ಒಟ್ಟು 1158 ಕಡೆಗಳಲ್ಲಿ , 99 ದಾಸರು , 936 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ಎನ್ನ ದೊರೆಯೆ ನಿನ್ನಯ ಮರೆಯಹೊಕ್ಕೆನೊ ಪ ವ್ಯಾಘ್ರಗಿರಿಯೊಳಿರುವ ಸಿರಿನಾರಾಯಣ ಅ.ಪ ಸಕಲ ಲೋಕಗಳನು ನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೇ ಸಲಹುವಾತನು ಪ್ರಕಟವಾದ ಜಗವ ನೀನೆ ಪ್ರಳಯಗೈವನು ನಿತ್ಯ ನೀನೆ ನಿಯಮಿಸುವನು 1 ಸ್ಥೂಲ ಸೂಕ್ಷ್ಮರೂಪ ನೀನೆ ಮೂಲ ಪುರುಷನು ಲೀಲೆಯನ್ನು ಪ್ರಕಟಗೈವ ಕಾಲರೂಪನು ನೀಲಲೋಹಿತಾದಿ ವಿಬುಧಜಾಲವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮಪುರುಷ ಪಂಕಜಾಕ್ಷ ಪತಿತಪಾವನ ಶರಧಿ ಶಯನ ಸಕಲಲೋಕ ಸಂವಿಭಾವನ ವರಗುಣಾಢ್ಯ ವಿಗತಮಾಯ ವಿಶ್ವಮೋಹನ ದುರಿತಗಜ ಮೃಗಾಧಿರಾಜ ವರದವಿಠಲ ವಿಹಗಯಾನ3
--------------
ವೆಂಕಟವರದಾರ್ಯರು
ಹರಿಯೆ ಯನ್ನ ಧೊರೆಯೆ ನಿನ್ನಮರೆಯ ಹೊಕ್ಕೆನೊ ಸಿರಿಯರಮಣ ಪ ಸಕಲ ಲೋಕಗಳನುನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೆ ಸಲಹುವಾತಾನು ಪ್ರಕಟವಾದ ಜಗವ ನೀನೆ-ಪ್ರಳಯಗೈವನು ನಿಖಿಲ ಜೀವಸಾಕ್ಷಿಯಾಗಿ ನಿತ್ಯನೀನೆನಿಯಮಿಸುವನು 1 ಸ್ಥೂಲಸೂಕ್ಷ್ಮರೂಪನೀನೆ ಮೂಲಪುರುಷನು ಲೀಲೆಯನ್ನು ಪ್ರಕಟಗೈವ ಕಾಲರುಪನು ನೀಲ ಲೋಹಿತಾದಿ ವಿಬುಧಜಾಲ ವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮ ಪುರುಷ ಪಂಕಜಾಕ್ಷ-ಪತಿತ ಪಾವನ ಶರಧಿಶಯನ ಸಕಲಲೋಕ ಸಂವಿಭಾವನ ವಿಶ್ವ ಮೋಹನ ದುರಿತ ಗಜಮೃಗಾಧಿರಾಜವರದ ವಿಠಲ ವಿಹಗಯಾನ 3
--------------
ಸರಗೂರು ವೆಂಕಟವರದಾರ್ಯರು
ಹರಿಯೇ ಪೊರೆಯದಿಹುದು ಸರಿಯೆ | ಎನ್ನ ಮರೆತೆ ಯಾತಕೊ ನಾನರಿಯೆ ಪ ಸೂಕರ ಯೋನಿಯಲಿ ಬಂದು | ನಾನು ಮನುಜನಾಗಿ ನಿಂದಿಹೆನಿಂದು ನಿನ ಬೇಡಿಕೊಂಬೆ ದಯಸಿಂಧು | ಎನ್ನ ಪುನಹ ಪುಟ್ಟಿಸಬೇಡವೆಂದು 1 ಮನಸು ವಚನ ಕಾಯಗಳಿಂದ | ನಿನ್ನ ಅನುಚರನಾಗಿಹೆ ಮುದದಿಂದ ದನುಜಾರಿ ಬಿಡಿಸೆನ್ನ ಬಂಧ | ಭವ- ಜನಿತವಾಗಿಹ ಜಾಲದಿಂದ 2 ಹಲವು ಮಾತೇಕೊ ಮಾಲೋಲ | ಮೌನಿ ಅಲವ ಬೋಧಾರ್ಚಿತ ಗೋಪಾಲ ಕಲುಷ ರಾಸಿಗಳನೆಲ್ಲ ಕಳೆದು ಸಲಹೈಯ್ಯಾ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಹರಿಹರರಿಬ್ಬರು ಒಲಿದು ಮಾತಾಡಲು ಕೊಳವ ಕಂಡಲ್ಲಿ ಎಲೆತೋಟ ಕೊಳವ ಕಂಡಲ್ಲಿ ಎಲೆತೋಟದೊಳಗಾಡುವ ಹೆಣ್ಣಿನ ಕಂಡು ಹರ ಮರುಳಾದ ಪ. ತೆಂಗಿನ ತಿಳಿಗೊಳ ನಿಂಬೆ ಕಿತ್ತಲೆ ಬಾಳೆ ಹೊಂಬಾಳೆ ಅಡಿಕೆ ಬನಗಳು ಹೊಂಬಾಳೆ ಅಡಿಕೆ ಬನದೊಳಗಾಡುವ ರಂಭೆಯ ಕಂಡು ಹರ ಮರುಳಾದ 1 ಅರಿಸಿನ ತಿಳಿಗೊಳ ಹಲಸು ಕಿತ್ತಲೆ ಬಾಳೆ ಬೆರಸಿ ಮಲ್ಲಿಗೆಯ ಬನದೊಳು ಬೆರಸಿ ಮಲ್ಲಿಗೆಯ ಬನದೊಳಗಾಡುವ ಸರಸಿಜಾಕ್ಷಿಯ ಕಂಡು ಹರ ಮರುಳಾದ 2 ಮೊಲ್ಲೆ ಮಲ್ಲಿಗೆ ಜಾಜಿ ಅಲ್ಲೆ ಪಾರಿಜಾತ ನಿಲ್ಲದೆ ನುಡಿವೊ ಗಿಳಿಗಳು ನಿಲ್ಲದೆ ನುಡಿವೊ ಗಿಳಿಗಳು ನುಡಿಗಳ ಚೆಲುವೆಯ ಕಂಡು ಹರ ಮರುಳಾದ 3 ಸೋಗೆ ನವಿಲುಗಳು ಗಿಳಿಹಿಂಡು ತುರುಗಳು [ಕೋಗಿಲೆ ನಲಿಯೊ ಪಂಸೆಗಳು] [ಕೋಗಿಲೆ ನಲಿಯೊ ಪಂಸೆಯೊಳಾಡುವ] ಸೊ- ಬಗಿಯ ಕಂಡು ಹರ ಮರುಳಾದ 4 ಚೆಲುವ ಚರಣಗಳು ಜಂಘೆ ಜಾನೂರು ಕಟಿ ವಳಿಪಂಙÂ್ತ ಜಠರ ವಕ್ಷಸ್ಥಳವು ವಳಿಪಂಙÂ್ತ ಜಠರ ವಕ್ಷಸ್ಥಳಗಳ ಹೆಣ್ಣಿನ ಸ್ತನವ ವರ್ಣಿಸಲಾರಿಗಳವಲ್ಲ 5 ಕಾಲುಂಗುರ ಅಕ್ಕಿ ಪಿಲ್ಯ ಜೋಡುಮೆಂಟಿಕೆಗಳು ವೀರಮುದ್ರಿಕೆಯು ಕಿರುಪಿಲ್ಯ ವೀರಮುದ್ರಿಕೆಯು ಕಿರುಪಿಲ್ಯ ನಿಟ್ಟಿದ್ದ ಬಾಲೆಯ ಕಂಡು ಹರ ಮರುಳಾದ 6 ನಡು ಬಳುಕಿ ಮುಡಿ ಸಡಲಿ ಉಡಿಗಂಟೆ ಹೊಳೆಯುತ ಕೊರಳ ಪದಕ ಹಾರ ಒಲೆಯುತ ಕೊರಳ ಪದಕ ಹಾರ ಒಲೆಯುತ ಹೆಣ್ಣಿನ ಇರವ ವರ್ಣಿಸಲಾರಿಗಳವಲ್ಲ 7 ಹಸಿರು ಕುಪ್ಪಸಗಳು ಮುಂಗೈನಗಗಳು ನಳಿತೋಳುಬಂದಿ ಬಳೆಗಳು ನಳಿತೋಳುಬಂದಿ ಬಳೆಗಳು ಹೆಣ್ಣಿನ ಥಳುಕು ವರ್ಣಿಸಲಾರಿಗಳವಲ್ಲ8 ಹಾರ ಹೀರಾವಳಿ ಕೇಯೂರ ಕಂಕಣ ತೋಳ ಭಾಪುರಿ ಭುಜಕೀರ್ತಿ ತೋಳ ಭಾಪುರಿ ಭುಜಕೀರ್ತಿನಿಟ್ಟಿಹ ಇಂದುಮುಖಿಯ ಕಂಡು ಹರ ಮರುಳಾದ 9 ಅರಳೋಲೆ ಮೂಗುತಿ ಹಣೆಯ ಹಚ್ಚೆಯ ಬೊಟ್ಟು ಕದಪು ಕನ್ನಡಿಯು ಕುಡಿಹುಬ್ಬು ಕದಪು ಕನ್ನಡಿಯು ಕುಡಿಹುಬ್ಬು ಹೆಣ್ಣಿನ ಬೆಳಕÀ ವರ್ಣಿಸೆ ಹರಗಳವಲ್ಲ 10 ನೊಸಲು ಕಸ್ತೂರಿಗಳು ಎಸೆವ ಬೈತಲೆಗಳು ಕುರುಳು ಕೂದಲುಗಳು ಕುಂತಲಗಳು ಕುರುಳು ಕೂದಲುಗಳು ಕುಂತಲಗಳು ಹೆಣ್ಣಿನ ಜಡೆಯ ವರ್ಣಿಸಲಾರಿಗಳವಲ್ಲ 11 ಕುಂಭಕುಚದ ಮೇಲೆ ಗಂಧವ ಪೂಸಿದಳೆ ಅಂದಕೆ ಹಿಡಿದಳೆ ಕಮಲವ ಅಂದಕೆ ಹಿಡಿದಳೆ ಕಮಲವ ಕಡೆಗಣ್ಣ ಚಂದ ಬಂದ್ಹರನ ಕಂಗೆಡಿಸಿತು 12 ತÉೂೀರ ಕುಚದ ಮೇಲೆ ಸಾದು ಗಂಧವ ಪೂಸಿ ಆಯಕೆ ಹಿಡಿದಳೆ ಕಮಲವ ಆಯಕೆ ಹಿಡಿದಳೆ ಕಮಲವ ಕಡೆಗಣ್ಣ ಢಾಳ ಬಂದ್ಹರನ ಕಂಗೆಡಿಸಿತು 13 ಕಕ್ಕಸ ಕುಚದಮೇಲೆ ಅಷ್ಟಹಾರಗಳು ಹೊಳೆಯೆ ಹಸ್ತಕಟ್ಟುಗಳು ಹೊಳೆಯುತ ಹಸ್ತಕಟ್ಟುಗಳು ಹೊಳೆವುತ್ತ ಹೆಣ್ಣಿನ ದೃಷ್ಟಿ ಬಂದ್ಹರನ ಕಂಗೆಡಿಸಿತು 14 ಅಮ್ಮಾಲೆ ಆಡೋಳು ಒಮ್ಮೊಮ್ಮೆ ನೋಡೋಳು ತÀನ್ನೊಳಗೆ ತಾನು ನಗುವೋಳು ತÀನ್ನೊಳಗೆ ತಾನು ನಗುವೋಳು ಬೊಮ್ಮನ ಮಗನ ಮರುಳು ಮಾಡಿ ನಡೆದಳು 15 ನೋಡಳು ನುಡಿಯಳು ಹರನ ಕೂಡೆ ಮಾತಾಡಳು ಓಡುತ್ತ ಚೆಂಡ ಹೊಯ್ವಳು ಓಡುತ್ತ ಚೆಂಡ ಹೊಯ್ವವೇಗವ ಕಂಡು ಮೂರುಕಣ್ಣವನು ಮರುಳಾದ 16 ಕೆದರಿದ ಕೆಂಜೆಡೆ ಕೊರಳ ರುದ್ರಾಕ್ಷಿ ಕರದಿ ತ್ರಿಶೂಲ ಹೊಳೆಯುತ ಕರದಿ ತ್ರಿಶೂಲ ಹೊಳೆಯುತ ಹೆಣ್ಣಿನ ನುಡಿಸುತ್ತ ಹಿಂದೆ ನಡೆದನು 17 ರೂಢಿಗೊಡೆಯನ ಕೂಡೆ ಆಡುವ ವನಿತೆ ನೋಡೆ ನೀ ಎನ್ನ ಕಡೆಗಣ್ಣ ನೋಡೆ ನೀ ಎನ್ನ ಕಡೆಗಣ್ಣ ಹೆಣ್ಣಿನ ಕಾಡುತ ಹಿಂದೆ ನಡೆದನು 18 ಪೀತಾಂಬರದ ಮುಂಜೆರಗನು ಕಾಣುತ್ತ ಸೋತೆ ಬಾರೆಂದು ಕರೆದನು ಸೋತೆ ಬಾರೆಂದು ಕರೆದ ಧ್ವನಿಯ ಕೇಳಿ ಕಾಂತೆ ಬನದೊಳು ಮರೆಯಾದಳು 19 ಮಂಗಳ ಮಹಿಮಗೆ ಅಂಜಿಕೆ ಇಲ್ಲದೆ ಗಂಗೆ ಪೊತ್ತವನ ತಿರುಗಿಸಿದ ಗಂಗೆಪೊತ್ತವನ ತಿರುಗಿಸಿದ ತನ್ನಯ ಮುಂದಣ ಅಂದವೆಲ್ಲ ಇಳುಹಿದ 20 ಸೃಷ್ಟಿಯನೆಲ್ಲ ಹೊಟ್ಟೆಯೊಳಿಂಬಿಟ್ಟು ವಟಪತ್ರ ಶಯನನಾಗಿ ಮಲಗಿದ ವಟಪತ್ರ ಶಯನನಾಗಿ ಮಲಗಿದ ಉಡುಪಿನ ಕೃಷ್ಣನೆಂದ್ಹರನು ತಿಳಿದನು 21 ಭೂಮಿಯನೆಲ್ಲ ಈರಡಿ ಮಾಡಿದ ಆಲದೆಲೆ ಮೇಲೆ ಮಲಗಿದ ಆಲದೆಲೆ ಮೇಲೆ ಮಲಗಿದ ಶ್ರೀಹಯ- ವದನನೆಂದು ಹರ ತಿಳಿದನು 22
--------------
ವಾದಿರಾಜ
ಹರುಷದಿ ತಾರೆ ಆರುತಿಪುರವೈರಿ ಗೌರೀಶಾ ಧವಳಾಂಗಗೆ ಪ ಅಶುಭನೇತ್ರ ಶಶಿಧರಗೆ | ವೃಷಭೇಂದ್ರ ಶ್ಯಂದನಗೆಕುಸುಮಬಾಣ ಮದಹರಗೆ ಬಿಸಜಾಕ್ಷಗೆ 1 ಭುಜಗಮಾಲಾ ಖಳಕಾಲಾ | ವಿಜಿತ ಗೋ ಶಂಕರಗೆರಜತ ಶೈಲ ಮಂದಿರಗೆ | ಕಮಲಾಂಬಿಕೆ 2 ಮಣಿ 3
--------------
ಶಾಮಸುಂದರ ವಿಠಲ
ಹಲವಂಗದವನಿಗೆ ಬಲುವಂಗ ಮಾಲಿಗೆ | ಗುಲ್ಲು ಗುಲ್ಲಿಸಿದ ಎಲ್ಲರಿಗೆ | ಬಲ್ಲ ಮಹಾತ್ಮಗೆ ಬಲಸೀದ ಅಯ್ಯಗೆ ಶುರದರ ಸದ್ಗುರುನಾಥಗೆ ಪ ಶುಭ ಮಂಗಳಾ ಮಹಾ ಮಂಗಳ ಭೃಂಗವಳ್ಳಿಯ ಸದ್ಗುರುನಾಥಗೆ 1 ಯೋಗಿ ಜನರ ಹೃತ್ಕಮಲವಾಸಿಪಗೆ | ಭೋಗ ಮೂರು ಸದ್ಗುರುನಾಥಗೆ 2 ಅಗಣಿತ ಗಣಿತಗೆ | ನಿಗಮಕೆನಿಲುಕದ ನಿರ್ಲೇಪಗೆ | ಭೃಂಗವಳ್ಳಿಯಲ್ಲಿ ನಿಂತಮಹಾತ್ಮಗೆ | ಮಗ ಭೀಮಾಶಂಕರನ ಪಾಲಿಪಗೆ 3
--------------
ಭೀಮಾಶಂಕರ
ಹಳೆಯವಾಸನೆ ನಿನ್ನ 'ೀರುವದಣ್ಣಬಳಸಿದೆ ಬಹುವಾಗಿ ಬಿಡುವದೆಂತಣ್ಣ ಪಭವರೋಗಿಯಾಗಿದ್ದು ಬಾಯ ಸ'ಗಾಗಿಅ'ವೇಕ ಪಥ್ಯಗಳ ಸ'ದು ಮೂರ್ಛೆದೋಷವುಮೂರ್ಛೆಯ ಕ'ದು ಮನ ತೇಲಿ ಬಂತಾಗಿಸು'ವೇಕ ಮುಚ್ಚೋುತೆ ತೋರದಾಗಿ 1ರಾಮನ ನಾಮ ರಸಾಯನವನ್ನುನೇಮದಿಂ ಸೇ'ಸು ಬಿಡದಿರುುನ್ನುಕಾಮಾಲೆ ಬರದಂತೆ ಕರಣಗಳನ್ನು ಸದಾ ಮನಗುತೆುಂದರಿತರೆ ಸುಖಿುನ್ನು2ಕರುಣದಿಂ ಚಿಕ್ಕನಾಗಪುರದೊಳಗಿರುವಗುರುಪರವಾಸುದೇವಾರ್ಯನ ಪದವ ಪಿಡಿದರೆ ಸುಜ್ಞಾನಾಮೃತವ ನಿನಗೆರೆವಮರೆವೆ ಹಳೆಯ ವಾಸನೆಯ ನಿನ್ನಿರವ3
--------------
ವೆಂಕಟದಾಸರು
ಹಾಕುವೆ ಸುಮಾಲಾ ಸುಶೀಲಾ ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 1 ಸರಸಿಜನಾಭನೆ ಸುರದೊಡೆಯನೆ ನೀ ವಿರಚಿಸಿದಂಥ ಪರಿಮಳ ಹಾರುವ ಸರುವ ಹಾರವ ತಂದು ಕೊರಳಿಗೆ ಹಾಕುವೆ 2 ಶಾಮಸುಂದರ ನಿಮ್ಮ ನೇಮದಿ ನಡೆವೆ ನಾ ಭಾಮೆಯನಗಲದೆ ಪ್ರೇಮದಿ ಪೊರೆಯೆಂದು 3
--------------
ಶಾಮಸುಂದರ ವಿಠಲ
ಹಾಕುವೆ ಸುಮಾಲಾ ಸುಶೀಲಾ ಸ್ವೀಕರಿಸೈ ಕರುಣಾಕರ ಕಂಠದಿ ಪ ಅರಳಿದ ಮಲ್ಲಿಗೆ ಸುರಸು ಶಾವಂತಿಗೆ ಪರಿಮಳ ಪುಷ್ಪದ ಸರವನು ಶಾವಂತಿಗೆ ಪರಿಮಳ ಪುಷ್ಪದ ಸರವನು ವಿರಚಿಸಿ 1 ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 2 ಶಾಮಸುಂದರ ನಿನ್ನ ನೇಮದಿ ನೆನೆವೆನು ಭಾಮೆಯನಗಲದೆ ಪ್ರೇಮದಿ ಪೊರೆ ಎಂದು 3
--------------
ಶಾಮಸುಂದರ ವಿಠಲ
ಹಿರಿಯ ಒಡೆಯಕಂಡೆನಮ್ಮಾ ಧರಿಯ ಮ್ಯಾಲೊಂದುನಾ ಸಿರಿಯಾ ವರ್ಯನಾದನೀತ ಸಿರಿಯ ಕಾಣೆನಾ ಪ ಶರಣ ಹೃದಯ ಮಾಡದಲ್ಲಿ ಅರಹು ಘಂಟಮಾಲೆ ನವ ಪರಿಯ ಶುಕ್ಯಶಾವಿಗಿಯ ಹರುಷ ಸಕ್ಕರೆ ಪರಮ ಜ್ಞಾನವೆಂಬ ತ್ವರಿತ ದೀವಿಗೆಯ ಕೊಂಡು ಮೆರೆವ ಕೀರ್ತ ಪ್ರೇಮ ಜಘ್ಲ್ಯಡೊಳ್ಳು ಹೊಯಿಸುವಾ 1 ಕಡ್ಡಿ ವಿಡಿದು ಗುಡ್ಡ ಮಾಡಿ ಗುಡ್ಡವನ್ನೇ ಕಡ್ಡಿಮಾಡಿ ಒಡ್ಡಿ ಮಾಯಾಜಾಲದಿಂದ ನೆಲೆಯ ತೋರದೇ ದೊಡ್ಡ ದೊಡ್ಡವರನೆಲ್ಲ ವೆಡ್ಡೆಮಾಡಿ ಬಿಟ್ಟತನ್ನ ಅಡ್ಡ ಸುಳಿದವರ ಕೈಯ್ಯ ದುಡ್ಡನಾರ ಕೊಂಬುರೇ 2 ಚಿನ್ನ ಕೊಂಡವರ ಮೂಲವನ್ನು ಕಿತ್ತಿ ತೋರಿಸುವ ತನ್ನ ನಂಬಿದ್ದವರ ಸ್ಥಾಪನೇ ಮಾಡುವ ಯನ್ನ ಮನೆ ದೈವವಾಗಿ ಧನ್ಯಗೈಸಿದನು ಕೂಡಿ ಉನ್ನತ ಮಹಿಪತಿ ನಂದ ನೊಡಿಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುರುಡು ನಿನಗೆ ಥರವೇನೊ ಸ್ವಾಮಿ ಗರುಡವಾಹನ ಸುರಧೇನು ಪ. ಕುರುಡ ಕಾಣದೆ ಕೂಪದಲಿ ಬಿದ್ದರೆತ್ತದೆ ಮೊರಡುತನದಿ ಮುಖ ನೋಡುತ ನಗುವಂಥ ಅ.ಪ. ಜ್ಞಾನಮಾರ್ಗವ ಕಾಣದಿರುವ ದೀನ ಮಾನವನಿಗೆ ಮೋಹಭರವ ತಾನೆ ಕಲ್ಪಿಸಿ ತತ್ವದಿರುವ ಮುಚ್ಚಿ ನಾನಾ ಯೋಗಿಗಳಲ್ಲಿ ತರುವ ಮಾನವು ಸರಿಯೆ ಮಹಾನುಭಾವ ನಿನ್ನ ದೀನ ಬಂಧುತ್ವಕೆ ಹಾನಿ ಬಾರದೆ ಕೃಷ್ಣ 1 ಇಂದ್ರಿಯಾರ್ಥ ಸನ್ನಕರ್ಷವೆಂಬ ಬಂಧನದಲ್ಲಿ ಸಿಕ್ಕಿ ಬೀಳ್ವ ನಾನಾ ತಂದ್ರ ಸಾಗರ ಮುನಿಗಳ ಬಹು ಮಂಜನು ಮಾಯೆಯ ಗೆಲ್ವ ಹೊಂದಿಕೆಯನು ಸುಖ ಸಾಂದ್ರ ನೀನರಿಯೆಯ ಇಂದ್ರಾದಿಗಳನು ಎಂದೆಂದಿಗೂ ಸಲಹುವಿ 2 ಅದರಿಂದ ಸರ್ವಕಾಲದಲಿ ನೀನೆ ಒದಗಿ ಪೊಳೆವುತ್ತ ಮನದಲಿ ಪದಯುಗವಿರಿಸಿ ಶಿರದಲಿ ದಾಸಪದವ ಪಾಲಿಸು ಕರುಣದಲಿ ಭವ ವಂದ್ಯ ವೆಂಕಟಗಿರಿನಾಯಕ ಪದುಮಾಲಯೆ ಕೂಡಿ ಸದನದಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ
ಹೆಂಡತಿ ನೋಡಣ್ಣ ಈಕಿನ ನ್ನ್ಹೆಂಡತಿ ನೋಡಣ್ಣ ಪ ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ ಕಂಡದ್ದು ಬೇಡುವಳು ತರದಿರೆ ಗಂಡನಲ್ಲೆಂಬುವಳು ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ ಮಿಂಡೆ ಭಂಡ 1 ಮಾತುಮಾತಿಗಿವಳು ಎನ್ನನು ಕೋತ್ಯಂತೆ ಕುಣಿಸುವಳು ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ ನೀತಿಗೆಡಿಸುವಳು ಭೀತಿಲ್ಲದ 2 ಒಯ್ಯಾರ ಮಾಡುವಳು ಬೈದರೆ ಬಾಯಿ ತೆರೆದಳುವಳು ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು ದಾಯಾದಿಗಳು ಮುಂದೆ ಹೊಯ್ಮಾಲಿ 3 ತೊಡರು ಬಿಡಳು ಒಡಲಿನ ಕೆಡಕುಗುಣವ ಕಡಿಯಳು ಅಡಿಗಡಿಗೆನ್ನನು ದುಡುಕು ನುಡಿದು ಮನ ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ 4 ಒದಗಿಸಿ ನಾಂ ತರಲು ಅದರೊಳು ಕದಿದರ್ಧ ತಿನ್ನುವಳು ಪದುಮನಾಭ ನಮ್ಮ ಸದಯ ಶ್ರೀರಾಮನ ಪಾದ ಕೃಪೆಯ ಪಡೆಯದಧಮ 5
--------------
ರಾಮದಾಸರು
ಹೋಯಿತು ಪರಶುರಾಮನ ದಂಡಿಲಿ ನಷ್ಟ ವಾಯಿತು ಜನರೆಲ್ಲ ಹೊಡೆತ ಕಡಿತದಿ ಪ ಮೇಧಿನಿಯೊಳಗಣ ಜನರಿಂಗೆ ದಂಡಿಂದ ಮಣಿ ಮುತ್ತು ತೀರ್ದುದು ಕಂಚು ತಾಮ್ರಗಳು ಬಹುಕಾಲ ಸಾಧಿಸಿದೊಡವೆ ಸಾಧನ ಸಂಪತ್ತುಗಳೆಲ್ಲ 1 ಉಡುವ ತೊಡುವ ಜವಳಿ ಅಡಕೆ ಮೆಣಸು ಭತ್ತ ಕಡಿತ ಕಂಠಗಳಾಬ್ರ ಮುಡಿ ಉಪ್ಪುಗುಢಕಲ್ಲು ಗಡಿಗೆ ಮಡಕೆ ಎಣ್ಣೆ ಕೊಡವು ಕಬ್ಬಿಣದ ಕತ್ತಿ ಅಡಿಯಿಟ್ಟ ಚಿಟ್ಟು ಪಾಟ್ಟಿಗಳೊಂದುಳಿಯದಂತೆ 2 ಕೊಟ್ಟದೊಳಗೆ ಇಟ್ಟವಸ್ತು ವಡವೆಯೆಲ್ಲ ನಷ್ಟವಾಯಿತು ಹಾರೆ ಕೊಡಲಿ ಗುದ್ದಲಿ ಕುಳ ಬಟ್ಟಲು ಹಂಡೆ ಕೊಪ್ಪರಿಗೆ ಇಕ್ಕುವ ಗುಂಡಿ ಮಣಿ ಮರಿಗೆ ಸರ್ವಸ್ವವು 3 ನಗ ಯೊತ್ತು ಉಂಗುರ ಜಪಮಣಿ ಮಾಲೆ ಹವಳ ಯಾ ರೆತ್ತುವ ನಗನಾಣ್ಯವೆಲ್ಲ ಸುಲಿಗೆಯಿಂದ 4 ಅಂಧಕಾರಕೆ ನೆರವಾದಂತೆ ದುರ್ಭಿಕ್ಷ ಬಂದಿತು ಸಂಗಡ ತಂಡುಲ ಗದ್ಯಾಣವೊಂದಕೈದಾಗಿ ಮುಗಿತು ಹರಿನಂದನ ಕೋಣೆ ಲಕ್ಷ್ಮೀಶನೊಬ್ಬನೆ ಬಲ್ಲ 5
--------------
ಕವಿ ಪರಮದೇವದಾಸರು
ಹೌರನೆ ಮತಿಯಿತ್ತು ಸಲಬೇಕೆನ್ನ ಪ ಗೌರವ ಗಾತುರ ತೌರ ಮನೆಯ ಹರ ಕೌರವಾಂತಕನೊಳು ಶೌರಿಯ ತೋರಿಸೋ ಅ.ಪ. ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ ತ್ರಿಗುಣಾತುವ ಗಾತುರ ಭಕ್ತ ಸಂಜೀವ ನಿಗಮತುರಗ ಪಾವ ವನಮಾಲ ಪಾವಾ ಮೃಗಪಾಣಿ ಮೃತ್ಯುಂಜಯ ಸುಪ್ರಭಾವ ನಗೆಪಗೆ ಮಗನನು ಮೃಗನೆವನದಿ ಕಾ ಅಗಣಿತ ಗುಣಮಣಿ ವಾಲಗ ನಿನ್ನವರೊಳು ಮಗಳೆ ಮಗುಳೆ ಕೊಡು ಗಗನೇಶ ಜನಕ 1 ಅವನಿಯೋಳ್ ಕೈಲಾಸ ವಾಸ ಅಪ್ರತಿ ನವ ವಿಧ ಭಕುತಿ ಕೊಡು ಶಂಭು ಪಶುಪತಿ ದಿವಸ ದಿವಸ ವೈಶ್ರವಣ ಬಾಂಧವ ದೇ ಹವೆ ನಿನಗೊಪ್ಪಿತು ಅವನಿಯೊಳುತ್ತಮ ಶ್ರವಣದೊಳಗೆ ರಾಘವನ ಕಥಾಮೃತ ಸವಿದೋರುವುದೋ ಭುವನ ಪವಿತ್ರ 2 ಅಜಭೃಕುಟ ಸಂಭೂತ ಭೂತಗಣೇಶ ಕುಂಡಲ ವಿಭೂತಿ ಭೂಪ ನಿಜ ಮಹಾ ಸ್ಮಶಾನವಾಸ ಉಗ್ರೇಶ ತ್ರಿಜಗಪಾವನ ಗಂಗಾಧರ ವಿಶ್ವೇಶ ಸುಜನರ ಹೃದಯ ಪಂಕಜದೊಳ್ ಮಿನುಗುವ ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ ಭಜನೆಯ ಕೊಡು ಭೂಭುಜ ದೇವೋತ್ತಮ ಗಜ ಅಜಿನಾಂಬರ 3
--------------
ವಿಜಯದಾಸ