ಒಟ್ಟು 1058 ಕಡೆಗಳಲ್ಲಿ , 99 ದಾಸರು , 926 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಾಘವೇಂದ್ರರು (4) ಈತನೆ ಶ್ರೀ ಪ್ರಲ್ಹಾದನು ಆಹ್ಲಾದಕರನು ಪ ಈತನೆ ಪ್ರಲ್ಹಾದ ಜಗನ್ಮಾತಾಲಕುಮಿಪತಿಯ ಗುಣವಭೂತಳದಲ್ಲಿ ತೋರಿ ಬಹು ನಿರ್ಭಿತಿಯಿಂದ ಮೆರೆದ ಗುರು ಅ.ಪ. ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆಕಷ್ಟ ಬಡಿಸೆ ಸುತಗೆ ಜವದಲಿಸೃಷ್ಟಿಗೊಡೆಯ ಸ್ತಂಭದಿಂದ ದೃಷ್ಟನಾಗಿ ಅಸುರನಂದನಶ್ರೇಷ್ಠ ನಖದಿಂ ಬಗೆಯ ನಿಷ್ಠೆಯಿಂದ ನಮಿಸಿದ ಗುರು 1 ಶೂರ ಬಾಲ್ಹೀಕನೆನಿಸಿದ ಬ್ರಹ್ಮಣಮುನಿ ಪಾದಾರವಿಂದ ದಯದಿ ಭಜಿಸಿದಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾಸಾರಪಾನ ಮಾಡಿ ವಿಭುದಚಾರು ಚಂದ್ರಿಕಾ ರಚಿಸಿದ ಗುರು 2 ಸಿಂಧುಶಯನ ಶ್ರೀ ರಮಾಪತಿ ವಿಠ್ಠಲನ ಭಕುತಿಯಿಂದ ಭಜಿಪ ರಾಘವೇಂದ್ರಯತಿಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತವೃಂದದ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು 3
--------------
ರಮಾಪತಿವಿಠಲರು
ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ ತಂಗಿನೀ ಕೇಳಿದ್ಯಾ ರಾಘವೇಂದ್ರಾ | ಘಂಗಳ ಕಳದು ಸುಖಂಗಳ ಕೊಡುವದು || ತಂಗಿ ನೀ ಕೇಳಿದ್ಯಾ ಪ ಶ್ರೀ ಪೂರ್ಣಬೋಧರ ಮತಾಪಯೋಬ್ದಿಗೆ ಚಂದ್ರ |ತಾಪಸೋತ್ತಮರ ದಿವ್ಯಾಪಾರ ಮಹಿಮೆಯ 1 ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು |ಸಂಗೀತ ಮುಖದಿ ಜನಂಗಳು ಪಾಡುವದು 2 ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದು |ಸುವಿವೇಕ ಮನದಿಂದ ಕವಿಜನ ಪಾಡುವದು 3 ವಂಧ್ಯಾಸ್ತ್ರೀಯರು ಬಂದು ನಿಂದು ಆರಾಧಿಸೆ |ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ 4 ಗುರು ಪ್ರಾಣೇಶ ವಿಠಲಾ ಸರುವ ಕಾಮಿತಾರ್ಥವಾ |ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ 5
--------------
ಗುರುಪ್ರಾಣೇಶವಿಠಲರು
ಶ್ರೀ ರಾಮಚಂದ್ರ ರಘುರಾಮಾ ರಘುರಾಮಾ ಕರವ ಎನ್ನಫ ಓಡಿಸಿ ಪೊರೆ ಪ ಕ್ಷಿತಿ ಭಾರಕೆÀ ಖಳ ತತಿ ಸಂಹರಿಸಲು ದ್ವಿತಿಯ ಯುಗದಿ ದಶರಾಥಸುತನೆನಿಸಿದ 1 ಶಿಲೆಯಾದ ಅಹಲ್ಯೆಯ ತುಳಿದ ಪಾದದಿಂ ಕಲುಷಿತ ಕಳೆದುಸಿರದೆ ಸಲುಹಿದ ಕರುಣಿ 2 ಧನುಮುರಿದು ಕ್ಷೋಣಿ ಕುಮಾರಿಯ ಪಾಣಿ ಪಿಡಿದ ಮೂರುತಿಯೇ 3 ಪ್ರೀತಿಯಿಂದ ರವಿಜಾತನ ಭ್ರಾತಗೆ ಭೀತಿಯ ಬಿಡಿಸಿದ ವಾತಜ ನಮಿತ 4 ದುರುಳ ದುಶ್ಯಾಸನನ ಧುರದಿ ತರಿದು ಘನ ಸುರರಿಗೆ ಸೌಖ್ಯವಗರೆದ ಮಹಾತ್ಮ 5 ನಿನ್ನ ದರುಶನದಿಲೆನ್ನ ಜನ್ಮ ಪಾವನ್ನವಾಯತೈ ಸನ್ನುತ ಮಹಿಮಾ6 ಶಿಂಧಶತಪುರ ಮಂದಿರ ಶಾಮ ಸುಂದರವಿಠಲ ಬಂಧುರ ಚರಿತ 7
--------------
ಶಾಮಸುಂದರ ವಿಠಲ
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ
ಶ್ರೀ ವಲ್ಲಭ ಸರ್ವೇಶ್ವರ ಬಾ ಪಾವನ ಚರಿತ ಪರಾತ್ಪರ ಬಾ ಸೇವಕ ಜನರಿಗೆ ಸಕಲಾನಂದಗಳೀವ ಬಾ ರುಕ್ಮನ ಭಾವಾ ಬಾ ಸೃತಿನವನಾವ ಬಾ ನಮ್ಮನು ಕಾವನೆ ಬಾ ಎಂದು ಹಸೆಗೆ ಕರೆವೆನು ಶೋಭಾನೆ 1 ಅರಿದರ ಪದ್ಮ ಗದಾಧರ ಬಾ ನರಪತಿಗಳೊಳಿಹ ಶ್ರೀಧರ ಬಾ ಶರಣಾಗತ ಪರಿಪಾಲನೆಂಬ ಬಿರುದಿರುವನೆ ಬಾ ಸಂಪತ್ಕರನೆ ಬಾ ಸಾಮಜವರದನೆ ಬಾ ಶ್ರೀ ನರಹರಿಯೆ ಬಾರೆಂದು ಹಸೆಗೆ ಕರೆವೆನು ಶೋಭಾನೆ 2 ಮಂದರಧರ ಮಧುಸೂದನ ಬಾ ಇಂದಿರೆಯಳನೊಡಗೂಡುತ ಬಾ ಸುಂದರ ತರ ಹರಿ ಚಂದನ ರೂಪದಿನಿಂದಿವ ಬಾ ಕರುಣಾ ಸಿಂಧುವೆ ಬಾ ಆಪದ್ಬಾಂಧವ ಬಾ ಪಾಂಡವ ಬಂಧುವೆ ಬಾ ವೆಂಕಟ ಮಂದಿರ ಬಾರೆಂದು ಹಸೆಗೆ ಕರೆವೆನು ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ವಾಯುದೇವರ ಸ್ತುತಿ ಪವಮಾನ ಪವಮಾನ ತವನವ ಪದ ಪಲ್ಲವ ಜವ ತೋರಿಸೊ ಪ ಪಿನಾಕ ಹರಿಪಾದ ಕೋಕನದ ಮಧುಪ ಕೃಪಾಕರ ಗುರುವರ 1 ಕ್ಷುಲ್ಲಕ ಮಲ್ಲಕ ಸು ದಲ್ಲಣ ದ್ರೌಪದಿ ವಲ್ಲಭ ಬಲ್ಲಿದ ಬಲ್ಲವರೂಪಿ 2 ಯತಿಕುಲಪತಿ ದಿತಿ ಸುತ ಮಥನನೆ ಪತಿ ಕಥೆಯಲಿ ರತಿ ನೀಡ್ಹಿತದಲಿ 3 ಪ್ರೇಮದ ಕಾಮದ ರಾಮನ ಕ್ಷೇಮವ ಭೂಮಿಜೆ ಗರುಪಿದ ವ್ಯೋಮಕೇಶನುತಾ 4 ಪತಿ ತಾಮಸ ಕೌರವ ಸ್ತೋಮವಳಿದ ಸುತ್ರಾಮಜ ಪ್ರೀಯ ನಮೋ 5 ಕ್ಷುದ್ರಾ ದ್ವೈತರ ಸದ್ದಳಿದಾಮಲ ಪದ್ಧತಿಗೈದ ಪ್ರಸಿದ್ಧ ಮಧ್ವಮುನಿ 6 ಸಿಂಧು ದಾಟಿ ಕುರು ವೃಂದ ವಳಿದ ಕರ್ಮಂದಿಯ ಶಿರಿಗೋವಿಂದ ವಿಠಲಸುತ 7
--------------
ಅಸ್ಕಿಹಾಳ ಗೋವಿಂದ
ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ ಪ ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ ಅ.ಪ. ನಿತ್ಯ ನೂತನ | ನಿರ್ವಿಕಾರನೆ | ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ | ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ | ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ | ಸ್ತುತ್ಯನೇ ಜಗ ವ್ಯಾಪ್ತನೇ 1 ಅಮಿತ ತೇಜನೆ | ಸರ್ವರನ ಸಲಹೂವನೇ ||ಸರ್ವ ಶಬ್ದ ಪ್ರವೃತಿ ಕಾರಣ | ಸರ್ವಗುಣ ಪರಿಪೂರ್ಣನೆಸರ್ವತೊಮುಖ ಬಾಹು ಚರಣನೆ | ಶರ್ವ ವಂದ್ಯ ಸುಮಹಿಮನೆ2 ವೀತಭಯ ವಿಶ್ವೇಶ ವಿಧಿಪಿತ | ಮಾತುಳಾಂತಕ ಪಾಲಕಾಭೂತ ಭಾವನನಂತ ಭಾಸ್ಕರ | ದ್ಯೋತಕ ಮಹಕೌತುಕ ||ಗೌತಮ ಪ್ರಿಯ ಮಡದಿ ಕಾಯ್ದಾ | ನಾಥ ರಕ್ಷಕ ಶಿಕ್ಷಕಾಖ್ಯಾತ ರಾವಣ ಕುಂಭಕರ್ಣನ | ಹಂತಕ ವಿಶ್ವಾಸಕ 3 ಮಣಿ ಭವ ಮೋಚಕಅಣು ಮಹದ್ಗತ ವ್ಯಾಪ್ಯವ್ಯಾಪಕ | ಸಾಧಕ ಖಲ ಬಾಧಕ |ತೃಣ ಮೊದಲು ಬ್ರಹ್ಮಾಂತ ಜೀವರ | ಪಾಲಕ ಪರಿಪೋಷಕ 4 ಮೀನ ಕಮಠನೆ ಕೋಲ ನರಹರಿ | ವಾಮನಾ ಸುಭಾಮನಾರೇಣುಕಾತ್ಮಜ ರಾವಣಾಂತಕ | ದಾಶರಥಿ ನರ ಸಾರಥೀ ||ಧೇನುಕಾಸುರ ಮಥನ ತ್ರಿಪುರವ | ಹಾನಿಗೈದನೆ ಬುದ್ಧನೆಮಾನುಷಾಕೃತಿಲ್ಹಯವನೇರಿದ | ಕಲ್ಕಿಯೇ ಕಲಹ ಪ್ರಿಯೆ 5 ಉದಿತ ಭಾಸ್ಕರನಂತ ತೇಜನೆ | ಉದರ ನಾಮಕ ಪಾಚಕಸುದತಿಯರು ಹದಿನಾರು ಸಾವಿರ | ವಾಳ್ದನೇ ಬ್ರಹ್ಮಚರ್ಯನೇ||ಮಧು ವಿರೋಧಿಯೆ ಮಧ್ವಮಾನಸ | ಮಂದಿರ ಬಹುಸುಂದರಹೃದಯದಲಿ ನೀ ಬದಿಗನೆನಿಸುತ | ಪೂಜಿತ ಸುರ ಪೂಜಿತ 6 ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ | ಕರ್ತೃಕ ಪ್ರಾವರ್ತಕಅಷ್ಟದಳ ಸತ್ಕಮಲಧಿಷ್ಠಿತ | ಪ್ರಾಜ್ಞಾನೇ ವಿಶ್ವಜ್ಞನೇಜಿಷ್ಣು ಸಖ ಶ್ರೀಕೃಷ್ಣ ಕೃಷ್ಣೆಯ | ಭೀಷ್ಟದಾ ಶಿಷ್ಟೇಷ್ಟದಾಪುಷ್ಟ ಮಹಿಮಾ ಪ್ರವಿಷ್ಟ ರೂಪನ | ವಿಷ್ಟನೇ ನಿವಿಷ್ಟನೇ 7 ಗೋವಿದಾಂಪತಿ ಗೋವಪಾಲಕ | ಮಾವ ಮಾರಕ ಕಾರಕ ||ಭೂವರಾಹ ಸುಭಾವಜಾರಿಜ | ಷಣ್ಮುಖ ಪರಿಪಾಲಕ ||ಗೋವಿಂದ ಗುರು ಗೋವಿಂದವಿಠಲ | ಗೋವ್ಗಳ್ವರ್ಧನ ಗಿರಿಧರಪಾವಮಾನಿಯ ಪ್ರೀಯ ಸಿರಿಧರ | ಕಾವ ಶರಣರ ಭವಹರಾ 8|
--------------
ಗುರುಗೋವಿಂದವಿಠಲರು
ಶ್ರೀ ವೆಂಕಟಾಚಲ ನಿವಾಸ ನಿನ್ನ ಸೇವಾನುಸೇವಕರ ದಾಸಾ ಎನಿಸಿ ಜೀವಿಸುವ ನರಗೆ ಆಯಾಸಾ ಯಾಕೆ ಶ್ರೀವರನೆ ಕೊಡು ಎಮಗೆ ಲೇಸಾ 1 ಕಂಸಾರಿ ಪ್ರಭು ನಿನ್ನ ದಿವ್ಯ ನಾಮ ಒದಗಲು ಜಿಹ್ವೆಗೆನ್ನಾ ದೋಷ ಸೀಮೆಗಾಣದಿದ್ದರೆನ್ನ ಸ್ವಾಮಿ ನೀ ಮರೆಯಲಾಗದು ಸುಪ್ರಸನ್ನ 2 ನೀಚ ಯೋನಿಗಳಲ್ಲಿ ಬಂದೆ ಇನ್ನು ನಾಚಿಕಿಲ್ಲವೊ ಎನಗೆ ತಂದೆ ನೀನೆ ಮೋಚಕನು ಬಿನ್ನಪ ವಿದೆಂದೆ ಸವ್ಯ ಸಾಚಿಸಖ ಕೈಪಿಡಿಯೋ ತಂದೆ 3 ನಾನೊಬ್ಬನೇ ನಿನಗೆ ಭಾರವಾದೆ ನೇನೊ ಸಂತತ ನಿರ್ವಿಕಾರ ಎನ್ನ ಹೀನತ್ವ ನೋಡಲ್ಕಪಾರ ಚಕ್ರ ಪಾಣಿ ಮಾಡಿದಿರೆನ್ನ ದೂರ 4 ಕಂಡ ಕಂಡವರಿಗಾಲ್ಪರಿದು ಬೇಡಿ ಬೆಂಡಾದೆ ನಿನ್ನಂಘ್ರಿ ಮರೆದು ದಿಟ ತೊಂಡವತ್ಸಲನೆಂಬ ಬಿರುದು ಕಾಯೊ ಪುಂಡರೀಕಾಕ್ಷ ನೀನರಿದು 5 ಈ ಸಮಯದೊಳೆನ್ನ ತಪ್ಪ ನೋಡಿ ನೀ ಸಡಿಲ ಬೇಡುವರೇನಪ್ಪ ನಿನ್ನ ದಾಸರ್ಪೆಸರ್‍ಗೊಳಲು ಬಪ್ಪಾ ದೋಷ ನಾಶವಾಗೋದು ತಿಮ್ಮಪ್ಪ 6 ಕಾಮಾದಿಗಳ ಕಾಟದಿಂದ ನಿನ್ನ ನಾ ಮರೆದೆ ಸಚ್ಚಿದಾನಂದ ಎನ್ನ ಈ ಮಹಾ ದೋಷಗಳ ವೃಂದ ನೋಡದೆ ನೀ ಮನ್ನಿಸೆನ್ನ ಮುಕುಂದ 7 ನೀ ಪಿಡಿದವÀರ ಸಹಸ್ರಾರ ಸುಜನ ಪಾಪಾಟವಿಗೆ ಸುಕುಠಾರಾ ಜಗ ದ್ವ್ಯಾಪಕನೆ ಎನ್ನ ಸಂಸಾರ ಘೋರ ಕೊಪದಿಂದೆತ್ತಯ್ಯ ಧೀರ 8 ಸಿಂಧೂರ ರಾಜ ಪರಿಪಾಲ ಕೋಟಿ ಕಂದರ್ಪ ಲಾವಣ್ಯ ಶೀಲ ಧರ್ಮ ಮಂದಾರ ಭೂಜಾಲಪಾಲ ಯೋಗಿ ಸಂದೋಹ ಹೃತ್ಕುಮುದ ಶೀಲಾ 9 ಶಿವನ ವೈರಿಯ ಕೊಂದ ಶಕ್ತ ಪುಣ್ಯ ಶ್ರವಣ ಕೀರ್ತನ ನಿನ್ನ ಭಕ್ತಾ ಜನರ ಭವದೊಳಗೆ ದಣಿಸುವುದು ಯುಕ್ತವೇನೊ ಭುವನ ಪಾವನ ನಿತ್ಯಮುಕ್ತ 10 ಶ್ರೀಕರ ಶ್ರೀಮದಾನಂತ ನಿಖಿಳ ಲೋಕೈಕನಾಥ ನಿನ್ನಂಥ ಸಖರ ನಾ ಕಾಣೆನೆಲ್ಲಿಯೂ ಮಹಂತಾ ಎನ್ನ ನೀ ಕಾಯೋ ಕಂಡ್ಯ ಭೂಕಾಂತಾ 11 ಕರ್ಮ ಚಿತ್ರತ್ವಗ್ರಸನ ಕಾಯ ಕರಣ ಮನಹಂಕಾರ ಘ್ರಾಣಾ ಬುದ್ದಿ ಚರಣ ಪಾಯೂಪಸ್ಥ ನಯನಜಾತ ಉರುಪಾಪ ಕ್ಷಮಿಸು ಶ್ರೀ ರಮಣಾ 12 ಅನಿಮಿತ್ತ ಬಂಧು ನೀಯೆನ್ನ ಬಿಡುವು ದನುಚಿತವೋ ಲೋಕಪಾವನ್ನ ಚರಿತ ಮನ ವಚನ ಕಾಯದಲಿ ನಿನ್ನ ಪಾದ ವನಜ ನಂಬಿದೆ ಸುಪ್ರಸನ್ನಾ 13 ನೀನಲ್ಲದೆನಗೆ ಗತಿಯಿಲ್ಲ ಪವ ಮಾನವಂದಿತ ಕೇಳೋ ಸೊಲ್ಲ ಎನ್ನ ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ ಧೀನವಲ್ಲವೆ ಲಕ್ಷ್ಮೀನಲ್ಲಾ 14 ಪ್ರಾಚೀನ ಕರ್ಮಾಂಧ ಕೂಪದೊಳಗೆ ಯೋಚಿಸುವ ನರರ ಸಂತಾಪ ನಿನಗೆ ಗೋಚರಿಸದೇನೋ ಬಹುರೂಪ ವೆಂಕ ಟಾಚಲನಿಲಯ ಪಾಹಿ ಶ್ರೀಪಾ 15 ಯಾಕೆ ದಯ ಬಾರದೆನ್ನಲ್ಲಿ ನರಕ ನಾಕ ನರಕ ಭೂ ಲೋಕಂಗಳಲ್ಲಿ ಚರಿಸಿ ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ ಶೋಕ ಕೊಡು ಭಕುತಿ ನಿನ್ನಲ್ಲಿ 16 ಬನ್ನ ಬಡಿಸುವರೇನೋ ಬಿಡದೆ ನಾನು ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ ಪನ್ನ ವತ್ಸಲನೆಂದು ನುಡಿದೆ 17 ತಾಪತ್ರಯಗಳಿಂದ ನೊಂದೆ ಮಹಾ ಪಾಪಿಷ್ಠರಲ್ಲನ್ನ ತಿಂದೆ ಇನ್ನು ಆಪರೇತೇಶ್ವರನ ಮುಂದೆ ಪೋಗಿ ನಾ ಪೇಕೊಳಲೇನು ತಂದೆ 18 ದೇಹ ಸಂಬಂಧಿಗಳ ಸಹಿತವಾಗಿ ನಾ ಹೊಂದಿದೆನು ಲೋಕಮೋಹಿತ ಎನ್ನ ಮೋಹಿಪ್ರದು ನಿನ್ನಗೇನು ವಿಹಿತ ಹೃದಯ ಬಾಹಿರಂತರದಿ ಸನ್ನಿಹಿತ 19 ಪೋಗುತಿದೆ ದಿವಸ ಕಮಲಾಕ್ಷ ಪರಮ ಅಪರೋಕ್ಷ ಎನಗೆ ಹೇಗಾಗುವುದೊ ಸುರಾಧ್ಯಕ್ಷ ದುರಿತ ನೀನು ಕಾಮಿತ ಕಲ್ಪವೃಕ್ಷ 20 ಗತಿಯಾರು ನಿನ್ನುಳಿದು ದೇವ ರಮಾ ಸಂಜೀವ ಎನ್ನ ಸತಿಸುತರ ಅನುದಿನದಿ ಕಾವ ಭಾರ ಸತತ ನಿನ್ನದು ಮಹಾನುಭಾವ 21 ದೊಡ್ಡವರ ಕಾಯ್ವುದೇನರಿದು ಪರಮ ದಡ್ಡರನು ಕಾಯ್ವದೇ ಬಿರುದು ಎನ್ನ ಗುಡ್ಡದಂತಹ ಪಾಪ ತರಿದು ಕಾಯೋ ವಡ್ಡಿ ನಾಯಕ ಸಾರೆಗರದೊ 22 ಜ್ಞಾನಿಗಳು ನೀಚರಲಿ ಕರುಣಾ ಮಾಡ ರೇನೋ ಬಿಡುವರೇ ರಥಚರಣ ಪಾಣಿ ಭಾನು ಚಂಡರವಿಕಿರಣ ಬಿಡದೆ ತಾನಿಪ್ಪನೆ ರಮಾರಮಣ23 ಆಡಲ್ಯಾತಕೆ ಬಹಳ ಮಾತಾ ಪರರ ಬೇಡಲಾರೆನೋ ಜಗತ್ರಾತಾ ಹೀಗೆ ಮಾಡುವರೇ ಕೆಳೆನ್ನ ಮಾತ ನೀನೆ ನೀಡೆನಗೆ ಪುರುಷಾರ್ಥ ದಾತಾ 24 ಬೇಡಲೇತಕೆ ಬಹಳ ಮಾತಾ ಎನ್ನ ಕೇಡು ನಿನ್ನದಲ್ಲೇ ಬಲಿದೌತ ಪಾದ ಬೇಡಿಕೊಂಬುವೆ ನಾನನಾಥ ದೂರ ನೋಡಲಾಗದು ಪಾರ್ಥಸೂತ 25 ನಿತ್ಯ ಬಿಡದೆ ಶಾರದೇಶನ ನುತಿಪ ಭಕ್ತ ಜನರ ಪಾರ ಸಂತೈಸುವುದು ಮಿಥ್ಯವಲ್ಲ ಶ್ರೀರಮಣ ಸಾಕ್ಷಿದಕೆ ಸತ್ಯಾ 26 ಪರಿಯಂತ ಶಯನ ಪ್ರಣತಾರ್ತಿ ಹರನೆಂಬೊ ಅಂಕಾ ಕೇಳಿ ಮಣಿದ ನಿನ್ನಂಘ್ರಿಗೆ ಶಶಾಂಕಾ ಭಾಸ ದಣಿಸಲಾಗದು ನಿಷ್ಕಳಂಕಾ27 ಕಾರ್ತವೀರ್ಯಾಜುನನ ಕೊಂದ ಭವ್ಯ ಕೀರ್ತಿ ನಿನ್ನಾನಂದ ವೃಂದ ಸತತ ಕೀರ್ತಿಸುವ ನರರ ಬಹುಕುಂದ ನೋಡ ದಾರ್ತನ್ನ ಪೊರೆಯೊ ಗೋವಿಂದ 28 ದಯದಿಂದ ನೋಡೆನ್ನ ಹರಿಯೆ ಜಗ ನ್ಮಯನೆ ಜ್ಞಾನಾನಂದ ವೃಂದ ಸಿರಿಯೆ ಮನಾ ಭಯದೂರರಿನ್ನೊಬ್ಬರರಿಯೇ 29 ನರಸಿಂಹ ನಿನ್ನುಳಿದು ಜಗವ ಕಾಯ್ವ ಪರಮೋಷ್ಠಿ ರಾಯನು ನಗುವ ನಿತ್ಯ ನಿರಯಾಂಧ ರೂಪದೊಳು ಹುಗಿವಾ 30 ದಾಸ ದಾಸರ ದಾಸನೆಂದು ಬಿಡದೆ ನೀ ಸಲಹೋ ಎನ್ನನೆಂದೆಂದೊ ನಿನ್ನ ನಾ ಸೇವಿಸುವೆ ಕೃಪಾಸಿಂಧು ಎಮ್ಮನು ದಾಸಿಸದÀನಿಮಿತ್ತ ಬಂಧೂ 31 ಎಂದೆಂದು ನೀ ಬಡವನಲ್ಲ ನಿನ್ನ ಮಂದಿರದೊಳಗೆ ಬಲ್ಯಲ್ಲಾ ಚಿದಾ ನಂದ ನೀ ಭಕ್ತ ವತ್ಸಲ್ಲಾ 32 ಕಾಮಿತಪ್ರದನೆಂಬ ಬಿರಿದು ಕೇಳಿ ನಾ ಮುದದಿ ಬಂದೆನೋ ಅರಿದು ಎನ್ನ ತಾಮಸ ಮತಿಗಳೆಲ್ಲ ತರಿದು ಮಮ ಸ್ವಾಮಿ ನೋಡೆನ್ನ ಕಣ್ದೆರದು33 ಹಿತವರೊಳು ನಿನಗಧಿಕರಾದ ತ್ರಿದಶ ತತಿಗಳೊಳು ಕಾಣೆನೋ ಪ್ರಮೋದ ನೀನೆ ಗತಿಯೆಂದು ನಂಬಿದೆ ವಿವಾದವ್ಯಾಕೊ ಪತಿತಪಾವನ ತೀರ್ಥಪಾದ 34 ಮಡದಿ ಮಕ್ಕಳು ತಂದೆ ತಾಯಿ ಎನ್ನ ಒಡಹುಟ್ಟಿದವರ ನೀ ಕಾಯಿ ಲೋಕ ದೊಡೆಯ ನೀನಲ್ಲದಿನ್ನಾರೈ ಎನ್ನ ನುಡಿ ಲಾಲಿಸೋ ಶೇಷಶಾಯಿ 35 ಅನುಬಂಧ ಜನರಿಂದ ಬಪ್ಪ ಕ್ಲೇಶ ವನುಭವಿಸಲಾರೆ ಎನ್ನಪ್ಪ ಉದಾ ಸೀನ ಮಾಡಿ ದಯಮಾಡದಿಪ್ಪರೇನೋ ಘನ ಮಹಿಮ ಫಣಿರಾಜತಲ್ಪ 36 ಹದಿನಾಲ್ಕು ಲೋಕಂಗಳನಾಳ್ವ ಬ್ರಹ್ಮ ಮೊದಲಾದವರು ನಿನ್ನ ಚಲ್ವನಖದ ವಿಧಿಸಲಾಪೆನೆ ನಿನ್ನ ಸಲ್ವಾ 37 ಧನ ಧಾನ್ಯ ಪಶು ಪತ್ನಿ ಗೇಹ ಜನನೀ ಜಾಮಾತ ಸಖ ನೇಹ ಅನುಜ ತನುಜಾಪ್ತವರ್ಗದಿಂದಾಹ ಸೌಖ್ಯ ನಿನಗರ್ಪಿಸಿದೆ ಎನ್ನ ದೇಹಾ 38 ನೀನಿತ್ತ ಸಂಸಾರದೊಳಗೆ ಸಿಲುಕಿ ನಾನೊಂದೆ ಕರೆ ನಿನ್ನ ಬಳಿಗೆ ಚರಣ ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ ಕಾಣದಿರಲಾರೆನರ ಘಳಿಗೆ 39 ಸಲುಗೆ ಬಿನ್ನಪವ ನೀ ಕೇಳೋ ಎನ್ನ ಬಲು ದುರುಳತನವ ನೀ ತಾಳೋ ನೀನೆ ನೆಲೆಯಲ್ಲದೆನಗಾರು ಪೇಳೋ ಎನ್ನ ಕುಲದೈವ ಬಹುಕಾಲ ಬಾಳೋ40 ಸಾಂದೀಪ ನಂದನನ ತಂದ ನಂದ ಭವ ವೃಂದ ಕಳೆದು ಎಂದೆಂದು ಕುಂದದಾನಂದವೀಯೋ ಇಂದಿರಾರಮಣ ಗೋವಿಂದ41 ತೈಜಸ ಪ್ರಾಜ್ಞ ತುರಿಯಾ ಎನ್ನ ದುಸ್ವಭಾವವ ನೋಡಿ ಪೊರೆಯದಿಹರೆ ನಿಸ್ಪøಹ ನಾನಿನ್ನಂಘ್ರಿ ಮೊರೆಯ ಪೊಕ್ಕೆ ಅಸ್ವತಂತ್ರನ ಕಾಯೋ ಪಿರಿಯಾ42 ಇಹಪರದಿ ಸೌಖ್ಯ ಪ್ರದಾತ ನೀನೆ ಅಹುದೋ ಲೋಕೈಕ ವಿಖ್ಯಾತ ಮಹಾ ಮಹಿಮ ಗುಣಕರ್ಮ ಸಂಜಾತ ದೋಷ ದಹಿಸು ಸಂಸಾರಾಬ್ದಿ ಪೋತಾ 43 ಲೋಕಬಾಂಧವನೆಂಬ ಖ್ಯಾತಿಯನ್ನು ನಾ ಕೇಳಿದೆನು ಖಳಾರಾತಿ ಮನೋ ಶೋಕ ಮೋಹಾಜ್ಞಾನ ಭೀತಿ ಬಿಡಿಸು ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ44 ಒಂದು ಗೇಣೊಡಲನ್ನಕಾಗಿ ಅಲ್ಪ ಮಂದಭಾಗ್ಯರ ಮನೆಗೆ ಪೋಗಿ ದೈನ್ಯ ದಿಂದ ಸತ್ಕರ್ಮಗಳ ನೀಗಿ ಕಂದಿ ಕುಂದಿದೆನೋ ಸಲಹೋ ಲೇಸಾಗಿ45 ಪಾತಕರೊಳಗಧಿಕ ನಾನಯ್ಯ ಜಗ ತ್ಪಾತಕವ ಕಳೆವ ಮಹಾರಾಯ ನಿನ್ನ ದೂತನಲ್ಲವೆ ಜೀಯ ಜಗ ನ್ನಾಥ ವಿಠ್ಠಲ ಪಿಡಿಯೋ ಕೈಯಾ 46
--------------
ಜಗನ್ನಾಥದಾಸರು
ಶ್ರೀ ವ್ಯಾಸರಾಜರು ಏಸು ಮಹಿಮ ನೋಡೋ | ಶ್ರೀ ವ್ಯಾಸಮುನಿಯು ತಾನೂ ಪ ದಾಸಜನರ ಹೃದ್ದೊದ್ದೋಷ ಕಳೆದು ಸಂ | ತೋಷ ಕೊಡುವ ದೊರೆ ಅ.ಪ. ರಾಮಾಚಾರ್ಯರ ಗೃಹದಿ | ಭೂಮಿ ಸೋಕದೆ ಪುಟ್ಟಿಪ್ರೇಮದಿಂದಲಿ ಪುರು | ಷೋತ್ಮ ತೀರ್ಥರ ಗುಹದಿಯಾಮ ಯಾಮಕೆ ಪಾಲು | ಆಮಹಾಮುನಿ ಕೂಡೆಸೀಮೆ ಮೀರಿದ ತೇಜ | ಕೋಮಲ ಕಾಯನು 1 ಪೂರ್ಣ ಬೋಧರ ಪೀಠ | ಬ್ರಹ್ಮಣ್ಯರಿಂಗೊಂಡುಭವಾರ್ಣ ತಾರಿಸುವಂಥ | ನ್ಯಾಯ ಗ್ರಂಥವ ಮಾಡಿಕರ್ಣ ರಹಿತನ ಸುಶಯ್ಯನ ಮಾಡಿಕೊಂಡಅರ್ಣ ಸಂಪ್ರತಿಪಾದ್ಯ | ಕೃಷ್ಣನ್ನ ಮೆರೆಸೀದ 2 ಸುಜನ ಕುಮುದ ಚಂದ್ರ | ನಿಜಭಕ್ತ ಪರಿಪಾಲ ಪರಿವ್ರಾಜಾಕಾಚಾರ್ಯ | ವಿಜಯ ನಗರಿಲಿ ನೆಲೆಸೀಅಜನನಯ್ಯನ ನಾಮ | ಭಜನೆ ಪ್ರಾಕೃತದೊಳುನಿಜಜನ ಕೊರೆಯುತ | ಅಜೇಯನೆನಿಸಿದಂಥ 3 ಮಿಥ್ಯಾಮತವಗೆದ್ದು | ತಥ್ಯಾವು ಜಗವೆಂದುಸ್ತುತ ಶ್ರೀಹರಿಯ ಸರ್ವೋತ್ತುಮನೆನುತಸತ್ಯವು ಪಂಚ ಭೇದ | ನಿತ್ಯವು ತಾರತಮ್ಯಭೃತ್ಯರು ಬ್ರಹ್ಮ ದೇವತೆಗಳೆಂದೊರೆದ 4 ಪುರಂದರ | ದಾಸರೆಂದೆನಿಸೀದ 5 ಅಹಿಪರ್ವತಾಧೀಶ | ಅಹಿತಲ್ಪನ್ನಾಸೇವೆವಿಹಿತದಿ ದ್ವಿಷಡಾಬ್ದ | ಬಹುಗೈದು ಅರಸಿನಕುಹುಯೋಗವಾರಿಸಿ | ಮಹಿಯ ಸುರರಿಗೆಲ್ಲಸಹಸ್ರಾರು ಗ್ರಾಮಗಳ್ | ಜಹಗೀರುಗಳನಿತ್ತ 6 ಛಂದದಿಂದಲಿ ನವ | ವೃಂದಾವನಕೆ ಬಂದುವೃಂದಾವನದಿ ನಿಂದು | ಇಂದೀವರಾಕ್ಷನುನಂದ ಕಂದ ಗುರು ಗೋ | ವಿಂದ ವಿಠಲನ ಹೃನ್‍ಮಂದಿರದಲಿ ನೋಡಿ | ನಂದವ ಪಡುತಿರ್ಪ7
--------------
ಗುರುಗೋವಿಂದವಿಠಲರು
ಶ್ರೀ ವ್ಯಾಸರಾಯರು ನೋಡಿದೇ ನಾ ನೋಡಿದೆ ಪ ನೋಡಿದೆನೊ ಗುರು ವ್ಯಾಸರಾಯರ ನೋಡಿದೆನೊ ಶುಭಕಾಯರಾ ಮಾಡಿದೆ ಶಿರಬಾಗಿ ನಮನವ ಬೇಡಿದರ್ಥವ ಕೊಡುವ ವಡೆಯರ ಅ.ಪ ಭಿದುರಮಯವಾದ ವೇದಿಕಾಗ್ರದಿ ಚದುರದಿಕ್ಕಿಲಿ ಶೋಭಿಸುವ ಶುಭ ತ್ರಿದಿಶವರ ಮುಖ ದಿವಿಜರೈವರು ಮುದದಿ ಇರುತಿಹರಿವರ ಮಧ್ಯದಿ ಪದುಮನಾಭನ ಚತುರರೂಪವÀ ಹೃದಯ ಮಂದಿರದಲ್ಲಿ ಭಜಿಸುವ ಪದುಮನಾಭನ ಪ್ರೀತಿಪಾತ್ರರ ಸದಮಲಾಗುರು ವ್ಯಾಸರಾಯರ 1 ಶ್ರೀನಿವಾಸನು ಶಿರಸಿನೊಳಗಿಹ ಆನನಾಗ್ರದಿ ಬಾದರಾಯಣ ಙÁ್ಞನಮಯ ಶಿರಿ ಹಂಸ ಅಚ್ಯುತ ಮೌನಿ ಕಪಿಲಾನಂತ ಭಾರ್ಗವ ಮಾನನಿಧಿ ಹಯಗ್ರೀವ ಹಂಸನು ದಾನವಾಂತಕ ರಾಮಚಂದ್ರ ಸ - ದಾನುರಾಗದಿ ತೆನೆಗಳಲ್ಲಿ ಭಾನುನಂದದಿ ಪೊಳೆವ ಬಗೆಯನು 2 ಮಧ್ಯಭಾಗದಿ ಕೃಷ್ಣದೇವನು ಇದ್ದು ಇವರನು ಸೇವೆ ಮಾಳ್ಪರ ಶುದ್ಧ ಮಾಡÀ್ಯವರರ್ಥ ಸರ್ವದ ಶಿದ್ಧಿಮಾಡಿ ಇವರನತಿ ಪ್ರ ಶಿದ್ಧಮಾಡಿವರಲ್ಲಿ ಪ್ರತ್ಯಕ್ಷ ಸಿದ್ಧನಾಗಿರುತಿಹನು ನಮ್ಮ ಗುರು ಮಧ್ವಗುರುಜಗನ್ನಾಥವಿಠಲನ ಮಧ್ಯಹೃದಯದಿ ಭಜಿಪ ಗುರುಗಳ 3
--------------
ಗುರುಜಗನ್ನಾಥದಾಸರು
ಶ್ರೀ ಶ್ರೀ ವರವಿಠಲದಾಸರು ಶ್ರೀವರ ದಾಸರ್ಯಾ | ತವಗುಣಭಾವದೊಳ್ವರ್ಣಿಸುವಾ ಪ ಭಾವ ಭಕುತಿ ನಿತ್ತು | ನೀವೊಲಿಯೋ ಗುರುದೇವ ತಾಂಶರೆಂದು | ಅವನಿಯೊಳ್ಖ್ಯಾತಾ ಅ.ಪ. ಶ್ರೀನಿವಾಸ ಹರಿಯಾ | ಸೇವಿಸಿಜ್ಞಾನಿಗಳೆನಿಸಿರುವಾ |ಶ್ರೀನಿಧಿ ವಿಠಲನ | ಗಾನವ ಮಾಡುವಜ್ಞಾನಿಶ್ರೇಷ್ಠರಿಂ | ದಂಕಿತ ಪಡೆದ 1 ಇಂದು ಭಾಗ ವಾಸಾ | ಎನಿಸಿಹಚಂದ ಹರಿಯ ರೂಪಾ |ನಂದ ತುತಿಸಿ ಹೃ | ನ್ಮಂದಿರದಲಿ ನೋಡಿಬಂಧ ಕಳೆದೆ ಭೂ | ವೃಂದಾರಕವರ 2 ಗರ್ವ ರಹಿತನಾಗಿ | ಹರಿಯನುಸೇರ್ವ ಮಾರ್ಗ ಪಿಡಿದೀ |ಸರ್ವೋತ್ತಮ ಗುರು ಗೋವಿಂದ ವಿಠಲನು ಶರ್ವ ಮುಖ್ಯರಾ | ದೇವಾ ಸೇವ್ಯನೆಂದೇ 3
--------------
ಗುರುಗೋವಿಂದವಿಠಲರು
ಶ್ರೀ ಶ್ರೀನಿವಾಸ ಕಲ್ಯಾಣ ಲಾವಣಿ ಮಾಧವ ಪ ಮುದಮೋದ ಘನ ಸುಖ ಭಕ್ತರಿಗೀಯಲು ಅ.ಪ. ದೇವ ದೇವೇಶನು ಯಾರೆಂತೆಂದು ಕೋವಿದ ಭೃಗುಮುನಿ ಹುಡುಕುತ ಬಂದು ಪಾರ್ವತಿ ಪತಿಹರ ವಿಧಿಗಳ ಜರಿದು ಧಾವಿಸಿ ಹರಿಯೆಡೆ ಬರ್ಪುದ ಕಂಡು ಭಾವಜ ಪಿತರತಿ ಸೋಗನು ಹಾಕೆ ದೇವನ ಮಾಯೆಯು ಮುಸುಕಲು ಮುನಿಗೆ ಈ ವಿಧ ಸಲ್ಲದು ಹರಿಗೆಂತೆಂದು ಪಾವನ ನೆದೆಯನು ವದ್ದನು ದುಡುಕಿ1 ಮಾಧವ ಚರಣವ ತೊಳೆದು ಹರಿಸುತ ದುಗುಡವ ಭಕ್ತನಿಗಂದು ಕರದಿಂ ದೊತ್ತುತ ಚರಣದ ಕಣ್ಣು ತರಿಯಲು ಹೆಚ್ಚಿನ ಸಾಧನೆ ಮುನಿಗೆ ಹರುಷದಿ ತೆರಳಿದ ಋಷಿವರ ತಾನು ಅರಿಯುತ ಕಾಂತನ ಮನವಂ ಸಿರಿಯು ಸರಸರ ಕೋಪವ ನಟಿಸುತ ತಾನು ಬಿರುಸಿನ ನುಡಿಗಳ ಆಡಿದಳಂದು 2 ಏನಿದು ಮುನಿ ವಿಪರೀತವು ಥರವೆ ನಾನಿಹ ಸ್ಥಳವನು ವದೆಯುವದೆಂದು ಮಾನಿನಿ ಗೌರವ ಕಾಯದೆ ಕ್ಷಮಿಸಿಹೆ ನಾನಿಹೆ ಬರಿಸತಿ ಭಕ್ತರೆ ಹೆಚ್ಚು ಕಾನನ ಸೇರುವೆ ನನಗೇಕೀ ಮನೆ ಮಾನವು ಹೊಯಿತು ಯನ್ನಲು ಸತಿಯು ಮೌನವ ಧರಿಸಲು ಗಂಡನು ನಗುತ ದೀನರ ಪೊರೆಯಲು ಬಂದಳು ಭುವಿಗೆ 3 ಗಂಡನ ಬಿಡುವಳೆ ಲಕ್ಷ್ಮೀದೇವಿ ಪುಂಡರ ಮಾತಿದು ನಂಬಿಲುಬೇಡಿ ಗಂಡನ ಮನತೆರ ನಟಿಸಿದಳಷ್ಟೆ ಗಂಡನು ಹಾಗೆಯೆ ತೊರೆಯುತ ಧಾಮ ಕುಂಡಿಲಿ ಗಿಳಿಯುತ ಅಲೆಯುತ ಹೊರಟ ಕಂಡಲ ಗಿರಿಯೆಡೆ ನಡೆತಾತಂದ ಕಂಡನು ಹುತ್ತವ ಒಂದೆಡೆ ತಾನು ಕುಂಡಲಿಗೊಡೆಯನು ನೆಲಸಿದನಲ್ಲಿ 4 ಪಾವನ ಗಿರಿಯದು ಕೇಳಿರಿ ಎಲ್ಲ ದೇವನ ಖಗಮೃಗ ಬಳ್ಳಿಗಳಾಗಿ ದೇವ ಸಮೂಹವು ಸೇವಿಪರಲ್ಲಿ ಕೋವಿದ ಋಷಿಗಳು ಧ್ಯಾನಿಪರೈಯ ಭಾವಸು ಭಕ್ತಿಲಿ ನೋಡಲು ಗಿರಿಯ ಜೀವರ ಪಾಪಗಲೆಲ್ಲಾ ನಾಶ ನೋವನು ಕಾಣರು ಹರಿಕೃಪೆ ಮುಂದೆ ದೇವನು ಇರೆ ಇದೆ ಭೂವೈಕುಂಠ 5 ಕೃತಯುಗದಲ್ಲಿದು ವೃಷಭಾಚಲವು ಗತಿಸಿದ ರಕ್ಕಸ ಹರಿಯಿಂತೆಂದು ಸುತನಂ ಪಡೆಯಲು ಅಂಜಿಲಿದೇವಿ ಅತಿ ತಪಗೈದಳು ತ್ರೇತೆಯಲೆಂದು ಉತ್ತಮ ನೆಂಬುವ ಗರ್ವವ ನೀಗಿ ಸ್ತುತಿಸಿದ ಶ್ವಾಸನ ಶೇಷನು ಎಂದು ಇತ್ತರು ಮೂರಲಿ ಶೇಷನ ನಾಮ 6 ವೆಂಕಟ ಗಿರಿಯಿದು ಕಲಿಯುಗದಲ್ಲಿ ಸಂಕಟ ನೀಗಿದ ಮಾಧವನಿಲ್ಲಿ ಸಂಕಟ ನೀಡುವ ಪಾಪಗಳನ್ನು ಶಂಕರ ಹರಿತಾ ಕಡಿಯುವನೆಂದು ವೆಂಕಟ ನೆನಿಸುತ ಮೆರೆಯುವ ನಿಲ್ಲಿ ಶಂಕೆಯ ಮಾಡದೆ ಶರಣೆಂದಲ್ಲಿ ಪಂಕಜ ನೇತ್ರನು ಪೊರೆಯುವನಿಲ್ಲಿ ಮಂಕುಗಳಾಗದೆ ಭಜಿಸಿರಿ ಬೇಗ 7 ಇಂದಿರೆ ಕೆರಳೆ ತಂದೆಯು ತೊರೆದನೆ ನಿಜ ವೈಕುಂಠ ಪೊಂದಿಹ ಹುತ್ತವ ಏನಿದು ಛಂದ ಕಂದನು ನಾನಿಹೆಎನ್ನುತ ಬೊಮ್ಮ ತಂದೆಗೆ ಕ್ಷೀರವ ಕರೆಯಲುನಿತ್ಯ ಛಂದದ ಗೋತನು ಧರಿಸುತ ಶಿವನ ಕಂದನ ಗೈಯುತ ಮಾತೆಯ ಸಹಿತ ಬಂದನು ಚೋಳನ ಅರಮನೆಯೆಡೆಗೆ 8 ಕೊಳ್ಳಲು ರಾಣಿಯು ಸೇರುತ ಗೋಷ್ಠಿ ನಲ್ಲಗೆ ಪ್ರತಿದಿನ ಕ್ಷೀರವ ಸುರಿಸೆ ಇಲ್ಲವೆ ಆಗಲು ರಾಣಿಗೆ ಹಾಲು ಗೊಲ್ಲನ ಶಿಕ್ಷಿಸಿ ಬೈಯಲು ಬಹಳ ಗೊಲ್ಲನು ಪತ್ತೆಯ ಹಚ್ಚುತ ಚರ್ಯೆ ಕೊಲ್ಲಲು ಗೋವನು ಕೊಡಲಿಯನೆತ್ತೆ ಬಲ್ಲಿದ ತಡೆಯಲು ಶಿರವನು ಒಡ್ಡೆ ನಿಲ್ಲದೆ ಗಗನದಿ ಚಿಮ್ಮಿತು ರಕ್ತ 9 ನೋಡುತ ಮಡಿಯಲು ಗೊಲ್ಲನು ಅಲ್ಲೆ ಓಡುತ ಗೋಗಣ ಹಟ್ಟಿಯ ಸೇರೆ ಜಾಡನು ಪಿಡಿಯುತ ಚೋಳನು ಬರಲು ಕೇಡಿಗ ನೃಪನೆ ಪಿಚಾಚಿಯು ಆಗೆನೆ ಬೇಡಲು ಕ್ಷಮೆಯನು ಬಹುಪರಿಹರಿಯ ನೀಡಿವಿಶಾಪವ ವೆಂಕಟ ಕರುಣಿ ಆಡಲು ತೊಡಗಿದ ಈ ವಿಧ ಮುಂದೆ 10 ಆದುದು ಆಯಿತು ಚೋಳನೆ ಕೇಳು ಭುಂಜಿಸು ಕರ್ಮ ಪದ್ಮಾವತಿ ಯೆಂಬಾಕೆಯ ಮುಂದೆ ಮೋದದಿ ಮುದುವೆಯ ನಾಗುವೆ ಆಗ ಭೂಧವ ಮಾವನು ನೀಡುತ ಮಕುಟ ಕವಿ ವಾರ ನಾಧರಿಸುವಾಗಿಲ್ಲದೆ ಬಾಧೆ ಪೊಂದುವಿ ಕಲಿಕೊನೆ ಪೂರ್ವಾವಸ್ಥೆ 11 ಪೇಳತ ಲೀಪರಿ ಚೋಳಗೆ ದೇವ ಲೀಲೆಯ ತೊರಲು ಘಾಯವ ಪಿಡಿದು ಕೇಳಲು ಔಷಧ ಗುರುವನು ಸ್ಮರಿಸಿ ಆಲಸ್ಯಗೈಯದೆ ಬಂದವ ನುಡಿಯೆ ಮೂಲಿಕೆ ಹುಡುಕುತ ಗಿರಿಯಲಿ ಅಲೆಯೆ ಶೈಲದ ಸ್ವಾಮಿ ವರಾಹನು ಸಿಗುತ ಕೇಳಲು ವೆಂಕಟ ಕಥೆ ವಿಸ್ತಾರ ಪೇಳಲು ತಬ್ಬಿದ ಕ್ರೋಡನ ಚತುರ 12 ಏನಿದು ಬಹು ವಿಪರೀತವು ಪೇಳಿ ಸತಿ ಬಿಟ್ಟಲೆಯುವುದೆಂತು ಪೂರ್ಣಾನಂದಗೆ ಗೊಲ್ಲನ ಪೆಟ್ಟೆ ಚಿನ್ಮಯ ನೆತ್ತರು ಚಿಮ್ಮುವದುಂಟೆ ಕ್ಷುಧೆ ತೃಷೆ ದೂರಗೆ ಹಾಲು ಅನ್ಯರು ವೈದ್ಯರೆ ಧನ್ವಂತ್ರೀಗೆ ಕಾಣನೆ ಔಷಧಿ ಪೂರ್ಣಪ್ರಜ್ಞ ತಾನಿರೆ ವೆಂಕಟ ತಿಳಿಯನೆ ಕ್ರೋಡ 13 ಲೀಲೆ ಇದೆಲ್ಲವು ಕೊಡುವದವಗೆ ಬೀಳಿಸಿ ಮೋಹದಿ ಕುಜನರ ತರಿವ ಪಾಲಿಪ ಸುಜನರ ಬೀರುತ ಜ್ಞಾನ ಲೀಲಾಮಯನವ ಸರಿಯೆಂತೆನ್ನಿ ಕೇಳಲು ಕ್ರೋಡನ ವಾಸಿಸೆ ಜಾಗ ಕೇಳುವರಾರೈ ನೀನಿರೆ ಯನ್ನ ಬೀಳುವರೆಲ್ಲರು ನಿನ್ನಡಿಭರದಿ ಧಾಳಿಯೆ ನನ್ನಯ ಪ್ರಭುತನವೆಂದ 14 ಮುಂದೆಯೆ ನೀನಿರು ನಾಹಿಂದಿರುವೆ ಬಂದವರೆಲ್ಲರು ನಿನಗೊಂದಿಸುತ ವಂದಿಸಲೆನ್ನದು ವಲಿಯುವೆನಾಗ ಮುಂದಿಹ ನಿನಗೇ ಮೊದಲಲಿ ಪೂಜೆ ಛಂದದಿ ಶಾಸನ ಹೀಗೇ ಬರದು ಮಂದಿರ ಕೆಡೆ ಕೊಡು ಎನ್ನಲು ನಗುತ ನಂದದಿ ನೀಡುತ ಹಾಗೆಯೆ ಎಲ್ಲ ಕಂದನ ಸೇವಿಸೆ ಬಕುಳೆಯ ಕೊಟ್ಟ 15 ತಗ್ಗಿರೆ ಸಾಧನ ವೆಗ್ಗಳಗೈವ ವೆಗ್ಗಳ ಸಾಧನೆ ತಗ್ಗಿಪ ದೈವ ಹಗ್ಗವು ಸರಿಇವ ನಿಚ್ಚೆಯು ಕೇಳಿ ಅಗ್ಗದ ಪ್ರಭುವರ ಇವತಾನಲ್ಲ ತಗ್ಗಿಸಿ ವಿಷಯ ಬಗ್ಗಿಸಿ ಮನವನು ಹಿಗ್ಗುತ ಭಜಿಸಲು ಚರಣ ಸರೋಜವ ತಗ್ಗದ ಸೌಖ್ಯವ ನೀಡುತ ಕಾವ ಮುಗ್ಗದೆ ಭವದಲಿ ಭಜಿಸಿರಿ ಬೇಗ 16 ಬಕುಳೆ ಯಶೋದೆಯು ಪೂರ್ವದಿ ಕೇಳಿ ರುಕ್ಮಿಣಿ ಮುದುವೆಯ ನೋಡದಲಾಕೆ ಉಕ್ಕಿದ ಮೋಹದಿ ಬಯಸಲು ನೋಡೆ ಭಕ್ತಳ ಬಯಕೆಯ ಸಿದ್ಧಿಸೆ ದೇವ ಬಕುಳೆಯ ಜನ್ಮದಿ ನಿಂದಿಹಳೆಂದು ಅಕ್ಕರೆಯಿಂದಲಿ ತಾ ಕರತಂದು ಚೊಕ್ಕಸುಕಂದನ ತೆರದಲಿ ನಿಂದ ಭಕ್ತಿಲಿ ಸೇವೆಯ ಗೈದಳು ಬಕುಳೆ 17 ನಾರಾಯಣ ಪುರ ನಾಮದ ನಗರಕೆ ದೊರೆಯೆನಿಸಿದ್ದನು ಆಕಾಶರಾಯ ಕೊರಗುತ ಬಹುದಿನ ಸುತರಿಲ್ಲೆಂದು ಧರಣಿಯ ಶೋಧಿಸೆ ಯಾಗಕ್ಕೆಂದು ದೊರಕಲು ಕಮಲವು ದೊಡ್ಡದು ಒಂದು ತೆರೆಯುತ ನೋಡಲು ಶಿಶು ತಾನೊಂದು ಬೀರುತ ಕಾಂತಿಯ ಕಾಣಿಸಲಂದು ದೊರಕಿತು ಕನ್ಯಾಮಣಿಯೆಂತೆಂದು 18 ಅರಮನೆ ಗಾ ಶಿಶು ಹರುಷದಿ ತಂದು ಸರಸಿಜಮುಖಿ ಪದ್ಮಾವತಿಯೆಂದು ಕರೆಯುತ ರಾಣಿಯು ಸಾಕುತ ಬಂದು ವರುಷಗಳುರುಳಲು ಕಾಲದಿ ಕನ್ಯೆ ಸಿರಿತೆರ ಲಕ್ಷಣ ಗಣದಿಂ ಬೆಳೆಯೆ ವರಿಸಲು ಈಕೆಯ ನರರಿಂದಾಗದು ಹರಿಯೇ ಸರಿವರವೆನ್ನುತ ಮನದಿ ಅರಸುತ ವರನಂ ಬಳಲಿದ ಧೊರೆಯು 19 ವೇದವತೀ ಈಕೆಯು ತ್ರೇತೆಯಲೆನ್ನಿ ಮಾಧವ ಮನತೆರ ತೆರಳುವ ಸೀತೆ ಮೋದದಿ ಸೇರಲ್ ಗಿರಿ ಕೈಲಾಸ ಖÉೀದಗಳುಣ್ಣುತ ಲಂಕೆಯಲಿದ್ದು ಸಾಧಿಸಿ ಖಳರವಿನಾಶವನಲ್ಲಿ ಮೇದಿನಿ ಸುತೆಯಳ ಸೇವಿಸಿ ಬಹಳ ಮೋದದಲಾಗಲಿಯಂದಳು ಸೀತೆ 20 ಶಕ್ರನು ಶಿಖಿಸಹ ಇದ್ದಹಾಗೆ ಲೋಕಕೆ ತೋರಲು ಸೀತೆಯ ರಾಮ ಚೊಕ್ಕ ಪರೀಕ್ಷೆಯ ನಡಿಸಲು ಶಿಖಿಯಲಿ ತಕ್ಕಣ ಬಂದರು ಸೀತೆಯರಿಬ್ಬರು ಅಕ್ಕರೆಯಿಂದಲಿ ನುಡಿಯುತ ಕಥೆಯು ಸಕ್ಕದಿ ನಿಂತಿಹ ಈಕೆಯ ನೀನು ಈಕ್ಷಿಸಿ ಪಿಡಿಕೈಯೆನ್ನಲು ಸೀತೆ ರಕ್ಕಸ ವೈರಿಯು ಮಡದಿಗೆ ನುಡಿದ 21 ಒಂದೇ ಬಾಣವು ಒಂದೇ ವಚನವು ಒಂದೇ ನಡತೆಯು ಒಬ್ಬಳುಮಡದಿ ಇಂದೆನಗೆಂಬುದು ತಿಳಿಯದೆ ನಿನಗೆ ಛಂದದಿ ಕಲಿಯಲಿ ನಡಿಸುವೆ ಬಯಕೆ ಇಂದ್ರನು ಅಗ್ನಿಯ ಪುಟ್ಟಲಿ ವಡಲಲಿ ಇಂದಿನ ಯುಗದಲಿಯನ್ನಲು ರಾಮ ವಂದಿಸಿ ನಡೆದರು ಎಲ್ಲರು ಆಗ ಹಿಂದಿನ ವರತೆರ ಬಂದಿಹಳೀಗ 22 ಭೂಸುರ ಪೊಟ್ಟಿಲಿ ಪುಟ್ಟುತ ಹಿಂದೆ ಶ್ರೀಶನ ಮಡದಿಯ ತಪದಿಂ ಮೆಚ್ಚಿಸಿ ಭಾಷೆಯ ಪಡದಿರೆ ಸವತಿಯ ಪಟ್ಟಕೆ ಘಾಸಿಯ ನೀಡುತ ರಾವಣ ಬಂದು ಆಶಿಸಿ ಸಂಗವ ದುಡುಕುತ ನುಡಿಯೆ ರೋಷದಿ ಶಾಪವ ನೀಡಿದಳೀಕೆ ನಾಶಕೆ ಕಾರಣಳಾಗುವೆ ನಾನೆ ಭ್ರಷ್ಟನೆಯೆನ್ನುತ ಶಿಖಿ ಸೇರಿದಳು 23 ಲಕ್ಷ್ಮೀ ವಿಭೂತಿಯೆ ಇವಳೆಂತೆನ್ನಿ ಲಕ್ಷಣ ನಿಭಿಡಿತಳಾಗಿಹ ಕನ್ಯೆ ಕುಕ್ಷಿಯು ತೆಳ್ಳಗೆ ಸಿಂಹಸುಮಧ್ಯಮೆ ಪಂಕಜ ನೇತ್ರೆಯು ಪಂಕಜವದನೆಯು ಪಂಕಜ ಗಂಧಿ ಭುಜಂಗ ಸುವೇಣಿ ಶಂಕರ ನಗೆನುಡಿ ಗುರುಲಾವಣ್ಯ ಶಂಖ ಸುಪದ್ಮಾರೇಖೆಗಳಿಂದ ಲಂಕೃತ ಅಂಗೈ ಪಾದಗಳ್ಹಾಗೆ 24 ಕಾಮನ ಬಿಲ್ಲನು ಹಳಿಯುವ ಹುಬ್ಬು ಸೋಮನ ಮೀರಿಪ ಯುಗಯುಗ ಕಾಂತಿ ಸಾಮಜಗಮನೆ ರಂಭೋರುಗಳು ಕೋಮಲ ಚಂಪಕ ನಾಶಿಕ ತುಟಿಗಳು ಕಾಮದ ಪೀವರ ಕುಚಯುಗಹಾಗೆ ಸು ನೇಮದಿ ಬೆಳದಿಹ ಪಲ್ಗಳ ರಾಜಿ ವಾಮನಿತಂಬಜಘನದ್ವಯವ ಭಾಮೆ ಸಫಾಲದಿ ಮೆರೆದಳು ತಾನು 25 ಈಕೆಯು ಕಮಲೆಯ ತೆರೆದಿಂ ಬೆಳೆದು ಸಾಕಲು ಕರೆದಳು ಕನಕಸುವೃಷ್ಟಿ ಕಾಕನು ಕಾಣದೆ ರಾಜನು ಮೆರೆದ ನಾಕವೆ ಎನಿಸಿತು ರಾಜನಮನೆಯು ಜೋಕೆಯಲೊಂದಿನ ಸಖಿಯರ ಕೂಡಿ ಈಕ್ಷಿಸೆ ಪುರವುದ್ಯಾನವ ಕುವರಿ ಸೌಖ್ಯದಿ ತೆರಳುತೆಯಿರುತಿರುವಲ್ಲಿ ನಾಕದ ನಾರದ ವದಗಿದನಲ್ಲಿ 26 ಹರಿಕಾರ್ಯಾಂಗನು ಬಂದನು ಎನ್ನುತ ಗುರು ಸತ್ಕಾರಂಗಳಗೈದು-ಆ ತುರ ತೋರಲು ತಿಳಿಯೆ ಭವಿಷ್ಯ ಕರಗಳ ನೋಡುತ ತೂಗುತ ತಲೆಯು ಸಿರಿತೆರ ಲಕ್ಷಣ ಕಾಣುವೆನಮ್ಮ ಹರಿಯೇ ಸರಿ ವರಿಸಲ್ ನಿನ್ನ ಅರಸುತ ಬರುವನು ತಾನೆ ನಿನ್ನ ಬರಿ ಮಾತಲ್ಲವು ನೋಡೆಂತೆಂದ 27 ಪರಿ ಹೊರಡಲ್ ಮುನಿಯು ಲಾಲಿಸಿ ª
--------------
ಕೃಷ್ಣವಿಠಲದಾಸರು
ಶ್ರೀ ಹರಿದಾಸವೃಂದ ಸ್ತೋತ್ರ (ಕೋಲು ಪದ) ಶ್ರೀ ಪುರಂದರದಾಸರು ಪರಮೇಷ್ಟಿ ಪಿತನಾಜ್ಞೆ ಧರಿಸಿ ಬಂದ ವರಸುರ ಮೌನಿಯವತಾರಿ ಕೋಲೆ | ವರಸುರ ಮೌನಿಯವತಾರಿಯಾದ ಪುರಂದರದಾಸರ ಬಲಗೊಂಬೆ ಕೋಲೆ 1 ಶ್ರೀ ವಿಜಯದಾಸರು ಪುಟ್ಟ ಬದರಿಯಲ್ಲಿ ಪುಟ್ಟಿ ಪುರಂದರ ಶ್ರೇಷ್ಟದಾಸರ ದಯಾಪಾತ್ರ ಕೋಲೆ | ಶ್ರೇಷ್ಟದಾಸರ ದಯಪಾತ್ರರಾದ ವಿಜಯ ವಿಠಲದಾಸರ ಬಲಗೊಂಬೆ ಕೋಲೆ 2 ಶ್ರೀ ಗೋಪಾಲದಾಸರು ನಾಗಭೂಷಣಸುತ ನಾಗಾಶ್ಯವಂಶಜ ಭಾಗವತಾಗ್ರಣಿ ಭಾಗಣ್ಣ ಕೋಲೆ | ಭಾಗವತಾಗ್ರಣಿ ಭಾಗಣ್ಣದಾಸರಿಗೆ ಬಾಗಿ ನಮಿಸಿ ಪ್ರಾರ್ಥಿಪೆ ಕೋಲೆ 3 ಶ್ರೀ ಜಗನ್ನಾಥ ದಾಸರು ಬಂದ ಸಹ್ಲಾದನಂಶಜ ಕೋಲೆ | ಬಂದ ಸಹ್ಲಾದನಂಶದ ಮಾನವಿ ಮಂದಿರ ದಾಸರಿಗೆ ವಂದಿಪೆ ಕೋಲೆ 4 ಶ್ರೀ ಪ್ರಾಣೇಶದಾಸರು ಶ್ರೀ ಗುರು ರಂಗವೊಲಿದ ಭಾಗವತರ ಛಾತ್ರ ದಾಗಿ ಶ್ರೀ ಹರಿಯ ಬಣ್ಣಿಸಿ ಕೋಲೆ | ಛಾತ್ರರಾಗಿ ಶ್ರೀಹರಿಯ ಬಣ್ಣಿಸಿದಂಥ ಲಿಂಗ ಸೂಗೂರ ದಾಸರಿಗೆ ವಂದಿಪೆ ಕೋಲೆ 5 ಪ್ರಾಣೇದಾಸರ ಸೂನುವೆನಿಸಿದ ಮಾನವಿ ರಾಯರ ಸೇವಿಸಿ ಕೋಲೆ | ಮಾನವಿ ರಾಯರ ಸೇವಿಸಿದಂಥ ಗುರು ಪ್ರಾಣೇಶದಾಸರ ಬಲಗೊಂಬೆ ಕೋಲೆ 6 ಶ್ರೀ ಶ್ರೀಶಪ್ರಾಣೇಶದಾಸರು ಗಂಧದ ಕೊರಡು ಪೆಟ್ಟು ತಿಂದು ಮಾವಂದಿರಿಂದ ಛಂದಾಗಿ ತತ್ವವರಿದಂಥ ಶ್ರೀ ರಘು | ನಂದನ ದಾಸರಿಗೆ ವಂದಿಪೆ ಕೋಲೆ 7 ಶ್ರೀ ಶೇಷದಾಸರು ಇಳೆಯೊಳು ಚಿಂತರವೇಲಿ ವಾನರೇಂದ್ರನ ಸಲೆ ಸೇವಿಸುತ ವಲಿಸಿದ ಕೋಲೆ | ಸಲೆ ಸೇವಿಸುತ ವಲಿಸಿದ ಗುರು ಪ್ರಥಮ ಶಿಲೆ ಶೇಷದಾಸರ ಬಲಗೊಂಬೆ ಕೋಲೆ 8 ಪಾರ್ಥಿವ ವರ್ಷದಿ ಪಾರ್ಥಸಾರಥಿ ಭವ್ಯ ಮೂರ್ತಿಯ ಮುದದಿ ಸ್ಥಾಪಿಸಿ ಕೋಲೆ | ಮೂರ್ತಿಯ ಮುದದಿ ಸ್ಥಾಪಿಸಿದಂಥ ಪೂರ್ವ ಪಾರ್ಥಾಹಿಪಾರ್ಯರ ಪ್ರಾರ್ಥಿಪೆ ಕೋಲೆ 9 ಪರಿವಾರ ಸಹಿತ ಚರಿಸುತ ಕೋಲೆ | ಪರಿವಾರ ಸಹಿತ ಚರಿಸುತ ಅಸಿಘ್ಯಾಳು ಪುರವಾಸ ದಾಸರಿಗೆ ಶರಣೆಂಬೆ ಕೋಲೆ 10 ಶ್ರೀ ಗುರು ಜಗನ್ನಾಥದಾಸರು ಸ್ವಾಮಿರಾಯರ ವಲಿಸಿ ಸ್ವಾಮಿರಾಯನಿಗೊಲಿದು ಸ್ವಾಮಿ ಶ್ರೀಹರಿಯ ಮಹಿಮೆಯ ಕೋಲೆ ಸ್ವಾಮಿ ಹರಿಯ ಮಹಿಮೆ ಪೇಳಿದ ಕೋಸಿಗಿ ಸ್ವಾಮಿರಾಯಾರ್ಯರ ಬಲಗೊಂಬೆ ಕೋಲೆ 11 ಶ್ರೀ ಇಂದಿರೇಶದಾಸರು (ತಿರುಪತಿ ಶ್ರೀ ಹುಚ್ಚಾಚಾರ್ಯರು) ಅಚ್ಭ ಸದ್ಭಕ್ತಿಯಲಿ ಅಚ್ಯುತಕೃಷ್ಣನ ಅರ್ಚಿಸಿ ವಿಧ ವಿಧ ಮೆಚ್ಚಿಸಿ ಕೋಲೆ | ಅರ್ಚಿಸಿ ವಿಧ ವಿಧ ಮೆಚ್ಚಿಸಿದಂಥ ಜ್ಞಾನಿ ಹುಚ್ಚಾಚಾರ್ಯರನ ಬಲಗೊಂಬೆ ಕೋಲೆ 12 ಶ್ರೀ ಭೀಮಸೇನಾಚಾರ್ಯರು ಕೊಪ್ಪರ ಶ್ರೀಮತ್ ಕಾರ್ಪರಕ್ಷೇತ್ರಧಾಮ ನರಸಿಂಹನ ನೇಮ ಪೂರ್ವಕದಿ ಪೂಜಿಸಿ ಕೋಲೆ | ನೇಮ ಪೂರ್ವಕದಿ ಪೂಜಿಸಿದಂಥ ಪೂಜ್ಯ ಭೀಮಸೇನಾರ್ಯಋ ಬಲಗೊಂಬೆ ಕೋಲೆ 13 ಶ್ರೀ ರಾಘಪ್ಪದಾಸರು ಮರುತನ ಪ್ರತ್ಯಕ್ಷಗೈದು ತನ್ನ ಗುರುತು ತೋರದೆ ಚರಿಸಿದ ಕೋಲೆ | ಗುರುತು ತೋರದೆ ಚರಿಸಿದ ರಘುಪತಿ ಚರಣ ಕಿಂಕರಗೆ ಶರಣೆಂಬೆ ಕೋಲೆ 14 ನೂರಾರು ಶಿಷ್ಯಪರಿವಾರ ಸಹಿತರಾಗಿ ಶೌರಿಕಥಾಮೃತ ಸವಿಯುತ ಕೋಲೆ | ಶೌರಿಕಥಾಮೃತ ಸವಿದಂಥ ಶ್ರೀ ರಘುವೀರನ ದಾಸರಿಗೆ ನಮಿಸುವೆ ಕೋಲೆ 15 ಗೋವಿಂದದಾಸರ ಭಾವಕ್ಕೆ ಮೆಚ್ಚಿ ದೇವನ ಮಹಿಮೆ ತೋರಿದ ರಾಘವಾಖ್ಯ ಕೋವಿದರಾಗ್ರಣಿಯ ಬಲಗೊಂಬೆ ಕೋಲೆ 16 ಶ್ರೀ ಗೋವಿಂಧದಾಸರು ಎಳೆಯತನದಿ ವಿದ್ಯ ಕಲಿಯದೆ ಹರಿನಾಮ ಬಲದಿಂದ ಜ್ಞಾನಿಗಳಿಸಿದ ಕೋಲೆ | ಬಲದಿಂದ ಜ್ಞಾನಗಳಿಸಿ ಅಸಿಷ್ಯಾಳು ನಿಲಯ ದಾಸರಿಗೆ ವಂದಿಪೆ ಕೋಲೆ 17 ಮಾವನ ವೈರಿಯಾದ ಮಾವರನ ಮನದಿ ಮಾವನನಂತೆಂದು ಭಾವಿಸಿ ಕೋಲೆ | ಮಾವನಂತೆಂದು ಭಾವಿಸಿ ಸ್ತನಿಸಿದ ಗೋವಿಂದದಾಸರ ಬಲಗೊಂಬೆ ಕೋಲೆ 18 ಬಂದ ವಿಪ್ರರಿಗೆ ಸಂದರುಶನದಿಂದ ವಂದಿಸಿ ಪರಮಾನಂದವ ಬಡು ಗೋ ವಂದಿಸಿ ದಾಸರಿಗೆ ವಂದಿಪೆ ಕೋಲೆ 19 ಲೇಸು ಭಕ್ತಿಯಿಂದ ದಾಸರ ಕವನ ಸುಧೆ ಪ್ರಾಶನಗೈದು ಸಂತತ ಕೋಲೆ | ಪ್ರಾಶನಗೈದು ಸಂತತ ಅಶಿಷ್ಯಾಳು ವಾಸದಾಸರಿಗೆ ಶರಣೆಂಬೆ ಕೋಲೆ 20 ಜಾಗರ ಶಿಷ್ಯ ಶ್ರೀ ಐಕೂರಾಚಾರ್ಯರು ಏಕಾಂತದಲಿ ಕುಳಿತು ಶ್ರೀಕಾಂತನ್ನ ವಲಿಸಿ ಲೋಕಾಂತರದಲಿ ಚರಿಸಿದ ಕೋಲೆ | ಲೋಕಾಂತರದಲಿ ಚರಿಸಿದ ನಮ್ಮಗುರು ಐಕೂರಾಚಾರ್ಯರಿಗೆ ಶರಣೆಂಬೆ ಕೋಲೆ 21 ಹುಟ್ಟಿದು ಒಂದೂರು ಮೆಟ್ಟಿದ್ದು ಬಹು ಊರು ಕಟ್ಟ ಕಡೆಯಲಿ ಹರಿಯೂರು ಕೋಲೆ | ಕಟ್ಟ ಕಡೆಯಲ್ಲಿ ಹರಿ ಊರು ಸೇರಿದಂಥ ಶ್ರೇಷ್ಟ ಸದ್ಗುರುಗಳ ಬಲಗೊಂಬೆ ಕೋಲೆ 22 ಹಾದಿ ಇದೆಂದು ಬೋಧಿಸಿದಂಥ ನಮ್ಮ ಮಾಧವೇಶಾಚಾರ್ಯರ ಬಲಗೊಂಬೆ ಕೋಲೆ 23 ಚತುರ ವಿಂಶತಿ ವರನುಡಿಗಳಿಂದೆಸೆಯುವ ರತುನ ಹಾರದ ಕೋಲುಪದ ಕೋಲೆ | ರತುನ ಹಾರದ ಕೋಲುತದ ನಿತ್ಯಪರಿಸುವರಿಗೆ ಶಾಮಸುಂದರವಿಠಲ ಮುದವೀವÀ ಕೋಲೆ 24
--------------
ಶಾಮಸುಂದರ ವಿಠಲ
ಶ್ರೀದಂಪತಿ ಯುಗಳು ಪ ಮನುರಘು ಜನಕ ಸಮಾನ ಚರಿತ್ರಂ ಅನುಪಮ ಕೀರ್ತಿ ಸುಧಾಕರ ಮಿತ್ರಂ ಮನಸಿಜ ಲೋಭ ಮೋಹಾದಿ ಲವಿತ್ರಂ 1 ಚಂದ್ರಶೇಖರ ಸ್ಮøತಿದತ್ತ ಸುಚಿತ್ತಂ ಮಂದಿರ ಕೌಸ್ತುಭರತ್ನಂ 2 ಮಾನವ ಸುಪಾಲನ ಮಾಹಿತಂ ದಾನಧರ್ಮ ಗುರು ಸೇವನನಿರತಂ ಧೇನುಪುರೀಶ್ವರ ಭಾವನ ಮುದಿತಂ 3
--------------
ಬೇಟೆರಾಯ ದೀಕ್ಷಿತರು
ಶ್ರೀನಿವಾಸ ನಿನ್ನ ಕರುಣಾ ಏನೆಂದು ಸ್ತುತಿಪೆ ಪ. ಮಾನವರೊಳಗತಿ ಹೀನಬುದ್ಧಿಯಲಿ ಏನೊಂದು ಮಾರ್ಗ ಕಾಣದೆ ಬಹು ಬಳಲಿ ನಾನಾ ಚಿಂತೆಗಳಿಂದ ಧ್ಯಾನಿಪ ಸಮಯದಿ ತಾನಾಗಿ ಕರುಣಿಸಿ ಮಾನ ಪಾಲಿಸಿದಿ 1 ಹುಣಾರುವೆನ್ನನು ನಾನಾ ತರದೊಳು ಮಾನಹಾನಿಯ ಮಾಡಿ ಮರಳಿ ಬಾಧಿಸಲು ತಾನೆಂದು ಪೇಳುವರಿಲ್ಲದಂತಿರಲು ನೀನೆ ಬಂದೊದಗಿ ರಕ್ಷಿಸಿದೆ ಕೃಪಾಳು 2 ತದನಂತರದಲಿ ಕಷ್ಟದ ಬಾಧೆ ಸಹಿಸದೆ ಮದರಾಶಿಯೆಂಬ ಪಟ್ಟಣಕೆ ನಾ ಸರಿದೆ ಸದರವಲ್ಲೆಂದು ತಿಳಿದು ನಿನಗೊದರೆ ವಿಧಿಪಿತ ನೀನಲ್ಯು ಪ್ರೇರಿಸಿ ಪೊರೆದೆ 3 ಸಿರಿವರ ನಿನ್ನಯ ಪರಮ ಮಂಗಳಮೂರ್ತಿ ಹರುಷದಿಂದಲಿ ನೋಡಿ ಬರಲು ನಾನಿಲ್ಲಿ ದೊರೆತನದಲಿ ಮಾನಿತಪದಲ್ಲಿ ಇರಿಸಿ ನಿರಂತರ ಕಾವುದ ಬಲ್ಲಿ4 ಶರಣಾಗತ ರಕ್ಷಾಕರನೆ ಮಂದಿರದ ವರನಾಗಿ ಸಲಹುವ ದೊರೆ ನಿನ್ನ ಬಿರುದ ತರಳ ಬುದ್ಧಿಯೊಳೆಂತು ವರ್ಣಿಪೆ ವರದ ಕರುಣಾ ಸಾಗರ ವೆಂಕಟಾದ್ರಿಯೊಳ್ಮೆರೆದ 5
--------------
ತುಪಾಕಿ ವೆಂಕಟರಮಣಾಚಾರ್ಯ