ಒಟ್ಟು 2437 ಕಡೆಗಳಲ್ಲಿ , 116 ದಾಸರು , 1864 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮರೆದೆನೊ ರಂಗ ನಿನ್ನ ಮರೆದೆ ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಪ ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ ನಾಟುವುದು ಅವರ ಕಡೆ ಅನುರಾಗದಿ ನೀಟಾದ ಭೋಜನವ ಬಯಸುವೆನು ಯಮರಾಯ ಭಂಗ ಕೇಳಿ ಎಚ್ಚರಿಯದಲೆ1 ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ ಹೊತ್ತು ಹೊತ್ತಿಗೆ ಅವರ ಕೊಂಡಾಡುತ ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ2 ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ ಬಿಡದೆ ಮಾಡಿದ ಪುಣ್ಯಪಾಪಗಳೆದು ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು3 ಅನ್ನವಿತ್ತವನ ಪಾಪಗಳು ನಿರಂತರದಿ ಅನ್ನದಾಶ್ರಯ ಮಾಡಿಕೊಂಡಿಪ್ಪವು ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ ಧನ್ಯನಾದೆನು ನಾನು ಪರರ ಪಾಪವ ಭುಜಿಸಿ 4 ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ ಉಬ್ಬುವೆನು ಊರು ಕೇರಿ ಹಿಡಿಸದಂತೆ ಸುಬ್ಬನ ಸೂರೆಯಂತೆ ಪರರ ಅನ್ನವನುಂಡು ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ 5 ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ ಕಡೆಗೆ ಪೋಗುವುದೊಂದು ನಿಲುವುದೊಂದು ತಡೆಯದಲೆ ಸಂತಾನ ಪಡೆವುದೊಂದೀತೆರ ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ6 ಆವಾವ ಬಗೆರುಚಿ ಜಿಹ್ವಗೆ ತೋರುತಿದೆ ಆವಾವ ಬಗೆ ನರಕ ಬೇರೆಯುಂಟು ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ ಈ ಜೀವ ಹಿತವಾಗುವಂತೆ ಮಾರ್ಗವ ತೋರು 7
--------------
ವಿಜಯದಾಸ
ನಿನ್ನ ಮಹಿಮೆಗಿಂಥವರು ಹೊಣೆಯೆ ? ಪ ಚಿನ್ಮಯನೆ ಸಕಲಭುವನಾಧಾರವೆಂಬುದನುಬಣ್ಣಿಸಲು ಎನ್ನಳವೆ ಪನ್ನಗೇಂದ್ರನು ಹೊಣೆಯೆ ? ಅ ವಿಧಿ ಕೌಸ್ತುಭ ರತ್ನವರ ಪೀತ ವಸನ ಕ್ಷೀರಾಬ್ಧಿ ಹೊಣೆಯೊಶರಣರಿಚ್ಛೆಯಲಿ ನೀನಿದ್ದುದಕೆ ದ್ರೌಪದಿಯುಕರಿರಾಜ ಶಂಭು ಅಂಬರೀಷ ಹೊಣೆಯೊಕರುಣಿಯು ಉದಾರಿ ನೀನೆಂಬುದಕೆ ಧ್ರುವರಾಯಮರುತಸುತ ಸಾಂಧೀಪ ಹೊಣೆಯೊ ಕೃಷ್ಣ 1 ಸುಲಭ ಭಕುತರ ಕಾಯ್ವನೆಂಬುದಕ್ಕೆಲೊ ದೇವಫಲುಗುಣನು ವಿದುರ ಅಕ್ರೂರ ಹೊಣೆಯೊಛಲದಂಕನೆಂಬುದಕೆ ಬಾಣನು ಹಿರಣ್ಯಕನುಜಲಧಿ ದಶಮುಖ ಕಾರ್ತವೀರ್ಯ ಹೊಣೆಯೊಒಲಿಸಿ ನಿನ್ನನು ತುತಿಸಿ ಮುಕುತಿಯನು ಪಡೆದುದಕೆಸಲೆ ಶ್ರುತಿಯು ಗಿರಿಜೆ ಅಜಮಿಳನು ಹೊಣೆಯೊನಳಿನಾಕ್ಷ ಸತ್ತ್ವಗುಣ ನಿನಗೆ ಉಂಟೆಂಬುದಕೆಸಲಿಲಜೋದ್ಭವ ಭೃಗುಮುನೀಂದ್ರ ಹೊಣೆಯೊ 2 ವಾತ ಸತ್ತ್ವಗುಣ ಹೊಣೆಯೊಶ್ರೀಕಾಂತ ನೀನಿತ್ತ ವರವು ಸ್ಥಿರವೆಂಬುದಕೆನಾಕೇಶಜಿತನ ಪಿತನನುಜ ಹೊಣೆಯೊಲೋಕದೊಳು ಕಾಗಿನೆಲೆಯಾದಿಕೇಶವ ಭಕ್ತಸಾಕಾರನೆಂಬುದಕೆ ಸಕಲ ಭುವನವೆ ಹೊಣೆಯೊ 3
--------------
ಕನಕದಾಸ
ನಿನ್ನನೆ ತಿಳಿದು ನೀ ನೋಡು ಕಂಡ್ಯಾನೀ ನನ್ನ ತಿಳಿಯೆ ನೀ ಶಿವನು ಕಂಡ್ಯಾ ಪ ಆದಿ ಮಧ್ಯಂತರ ಅನಾದಿ ಕಂಡ್ಯಾನಾದ ಬಿಂದು ಕಳಾತೀತ ಕಂಡ್ಯಾಭೇದಾಭೇದಕೆ ಅಭೇದ ಕಂಡ್ಯಾ ನೀವಾದ ಸುವಾದ ವರ್ಜಿತನು ಕಂಡ್ಯ 1 ಮೂರು ಗುಣಕೆ ನೀ ಮೂಲ ಕಂಡ್ಯನೀನಾರು ಅರಿಗಳಿಗತ್ತತ್ತ ಕಂಡ್ಯತೋರುವುದಕೆ ನೀ ತೋರ್ಕೆ ಕಂಡ್ಯನೀ ಮಾರನಟ್ಟುಳಿಗೆ ಮಹೇಶ ಕಂಡ್ಯ 2 ಮಂಗಳ ತರಕೆ ಮಂಗಳನು ಕಂಡ್ಯ ನೀಮಂಗಳ ಮೂರುತಿ ಮಹಾತ್ಮ ಕಂಡ್ಯಮಂಗಳ ವಸ್ತುಮಾಪತಿಯು ಕಂಡ್ಯ ನೀಮಂಗಳನಿಗೆ ಮಾಯೆ ಮಾತು ಕಂಡ್ಯ 3 ಸಿಂಧು ಕಂಡ್ಯ4 ಪಾದ ಸೇರು ಕಂಡ್ಯಗುರು ಕಟಾಕ್ಷವ ನೀನು ಪಡೆಯೋ ಕಂಡ್ಯಗುರುವೆಂದು ಎಲ್ಲವನರಿಯೋ ಕಂಡ್ಯಗುರು ಚಿದಾನಂದ ನೀನೆನ್ನು ಕಂಡ್ಯಾ 5
--------------
ಚಿದಾನಂದ ಅವಧೂತರು
ನಿನ್ನವನು ನಾನಯ್ಯ ಅನ್ಯರವನಲ್ಲಾನಿನ್ನ ಕರುಳಿನ ಬಳ್ಳಿ 'ುಡಿಯು ಮ'ಪತಿರಾಯ ಪನಿನ್ನ ಪೌತ್ರನ ಮಗಳ ಬಳ್ಳಿಯೊಳು ಜನಿಸಿ ನಾನಿನ್ನ ಮ'ಮೆಯ ಗುರುತ ಅರಿಯಲಿಲ್ಲಾಸಣ್ಣವನು ನಾನೀಗ ತಪ್ಪು ಒಪ್ಪಿದ ಮೇಲೆಇನ್ನು ದಯಮಾಡು ಮುತ್ತಜ್ಜ - ಅಜ್ಜರ ಅಜ್ಜ 1ನಿನ್ನ ಕರುಳಿನ ಬಳ್ಳಿ ಎಲ್ಲಿ ಹುಟ್ಟಿದರೇನುಮೂಲದಿಂದಲ್ಲವೇ 'ುಡಿಗೆ ಆಹಾರಮೂಲ'ುಡಿಗಳ ಮರೆತು ಆಹಾರ ಕೊಡದಿರಲು'ುಡಿಯು ಬಾಡುವದಿಲ್ಲವೇನೊ ತಾತಯ್ಯ 2ನಿನ್ನವನು ನಾನೆಂದು ಒಪ್ಪಿಸಿದ ಗುರುರಾಯಇನ್ನು ಸಲಹುವ ಭಾರ ನಿನ್ನದಯ್ಯಾನಿನ್ನ ಘನತೆಗೆ ಕೂಂದು ತರದಂತೆ ಕಾಪಾಡುಘನ್ನ ಭೂಪತಿ 'ಠ್ಠಲನ ತೋರು ದಯಮಾಡು 3
--------------
ಭೂಪತಿ ವಿಠಲರು
ನಿನ್ನವರ ಧರ್ಮ ವಿಹಿತವಾಗುವುದು ಮ ತ್ತನ್ಯರಾಚರಿಸಿದ ಧರ್ಮ ಅಧರ್ಮ ಪ ಕಡಲ ಮಥನದಲಿ ಕಪರ್ದಿ ಕಾಳಕೂಟ ಕುಡಿಯಲು ಕಂಠಭೂಷಣವಾಯಿತು ಒಡನೆ ರಾಹು ಕೇತು ಸುಧೆಯ ಪಾನದಿಂದ ಮಡಿದರೆಂದು ಮೂರ್ಲೋಕವೇ ಅರಿಯೆ 1 ಬಲಿನಿನ್ನ ಮುಕುಟ ಕದ್ದೊಯ್ಯ ಪಾತಾಳಕೆ ಸಲೆ ಭಕ್ತನೆಂದು ಬಾಗಿಲ ಕಾಯ್ದೆ ಇಳೆಯೊಳು ಸುರರಿಗೆ ಗೋ ಭೂ ಹಿರಣ್ಯವಿತ್ತಾ ಖಳ ಜರಾಸಂಧನ ಕೊಲಿಸಿದೆ ಹೋಗಿ 2 ಪತಿವ್ರತ ಧರ್ಮದಿ ಮೃತರಾದ ತ್ರಿಪುರರ ಸತಿಯರು ಶಿವನಿಂದ ಹತರಾದರು ಸತಿ ಉಡುಪ ಪತಿಯಿಂದಲಿ ನಿತ್ಯ ಸೇವೆಯೊಳಿರುವಳು 3 ಮೇದಿನಿಯೊಳು ಪ್ರಾಣಿ ಹಿಂಸಕನೆನಿಸಿದಾ ವ್ಯಾಧನ ಯಮಿಕುಲೇಶನ ಮಾಡಿದೆ ವೇದೋಕ್ತ ಕರ್ಮವಾಚರಿಸಿದ ಜಿನನೊಳ್ ಪ್ರಾದುರ್ಭೂತನಾಗಿ ಕೆಡಹಿದೆ ತಮಕೆ 4 ಪರಾಶರನು ಸತ್ಯವತಿಯ ಸಂಬಂಧಿಸೆ ಶ್ರೀರಮಣ ನೀನವತರಿಸಿದಲ್ಲಿ ಭವ ಸರೋಜ ಕನ್ನಿಕೆಯಸಾರಲು ಬಿಡುವ ಜಗನ್ನಾಥ ವಿಠಲ 5
--------------
ಜಗನ್ನಾಥದಾಸರು
ನಿನ್ನಾಜ್ಞದವನೊ ನಾನೆನ್ನನೊಪ್ಪಿಸದೆಬಿನ್ನಹ ಚಿತ್ತೈಸಿ ಎನ್ನ ಪಾಲಿಸೊ ಕೃಷ್ಣ ಪ ಏಳು ಸುತ್ತಿನಕೋಟೆ ಯಮನಾಳು ಮುತ್ತಿಕೊಂಡುಪಾಳು ಮಾಡೇವೆಂದು ಪೇಳುತಿರಲುಆಳು ಸಾಮಗ್ರಿಯ ಅಪಾರ ಬಲಮಾಡಿಕೋಳುಹೋಗದ ಮುನ್ನ ಕೋಟೆ ರಕ್ಷಿಸಬೇಕು 1 ಆರು ಮೂರರ ಬಾಧೆ ಆರು ಎಂಟರ ಬಾಧೆಕ್ರೂರರೈವರ ಬಾಧೆ ಹೋರುತಲಿದಕೋಆರಿಂದ ನಿರ್ವಾಹವಾಗದು ಇವರನುಮೇರೆಲಿಡುವನೊಬ್ಬ ಧೀರನ್ನ ಬಲಮಾಡೊ2 ಲಕ್ಷ ಎಂಭತ್ತು ನಾಲ್ಕು ಜೀವರಾಶಿಗಳೊಳುಸೂಕ್ಷ್ಮದ ಕೋಟೆಂದುಪೇಕ್ಷಿಸದೆಪಕ್ಷಿವಾಹನ ನೀನು ಪ್ರತ್ಯಕ್ಷ ನಿಂತರೆಅಕ್ಷಯ ಬಲವೆನಗೆ ರಕ್ಷಿಸೊ ಸಿರಿಕೃಷ್ಣ 3
--------------
ವ್ಯಾಸರಾಯರು
ನಿನ್ನೊಳೇನ ಬೇಡಿಕೊಂಬೆನೋ ನಾ ಸನ್ನುತಾಂಗ ಪ ನಿನ್ನ ಪಾದವನ್ನು ಭಜಿಪ ಮನದ ಹೊರತು ಅ.ಪ ಮನೆಯು ಬೇಡ ಮಠವು ಬೇಡ ಧನವು ಬೇಡ ಕನಕ ಬೇಡ ಮನದ ಶುದ್ಧಿಯಿಂದ ನಿನ್ನ ನೆನೆವ ಮನದ ಭಾವ ಹೊರತು1 ಸತಿಯು ಸುತರು ಗತಿಯು ಮತಿಯು ಹಿತರು ಸಖರು ನೀನೇ ಎಂಬ ಮತವನಾಂತು ನಿನ್ನ ಪೂಜೆ ವ್ರತವು ಸಾಕು ಎನ್ನದೇ 2 ಸಿಂಧು ಯಮುನೆ ಕೃಷ್ಣೆ ತುಂಗಭದ್ರೆ ತಪತಿ ಕಪಿಲೆ ಮಂಗಳ ಕಾವೇರಿ [ಹೇವiವತಿಯ] ಮಾಂಗಿರೀಶ ನೀನೆ ಎನ್ನದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿರ್ಜರ ಸಾರ್ವ ಭೌಮಾ ದನುಜಕುಲಭೀಮಾ ಭೀಮಾ ರಘು ಸದ್ವಂಶದೊಳು ದ್ದಾಮಾ ಕಾದುಕೋ ನಿನ್ನ ಭಕ್ತ ಸ್ತೋಮ ಮಂಗಳನಾಮ ಹನುಮ ತ್ಪ್ರೇಮಾತಮ ಸೀತಾ ಮನೋಭಿರಾಮ ಪ ಸರಸಿಜೋದ್ಭವನ ಮಂದಿರದೊಳರ್ಚನೆಗೊಂಡು ನಿರುತಾ ಪಾವನತರ ಚರಿತಾ ಸರ್ವದೇವರ ದೇವ ಇಷ್ಟಾಕರ ರಸನ್ವಯ ನೃ ಪರಕರವಾರಿರುಹ ಪೂಜಿತನಾಗಿ ದಶರಥಾ ನರಸಿ ಜಠರದಿ ಜನಿಸಿ ಮೆರೆದಿಹ ರಾಮಾ 1 ಗಾಧಿನಂದನನ ಸುಮೇಧಾ ರಕ್ಷಿಸಿದಾ ಗಾಧನಂದ ಬಲಬೋಧಾ ಮೇದಿನಿ ಜಾತಳನೊಲಿಸಲು ನೀಲ ಪ ಯೋಧರ ಶಾಮಲ ಸುಮನಸ ವಿ ರೋಧಿ ಲೋಕಮಯ ಸದೆದ ರಘುರಾಮಾ 2 ಚತುರವಿಂಶತಿ ದಶಶತ ಸಹಸ್ರ ಜಿತಾದ್ಯಮಿತಾ ಆದ್ಯಮಿತ ರೂಪ ಜಗನ್ನಮಿತಾ ಅತುಳ ಭುಜಬಲ ರಾವಣನ ಸಂ ತತಿ ಸವರಿ ಲಂಕಾಧಿಪತ್ಯ ನತ ವಿಭೀಷಣಗಿತ್ತಾ ವರದೇಂದ್ರ ಯತಿ ವರದ ಜಗನ್ನಾಥ ವಿಠ್ಠಲ ರಾಮಾ 3
--------------
ಜಗನ್ನಾಥದಾಸರು
ನೀಚಮತಿ ಎಲೆ ನೀಚಮತಿ ಊಚನೆನಿಸಿಕೊಂಬ ಯೋಚನೆ ಬಿಡುಕಂಡ್ಯ ಪ ತರಿಯದೆ ಕುಟಿಲತ್ವ ಮರೆಯದೆ ದುಶ್ಚಟ ಧರೆಯ ಭೋಗವ ನೆಚ್ಚಿ ಶರಣರ್ವೇಷÀವÀ ತಾಳಿ ಮರವೆ ಮಾಯದಿ ಬಿದ್ದು ಒರಲುವ ನರರಿಗೆ ಬರಿದೆ ಬೋಧಿಪೆನೆಂಬ ಭ್ರಮೆಯಿಂದ ಫಲವೆ 1 ಮಾಯಮೋಹಿಗಳ ಉಪಾಯದಿ ಕೂಡಿಸಿ ಸೇವಿಸದಾಹಾರ ಸೇವಿಸುತನುದಿನ ಕಾಯಬಲಿಸಿ ಕುಣಿವ ಮಾಯಮೋಹಿಯ ಬರಿ ಬಾಯ ಬ್ರಹ್ಮತ್ಯಬಂಧ ಬಯಲಪ್ಪುದೇನೆಲೆ 2 ಧರಿಸಿದ ಲಾಂಛನ ಅರಿಯದೆ ಮೇಲೆ ನೀ ಬರಿದೆ ಕಾವಿಯನ್ಹೊದ್ದು ಕರದಿ ಕಮಂಡಲ ಧರಿಸಿ ಮರುಳರಿಗೆಲ್ಲ ಪರತತ್ತ್ವವರಿಯಲು ಜರೆಮರಣದು:ಖವು ಪರಹಾರಮೆಂತೆಲೆ 3 ಭವಭವದಲಿ ಬಟ್ಟಬವಣೆಯ ಸ್ಮರಿಸಿದೆ ಭವಗೆಲಿಸುವ ಅನುಭವ ತಿಳಿಯದೆ ಸ ದ್ಭವಿಗಳ ನೆರೆಯಿಸಿ ಕವಿತೆ ಬಿಡಿಸಿ ಬಹು ಸವಿಮಾತ್ಹೇಳಲು ಮೂಲಭವಭೀಜಳಿಯುವುದೆ 4 ತನ್ನ ತನ್ನದುಯೆಂಬ ಭಿನ್ನವಿಲ್ಲದೆಸದಾ ತನ್ನ ಸ್ವರೂಪ ಪರರನ್ನು ಬಗೆದು ನಿತ್ಯ ಸನ್ನುತ ಶ್ರೀರಾಮನುನ್ನತಂಘ್ರಿಗೆ ಪೊಂದಿ ಧನ್ಯರಾಗದೆ ನರಕುನ್ನಿಯೆನಿಸುವರೇನೋ5
--------------
ರಾಮದಾಸರು
ನೀದಯಮಾಡಿ ಸಲಹೊ ಎನ್ನ ಪರಮಾತ್ಮ ಭವ ತೊಡರು ಬಿಡಿಸೊ ಪರಮಾತ್ಮ ಪ -----ಸಂಖ್ಯಾನೂರು ಬಳಲುತಿರೆ ಪರಮಾತ್ಮ ಇವರ ಸಂಚಿತವು ಏನೋ ಕಾಣೆನು ಪರಮಾತ್ಮ ಕೋಟಿ ಉದ್ಯೋಗದವರು ---- ಪರಮಾತ್ಮ ಪ್ರಪಂಚಕ್ಕೆ ಸರಿ ಕಾಣಲಿಲ್ಲ ಪರಮಾತ್ಮ 1 ನಾನಾ ಪರಿಯಿಂದ ನಡೆದೆ ಕಷ್ಟದಿಂದ ಪರಮಾತ್ಮ ನಿಮ್ಮ ಧ್ಯಾನವು ಎನ್ನ ಮನಕೆ ನಿಲಕದು ಪರಮಾತ್ಮ ------- ಜೀವಕೆ ಇನ್ನು ಪರಮಾತ್ಮ ಸುಜ್ಞಾನಿಗಳಿಗೆ ಜೀವನ ನೀನು ಪರಮಾತ್ಮ 2 ಸಾರಜಗವ ರಕ್ಷಿಸುವಂಥ ಪರಮಾತ್ಮ ನಿ- ಸ್ಸಾರ ಮಾಡುವರೆ ಎನ್ನ ಪರಮಾತ್ಮ ವೀರ ' ಹೊನ್ನ ವಿಠ್ಠಲಾ’ ಶ್ರೀ ಪರಮಾತ್ಮ ಗುಣ ಗಂಭೀರ ಪುಣ್ಯಪರುಷ ಕೇಳೊ ಪರಮಾತ್ಮ 3
--------------
ಹೆನ್ನೆರಂಗದಾಸರು
ನೀನಹುದೊ ಎನ್ನ ಸ್ವಾಮಿ ಧ್ರುವ ಅನಾಥ ಬಂದು ನೀ ಙÁ್ಞನ ಶಿಖಾಮಣಿ ಧ್ಯಾನಕ ಸಾಧನಿ ನೀನೆ ಎನ್ನ ಗುರುಮುನಿ 1 ಜೀವಕ ಜೀವ ನೀ ಭಾವಕ ಭಾವ ನೀ ದೇವಾಧಿದೇವ ನೀ ಕಾವ ನೀನೆ ಕರುಣಿ ನೀ 2 ಬಾಹ್ಯಾಂತ್ರ ಪೂರ್ಣ ನೀ ಇಹಪರದಾತ ನೀ ಮಹಿಗೆ ಮಹೀಪತಿ ನೀ ಸಾಹ್ಯಮಾಡೊ ಸಗುಣಿ ನೀ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಿಲ್ಲದ ಜಗವಿನಿತಿಲ್ಲ ನೀನಲ್ಲದೆ ಎನಗಾರಿಲ್ಲ ಪ ನೀನೆ ನೀನೆಯಾಗಿ ಕಾಣಿಸಿ ಜಗ ಮಾಯಮಾಣಿಸುವಿ ನಿಜ ಸುಳ್ಳಲ್ಲ ಅ.ಪ ಹೊತ್ತುಗೊತ್ತು ಎಲ್ಲ ನಿನ್ನಿಂದೇ ನಿತ್ಯ ಅನಿತ್ಯವೆಲ್ಲ ನಿನ್ನಿಂದೇ ಸತುಚಿತುಚಿದ್ವಸ್ತು ತತ್ವಸರ್ವತ್ರಸೂತ್ರವೆಲ್ಲ ನಿನ್ನಿಂದೇ 1 ಸೃಷ್ಟಿ ಕ್ಷೇತ್ರ ತೀರ್ಥ ನಿನ್ನಿಂದೇ ಅಷ್ಟಸ ಭುವಗಳ್ನಿನ್ನಿಂದೇ ಹುಟ್ಟುಸಾವು ಎಲ್ಲ ಸ್ಪಷ್ಟದಿ ನೋಡಲು ಸೃಷ್ಟಿ ಪ್ರಳಯವಷ್ಟು ನಿನ್ನಿಂದೇ 2 ನಿಖಿಲ ವೇದ ನಿನ್ನಿಂದೇ ಅಖಿಲದೇವರೆಲ್ಲ ನಿನ್ನಿಂದೇ ಸಕಲಮಂತ್ರಮೂಲ ಭಕುತಾಭಿ ಶ್ರೀರಾಮ ಮುಕುತಿಸಂಪದ ಸಿದ್ಧಿ ನಿನ್ನಿಂದೇ 3
--------------
ರಾಮದಾಸರು
ನೀನುಳಿಯೆ ರಕ್ಷಕರ ಕಾಣೆನೀ ಜಗದೊಳಗೆ ಶ್ರೀನಿವಾಸ ಜಗನ್ನಿವಾಸ ಪ ದೀನರಕ್ಷಕ ನಿಖಿಲ ಮಾನವರ ಮಾನಾಭಿ ಮಾನದೊಡೆಯನು ನೀನೆಯಲ್ಲದಿಲ್ಲಾ ಅ.ಪ ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ ಚಕ್ರವರ್ತಿಯು ಶರಣುಹೊಕ್ಕೆನೆನಲು ಚಕ್ರವನು ಪಿಡಿದು ನೀನಕ್ಕರೆಯೊಳೈತಂದು ನಕ್ರವದನವ ಸೀಳಿ ರಕ್ಷಿಸಿದೆ ಗಜವಾ ದೇವಾ 1 ಹಿಂದೆ ನಾನಾ ನಗರಿಯಿಂದ ಬಹದಾರಿಯೊಳು ಸಂದುಗಳೀಚಲು ಭಂಡಿ ಸಂಜೆಯೊಳಗೆ ಮುಂದಾಗ ಜೊತೆಯೊಳಗೆ ಬಂಧುಜನದಲ್ಲಿ ನೀ ಬಂದು ಬೆಳಕನು ತೋರಿ ಮುಂದೆಗೂಡಿದೆ ಕೃಷ್ಣಾ 2 ಇಂದು ನಿಜಸತಿಯು ನೊಂದಳುಬ್ಬಸರೋಗ ದಿಂದ ಗಾಳಿಯದೀಪದಂದಮಾಗಿ ನಂದಿ ಪೋಗದ ಮುನ್ನ ಬಂದು ನೀಮರೆಯಾಗು ಎಂದು ಮೊರೆಯಿಡಲಾಗ ಬಂದು ಸಲಹಿದೆ ತಂದೆ 3 ಗುರುಸುತನ ಸಂಯಮದೀ ಪುರದಿಂದ ತಂದಿತ್ತೆ ತುರುಗಾಯ್ವರಸುಗಳನು ಮರಳಿ ಪಡೆದೆ ನರಪೌತ್ರನ ಬಾಣದುರಿಯಿಂದ ರಕ್ಷಿಸಿದೆ ಸರಿಯಾರು ನಿನಗೆ ಸುರನರಭುಜಂಗರಲ್ಲಿ 4 ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಕರು ವರವಿಭೀಷಣ ತಾಪಸರನು ಪೊರೆದೆ ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರ ಗಿರಿಯೊಳಗೆ ನೆಲೆಸಿರುವ ವರದವಿಠಲರಾಯ 5
--------------
ವೆಂಕಟವರದಾರ್ಯರು
ನೀನೆ ಕೃಪಾಳು ಶ್ರೀ ಚನ್ನಕೇಶವನೇ ಜ್ಞಾನಿಗಳನ್ನು ಕಾವ ಸನಕವಂದಿತನೆ ಪ ಶರಣರ ಪೊರೆಯುವ ಪ್ರಣವ ಸ್ವರೂಪನೆ ಸ್ಮರಿಸುವ ದಾಸರ ಮರೆಯ ಬೇಡಯ್ಯ ಅ.ಪ. ದೀನರ ಸಲಹುವ ಭಕ್ರವತ್ಸಲನೇ ಮಾನಿನಿ ದ್ರೌಪದಿ ಮಾನ ಕಾಯ್ದವನೇ ಮೌನದಿಂದಲಿ ನಿಂನ ಧ್ಯಾನ ತತ್ವರನಾದೇ ಪನ್ನಗಶಯನನೇ ಸಲಹೊ ಕರುಣದಲೀ1 ಸನ್ನುತ ಹರಿ ನಿಂನ ಕೀರ್ತನೆ ಪಾಡುವೆ ಜಾನ್ಹಕಿ ರಮಣ ಶ್ರೀ ಕಾಕುತ್ಸ್ಥರಾಮಾ ಹೀನನ ಮಾತನ್ನು ನಲಿಯುತ್ತ ಕೇಳಿ ನೀ ಸಾನುರಾಗದಿ ಕಾಯಾ ಧೇನು ಪಾಲಕನೇ2 ಪಂಕಜನೇತ್ರ ಶ್ರೀ ಪರಮ ಪಾವನನೇ ಲಂಕೇಶನಿಗೆ ಯಮನಾದ ಶ್ರೀಧರನೇ ಶಂಕೆಯಿಲ್ಲದೆ ಕಾಯೊ ದೂರ್ವಾಪುರೇಶನೆ ಅಮಿತ ಸದ್ಗುಣಿಯೇ 3
--------------
ಕರ್ಕಿ ಕೇಶವದಾಸ