ಒಟ್ಟು 2020 ಕಡೆಗಳಲ್ಲಿ , 113 ದಾಸರು , 1581 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಶಾರದೆ ಪರಮ ಪಾವನೆಯೆ ಪಾಲಿಸು ಎನ್ನನು ಪರಬ್ರಹ್ಮನ ಸತಿಯೆ ಪ ತವಪಾದ ಕೃಪೆಯಿಂದ ಕನ್ನಡ ನುಡಿಯಲಿ ವಿವರಿಸಿ ಪೇಳುವೆ ಭಾಗ್ಯ ಸನ್ನುತಿಯ ತವಕದಿ ಬಲಿದೀಗ ಕೊಡು ಸರಸ್ವತಿಯೆ ರವಿ ಕೋಟಿ ತೇಜ ವಿರಾಜಿತಾತ್ಮಿಕೆಯ 1 ಜಲಕೆ ಕ್ಷೀರವು ಮುಟ್ಟಿದಂತೆನ್ನ ಮನದಿ ಸುಲಲಿತ ವಾಕ್ಯವ ಪಾಲಿಸು ದಯದಿ ಜಲಜ ಭವನರಾಣಿ ಕರದಿ ಪುಸ್ತಕವೇಣಿ ಕಲಕೀರ ವಾಣಿ ಕಪಿಲೆ ಸುವಾಣಿ 2 ಧರೆಯೊಳಧಿಕವೆಂಬ ಕೊಡಚಾದ್ರಿಯೊಳಗೆ ಸ್ಥಿರವಾಗಿ ನೆಲೆಸಿದ ಮೂಕಾಂಬೆ ಎನಗೆ ಕರುಣಿಸಿದದಾರನು ವರಿಸಿದರೆನಗೆ ಹರುಷದಿ ಪಾಲಿಸೆ ಪರಮ ಪಾವನೆಯೆ 3
--------------
ಕವಿ ಪರಮದೇವದಾಸರು
ಪಾಲಿಸು ಶ್ರೀನಿವಾಸ ಪಾಲಿಸೋ ಪ ಪಾಲಿಸೋ ಯದುಕುಲ ಬಾಲಾ ಗಾನ- ಲೋಲನೆ ಯಾಕಿಂಥ ಜ್ವಾಲಾ ಜನ್ಮ ಬಲ್ಲೇನಾ ಸಂಸಾರಶೂಲಾ ನಿನ್ನ ಚಾಲನದಿಂದಾದವೆಲ್ಲಾ ಪದ್ಯ ಮಾಲೆಹಾಕುವೆ ಸಿರಿಲೋಲಾ ಆಹಾ ಬಾಲನ ಪಡೆದು ಪಾಲಿಸಲಾರೆನೆಂದರೆ ಸೀಲನೇ ಜನನಿ ಪದ್ಮಾಯಗಳಿಗೆ ಪೇಳ್ವೆ 1 ನಾನು ಮಾಡುವುದೆಂಬುದಿಲ್ಲಾ ಯೆನಗಾವ ಸ್ವಾತಂತ್ರ್ಯವು ಇಲ್ಲಾ ಇರೆ ಅನುಗಾಲ ಕಷ್ಟವು ಸಲ್ಲಾ ಎನಗೆ ಜನುಮಾದಿ ಭಯವು ಬಿಟ್ಟಿಲ್ಲ ನೀನು ತನುಸ್ಥಾನ ಬಿಟ್ಹೋದ ಮ್ಯಾಲೆ ಎನ್ನ ಸ್ವಾತಂತ್ರ್ಯವು ಇಲ್ಲವಾಯಿತಲ್ಲ ಆಹಾ ಅನುದಿನ ಹಸಿವೆ ತೃಷೆಗಳಿಂದ ಬಳಲೋ ದಾ- ಸನು ನಿನ್ನವನಿಗೆ ಸ್ವಾಧೀನವೆಲ್ಲಿಹುದೈಯ್ಯಾ 2 ನಿತ್ಯ ಸಂಸಾರಿಯಾದೆನಗೆ ಮತ್ತೆ ಮೃತ್ಯು ಬೆನ್ಹತ್ತಿರುವವಗೆ ಮಾಡೋ ಕರ್ಮ ಬದ್ಧ ಎನಗೆ ನೀ- ಚತ್ವದಿದುಪಜೀವಿಸುವವಗೆ ನಾನು ನಿತ್ಯನೆಂಬುವ ದುರಾತ್ಮನಿಗೆ ಆಹಾ ಮುಕ್ತಿಗೊಡೆಯ ಪುರುಷೋತ್ತಮ ನಿನ್ನ ದಾ- ಸತ್ವನಿತ್ತು ಸುಶಕ್ತನಮಾಡು ನೀ 3 ನಿನ್ನ ಆಧೀನವೊ ಎಲ್ಲಾ ನಾನು ನಿನ್ನ ದಾಸನು ಶಿರಿನಲ್ಲಾ ಅನು- ದಿನ ಮಾಡುವ ಕಾರ್ಯವೆಲ್ಲ ನೀನು ಚಲನೆದಂದದಿ ಮಾಡ್ವೆನಲ್ಲಾ ಯೆಂನೊ- ಳಾವ ತಪ್ಪಿತವೇನೋ ಇಲ್ಲಾ ನಿನ್ನ ಸಂಕಲ್ಪದಂತಾಗೋದೆಲ್ಲಾ ಆಹಾ ತನುವ ಕೊಟ್ಟವ ನೀನೆ ತನು ಕೊಂಡೊಯ್ವನೂ ನೀನೆ ಹನುಮೇಶವಿಠಲಾ ನಿನ್ನವನಾದ ಮ್ಯಾಲೆನ್ನಾ4
--------------
ಹನುಮೇಶವಿಠಲ
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸು ಶ್ರೀಹರಿಯೆ ಯದುಭೂಮಿಪತಿಯೆ ಪ ಬಾಲಾರ್ಕ ಸಮಮುಖ ಲೋಲ ಮುರಳೀಧರ ಅ.ಪ. ನಂದ ನಂದನ ದಿವ್ಯ ಸುಂದರ ರೂಪನೆ ಬಂಧುರಾಲಕ ವರ ಮಂದಹಾಸನೆ 1 ಗೋಪ ಸುಂದರೀಗಣ ದೀಪವಿರಾಜಿತ ತಾಪಿಂಛ ಪಲ್ಲವ ನೂಪುರ ಶೋಭಿತ2 ಕಾಳೀಯ ಮರ್ದನ ನೀಲಾಂಬುದ ಪ್ರಭ ನಾಳೀಕಾನನ ಚಿತ ಲೋಲಾಕ್ಷಿ ಚಿತ್ತನೆ3 ಭವ ಭಂಗ ಮಾನುಷ ವೇಷ ಶೃಂಗಾರ ಶೋಭಿತ ಭೃಂಗಾಲಕಾರ್ಚಿತ 4 ಧೇನುನಗರ ದೊರೆ ಸಾನುರಾಗದಿ ಪೊರೆ ಗಾನ ವಿನೋದ ಹರೆ ಭಾನುಸನ್ನಿಭ ಶೌರೆ 5
--------------
ಬೇಟೆರಾಯ ದೀಕ್ಷಿತರು
ಪಾಲಿಸು ಸೋಮಸುಭಾಸೆ ಪ ಇಂದೀವರಾಕ್ಷಿಯೆ ವಂದಿತ ಜಾಯೆ 1 ಶೃಂಗಾರಶೋಭಿತೆ ಮಂಗಳಮಾತೆ 2 ಧೇನುಪುರಾಧಿಪೆ ಕೋಮಲಾಲಾಪೆ 3
--------------
ಬೇಟೆರಾಯ ದೀಕ್ಷಿತರು
ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿಮೇಲಾದ ಕರವೀರವಾಸಿನಿದೇವಿಪ ಬಡಬಡಿಸಿ ಬಂದಿಹೆ ನಾನಿಲ್ಲಿನೋಡಿಕೊಡುವಿ ವರವೆಂದು ಆಸೆಯ ಮಾಡಿಬಿಡಬೇಡ ಮಗನನು ಕರುಣದಿ ನೋಡಿಕೊಡು ನೀ ವರನನು ಸಿರಿಗಳ ನೀಡಿ 1 ಬಡತನದ ಭೂತವ ಎದುರಿಸುವುದು ತಾಯೆತಡೆಯಲಾರೆನು ಇನ್ನು ಕರುಣಿಸಿ ಕಾಯೆಬಿಡದೆ ಭಜಿಪೆ ನಿನ್ನ ಹೇ ಶುಭಕಾಯೆಕೊಡು ನೀ ವರವನು ಧನಗಳನೀಯೆ 2 ಪನ್ನಗ ವೇಣಿನುಡಿಯೆ ಹರಕೆಗಳ ಹೇ ಶುಭವಾಣಿಒಡೆಯ ಗದಗುವೀರ ನಾರಾಯಣನ ಜಾಣಿಕೊಡು ನೀ ವರವನು ವಿಠಲನ ರಾಣಿ 3
--------------
ವೀರನಾರಾಯಣ
ಪಾಲಿಸುಗಣನಾಯಕಾ ವಿನಾಯಕ ಪ ಶೂಲಪಾಶಾಂಕುಶಧೃತ ವರದಾಯಕ ಅ.ಪ ಲಂಬೋದರಾಂಕಿತ ಜಂಭಾರಿವಂದಿತ ಕುಂಭೋದ್ಭವಾನತ ಅಂಬಾಸುತ ಅಂಭೋಜ ಸಖನುತ ಗಂಭೀರ ಗುಣಯುತ ಸಾರ ಸಂತೋಷಿತ 1 ಆತಂಕಪರಿಹಾರ ಮಾತಂಗಮುಖವೀರ ಶೀತಾಂಶುಶೃಂಗಾರ ಶ್ವೇತಾಂಬರ ಭೂತಾಳಿಪರಿವಾರ ಖ್ಯಾತಾವಿಘ್ನೇಶ್ವರ ದಾತಾರ ಮಾಂಗಿರಿನಾಥಾ ಕೃಪಾಧರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆ ಎನ್ನ ನಾಮಗಿರಿಯಮ್ಮ ಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ ಪ ಕರುಣದಿ ನೋಡೆ ನಾಮಗಿರಿಯಮ್ಮ ಇಂದಿರೆ ಎನ್ನ ಸುಖಿಯನ್ನೆ ಮಾಡೆ ವಾರಿಜಮುಖಿ ನರಪಾಲಾಧಮರ ದುರ್ಮುಖವ ನೋಡಿಸದಂತೆ 1 ಸುಖಚಿದಾಕಾರೆ ಎನ್ನ ಮನೆಗೆ ದಯವಿಟ್ಟು ಬಾರೆ ನಾರೆಯರಲ್ಲಿ ಸರಿ ನಿನಗಾರೆ ಪಂಕಜನೇತ್ರೆ ಕಿಂಕರನೆಂದು ಆತಂಕ ಬಿಡಿಸೆ ತಾಯೆ 2 ಚರಣಾರವಿಂದ ಸೇವಕನಲಿ ಕೃಪೆಯಿಟ್ಟು ಮಂದಹಾಸದೆ ಬಂದು ಸುಖಬುದ್ಧಿಯಿಂದ ಇಂದಿರಾದೇವಿ ಚಂದ್ರವದನೆ ಎನ್ನ ಮಂದಿರದೊಳಗಿದ್ದು 3 ಶ್ರಿತ ಸುರಧೇನು ದೇವಿ ನೀನೆಂದು ಇಂದಿರೆ ಇಷ್ಟುಪೇಕ್ಷೆ ನಿಂಗೇನು ಕಷ್ಟಗಳೆಲ್ಲ ನಷ್ಟವಾಗುವ ಪರಿ ದೃಷ್ಟಿ ಎನ್ನೊಳಗಿಟ್ಟು 4 ನರಹರಿ ಜಾಯೆ ನಾಮಗಿರಿಯಮ್ಮ ಬಂದು ನೀ ಕಾಯೇ ಪೇಳುವುದೇನು ಸರ್ವಜ್ಞ ತಾಯೇ ವಾರಿಜಮುಖಿ ನಿಜ ವರ್ಣಾಶ್ರಮಧರ್ಮ ಚ್ಯುತಿ ಎಂದೂ ಬರದಂತೆ 5
--------------
ವಿದ್ಯಾರತ್ನಾಕರತೀರ್ಥರು
ಪಾಲಿಸೆ ಪದುಮಾಲಯೆ, ನೀನೇ ಗತಿ ಪ ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದ ಗೋಕುಲ- ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ ಅಪ ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ- ವನ್ನು ನಂಬಿದೆ ನೀ ಬಲ್ಲೆ ತಡಮಾಡದೆ ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ ಗುಣಸಂ ಪನ್ನ ರಕ್ಕಸನನ್ನು ಸೀಳಿದ ಪನ್ನಗಾದ್ರಿ ನಿವಾಸೆ ಹರಿಪ್ರಿಯೆ 1 ಅರಿಯದ ತರಳನೆಂದು ಶ್ರೀಪತಿ ಸತಿ ಕರುಣದಿ ಸಲಹೆ ಬಂದು ಕರುಣಾಸಿಂಧು ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖನು ಸುರರ ಬಾಧಿಸೆ ಹರಿವರರ ದಂಡೆತ್ತಿ ಬಹುಮುಖ ದುರುಳನ ಶಿರ ತರಿದವನ ಪ್ರಿಯೆ 2 ಅಜ ಮನಸಿಜ ಜನನಿ ಅಂಬುಜಪಾಣಿ ನಿತ್ಯ ಕಲ್ಯಾಣಿ ಕುಜನಮದರ್Àನ ವಿಜಯವಿಠ್ಠಲ ಭಜಿಸಿ ಪಾಡುವ ಭಕ್ತಕೂಟವ ನಿಜದಿ ಸಲಹುವೆನೆಂಬ ಬಿರುದುಳ್ಳವಿಜಯಸಾರಥಿ ವಿಶ್ವಂಭರ ಪ್ರಿಯೆ 3
--------------
ವಿಜಯದಾಸ
ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ ಪ ಶ್ರೀಲೋಲನ ಪದಕೀಲಾಲಜ ತೋರಿ ಅ.ಪ ನಿತ್ಯ ಜಡಪ್ರಕೃತ್ಯಭಿಮಾನಿ ಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ1 ಮಂತ್ರಗಳರಿಯೆನು ಮಂದಮತಿಯು ಸ್ವ ತಂತ್ರದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ2 ಗುಣಪ್ರಕ್ರಿಯೆಗಳ ಅರಿತವುಳ್ಳ ಲಕ್ಷಣವಂತೆ ವಿಜಯವಿಠ್ಠಲನ ನಿಜಾಂಗನೆ 3
--------------
ವಿಜಯದಾಸ
ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾರಿಗೆ ಬಂದೆನುಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ ಪ. ಆದಿ ಬ್ರಹ್ಮನರಾಣಿಯೆ ವೇದಕ್ಕ ಭಿಮಾನಿಯೆಮೋದ ಗಾಯನ ಕುಶಲಳೆಮೋದ ಗಾಯನ ಕುಶಲಳೆ ಸರಸ್ವತಿ ನೀ ದಯಮಾಡಿ ಮತಿಯ ಕೊಡು 1 ಹೊನ್ನವರೆ ಹೊಸ ಕಪ್ಪು ಬೆನ್ನಿನ ಮ್ಯಾಲಿನ ಹೆರಳುಕಿನ್ನರಿ ನಿನ್ನ ಬಲಗೈಯಕಿನ್ನರಿ ನಿನ್ನ ಬಲಗೈಯ್ಯಲಿ ಹಿಡಕೊಂಡುಖನಿ ಬಾ ನಮ್ಮ ವಚನಕ್ಕೆ 2 ಮಿತ್ರಿ ಸರಸ್ವತಿಗೆ ಮುತ್ತಿನ ಉಡಿಯಕ್ಕಿಮತ್ತೆ ಮಲ್ಲಿಗೆಯ ನೆನೆದಂಡೆಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದ್ದೆಪ್ರತ್ಯಕ್ಷವಾಗ ಸಭೆಯೊಳು3 ಅರಳು ಮಲ್ಲಿಗೆ ನೆನೆದಂಡೆ ತಂದಿಹೆತಡೆಯದೆ ನಮಗೆ ವರವ ಕೊಡು 4 ಗುಜ್ಜಿ ಸರಸ್ವತಿಗೆ ಗೆಜ್ಜೆ ಸರಪಳಿಯಿಟ್ಟು ವಜ್ರಮಾಣಿಕ್ಯ ದಾಭರಣವಜ್ರಮಾಣಿಕ್ಯ ದಾಭರಣ ಭೂಷಿತಳಾಗಿನಿರ್ಜರೊಳುತ್ತಮಳೆ ನಡೆ ಮುಂದೆ 5 ಹರದಿ ಸರಸ್ವತಿ ಸರಿಗೆಸರಪಳಿಯಿಟ್ಟುಜರದ ಸೀರೆಯನೆ ನಿರಿದುಟ್ಟು ಜರದ ಸೀರೆಯನೆ ನಿರಿದುಟ್ಟು ಬಾರಮ್ಮದೊರೆ ರಾಮೇಶನ ಅರಮನೆಗೆ6
--------------
ಗಲಗಲಿಅವ್ವನವರು
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ
ಪಾಲಿಸೆನ್ನ ಗೋಪಾಲ ಕೃಷ್ಣ ಪ ಪಾಲಿಸೆನ್ನ ದಧಿಪಾಲ ಮುಖರ ಗೋ ಪಾಲಬಾಲ ಕೃಪಾಲಯ ಹರಿಯೇ ಅ.ಪ. ಭವ ರುಂಡಮಾಲ ಮೇ ಷಾಂಡ ಪ್ರಮುಖ ಸುರಷಂಡ ಮಂಡಿತನೆ 1 ಗೋಪಿ ಗೋಪಾಲ ವೃಷ್ಣಿಕುಲ ದೀಪ ಶ್ರೀಪಶಿವಚಾಪ ಭಂಜನಾ 2 ಅಂಡಜಾಧಿಪ ಪ್ರಕಾಂಡ ಪೀಠ ಕೋ ದಂಡಪಾಣಿ ಬ್ರಹ್ಮಾಂಡ ನಾಯಕ 3 ವ್ಯಾಪ್ತ ಗೋಪ್ತ ಜಗದಾಪ್ತ ದೋಷ ನಿ ರ್ಲಿಪ್ತ ಪ್ರಾಪ್ತಗತಸುಪ್ತ ಸುಷುಪ್ತಾ 4 ವೇದವೇದ್ಯ ಬ್ರಹ್ಮಾದಿವಂದ್ಯ ಸುಖ ಬೋಧಪೂರ್ಣ ಬ್ರಹ್ಮೋದನ ಭೋಕ್ತಾ 5 ಅಧ್ವರೇಶ ಲೊಕೋದ್ಧಾರÀ ಪಾಣಿ ಸ ರಿದ್ವರ ಪಿತಗುರು ಮಧ್ವವಲ್ಲಭಾ6 ಪೋತ ವೇಷದರ ಪೊತನಾರಿ ಪುರು ಹೂತ ಮದಹ ಜಗನ್ನಾಥ ವಿಠ್ಠಲ 7
--------------
ಜಗನ್ನಾಥದಾಸರು
ಪಾಲಿಸೆನ್ನ ಚನ್ನ ಕೇಶವಾ ನಿನ್ನ ಬಾಲನೆಂದೆಣೆಸೋ ಮಾಧವಾ ಪ ಲೋಲ ಲೋಚನ ತಂದೆ ಶೀಲ ನಂಬಿದೆ ಬಂದೆ ಅ.ಪ. ದೂರ್ವಾಪುರ ನೆಲೆವಾಸಿಯೇ ತಂದೆ ಸರ್ವಾಭೀಷ್ಟ ಫಲದಾತನೇ ಪರ್ವಾ ಸಪ್ತದಿ ನಿನ್ನ ಭಜಿಸೇ ಸ್ಮರಿಸುವೆನು 1 ನಂದನಂದನ ಗೋವಿಂದನೇ ತಂದೆ ಬಂಧವ ನೀಗುವ ಶಕ್ತಿಯ ಮಂದರಧರದಯ ತೋರೆಂದು ನೆನೆಯುವೆ 2 ಭಕ್ತರ ಪೊರೆ ನೀ ದಾತನೇ ತಂದೆ ಮುಕ್ತಿ ಸ್ವಾತಂತ್ರ್ಯವ ನೀಡೆಲೋ ಶಕ್ತಿ ಸ್ವರಾಜ್ಯಕ್ಕೆ ಮಾತೃ ಸೇವೆಗೆ 3
--------------
ಕರ್ಕಿ ಕೇಶವದಾಸ
ಪಾಲಿಸೆನ್ನ ಪಂಕಜಾಕ್ಷ ಪತಿತಪಾವನ ನೀಲಮೇಘಶ್ಯಾಮ ರಮಾಲೋಲ ಜಗನ್ಮೋಹನಾ ಪ ಭವವಿದಾರ ಭಯವಿದೂರ ಭಾರ್ಗವೀವರ ಭವ ಸುರೇಶವಂದಿತಾಂಘ್ರಿಯುಗಳ ಶ್ರೀಧರ 1 ನಿನ್ನನೇ ಮರೆಹೊಕ್ಕೆ ನಾನನ್ಯಭಾವದೆ ಪನ್ನಗಾದ್ರಿನಿಲಯ ಸಲಹು ಸಾನುರಾಗದೆ ಪಾಲೆಸೆನ್ನ 2
--------------
ನಂಜನಗೂಡು ತಿರುಮಲಾಂಬಾ