ಒಟ್ಟು 134 ಕಡೆಗಳಲ್ಲಿ , 26 ದಾಸರು , 116 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡೋ ಪರಮೇಶ್ವರ ಗುರುಧ್ಯಾನಾ ಬಿಡದಿರುವದು ಭಜನಾ ||ನೋಡೋ ನಿನ್ನೊಳು ನಿಜ ಖೂನಾ | ಪೂರ್ಣೈಕ್ಯದ ಜ್ಞಾನಾ ಪ ಅಪರೂಪದ ನಿಜ ತನುವಿದು ನೋಡೋ ಸೆಡಗರದೀ ಪಾಡೋ ||ಅಪಹಾಸ್ಯವ ಮಾಡದೆ ನೀ ಕೂಡೋ ಘನ ಚಿನ್ಮಯ ಗೂಡೋ 1 ಆಜ್ಞಾ ಚಕ್ರದ ಬಳಿಯಲ್ಲೀ | ಎರಡೂ ಕಮಲದಲ್ಲೀ |ಪ್ರಾಜ್ಞಾ ಝಗ ಝಗಿಸುವ ಬೆಳಕಲ್ಲೀ | ತಿಳಿ ನಿನ್ನೊಳಗಿಲ್ಲೀ 2 ಮೇಲಿನ ಸ್ಥಾನದ ಸಹಸ್ರಾರ | ಗುರುತತ್ತ್ವದ ಸಾರಾ ||ಪೇಳಲಳವಲ್ಲವು ಸುಖ ಪೂರಾ | ಶಂಕರ ಪದವಿವರಾ | ಭೀಮಾ ಶಂಕರ ಪದವಿವರಾ 3
--------------
ಭೀಮಾಶಂಕರ
ಮಾಯಾ ಪ ನರದೇಹ ಎಂಬುದು ಎಂಥಾ ಮರವುನೀನೇ ಬ್ರಹ್ಮಾಂತ ತೋರಿದಿ ಅರಿವು 1 ತತ್ತ್ವಮಸಿ ಮಹಾವಾಕ್ಯ ಕೇಳಿ ಹಾರಿ ಹೋಯಿತು ದ್ವೈತದ ಧೂಳಿ 2 ಮುತ್ತು ಮಾಣಿಕ ಪೆಸರಾಯಿತು ಲೋಪತುಂಬಿ ಉಳಿಯಿತು ಚಿದಾನಂದ ಸ್ವರೂಪ 3
--------------
ಚಿದಾನಂದ ಅವಧೂತರು
ಮಾರುತೀ ಜ್ಞಾನ ಮೂರುತೀ ಪ ಬಾರಿಬಾರಿಗೆ ಬಹದುರಿತ ಪರಿಹಸಯ್ಯ ಅ.ಪ ಜೀವ ಕೃತಕರ್ಮ ಕ್ರಿಯೆಗಳೂ ಹಗಲಿರುಳೊಳು ಪವಮಾನ ನೀನೆ ನಡೆಸೆ ಸಡೆಸೋರು ತತ್ತ್ವೇಶರು ಭವಬಂಧ ಹರಿಸಿ ಕಾಪಾಡಯ್ಯ ಬೇಡುವೆ ಜೀಯ ತವಪಾದದಾಸ್ಯವ ಕೊಡಿಸಯ್ಯ ಯಾಕೆ ನಿರ್ದಯ 1 ಬಹುಜನುಮವನೆತ್ತಿ ಬಂದೆನೊ ಇಲ್ಲಿ ನಿಂದೆನೊ ಅಹರಹರ ನೀ ನಡೆಸೆ ನಡಿವೆನೊ ನುಡಿಸೆ ನುಡಿವೆನೊ ಇಹಪರ ಸಾಧನ ನಿನ್ನಿಂದ ಎನ್ನ ಕೈಯಿಂದ ಬಹುಪರಿ ಮಾಡಿಸಿ ಭವದಿಂದುದ್ಧರಿಸೆಂದೇ 2 ಪಂಕಜೋದ್ಭವ ಪದವ ಪಡೆವಯ್ಯ ಆರೆಣೆಯಯ್ಯ ಕಿಂಕರರೊಳಗೇಕೆ ನಿರ್ದಯ ನಂಬಿದೆನಯ್ಯ ಶಂಕರಾನತ ಪೂಜಿತಾಂಘ್ರಿಯ ದಯ ತೋರಯ್ಯ ಶ್ರೀ ವೇಂಕಟೇಶನ ಮುಂದೆ ನಿಂದಿಹ ಭಕ್ತಿಯಿಂದಿಹ3
--------------
ಉರಗಾದ್ರಿವಾಸವಿಠಲದಾಸರು
ಮೂರ್ಖ ಬಲ್ಲನೆ ಸತ್ಯಸುಜ್ಞಾನಿ ನಡೆಯ ತಾರ್ಕಿ ಬಲ್ಲನೆ ಪರಸಾಧನದ ಬಗೆಯ ಪ ಕತ್ತೆ ಬಲ್ಲುದೆ ಹೊತ್ತ ಮುತ್ತುರತ್ನದ ಬೆಲೆಯ ತೊತ್ತು ಬಲ್ಲುದೆ ಮಹ ಉತ್ತಮರ ನಡೆಯ ಮಿಥ್ಯ ಬಲ್ಲನೆ ಶರಣಸತ್ಸುಜನರ ನೆಲೆಯ ಮೃತ್ಯು ಬಲ್ಲುದೆ ಹೊತ್ತು ಗೊತ್ತಿನ ಪರಿಯ 1 ಸೂಶೆಬಲ್ಲಳೆ ಸತಿಯ ಶೀಲವ್ರತನೇಮಗಳ ಕೋಳಿ ಬಲ್ಲುದೆ ಮರಿಗೆ ಮೊಲೆಹಾಲುಣಿಸಿ ಸಲಹೋದ ಕೇಳಬಲ್ಲನೆ ಕಿವುಡ ಆಲಿಸಿ ಏಕಾಂತವನು ಹೇಳಬಲ್ಲನೆ ಮೂಕ ಕೇಳಿ ಹರಿಚರಿತ 2 ಭ್ರಷ್ಟಬಲ್ಲನೆ ಸುಗುಣ ಶಿಷ್ಟ ಸಂತರ ಸಂಗ ದುಷ್ಟಬಲ್ಲನೆ ಪರರ ಕಷ್ಟನಷ್ಟಗಳ ಹುಟ್ಟುಗುರುಡ ಬಲ್ಲನೆ ಮುಂದಿಟ್ಟ ಗಂಟಿನ ವಿವರ ಕೆಟ್ಟಭವಿಬಲ್ಲನೆ ತತ್ತ್ವಕಟ್ಟಳೆಯ ಗುಟ್ಟು 3 ಕುರಿಯು ಬಲ್ಲುದೆ ತನ್ನ ಕೊರಲು ಕೊಯ್ಯವರೆಂದು ಮರುಳ ಬಲ್ಲನೆ ದೊರೆತ ನರಜನುಮ ಸಮಯ ನರಕದ ಹುಳ ಬಲ್ಲುದೆ ಕಾಳೋರಗನ ಹರಿದಾಟ ತಿರುಕ ಬಲ್ಲನೆ ಅರಸರ ಮನೆಯ ಸುದ್ದಿ 4 ಕಾಮಿಗಳು ಬಲ್ಲರೆ ನೇಮನಿತ್ಯದ ನಿಜವ ತಾಮಸರು ಬಲ್ಲರೆ ಸಾಮ ದಾನ ಗುಣವ ಪಾಮರರು ಬಲ್ಲರೆ ಭೂಮಿಯೊಳಧಿಕ ಮಮ ಸ್ವಾಮಿ ಶ್ರೀರಾಮನ ನಾಮಮಹಾತ್ಮೆಯನು 5
--------------
ರಾಮದಾಸರು
ಯತಿಗಳು ಶ್ರೀಜಯತೀರ್ಥರು ಕರುಣಿಸೊ ಜಯರಾಯಾ ಗುರುವರ್ಯ ಚರಣವೆ ಗತಿಯಯ್ಯ ಹೇ ಜಿಯಾ ಪ ರಘುನಾಥನ ಪುತ್ರ ಪವಿತ್ರ ರಾಘವನ ಪ್ರೀತಪ್ರಾತ್ರ ಚರಿತ್ರ ಮಘವನಾ ನೀ ನಘದೂರ ಶ್ರೀ ರಘುರಾಮನ ಕಿಂಕರನ ಅಮೋಘ ಸೇವಕನೊ 1 ಕುಕರ್ವಿಣಿಯ ತೀರಾ ಘೋರಕುವಾದಿಗಳ ಕು ಲಕುಠಾರ ಗಂಭೀರ ಸಕಲಶಾಸ್ತ್ರಸತ್ಸಾರ ಟೀಕಕರ ಕುಕವಿಶೃಗಾಲಕುಲಕಾಲಭಯಂಕರ 2 ಎರಗೋಳಾದ್ರಿಯೊಳು ಗುಹೆಯೊಳು ನಿರುತ ಪ್ರವಚನಗಳು ನಿತ್ಯದೊಳು ಮರುತಮತಾಂಬುಧಿಚಂದಿರ ಸುಂದರ ವರಸುಜ್ಞಾನಮಣಿಕಿರಣವ ತೋರಿದೆ 3 ಗುರು ಮಧ್ವಮುನಿ ತತ್ತ್ವಗ್ರಂಥದ ಕ್ಷೀರಶರಧಿಗೆ ಮಂಥಾ ವುನ್ನಂಥಾ ಮರುತನನುಗ್ರಹ ಪ್ರಗ್ರಹದಿಂದಲಿ ವರಮಥನದಿ ಇತ್ತೆ ಅಮೋಘವಸ್ತುಗಳೆಲ್ಲಾ4 ಉತ್ತಮ ಗ್ರಂಥವನಧೀ ಮಥನದಿ ಉತ್ತಮ ವಸ್ತುಗಳನಿತ್ತೆಯೊ ತತ್ತ್ವಪ್ರಕಾಶಿಕಾ ಮಹಾಲಕುಮಿಯು ಚಂದಿರನೇ ಪ್ರಮೇಯದೀಪಿಕಾ ಸುಧೆಯೇ ನ್ಯಾಯಸುಧಾಗ್ರಂಥ ಶ್ರೀ ಕೌಸ್ತುಭದಂತಿಹ ನ್ಯಾಯದೀಪಿಕಾ 5 ದುರುಳ ಮಾಯಾಖಂಡ ನಾಯುಧವೂ ಸರ್ವಜೀಯನೆ ಐರಾವತದಂತೆ ಋ ಗ್ಭಾಷ್ಯಟೀಕಾ ನ್ಯಾಯವಿವರಣವು ಉಚ್ಛೈಶ್ರವಸ್ಸು 6 ಕರ್ಮನಿರ್ಣಯ ಟೀಕಾ ವಜ್ರಾಯುಧ ಆ ಮಹಾಪಾರಿಜಾತ ವಿಖ್ಯಾತಾ ಶ್ರೀಮದ್ವಿಷ್ಣು ತತ್ತ್ವ ನಿರ್ಣಯ ಟೀಕೆಯು ಕಲ್ಪವು ಉಪನಿಷತ್ ಭಾಷ್ಯ ಟೀಕೆಯು 7 ಈಶಾವಾಸ್ಯ ಭಾಷ್ಯ ಟೀಕಾ ಸಂತಾನವೆಂಬೋ ಮಹಾವೃಕ್ಷಾ ಪ್ರ ಬಿಸಜ ಮಂದಾರ ಪ್ರಮಾಣ ಪದ್ಧÀ್ದತಿ ಹರಿಚಂದನಕೆ ಸಮನಾದ ವಾದಾವಳಿ 8 ಪಾಕಶಾಸನಾಂಶಾ ಕರುಣಿಸು ಶ್ರೀಕರಪದಪಾಂಸ ಯತೀಶಾ ನಾರ ಪತಿಯೆ ಶ್ರೀಕಾಗಿನೀ ತೀರದಿ ಏಕಾಂತದಿ ನಿಂದೆ ಲೋಕ ವಂದಿತ ದೇವಾ 9 ಮಂದಭಾಗ್ಯಜನರಾ ಪರಮಾ ನಂದದಿಂದಲಿ ನೋಡಿ ದಯಮಾಡಿ ತಂದೆಯಂದದಿ ಕಾಯ್ದಾನಂದವೀವೆ ನಿತ್ಯಾ10 ಪರಮಪಾತಕಿ ನಾನು ಗುರುವೆ ತವ ಪಾ ದ ರಕ್ಷಕವಚವ ತೊಡಿಸೊ ಉಳಿಸೋ ನಿರುತ ಶರಣರ ಕಾಯ್ವ ಶ್ರೀ ವೆಂಕಟೇಶನ ಪ್ರೀಯಾಉರಗಾದ್ರಿವಾಸವಿಠಲನ ದಾಸಾ 11
--------------
ಉರಗಾದ್ರಿವಾಸವಿಠಲದಾಸರು
ಯೋಗಿಯಾಗೆಲೆ ಇಲ್ಲ ತ್ಯಾಗಿಯಾಗೆಲೆ ಪ ಹಾಗೂ ಹೀಗೂ ಆಗದೆ ಭವ ರೋಗಿಯೆನಿಸದರೆಲೆ ಗೂಗಿ ಅ.ಪ ಮಾತುಮಾತಿಗೆ ನೀತಿವಚನ ಆತುರಕ್ಕಾಗಿ ಕೂಗಿ ಕೂಗಿ ಪಾತಕದೊಳಗೆ ಬಿದ್ದು ಯಮನ ಯಾತನಕಿಳಿಯಬೇಡ ಭವಿ 1 ಕಾವಿಕಪನಿಲಾಂಛನ್ಹೊದ್ದು ಸೇವೆಗೊಂಡು ಭಾವಗೆಟ್ಟು ಸಾವುಹುಟ್ಟು ಬಲೆಗೆ ಬಿದ್ದು ನೋಯಬೇಡೆಲೆ ನೀಚಮತಿ2 ನಿತ್ಯ ನಿತ್ಯವೆನಿಪ ಪರ ಮಾರ್ಥತತ್ತ್ವಗುರ್ತುಯಿಲ್ಲದೆ ಕತ್ತೆಯಂತೆ ಒದರಿ ವ್ಯರ್ಥ ಮೃತ್ಯುಹೊಂದ ಬೇಡ ಮೂರ್ಖ 3 ಸೋಗುಹಾಕಿ ಸಾಧುಯೆನಿಸಿ ಕಾಗೆಯಂದದಿ ತೀರ್ಥಮುಳುಗಿ ಜಾಗರ ಮಾಡಿ ಪೋಗದಿರಲೆ ನರಕಕಧಮ 4 ಭೂಮಿ ಪ್ರೇಮ ತಾಮಸ ನೀಗಿ ಕಾಮ ಕ್ರೋಧ ಲೋಭ ಜೈಸಿ ಭೂಮಿತ್ರಯಂಗಳೊಡೆಯ ಶ್ರೀ ರಾಮನಾಮ ಭಜಿಸಿ ಮುಕ್ತನಾಗೆಲೊ 5
--------------
ರಾಮದಾಸರು
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣ ಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನಪ. ತ್ರ್ಯಕ್ಷಾದಿ ವಿಬುಧಪಕ್ಷ ಪರಾತ್ಪರ ಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾಅ.ಪ. ವೇದಬಾಹಿರರಾಗಿ ಖಲರು ಬಹು ಬಾಧಿಸುವರು ಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರು ಆದಿಮೂರ್ತಿ ತವಪಾದಾಶ್ರಯ ಸು- ಬೋಧಾಮೃತರಸ ಸ್ವಾದುಗೊಳಿಸುತಲಿ1 ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸು ಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸು ಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರ ದುರಿತ ದುರ್ಗನಿಗ್ರಹನೆ2 ಸತ್ಯಾತ್ಮ ಪಾವನ ಪಂಕಜನಾಭ ನೀಲಾಭ್ರದಾಭ ಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭ ಚಿತ್ತವಾಸ ಶ್ರೀವತ್ಸಾಂಕಿತ ಪರ- ಮಾರ್ಥಬೋಧ ಮಹತ್ತತ್ತ್ವನಿಯಾಮಕ3 ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶ ಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶ ಕವಿಜನಾನಂದಭವನ ಭವಭಯಾ- ಮಾಧವ ಮಧುಸೂದನ4 ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪ ಕರ್ತಾಕಾರಯಿತ ಸುಗುಣಕಲಾಪ ಪರಮ ಪ್ರತಾಪ ಸುತ್ರಾಣ ಲಕ್ಷ್ಮೀನಾರಾಯಣ ಪರ ವಸ್ತು ಶಾಶ್ವತ ಪವಿತ್ರ ಚರಿತ್ರ5
--------------
ತುಪಾಕಿ ವೆಂಕಟರಮಣಾಚಾರ್ಯ
ರಕ್ಷಿಸೋ ಜಗನ್ನಾಥದಾಸ ರಕ್ಷಿಸೋ ರಕ್ಷಿಸು ಗುರು ಜಗನ್ನಾಥದಾಸ ಪಕ್ಷಿವಾಹನನ ನಿಜದಾಸ ಮು ಮುಕ್ಷು ಮಾರ್ಗವ ತೋರ್ದಧೀಶ ನೀನೆ ಪ್ರ ತ್ಯಕ್ಷ ಪ್ರಹ್ಲಾದನನುಜ- ||ಅಹಾ|| ಈ ಕ್ಷಿತಿಯೊಳು ಸುರಶ್ರೇಷ್ಠನೆನಿಸಿ ವಿ ಶಿಷ್ಟರ ಮನೋಭೀಷ್ಟವನಿತ್ತ ಹರಿದಾಸ 1 ವೇದವಂದ್ಯನ ನಿಜತತ್ತ್ವ ನಿಜ ನಿತ್ಯ (ಸತ್ಯ) ಪೂರ್ಣ ಬೋಧರ ಗ್ರಂಥ ತತ್ತ್ವ ನೀತಿ ತ ಪ್ಪದೆ ಪೇಳ್ದೆ ಮಹತ್ವ ||ಅಹಾ|| ಮೋದಪಡಿಸಿ ಮೋದತೀರ್ಥರ ಮತ ದು ಗ್ಧಾಬ್ಧಿಸುಧೆಯನಿತ್ತ ಬಾದರಾಯಣನ ದಾಸ 2 ಪ್ರಕೃತಿಬಂಧಕರಾದ ಜನರು ನಿನ್ನ ಪ್ರಾಕೃತಗ್ರಂಥನೊಡಿ ಮೋದಿಪರು ಸತತಾ ಪ್ರಾಕೃತನ ತಾ ವಂದಿಪರು ಜನ್ಮ ಸುಕೃತಕ್ಕೆ ತಾವು ಸಾಧಿಪರು ||ಅಹಾ|| ಸಂಸ್ಕøತ ಭಾಷೆಯ ಪ್ರಕರಣಗಳನೆಲ್ಲ ಪ ರಿಷ್ಕøತ ಪಡಿಸಿ ನೀ ಪ್ರಾಕೃತದೊಳು ತೋರ್ದೆ3 ವಿಪ್ರವರೇಣ್ಯನೆ ನೀನು ಜಗದಿ ಅಪ್ರಮೇಯನ ಪ್ರಮೇಯವನ್ನೂ ಅದಕ್ಕೆ ಸಪ್ರಮಾಣಗಳೆಲ್ಲವನ್ನೂ ತೋರಿ ದಿ ಕ್ ಪ್ರದರ್ಶನ ಮಾಡಿ ಇನ್ನೂ ||ಅಹಾ|| ಸ್ವಪ್ರಯೋಜನ ರಹಿತ ಅಪ್ರಮೇಯನ ಮಹಿಮೆ ಕ್ಷಿಪ್ರ ಭೋಧೆಯಾಗಲ್ ತ್ವತ್ಪ್ರಸಾದವನಿತ್ತೆ4 ನಿನ್ನುಪಕಾರದ ಪರಿಯಾ ನಾನು ಜನ್ಮಜನ್ಮಾಂತರಕೆ ಮರೆಯೆ ನೀನೆ ಘನ್ನ ಶ್ರೀಹರಿದಾಸಾಗ್ರಣಿಯೇ ಇನ್ನು ನಿನ್ನ ಹರಿಕಥಾಮೃತಸಾರಕ್ಕೆಣೆಯೇ ||ಅಹಾ|| ಇನ್ನಿಲ್ಲ ನಿನ್ನಂಥ ಘನ್ನ ಕವಿಗಳ ಕಾಣೆ ಪನ್ನಂಗಶಯನ ಶ್ರೀ ವೆಂಕಟೇಶನ ದಾಸಾ 5
--------------
ಉರಗಾದ್ರಿವಾಸವಿಠಲದಾಸರು
ರುದ್ರದೇವರು ಶಿವನೆ ನಾ ನಿನ್ನ ಸೇವಕನಯ್ಯ ದುಮ್ಮಾನ ಬಿಡಿಸಯ್ಯ ಸುಜನ ಸಹಾಯ ಸಿರಿಧರನರಮಯ್ಯ ಪ ಭಾಗವತ ಶಾಸ್ತ್ರವನು ಅವನೀಶಗೆ ಪೇಳ್ದವ ನೀನಲ್ಲವೆ ಅ.ಪ. ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ ಸಾಂಬ ಸುರಪಾದ್ಯರ ಬಿಂಬ ವೈಕಲ್ಯಾಸ್ಪದವನು ಕಳೆದೊಮ್ಮೆಲೆ ವೈಕುಂಠಕೆ ಕರೆದೊಯ್ಯೊ ಕರಿಗೊರಳಾ 1 ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳ ಕಾವ ಸ್ತುತ್ಯಾದ್ರಿಜಾಪತಿ ಜತತೀವನದಾವ ದುರಿತಾಂಬುಧಿ ನಾವ ಕೃತ್ತಿವಾಸ ಉನ್ನತ್ಯವರಾಧಗ - ಳೆತ್ತಿಣಿಸದೆ ಕೃತಕೃತ್ಯನ ಮಾಡೈ 2 ಗಂಗಾಧರ ಷಣ್ಮುಖ ಗಣಪರ ತಾತ ತ್ರೈಲೋಕ್ಯಖ್ಯಾತ ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ ತುಂಗ ಮಹಿಮ ನಿಸ್ಸಂಗ ಹರಿಯದ್ವತೀ ಯಂಗ ಡಮರು ಶೂಲಂಗಳ ಧರಿಸಿಹ 3 ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ ಸಂಚಿಂತನ ಮಾಡುವ ಸಂತತ ನೇಮ ಶ್ರೀರಾಮನಾಮ ಪಂಚಶರಾರಿ ವಿರಿಂಚಿಕುವರ ನಿ - ಷ್ಕಿಂಚನರೊಡೆಯನ ಮಂಚಪದಾರ್ಹನೆ4 ಸ್ಪಟಿಕಾಭ ಕಪಾಲಿ ಕಾಮಿತಫಲದ ಫಲ್ಗುಣಸಖ ಶ್ರೀದ - ವಿಠಲಾಶ್ರಯವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ ಕುಟಿಲರಹಿತ ಧೂರ್ಜಟಿ ವೈಷ¨sಕಧ್ವಜ ನಿಟಿಲನಯನ ಸಂಕಟವÀ ನಿವಾರಿಸೊ 5
--------------
ಶ್ರೀದವಿಠಲರು
ವನಭೋಜನ ಊರ್ವಶಿ: ಇದೀಗ ಮನವು ಇಂದಿರಾಕ್ಷಿ ಇದೀಗ ಮನವುಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವುಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ4 ಊರ್ವಶಿ : ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ5
--------------
ತುಪಾಕಿ ವೆಂಕಟರಮಣಾಚಾರ್ಯ
ವನಭೋಜನ ಊರ್ವಶಿ:ಇದೀಗ ಮನವು ಇಂದಿರಾಕ್ಷಿ ಇದೀಗ ಮನವು ಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ 1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ 2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ 3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು 5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವು ಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ 1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ 2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ 3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ 4 ಊರ್ವಶಿ :ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತ ಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ 2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ 3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ 4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ 5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ 6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ 7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆ ಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ 2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ 3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ 4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ 5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ 1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ 2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು 3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂ ಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ 1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ 2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ 2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ 3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು 4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ 5 ಭೋಗವಿನ್ನಂತೆಯಿಲ್ಲಿ ರೋಗ ದುರಿತವೆಲ್ಲ ನೀಗಿತು ಎನುತನು- ರಾಗದಿ ಸವಿದುಂಡು ತೇಗಿದರೆಲ್ಲರು 6 ಪುಣ್ಯ-ಫಲದಿಂದ ದೊರಕಿತಲ್ಲೇ ನಲವಿಂದಾನತರು ಕೈ ತೊಳೆದ ನೀರಿನೊಳಿದ್ದ ಜಲಜಂತು ಸಹವು ನಿರ್ಮಲಿನವಾದವು ಕಾಣೆ 7 ಪಾವನವಾದರು ಹಿಂಡು ಉದ್ದಂಡ ಮೃಗಗಳೆಲ್ಲ &ಟಿb
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಿಶಿಷ್ಟಾದ್ವೈತ ಮತವೇ ಮತವು ಪ ವಿಷ್ಣು ಪದವೇ ಶಾಶ್ವತ ಪದವು ಅ.ಪ ವಸಿಷ್ಠ ನಾರದ ಸನಕಾದಿ ವಂದ್ಯರ ವಿಶಿಷ್ಟ ಪರಿಗ್ರಹ ವೇದಾಂತ ಸಾರದ 1 ಅಸೇತುಹಿಮಾಚಲ ವಿಶೇಷದ ವಿಶೇಷ ಪ್ರಮಾಣ ಚತುಷ್ಟಯದ 2 ಚಿತ್ತು ಅಚಿತ್ತೀಶ್ವರ ತತ್ತ್ವವನು ಪ್ರತ್ಯೇಕವಾಗಿಯೇ ಬೋಧಿಸಿಹ 3 ಪರ ವ್ಯೂಹ ವಿಭವಾಂತರ ಅರ್ಚಾ ಪರಿಪರಿರೂಪದ ಶ್ರೀಹರಿ ಪೂಜನ 4 ರಹಸ್ಯತ್ರಯ ಮಂತ್ರ ವಿಶಿಷ್ಟದ ಸಹಮತ ಸುಲಭೋಪಾಯವಿಧಾನದ 5 ಅಜ ಸುರರೆಲ್ಲರು ಹರಿಮತ ಹರಿಯೊಬ್ಬನ ಪಾದವೆ ಮೋಕ್ಷಪÀಥ 6 ಪ್ರಧಾನ ಧರ್ಮದ ಉಪವೃತ್ತಿಯ ಬೇಡದ ಶರಣಾಗತಿಯ 7 ಸತತವು ಹೆಜ್ಜಾಜಿಕೇಶವನಾಮ ನುತಿಸಿದವನ ಭವಬಂಧನ ಬಿಡಿಸುವ 8
--------------
ನಾರಾಯಣಶರ್ಮರು
ಶಂಕರ ಶಿವಶಂಕರ ಶಿವಶಂಕರ ಶಿವಶಂಕರ ಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ. ವ್ಯೋಮಕೇಶ ಭವಾಬ್ಧಿತಾರಕ ರಾಮನಾಮೋಪಾಸಕ ಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕ ಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜ ಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ1 ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದ ಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದ ವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲ ವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2 ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರ ಶೈಲರಾಜಸುತಾಧರಾಮೃತಲೋಲ ಲೋಕಧುರಂಧರ ಕರುಣಾಲವಾಲ ಮಹೇಶ್ವರ ಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3 ಕೃತ್ತಿವಾಸ ಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯ ದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯ ಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕ ಮೃಡ ನಮೋ„ಸ್ತು ಸುಮನನಿಯಾಮಕ 4 ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹ ಚಂಡಿಕಾಧವ ಶಿವ ದಯಾರ್ಣವ ಖಂಡಪರಶು ಸುರಾರಿಹ ಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪ ಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5 ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮ ಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮ ಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗ ಸದೋದಿತ ಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6 ಭರ್ಗ ಭಾರ್ಗವ ಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದ ನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದ ದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನ ನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7 ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರ ನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರ ವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತ ವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣು ಶರಣುಶರಣು ದಶರಥ ರಾಮದೂತಗೆ ಪ ಶರಣು ಕುರುಕುಲಾಧೀಶಗೆಶರಣು ವೈಷ್ಣವ ಮತ ವಿಲಾಸಗೆಶರಣು ಮುಖ್ಯಪ್ರಾಣಗೆ ಅ ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತಗೆಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ 1 ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆರಾಜ ಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ2 ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ 3
--------------
ಕನಕದಾಸ
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಪ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ 1 ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ - ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ 2 ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ3 ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ - ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 4 ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 5 ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ6 ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ7
--------------
ಕನಕದಾಸ