ಒಟ್ಟು 907 ಕಡೆಗಳಲ್ಲಿ , 89 ದಾಸರು , 729 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸು ಮಹಮಾಯೆ ಕರುಣ ಕ-ಟಾಕ್ಷದಿಂದಲಿ ತಾಯೆ ಪ.ದಾಕ್ಷಾಯಿಣಿ ದೈತ್ಯಾಂತಕಿವರನಿಟಿ-ಲಾಕ್ಷನ ರಾಮಿ ನಿರೀಕ್ಷಿಸು ಜನನೀ ಅ.ಪ.ವಾಸವಮುಖವಿನುತೆ ರವಿಸಂ-ಕಾಶೆ ಸುಗುಣಯೂಥೇಭಾಸುರಮಣಿಗಣಭೂಷೆ ತ್ರಿಲೋಕಾ-ಧೀಶೆ ಭಕ್ತಜನಪೋಷೆ ಪರೇಶೆ 1ಗುಹಗಣಪರಮಾತೆ ದುರಿತಾ-ಪಹೆ ದುರ್ಜನ ಘಾತೆಬಹುಕಾಮಿತಪ್ರದೆ ಭಜಕಜನೋರ್ಜಿತೆಮಹಿತೆ ಯೋಗಿಹೃದ್ಗುಹನಿವಾಸಿನಿಯೆ 2ಶುಂಭಾಸುರಮಥಿನಿ ಸುರನಿಕು-ರುಂಬಾರ್ಚಿತೆ ಸುಮನಿರಂಭಾದಿಸುರನಿತಂಬಿನೀ ಜನಕ-ದಂಬಸೇವಿತಪದಾಂಬುಜೆ ಗಿರಿಜೆ 3ಅಷ್ಟಾಯುಧಪಾಣಿ ಸದಾಸಂ-ತುಷ್ಟೆ ಸರಸವಾಣಿಸೃಷ್ಟಿಲಯೋದಯಕಾರಿಣಿ ರುದ್ರನಪಟ್ಟದ ರಾಣಿಪರಾಕುಕಲ್ಯಾಣಿ4ನೇತ್ರಾವತಿ ತಟದ ವಟಪುರ-ಕ್ಷೇತ್ರಮಂದಿರೆ ಶುಭದಾಸುತ್ರಾಣಿ ಲಕ್ಷ್ಮೀನಾರಾಯಣಿ ಸ-ರ್ವತ್ರ ಭರಿತೆ ಲೋಕತ್ರಯನಾಯಕಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನ ಪ.ತ್ರ್ಯಕ್ಷಾದಿ ವಿಬುಧಪಕ್ಷಪರಾತ್ಪರಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾ ಅ.ಪ.ವೇದಬಾಹಿರರಾಗಿ ಖಲರು ಬಹು ಬಾಧಿಸುವರುಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರುಆದಿಮೂರ್ತಿ ತವಪಾದಾಶ್ರಯ ಸು-ಬೋಧಾಮೃತರಸ ಸ್ವಾದುಗೊಳಿಸುತಲಿ 1ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸುಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸುಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರದುರ್ವಾರದುರಿತದುರ್ಗನಿಗ್ರಹನೆ2ಸತ್ಯಾತ್ಮ ಪಾವನಪಂಕಜನಾಭನೀಲಾಭ್ರದಾಭಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭಚಿತ್ತವಾಸ ಶ್ರೀವತ್ಸಾಂಕಿತ ಪರ-ಮಾರ್ಥಬೋಧ ಮಹತ್ತತ್ತ್ವನಿಯಾಮಕ 3ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶಕವಿಜನಾನಂದಭವನ ಭವಭಯಾ-ರ್ಣವ ಬಾಡಬಮಾಧವಮಧುಸೂದನ4ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪಕರ್ತಾಕಾರಯಿತ ಸುಗುಣಕಲಾಪಪರಮಪ್ರತಾಪಸುತ್ರಾಣಲಕ್ಷ್ಮೀನಾರಾಯಣಪರವಸ್ತು ಶಾಶ್ವತ ಪವಿತ್ರ ಚರಿತ್ರ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಕ್ಷಿಸೆನ್ನ ರಕ್ಷಿಸೆನ್ನನು ಸುರಯಕ್ಷರಕ್ಷಕ ಮಹಾದಕ್ಷ ಯತಿ ಮುನಿ ಪಕ್ಷ ವಿರೂಪಾಕ್ಷಕುಕ್ಷಿಯೊಳು ನೀ ನೆಲಸಿ ಎನ್ನ ಕೃಪೇಕ್ಷಣದಿ ಕೈವಿಡಿದುರಕ್ಷಿಪಅಕ್ಷಯರಾಕ್ಷಸಾಂತಕ ಪಕ್ಷಿವಾಹನ ದೇವಪ್ರಿಯಪವೇದವೇದ್ಯಸುಜನರಕ್ಷ ನಾದಭೇದ್ಯಸಾಧನ ನಾಲ್ಕನು ಸಾಧಿಪ ಸಾಧಕನಾದ ದೇವನೆ ನಿನ್ನ ಪಾದವ ಸ್ತುತಿಪೆನುವೇದ ಸ್ಮøತಿಗಳು ಆದಿಶೇಷನುಸಾಧಿಸುತ ಭೇದಿಸಿಯೆ ನಿನ್ನನುಹಾದಿ ಕಾಣದು ಪೊಗಳ್ವಡೆನಗೆ ಅರಿಯದಾ-ಗಿದೆ ಅನಾದಿ ಮೂರುತಿ1ಹಾರಹೀರ ಫಲಿಸಿದಂಥಾ ಶೂರ ವೀರಸಾರವಿಲ್ಲದ ಸಂಸಾರ ದೂರ ವಿ-ದೂರ ಭಯ ಜರ್ಜರ ಕರುಣಾಕರಸಾರಪೂರಿತಕಾರಣಾತ್ಮಕಮಾರವೈರಿಯೆ ಧೀರ ಜಗದುದ್ಧಾರ ಎನಗೆತೋರಿ ಶಕುತಿಯಸಾರಹೃದಯನೆಗೌರಿ ವಲ್ಲಭನೆ2ಪರಮಪುರುಷ ಪಾರ್ವತೀಪ್ರಿಯಶರಣ ಹೃದಯ ನಿರುತ ಪಾಲಿಪ ಶಂಭುಹರಪಿನಾಕಿಶಿವವರಚಿದಾನಂದಗುರುಅವಧೂತಾತ್ಮ ನಿರುಪಮ ನಿರ್ಮಾಯನಿರವಯ ನಿರುತಪರಮಶಿವ ವಿಶ್ವಹೃದಯಪರತರಾತ್ಮಕಪರಮಮಂಗಳಪರಮಚೈತನ್ಯಾತ್ಮ ವಸ್ತುವೇ3
--------------
ಚಿದಾನಂದ ಅವಧೂತರು
ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ ಪಪಕ್ಷಿವಾಹನನ ವಕ್ಷಸ್ಥಳದಿರಕ್ಷಿತಳಾದೆ ಸುಲಕ್ಷಣದೇವಿ ಅ.ಪನಿಗಮವೇದ್ಯನ ಗುಣಗಳ ಪೊಗಳುತಲಿಮಿಗೆ ಸಂತೋಷದಲಿಅಗಣಿತಾಶ್ಚರ್ಯನ ಕೊಂಡಾಡುತಲಿಬಗೆ ಬಗೆ ರೂಪದಲಿಖಗವರವಾಹನನಗಧರನಿಗೆ ಪ-ನ್ನಗ ವೇಣಿಯು ಬಗೆ ಬಗೆಯಿಂದರ್ಚಿಸಿಹಗಲಿರುಳೆಡೆ ಬಿಡದಲೆ ಹರಿಯನು ಬಹುಬಗೆಯಲಿ ಸೇವಿಪಭಾಗ್ಯದ ನಿಧಿಯೆ 1ಇಂದಿರೆಶ್ರೀ ಭೂದುರ್ಗಾಂಬ್ರಣಿಯೇ ಸು-ಗಂಧ ಸುಂದರಿಯೆಇಂದುಶೇಖರ ಮೋಹಿಪ ಮೋಹಿನಿಯಸುಂದರವನೆ ಕಂಡುಚಂದಿರಮುಖ ಮುದದಿಂದಲಿ ಶ್ರೀಗೋ-ವಿಂದನು ತಾಳಿದ ಮೋಹಿನಿ ರೂಪವನೆಂದು ಮನದಿ ಆನಂದ ಪಡಲು ಸುರವೃಂದವ ಸ್ತುತಿಸೆ ಮುಕುಂದನ ರಮಣಿಯೆ 2ಕಮಲಾನನೆಕಮಲಾಲಯೆಕಮಲಾಕ್ಷಿಕಮಲೋದ್ಭವೆ ಕಮಲೆಕಮಲಾಸನಪಿತನ ಸತಿಯೆ ಭಾರ್ಗವಿಯೆಕಮಲಾಂಬಿಕೆ ಪಿಡಿದಿಹಕಮಲಪುಷ್ಪಮಾಲೆಯು ಹರುಷದಿ ಶ್ರೀ-ಕಮಲನಾಭ ವಿಠ್ಠಲಗರ್ಪಿಸುತಲಿಕಮಲಪತ್ರದಳಾಕ್ಷಗೆ ನಮಿಸಿ ಸ್ವ-ರಮಣನ ಕರುಣಕೆ ಪಾತ್ರಳೆ ಸುಂದರಿ 3
--------------
ನಿಡಗುರುಕಿ ಜೀವೂಬಾಯಿ
ರಕ್ಷಿಸೋ ಲೋಕನಾಯಕನೆ-ನೀ ಎನ್ನ-ರಕ್ಷಿಸೋ ಲೋಕನಾಯಕನೇ ಪಎಷ್ಟೆಷ್ಟು ಜನ್ಮ ಕಳೆದೆನೋ ಇನ್ನೆಷ್ಟೆಷ್ಟು ಜನ್ಮ ಪಡೆವೆನೋ ||ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟುಇಷ್ಟವ ಪಾಲಿಸು ಇಭರಾಜವರದನೆ 1ಬಾಲತನದಿ ಬಹು ಬೆಂದೆನೋ ನಾನಾಲೀಲೆಯಿಂದಲಿಕಾಲಕಳೆದೆನೋ ||ಲೋಲಲೋಚನ ಎನ್ನ ಮೊರೆಯ ಕೇಳುತ ಬೇಗಜಾಲವ ಮಾಡದೆ ಪಾಲಿಸೈ ನರಹರಿ 2ಮುದುಕನಾಗಿ ಚಿಂತೆಪಡುವೆನೋ ನಾಕದಡು ದುಃಖವ ಪಡಲಾರೆನೋ ||ಸದರವಲ್ಲವು ಶ್ರೀಪುರಂದರವಿಠಲಮುದದಿಂದ ರಕ್ಷಿಸೊ ಖಗರಾಜಗಮನ 3
--------------
ಪುರಂದರದಾಸರು
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
--------------
ಪುರಂದರದಾಸರು
ರಂಗನಹುದೋ ನೀನು ಕನಕಾಚಲರಂಗನಹುದೋ ನೀನುತುಂಗಮಹಿಮ ಕೃ-ಪಾಂಗ ಚೆಲುವ ಮುದ್ದು ರಂಗಲಕ್ಷ್ಮಿಯ ರಮ-ಣಾಂಗ ಜಪಿತಮೂರ್ತಿಪದುರುಳರಕ್ಕಸನು ವೇದ ಕದ್ದೊಯ್ಯೆಮೀನಾಗಿ ತಂದೆಯದನ ಕೂರ್ಮನಾಗಿಗಿರಿಯ ಪೊತ್ತು ಎರೆದೆ ಸುರರಿಗೆ ಅಮೃತವವರಾಹನಾಗಿ ಧರೆಯ ಕದ್ದವನಶಿರವ ಖಂಡಿಸಿ ನೃಕೇಸರಿಯಾಗಿಯೆಕಂಬವನೊಡೆದು ನಿಶಾಚರನ ಸಂಹ-ರಿಸಿದೆ ರಣಧೀರಮಾಧವ1ಪುಟ್ಟ ಮಾನವನಾಗಿ ಬಲಿಯ ದಾನವ ಬೇಡಿಅಷ್ಟು ಬ್ರಹ್ಮಾಂಡವನೆಲ್ಲಈರಡಿಮಾಡಿತುಟ್ಟ ತುದಿಗೆ ಅವನ ಶಿರದ ಮೇ-ಲಿಟ್ಟು ದ್ವಾರವ ಕಾಯ್ದನಾ ಭೂಸುರರಿಗೆಕೊಟ್ಟ ಮೇದಿನಿಯ ದಾನವ ಭಳಿರೆ ಜಗಜಟ್ಟಿ ಪರಶುರಾಮ ಕ್ಷತ್ರಿಯ ಛೇದನ2ದಶರಥನ ಸುತನಾಗಿ ವಸುಧಜೆಯ ಕಳೆದುಅಸಮ ಕಪಿವೀರರ ನೆರಪಿ ಸೇತುವೆಕಟ್ಟಿಅಸದಳ ರಾಕ್ಷಸರ ಇಂದ್ರಜಿತುದಶಶಿರಅತಿಕಾಯರ ಕುಂಭಕರ್ಣಅಸಹಾಯ ರಣಶೂರರ ಛೇದಿಸಿ ಸೀತಾಶಶಿಮುಖಿಯ ಕರೆತಂದ ರಘುರಾಮಕಂಠೀರವ3ದೇವಕೀಸುತನಾಗಿ ಬಾಣನ ಭಂಗಿಸಿಮಾವ ಕಂಸನ ಶಿಶುಪಾಲ ನರಕಾಸುರ ಕೌ-ರವ ವೀರರನು ಕೊಂದು ಪಾಂಡುರಾಜನ ಪುತ್ರ-ರನು ಪಾಲಿಸಿ ಪೃಥವಿ ಪಾವನರಾದರನು ರಕ್ಷಿಸಿ ಬೌ-ದ್ಧಾವತಾರ ತಾನಾಗಿ ವ್ರತ ಭಂಗಿಸಿದೆ ನೀನು4ತೇಜಿಯನೇರಿ ನೇಣನೆ ಹಿಡಿದು ಪಾಪದಬೀಜವನುರುಪಿ ಪುಣ್ಯದ ಬಿತ್ತನುರುಹಿಯೆಸೋಜಿಗಸಹಸ್ರರ ಕನಕಗಿರಿಮೂಜಗದೊಳು ವಿಸ್ತಾರವಾಗಿಹಘನತೇಜೋ ಮೂರುತಿ ಗಂಭೀರ ಸಿದ್ಧ ಪರ್ವತರಾಜ ಸದ್ಗುರು ಚಿದಾನಂದಾವಧೂತ5
--------------
ಚಿದಾನಂದ ಅವಧೂತರು
ರಾಮ ರಾಮಾಯೆಂದು ಮಾರುತಿಯು ನಡೆದು |ಸೋಮವದನೆ ಜಾನಕಿಯನು ಹುಡುಕಾ ಪಹರಿಯಿಂದ ಗುರುತು ಪಡೆದು ತನ್ನ ಶಿಖದಲಿ |ಧರಿಸಿಕೊಂಡತಿಶಯ ಭಕುತಿಯಲಿ ||ತೆರಳಿ ಮುಂದು ಮುಂದಕೆ ಕಡಲ ಸಮೀಪದಿ ವಾ- |ನರಾಧೀಶ ಮಾಡಿದ ವಾಸವನೂ1ರವಿಜನ ಭಯದಿಂದ ಕಪಿಗಳೆ- |ಲ್ಲವು ಎದೆಯನೊಡೆದು ನಗದೊಳು ಕುಳಿತಿರಲು ||ಪವನಜನು ಬಂದು ವಿಚಾರವ ಮಾಡಲು ಸಾಗ- |ರವ ದಾಟಲೊಬ್ಬಗೊಶವಲ್ಲವೆಂದರೆಲ್ಲರಲ್ಲಿ 2ನಮ್ಮನು ರಕ್ಷಿಸೋ ಕುಲಮಣಿಯೆ ವಾಸುದೇವನ |ಮೊಮ್ಮಗನೆ ಎಂದು ಕಪಿಗಳು ಯಾಚಿಸೆ ||ಗಮ್ಮನೆ ಹಾರಿ ರಕ್ಕಸಿ ಹೊಟ್ಟೆಯ ಹೊಕ್ಕು ದಾಟಿ ಮತ್ತೇ |ಒಮ್ಮೆ ಒಬ್ಬಳನ್ನು ಸೀಳಿ ಪುರಪ್ರವೇಶ ಮಾಡಿದ3ಗಿಡಗಿಡ ಚರಿಸುತ ಸ್ಥಳ ಸ್ಥಳದಲಿ ಬಲು |ಹುಡುಕುತ ಮೂಜಗ ಪೂಜಿತನ ||ಮಡದಿಯಾಕೃತಿಯನು ಕಾಣಲಾಕ್ಷಣದೊಳು |ತಡೆದನಲ್ಲಿಯೇ ಪದಗಳ ಮುಂದಕ್ಕಿಡದಲೇ4ಋಷಿಗಳಂದದಿ ಪ್ರಾಣೇಶ ವಿಠಲನೆನುತಿರೆ |ಶಶಿಮುಖಿಯಳು ಆಂಜನೇಯ ಪದ |ಬಿಸಜಾಂಘ್ರಿಗಳಿಗೆರಗಿ ಜಯ ಜಯವೆಂದು |ಉಸಿರಿದ ರಘುಪತಿಯ ಸುದ್ದಿ ವಿಸ್ತರದಲಿ 5
--------------
ಪ್ರಾಣೇಶದಾಸರು
ವರವ ಕೊಡೆ ತಾಯೆ ವರವ ಕೊಡೆ ಪ.ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆನೆರೆನಂಬಿದೆನು ನಿನ್ನ ಚರಣಕಮಲವನುಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ 1ಹೊಳೆವಂಥ ಅರಸಿನ ಹೊಳೆವ ಕರಿಯಮಣಿಸ್ಥಿರವಾಗಿ ಕಟ್ಟುವಂಥ ವರವ ಕೊಡೆತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆಯಾವಾಗಲಿರುವಂಥ ವರವ ಕೊಡೆ 2ಬಾಗಿಲ ತೋರಣ ಮದುವೆ ಮುಂಜಿ ನಾಮಕರಣಯಾವಾಗಲಾಗುವಂಥ ವರವ ಕೊಡೆಬಂಧುಬಳಗ ಹೆಚ್ಚಿ ಹೆಸರುಳ್ಳಮನೆಕಟ್ಟಿಉಂಡಿಟ್ಟಿಡುವಂಥ ವರವ ಕೊಡೆ 3ಹಾಲ ಕರೆಯುವ ಮೇಲಾದ ಸರಳೆಮ್ಮೆಸಾಲಾಗಿ ಕಟ್ಟುವಂಥ ವರವ ಕೊಡೆಕಂಡಕಂಡವರಿಗೆ ಕರೆದು ಮೃಷ್ಟಾನ್ನವತಿಳಿ ನೀರು ಕೊಡುವಂಥ ವರವ ಕೊಡೆ 4ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿಅಷ್ಟೈಶ್ವರ್ಯವು ಪುತ್ರಸಂತಾನವಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವೈದ್ಯವ ನಾನರಿಯೆ - ಭವರೋಗದ-|ವೈದ್ಯ ನೀನೆ ಹರಿಯೆ ಪನೀ ದಯದಿಂದೆನ್ನ ರಕ್ಷಿಸು-ಆದಿವೈದ್ಯ ಮುನ್ನ |ಪಾದೋದಕವನು ಎನಗೆ ಕೊಡಿಸು ಸರ್ವ-||ವ್ಯಾಧಿನಿವಾರಣ ಕಷಾಯ ನೀ ಕೊಡು 1ಹರಿನಿನ್ನ ಕರುಣವೆಂಬ-ಸ್ಮರಣೆಯ |ತ್ವರಿತ ಙ್ಞÕನದಿಂದ ||ಉರುತರ ಮಹಾತ್ಮೆಯ ಎನಗೆ ಕೊಡಿಸು ಸರ್ವ ||ದುರಿತನಿವಾರಣ ಕಷಾಯ ನೀ ಕೊಡು 2ಕೃಷ್ಣ ನೀ ಕೃಪೆವಿಡಿದು-ಕಪಟದ-|ಉಷ್ಣವಾಯುವಳಿದು ||ವಿಷ್ಣುಶಕ್ತಿಯೆಂದ ಅಭಯವ ಎನಗಿತ್ತು |ಇಷ್ಟವ ಸಲಿಸುವ ತೃಪ್ತಿಪಡಿಸುವಂಥ 3ನಿನ್ನ ದಾಸ ನಾನು-ದುರಿತಗ-|ಸಳೆನ್ನ ಕಾಡುವುವೇನು ||ಚೆನ್ನಾಗಿ ಕಾಯಕೆ ಶಕ್ತಿಯನಿತ್ತು ದೃಢ-|ವನ್ನು ಮಾಡಿ ಶ್ರೀಹರಿ ಸಲಹೆನ್ನನು 4ಪಂಡಿತದಯಾಸಿಂಧು-ಕಾಡುವ-|ಪಾಂಡುರೋಗ ಕೊಂದು ||ಪುಂಡರೀಕಾಕ್ಷಶ್ರೀಪುರಂದರವಿಠಲ ಅ-|ಖಂಡಮೂರುತಿ ಶ್ರೀಹರಿ ಸಲಹೆನ್ನನು 5
--------------
ಪುರಂದರದಾಸರು
ಶರಣು ಮಂಜುನಾಥಾ | ಪಾಲಿಸು || ಶರಣ ಜನರ ಪ್ರೀತಾ ||ಮರೆಯದೆ ನಿನ್ನಯ ಚರಣವ ನಂಬಿದ |ತರಳನ ಮೇಲ್ ದಯವಿರಿಸೈ ಜಯ ಜಯ 1ಧರ್ಮಾಧರ್ಮವನೂ ಶೋಧಿಪ | ಧರ್ಮದೇವ ನೀನು ||ಧರ್ಮ ಸುಕರ್ಮದ ಮರ್ಮವನರಿಯುತಾ ||ಧರ್ಮಸ್ಥಳದಲಿ ನೆಲಸಿದೆ ಜಯ ಜಯ 2ಕಪ್ಪಕಾಣಿಕೆಗಳನೂ | ದಿನ ದಿನ ತಪ್ಪದೆ ತರಿಸುವನೂ ||ಸರ್ಪಧರನೆ ನಿನ್ನಪ್ಪಣೆಯಿಂದ | ಣ್ಣಪ್ಪನು ನರರನು -ಒಪ್ಪಿಸಿ ಜಯ ಜಯ 3ದುಷ್ಟ ಜನರು ಬರಿದೇ | ಕೊಡುತಿಹ | ಕಷ್ಟವ ನಿನಗೊರೆದೇ |ಸೃಷ್ಟಿಪಾಲ ಯನ್ನ ರಕ್ಷಿಸಬೇಹುದು |ಕೆಟ್ಟೆನಯ್ಯಾ ನಿಟಿಲಾಕ್ಷನೆ ಜಯ ಜಯ 4ಚಂದ್ರಧರನೆ ಕಾಯೋ | ಕರುಣಾ-||ನಂದ ವರವನೀಯೋಮಂದರಧರಗೋ|ವಿಂದದಾಸನನಿಂದು |ಚಂದದಿ ಪಾಲಿಸು |ವಂದಿಪೆ ಜಯ ಜಯ 5
--------------
ಗೋವಿಂದದಾಸ
ಶರಣು ಶರಣು ಶರ್ವಾಣಿಯೆ ಈಕ್ಷಿಸುಶರಣು ಶರ್ವನ ರಾಣಿ ಕಲ್ಯಾಣೀಶರಣು ಶರಣು ಸರ್ವೇಶ್ವರಿ ರಕ್ಷಿಸುಶರಣ ಜನರ ಶ್ರೇಣಿ ಫಣಿವೇಣಿ ಪಹಿಮಕರ ಶೈಲ ಕುಮಾರಿ ಸುರಾಸುರನಮಿತೆ ಉಮಾದೇವಿ ಮಹದೇವಿಪ್ರಮಥಾಧಿಪೆ ಕೌಮಾರಿ ಪರಾತ್ಪರೆವಿಮಲೆ ಕೋಮಲಾಂಗಿ ಶ್ವೇತಾಂಗಿ 1ವೈರಿಕಳೌಘ ವಿಹಾರಿಣಿ ಪೂರಿಣಿಗೌರಿ ಸೋದರಿ ನೀನೆ ಪ್ರವೀಣೆಸೈರಣೆ ಸುರ್ಜಿತೆ ತೋರುವ ಕಾರಣೆಗೌರೀ ಗಗನವಾಣೀ ಶುಕವಾಣಿ 2ಮಂದಸ್ಮಿತಮುಖ ಚಂದ್ರಕೋಟಿಸಂಕಾಶೆ ವಿಶ್ವರೂಪೆ ಜಿತಪಾಪೆಸುಂದರಾಂಗಿ ಗೋವಿಂದದಾಸನಹೃನ್ಮಂದಿರ ಸುಮವಾಸೆ ಸಂತೋಷೆ 3
--------------
ಗೋವಿಂದದಾಸ
ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ಮಹೇಶ್ವರಿಘೋರಮಹಿಷಿನಿಶುಂಭ ಮರ್ದಿನಿಧೀರ ಚಂಡಮುಂಡಾರ್ದನಿ ಜಯತು ಜಯತೂ ಪಜ್ವಾಲಿನೀ ಅಕ್ಷಾರ ಮಾಲಿನೀನೀಲಕುಂತಳೆ ಭಾರ್ಗವೀಶೂಲಿನೀ ಹರಿಲೋಲೆ ನೀಗುಣಶೀಲೆ ಗಾಯನ ರಾಣಿ ಜಯತು ಜಯತೂ 1ವಾರಿಜಾಲಯೆ ವೀಣಾಪಾಣಿಯೇಮಾರಹರನ ಅರ್ಧಾಂಗಿಯೇಕ್ಷೀರಸಾಗರಕನ್ಯೆ ಗಿರಿಸುತೆಕೀರವಾಣಿ ಸರಸ್ವತೀ ಜಯತು ಜಯತೂ 2ರಮೆಯೆ ರಕ್ಷಿಸು ಉಮೆಯೆಪಾಲಿಸುಕಮಲಸಂಭವನರಸಿಯೆಅಮಿತ ಮಂಗಲೆ ಅಮರ ದೈವವೆಕಮಲಮುಖಿ ವಾಗ್ದೇವಿಯೆ ಜಯತು ಜಯತೂ 3ಕರವಮುಗಿವೆ ಸ್ಮರಿಸಿ ನಿನ್ನನುಶಿರವ ಚಾಚುವೆ ಚರಣಕೆಕರುಣದಲಿ ಗೋವಿಂದದಾಸನಪರಸಿ ರಕ್ಷಿಸಬೇಹುದು ಜಯತು ಜಯತೂ 4
--------------
ಗೋವಿಂದದಾಸ
ಶಿವ ಸತ್ತ ಎಂಥ ಆಶ್ಚರ್ಯವು ಇದು ನೋಡಿ |ಕವಿಗಳು ಮನಕ ತಂದು ||ಭುವನತ್ರಯಗಳಲ್ಲಿ ಪ್ರಖ್ಯಾತವಾಗಿದೆ |ಅವಿವೇಕಿಗಳ ಮಾತಲ್ಲಾ ಪಅಧಮರು ಬಹು ಬಗೆಯಿಂದಲ್ಲಿ ಘಳಿಸೀದಾ |ಬದುಕು ವ್ಯರ್ಥವಾಹದು ||ಬುಧರ ಪದಾರ್ಥವು ಸಾರ್ಥಕವಾಹದೆಂಬು |ದಿದೆ ಸಾಕ್ಷಿ ಎನಬಹುದೂ 1ಭೂಭುಜರಿಗೆ ಭೂಷಣಾದವು ಆಯುಧ |ಈ ಭೂಮಿ ಪೊತ್ತ ವ್ಯಾಳಾ ||ಆ ಭಿಕ್ಷುಕನ ಕುಟುಂಬವ ರಕ್ಷಿಸುತಿಹ್ಯದು |ಶೋಭಿಸುತಿಹ್ಯ ಕಪಾಲಾ 2ಮಂದೀಯ ನಂಜಿಸುತಿಪ್ಪದು | ಆತನಹಿಂದೆ ಮುಂದಿರುವ ಗಣಾ ||ನಂದೀ ಪಿತೃಗಳಿಗೆ ಕೈವಲ್ಲ್ಯಾ ತೋರಿತು |ಸಂದೇಹವಿನಿತಿಲ್ಲವೂ 3ಸೋಮಕಂಣಾದ ಜಗತ್ತೆಕ್ಕ ದಿಕ್ಕಿಗೆ |ಸ್ವಾಮಿ ಎನಿಸಿದ ವನ್ಹೀ ||ಧೀಮಂತರಾತನ ಮಡದೀಯ ಪೂಜಿಸಿ |ಶ್ರೀಮಂತರಾಗೂವರೂ 4ಮೌನಿಗಳಿಗೆ ಚರ್ಮ ವೈಷ್ಣವರಿಗೆ ಭಸ್ಮ |ತಾನು ಪ್ರೀಯಕರಾದೀತು ||ಪ್ರಾಣೇಶ ವಿಠಲಾನೊಳರ್ಧಾಂಗ ವಾಗಭಿ |ಮಾನಿಯೊಳರ್ಧವಿಟ್ಟಾ 5
--------------
ಪ್ರಾಣೇಶದಾಸರು
ಶ್ರೀ ಕಂಚಿ ಕಾಮಾಕ್ಷಿ82ಶರಣು ಶರಣು ಶರಣು ಶರಣು ಕಾಮಾಕ್ಷಿಶರಣು ಮೋಹಿನಿಮಾವಾಣಿಶರ್ವಾಣಿಪಹರಿಸಿರಿಸರಸ್ವತಿ ಸಹ ಪ್ರಜ್ವಲಿಸುವೆಗಿರಿಜೆ ಶರಣು ಕಂಚಿನಿಲಯೆ ಸತತಕಾಯೆ ಅ ಪಏಕಾತ್ಮಾನಂದಮಯನಿಖಿಳಗುಣಾರ್ಣವಜಗಜ್ಜನ್ಮಾದಿಗಳಿಗೆ ಮುಖ್ಯ ಕಾರಣೆ ವ್ಯಾಪ್ತೆಅಕಳಂಕ ಪುಂಸ್ತ್ರೀಗಾತ್ರೆ ಚಿನ್ಮಯೆ ವೃಂದಾರಕರಿಗೆಪೀಯೂಷಕರುಣಿಸಿ ಉಣಿಸಿದೆ1ಭಾಮಾ ರುಕ್ಮಿಣಿ ಸೀತಾ ಸೋಮಸೋದರಿ ರಮೆಕಮಲಾಸನಾದಿ ಸುಮನಸವಂದಿತೆ ತ್ರಾತೆಕಮಲನಾಭನ ಸೇವೆ ವನಮಾಲೆ ಚಾಮರಾದ್ಯಮಿತ ರೂಪದಿ ಮಾಳ್ಪ ಮಹಾಲಕ್ಷ್ಮೀ ನಮೋ ನಮೋ 2ಪಕ್ಷಿವಾಹನ ಸಾಕ್ಷಿ ಚೇತಾನಿರ್ಗುಣ ಅಧೋಕ್ಷಜ ಸರ್ವಾಂತರಾತ್ಮನ ತೀವ್ರಪ್ರೇಕ್ಷಿಸೊ ಜ್ಞಾನ ಭಕುತಿ ಮತಿ ಎನಗಿತ್ತುರಕ್ಷಿಸೆ ಸರಸ್ವತಿ ಫಣಿರ ಪಕ್ಷಿಪ ನುತೆ 3ಹೇಮಅಂಕುಶಪಾಶಇಕ್ಷುದಂಡವು ಪುಷ್ಪಕೋಮಲಹಸ್ತ 2 ನಾಲ್ಕಲ್ಲಿ ಶೋಭಿತವುಕಾಮಿತವರಪ್ರದೆ ಕಾತ್ಯಾಯನಿ ಉಮಾಹೈಮವತಿಯೆ ಶಿವೆ ದಯಮಾಡಿ ಪೊರೆಯೆನ್ನ 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ ತತ್ ಶಕ್ತಿ ಪ್ರದರ್ಶಯನ್ಸೂತ್ರವು ಮಣಿಗಳೊಳಂತೆ ಧಾರಕಹರಿವೃತತಿಜಪಿತ ವಿಷ್ಣು ಪ್ರಸನ್ನ ಶ್ರೀನಿವಾಸಗತಿಪ್ರಿಯತರೆ ಶಿವೆ ಸತತ ಪಾಲಿಸೆ ಎನ್ನ5
--------------
ಪ್ರಸನ್ನ ಶ್ರೀನಿವಾಸದಾಸರು