ಒಟ್ಟು 1888 ಕಡೆಗಳಲ್ಲಿ , 109 ದಾಸರು , 1339 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡಬಾರದು ನೋಡಿ ಕೇಡಿಗರ ಸಂಗ ಭಂಗ ಧ್ರುವ ಹೊಟ್ಟೆಯನು ಹೊಕ್ಕು ಕಟ್ಟಿಗೆ ತಂದು ನಿಲಿಸ ುವರು ಗುಟ್ಟಲೀಹ ಮಾತು ತುಟ್ಟಿಗೆ ತಾಹರು ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳ ತಾಹರು ನಟ್ಟಸ್ನೇಹದ ಬಳಕಿ ತುಟ್ಟಿಸುವರು 1 ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ ಅಲ್ಲಹುದು ಮಾಡಿ ಗೆಲವಿಸಿಕೊಂಬರು ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ 2 ಏನನಾದರೆ ಕೊಟ್ಟು ಹೀನಮನುಜರ ಸಂಗ ಮಾನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗೆ ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ ನೆನವರ ನೆರೆಲಿದ್ದು ಸುಖಿಸುವುದು ಲೇಸು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಡಿ ನೀವು ಸತ್ಸಂಗ ನೋಡಿ ಘನ ಅಂತರಂಗ ಧ್ರುವ ಸಾರಿದೂರಲಿಕ್ಕೆ ವೇದ ಅರರಿವದೆನಗಗಾಧ ದಾರಿದೋರಿಕುಡು ಬೋಧ ಗುರುಪ್ರಸಾದ 1 ಬದಿಲಿರಲಿಕ್ಕೆ ಖೂನ ಇದಕ್ಯಾಕುದ್ದರಿ ಜ್ಞಾನ ಛೇದಿಸಿ ಅನುಮಾನ ಭೇದಿಸಿರೊ ಪೂರ್ಣ 2 ಹಿಡಿಯಲಿಕ್ಕೆ ಸತ್ಸಂಗ ಓಡಿಬಾವ್ಹಾ ಶ್ರೀರಂಗ ಮಾಡಿ ಭವಭಯಭಂಗ ನೋಡುವ ಕೃಪಾಂಗ3 ಎಲ್ಲಕ್ಕೆ ಶಿಖಾಮಣಿ ಸುಲಭ ಈ ಸಾಧನಿ ಸೊಲ್ಲಿಗೆ ಮುಟ್ಟಿದ ಪ್ರಾಣಿ ಬಲ್ಲವ ಸುಜ್ಞಾನಿ 4 ಪಿಡಿದು ಸತ್ಸಂಗತಿ ಕಡಿದು ಹೋಯಿತು ಭ್ರಾಂತಿ ಪಡೆದ ಸುಖ ವಿಶ್ರಾಂತಿ ಮೂಢ ಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಡಿ ಸಾಧುಸಂಗ ನೋಡಿ ಅಂತರಂಗ ಧ್ರುವ ಕೇಳಿ ಎನ್ನಮಾತ ಹೇಳುವೆ ನಾ ಹಿತ ಅಳಿಯದಾರ್ಜಿತ ತ್ವರಿತ 1 ಪಥ ಬ್ಯಾಗ ಗೂಢ ರಾಜಯೋಗ ಮಡಬ್ಯಾಡಿ ಸೋಂಗ ನೋಡಿ ಬ್ರಹ್ಮಭೋಗ2 ಠಕ್ಕಠವಳಿ ಅಲ್ಲ ಸುಖಸಾಧು ಬಲ್ಲ ಮಿಕ್ಕವರಿಗೆಲ್ಲ ಸಿಕ್ಕುದು ತಾನಲ್ಲ 3 ಒಮ್ಮನ ಮಾಡಿ ನಿಮ್ಮೊಳಗ ನೋಡಿ ಬ್ರಹ್ಮರಸ ಕೂಡಿ ಸುಮ್ಮನೆ ಸೂರ್ಯಾಡಿ 4 ಇಹ್ಯಪರ ಪೂರ್ಣದಯಾಳು ನಿಧಾನ ಮಹಿಪತಿ ಪ್ರಾಣ ಗುರು ಶ್ರೀಚರಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತರಿಶ್ವ ಮಹಾರಾಯಾ ನಿನ್ನ ದೂತನಾದೆನೊ ಪೊರಿ ಜೀಯಾ ಪ ಪುರುಹೂತ ಪ್ರಮುಖ ಸುರ ವ್ರಾತವಿನುತ ಶಿರಿನಾಥನ ನಿನ್ನೊಳು ಪ್ರೀತಿಲಿ ತೋರಿಸಿ ನೀತ ಜ್ಞಾನವಿತ್ತು ಮಾತು ಲಾಲಿಸೊ ಎನ್ನ ಮಾತೆಯ ತೆರದಿ ಅ.ಪ ಪ್ರಾಣಾದಿ ಪಂಚರೂಪಕನೆ ಜಗ ತ್ರಾಣ ಭಾವಿ ವಿರಿಂಚನೆ ಮಾಣದೆ ತವ ರೂಪ ಕಾಣಿಸೊ ಮನದಲ್ಲಿ ಪಾಣಿಯುಗವ ಮುಗಿವೆ ಕ್ಷೀಣಪಾಪನ ಮಾಡೊ ರೇಣು ಭಜನೆಯ ಗೈದು ಸರ್ವದ ವೀಣೆ ಪಿಡಿದತಿ ಗಾನ ಮಾಡುತ ಜಾಣನೆನಿಸಿ ಕ್ಷೋಣಿ ಪಾಲಿಪೆ 1 ಮೂಲರಾಮನ ಪಾದಕಮಲಾ ಯುಗಕೆ ನೀಲಷಟ್ಟದ ವರಬಾಲಾ ವಾಲಿಯಾನುಜ ಕಪಿ ಜಾಲಪಾಲಕನನ್ನು ಆಲಿಸಿ ಭೂಮಿಜ ಲೋಲರಾಮನ ಮೈತ್ರ್ಯ ಪಾಲಿಸೀ ಶರಧಿಯನು ನೀನೆ ಲೀಲೆಯಿಂದಲಿ ದಾಟಿ ಸೀತೆಗೆ ಬಾಲರೂಪದಿ ರಾಮವಾರ್ತೆಂiÀi ಪೇಳಿ ವನವನು ಹಾಳುಮಾಡಿದಿ 2 ಪಾತಕÀ ರಾವಣ ಮಗನಾ ರಣದಿ ಘಾತಿಸಿ ಯಮಗಿತ್ತವನಾ ತಾತಗುರು ಜಗನ್ನಾಥವಿಠಲ ನಿಜ ಪೋತನಾಗಿ ಜಗದಿ ಖÁ್ಯತಿಯ ಪಡೆದಿ ರೀತಿ ಏನಿದು ನಿನ್ನ ಪದಯುಗ ದೂತನಾಲ್ಪರಿವ ಮಾತನು ಯಾತಕೇ ಕಿವಿ ಕೇಳದೋ ಕಪಿ ನಾಥ ಪಾಲಿಸೊ ಎನ್ನ ತಾತಾ 3
--------------
ಗುರುಜಗನ್ನಾಥದಾಸರು
ಮಾತಿನೊಳು ಕಡುಜಾಣ ನೀತಿಯೆಂಬುದ ಕಾಣ ಪ್ರೀತಿಯಿಲ್ಲದ ಪ್ರಾಣನಾಥನಮ್ಮ ಕಪಿಜನಗಳೊಡನಾಡಿ ಚಪಲಚಿತ್ತನುಮಾದ ಕೃಪೆಯಿಲ್ಲವೆಳ್ಳನಿತು ಕೃಪಣನಕಟ ಸ್ತ್ರೀಹತ್ಯ ನರಹತ್ಯ ಬ್ರಹ್ಮಹತ್ಯವಗೈದ ಸಾಹಸಿಯೆದೇನೆಂಬೆ ಘನನಿತಂಬೆ ಪಕ್ಷಪಾತಿಗಳೊಳಗೆ ಈಕ್ಷಿಸಲ್ ಧರೆಯೊಳಗೆ ದಕ್ಷನೀತಗೆ ಸರಿಯೆ ಪೇಳೆ ಸಖಿಯೆ ಶರವೊಂದು ನುಡಿಯೊಂದರಿಂದ ನಲಿವ ತಿರುಕ ಹಾರುವರೊಡನೆ ಚರಿಸುತಿರುವ ಪರಮಸಾತ್ವಿಕ ಮೂರ್ತಿಯೆಂದು ನುಡಿವ ವರಶೇಷಗಿರಿವಾಸ ನೆಂದುಮೆರೆವ
--------------
ನಂಜನಗೂಡು ತಿರುಮಲಾಂಬಾ
ಮಾತೆಂದೆನಬ್ಯಾಡಿ ಧ್ರುವ ಎಲ್ಲಿ ನೋಡಿದರೆ ತಾ ಅಲ್ಲಿಗಲ್ಲಿಗಿಹ್ಯ ಎಲ್ಲ ಕಡೆಯಲ್ಲೇಕೋಮಯವೊ ಸುಲ್ಲಭವಾಗಿಹ್ಯಬಲ್ಲ ಜ್ಞಾನಿಗೆ ಭಾಸುತಿಹ್ಯ ಫುಲ್ಲಲೋಚನ ಪ್ರಾಣದೊಲ್ಲಭನು 1 ಎತ್ತ ನೋಡಿದರತ್ತ ಸುತ್ತಸುತ್ತಲಿಹ್ಯ ನಿತ್ಯವಾಗಿಹ್ಯ ಹೃತ್ಕಮಲದಲಿ ತುತ್ತಾಯಿತ ತಾ ಮಾಡಿ ನಿತ್ಯಸಲಹುವ ಹತ್ತಿಲೆ ಹೊಳೆಯುತ ಚಿತ್ತದಲಿ 2 ಹಿಂದೆನೋಡಿದಿರಿಹ ಮುಂದೇನೋಡಿದಿರಿಹ್ಯ ಸಂಧಿಸಿಹನು ಅಂತರಾತ್ಮದಲಿ ತಂದೆ ತಾಯಿಯು ಬಳಗಾಗಿಹ್ಯ ತಾನೆ ಎಂದಿಗೆ ಅಗಲದೆ ಅನುದಿನದಲಿ 3 ಜನವನದೊಳಗಿಹ್ಯ ಜನಾರ್ಧನ ತಾನು ತನುಮನದೊಳು ಥಳಥಳಸುತಲಿ ಅನುಮಾನವಿಲ್ಲದೆ ಅನಿಮಿಷದಲಿ ನೋಡಿ ಆಣುರೇಣುದಲಿ ಪರಿಪೂರ್ಣನು 4 ಸಾರಿಚಲ್ಲೆದ ಪರಬ್ರಹ್ಮಸ್ವರೂಪವಿದು ಸೂರ್ಯಾಡಬಹುದು ಸುಜ್ಞಾನಿಗಳು ತೋರದು ಎಂದಿಗೆ ಗುರುಕೃಪೆಯಿಲ್ಲದೆ ತರಳಮಹಿಪತಿ ವಸ್ತುಮಯವಿದು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಧವ ನಮ್ಮ ಹೆ ಜ್ಜಾಜಿಯ ಚೆನ್ನಕೇಶವಾ ಪ ಸಾಜದಿ ಶರಣರಿಗೊಲಿವಾ ಸುರ ಭೂಜನು ಪರವಾಸುದೇವಾ ಅ.ಪ ಮರೆತವರಿಗೆ ಮತ್ತೂ ದೂರನು ಇವ ಮರೆಹೊಕ್ಕವರ ಮುಂದಿರುವನು ದುರಿತಗಳಡಗಿಸಿ ದಾಸರ ಪೊರೆವಾ ಪರಮದಯಾಳುವು ಪ್ರಭು ಶ್ರೀನಿಭವ 1 ನಿರ್ಜರ ಮುನಿಗಣ ಲೋಲಾ ಶೀಲಾ ಸಾರಥಿ ಲೀಲಾ ಪರ್ಜನ್ಯ ಪ್ರಭುಪರಿಪಾಲ ನೀಲಾ ದುರ್ಜನ ವಂಶಕ್ಕೆ ಕಾಲಾ 2 ನಿತ್ಯತಂದೆಯು ತಾಯಿಯು ಶ್ರೀರಂಗಾ ಸತ್ಯಸಹೋದರನು ವೆಂಕಟರಂಗಾ ಸ್ತುತ್ಯ ಬಂಧುವು ತಾನೆ ನರಸಿಂಗಾ ಇವ ಪ್ರತ್ಯಕ್ಷನೊ ಅಂತರಂಗ 3 ವೆಂಕಟವರದನೆ ಸದಯಾ ಗುರು ಸಂಕಟಹರ ಬಹುವಿನಯಾ ರಂಗ ಪಂಕಜಸಂಭವ ತನಯಾ 4 ಯಾದವ ಯದುಶೈಲಶೃಂಗಾ ಸಾಂಗ ಮಣಿ ಉತ್ತಮಾಂಗ [ವೇದ] ವೇದ್ಯನೆ ಗರುಡತುರಂಗಾ ಗಂಗಾ ಬಾದರಾಯಣ ಗೀತೋತ್ತುಂಗ 5 ಸಂಪಿಗೆ ಕಂಪಿನ ಸುಂದರ ಸಂಪೂರ್ಣ ಸಂಪತ್ಕುಮಾರ ಶ್ರೀ ಭೂನೀಳ ರಮಣ ತಂಪಿನ ಹೃದಯದ ಪ್ರಾಣಸೂತ್ರಾದಿ ಪೆಂಪಿನಗುರು ಶ್ರೀನಿವಾಸ ಕಲ್ಯಾಣ6 ರಾಘವಜಯ ಸೀತಾರಾಮಾ ಸ್ವಾಮಿ ರವಿಕುಲ ಸುಂದರಸೋಮ ಯೋಗಿ ಜನಾನಂದ ಧಾಮಾ ಪ್ರೇಮಪ್ರಿಯ ಶ್ರೀಶ್ಯಾಮ ಭಾಗವತಾನಂದಪ್ರಿಯ ಪುಣ್ಯನಾಮಾ ಚತು ಸಾಗರಾಂತ ಸಾರ್ವಭೌಮ 7 ಭಕ್ತಮಂಡಲಿ ಕಾಮಧೇನು ಜೇನು ವಿ ರಕ್ತ ಜನರ ಹೃದಯಭಾನು ಮುಕ್ತಿ ಬಯಸಿ ಬಂದೆ ನಾನು ಪ್ರೇಮಾ ಸಕ್ತಿ ಸಿದ್ದಿಯ ನೀಡು ನೀನು 8 ಸಕಲದೇವರೊಳೆಲ್ಲ ನೀನೇ ಹೆಚ್ಚು ಅಕಳಂಕ ಸಾಧುಗಳ ಸವಿಬೆಲ್ಲದಚ್ಚು ನಿಖಿಳಜೀವರೊಳೆಲ್ಲ ಪರಮಾತ್ಮನಚ್ಚು ಸುಕರದಿ ನೆನೆಯುವ ನನಗೆ ನಿನ್ನಯ ಹುಚ್ಚು 9 ಪರಿಪರಿ ಭವಸಂಸಾರಾ ಸಾರಾ ಹೊರಲಾಲೆ ದೂಡುವೆ ದೂರಾ ಪರಮಾತ್ಮಾ ಪದಗಳ ಸೇರಾ ಸಾರಿ ಕರೆಯಲು ಕರಗಳ ತೋರಾ 10 ರಾಜ ಜನಾರ್ಧನ ದಿವ್ಯಂ ದಿವ್ಯಂ ಜಾಜಿ ತುಲಸೀ ಮಾಲ ಭವ್ಯಂ ಯಾಜಿ ಕಮಂಡಲ ದ್ರವ್ಯಂ ಸ್ತವ್ಯಂ ಜನಗಾನ ಶ್ರೋತವ್ಯಂ 11 ಸರ್ವಲೋಕ ಶರಣ್ಯ ಗಣ್ಯ ಉರ್ವಿ ದೇವ ವರೇಣ್ಯ ಹಿರಣ್ಯ ಸ್ವರ್ಣ ವಿರ್ವತ ದರಶ್ಯಾಮ ಪುಣ್ಯ 12
--------------
ಶಾಮಶರ್ಮರು
ಮಾಧವ ಮಾಯ ಜಾಲಗಳ್ ಜಾಣÀ ನೀನೆಲೈ ಮಧುರ ನುಡಿಯೊಳು ಮಾನವಳಿದ ಮೇಲ್ ಪ್ರಾಣವೇತಕೆ ಕಾಣಬಂದಿತು ನಿನ್ನ ಕಪಟವು 1 ಶೋಕ ಕಾರಣವರಿಯದಂತೆ ನೀ ನೇಕೆ ಪೇಳುವೆ ಬರಿದೆ ಎನ್ನನು ಸಾಕು ಸಾಕು ಈ ಸರಸವಾಕ್ಕುಗಳ್ ಶೋಕವಹ್ನಿಗೆ ಆಜ್ಯ ಸುರಿವರೆ 2 ಭಾಮೆ ಕೃಷ್ಣನ ಪ್ರೇಮ ಪುತ್ಥಳಿ ಸಾಮ್ಯರಹಿತವೀ ಸ್ನೇಹವೆನ್ನುತ ಭೂಮಿಯೊಳ್ ಜನ ಪೊಗಳುತ್ತಿದ್ದರು ಈ ಮಹಾಭ್ರಮೆ ಪೋಯಿತೀಗಲೆ 3 ಚಾರುನುಡಿಗಳಾಪಾರವೆನ್ನೊಳು ಸಾರ ಪ್ರೇಮವು ರುಕ್ಮಿಣಿಯೊಳು ಪಾರಿಜಾತದ ಪುಷ್ಪವವಳಿಗೆ ನೀರಸೋಕ್ತಿಗಳೆನ್ನ ಪಾಲಿಗೆ 4 ಅಮರ ಮುನಿಪನು ನಿನ್ನ ಸಮುಖದೊಳ್ ಅಮಿತವಾಗಿ ತಾ ಸ್ತುತಿಸೆ ಭೈಷ್ಮಿಯ ಕುಮತಿಯಿಂದ ತಾನೆನ್ನ ತೆಗಳಲು ಅಮಮಯೆಂದೆಯಾ ಅಪ್ರಮೇಯನೆ 5 ಕುಸುಮ ಮಾಲೆಯು ಉರಗನಾದೊಡೆ ಮಾಳ್ಪುದೇನು ಶರದ ಚಂದ್ರನ ಕಿರಣ ತಪಿಪೊಡೆ ಹಿರಿದು ಕರ್ಮವ ಫಲವಿದೆಲ್ಲವೇ 6 ಕರಿಗಿರೀಶನ ಚಿತ್ತವೀಪರಿ ಇರಲು ಸುಮ್ಮನೆ ಕೊರಗಲೇತಕೆ ಸರುವ ಸಂಗವ ತೊರೆದು ತಪದೊಳು ನಿರತಳಾಗುವೆ ನೀರಜಾಕ್ಷ ಕೇಳ್ 7
--------------
ವರಾವಾಣಿರಾಮರಾಯದಾಸರು
ಮಾಧವ ಮಧುಸೂದನ ಗೋವರ್ಧನ ಪ ದೋಷನಿವಾರಣ ಶೇಷಾರಿಗಮನ ವಾಸುಕಿಗಿರಿಶಯನ 1 ಕೀಟಕ ಸಂಹರ ಹಾಟಕಾಂಬರ ತಾಟಕಿಪ್ರಾಣಹರಣ 2 ಕೌಸ್ತುಭಮಾಲಾ ಕುಜನರ ಕಾಲ ಕಂಸಾಸುರಾದಿ ಮರ್ದನ 3 ಗೋಕುಲವಾಳಿದ ಗೋಪಿಯರ್ವರದ ಗೊಪ ಗೋಪತಿ ನಂದನ 4 ಮಂದರ ನಿಲಯ ಸಿಂಧುಜಾಪ್ರಿಯ ಬಂಧುವೆ ಅನಾಥಜನ 5 ಜಗದೋದ್ಧಾರಣ ಜಗತ್ರಯಮೋಹನ ಜಗಜೀವನ ಪಾವನ 6 ಶಂಖಚಕ್ರಾಂಕಿತನೆ ಕಿಂಕರಜನ ಪ್ರೀತ ಶಂಖಸುರಾದಿ ಮರ್ದನ 7 ಯದುಕುಲಸಂಭವ ಸದಯ ಯಾದವ ಸದಮಲಸುಖಸದನ 8 ಹರಿಗೋವಿಂದ ಪರಮಾನಂದ ನರಹರಿ ಸಿರಿರಮಣ 9 ಸಿರಿನರಸಿಂಗ ಪರಿಭವಭಂಗ ಪರತರ ಗಿರಿಧಾರಣ 10 ನಿತ್ಯನಿರಾಮಯ ನಿರ್ಗುಣ ನಿರ್ಭಯ ನಿರಂಜನ 11 ಪರಮಪುರುಷ ಹರಿ ಸರ್ವೇಶ ಸುರಮುನಿನುತಚರಣ 12 ನಿಮಗೋಚರ ಜಗದಾಧಾರ ಅಘನಾಶ ಭಜಕಜನ 13 ವೇದಾದಿನಮಿತ ವೇದವೇದಾತೀತ ಸಾಧುಸಜ್ಜನಪ್ರಾಣ 14 ವರದಶ್ರೀರಾಮ ನಿರತರ ಪ್ರೇಮ ಪರಿತರ ಪರಿಪೂರ್ಣ15
--------------
ರಾಮದಾಸರು
ಮಾನವ ನಿರುತ ಶ್ರೀ ಸುಶೀಲೇಂದ್ರ ತೀರ್ಥಾರ ವರಹಜ ತಟವಾಸ ರಾಯರ ಕರುಣ ಪಾತ್ರರ ಪ ಭಾನುಜ ಸಮಾನ ದಾನಿ ದೀನ ಪಾಲರÀ | ಮಾನಿತ ಸನ್ಮೌನಿ ವರಿಯ ಜ್ಞಾನ ಶೀಲರ 1 ಪ್ರಾಣಪತಿಯ ಮತಾಬ್ಧಿಗೆ ಪಠೀಣರೆನಿಪರ ಕ್ಞೋಣಿ ತಳದಿ ಇವರಿಗೆ ಸರಿಗಾಣೆ ಜಾಣರ 2 ಶಾಮಸುಂದರವಿಠಲನ ನಿಸ್ಸೀಮ ಭಕುತರ ಸ್ವಾಮಿ ಸುವೃತೀಂದ್ರ ಕೋಮಲ ಕರಸಂಜಾತರ 3
--------------
ಶಾಮಸುಂದರ ವಿಠಲ
ಮಾನವ ಪ ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ ಶರಧಿ ಚಂದಿರನಾದ ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ ಪರಮ ಸಾಧು ಸಹ್ಲಾದ ಅ.ಪ ತರಣಿ ತನಯನ ಸೂತ ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ ಮರುತ ದೇವನ ಪದಕೆ ಬರುವ ಯತಿಗಳ ದೂತ ವರದೇಂದ್ರ ತೀರ್ಥರಿಗೆ ಪ್ರೀತ || ಗುರುಧೇನು ಪಾಲ ವಿಜಯ ದಾಸವರ್ಯರ ಮಮತ ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ ನಮಗೀತ ಗತಿ ಪ್ರದಾತ 1 ದುರಿತ ವಿದೂರ ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ ಸಾರಿದಂಥ ಸುಧೀರ || ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ ಸುಜನ ಕೋರಿಕೆಯ ಮಂದಾರ ಭೂರುಹದ ತೆರದಿ ಘುನ ಸೂರೆ ಕೊಡುವನುದಾರ ದುರಿತವಿಪಿನ ಕುಠಾರ 2 ಇವರ ಕವನ ಪಠಣ ಶ್ರವಣ ಮನನಗಳಿಂದ ಲವಕೇಶವಾಗದು ಜವನ ಭವನದ ಬಂಧ ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ ಗೈದ ಮನಜ ದಿವಾಂಧ | ಭುವನದೊಳು ಬೆಳಗುತಿಹ ಇವರ ಮಹಿಮಾನಂದ ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ ನೆಲಸಿಹವು ನಲವಿಂದ 3 ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ ಹರಿಗೆ ಪಂಚಪ್ರಾಣ || ಅರುಹಲೇನಿವರ ಚರಣನಂಬಿದ ಸುಜನ ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ ಸೇರಿದರು ನಿಜ ಸ್ಥಾನ 4 ಶಾಮಸುಂದರ ವಿಠಲ ಸ್ವಾಮಿಗತಿ ಪ್ರಿಯದಾಸ ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ ತಿಮಿರ ದಿನೇಶ ಭೂಮಿ ವಿಬುಧರ ಪೋಷ || ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ ಸೋಮಸುಪ್ರಭೆಯಂತೆ ಪಸರಿಸುತÀ ಸಕಲದೇಶ ಸುಜನ ಕುಮುದ ವಿಕಾಸ ಗೊಳಿಸಿಗರೆದುದುಲ್ಹಾಸ 5
--------------
ಶಾಮಸುಂದರ ವಿಠಲ
ಮಾನವ ಮೂಢಾ | ಕೇಳದೆ ನೀ ಕೆಡಬ್ಯಾಡಾ | ಶೀಲವರಿತುಕೋ ದೃಢಾ | ಹೇಳುವೆ ನಿಜ ಹಿತ ನೋಡಾ ಪ ಹಾದ್ಯರಿಯದೆ ಪ್ರಚಂಡಾ ಓದಿಕೆ ಯಾಕ ಉದಂಡಾ | ಸಾಧಿಸೋ ಸಾಧನ ಕಾಂಡದ ಬೋಧಿಪ ಮಾರ್ತಾಂಡ | ವಾದ ವಿತ್ತಂಡ ಬಿಡು ಪಾಷಂಡಾ 1 ಹರಿಗುಣ ಕೊಂಡಾಡು ನೀ ಅಖಂಡಾ ಕೇಳು ಕೇಳು ಪ್ರಾಣಿ | ಕರಣ ತ್ರಯಂಗಳ ಬೆರಿಸಿ ಮೊರೆಹೋಗಾಭಾವನೆ ಬಲಿಸಿ | ಗುರುವಿಗೆ ಭಾರೊಪ್ಪಿಸಿ ಇರು ಸಂಶಯವಾ ತ್ಯಜಿಸಿ | ನೆರೆ ಜೌಭಾಗಿಸಿ ತನ ಬಿಡು ಹೇಸಿ ಕುಜನ ದುರಾಶೀ ನದಿಯೊಳು ಸೋಸಿ 2 ಗರುವ ಮುರಿದು ನಿದ್ರ್ವಂದಾ ಚರಿಸಿ ಹಿರಿಯರ ವೃಂದಾ | ಪರಿಯಲಿ ನಡಿನೀ ನೆಂದಾ ಗುರುವರ ಮಹಿಪತಿ ಕಂದಾ | ಪಡದರ ಬಂದಾ | ಜನ್ಮಕ ಛಂದಾ ನೋಡಿದರಿಂದಾ ಕೇಳು ಪ್ರಾಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾನವ ಸಿಂಗನಾದನು ಪ ರಂಗಮಾನವ ಸಿಂಗನಾಗಲು ಭಂಗಾರ ಗಿರಿಯ ಶೃಂಗಗಳಲ್ಲಾಡೆ ಹಿಂಗದೆ ಎಂಟು ಮಾತಂಗ ಸಪುತ ದ್ವೀ- ಪಂಗಳು ಕಂಪಿಸೆ ವಿಗಡದಿ ಅ.ಪ. ವನಜ ಭವನಂದನರಾನಂದದಿ ವನಧಿಯೊಳಿದ್ದ ವನಜನಾಭನ ವನಜಾಂಘ್ರಿ ದರುಶನಕ್ಕೋಸುಗದಿ ಘನ ವೈಕುಂಠ ಪಟ್ಟಣ ಸಾರೆ ವಿನಯರಲ್ಲದ ಜಯನು ವಿಜಯನವ- ರನು ತಡೆಯಲು ಮುನಿದೀರ್ವರಿಗೆ ದನುಜಾಂಗದಿಂದ ಜನಿಸಿರೋ ಎಂದು ಮುನಿಗಳು ಶಾಪವನ್ನು ಈಯೆ 1 ದಿಕ್ಕು ಎಂಟರೊಳು ಕಕ್ಕಸರೆನಿಸಿ ದಿಕ್ಕು ಪಾಲಕರ ಲೆಕ್ಕಿಸದಲೇವೆ ಸೊಕ್ಕಿ ತಿರುಗುವ ರಕ್ಕಸರಾಗಲು ಮುಕ್ಕಣ್ಣ ಬಲದಿಂದಕ್ಕೆ ಜದಿ ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು ಮುಕ್ಕಿ ಮುಣಿಗಿ ಧರ್ಮಕೆ ವಿರೋಧಿಸಿ ಸಿಕ್ಕದಂತಲ್ಲಲ್ಲಿ ತುಕ್ಕುತಿರೆ 2 ಇತ್ತ ಶಾಪದಿಂದಲಿತ್ತಲೀರ್ವರಿಗಾ ಪೊತ್ತ ಸುರಾಂಗದಲಿತ್ತಲೋರ್ವವನಿಯು ಕಿತ್ತು ಒಯ್ಯಲು ಬೆಂಬುತ್ತಿ ಹರಿಯು ಕೊಲ್ಲೆ ಇತ್ತ ಹಿರಣ್ಯನುನ್ಮತ್ತದಿಂದ ಸುತ್ತುತಿರುವಾಗ ಪುತ್ರನು ಭಾಗವ ತ್ತೋತ್ತಮನಾಗಿ ಸರ್ವೋತ್ತಮ ಬ್ರಹ್ಮನ ಕರವ ಲೋ- ಕತ್ರಯವರಿವಂತೆ ಬಿತ್ತಿದನು3 ಸೊಲ್ಲು ಕೇಳುತಲಿ ಎಲ್ಲೆಲೊ ನಿನ್ನ ದೈ- ವೆಲ್ಲೊ ಮತ್ತಾವಲ್ಲೆಲ್ಲಿಹನೆನುತಲಿ ನಿಲ್ಲದರ್ಭಕನ್ನ ಕಲ್ಲು ಕೊಳ್ಳಿ ಮುಳ್ಳು ಕರವಾಳ ಬಿಲ್ಲು ನಾನಾ ಎಲ್ಲ ಬಾಧೆಯನ್ನು ನಿಲ್ಲದೆ ಬಡಿಸೆ ಎಳ್ಳನಿತಂಜದೆ ಎಲ್ಲೆಲ್ಲಿಪ್ಪನೆಂದು ಸೊಲ್ಲನು ಬೇಗದಿ ಸಲ್ಲಿಸೆನೆ 4 ಏನು ಕರುಣಾಳೊ ಏನು ದಯಾಬ್ಧಿಯೊ ಏನು ಭಕ್ತರಾಧೀನನೊ ಏನೇನು ನಾನಾ ಮಹಿಮನೊ ಏನೇನೊ ಏನೊ-ಈ- ತನ ಲೀಲೆ ಕಡೆಗಾಣರಾರೊ ದಾನವಾಭಾಸನ ಮಾನಹಾನಿ ಗೈಯೆ ಸ್ಥಾಣು ಮೊದಲಾದ ಸ್ಥಾನದಲ್ಲಿ ಸರ್ವ ದೀನರಿಗೆ ದತ್ತ ಪ್ರಾಣನಾಗ 5 ತುಟಿಯು ನಡುಗೆ ಕಟ ಕಟ ಪಲ್ಲು ಕಟನೆ ಕಡಿದು ನೇಟನೆ ಚಾಚುತ ಪುಟಪುಟ ನಾಸಪುಟದ ರಭಸ ಕಠಿನ ಹೂಂಕಾರ ಘಟುಕಾರ ನಿಟಿಲನಯನ ಸ್ಫುಟಿತ ಕಿಗ್ಗಿಡಿ ಮಿಟಿಯೆ ಹುಬ್ಬಿನ ನಿಟಿಲ ರೋಷದಿ ಮಿಟಿಯೆ ಚಂಚು ಪುಟದಂತೆ ರೋಮ ಚಟುಲ ವಿಕ್ರಮುದ್ಧಟ ದೈವ 6 ನಡುಕಂಭದಿಂದ ಒಡೆದು ಮೂಡಿದ ಕಡು ದೈವವು ಸಂಗಡಲೆ ಚೀರಲು ಬಡ ಜೀವಿಗಳು ನಡುಗಿ ಭಯವ ಪಡುತಲಿ ಬಾಯ ಬಿಡುತಿರೆ ಕಡೆಯೆಲ್ಲೊ ಹೆಸರಿಡಬಲ್ಲವರಾರೊ ತುಡುಗಿ ದುಷ್ಟನ ಪಡೆದ ವರವ ಪಿಡಿದು ಅವನ ಕೆಡಿಸಿ ಹೊಸ್ತಿಲೊ- ಳಡಗೆಡಹಿದನು ಪವಾಡದಲಿ 7 ವೈರಿಯ ಪಿಡಿದು ಊರುಗಳಲ್ಲಿಟ್ಟು ಘೋರ ನಖದಿಂದ ಕೊರೆದು ಉದರವ ದಾರುಣ ಕರುಳಹಾರ ಕೊರಳಲ್ಲಿ ಚಾರುವಾಗಿರಲು ಮಾರಮಣ ಸಾರಿಗೆ ಭಕ್ತಗೆ ಕಾರುಣ್ಯಮಾಡಿ ಶ್ರೀ ನಾರೀಶನಾನಂದದಿ ತೋರುತಿರೆ ಸುರ- ವರರ್ನೆರೆದು ಅಪಾರ ತುತಿಸಿ ಪೂ- ಧಾರೆ ವರುಷ ವಿಸ್ತಾರೆರೆಯೆ 8 ನೃಕೇಸರಿಯಾಗೆ ಭಕುತಗೆ ಬಂದ ದುಃಖವ ಕಳೆದು ಸುಖವನೀವುತ್ತ ಅಕಳಂಕದೇವ ಲಕುಮಿಪತಿ ತಾ- ರಕ ಮಂತ್ರಾಧೀಶ ಸುಕುಮಾರ ಅಖಿಳ ಲೋಕಪಾಲಕ ಪ್ರಹ್ಲಾದಗೆ ಸಖನಾಗಿ ಇಪ್ಪ ಸಕಲ ಕಾಲದಿ ಭಂಜನ ವಿಜಯವಿಠ್ಠಲ ಮುಕುತಿ ಈವ ಭಜಕರಿಗೆ9
--------------
ವಿಜಯದಾಸ
ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು ಪ ಜ್ಞಾನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಅ.ಪ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಈ ಮನಸ್ಸು ಇಟ್ಟು 1 ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ2 ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ | ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ || ತವಕ ಬೀಳದಲೆ ಪೂಜೆ ವಿಧಾ | ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ 3 ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಿಂದ ಬಳಿಕ ಮಾಧÀವರಿಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ 4 ದೋಷರಾಶಿಗೆ ದ್ವೇಷನಾಗಿ ಈ ಶರೀರವÀ ಘಾಸಿಮಾಡದೆ | ಪಾದ || ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ | ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು5
--------------
ವಿಜಯದಾಸ
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು