ಒಟ್ಟು 2139 ಕಡೆಗಳಲ್ಲಿ , 112 ದಾಸರು , 1669 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಗುರುವರ್ಯ ಜಯಾರ್ಯ ಪ ಶ್ರಿಮದಾನಂದತೀರ್ಥರ ಕಂದ ಶ್ರೀಮದಕ್ಷೋಭ್ಯರ ಕಂದ ಯತೀಂದ್ರ 1 ಪೂರ್ಣಬೋಧ ತೀರ್ಥಾರ್ಣ ವಿಹಾರಿ ಸ್ವರ್ಣ ಪಾತ್ರ ಸುಧಾಕಾರಿ ಉದಾರಿ2 ಶ್ರೀ ನರಹರಿ ಧ್ಯಾನವಿಚಾರಿ ಮೌನಿ ಗುಣಗಣಧಾರಿ ಉದ್ಧಾರಿ3
--------------
ಪ್ರದ್ಯುಮ್ನತೀರ್ಥರು
ಪಾಲಿಸು ಪರಮಾತ್ಮನೆ ಪಾವನ ಗುಣ- ಶೀಲ ಸದ್ಗುಣಧಾಮನೆ ಪ ಶ್ರೀಲಕುಮಿಯ ಪ್ರಿಯ ಶ್ರೀಶಸರ್ವೋತ್ತಮ ವಾಸವವಂದಿತ ವಾಸುದೇವನೆ ಹರಿ ಅ.ಪ ಕೇಶವ ನಾರಾಯಣ ಮಾಧವ ಗೋವಿಂದ ವಿಷ್ಣುವೆ ನಮಿಪೆ ಮಧುಸೂದನ ತ್ರಿವಿಕ್ರಮ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭನೆ ಪೊರೆ ದಾರಿ ಕಾಣೆ ದಾಮೋದರ ಸಂ_ ವಾಸುದೇವ ಪ್ರದ್ಯುಮ್ನನನಿ- ರುದ್ಧ ಪುರುಷೋತ್ತಮ ಅಧೋಕ್ಷಜ ನಾರಾಸಿಂಹ ಅಚ್ಚುತ ಜನಾರ್ದನ ಉ- ಪೇಂದ್ರ ಹರಿ ಶ್ರೀ ಕೃಷ್ಣ ಶೌರಿ1 ವಾರಿ ವಿಹಾರದಲಿ ಬೆನ್ನಿಲಿ ಗಿರಿ ಭಾರವನ್ನೆ ತಾಳಿ ಕೋರೆ ತೋರುತ ಕರುಳ್ಹಾರವ ಮಾಡಿದ ಮೂರಡಿ ಭೂಮಿಯ ಬೇಡಿ ಭೂಪಾಲನ ಕಾಡಿ ಕೆಡಹುತ ಕೂಡಿ ಕಪಿಗಳ ಬೇಡಿ ಪಾಲ್ಮೊಸರ್ಬೆಣ್ಣೆ ಬುದ್ಧನೀ- ನಾಗಿ ಖಡ್ಗವಧರಿಸಿ ಕುದುರೆಯ- ನೇರಿ ಮೆರೆಯುವ ಶ್ರೀ ರಮಾಪತೆ 2 ಶಾಂತೀಶ ಅನಿರುದ್ಧನೆ ಶರಣೆಂಬೆ ನಿನ್ನ ಕೃತಿಪತಿ ಪ್ರದ್ಯುಮ್ನನೆ ಜಗದೀಶ ಜಯಾಪತಿ ಜಯ ಸಂಕರ್ಷಣ ದೇವ ನಮಿಪೆ ಮಾಯಾಪತಿ ವಾಸುದೇವನೆ ನಿನ್ನ ಪಂಕಜ ತೋರು ಲಕ್ಷ್ಮೀ- ರಮಣ ನಾರಾಯಣ ನಮೋ ಗರಡು ಗಮನನೆ ಕಮಲನಾಭ ವಿ-ಠ್ಠಲನೆ ಶ್ರೀಹರಿ ಪರಮ ಕರುಣಿಯೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು
ಪಾಲಿಸುಗಣನಾಯಕಾ ವಿನಾಯಕ ಪ ಶೂಲಪಾಶಾಂಕುಶಧೃತ ವರದಾಯಕ ಅ.ಪ ಲಂಬೋದರಾಂಕಿತ ಜಂಭಾರಿವಂದಿತ ಕುಂಭೋದ್ಭವಾನತ ಅಂಬಾಸುತ ಅಂಭೋಜ ಸಖನುತ ಗಂಭೀರ ಗುಣಯುತ ಸಾರ ಸಂತೋಷಿತ 1 ಆತಂಕಪರಿಹಾರ ಮಾತಂಗಮುಖವೀರ ಶೀತಾಂಶುಶೃಂಗಾರ ಶ್ವೇತಾಂಬರ ಭೂತಾಳಿಪರಿವಾರ ಖ್ಯಾತಾವಿಘ್ನೇಶ್ವರ ದಾತಾರ ಮಾಂಗಿರಿನಾಥಾ ಕೃಪಾಧರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ
ಪಾಲಿಸೆನ್ನ ಫಾಲಲೋಚನಾ ನಂದೀಶವಾಹನಾ ಪ ಸದನ ಅ.ಪ ನಾಗಭೂಷಣ ದನುಜಹರಣ ದಿವಿಜಶರಣ ಭೂತಗಣ ಭೋಗಿಶಯನ ಸಿರಿಯ ರಮಣ ವಿಮಲಚರಣ ಸೇವೆಯಿತ್ತು 1 ಮದನವೈರಿ ದುರಿತಹಾರಿ ಶಶಿಜಟಾಜೂಟಧಾರಿ ಮ ಮ ದೇವ ಮಾಂಗಿರಿರಂಗ ಚರಣಯುಗವ ತೋರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆನ್ನ ಶ್ರೀಲೋಲ ಕೃಪಾಳು ಪ ಬಾಲಕನುಕ್ತಿಯ ಲಾಲಿಸಿ ಕೇಳೀ ಅ.ಪ ಕಾರಾಗಾರ ಶರೀರದಾಯಗಳ ದಾರಾ[ಧಿ]ಪತ್ಯದ ದಾರಿಯನಿ[ತು]ಗಳ1 ಆರುಮಂದಿ ಬಲುಶೂರರು ಖಳರು ಚೋರರು ಚಿತ್ತವ ಹಾರಿಸುತಿಹರು 2 ತನುಸಂಬಂಧದ ಜನರರ್ಥಿಯಲಿ ಕೊನೆವರು ದುರ್ಮೃಗವನು ಪೋಲುತಲಿ 3 ತಾಪತ್ರಯ ಪರಿತಾಪದ ಬೇಗೆ ಈ ಪರಿಮೋಚನ ಶ್ರೀಪತಿ ಹೇಗೆ 4 ಕರುಣದಿ ಶ್ರೀಪುಲಗಿರಿಯೊಳಿರುವನೆ ಶರಣರಪೊರೆಯುವ ವರದ ವಿಠಲನೆ 5
--------------
ವೆಂಕಟವರದಾರ್ಯರು
ಪಾಲಿಸೆನ್ನ ಶ್ರೀಲೋಲ ಕೃಪಾಳೋ ಬಾಲಕನುಕ್ತಿಯ ಲಾಲಿಸಿ ಕೇಳೋ ಪ ಕಾರಾಗಾರ ಶರೀರದಯುಗಳ ದಾರಾಪತ್ಯದ ದಾರಿಯನಿಗಳ 1 ಚಿತ್ತವ ಹಾರಿಸುತಿಹರು 2 ಕೊನೆವರು ದುರ್ಮೃಗವನು ಪೋಲುತಲಿ 3 ತಾಪತ್ರಯ ಪರಿತಾಪದ ಬೇಗೆ | ಈ ಪರಿಮೋಚನ ಶ್ರೀಪತಿ ಹೇಗೆ 4 ಶರಣರ ಪೊರೆಯುವ ವರದವಿಠಲನೆ 5
--------------
ಸರಗೂರು ವೆಂಕಟವರದಾರ್ಯರು
ಪಾಲಿಸೆನ್ನನು ಪದ್ಮಪತ್ರ ವಿಶಾಲಲೋಚನೆ ಜಾಹ್ನವಿಶೈಲಜಾತಾಭಗಿನಿಮಂಗಳೆ ಮೂಲಮಂತ್ರ ಸ್ವರೂಪಿಣಿ ಪ ಹರನ ಜಡೆಯಿಂದಿಳಿದು ಬ್ರಹ್ಮನ ಕರದ ಪಾತ್ರೆಯೊಳ್ನೆಲೆಸಿದೆಸುರರ ಸಂರಕ್ಷಿಸಲು ಭರದಿಂ ಸ್ವರ್ಗಲೋಕವ ಸಾರಿದೆಧರೆಯ ಭಾರವ ತೊಳೆಯಲಲ್ಲಿಂ ಭರದಿ ಸುರಗಿರಿಗೈದಿದೆಹರುಷದಲಿ ಹಿಮಗಿರಿಯ ಶೃಂಗದಿ ಪರಿದು ಪಾವನ ಮಾಡಿದೆ1 ವರ ಭಗೀರಥ ತರಲು ಕಾಶಿಯ ಪುರವರದಿ ನೀ ನೆಲಸಿದೆಥರಥರದ ಪ್ರಾಕಾರ ಮಣಿಗೋಪುರದ ಸಾಲೊಳಗೊಪ್ಪಿದೆನರರು ಮಾಡಿದ ಪಾಪರಾಶಿಯ ತೊಳೆದು ಪಿತೃಗಳ ಸಲಹಿದೆಹರಿಗೊಲಿದು ಮಣಿಕರ್ಣಿಕಾಖ್ಯೆಯ ಧರಿಸಿ ಜಗದೊಳು ತೋರಿದೆ 2 ಜಾಹ್ನವಿ ನಮ್ಮನುಅರ್ತಿಯಿಂ ಸಲಹೆಂಬ ಸ್ತ್ರೀಯರ ಮೊತ್ತವನು ನಾ ಕಂಡೆನು 3 ಚಾರುಮಣಿ ಕೋಟೀರಕುಂಡಲಿ ಹಾರಮಣಿಮಯ ನೂಪುರೆವೀರಮುದ್ರಿಕೆ ಕಡಗ ಕಂಕಣದಿಂದಲೊಪ್ಪುವ ಶ್ರೀಕರೆಹಾರ ಪದಕ ಸಮೂಹ ಕಾಂಚೀದಾಮ ವೈಭವ ಭಾಸುರೆಭೂರಿ ಮರಕತ ರತ್ನಮಾಲ್ಯ ಕೇಯೂರ ಭೂಷಣ ಭಾಸ್ವರೆ 4 ಆಣಿ ಮುತ್ತಿನ ಮೂಗುತಿಯು ಕಟ್ಟಾಣಿ ಗುಂಡಿನ ಸರಗಳುಮಾಣಿಕವು ಬಿಗಿದಿರ್ದ ರಾಗಟೆ ಚೌರಿ ಪೊಸ ಬಾವಲಿಗಳುಕ್ಷೋಣಿ ಗತಿಶಯವಾದ ಮುತ್ತಿನ ಮಲಕು ಮೋಹನ ಸರಗಳು ಕಲ್ಯಾಣಿ ಗಂಗಾದೇವಿಗೆಸೆದವು ಪರಿಪರಿಯ ಭೂಷಣಗಳು 5 ಕಾಲಸರಪಣಿ ಉಂಗುರವು ಅಣಿವೆಟ್ಟು ಪಿಲ್ಲಿಯ ಸಾಲ್ಗಳುಮೇಲೆನಿಪ ವೊಡ್ಯಾಣ ಕಿಂಕಿಣಿ ಗೆಜ್ಜೆಮೊಗ್ಗೆಯ ಸರಗಳುತೋಳಬಳೆ ಭುಜಕೀರ್ತಿ ಹಿಂಬಳೆ ಚಳಕೆಮಣಿದೋರೆಗಳು (?)ಮೇಲೆ ರಂಜಿಪ ನಿಮ್ಮ ನೋಡಿ ಕೃತಾರ್ಥವಾಯ್ತೀಕಂಗಳು 6 ಜಾಹ್ನವಿ ನಿರ್ಮಲೆರಂಗದುದ್ಘತರಂಗ ಶ್ರೀಕರ ಪಾವನೀಕೃತ ಭೂತಲೆಭಂಗಿತಾಮಯಸಂಘೆ ಮಂಗಲಸೂತ್ರಯುತ ಕಂಠೋಜ್ವಲೆಮಂಗಲಾತ್ಮಿಕೆ ಮಹಿತೆ ಕರುಣಾಪಾಂಗೆ ಶರದಿಂದೂಜ್ವಲೆ 7
--------------
ಕೆಳದಿ ವೆಂಕಣ್ಣ ಕವಿ
ಪಾಲಿಸೆನ್ನನು ಶ್ರೀ ಲೋಲ ಸದ್ಗುಣ ವಿಶಾಲ ನೀಲ ಪ. ಶ್ರೀರಮಣನೆ ನಿನ್ನ ಚರಣ ಸದ್ಗುಣಗಣ ವಾರಿಧಿಗಣನೆ ನೀನೆಂದು ಸಿರಿದೇವಿಯಂದು ಪಾರವಿಲ್ಲದ ತವ ಚರಿತ್ರೆಯ ಸಾರಗಳನೀಕ್ಷಿಸಲು ನಯನಾಂ- ಪಾದ ಹತಮಾಂಸಾರಕೇಶವ 1 ಶ್ರುತಿ ತತಿಗಳನೈದಸುರನ ಕೊಂದ ದಿತಿಜಗೋಸುಗ ನಗಧರನ ಕೃಪಹಾರ ಹಣನ ದಿತಿಜಹರ ಸುರತತಿಗೆ ರಾಜ್ಯವನತಿ ವಿಲಾಸದೊಳಿತ್ತ ಭಾರ್ಗವ ಬಾಧ್ಯನೆ ಅತುಳಹಯನೆ 2 ಸುರರು ನಿನ್ನಯ ಪಾದ ನಿರ್ಮಲ ರಜೋದ್ಧಾರಕರ ಬಿನ್ನಪವ ಕೇಳ್ ಗಜ ಚರ್ಮ ವಸ್ತ್ರ ಸಮಧ್ವಜಾಸನ ನಿನ್ನ ದಾಸರ ದಾಸರೊ- ಷಣ್ಮುಖಾತ್ಮಜ ಜಯನ ಗಿರಿಗನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸೈ ಶ್ರೀ ಲೋಲನೆ ಎನ್ನ ಪ ಕಾಲ ಯಾಲ, ಶೋಭಿತ ರತ್ನಜಾಲ, ಭೂಷಿತ ಲೀಲ ಅ.ಪ ತ್ರಿಜಗ ಬಂಧು, ಪೊರೆಯೊ ದಯಾಸಿಂಧು ನುತಿಪೆನಿಂದು 1 ಹಾರ, ಭವದೂರ, ಸುಖಸಾರ, ಯದುವೀರನೆ 2 ಭವ ರ್ವೇಶ, ದೇವೇಶ ಸದಾನಂದ ಶ್ರೀನಿವಾಸ 3
--------------
ಸದಾನಂದರು
ಪಾಲಿಸೈಯ್ಯ ಇವಳಾ ಶ್ರೀ ಭೂತರಾಜರ ಹೃನ್ಮಂದಿರ ನಿಲಯ ಧವಳ ಗಂಗಾವಾಸಿ ಹಯಮುಖನ ತನಯ ವಾಗೀಶಗುರು ಅರ್ಚಕಾ ಪ ನಿತ್ಯ ನಿನ್ನಲ್ಲಿಶ್ರೀಹರಿಯು ಅನುಗಾಲ ಕೋಲಾಹಲದೆ ಮಾಳ್ಪ ಆನಂದ ಕ್ರೀಡೆಗಳ ಕಾರುಣ್ಯರೂಪದಲಿ 1 ಸತಿ ಭಾರತಿಯು ಪರುಶುಕ್ಲಳೊ ಸತತ ಧ್ವನ್ತದುರಾಗಮಾ ನೀನೆಂದು ಸಾರುತಿದೆ ಶೃತಿಯು ಶೃತಿವೇದ್ಯ ನೀನೈಯ್ಯ ಶೃತಿಯಿಂದ ನೀ ಗಮ್ಯ ಶೃತ್ಯರ್ಥರೂಪ ನೀನೆನಗೆ ಸತತಾ 2 ನಾ ಪಾಮರಕೆ ಪಾಮರನು ಎಂದೆಂದು ಮಮಸ್ವಾಮಿ ನಾನು ತುತಿಸಲಾಪೆನೆ ನಿನ್ನ ನಿರ್ದೋಷಗುಣರಾಶಿಯಾ ಗಾನಮಾಡಿ ವೈರಾಗ್ಯ ಶಕ್ತಿ ಭಕ್ತ ಯುಕ್ತಿ ರಾಘವ ಎಮಗಿಲ್ಲವೆನುತಾ ಬಾಗಿ ಬಗ್ಗಿ ಹಾರುವುದು ಪೀಠಕೆ ಸತತ ಶಿವಶೇಷ ಗುರುತಾದಿ ಸುರಕೋಲಿನಿಕರಾ 3 ಒಂದು ಅರಿಯದಾಕಂದ ಇಂದಿರೆಯು ನಂಬಿಹಳು ಗತಿದಾತನೆಂದು ಸತತ ಅಂತರಂಗದಿ ನಲಿವ ಮಮತೆ ನಾನಿನ್ನ ನಿಜ ದೂತನೆಂದು ಹೌದಾದರವಳ ಮನ ಸೆಳೆದು ನಿನ್ನಲ್ಲಿ ಶ್ರೀಕೃಷ್ಣನಲಿ ಬಿಡು ಅವಳ ವಾಜಿವದನಾರ್ಚಿಶ್ರೀವಾದಿರಾಜ 4 ಜಾಗರ ಭಾರತೀಶ 5
--------------
ಗುರುತಂದೆವರದಗೋಪಾಲವಿಠಲರು
ಪಾಲಿಸೊ ದೇವ ಮೂಲೋಕ ಕಾವ ಎಲ್ಲರೊಳ ಗೀವ ಶ್ರೀ ಲಕ್ಷುಮಿಯ ಜೀವ ಧ್ರುವ ಮುನಿಜನ ಪಾಲ ಘನಸುಖಲೋಲ ಅನಾಥರನುಕೂಲ ದೀನದಯಾಳ 1 ಕರುಣಾಸಾಗರ ಪರಮ ಉದಾರ ದುರಿತ ಸಂಹಾರ 2 ಸಿರಿಲೋಲ ಭೂಷಣ ಹರಿನಾರಾಯಣ ತರಳ ಮಹಿಪತಿ ಪ್ರಾಣ ಹೊರಿಯೋ ನೀ ಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಲಿಸೊ ಶ್ರೀನಿವಾಸ ಪಾಲಿಸೊ ಶ್ರೀನಿವಾಸ ಪಾಲಾಬ್ಧಿಶಯನ ಕಾಪಾಲಿಯ ಕಾಯ್ದ ಗೋ ಪಾಲ ಹರಿ ವಿಶ್ವರೂಪ ಲೋಕಾಧೀಶ ಪಾಲಯವಾಗೆನ್ನ ಪಾಲಿಲಿದ್ದ ಶಿಶುಪಾಲಕ ಎನ್ನ ಕಾಯನ್ನಾ ಪ ಮನೆ ನಿನಗಾಗಿ ದೇಹಾ ಸುಮ್ಮನೆ ಪೇಳುವುದಿಲ್ಲ ಹ ಮ್ಮನೆ ಬಿಡಿಸುವುದು ಘಮ್ಮನೆ ಬಂದು ಒಲಿದು ನಿ ಮ್ಮನೆ ಭಕ್ತರ ಕೂಡ ನೆಮ್ಮನೆ ಕೊಟ್ಟ ಬಲನ ತ ಮ್ಮನೆ ನಡಿಸುವುದು ತಿಮ್ಮನೆ ಅಜಿತಾನಂತ ನಾ ಸಾರ್ವಭೌಮನೆಯಾಗಿ ಪುಟ್ಟಿ ಭೀ ಮನೆ ಗುರು ನಿತ್ಯಾ ಸಮನೆ ಎಂದು ಪೇಳಿದಾ ಮನೆಯಲ್ಲಿ ಇಡು ಮಾಮನೆಯುಳ್ಳಾ ಮಹಿಮನೆ ವೆಂಕಟೇಶಾ1 ಮನ ದುರ್ವಿಷಯಕೆ ಗಮನವಾಗಿ ಪೋಗುತಿದೆ ಕಾಮನ ಸಂಬಂಧವುಪಶಮನ ಮಾಡು ಬೇಗ ಸುಧಾ ಮನ ಮಿತ್ರ ಪವಿತ್ರ ಸುಮ್ಮನಸಕೊಡಿಯಾ ವಾ ಮನ ಮೂರುತಿಯೆ ಮನಸಂಹಾರ ಬಮ್ಮನ ಬಿಡಿಸಿದಾ ಹಿ ಮನ ಭಾವನೆ ನಿನ್ನ ಮನನಾದಿ ದಿನಯಸ್ತ ಪರಿಯಂತ ನೇಮನ ಚಿಂತಿಸುವಂತೆ2 ಜನನ ಮರಣ ಶೂನ್ಯಾ ಜನಕಾದ್ಯನಂತಗಂಗ ಜನಕಾಯಿದಾನಾದಿ ದೈವ ಅ ಜನನಯ್ಯ ಸ್ವರ್ಣ ಕಾಯಂ ಜಿನೆ ಪುತ್ರಪ್ರಿಯ್ಯಾ ದುಷ್ಟ ಜನಮರ್ದನಾ ಬಲು ಯೋಜನ ಮೆರೆವ ದೇವ ಸು ಜನಪಾಲ ಗುಣಶೀಲಾ ಜನುಮ ಜನುಮಕ್ಕು - ಜನಮತಿ ಕಳೆದು ರಂ ಜನವಾದಾ ಜ್ಞಾನ ಪುಂಜಿನ ಮಾಡು ದನುಜ ಭಂ ನಿರಂಜನ ನಿರ್ಮಳ ಅಂಜನ ಗಿರಿವಾಸಾ 3
--------------
ವಿಜಯದಾಸ
ಪಾಲಿಸೋ ಪರಿಪಾಲಿಸೋ ಪ ಪಾಲಿಸೋ ನೀ ಕಾಲನಾಮಕ-ಶ್ರೀಲೋಲ ಕಾಲಕರ್ಮದಲೆನ್ನಕರುಣಿಸಿ ನೀನೀಗ ಅ.ಪ ದುಷ್ಟಜನರ ಸಂಹಾರಕ-ಸರ್ವ ಶಿಷ್ಟಜನರ ಪರಿಪಾಲಕ-ದೇವ ಸೃಷ್ಟ್ಯಾದ್ಯಷ್ಟಕರ್ತುಕ-ತ್ವದ್ಭಕ್ತರಾ- ಭೀಷ್ಟದಾಯಕಾ 1 ಜಗದ್ಭರಿತ ಜಗದಂತರ್ಯಾಮಿ-ಸರ್ವ ಜಗದಾದ್ಯಂತ ಭಿನ್ನನೇಮಿ-ನೀನೆ ಸ್ವಗತಭೇದಶೂನ್ಯಮಹಿಮಾ ಇನ್ನು ಜಗದ್ಭುಕು ಮಮಕುಲಸ್ವಾಮಿ 2 ಪರಮೇಷ್ಟಿಭವಇಂದ್ರವಂದಿತ-ಕ್ಷರಾ- ಕ್ಷರ ಪುರುಷ ಪೂಜಿತ-ಪಾದ ನಿರವಧಿಕಗುಣಗಣಾನ್ವಿತ ನೀನೆ ಜರಾಮರಣನಾಶ ವರ್ಜಿತ 3 ಮುಕ್ತಾಮುಕ್ತಾಶ್ರಯದೇವನೆ-ಸರ್ವ ಭಕ್ತಮುಕ್ತಿಪ್ರದಾತನೆ-ವ್ಯಕ್ತಾ ವ್ಯಕ್ತಪುರುಷದೇವನೆ ಪುರುಷ- ಸೂಕ್ತಸುಮೇಯ ಅಪ್ರಮೇಯನೆ 4 ಸ್ವರವರ್ಣ ಶಬ್ದವಾಚ್ಯನೆ-ದೇವ ಸುರಾಸುರಾರ್ಚಿತ ಪಾದನೆ ಓಂ- ಕಾರ ಪ್ರಣವ ಪ್ರತಿಪಾದ್ಯನೆ ನಿತ್ಯ ನಿಖಿಳಾಗಮದೊಳು ಸಂಚಾರನೆ5 ಅಚಿಂತ್ಯಾನಂತರೂಪಾತ್ಮಕ-ನಿನ್ನ ಭಜಕರ ಭವಬಂಧ ಮೋಚಕ-ಸರ್ವ ಅಬುಜಾಂಡ ಕೋಟಿನಾಯಕ ನೀನೆ ಜಗದಾದ್ಯಂತ ವ್ಯಾಪಕ6 ವೇದ ವೇದಾಂತ ವೇದ್ಯನೆ-ನೀನೆ ಆದಿಮಧ್ಯಾಂತದೊಳ್ ಖ್ಯಾತನೆ ಗುರು ಮೋದತೀರ್ಥರ ಹೃತ್ಕಾಂತನೆ ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲನೆ 7
--------------
ಉರಗಾದ್ರಿವಾಸವಿಠಲದಾಸರು