ಒಟ್ಟು 119 ಕಡೆಗಳಲ್ಲಿ , 39 ದಾಸರು , 106 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಧವ ವಿಠಲ ನೀದಯದಿ ಕಾಪಾಡೊ ಇವಳ ಪ ಯಾದವೇಶನೆ ಸ್ವಾಮಿ | ಹೇಸದಾಗತಿವಂದ್ಯಪಾದ ಸೇವಕಳ ಮನದಾಶೆ ಸಲಿಸುತ್ತ ಅ.ಪ. ತೂಲ | ರಾಶಿಗಳನ ಪರಿಯಗೈಸಿ ನೀನಾಗಿ ತವ | ದಾಸಿ ಎಂದೆನಿಸೋ 1 ನೀಚೋಚ್ಚ ತರತಮದಿ | ಯೋಚನೆಯ ನೆಲೆಗೊಳಿಸಿಪ್ರಾಚೀನ ಕರ್ಮಾಳಿ | ಮೋಚನೆಯ ಗೈಯ್ಯೇ |ಖೇಚರೊತ್ತಮ ವಾಹ | ಕೀಚಕಾರಿ ಪ್ರಿಯನೆಯಾಚಿಸುವೆನೋ ಸವ್ಯ | ಸಾಚಿ ಸಖ ಕೃಷ್ಣ 2 ಜ್ಞಾನಗಮ್ಯನೆ ದೇವ | ಜ್ಞಾನಿಜನ ಸುಪ್ರೀಯಆನಂದ ತೀರ್ಥ ಮತ | ದಾನಂದ ಉಣಿಸೀಗಾನಲೋಲನೆ ಇವಳ | ಗಾನಕೊಲಿಯುತ ನೀನುಧ್ಯಾನ ಗೋಚರನಾಗೊ | ಹೃತ್ಕಂಜದೊಳಗೇ 3 ಸುಸ್ವತಂತ್ರನೆ ದೇವ | ಅಸ್ವತಂತ್ರಳ ಕಾವಸರ್ವ ಭಾರವು ನಿಂದೆ | ಶರ್ವವಂದ್ಯಾಸರ್ವವ್ಯಾಪಕನಾಗಿ | ಸರ್ವಜ್ಞ ನೀನಿರಲುಅಶ್ವಮೊಗನೇ ಕಾಯೊ | ವಿಶ್ವಸೃಜಿ ದೇವ 4 ತೈಜಸನೆ ನೀನಾಗಿ | ಯೋಜಿಸಿದ ಪರಿಯಂತೆಭ್ರಾಜಿಸುವ ಅಂಕಿತವ | ನೈಜ ಭಕ್ತಳಿಗೇಯೋಜಿಸಿಹೆ ಮರುತನಿಂ | ಪೂಜ್ಯನೇ ಪರಿಪೂರ್ಣತೇಜಾತ್ಮನಾದ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮಾರುತೀ ನಮ್ಮಗುರು ಮೂರುತೀ ಪ ಮಾರುತಿ ಕರುಣಿಸು ಜ್ಞಾನಾ ಎನ್ನ ಸೇರಿದ ಸತತ ಅಜ್ಞಾನಾ ಆಹ ದೂರ ಓಡಿಸಿ ಹರಿ ಆರಾಧನೆ ಇತ್ತು ಪಥ ಸರ್ವಾಧಾರ ಉದಾರನೆ ಅ.ಪ. ದ್ವಿತೀಯ ಯುಗದಲ್ಲವತರಿಸಿ ಸೀತಾ ಅತಿ ವೇಗದಿಂದ ಉತ್ತರಿಸಿ ರವಿ ಸುತಗೊಲಿದವನುದ್ಧರಿಸಿ ಆಹಾ ಕ್ಷಿತಿಜದೇವಿಯಳನು ಸ್ತುತಿಸಿ ಮುದ್ರಿಕೆಯಿತ್ತು ದಿವಿಜರ ಸದೆದ ಭಾರತಿಯ ರಮಣನೆ 1 ಕುರುಕುಲದಲ್ಲಿ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರಣಿ ರೂಪವನೆ ಸಿಂಗರಿಸಿ ನೀಚ ತರ ಕೀಚಕನ ಸಂಹರಿಸಿ ಆಹ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮ ಸಮರ್ಥನೆ 2 ಭೂತಳದೊಳಗೆ ಯತಿಯ ರೂಪ ನೀ ತಾಳಿದೆಯೋ ಶುಭಕಾಯ ಮಾಯಿ ವ್ರಾತ ಗೆಲಿದೆ ಮಧ್ವರಾಯಾ ಕಾಯ ಜಾತ ಜನಕಗತಿ ಪ್ರೀಯಾ ಆಹಾ ಭೂತನಾಥನೆ ಪರಮಾತುಮನೆಂಬ ಪಾತಕರರಿ ಜಗನ್ನಾಥವಿಠಲನ ದೂತ 3
--------------
ಜಗನ್ನಾಥದಾಸರು
ಮುಖ್ಯಪ್ರಾಣ ಕರವೆತ್ತಿ ನಿಂದ ಪ ಹರಿಯೆ ಪರನೆನ್ನದವನ ಹಲ್ಮುರಿವೆನೆಂದು ಅ.ಪ. ಸಿರಿ ರಾಮನಾಜ್ಞೆಯನು ಸಿರದೊಳಾನುತ ಬಂದು ವರಕಪಿಗಳೊಡಗೂಡಿ ಸಿರಿದೇವಿಯನರಸುತ ಶರಧಿತಟಕೆ ಬಂದು ಸಿರಿಪೋದ ಪಥವರಿಯದೆ ಪರಿತೋರದಿರ್ದ ಹರಿವರರಿಗಭಯವಿತ್ತು 1 ಇರುಳು ಇಂದ್ರಜಿತುವಿನ ಶರಹತಿಯಲಳಿದಂಥ ಸಿರಿ ರಾಮ ನೋಡುತ ಮರುಗುತಿರಲಂದು ವರ ಜಾಂಬವನ ಸುಮತಿಯಲಿ ತ್ವರಿತದಿ ಸಂಜೀವನ ಗಿರಿಯ ತಹೆನೆನ್ನುತ 2 ಭರದಿ ದಶಶಿರನು ತಾನರಿಯದೆ ಹನುಮನ ಬಲ ಭರವಸದಲಿ ಮಾಡಿ ಮೂರು ಗುದ್ದಿನ ಪಂಥ ಕರಹತಿಗೆ ಕಂಗೆಟ್ಟು ಧುರವ ಬಿಟ್ಟೋಡುತಿರೆ ಅರಸಿ ಅಸುರನ ಪಿಡಿದ ಹರಿಸು ಋಣವನೆಂದು 3 ದುರುಳ ಕೀಚಕನಂದು ಕರಿಗಮನೆಯನು ಕಂಡು ಸ್ಮರಶರಹತಿಯಿಂದ ಉರುತರದಲಿ ನೊಂದು ಹರಿಣಾಕ್ಷಿಯನು ಬರಿಸಿ ಸೆರಗ್ಹಿಡಿದೆಳೆದುದನು ತರಳೆ ಮುಖದಿ ಕೇಳವನ ಸಿರ ಮುರಿವೆನೆಂದು 4 ಕುರುಪತಿಯ ಸಭೆಯಲಿ ದುರುಪದಿ ಗೈದ ಶಪಥ ಮರೆಯದೆ ದುಶ್ಶಾಸನನ ಧುರದಿ ಕೆಡಹಿ ಕೊಂದು ಉರ ಬಗೆದು ಕರುಳ ನಿಜತರುಣಿಗೆ ಮುಡಿಸುವಾಗ ಬರಲಿ ಬಿಡಿಸುವರೆಂದು ಉರು ಗದೆಯನು ಪಿಡಿದು 5 ಹರಿಹರರು ಸರಿಯೆಂದು ಹರಟುತಿರ್ದವರನು ಗುರುತರ ವಾಕುಗಳೆಂಬ ಬಿರುಬಾಣದಿಂದ ಗರ ಹೊಡೆದವರ ಮಾಡಿ ಪರತತ್ವವನು ಪೇಳಿ ಭರದಿ ನಡೆದೆ 'ಪರಮೋನಹತಿ ಸದೃಶ' ವೆಂದು 6 ಸರುವರಂತರ್ಯಾಖ್ಯ ಹರಿಯಾಜ್ಞಾನುಸಾರ ಸರುವ ಜೀವರಿಗೆ ತಾನು ಗುರುವೆನಿಸಿಕೊಂಡು ಸಿರಿ ರಂಗೇಶವಿಠಲನ ದುರಿತ ಭಯವಿಲ್ಲೆಂದು 7
--------------
ರಂಗೇಶವಿಠಲದಾಸರು
ಮೂರುತಿ ಪುಟ್ಟ ಮೂರುತಿ ಪ. ಸಾರುತಿ ಹರಿಗುಣ ಬೀರುತಿ ತ್ರಿಜಗದಿ ಅ.ಪ. ತ್ರೇತೆಯ ಯುಗದಲಿ ಜನಿಸಿ | ರಾಮ ದೂತಕಾರ್ಯಕೆ ಮನವಿರಿಸಿ ಪ್ರೀತಿಯೊಳ್ ರವಿಜನ ಉಳಿಸಿ | ಬಹು ಖ್ಯಾತಿಯ ವಾಲಿಯನಲ್ಲೇ ಅಳಿಸಿ ವಾತವೇಗದಿ ವನಧಿಯ ದಾಟಿ ಉಂಗುರ ಸೀತೆಗಿತ್ತು ಲಂಕೆ ವೀತಿಹೋತ್ರನಿಗಿತ್ತ 1 ದ್ವಾರಕಿನಿಲಯನ ಒಲಿಸಿ | ಬಲು ಧೀರ ಭೀಮಸೇನನೆನಿಸಿ ಸೋಮಕುಲದಲಿ ಜನಿಸಿ | ಬಲು ಕಾಮಿ ಕೀಚಕನನ್ನು ವರೆಸಿ ಕಾಮಿನಿಗೋಸುಗ ಕಾಮುಕ ಕುರುಕುಲ ಧೂಮವೆಬ್ಬಿಸಿದ ನಿಸ್ಸೀಮ ಸುಗುಣಧಾಮ 2 ಪುಟ್ಟಯತಿಯ ರೂಪತಾಳಿ | ಬಲು ಗಟ್ಟಿ ಗೋಪೀ ಗೆಡ್ಡೆ ಸೀಳಿ ಪುಟ್ಟ ಕೃಷ್ಣನ ಕಂಡು ತೋಳಿ | ನಿಂದ ನಿಷ್ಟೆಯೊಳ್ ನೆತ್ತಿಯೊಳ್ ತಾಳಿ ಕುಟ್ಟಿ ಕುಮತಗಳ ವೈಷ್ಣವಾಗ್ರಣಿಯಾದ 3 ಸಾಕಾಯಿತೇ ಸ್ವಾಮಿಕಾರ್ಯ | ಇಲ್ಲಿ ಬೇಕಾಯಿತೇ ಮೌನಚರ್ಯಾ ಆ ಕಾಲದ ಎಲ್ಲ ಶೌರ್ಯ ಉಡುಗಿ ಏಕಾಂತದಲಿ ಹರಿಚರ್ಯಾ ವಾಕು ಉಚ್ಚರಿಸದೆ ಈ ಕುಧರಜೆ ತೀರ ಏಕಾಂತವಾಸನೆ 4 ಅಪಾರಮಹಿಮನೆ ಹಂಪೆ | ಯಲ್ಲಿ ಪರಿ ಇರುವುದು ತಂಪೆ ಪತಿ ಪದಕಂಜ ಕಂಪೆ | ಇಲ್ಲಿ ನೀ ಪಾರಣೆಯೆ ಮಾಳ್ಪ ಸೊಂಪೆ ಗೋಪಾಲಕೃಷ್ಣವಿಠ್ಠಲದಾಸ ನಿನ್ನಲ್ಲಿ ಸ್ಥಾಪಿಸಿದರೆ ವ್ಯಾಸರೀಪರಿ ಯಂತ್ರದಿ 5
--------------
ಅಂಬಾಬಾಯಿ
ಮೆರೆದೆ ಮಹಿಮೆ ಉದಾರ ನಮ್ಮಗುರು ಭೀಮಸೇನ ಸುಧೀರ ಪ. ಮಂಗಳ ಮಹಿಮ ವಿಹಾರ ಮಾಯವಾದಿಗಳಿಗತಿ ಕ್ರೂರ ಅ.ಪ. ಹರಿಯ[ನಿರೂಪ] ವ ಧರಿಸಿ ಮರುತ ಕುಂತಿಯೊಳವತರಿಸಿಹರನೊಳು ವಾದಿಸಿ ಜೈಸಿ ಹರಿಸರ್ವೋತ್ತಮನೆಂದೆನಿಸಿ 1 ಬಕ ಹಿಡಿಂಬಕ ಕೀಚಕ ಜರಾಸುತರ ಮಣಿಮಂತ ಕೀಚಕ ದುರ್ಜನರಸಕಲ ಕೌರವ ಅತಿರಥರ ಕೊಂದು ಸುಖಪಡಿಸಿದೆ ಸಹೋದರರ 2 ಜ್ಞಾನಭಕುತಿಸಂಪನ್ನ ಅಜ್ಞಾನಾರಣ್ಯಛೇದನ ಮುದ್ದುಜ್ಞಾನೇಂದ್ರ ಹಯವದನನ್ನ ಧ್ಯಾನದೊಳಿರಿಸು ಪ್ರಸನ್ನ 3
--------------
ವಾದಿರಾಜ
ಯಾಕೆ ಮರುಳಾದೆಮ್ಮ ಎಲೆ ಭಾರತೀ |ಸಾಕಲಾರದೆ ವಿವಿಧ ರೂಪ ತಾಳ್ದನಿಗೇ ಪ ಕಂಜಾಕ್ಷಿ ಸೀತೆಯನು | ಅರಸಲ್ಕೆ ಅಬ್ಧಿಯನುಅಂಜದಲೆ ಉತ್ತರಿಸಿ | ಶತ್ರು ಮಧ್ಯಾ |ಸಂಜೆಯಲಿ ಕಂಡು | ಕಂಜಾಕ್ಷಿ ಗುಂಗುರವಅಂಜದಲೆ ಇತ್ತಿಹ ಪ್ರ | ಭಂಜನಗೆ ನೀನು 1 ವಿಷದ ಲಡ್ಡಿಗೆಯನ್ನು | ಹಸನಾಗಿ ತಿಂದವನುವಿಷಧಿಯೊಳು ಮುಳುಗಿರಲು | ವಿಷಗಣವು ಕಡಿಯೇ |ವಿಷಗಣವು ಪಲ್ಮುರಿದು | ಅಸುವ ನೀಗಲು ಕ್ಷಣದಿವಿಷ ಮರೆದೆ ಕಲಕುತಲಿ | ವಸುಧೆಯಾಳ್ದನಿಗೇ 2 ವಿಪಿನ | ಪ್ರಧ್ವಂಸಕಾನಳಗೇ 3 ಖೇಚರನು ತಾನು ನೀ | ಶಾಚರರ ಸಂಹರಿಸಿಪಾಚಕನು ಮತ್ತಾಗಿ | ಕೀಚಕರ ಸವರೀ |ಯಾಚಿಸುತ ಭಿಕ್ಷಾನ್ನ | ವಾಚಿಸುತ ಸಚ್ಛಾಸ್ತ್ರಮೋಚಕನು ಆದವಗೆ | ಯೋಚಿಸಿಯು ಕೈಪಿಡಿದೇ4 ಎಂಜಲೆಡೆಯನು ಕೊಂಡು | ಅಂಜದಲೆ ಮರಕ್ಹಾರಿಸಂಜೆ ಚರಳೆರ ಕೊಂದಧ | ನಂಜಯ ನಿ ಗೊಲಿದ |ಕಂಜಾಕ್ಷನಾದ ಗುರು | ಗೋವಿಂದ ವಿಠಲ ಪದಕಂಜ ಭಜಿಸುವ ಭಾವಿ | ಕಂಜ ಸಂಭವಗೇ 5
--------------
ಗುರುಗೋವಿಂದವಿಠಲರು
ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ. ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1 ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3 ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4 ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಲಾಲಿ ಪಾಡಿರೆ ಮುದ್ದು ಬಾಲಕಂದನಿಗೆ ಬಾಲಬ್ರಹ್ಮಚಾರಿಯಾದ ಕಪಿವರಗೆ ಪ. ಅಂಜನೆಯ ಸುತನಾಗಿ ಅಂಬರಕೆ ಹಾರಿ ಕಂಜಸಖನಿಗೆ ತುಡುಕಿ ವಜ್ರತನುವಾಗಿ ಸಂಜೀವ ತಂದು ಕಪಿಪುಂಜಗಳ ಸಲಹಿ ಮಂಜುಭಾಷಣ ರಾಮಪಾದ ದಾಸನಿಗೆ 1 ಪುಟ್ಟಿ ಕುಂತಿಯ ಉದರದಲಿ ಗಿರಿ ಒಡೆದು ದುಷ್ಟ ಕೀಚಕ ಬಕಾದಿಗಳ ಸಂಹರಿಸಿ ಕುಟ್ಟಿ ಕೌರವರ ಕುಲ ದ್ರೌಪದಿಯ ಕೂಡಿ ಪಟ್ಟವಾಳಿದ ಕೃಷ್ಣ ಪಾದಸೇವಕಗೆ 2 ಶ್ರೀಪತಿಯ ಆಜ್ಞೆಯಲಿ ವಿಪ್ರಸುತನಾಗಿ ಪಾಪಿ ದುರ್ಮತಗಳನು ತರಿದು ಮುರಿದೊಟ್ಟಿ ಸ್ಥಾಪಿಸುತ ಸಚ್ಛಾಸ್ತ್ರ ಯತಿಯಾಗಿ ಚರಿಸಿ ಗೋಪಾಲಕೃಷ್ಣವಿಠ್ಠಲನ ಮೆರೆಸಿದಗೆ 3
--------------
ಅಂಬಾಬಾಯಿ
ವರಾಹ | ವಿಠಲ ಪೊರೆ ಇವನ ಪ ಮೋದ ಮುನಿ ಸನ್ನುತನೆ | ಆದಿ ಮೂರುತಿಯೇ ಅ.ಪ. ಸ್ವೋಚಿತಸು ಕರ್ಮದಲಿ | ಊಚ ದೀಕ್ಷೆಯನಿತ್ತುನೀಚೋಚ್ಚತರತಮವ | ವಾಚಿಸಿವನಲ್ಲೀಪ್ರಾಚೀನ ದುಷ್ಕರ್ಮ | ಮೋಚನೆಯಗೈಸವ್ಯಸಾಚೀ ಸಖನೆ ಹರಿಯೆ | ಕೀಚಕಾರಿ ಪ್ರೀಯಾ 1 ಸತಿ ಸುತರು ಬಂಧುಗಳು | ಹಿತ ಅಹಿತರಿವರಲ್ಲಿವ್ಯಾಪ್ತ ಶ್ರೀ ಹರಿಯೆಂಬ | ಮತಿಯ ಕೊಟ್ಟವಗೇ ||ಸತತ ತವನಾಮಾ | ಮೃತದ ಸವಿದೋರೋವಿತತ ಮಹಿಮೋ ಪೇತ | ಪ್ರತಿ ರಹಿತ ದೇವಾ2 ಪಥ ಚಾರು ಭವ ಕೂಪಾರ | ಪಾರು ಮಾಡಯ್ಯಾ3 ಸಾರ | ವಾರವಾರಕೆ ಉಣಿಸಿದಾರಿ ದೀಪಕನಾಗೊ | ಮಾರಮಣನೆ ದೇವಾತಾರಕನು ನಿನ್ಹೊರತು | ಆರು ಇಲ್ಲವುಯೆಂದುಪ್ರಾರ್ಥಿಸುವೆ ನಿನ್ನಡಿಗೆ | ವೀರರಘು ಪತೆಯೇ4 ಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಯುದೇವರು ಇದು ಏನು ಕೌತುಕವೊ ಹನುಮರಾಯ ಪದುಮನಾಭನ ದಯಾಪಾತ್ರ ಶುಭಕಾಯ ಪ. ಅಂಜನೆಯ ಸುತನಾಗಿ ಅಂದು ಶ್ರೀ ರಾಮರಡಿ ಕಂಜಗಳ ಸೇವಿಸುತ ಮುದ್ರಿಕೆಯನು ಕಂಜಾಕ್ಷಿಗಿತ್ತು ಕ್ಷೇಮವನರುಹಿ ಬಂದಾಗ ಸಂಜೀವ ನಿನಗಿಷ್ಟು ತೊಡಿಗೆ ಕೊಟ್ಟಳೆ ದೇವಿ 1 ಮರುವಾರ್ತೆ ತಂದು ರಾಮಗರುಹಿ ಸೇತುವೆಯ ಗಿರಿಯಿಂದ ಕಟ್ಟಿ ಕಾರ್ಯವ ಸಾಧಿಸೆ ಸಿರಿಸಹಿತ ಶ್ರೀ ರಾಮ ರಾಜ್ಯಕೆ ಬಂದಾಗ ಮರುತ ನಿನಗಿಷ್ಟು ಆಭರಣ ಕೊಟ್ಟನೆ ಪೇಳು 2 ಎಲ್ಲೆಲ್ಲಿ ನಿನ್ನ ಕೀರ್ತಿಯ ಕೇಳೆ ಕೌಪೀನ ವಲ್ಲದಲೆ ಮತ್ತೊಂದರ್ಹಂಬಲಿಲ್ಲ ಮಲ್ಲ ವೈರಾಗ್ಯದಲಿ ಎಂಬುದನು ಕೇಳಿದೆನು ಇಲ್ಲಿ ನೋಡಲು ಇಷ್ಟು ವೈಭವವ ಪಡುತಿರುವೆ 3 ರಾತ್ರೆಯಲಿ ಕೀಚಕನ ಕೊಲ್ಲಲೋಸುಗ ಅಂದು ಮಿತ್ರೆ ರೂಪವ ಧರಿಸಿ ಶೃಂಗರಿಸಿಕೊಂಡು ಕತ್ತಲೊಳು ನೋಡಿಕೊಳ್ಳಲು ಆಗಲಿಲ್ಲೆಂದು ಹಸ್ತ ಕಡಗ ಹರಡಿ ಇಟ್ಟು ಮೆರೆಯುವೆಯೊ 4 ಹುಟ್ಟುತಲೆ ಸಂನ್ಯಾಸ ತೊಟ್ಟು ಬ್ಯಾಸತ್ತೊ ನಡು ಪಟ್ಟಿ ಉಡುದಾರ ಉಡುಗೆಜ್ಜೆ ಕಾಲ್ಗಡಗ ಇಟ್ಟು ನಾನಾ ಬಗೆ ಕದರುಂಡಲಿಯಲಿ ನೆಲಸಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ಪ್ರಿಯನಾದಿ 5
--------------
ಅಂಬಾಬಾಯಿ
ವಾಯುದೇವರು ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ ಪ ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ ಸಿಂಧು ದಾಟಿ ಸೀತೆಗೆರಗಿ ನಿಂದು ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ ಕೊಂದ ರಕ್ಕಸ ಪುರವನನಲಗೆ ಇತ್ತೆ 1 ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ ಮಂದಮತಿಗಳನಳಿದು ತಂದಿ ಸೌಂಗಂಧಿಕವ ಪುಂಡ ಕೀಚಕರಳಿದ ಪಾಂಡವಪ್ರಿಯದೂತ 2 ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ ಬೋಧಿಸಿ ಸುಜನರಿಗೆ ಮಾಧವನ ಗುಣವ ಸಾಧು ವಂದಿತ ಬಾದರಾಯಣರು ಇರುತಿರುವ ಬದರಿಯಲ್ಲಿರುವಿ ಶ್ರೀ ನರಹರಿಯ ತೋರೋ 3
--------------
ಪ್ರದ್ಯುಮ್ನತೀರ್ಥರು
ವೆಂಕಟ ಗಿರಿ ವಿಠಲ | ಲೆಂಕಳನ ಪೊರೆಯೋ ಪಪಂಕಜಾಸನ ವಂದ್ಯ | ಆಕಳಂಕ ಮಹಿಮಾ ಅ.ಪ. ಸಾಧ್ವಿಮಣಿ ತವದಾಸ್ಯ | ಬುದ್ದಿಯಲಿ ಮೊರೆಯಿಟ್ಟುಉದ್ಧರಕೆ ಕಾದಿಹಳೊ | ಅಧ್ವರೇಡ್ಯ ಹರೀ |ಮಧ್ವಮತ ಪೊತ್ತಿರುವ | ಶುದ್ಧಕಾರಣದಿಂದಉದ್ಧಾರ ಗೈಯ್ಯುವುದೊ | ಶ್ರದ್ಧ ಪತಿನುತನೇ 1 ಖೇಚರೋತ್ತಮ ದೇವ | ವಾಚಾಮ ಗೋಚರನೆಪ್ರಾಚೀನದುಷ್ಕರ್ಮ | ಮೋಚನವಗೈಸೇಯಾಚಿಸುವೆ ನಿನ್ನಲ್ಲಿ | ಕೀಚಕಾರಿ ಪ್ರಿಯನೇಮೋಚಕೇಚ್ಛೆಯ ಮಾಡಿ | ಸೂಚಿಸೋ ಕರುಣಾ 2 ಕರ್ಮ ಪಥಸವೆಸೋ 3 ಹರಿನಾಮ ಸ್ಮøತಿಗಿಂತ | ಪರಮ ಸಾಧನ ಕಾಣೆವರಕಲೀಯಲಿಯೆಂದು | ಸಾರತಿವೆ ಶಾಸ್ತ್ರಾತುಣಿಗಂತೆಯೆ ಮತ್ತೆ | ವರ ಸ್ವಪ್ನವನುಸರಿಸಿಬರೆದಿಹೆನೊ ಅಂಕಿತವ | ಕರುಣ ರಸ ಪೂರ್ಣಾ 4 ಕೈವಲ್ಯ ಫಲದಾತಸೇವಕಳ ಕೈಪಿಡಿಯೆ | ಓವಿ ಪ್ರಾರ್ಥಿಸುವೇ |ಭಾವುಕರ ಪಾಲ ಸಂ | ಭಾವಿಸೀಕೆಯ ಕಾಯೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶೇಷ ಪರ್ಯಂಕ ಶಯನ ವಿಠಲ ಪೊರೆ ಇವಳ ಪ ವಾಸುದೇವನೆ ನಿನ್ನ | ದಾಸಿ ಎಂದೆನಿಸಿ ಭವಪಾಶವನೆ ಕಳೆಯೊ ಸುವಿ | ಶೇಷ ಹರಿಯೇ ಅ.ಪ. ಪತಿಸುತರು ಹಿತರಲ್ಲಿ | ವಿತತವಾಗಿರುವಂಥಅತಿಶಯದ ತವರೂಪ | ಸತತ ಚಿಂತಸುವಾ |ಮತಿಯನೇ ಕರುಣಿಸುತ | ಕೃತ ಕಾರ್ಯಳೆಂದೆನಿಸೊಕ್ಷಿತಿರಮಣ ಭಿನ್ನವಿಪೆ | ಪತಿಕರಿಸೊ ಇದನಾ 1 ಬುದ್ಧಿಯಲಿ ಸನ್ನಿಹಿತ | ವೃದ್ಧಿಗೈಸಿವಳಲ್ಲಿಮಧ್ವಮತ ಸಿದ್ಧಾಂತ | ಪದ್ಧತಿಗಳಾಅಧ್ವರೇಡ್ಯನೆ ಅನಿ | ರುದ್ಧ ಮೂರುತಿ ಹರಿಯೇಕೃದ್ಧಖಳ ಸಂಹಾರಿ | ಪದ್ಮನಾಭಾ 2 ಕೀಚಕಾರಿ ಪ್ರಿಯನೆ | ಮೋಚಕೇಚ್ಛೆಯ ಮಾಡಿಪ್ರಾಚೀನ ಕರ್ಮದಿಂ | ಮೋಚನವ ಗೈಸೋ |ಯಾಚಿಸುವೆನೋ ಸವ್ಯ | ಸಾಚಿಸಖ ನೀನೆಂದುಈಕ್ಷಿಪುದು ಕರುಣ ಕಟಾಕ್ಷದಲಿ ಹರಿಯೇ 3 ಸಾರ ಸುಖಸಾಂದ್ರಾ 4 ಕಾವ ಕರುಣಿಗಳರಸ | ಭಾಮಕರ ಪರಿಪಾಲಾಓವಿತವ ಸಂಸ್ಮರಣೆ | ಸಾರ್ವಕಾಲಿದಲೀಈವುದಿವಳಿಗೆ ಎಂದು | ಭಾವದಲಿ ಭಿನ್ನವಿಪೆಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀರುಕ್ಮಿಣೀರಮಣ ತಾನುಡಿಸಿದಂತೆ ನಾಂ ಧಾರುಣಿಪ ಜನಮೇಜಯಂಗೆ ಮುನಿ ಪೇಳಿಸಿದ ಹದಿನೆಂಟುಪದ್ಯಗಳೊಳಾಲಿಸುವುದು ದನುಜದಿವಿಜರೀ ಭುವಿಯೊಳವತಿರಿಸಿದರುಸುಯೋ ಧನಪಾಂಡುತನಯರಂ ಸೈರಿಸದೆಭೇದಮಂ ಕಟ್ಟಿಸಿಯರಗಿನಮನೆಯೊಳವರನಿಡಲು | ವನಜಲೋಚನನ ಕೃಪೆಯಿಮದದಂದಾಟಿಕಾ ನನದಲಿ ಹಿಡಿಂಬಬಕರಂ ಮುರಿದುದೃಪದರಾ ಪುತ್ರರಪಡೆದರಾದಿಪರ್ವದಲ್ಲಿ 1 ರಾಜಸೂಯಾಭಿಧಾನದ ಯಾಗಕಾರಣದೊ ಳಾಜರಾಸಂಧಾದಿಗಳ ಕೊಲಿಸಿನೃಪಧರ್ಮ ಜೂಜಿನಲಿಸೋಲಿಸಲು ಪಂಚಪಾಂಡವರಂ ಸ ರೋಜಾಕ್ಷಿ ದ್ರೌಪದಿಯ ಭಂಗಪಡಿಸಲ್ಕೆಪಂ- ಸಭಾಪರ್ವದಲಿ 2 ಅಡವಿಯೊಳು ವಾಸವಾಗಿರಲು ಪಾಂಡುಸುತರ್ಗೆ ಪೊಡವಿ ಸುರರರುಹಿಸಲ್ ಸತ್ಕಥೆಗಳಾಲಿಸುತ ಘೋಷಯೊಳಹಿತನ ಬಿಡಿಸಿದಂ ಗಂಧರ್ವಪತಿಯಿಂದ ಪಾರ್ಥನೀ ರಡಿಸಿ ನಾಲ್ವರುಮೂರ್ಛೆಪೊಂದಲ್ಕೆಯಕ್ಷಂಗೆ ಅರಣ್ಯಪರ್ವದೊಳಗೆ 3 ಬಂದುಮಾತ್ಸ್ಯಾಲಯದಲಜ್ಞಾತವಾಸದೊಳ ಗಂದುಪಾಂಡವರಿರಲ್ ಕೀಚಕಾಧಮನು ಸೈ- ಭೀಮಗಂಧರ್ವ ವ್ಯಾಜದಿಂದ ಕೊಂದವಾರ್ತೆಯ ಕುರುಪಕೇಳಿ ಸೇನೆಸಹಿತ ಪಾರ್ಥಗೆ ವಿರಾಟಪರ್ವದಲ್ಲಿ 4 ದೇವಕೃಷ್ಣಸಂಧಿಗೆ ತರಲ್ ಕುರುಪದು ರ್ಭಾವದೊಳಗಿರಲದಂ ತಿಳಿದುವಿದುರನ ಮನೆಯೊ ಕೌರವಸಭೆಗೆಪೋಗಿ ಈವುದೈದೂರುಗಳ ಪಾಂಡವರಿಗೆನೆ ಭೇದ ಭಾವದಿ ಸುಯೋಧನಂಸೂಜ್ಯಾಗ್ರಭೂಮಿಯಂ ತಾ ನೀವುದಿಲ್ಲವೆನೆ ಯುದ್ಧನಿಶ್ಚಯಗೈದನುದ್ಯೋಗಪರ್ವದಲಿ 5 ಕುರುಪತಿಯು ಗಂಗಾಸುತಗೆ ಪಟ್ಟಗಟ್ಟಿದಂ ಎರೆಡುಬಲಮಂ ಸೇರಿಯಿರಲರ್ಜುನಂ ತನ್ನ ವರಕೊಲ್ವದೆಂತೆನಲ್ ಹರಿವಿಶ್ವರೂಪಮಂ ತೋರಿತತ್ವವತಿಳಿಸಲು ತರುವಾಯ ಹತ್ತುದಿನಕಾದುತಿರಲಾಗಭೀ ಷ್ಮರಿಗೆಷಂಡನನೆವದಿ ಶಸ್ತ್ರಸಂನ್ಯಾಸ ವಾ ಭೀಷ್ಮಪರ್ವದಿಕಥೆಯಿದು 6 ಗುರುಗಳಿಗೆ ಪಟ್ಟಾಭಿಷೇಕವಾಯಿತುದ್ರೋಣ ದೊರೆಯಹಿಡಿತಹೆನೆಂದು ತಪ್ಪೆಸಂಶಪ್ತಕರ ನರನೊಡನೆ ಕಾದಿದರು ಪಾರ್ಥಸುತಪೊಕ್ಕುಪದ್ಮವ್ಯೂಹ- -ದೊಳುಮಡಿಯಲು ನರಪ್ರತಿಜ್ಞೆಯಗೈದು ಸೈಂಧವನ ವಧಿಸಿದನ ಸುರ ಘಟೋತ್ಕಚ ರಾತ್ರಿಯುದ್ಧದೋಳ್ ಸಂದನಾ ದಿನದಲಿದ್ರೋಣಪರ್ವದೊಳಗೆ 7 ಕುರುಸೈನ್ಯಬತ್ತಿರುವ ಶರಧಿಯೋಲಾಯ್ತು ದಿನ ಕರಸುತಗೆ ಪಟ್ಟವಂಗಟ್ಟಿ ದುರ್ಯೋಧನಂ ಹರನುತ್ರಿಪುರವ ಗೆದ್ದಕಥೆಯವಿಸ್ತರಿಸಿ ಸಾರಥಿಯ ಮಾಡಲು ಶಲ್ಯನ ನರನವಿಕ್ರಮಪೊಗಳಿ ಕರ್ಣನಬಲವನುಧಿ ಕ್ಕರಿಸೆಮಾದ್ರೇಶ್ವರಂ ಕರ್ಣನತಿ ಖಾತಿಯಿಂ ದೆರಡುದಿನ ಕಾದಿಯರ್ಜುನನಿಂದ ಮಡಿದ ಸೂತಜ ಕರ್ಣಪರ್ವದಲಿ 8 ಸೂತಜನಮರಣದಲಿ ಶಲ್ಯಗಾಯಿತು ಪಟ್ಟ ಶಕುನಿಯಂಸಹದೇವಸಂಹರಿಸಲು ಪಾತಕಿ ಸುಯೋದನಂ ಕೊಳನಪೊಕ್ಕಿರಲು ಯಮ ಜಾತಾದಿಗಳು ಪೋಗಿ ನುಡಿಸಲ್ಕೆಜಲ ಪೊರಟು ಕುರುಪನು ಶಲ್ಯಪರ್ವದೊಳಗೆ 9 ಗುರುಜಂಗೆ ಬೆಸಸಿದಂ ಕುರುರಾಯ ಪಾಂಡವರ ಶಿರವತಹುದೆನುತಲಶ್ವತ್ಥಾಮಪಾಳಯದಿ ಜೀವಬಿಡಲು ನರಭೀಮಸೇನರಾವಾರ್ತೆಯಂ ಕೇಳುತಲೆ ತರುಬಿ ಹಿಡಿದೆಳೆ ತಂದು ದ್ರೌಣಿಯಂ ಶಿಕ್ಷಿಸಲ್ ಸುಪ್ತಪರ್ವದಲಿ 10 ರಣದಿ ಮಡಿದಿರುವ ನೃಪರರಸಿಯರ್ ಅಂಧಭೂ ಪನು ಸತಿಯುಸಹಿತಲೈತರುತಿರಲ್ ಕಳನೊಳಗೆ ತಮ್ಮಪತಿಗಳನಪ್ಪಲು ಪೆಣಗಳೊಟ್ಟೈಸಿ ಸಂಸ್ಕಾರಕ್ರಿಯೆಗಳವಿದು ರನುಗೈದನನ್ನೆಗಂ ಧೃತರಾಷ್ಟ್ರನರಸಿ ಕೃ ಸ್ತ್ರೀಪರ್ವದಲಿ 11 ತನಗೆ ಕರ್ಣಸಹೋದರನೆಂಬ ವಾರ್ತೆಯಮ ಜನು ಕೇಳಿ ಶೋಕದಿವಿರಕ್ತಿಯಿಂದಿರೆ ಸಕಲ ಘನಬಂಧುವಧೆ ಮಹಾದೋಷವೆಂತೆಂದು ಭೀ ಷ್ಮನ ಕೇಳಲರುಹಿದಂ ರಾಜನೀತಿಯ ಧರ್ಮ ವನು ಕಷ್ಟಕಾಳಧರ್ಮವ ಮೋಕ್ಷಧರ್ಮವೆಂಬಿದುಶಾಂತಿಪರ್ವದಲಿ 12 ಅತಿಶಯ ದಾನಧರ್ಮದ ಲಕ್ಷಣಗಳಂ ನಿ ಯತಮಾದ ವರ್ಣಾಶ್ರಮಾಚಾರಕ್ರಮದಸಂ ತತಿಗಳಂ ಶಿವವಿಷ್ಣುಗಳಮಹಿಮೆ ಬ್ರಹ್ಮಸಾಕ್ಷಾತ್ಕಾರಸದ್ಬೋಧೆಯ ಕಥೆಗಳರುಹಿಸಿ ನದೀಸುತಧರ್ಮಜನ ಮನೋ ಪತಿ ಕೃಷ್ಣನಂ ಧ್ಯಾನಿಸುತ ಮುಕ್ತನಾದನಿದು- -ಮಾನುಶಾಸನ ಪರ್ವದಿ 13 ಗುರುಸುತನ ಬ್ರಹ್ಮಾಸ್ತ್ರಮಂಚಕ್ರದಿಂದಸಂ ಹರಿಸಿ ಕೃಷ್ಣಂಕಾಯ್ದನುತ್ತರೆಯಗರ್ಭಮಂ ನೇಮದಿಂದ ಪರಿಪರಿಸುವಸ್ತುಗಳನೆಲ್ಲ ತಂದುಯೈ ವರು ಮಹಾಸಂತಸದಿಹರಿ ಸಹಾಯದಿ ಮಾಡಿ ಸಂಪೂಜಿಸಿದರಶ್ವಮೇಧಕಪರ್ವದಿ 14 ಅಂಧಭೂಪತಿ ಕೌರವಸ್ತ್ರೀಯರುಂ ಕುಂತಿ ಗಾಂಧಾರಿ ಸಹಿತಬರೆ ತೆರಳಿದಂತಪಗೈಯ್ಯೆ ಮುವ್ವರುಪವಾಸದೊಳಿರೆ ಬಂದುದಾಕಾಳ್ಗಿಚ್ಚಿನೋಲ್ ಮಹಾಜ್ವಾಲೆಯೋಳ್ ಪೊಂದಿದರ್ ವಿದುರಧರಾತ್ಮಜನಕೂಡಿದಂ ಬಂದುಯಮಜನುಪುರದಿ ಶ್ರಾದ್ಧಗಳಮಾಡ್ದನಾಶ್ರಮ- -ವಾಸಪರ್ವದೊಳಗೆ 15 ವರುಷಗಳು ಷಟತ್ರೀಂತಿಯು ರಾಜ್ಯವಾಳುತಿರೆ ಬರುಬರುತಲುತ್ಪಾತಗಳುಪುಟ್ಟಿದವು ಯಾದ ಮಡಿದರೆಂಬವಾರ್ತೆಯನು ಕೇಳಿ ನರನು ನಡೆತಂದು ಶೋಕದೊಳುಳಿದವರನುತಾ ಕರದೊಯಿದು ವಜ್ರಾಖ್ಯನಂ ಯಿಂದ್ರಪ್ರಸ್ಥದೋಳ್ ಮುಸಲಪರ್ವದಕಥೆಯಿದು 16 ನರನಮೊಮ್ಮಗೆ ಪಟ್ಟವಂಗಟ್ಟಿಯೈವರುಂ ತೆರಳಿದರ್ಪಾಂಡವರ್ ಸತಿಸಹಿತಬರುತ ಹಿಮ ನಕುಲನುಂ ಸುರಪಸುತನು ವರಭೀಮಸೇನನುಂ ಬಿದ್ದರಾನೃಪತಿಯೋ ರ್ವರನುಕಾಣದೆಯೊಬ್ಬನೇಪೋಗುತಿರೆ ಕಷ್ಟ ಪ್ರಸ್ಥಾನಪರ್ವದೊಳಗೆ 17 ಮ್ಮಂದಿರೆಲ್ಲೆನಲವಂ ಸುರನದಿಯತೋರಲ್ಕೆ ತನ್ನವರೆಲ್ಲರ ನೋಡುತ ಪೊಂದಿದಂ ಯಮನೊಡನೆ ಪವನನೋಳ್ ಭೀಮನರ ನಿಂದನಂ ಯಮಳರಶ್ವಿನಿಯರೊಳ್ಕಲಿಮುಖ್ಯ ಸಂದೋಹದೋಳ್ ಸುಯೋಧನ ಪ್ರಮುಖರೊಂದಿದರ್ ಸ್ವರ್ಗಾರೋಹಣಪರ್ವದಿ 18 ಈಮಹಭಾರತ ಶತಸಹಸ್ರಗ್ರಂಥವನು ಹಾ ಮುನಿ ಪರಾಶರಾತ್ಮಜಪೇಳ್ದನದುವೆ ಗುರು ಸಂಕ್ಷೇಪಭಾರತವನು ಪ್ರೇಮದಿಂದಾಲಿಸುವ ಸಜ್ಜನರಿಗನುದಿನಂ ಕಾಮಿತಾರ್ಥವನಿಹಪರಂಗಳೊಳ್ಸುಖವಗುರು ರಾಮವಿಠ್ಠಲಕೊಡುವಭಾಗ್ಯವಲ್ಲೀನಗರ- -ನಿಲಯನರಹರಿಕರುಣದಿ 19
--------------
ಗುರುರಾಮವಿಠಲ
ಸಂಕ್ಷಿಪ್ತ ವಿರಾಟಪರ್ವ ಕೇಳು ಜನಮೇಜಯರಾಜ ಭೂಮಿ- ಪಾಲ ಪಾಂಡವರ ಸತ್ಕಥೆಯಪ. ಭೂರಿ ವ- ನಾಳಿಯನು ಸಂಚರಿಸಿ ಸಜ್ಜನ ಕೇಳಿಯಲಿ ವನವಾಸದವಧಿಯ ಕಾಲವನು ಕಳೆಕಳೆದು ಬಂದರುಅ.ಪ. ದರ್ವೀಧರಹಸ್ತನಾಗಿ ಮಹಾ ಪರ್ವತದಂತುರೆ ಮಸಗಿ ನಿರ್ವಹಿಸಿ ಸೂದತ್ವವನು ಸಲೆ ಗರ್ವಿತಾಧಮ ಕೀಚಕನ ಕುಲ ಸರ್ವವನು ಸಂಹರಿಪ ಭೀಮ ಪೆ- ಸರ್ವಡೆದ ಗುರುವರ್ಯ ಬಂದನು 1 ಕಡುಗಲಿ ಕಲಿಮಲಧ್ವಂಸ ಎದ್ದು ನಡೆದು ಬಂದನು ಪರಮಹಂಸ ನಿಡುಕಿ ಮನದಿ ವಿರಾಟರಾಯನ ಪೊಡವಿಗಿಡೆ ಪದ ಕೀಚಕಾಖ್ಯನ ಎಡದ ಭುಜ ಕಂಪಿಸಿತು ಮೂಜಗ ದೊಡೆಯನುಡುಪತಿಕುಲಶಿಖಾಮಣಿ2 ಗಂಗಾದಿ ನದಿಗಳ ತೀರ ಪಟ್ಟ ಣಂಗಳ ಗೈದ ಸಂಚಾರ ತುಂಗಬಲ ಮಲ್ಲರುಗಳನು ಸಲೆ ಸಂಘಟಿಸಿ ಜೀಮೂತವೀರಪ್ಪ ಸಂಗದಲಿ ವೈರಾಟಪುರ ರಾ ಜಾಂಗಣಕೆ ಭದ್ರಾಂಗ ಬಂದನು3 ಇಂತು ಮಲ್ಲರನೆಲ್ಲ ಸದೆದು ಬಲ ವಂತರಿರಲು ನೃಪಗೊಲಿದು ಸಂತಸವ ಬಡಿಸುತ್ತಲಿರಲ್ವಾ ಕುಂತಿತನಯರು ಹರಿಯ ನಾಮವ ಚಿಂತಿಸುತ ದಶಮಾಸ ಕಳೆದಾ ನಂತರದ ವೃತ್ತಾಂತವೆಲ್ಲವ4 ಕಥೆಯಂತೆ ಹಿಂದೆ ರಾವಣನ ಕೆಟ್ಟ ಗತಿಗನುಚರ ಕೀಚಕನ ಸ್ಥಿತಿಯು ದ್ರುಪದಜೆಗಾದ ಮಾನ ಚ್ಯುತಿಗೆ ಕಾರಣನಾದ ಜಡ ದು- ರ್ಮತಿ ಖಳಾಧಮನೊಂದು ದಿನ ನೃಪ ಸತಿಸಭೆಗೆ ಅತಿ ಹಿತದಿ ಬಂದನು5 ಪಾಪಿ ಕೀಚಕನಿಗಿಂತುಸುರಿ ದ್ರುಪದ ಭೂಪಾಲಕನ ಕಿಶೋರಿ ಶ್ರೀಪತಿಯ ನಾಮವನು ಸ್ಮರಿಸುತ- ಲಾ ಪತಿವ್ರತೆ ತೊಲಗಲಂಗಜ ತಾಪತಪ್ತಾಂತಃಕರಣ ನಾ ಪರಿಯ ಮತಿ ವ್ಯಾಪಿಸಿದನು6 ಲಾಲಿಸಿ ಮಾಲಿನಿವಚನ ತೋಷ ತಾಳಿದ ದುರ್ಗುಣಸದನ ಕಾಲಪಾಶದಿ ಬಿಗಿವಡೆದು ಹೇ- ರಾಳ ಮುದಕೀಲಾಲ ಸಲೆ ಕ- ಲ್ಲೋಲಜಾಲದಿ ಮುಳುಗಿ ನರ್ತನ ಶಾಲೆಗಾಗಿ ಕರಾಳ ಬಂದನು7 ಮಥಿಸಿ ಕೀಚಕನ ಮಂಟಪದಿ ದ್ರುಪದ ಸುತೆಗೆ ತೋರಿಸಲತಿ ಮುದದಿ ಸತಿಶಿರೋಮಣಿ ಕಂಡು ಮನದೊಳ- ಗತುಳ ಹರುಷವನಾಂತು ಸರ್ವೋ ನ್ನತಭುಜನ ಚುಂಬಿಸಿದಳು ಪತಿ ವ್ರತೆಯರ ಶಿರೋರತುನೆ ಪಾವನೆ8 ಇತ್ತ ವಿರಾಟನಗರದ ಸರ್ವ ವೃತ್ತಾಂತವೆಲ್ಲವ ತಿಳಿದ ಧೂರ್ತ ದುರ್ಯೋಧನ ದುರಾಗ್ರಹ ಚಿತ್ತಗ್ರಹಿಸಿದ ಕಾರ್ಯಕಾರಣ ವೃತ್ತಿಯಲ್ಲಿ ಪಾಂಡವರು ನಿಜವೆಂ- ದಾಪ್ತಜನರೊಳು ವಿಸ್ತರಿಸಿದನು9 ಕರ್ಣ ದ್ರೋಣ ಕೃಪಾ ದ್ಯರು ಕೂಡಿ ಕುಜನಪ್ರವೀಣ ಪೊರಟ ಪರಮೋತ್ಸಾಹ ಸಾಹಸ ಭರತಿ ಕೌರವರಾಯ ಮತ್ಸ್ಯನ ಪುರವರ ಸಮೀಪದಿ ಸುಶರ್ಮನ ಕರೆದೊರೆದ ಭೂವರ ನಿರ್ಧರ10 ನುಡಿಯ ಕೇಳುತಲಿ ಸುಶರ್ಮ ನಿಜ ಪಡೆಯ ನೆರಹಿ ವೈರಿವರ್ಮ ದೃಢಕರಿಸಿ ದಿನಮಣಿಯು ಪಶ್ಚಿಮ- ಕಡಲ ಸಾರುವ ಸಮಯ ಗೋವ್ಗಳ ಪಿಡಿದು ಗೋಪರ ಕೆಡಹಿ ಬೊಬ್ಬಿ- ಟ್ಟೊಡನೊಡನೆ ಪಡಿಬಲವನರಸಿದ11 ಹಾರಿಸಿದನು ರಥ ಪಾರ್ಥ ನರ ನಾರಿವೇಷದ ಪುರುಷಾರ್ಥ ತೋರಿಸುವೆನೆಂಬುತ್ಸಾಹದೊಳು ಬ್ಬೇರಿ ಮನದೊಳು ಕೃಷ್ಣನಂಘ್ರಿಸ- ರೋರುಹಕೆ ಮಣಿದುತ್ತರನ ಸಹ ಸೇರಿ ನಗರದ್ವಾರ ದಾಟಿದ12 ಭೀತಿಯ ಬಿಡು ಬಾರೆಂದು ಪುರು ಹೂತಸುತನು ಎಳತಂದು ಘಾತಿಸುವೆ ರಿಪುಬಲವನೆಂದು ವ- ರೂಥದಲಿ ಕುಳ್ಳಿರಿಸಿ ನೃಪತನು ಜಾತಸಹ ಪಿತೃವನದ ಮಧ್ಯ ಶ- ಮೀತರುವಿನೆಡೆಗೋತು ಬಂದರು13 ಇಂತು ತಿಳಿಸುತಲರ್ಜುನನು ಬಲ ವಂತನು ಧನುಶರಗಳನು ತಾಂ ತವಕದಿಂ ಧರಿಸಿ ವಿಜಯ ಮ- ಹಾಂತ ವೀರಾವೇಶಭೂಷಣ ವಾಂತು ಶಂಖನಿನಾದದಿಂ ರಿಪು ತಿಂಥಿಣಿಯ ಭಯಭ್ರಾಂತಗೊಳಿಸಿದ 14 ಹೂಡಿ ಬಾಣವನುರ್ಜುನನು ಚೆಂ- ಡಾಡಿದ ರಿಪುಬಲವನ್ನು ಮೂಢ ದುರ್ಯೋಧನನ ಕಣೆಗಳ ಜೋಡಣೆಗಳಿಂ ಬಿಗಿದು ತನ್ನೋಶ ಮಾಡಿಕೊಂಡನು ಗೋಪಗೋವ್ಗಳ ನಾಡಲೇನದ ಪ್ರೌಢತನವನು15
--------------
ತುಪಾಕಿ ವೆಂಕಟರಮಣಾಚಾರ್ಯ