ಒಟ್ಟು 126 ಕಡೆಗಳಲ್ಲಿ , 37 ದಾಸರು , 114 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮದನ ಜನಕ ಪುರು| ಷೋತ್ತಮ ಪರತರ ಶೇಷಗಿರಿವಾಸಾ| ಪ ಕರುಣ ನೋಟದಿ ಸರ್ವಜೀವನುಳಹಿ ಕೊಂಡು| ಅಮೃತ ನುಣಿಸಿದನು| ಧರಣಿಯ ಮೋಹಿಸಿ ಬಿಗಿದಪ್ಪಿ ತರಳನು| ಹರಣಗಾಯ್ವ ದೇವ ಶರಣೆಂದೆನಲ್ಲದೆ| ತೆರೆಗಣ್ಣಿನವನೇಂದೆನೇ ಉಬ್ಬಿಗೊಂಡ| ಬಿರುಸು ಮೈಯ್ಯವನೆಂದನೇ ದಾಡಿಲಿಂದ| ಸುರಿವ ಜೊಲ್ಲುವನೆಂದನೇ ಬ್ರಹ್ಮಾದಿಗ| ಳರಸ ಉಗ್ರಾವ ತಾರೀ ಬಾಯೆಂದೆನಲ್ಲದೆ1 ಚಿಕ್ಕಮಾಟದಿ ಬಹು ಚಲುವ ಭೂಸುರರುಗೆ ಪುಕ್ಕಟೆ ಅರಸು ತನವ ಕೊಟ್ಟನು| ಸಿಕ್ಕಿದ ದೇವರ ಸೆರೆಬಿಡಿಸಿದ ಕುಂತೀ| ಸಾರಥಿ ಶರಣೆಂದೆನಲ್ಲದೇ| ಕಕ್ಕು ಲಾತೆವನೆಂದೆನೇ ಕೊಡಲಿಹೊತ್ತ| ನಿಕ್ಕರುಣಿಕನೆಂದನೇ ವಾನರ ಕೂಡಾ| ಹೊಕ್ಕವನನೆಂದೆನೇ ಕೌರವರ| ಸೊಕ್ಕು ಮುರಿದ ಸ್ವಾಮಿ ಬಾಯೆಂದೆನಲ್ಲದೆ2 ನೊಸಲಗಣ್ಣಿನವನ ಸಾಹ್ಯಕ ಶರವಾಗಿ| ಯಶೆವ ಮುಪ್ಪುರವನು ಧರೆಗಿಳುಹೀ| ವಸುಧಿಲಿ ಕಲಿಮಲ ಬಿಡಿಸಿ ಸಜ್ಜನರಪಾ| ಲಿಸಿದ ಮಹಿಪತಿ ಸುತಪ್ರಭು ಎಂದೆನಲ್ಲದೆ ಹುಸಿನುಡಿಯುವ ನೆಂದನೇ ಯವನರ| ದೆಸಿಗೆಡಿಸಿದ ನೆಂದನೇ ಆರಿಗೆ ನೆಲೆ| ತುಸುಗುಡದವ ನೆಂದನೇ ಜಗದೊಳು| ದಶ ಅವತಾರನೇ ನಮೋ ಎಂದೆ ನಲ್ಲದೆ.3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮದ್ದಾನೆ ಗತಿ ಸಖಿ ಬಾರಮ್ಮಾ|| ಮುದ್ದು ಮೊಗದ ರಂಗನ ತಂದು ತೋರಮ್ಮಾ 1 ಇಂದು ಎನ್ನ ಚಿತ್ತ ಸ್ವಸ್ಥವಾಗದೇ| ಒಂದುಗಳಿಗಿ ಕ್ರಮಣವಾಗಿ ಹೋಗದೇ 2 ಬಿಗಿದವೇನೆ ಮಾಯಿ ಫಣಿಗಳು| ವೇಗದಿಂದ ಬರುತಿದೇ ತಂಗಾಳಿಗಳು 3 ಮಂದರಧರನು ಯಾಕೆ ಬಾರನೇ| ಚಂದ್ರ ಕಿರಣ ಝಳಕ ನಿಲ್ಲಲಾರೆನೇ 4 ಮೊದಲೆನ್ನ ಬಿನ್ನಹವ ಹೋಗಿ ನೀನು ಹೇಳಮ್ಮಾ 5 ಮೊದಲೆನ್ನ ಕೈಯ್ಯಾ ತಾ ಹಿಡುವರೇ| ತದನಂತರದಿ ತಪ್ಪ ನೋಡುವರೇ 6 ಆರಿಸಿಬ್ಯಾಡೆಂದು ಹೇಳಿ ಕುಂದೆನ್ನಾ| ಕರೆತಾರೆ ಮಹಿಪತಿ ಸುತ ಜೀವನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡಬಾರದೇ ಸಂಗಾ | ಸಂತರ | ಮಾಡಬಾರದೇ ಸಂಗ | ಕೂಡಿ ಶ್ರವಣವ ಮಾಡಲು ಮನದೊಳು | ಮಾಡಿಬಹುನು ಶ್ರೀರಂಗಾ ಪ ದೇಶ ತಿರುಗುವದ್ಯಾಕ | ಕಾಸಿ ಆರಿದ ಹಾಲವು ಇದರಿಡೇ | ಆ ಶಿವಧ್ಯಾನವು ಬೇಕ 1 ನಾನಾ ಸಾಧನದಿಂದಾ | ಬಾಹು | ದೇನೆಲೋ ಮತಿಮಂದಾ | ಮನಿಯೊಳಗಿನ ಗಿಡ ಸಂಜೀವನಾಗಿರೆ | ಕಾನನ ತಿರುಗುವದೇ ಅಂಧಾ 2 ಲೋಹ ಪರುಷವ ಬಿಟ್ಟು | ಕಾಷ್ಟದ ಲಾಹುದೇ ಚಿನ್ನದ ಗಂಟು | ಮಹಿಪತಿ ನಂದನು ಸಾರಿದ ಸ್ವಹಿತಕ | ಮಹಾನುಭಾವದಾ ನಿಜಗುಟ್ಟು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡಿದರಿಲ್ಲವೋ ಪ ಆಸೆ ಮಾಡಿದರಿಲ್ಲ ದೇಶ ತಿರುಗಿದರಿಲ್ಲ ಘಾಸಿ ಮಾಡಿದರಿಲ್ಲ 1 ಮೊಟ್ಟೆಯನು ಹೊತ್ತರಿಲ್ಲ ಕಷ್ಟ ಮಾಡಿದರಿಲ್ಲ ಘಟ್ಟ ಬೆಟ್ಟವ ಹತ್ತಿ ಕುಟ್ಟಿ ಕೊಂಡರು ಇಲ್ಲ 2 ಟೊಂಕ ಕಟ್ಟಿದರಿಲ್ಲ ಲಂಕೆಗೆ ಹೋದರೂ ಇಲ್ಲ ಬೆಂಕಿ ಬಿಸಿಲೊಳು ತಿರುಗಿ ಮಂಕು ಮರುಳಾದರಿಲ್ಲ 3 ಪರ ಊರಿಗೆ ಹೋದರಿಲ್ಲ ಆರಿಗ್ಹೇಳಿದರಿಲ್ಲವಾರಸೇರಿದರಿಲ್ಲ 4 ವಾತಸುತನ ಕೋಣೆ ಲಕ್ಷ್ಮೀಶನು ಆತ ಕೊಟ್ಟರೆ ಉಂಟು ಆತ ಕೊಡದರಿಲ್ಲ 5
--------------
ಕವಿ ಪರಮದೇವದಾಸರು
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಮೀರಲುಬಹುದೆ ದೈವ ಸಂಕಲ್ಪವ ಪ ಮಾರಮಣನ ಘನ ಮನಕೆ ಬಂದುದನು ನಿ ವಾರಿಸಿ ನಡೆಯಲಾ ಆರಿಗೆ ಸಾಧ್ಯವು ಅ.ಪ. ಪುತ್ರರÀ ಬಯಸಲು ಮತ್ತೆ ವಂದ್ಯಳು ಸತಿ ವಿತ್ತ ಬಯಸೆ ಶುಕ್ಲ ವೃತ್ತಿಯೆ ಗತಿಯು 1 ಆಲಯದೊಳು ಜನನ ಆಗಬೇಕೆಂದರೆ ಕಾಲನಾಮಕನಿಚ್ಛೆ ಅನ್ಯತ್ರವಿಹುದು 2 ಜನನ ಮರಣಗಳು ಜಗದೀಶನಾಧೀನ ವನಜನಯನ ಶ್ರೀ ಕರಿಗಿರೀಶನ ಚಿತ್ತ 3
--------------
ವರಾವಾಣಿರಾಮರಾಯದಾಸರು
ಯಾರಿಗೆ ದೂರುವೆನು ವೆಂಕಟರಾಯ ಚಾರದ ಮಹಿಮೆಯನು ಪ ಈರಾರು ಸ್ಥಳವಲ್ಲಿ ಮೂರಾರು ಸೇರಿಸಿ ಹೋರಾಟವನಿತ್ತು ಮಾರಿದೆಯೆನ್ನನು ಅ.ಪ ತೇಜವುಳ್ಳವನೊಬ್ಬನು ಐದನೆಯಲ್ಲಿ ಮೋಜಾಗಿ ಒಳಹೊಕ್ಕನು ಹೂಜಿ ತುಂಬಿದ್ದುದ ಸೋಜಿಗದೊಳು ಕದ್ದು ಪಾಜಿ ಮಾಡಿದನೆನ್ನ ಮೂಜಗದೊಡೆಯ 1 ಸೀತವಾದವನೊಬ್ಬನು ಅಷ್ಟಮದದಲ್ಲಿ ಕಾತುರದೊಳು ಬಂದನು ಘಾತಕತನ ಮಾಡಿ ಭೀತಿಗಳನು ತೋರಿ ದಾತ 2 ಮೂರನೆಯವನೊಬ್ಬನು ಏಳನೆಯಲ್ಲಿ ಸೇರಿಯೆ ಕಳುತಿದ್ದನು ಏರಿ ಬಂದುದನೆಲ್ಲ ಆರಿಸಿ ಮಾರಿಸಿ ಸೂರೆಗೊಂಡನು ಎನ್ನ ವಾರಿಜನಾಭ 3 ಅತ್ರಿಯ ಮೊಮ್ಮಗನು ನಾಲ್ಕನೆಯಲ್ಲಿ ಶತ್ರುವಾಗಿಯೆ ನಿಂತನು ಗೋತ್ರದಿ ಕಲಹವ ಬೆಳಸಿಯೆಯಿದ್ದಂಥ ಪಾತ್ರವÀ ತೀರಿಸಿ ಗಾತ್ರವ ಕೆಡಸಿದ 4 ಸುರಗುರುವೆಂಬುವನು ಮೂರನೆಯಲ್ಲಿ ಸ್ಥಿರವಾಗಿ ನಿಂತಿಹನು ಗುರುಗಳ ಮುಖದಿಂದ ಕರಕರೆ ಹತ್ತಿಸಿ- ದರು ಪಾಡಿ ಹರಿಯನ್ನು ತಿರುಕನಾದೆನು ನಾನು 5 ಆರನೆ ಮನೆಯೊಳಗೆ ದೈತ್ಯರ ಆ- ಚಾರಿಯನು ನಿಂತಿಹನು ಹಾರುಮಾತುಗಳೇಕೆ ತೂರಿದನೆಲ್ಲವ ಪಾರಾದೆನು ನಾನು ವಾರಿಜನೇತ್ರ 6 ಆದಿತ್ಯ ಪುತ್ರನಾದ ಶನೈಶ್ವರ ಬಾಧಿಪ ಮನೆಗಳಾರು ದ್ವಾದಶ ಆದಿಯು ದ್ವಿತೀಯ ಪಂಚಮದಲ್ಲಿ ವೇದಗಳೆಲ್ಲವು ಏಳುಯೆಂಟಿರಲಿ 7 ನಾಡನಾಳುವ ರಾಯರ ಕೆಡಿಸಿ ಮುಂದೆ ಕಾಡಿಗೆ ಸೇರಿಸಿದ ಈಡಿಲ್ಲ ಈತಗೆ ಜೋಡಿಲ್ಲ ಗ್ರಹರೊಳು ಪಾಡೆಲ್ಲ ಕೆಡಿಸಿದ ರೂಢಿಗೆ ಒಡೆಯ 8 ವಾರಿಧಿ ಮಥನದಲಿ ಸುಧೆಯನ್ನುಂಡು ಸೇರಿದ ಗೃಹರೊಳಗೆ ಮೀರಿದರಿಬ್ಬರ ಪಾರುಪತ್ಯಗಳನ್ನು ಮಾರ ಸನ್ನಿಭನೆ 9 ಸಂಧಿ ಸಂಧಿಯಲಿವರು ಬಂದೆನ್ನನು ದಂದುಗ ಬಡಿಸುವರು ಇಂದ್ರಾದಿ ದೇವರಿಗಳವಲ್ಲ ಇವರೊಳು ಹಿಂದು ಮುಂದರಿಯೆನು ಬಂದ ಬವರವನ್ನು 10 ಶುಭದಲ್ಲಿ ಶುಭವಿತ್ತರು ವೆಂಕಟರಾಯ ಶುಭ ತೋರಿಸೊ ಅಭಯವನಿಪ್ಪಂಥ ವರಾಹತಿಮ್ಮಪ್ಪನೆ ಪ್ರಭುವೆಂದು ನೀ ಹೇಳಿ ವಿಭವಗಳೆನಗೀಯೊ 11
--------------
ವರಹತಿಮ್ಮಪ್ಪ
ರಾಮನ ನೋಡಿರೋ ನಮ್ಮ ಸೀತಾರಾಮನ ನೋಡಿರೋ ಪ ರಾಮನನೋಡುತ ಪ್ರೇಮವ ಸುರಿಸುತ ನಾಮವ ನುಡಿಯುತ ನೇಮದಿ ಬೇಡುತ ಅ.ಪ ಅಜಭವಾದಿಗಳರಸನೀತಾ ಮತ್ತೆ ನಿಜಭಕುತರಿಗೆ ಮುಕ್ತಿಪ್ರದಾತ ತ್ಯಜಿಸಿ ದುಷ್ಟರಸಂಗ ಭಜಿಸಿ ಶಿಷ್ಯರ ಸಂಗ ಭುಜಗಭವವೆಂದರಿತು ನಿಜಸುಖಮೆಲ್ಲಲು 1 ಪಾದ್ಯ ಮತ್ತೆ ನಿತ್ಯಾನಿತ್ಯ ಜಗಸೃಜಿಪ ದೇವದೇವೇಶ ಮುಕ್ತಾಮುಕ್ತಾಶ್ರಯ ಸತ್ಯ ಪ್ರಾಣನ ಹೃಸ್ಥ ಉತ್ತಮೋತ್ತಮನೆಂದು ಎತ್ತಿಕೈಗಳ ಮುಗಿದು 2 ಭಕ್ತಿಯಿಂದಲಿ ನೋಡೆ ಸರ್ವಾಘಹರವೋ ಮತ್ತೆಪಾಡಲು ಕಾಮಿತ ಕರಗತವೊ ಹಸ್ತಿವರದನ ನೋಡೆ ಮತ್ತರಿಗೆ ಸಾಧ್ಯವೆ ವತ್ತುತ ಗೃಹಕೃತ್ಯ ಬೇಗ ಉತ್ತಮರಲ್ಲಿ 3 ಸುಲಭವಲ್ಲವೊ ಇಂಥಾ ಸಮಯ ಘಳಿಸಿ ನೋಡೀದವನೆ ಕೃತಾರ್ಥ ನಿತ್ಯ ಸಲಹುತ್ತಿರುವಂಥ ಅಲವ ಮಹಿಮಾರ್ಣವ ಲಲನೆ ಲಕ್ಷ್ಮಿಯ ನಾಳ್ವ 4 ಸರ್ವನಾಮಕ ನಿವನೂ ಮತ್ತೆ ಸರ್ವಪ್ರೇರಕ ಬಲಖ್ಯಾತ ನಿಹನೂ ಸರ್ವ ಸರ್ವಾಧಾರ ಸರ್ವೇಶ ಶಾಶ್ವತ ಸರ್ವಗುಣಗಣ ಪೂರ್ಣ ಸರ್ವವ್ಯಾಪ್ತನಾದ 5 ಆರಿಲ್ಲ ಸಮವಧಿಕ ಇವಗೇ ಮತ್ತೆ ಆರು ಕಾಣರು ನೆಲೆಯ ಸಾಕಲ್ಯ ಸತ್ಯ ಸಾರವಿಲ್ಲದ ಜಗದಿ ಸಾರನೊಬ್ಬನೆ ಇವನು ತೊರು ಪಾದಗಳೆಂದು ಸಾರಿಬೀಳುತ ಅಡ್ಡ 6 ಶರಣೆಂದ ವಿಭೀಷಣಗೆ ಪಟ್ಟ ಕಟ್ಟಿದನೂ ಕರುಣದಿಂದಲಿ ಶಬರಿಯ ಪೊರೆದವನು ದುರುಳ ಪಾಪಿಯ ದೊಡ್ಡ ಕವಿಯ ಮಾಡಿದ ಮಹಿಮ ಕರುಣ ಬೇಕಾದವರು 7
--------------
ಕೃಷ್ಣವಿಠಲದಾಸರು
ಲಕ್ಷ್ಮೀದೇವಿಯ ಪ್ರಾರ್ಥನೆ ಶ್ರೀನಿವಾಸನ ಕರುಣಾನು ಸಂಸರಣಿ ಜ್ಞಾನ ಭಕ್ತಿಗಳನ್ನು ಪಾಲಿಸಂಭರಣಿ ಪ. ಅಜಭವಾದಿಗಳಿಗೆ ನಿಜಪದದಾಯಿನಿ ವೃಜಿನ ಸಮೂಹ ನಿವಾರಿಣಿ ಕುಜನ ಕುಠಾರಿಣಿ ಕುಂಜರ ಗಮನೆ ಪಾಲು ದಧಿವಾಸನ ಕೂಡಿ ಸದನದಿ ನೆಲೆಗೊಳ್ಳೆ 1 ಆರಿಗೆ ನಿನ್ನ ಕರುಣಾರಸ ದೊರೆವದೊ ನೀರಜಾಲಯೆ ನಿನ್ನ ಸೇರಿಕೊಂಡಿಹ ಎನ್ನ ವೈರಿ ಜನರು ಬೇಗ ಗಾರಾಗದುಳಿವರೆ 2 ನೀನೊಲಿಯಲೂ ಸರ್ವ ಮಾನವರೊಳಗತಿ ಮಾನ ಮಹತ್ವಾದಿ ಸದ್ಗುಣವೂ ತಾನಾಗಿ ಬರುವವಿಂನೇನೆಂದು ನಿನ್ನ ಮಹಿ- ಮಾನು ವರ್ಣನೆ ಮಾಳ್ಪೆ ದೀನ ದಯಾಕಲೆ 3 ಮಂದಿರದೊಳಗೆ ನೀ ನಿಂದು ನಗುತ ನಲಿ ವಂದ ನೋಡುತ ಮಿತ್ರ ಬಂಧುಗಳು ಮಂದರಧರ ತಾನೆ ನಿಂದು ರಕ್ಷಿಸನೆಂದಾ ನಂದ ಪೂರಿತ ಮನದಿಂದ ಸೇರಿರುವರು 4 ಸರಸಿಜನಾಭ ಶ್ರೀಹರಿಯು ನಿನ್ನನ್ನೆ ಮುಂ ದಿರಿಸಿ ಚತುರ್ವಿಧ ಪುರುಷಾರ್ಥವಾ ಕರುಣಿಪೆನೆಂದು ಕಂಠಸರದ ಮಧ್ಯೂರದಲಿ ಧರಿಸಿ ಶೋಭಿಪ ಶೇಷಗಿರಿವರ ಶಿಖರದಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಲೋಕನೀತಿ ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ ವ್ಯರ್ಥವಲ್ಲವೆ ಜನ್ಮವು ಪ. ಅತ್ತತ್ತ ಹೋಗೆಂಬ ನುಡಿ ಕೇಳಿ ಜಗದೊಳಗೆ ಮತ್ತೆ ಇರಬಹುದೆ ಹರಿಯೆ ಅ.ಪ. ಆರಿಗಾರಾಗುವರೊ ಪ್ರಾರಬ್ಧ ನೀಗದಲೆ ಶೌರಿ ದಾರಿಯ ತೋರನು ಈ ರೀತಿಯರಿತು ಹೇ ದುರ್ಮನವೆ ನರಹರಿಯ ಆರಾಧನೆಯನೆ ಮಾಡೊ 1 ಏಕಾದಶ್ರೇಂದ್ರಿಯವ ಶ್ರೀ ಕಳತ್ರನೊಳಿಟ್ಟು ಏಕ ಮನದಲ್ಲಿ ಭಜಿಸು ಏಕೆ ತಲ್ಲಣಿಸುವೆ ಶೋಕಕ್ಕೆ ಒಳಗಾಗಿ ನೂಕು ಭವತಾಪ ಜಗದಿ 2 ಗೋಪಾಲಕೃಷ್ಣವಿಠ್ಠಲನೆ ಗತಿ ಎಂತೆಂದು ಈ ಪರಿಯಿಂದ ಭಜಿಸು ಶ್ರೀ ಪರಮ ಕಾರುಣ್ಯ ಗುರುಗಳಂತರ್ಯಾಮಿ ತಾಪ ಹರಿಸುವನು ಭವದಿ 3
--------------
ಅಂಬಾಬಾಯಿ
ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆಪ ಹಿಂದೆ ಮುಂದೆ ಎಂದೆಂದಿಗು ಎನ್ನಯ ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ ಅಪರಾಧಿಯು ಎಂದು ತಿಳಿದರು ಗುಪಿತದಿ ಸಲಹುವದು ಅಪಮೃತ್ಯುವು ಪರಿಹಾರಕೆ ನಿಮ್ಮಯ ಉಪದೇಶದ ಮಂತ್ರವೆ ಪರಮೌಷಧಿ 1 ಕಾಯಕ್ಲೇಶದಿಂದ ಮನಸಿನ ಹೇಯ ವ್ಯಥೆಗಳಿಂದ ಕಾಯಜ ಪಿತನಂಘ್ರಿಯ ಸೇವಿಸದಲೆ ಆಯಾಸದಿ ಮನ ಕಳವಳಗೊಳುತಿದೆ 2 ಆರು ಮಂದಿ ಇಹರು ಮಾಯಾ ಪಾಶಾದಿ ಬಂಧಕ ಪಡಿಸುತ ಹಾಯಲೀಸರೊ ಹರಿ ಅಂಘ್ರಿಗಳಲಿ 3 ಆರಿಗುಸುರಲೇನು ಮಾಡಿದ ಕಾಂiÀರ್iವು ಮುಂದಿನ್ನೂ ಆನಂದಮಯ ವಿಠ್ಠಲದಾಸರ ಕೂಡಿ ಆದರುಸುವುದಿನ್ನೂ ಮುನ್ನೂ4 ಕಮಲನಾಭ ವಿಠ್ಠಲನೊಲುಮೆಯು ಸುಲಭದಿ ಪಡೆವುದಕೆ ಅನುದಿನ ಪ್ರಾರ್ಥಿಸುತ5
--------------
ನಿಡಗುರುಕಿ ಜೀವೂಬಾಯಿ
ವೆಂಕಟೇಶ ನಿನ್ನ ನಂಬಿದೆ ಎನ್ನ ಸಂಕಟವನು ಪರಿಹರಿಸಯ್ಯ ನೀನು ಪ ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು ದಡವ ಸೇರಿಸೊ ಎನ್ನ ಒಡೆಯ ನೀ ಕಡೆಗು 1 ಅಣುರೇಣು ತೃಣಕಾಷ್ಠದೊಳಗಿದ್ದು ನೀನು ಕ್ಷಣ ಕ್ಷಣ ಆರೈವ ಗುಣ ನಿನ್ನದೇನು ಪ್ರಣವ ರೂಪನೇ ನಿನ್ನ ಚರಣಕ್ಕೆ ನಾನು ಮಣಿವೆನು ಮನ್ನಿಸು ವರ ಕಾಮಧೇನು 2 ನಾರಾಯಣ ನರಹರಿ ಜಗನ್ನಾಥ ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ ಸಾರಿದವರ ಸಂಸಾರದ ದಾತ ಮಾರಿದ ಮನವಕೊಂಬರೆ ನೀನೆ ಪ್ರೀತ 3 ಉತ್ತಮವಾದ ಶ್ರೀಶೈಲ ನಿವಾಸ ಭಕ್ತರ ಸಲಹುವ ಬಿರುದುಳ್ಳ ಈಶ ಚಿತ್ತವು ತಿಳಿದೆನ್ನ ಕಾಯೊ ಸರ್ವೇಶ ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ 4 ವರಾಹತಿಮ್ಮಪ್ಪನು ಒಲಿದೆನ್ನ ಕರೆದು ಆರಿದ ಬÁಯೊಳು ಅಮೃತವನೆರೆದು ದೂರವಾಗದೆ ಅಡಿಗಡಿಗೆನ್ನ ಹೊರೆದು ಏರುಗಂಡಪರಾಧ ಎಲ್ಲವ ಮರೆದು 5
--------------
ವರಹತಿಮ್ಮಪ್ಪ
ಶೇಷ ಗೀರೀಶ ವಿಠಲ | ಪೋಷಿಸೊ ಇವಳಾ ಪ ಕಾಸು ವೀಸಕ್ಕೆ ಮನ | ಕ್ಲೇಶಗೊಳಿಸದಂತೆ ಅ.ಪ. ಪಥ ಮಾರ್ಗಕ್ಕೆ | ಸದ್ಗುರು ಕಟಾಕ್ಷವೆಉತ್ತಮೋತ್ತಮ ಹಾದಿ | ಎಂದು ಪೇಳಿದರೂ 1 ಹರಿಗುರೂ ಸದ್ಭಕ್ತಿ | ತರತಮ ಜ್ಞಾನವನುಕರುಣಿಸೀ ಕಾಪಾಡೊ | ಕರಿವರದ ಹರಿಯೇಕರುಣಾಳು ನಿನ್ಹೊರತು | ಆರಿಯೆ ನಾ ಅನ್ಯರನುಮರುತಾಂತರಾತ್ಮಕನೆ | ಆನಂದ ನಿಲಯಾ2 ಎರಡು ಮೂರರಿಗಳನು | ಪರಿಹರಿಸಿ ವೈರಾಗ್ಯವರಜ್ಞಾನ ಸಂಪದವ | ಕರುಣಿಸುತ ಹರಿಯೇಕರಪಿಡಿದು ಉದ್ಧರಿಸೊ | ಶರಣ ಜನ ಕಾರುಣ್ಯಮರುತಾಂತರಾತ್ಮ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಶ್ರೀ ಮದ್ಭಾಗವತ ಚಿಂತಯಾಮಿ | ಶಿರಿಕೃಷ್ಣ | ಸತತ ಸುಗುಣೋ | ಪೇತಂ ಪ ಸಂತತ ಭಕುತರ ಕೃಪಾ | ಪಾಂಗ ವೀಕ್ಷಾ ಹಸಿತಂಅ.ಪ. ಚಿಟ್ಟೆಸ್ವರ - ಸರಿ ಗಸರೀ | ಮಪ ದಪ ಧಾ | ರಿಸ ನಿಧ ನಿಧ | ಪಮ ಗರಿ ಸಧ |ದ್ರುತ :- ಸರಿಮಾ ಗರಿ | ಮಪ ದಾಸಮ || ಪದ ಸಾ ನಿಧ | ನಿಧ ಪಮಪಧ |ಗರಿ ಸಧ | ರಿಸ ಧಾ ಸ | ಧಾ ಗರಿ ನಿಧಮ ಗರಿಸಧ || ದುರುಳ ಬಂಧಂ | ವಸುಮತಿಯೆಂ, ಗಗನಖಾರಿ, ಕಂಸಗರ್ವಹರ, ದುರ್ಗಾಂಬಂ 1 ವಿಗತಾ ಅಸು, ಪಾಲುಣಿಸಿದ, ರಕ್ಕಸಿ, ಪೂಥಣಿಯುಮಿಗೆ ಊರ್ವಶಿ ಸುರೆ ಶಾಪಹರಂ | ಶಕಟಾಖ್ಯಾಸುರವಿಗಡ ಪ್ರಾಣಹರ | ಶೀಲಂ ತೃಣ ವತ್ಸಾಹರ | ಬಕ ಧುನಿ ಚಮುಮಿಗಿಲಾದವರ ಅಸುಹರಣಂ | ಮಣಿಗೊರಳರ ಶಾಪಹರಂ |ಮದ ವಿಭಂಜನ ಕಾಳೀಯನ | ವನ್ಹಿಯ ಪಾನಂ ಚರಿತಂ 2 ಚಿಟ್ಟೆಸ್ವರ - ನಿಸ ಗಾ ಮಪ | ಗಮ ಪಾ ನಿಸ | ರಿ ಸ ರಿ ನಿ ಸಸ | ಧಪ ಗಾರಿಸ |ನೀ ಸಗ ಮಪ ಗಾ ಮಪನಿಸ | ಪಾನಿಸ ಗರಿಸನಿ ಧ ಪನಿಸ |ಗರಿಸಧ, ಆರಿಸ ಧಾ, ಸ || ಧಾ, ಗರಿ ನಿಧಮ ಗರಿಸಧ || ರಾಗ ಮೋಹನ : ಹನನ ಅಸುರ | ವಿಷತರು ರೂಪಿ | ಘನ ಧೇನುಕ ಭಂಜನಹನನ ಪ್ರಲಂಬನು ಬಲ ನಿಂ | ಪುನರಪಿ ವನ್ಹಿಯ ಪಾನಂಮುನಿ ಪತ್ನ್ಯಾನೀತಾನ್ನ | ಸುಭೋಜನ ಶೀಲಂ |ತೃಣಸಮ ಗಿರಿಧರ ಶಂಖನ | ಮಣಿಹರ ಅರಿಷ್ಠಾ ಅಸುರ ಹರ 3 ಗಾ ಅಪ ಗರಿ, ಗರಿ ಸಧ ಸರಿ | ಗಾಪ ಧಸ, ಧಪ ಗರಿ ಸರಿ |ಗಪ ಗಗ ರಿಸ, ರಿಗ ರಿರಿಸ ಧ | ಸರಿಗರಿ ಗಪಗಪ ಧಪ ಧಸ |ಗರಿಸಧ, ಆರಿಸ, ಧಾ ಸ || ಧಾ, ಗರಿ ನಿಧಮ ಗರಿಸಧ || ಕೇಶಿ ಅಸುರನ ಅಂತೆ ವ್ಯೋಮಾಸುರ ಹನನದಕ್ಲೇಶ ವಾರ್ತೆಯ ಕೇಳಿ ಕಂಸನು ದಾನಪತಿಯನುಯಶೋದೆ ಕಂದನ ಕರೆಯೆ ಅಜ್ಞಾಪಿಸಿದ ಬಿಲ್ಲು ಹಬ್ಬಕೆಲೇಸೆನುತ ಬರವಾಯ್ತು ಸಖ ಅಕ್ರೂರ ಗೋಕುಲಕೆ 4 ಚಿಟ್ಟೆಸ್ವರ - ಅರಿ ಗಮ | ಪಾಧಪಸ | ನಿಧಪಮಗರಿಗಮಪ ಮಾಪ, ಗಾಮರೀಗ, ಸಾರಿಗಾ ಮ, ಪದ ಪ, ಸಾನಿ ||ಗರಿ ಸಧಾ, ರಿ ಸಧಾ ಸದಾ ಗರಿ ನಿಧಮ, ಗರಿ ಸಧ || ಪತಿ | ಸ್ನಾನದಲಿ ಹರಿ ವೀಕ್ಷಣಂಮನ ಕಲಕಿ ಹರಿ ಮಹಿಮೆ ಆಶ್ಚರ್ಯದಿ ಮಧುರೆ ಸೇರಿವನದಿ ಪರಿವಾರ ನಿಲೆ ಬಲ ಸಹಿತ ಪುರಖೊರಟ 5 ಪಾ ಮಗರಿ | ಸಾ ನಿಧ ಸರಿ | ಮಾ ಗರಿಸ | ರಿಮ ಪಮನಿಧ |ಸಾ ಸನಿ ಧಪ ಪಾ ಮಗರಿಸ | ನಿಧ ಸರಿ ಮಪನಿಧ ಮಪಧಸ |ಗರಿ ಸಧ ಆರಿ ಸ ಧಾ ಸ || ಧಾ ಗರಿ ನಿಧಮ, ಗರಿಸಧ || ಭಾರ ಕಳೆದ ಗುರು ಗೋವಿಂದ ವಿಠಲ 6 ಚಿಟ್ಟೆಸ್ವರ ರೀ, ಮರಿ ಮಪ | ನೀ ಪಮ ಪನಿ | ಸಾರಿಸನಿ | ಪಪ ಮಮ ರಿಸ |ರೀ ಪಮ ರಿಸ ನಿಸ ರಿಮಪಾ || ರಾಗ :ಪೂರ್ವಿಕಲ್ಯಾಣಿ :ಧಪಸಾ ನಿಧಪಮ | ಪಮಗರಿ ರಾಗ :ಮೋಹನ :ಸರಿಮಾ ಗರಿ ಸರಿಗಾ | ದಪಗರಿ ಸರಿ ಗಪದಸರಾಗ :ಮುಖಾರಿ :ರೀ ಸದಾ ಪ ದಪ ಗಾರಿಸ | ರಾಗ :ನಾಟಿ ಕುರಂಜಿ :ನಿಸ ಮಗ ಮನಿ ಧನಿ ಪದನಿಸ | ರಾಗ :ಸಾವೇರಿ :ಗರಿ ಸಧಾ ರಿಸ ಧಾ ಸ || ಧಾ ಗರಿ ನಿದಮ ಗರಿ ಸಧ
--------------
ಗುರುಗೋವಿಂದವಿಠಲರು
ಶ್ರೀಹರಿಸ್ತುತಿ ಅಕ್ಕಾ ನೋಡೆ ಚಿಕ್ಕ ಕೃಷ್ಣನೂ ಪೊಕ್ಕಿಹ ರಿಂದಾವನಕೀಗ ಬಾ ಪ. ಸಿಕ್ಕನೆ ಪೋಗದಿರೆ ಲಕ್ಕುಮಿಯರಸ ದಕ್ಕಿಸಿಕೊಳ್ಳೆವೆ ಸಿಕ್ಕದೆ ಬಿಟ್ಟಾರೆ ಅ.ಪ. ಸದ್ದು ಮಾಡದೆ ಬನ್ನಿ ಇಲ್ಲಿದ್ದವರೆಲ್ಲ ಮುದ್ದು ಶ್ರೀ ಕೃಷ್ಣನ ಬಳಸುವ ಬಾರೆ ವಾಹನ ಎದ್ದು ಅಭಯನೀವ ಶುದ್ಧ ಕೋಲಾಟಕೆ ಸಿದ್ಧನಾಗುವನೆ 1 ನವನೀತ ಚೋರನ ರವಿಶತಕೋಟಿ ಕಿರೀಟ ಪ್ರಕಾಶ ಜವದಿ ಪೊಳೆವ ಗೋವಲಯಪಾಲನ ಅವನೀಧವನೊಲಿಸಲು ಪೋಗುವ ಬಾ 2 ಆರಿಗೂ ಸಿಗನೆ ನಾರದ ವಂದ್ಯನೆ ತಾರಕೆಗಳ ಮಧ್ಯ ಚಂದ್ರನಂತಿಹನೆ ನಾರಾಯಣ ಶ್ರೀ ಶ್ರೀನಿವಾಸನ ಸೇರಿ ಸುಖವ ಸುರಿಸಲು ತವಕದಿ 3
--------------
ಸರಸ್ವತಿ ಬಾಯಿ