಲ್ಲಿಸಿದ ಮನೆಯೊಳುಸಾಲು ದೀವಟಿಗೆ ಸೊಬಗೆಷ್ಟು 3 ಬಟ್ಟ ಮುತ್ತಿನ ತೋರಣ ಕಟ್ಟಿದ ಮನೆಯೊಳುಅಟ್ಟಳ ಮ್ಯಾಲೆ ಧ್ವಜಗಳುಅಟ್ಟಳ ಮ್ಯಾಲೆ ಧ್ವಜಗಳು ಗಗನಕ್ಕೆಮುಟ್ಟಿವೆಂಬಂತೆ ನಿಲ್ಲಿಸ್ಯಾವೆ4 ದೊರೆಗಳ ಮನೆಯಿಂದ ಬರೆದ ಚಿತ್ರದÀ ಬೊಂಬೆಗಳುಕರೆದಾವ ಕೈ ಬೀಸುತೆಕೈ ಬೀಸಿ ನಮ್ಮ ಎದುರಿಗೆಬರತಾವೆಂಬಂತೆ ನಿಲ್ಲಿಸ್ಯಾವ 5 ಏಳಂತಸ್ತಿನ ಮಾಳಿಗೆ ಮ್ಯಾಲಿನ ಗೊಂಬೆಗಳು ಬಾಳೆ ಎಲೆಯಂತೆ ಬಳಕುತ ಬಾಳೆ ಎಲೆಯಂತೆ ಬಳಕುತಕಿವಿಮಾತು ಹೇಳ್ಯಾವೆಂಬಂತೆ ನಿಲ್ಲಿಸ್ಯಾವೆ6 ಮದನ ಜನಕನು ಸುಳಿಯೋನೆಒಮ್ಮೊಮ್ಮೆ ಮುದದಿ ಭಕ್ತರನ ಸಲುಹಲಿ 7
--------------
ಗಲಗಲಿಅವ್ವನವರು
ಪರಿ ಬಹಳ ನಿಷ್ಠುರದ ವಚನಗಳನಾಡುವರು ಜನರು ಪ ಎಷ್ಟು ತಪವನೆ ಮಾಡಿ ಪಡೆದೆನೊ ನಾನಿನ್ನ ಕಷ್ಟವಾಯಿತು ನಿಂದೆ ನುಡಿಯ ಕೇಳುವುದು ಅ.ಪ ಕೊಂಡು ಪೋಗಲಿ ಬೆಣ್ಣೆ ಪಾಲು ಧದಿ ಭಾಂಡಗಳ ದುಂಡು ನಗುಮೊಗ ಚೆಲುವ ನಿನ್ನ ಮಗನು ಕಂಡರೆಮ್ಮನು ಮೋರೆ ತಿರುಗಲೇಕೆ ಇಂಥಾ ಪುಂಡು ಹುಡುಗನೆ ನಿನ್ನ ಮಗನೆಂದು ದೂರುವರು 1 ಮುರಳಿ ನಾದವ ಕೇಳಿ ಮರೆತು ಮೇವನು ಎಮ್ಮ ತುರುಕರುಗಳೆಲ್ಲ ಬಲು ಕೃಶವಾದವಮ್ಮ ಹರಿವ ಯಮುನಾಜಲದೊಳ್ ಆದ ಅವಿವೇಕವನು ಅರುಹಲೆಮ್ಮಯ ಮನವು ಜರಿವುದೆಂದಾಡುವರು 2 ಸಂಸಾರ ಮೋಹವನು ತೊರೆದು ಎನ್ನಲಿ ಮನದ ಸಂಶಯವ ಬಿಡಿ ಬಿಡಿ ಪ್ರಸನ್ನರಾಗಿರಿ ಎಂದ ಧ್ವಂಸವಾಯಿತು ಎಮ್ಮ ಅಭಿಮಾನ ಇವ ಚಂದ್ರ ವಂಶಕೆಂತಹ ಕೀರ್ತಿ ತಂದನೆಂದಾಡುವರು 3
--------------
ವಿದ್ಯಾಪ್ರಸನ್ನತೀರ್ಥರು
ಪಾರ್ವತಿದೇವಿ ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ ವರನೆಂದು ಮೆರೆಯುವರೆ ಪ ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ ಮನ್ಮಥನ ವೈರಿಗೆ ವಾಸಕೆ ಯೋಗ್ಯ ಮನೆಯಿಲ್ಲದಿರುವಾತಗೆ ಮನೆಯು ಮಶಾಣವೆನ್ನುತ ಪೇಳುತಿಹರಿನ್ನು ಸುಮನಸರೊಡಯನೆ ಸಖನಂತೆ ಇದು ಕೇಳು ಮನಸಿನ ಅಭಿಮಾನಿ ಶಿವನು ಘನತರದ ವಿಷಪಾನಗೈದನು ಮನದಿ ಶ್ರೀ ರಘುವರನ ಸ್ಮರಿಸುತ ವೃಷಭ ವಾಹನವೇರಿ ಚರಿಪಗೆ 1 ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ ದಂಡೆ ಅಲಂಕರಿಸಿರುವ ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ ಚಂದ್ರಶೇಖರ ಶಿವನೆಂದು ಕರೆಸಿಕೊಂಬ ಕೆಂಡಗಣ್ಣಿನ ಕ್ರೂರರೂಪನ ಕಂಡು ಹರುಷದಿ ಹಿಗ್ಗಿ ನಲಿಯುವಿ ಮಂಡೆಯಲಿ ಕೆಂಜಡೆಯ ಸುತ್ತಿಹ ಹಿಂಡು ವಿಷ ಸರ್ಪಗಳಲಂಕೃತನಿಗೆ 2 ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ ತಿರಿದುಂಡು ಹರುಷಿಸುವ ಪರಿ ದೈತ್ಯ ಪಿಶಾಚಯಕ್ಷರ ಕೂಡಿ ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ ಪರಮ ವೈರಾಗ್ಯವನು ಧರಿಸಿ ಫಣೆಯ ಗಣ್ಣನು ಬಳಿದು ಭಸುಮವ ಚರಿಸುವನು ರುಷಿವರರ ತೆರದಲಿ ಎಣಿಸಿ ಮಣಿಗಳ ಒಲಿಸಿ ಹರಿಯನು 3 ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ ರಾಮಚರಿತೆಯ ಬೋಧಿಸಿ ಕಾಮಹರನು ಕೈಲಾಸಪತಿಯು ಮತ್ತೆ ಕಾಮದೇವನು ಎಂಬ ನಾಮಸ್ಮರಿಸುವ ಆ ಮಹಾಗಣಪತಿಯು ಪುತ್ರನು ವೀರಭಕ್ತನು ಸುತನು ಶಿವನಿಗೆ ಪ್ರೇಮದಲಿ ಷಣ್ಮುಖನು ಸುತನೆಂ- ದೀ ಮಹಾಮಹಿಮೆಗಳು ತಿಳಿಯದೆ4 ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ ಚಂದದ ವರನೇ ಕೇಳು ಮಂದರೋದ್ಧರ ಶ್ರೀ ಮುಕುಂದನ ಭಜಿಸಲು ಚಂದದ ವರಗಳ ಕುಂದದೆ ಕರುಣಿಪ ಕಂದುಗೊರಳನು ಶಿವನು ಕಮಲ ನಾಭ ವಿಠ್ಠಲನ ಭಜಿಪ ಸಂತತ ಮಂದಗಮನೆಯ ಇಂದುಧರನಿಗೆ ಚಂದದಲಿ ವನಮಾಲೆ ಹಾಕುತ 5
--------------
ನಿಡಗುರುಕಿ ಜೀವೂಬಾಯಿ
ಪುರಂದರದಾಸರು ಜಿಪುಣರೈ ನೀವೆಂದು ಹೇಳಿದುದು ಸುಳ್ಳಲ್ಲ ಪ ಪುರಂದರ ದಾಸಮಲ್ಲ ಅ.ಪ. ಘನತರದ ವೈರಾಗ್ಯ ತಳೆದು ದ್ವಿಜರಿಗೆಲ್ಲಧನಕನಕ ಸಂಪತ್ತು ದಾನ ಮಾಡಿದರೆಲ್ಲವನಜನಾಭನ ಸ್ತುತಿಗೆ ಶಬ್ದ ಸಂಪತ್ತೆಲ್ಲಒಸೆದು ನೀವೇ ಬಳಸಿ ನನಗೇನು ಕೊಡಲಿಲ್ಲ 1 ಖಂಜೂತನದ ಕಥೆಯನು ಹೇಳಲಾಸಲ್ಲಕಂಜನಾಭನ ಮಹಿಮೆ ಬಣ್ಣಿಸುವ ನೆವದಲ್ಲಿರಂಜನೆಯ ಶಬ್ದಗಳ ಸವಿದುಂಡೆಯಲ್ಲಿಎಂಜಲವನುಳಿದೆನಗೆ ಕಿಂಚಿತ್ತು ಬಿಡಲಿಲ್ಲ 2 ಕೃಪೆಮಾಡಿ ಕ್ಷಮಿಸುವುದು ವಿಪುಲ ಭಕ್ತಿಗಳಿಂದಜಪತಪದಿ ಕನ್ನಡದ ನಿಮ್ಮ ಭಾರತಮಲ್ಲ ಕೃಪಣವತ್ಸಲ ಗದುಗು ವೀರನಾರಾಯಣನ ಸಫಿಲ ಜ್ಞಾನವ ಗಳಿಸಿ ನಮಗೇನು ಕೊಡಲಿಲ್ಲ 3
--------------
ವೀರನಾರಾಯಣ
ಪುರುಷರೈವರು ಕೂಡಿ ಹರುಷದಿ ಬರುತಿರೆ ಸರಸದಿ ಕೃಷ್ಣೆ ಕದವಿಕ್ಕೆ ಸರಸದಿ ಕೃಷ್ಣೆ ಕದವಿಕ್ಕೆ 1 ನಾಗವೇಣಿಯೆ ನೀನು ಸಾಗಿ ಮುಂದಕ್ಕೆ ಬಂದು ಬಾಗಿಲಿಕ್ಕಿದ ಬಗೆ ಪೇಳೆ 2 ಸರ್ಹ್ಯಾಗೆ ತೆಗೆಯಲಿ ಕದವನು ಹ್ಯಾಗೆ ತೆಗೆಯಲಿ ಕದವನು 3 ಹರದಿ ದ್ರೌಪದಿ ಕೇಳೆ ದೊರೆಯು ಧರ್ಮರು ನಾವು ತ್ವರಿತದಿ ಬಂದೆವು ತೆಗೆ ನೀನು 4 ದೊರೆಗಳಾದರೆ ರಾಜ್ಯ ಪರರಿಗೆ ಕೊಟ್ಟು ತಾ- ನಡವಿ ಯಾತಕೆ ತಿರುಗೀರಿ ಅಡವಿ ಯಾತಕೆ ತಿರುಗೀರಿ5 ಪಟ್ಟದರಸನ ಕೂಡ ಇಷ್ಟು ಮಾತುಗಳ್ಯಾಕೆ ಶ್ರೇಷ್ಠ ಭೀಮನು ನಾ ಬಂದೀನೆ ಶ್ರೇಷ್ಠ ಭೀಮನು ನಾ ಬಂದೀನೆ 6 ಶ್ರೇಷ್ಠನಾದರೆ ಕೈಯ್ಯೊಳ್ಹುಟ್ಟು ಹಿಡಿದು ರಾಜ- ಗಟ್ಟ್ಟಿ ಅಡಿಗೆ ಉಣೀಸ್ಹೋಗೋ ರಾಜ- ಗಟ್ಟಿ ಅಡಿಗೆ ಉಣೀಸ್ಹೋಗೋ 7 ಪುಂಡಕೌರವರಿಗೆ ಗಂಡನೆನಿಸುವಂಥ ಗಾಂಡೀವರ್ಜುನ ನಾ ಬಂದೀನೆ ಗಾಂಡೀವರ್ಜುನ ನಾ ಬಂದೀನೆ 8 ದುಂಡು ಹರಡಿನಿಟ್ಟು ಗೊಂಡ್ಯದ್ಹೆರಳನ್ಹಾಕಿ- ಕೊಂಡು ವಿದ್ಯವ ಕಲಿಸ್ಹೋಗೊ ಹಾಕಿ- ಕೊಂಡು ವಿದ್ಯವ ಕಲಿಸ್ಹೋಗೊ 9 ಸಕಲವಿದ್ಯೆಗಳಲ್ಲಿ ಕುಶಲ ಸಂಪನ್ನನಾದ ನಕುಲರಾಯನು ನಾ ಬಂದೀನೆ ನಕುಲರಾಯನು ನಾ ಬಂದೀನೆ 10 ಸಕಲವಿದ್ಯೆಗಳಲ್ಲಿ ಕುಶಲನಾದರೆ ತೇಜಿ ಕೆಲಸ ರಾಯರಿಗೆ ತಿಳಿಸ್ಹೋಗೊ ಕೆಲಸ ರಾಯರಿಗೆ ತಿಳಿಸ್ಹೋಗೊ 11 ಪಾವಕÀತನುಜೆ ಮಾದೇವಹಾರದವೇಣಿ ಸ(ಹ) ದೇವರಾಯನು ನಾ ಬಂದೀನೀಗ ಸ(ಹ)- ದೇವರಾಯನು ನಾ ಬಂದೀನೀಗ 12 ಗೋವ ಕಾಯುತಲಿ ಗೋಪಾಲಕನಾಗಿ ಕೊಳಲೂದಿ ಗೊಲ್ಲರೊಳಾಡಹೋಗೊ ಕೊಳಲೂದಿ ಗೊಲ್ಲರೊಳಾಡಹೋಗೊ 13 ಮಾತುಳಾಂತಕನಲ್ಲಿ ಮಾತು ಕಲಿತು ಬಂದಿ(ಲ್ಲಿ) ಸೋತೆವೆ ನಿನಗೆ ಸುಂದರಾಂಗಿ ಸೋತೆವೆ ನಿನಗೆ ಸುಂದರಾಂಗಿ 14 ಸೋತರೇನಾಯಿತು ದ್ಯೂತಪಗಡೆ ಬಿಟ್ಟು ಅ- ಜ್ಞಾತವಾಸವನೆ ಚರಿಸ್ಹೋಗೊ ಅ- ಜ್ಞಾತವಾಸವನೆ ಚರಿಸ್ಹೋಗೊ15 ತಿರುಗಿ ತಿರುಗಿ ಭಾಳ ಬಳಲಿ ಬಂದೆವೆ ನಾವು ಕರುಣವಿಲ್ಲವೆ ಕಮಲಾಕ್ಷಿ ಕರುಣವಿಲ್ಲವೆ ಕಮಲಾಕ್ಷಿ 16 ಭಾಳ ಬಳಲಿದೆವೆಂದು ಹೇಳಿಕೊಂಡರು ಕರು- ಣಾಳು ನಾನಲ್ಲ ಕರೆಯಲು ಕರು- ಣಾಳು ನಾನಲ್ಲ ಕರೆಯಲು 17 ಕಾಮನಯ್ಯನ ಕರುಣಕ್ಕೆ ಪಾತ್ರರೆ ನಾವು ಸಾಮಜಗಮನೆ ಸರಸ್ಯಾಕೆ ಸಾಮಜಗಮನೆ ಸರಸ್ಯಾಕೆ 18 ಹೇಮಮಾಣಿಕ್ಯದ ಕದವ ತೆಗೆದು ಪತಿಗಳಿಗೆ ಪ್ರೇಮದಿಂದೆರಗಿ ಕರೆದಳು ಪ್ರೇಮದಿಂದೆರಗಿ ಕರೆದಳು 19 ಆದರದಿಂದ ಕರೆಯಲರ್ಜುನ ಭೀಮ ಧರ್ಮ ಸಾದೇವ ನಕುಲ ಸಹಿತಾಗಿ ಸಾದೇವ ನಕುಲ ಸಹಿತಾಗಿ 20 ಪಂಚಪಾಂಡವರು ಬಂದು ಪರಮ ಸಂಭ್ರಮದಿಂದ ಮಂಚದ ಮ್ಯಾಲೆ ಕುಳಿತಾರೊ ಮಂಚದ ಮ್ಯಾಲೆ ಕುಳಿತಾರೊ21 ಥsÀಳಕು ಬೆಳಕಿನಿಂದ ಝಳಕು ಮಿಂಚುಗಳಂತೆ ಬಳುಕುತ ಬಾಳೆಸುಳಿಯಂತೆ ಬಳುಕುತ ಬಾಳೆಸುಳಿಯಂತೆ22 ಗಂಡರೈವರ ಮುಂದೆ ಗರುವಿಲೆ ನಿಂತಳು ದುಂಡುಮಲ್ಲಿಗೆ ಶಿರ ಬಾಗಿ 23 ಕರಕಮಲವ ಪಿಡಿದು ಕರೆದು ಸಾದೇವ ಕೃಷ್ಣೆ- ತುರುವಿಗ್ಹೂಮಾಲೆ ಮುಡಿಸಿದ ಕೃಷ್ಣೆ- ತುರುವಿಗ್ಹೂಮಾಲೆ ಮುಡಿಸಿದ 24 ಮುಖಬೆವರ್ವೊರೆಸುತ ನಕುಲರಾಯನು ಭಾಳ ಸುಖದಿ ಮುದ್ದಿಸಿದ ಮಡದಿಯ ಸುಖದಿ ಮುದ್ದಿಸಿದ ಮಡದಿಯ 25 ಅರ್ಜುನಾಗಲೆ ಮೋಹದಿಂದ ಮುಂಗುರುಳು ತಿದ್ದಿ ವಜ್ರದಾಭರಣನಿಡಿಸಿದ 26 ಭೀಮ ನಗುತ ಬಿಗಿದಪ್ಪಿ ದ್ರೌಪದಿಯ ಧರ್ಮ- ರಾಯನ ತೊಡೆಯಲ್ಲಿರಿಸಿದ ಧರ್ಮ- ರಾಯನ ತೊಡೆಯಲ್ಲಿರಿಸಿದ 27 ಧರ್ಮ ಮುತ್ತಿನ ಹಾರ ಪದಕ ಕೊರಳಿಗೆ ಹಾಕಿ ವರಮೋಹನಾಂಗಿ ಒಲಿಸಿದ ವರಮೋಹನಾಂಗಿ ಒಲಿಸಿದ 28|| ಸಿಂಧುಸುತನ ಮುಖಬಿಂಬ ಸೋಲಿಸುವಂಥ ಚಂದ್ರವದನೆ ಮುನಿಸ್ಯಾಕೆ ಚಂದ್ರವದನೆ ಮುನಿಸ್ಯಾಕೆ 29 ಮಾತಿನರಗಿಳಿಯೆ ನೀ ಜ್ಯೋತಿ ಮುತ್ತಿನ ಗೊಂಬೆ ಪ್ರೀತಿಪತಿಗಳ ನೀ ನೋಡೆ ಪ್ರೀತಿಪತಿಗಳ ನೀ ನೋಡೆ 30 ಪ್ರಾಣಪದಕವೆಂದು ತಿಳದೆವೈವರು ನಿನ್ನ
--------------
ಹರಪನಹಳ್ಳಿಭೀಮವ್ವ