ಒಟ್ಟು 1818 ಕಡೆಗಳಲ್ಲಿ , 105 ದಾಸರು , 1378 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮಾತಟ ಹರಿ ವಿಠಲ | ಪೊರೆಯ ಬೇಕಿವಳಾ ಪ ಸಾಮಸನ್ನುತ ಹರಿಯೆ | ನಿಸ್ಸೀಮ ಮಹಿಮಾ ಅ.ಪ. ಗುರು ಕರುಣ ಇವಳಿಗಿದೆ | ಮರಳಿ ಹರಿ ಗುರುಭಕ್ತಿನೆರೆ ವೃದ್ಧಿ ಗೈಸುತಲಿ | ಪೊರೆಯೊ ಇವಳಾ |ಕರುಣನಿಧಿ ನೀನೆಂದು | ಆರು ಮೊರೆಯ ನಿಡುವೆನಾಪರಿ ಪರಿಯಲಿಂದಿವಳ | ಕೈ ಪಿಡಿಯೆ ಹರಿಯೇ 1 ಸಜ್ಜನರ ಸಂಗ ಕೊಡು | ದುರ್ಜನರ ದೂರಿರಿಸುಅರ್ಜುನನ ಸಾರಥಿಯೆ | ಮೂರ್ಜಗಕೆ ಒಡೆಯಾ |ಬೊಜ್ಜೆಯಲಿ ಬ್ರಹ್ಮಾಂಡ | ಸಜ್ಜು ಗೊಳಿಸಿಹ ಹರಿಯೆ |ಅರ್ಜುನಾಗ್ರಜ ವಂದ್ಯ | ಸಜ್ಜನರ ಪಾಲಾ 2 ತರತಮದ ಸುಜ್ಞಾನ | ಹರಿಯ ಸರ್ವೋತ್ತಮತೆಕರುಣಿಸೋ ಇವಳೀಗೆ | ಪರಮ ಪಾವನ್ನಾ |ಗರುಡ ಗಮನನೆ ಗುರೂ | ಗೋವಿಂದ ವಿಠ್ಠಲನೆಮೊರೆಯ ಲಾಲಿಸಿ ಇವಳ | ಪೊರೆಯೊ ಶ್ರೀ ಹರಿಯೇ 3
--------------
ಗುರುಗೋವಿಂದವಿಠಲರು
ಭುವನೇಂದ್ರತೀರ್ಥರ ಸ್ತೋತ್ರ ಭುವನೇಂದ್ರ ಯತಿ ರನ್ನ ಭುವನ ಪಾವನ್ನತವಕದಿಂ ವ್ಯಾಸರಾಯರ ಭಜಿಪ ಘನ್ನ ಪ ಅದ್ವೈತ ಮತ ಕೋಲಾಹಲ ಸುಜ-ನಾಬ್ಧಿ ಸಮೃದ್ಧಿ ಎಂದೆನಿಪ ಮುನಿಪ ||ಸದ್ಧರ್ಮ ಸತ್ತಾಪಸ ಸಕಲ ವಿದ್ಯಾಲಾಪಅದ್ವೈತ ತ್ರಯ ವರ ಪ್ರವರ್ತಕನೇ1 ತಂತ್ರ ಸಾರಾಂತ ಆದ್ಯಂತಗಳ ಅರ್ಥವ ನಿ-ರಂತರದಲಿ ಪೇಳಿ ಹರುಷದಿಂ ||ಮಂತ್ರೋಪದೇಶವಂ ಮಾಡಿ ಮುದ್ರೆಯನಿತ್ತುಯಂತ್ರವಾಹಕನ ತೀರ್ಥವನೆರೆದ ಧೀರ 2 ಮುನಿ ಕುಲೋತ್ತಮ ಶ್ರೀ ವರದೇಂದ್ರ ತೀರ್ಥಕರಕಮಲ ಸಂಜಾತ ಭುವನ ವಿಖ್ಯಾತ ||ಅನಿಮಿತ್ತ ಬಂಧು ಗುರು ಮೋಹನ್ನ ವಿಠಲನ್ನಕ್ಷಣ ಬಿಡದೆ ಧೇನಿಸುವ ಗುರುವೇ ಸುರತರುವೇ 3
--------------
ಮೋಹನದಾಸರು
ಭೂತ ರಾಜನುತ ವಿಠಲ | ಕಾಪಾಡೊ ಇವನಾ ಪ ದಾತ ನೀನಲ್ಲದಲೆ | ಕಾವರಾರಿಹರೋ ಅ.ಪ. ಗುರು ರೂಪಿ ತೈಜಸನು | ನೆರವಾಗಿ ಸ್ವಾಪದಲಿವರಸು ಉಪದೇಶವನು | ಇತ್ತು ಪೊರೆದಿಹನೋ |ಮರಳಿ ಇವ ಲಾತವ್ಯ | ಗುರುರಾಜ ಭಕ್ತನಿಹಪೊರೆಯ ಬೇಕಿವನೆನುತ | ಪ್ರಾರ್ಥಿಸುವೆ ಹರಿಯೇ 1 ನಿಷ್ಕಾಮ ಭಕ್ತನನ | ಮಾಡಿ ನೀ ಸಲಹಯ್ಯಸತ್ಕಾಮಗಳ ಗರೆದು | ಸಾಧನೆಯ ಗೈಸೀದುಷ್ಕಾಮಗಳಿಗೆಡೆಯ | ನೀ ಕೊಡದೆ ಪೊರೆಯಯ್ಯಸತ್ಕರ್ಮ ಸತ್ಸಂಗ | ಸರ್ವದಾ ಕೊಡುತಾ 2 ಸತಿಸುತರು ಹಿತರಲ್ಲಿ | ದುರ್ಮಮತೆ ಕಳೆಯುತ್ತಮತಿಮತಾಂ ವರರಂಘ್ರಿ | ಶತ ಪತ್ರರತನಾಹಿತದಿಂದ ನೀ ಸಲಹಿ | ಗತಿ ಪ್ರದನು ಆಗಯ್ಯಕೃತಿ ರಮಣ ಪ್ರದ್ಯುಮ್ನ | ಪ್ರತಿ ರಹಿತ ದೇವಾ 3 ಮಧ್ವಮತ ಪದ್ಧತ್ಯಭಿ | ವೃದ್ಧಿಗೈಸುತಲಿವಗೆಸಿದ್ಧಾಂತ ಜ್ಞಾನದಲಿ | ಸಿದ್ಧ ನೆನಿಸಯ್ಯಾವೃದ್ಧಿಯಾಗಲಿ ಜ್ಞಾನ | ವೈರಾಗ್ಯ ಭಕ್ತಿಗಳುಮಧ್ವರಮಣನೆ ದೇವ | ಬುದ್ಧಿ ಬೋದಕನೇ 4 ಬದಿಗ ನೀನಾಗಿದ್ದು | ಹೃದಯದವಕಾಶದಲಿಮುದದಿಂದ ತವರೂಪ | ತೋರಿ ಸಲಹಯ್ಯಾ |ಇದಕನ್ಯ ನಾ ಬೇಡೆ | ಯದು ವರೇಣ್ಯನೆ ಕೃಷ್ಣಸದಯ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಭೂರಮಣ ರಘುರಾಮ ವಿಠ್ಠಲನೆ ನೀನಿವಳಭೂರಿ ಕರುಣದಲಿಂದ ಕಾಪಾಡಬೇಕೊ ಪ ಆರು ಇಲ್ಲವೊ ಗತಿಯು ನಿನ್ಹೊರತು ಶ್ರೀಹರಿಯೆಸಾರಿ ನಿನ್ನಯ ಪಾದವಾರಾಧಿಸುತ್ತಿಹಳಾ ಅ.ಪ. ತಾರತಮ್ಯ ಜ್ಞಾನ ಪಂಚಭೇದವನರುಹಿಪಾರು ಮಾಡೀಭವದ ಪರಿತಾಪವಾನೀರೇರುಹಾನಯನ ಕಾರುಣ್ಯ ಮೂರುತಿಯೆಪ್ರೇರಕನೆ ಜಗಕೆಲ್ಲ ಸರ್ವಾಂತರಾತ್ಮ 1 ಪತಿ ಸೇವೆಯಲಿ ಭಕುತಿ ಅತಿಶಯದಿ ಹರಿ ಭಕುತಿಮತಿಯು ತತ್ವಾರ್ಥಗಳ ಗ್ರಹಿಸುವಲಿ ರತಿಯೂಸತತ ವಿಷಯಾದಿಗಳು ನಶ್ವರವು ಎಂದೆನುತಮತಿಯಿತ್ತು ಇವಳೀಗೆ ಪಾಲಿಪುದು ವೀರಕುತಿ2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೆಕೀಚಕಾರಿ ಪ್ರೀಯ ಮೋಚಕನು ನೀನೇ |ಚಾಚಿ ಶಿರ ನಿನ್ನಡಿಗೆ ಯಾಚಿಸುವೆ ಶ್ರೀಹರಿಯೆಪಾಚ ಕಾಂತರ್ಯಾಮಿ ಕರ್ಮನಾಮಕನೆ 3 ಭವ ಬಂಧ ಕತ್ತರಿಸೊ ಹರಿಯೆ 4 ಕೃತ್ತಿವಾಸನ ತಾತ ಉತ್ತಮೋತ್ತಮ ದೇವಪುತ್ರಮಿತ್ರನು ನೀನೆ ಸರ್ವತ್ರ ಭಾಂಧವನೆ |ಪುತ್ರಿಯನು ಸಲಹೆಂದು ಪ್ರಾರ್ಥಿಸುವೆ ನಿನ್ನಡಿಗೆಆಪ್ತ ಗುರುಗೋವಿಂದ ವಿಠಲ ಮಮ ಸ್ವಾಮೀ 5
--------------
ಗುರುಗೋವಿಂದವಿಠಲರು
ಭೂವರಾಹ ವಿಠಲನೆ | ಸೇವಕನ ಪೊರೆಯೊ ಪ ಕಾವಕರುಣಿಗಳರಸ | ಭಾವಜಾನಯ್ಯ ಅ.ಪ. ಏಸೆಸೊ ಜನ್ಮಗಳ | ಸೂಸಿದನುಭವದಿಂದಲೇಸಾದ ಮಧ್ವಮತ | ಪೋಷಿಸುತ್ತಿಹನೊವಾಸವಾದ್ಯಮರನುತ | ಶೇಷಾದ್ರಿವಾಸಹರಿಪೋಷಿಸೊ ಬಿಡದಿವನ | ಆಶೆಪೂರಯಿಸಿ 1 ತಾರತಮ್ಯಜ್ಞಾನ | ಮೂರೆರಡು ಭೇಧಗಳವಾರವಾರಕೆ ತಿಳಿಸಿ | ಕಾರಣಾತ್ಮಕನೆಸಾರತಮ ನೀನೆಂಬ | ಚಾರುಮತಿಯನೆ ಕೊಟ್ಟುನೀರಜಾಸನ ವಂದ್ಯ | ಪಾರುಗೈಭವವ 2 ಅಧ್ಯಾತ್ಮ ಅಧಿಭೂತ | ಆದಿಭೌತಿಕತಾಪಭೋದಿಸುತ ಸಾಧನದ | ಹಾದಿಯಲ್ಲಿರಿಸೋಮಧ್ವಾಂತರಾತ್ಮಕನ | ಪಾದರತಿಯಲಿ ಶ್ರದ್ಧೆಉದ್ಧರಿಸು ಇವನಲ್ಲಿ | ಹದ್ದುವಾಹನನೇ 3 ಕಂಸಾರಿ ಪೊರೆಯೊಹಂಸ ವಾಹನನಾದಿ | ತೃಣಾಂತ ಚವರನಹಂಸರೂಪಿಹರಿಯ | ಆಧೀನ ತಿಳಿಸೋ 4 ಸರ್ವತ್ರ ವಾಪ್ತನಿಹ | ಸರ್ವ ದೋಷ ವಿದೂರಸರ್ವಂತಾರಾತ್ಮಕನೆ | ಸರ್ವೋತ್ತಮಸರ್ವಧಾತನ ಸ್ಮøತಿಯ | ದರ್ವಿ ಜೀವಿಗೆಯಿತ್ತುಪೊರೆಯೊ ಸುಂದರ ಗುರು | ಗೋವಿಂದ ವಿಠಲ5
--------------
ಗುರುಗೋವಿಂದವಿಠಲರು
ಭೃಂಗ ಜಯ ಶರಣು ಶ್ರೀ ಸುಜ್ಞಾನ ಭಕುತಿ ವೈರಾಗ್ಯಪರನೆ ಜಯ ಶರಣು ದಾಸೋತ್ತಮರ ಮಣಿಯ ನಿನಗ್ಯಾರೆಣಿಯೆ ಗುರು ಪುರಂದರದಾಸರೆ ನಿಮಗೆ ಪ ಪಾಕಶಾಸನಪುರದ ಚಿನಿವಾರ ವರದಪ್ಪ ನಾ ಕುಮಾರನಾಗಿ ಜನಿಸಿ ಸಂಸಾರದೊಳು ಸಂಚರಿಸಿ ಲೌಕಿಕವನ್ನೆ ತೊರೆದು ಈ ಕಲಿಯುಗದಲ್ಲಿ ತುಂಗಾತೀರ ಪಂಪಾ ರಾಕಾಬ್ಜನಂತೆ ಪೊಳೆವ ನಿಧಿಗೆ ಬಂದು ನಿ ರಾಕರಿಸಿ ದುಸ್ಸಂಗ ವೈಷ್ಣವರಾಗಿ ಪತಿಕರಿಸಿ ಹರಿಭಕುತಿಯಾ 1 ಕಾಮಕ್ರೋಧ ಲೋಭ ಮದ ಮತ್ಸರ ಡಂಭ ಈ ಮರಿಯಾದಿಗಳ ಮರ್ಮವನೆ ಕಡಿದು ನಿ ಸಿರಿ ಕೈಕೊಂಡು ಆ ಮಹಾ ರಚನೆಯಲ್ಲಿ ಸೀಮೆಯೊಳು ಪ್ರಾಕೃತದ ಗೀತೆಯಲಿ ಕೊಂಡಾಡಿ ತಾಮರಸ ಸದೆ ಬಡಿದು ಮಧ್ವಸಿದ್ಧಾಂತ ಲ ಹುಯಿಸಿ ಕಾವನೈಯನ ಕುಣಿಸಿದ 2 ಸಿರಿ ವಿಠ್ಠಲನ್ನ ಮೃದು ಪದ್ಮಗಂಧವನು ಮಧುಪÀನಂತೆ ಸೇವಿಸುತ್ತ ಬುದ್ಧಿ ಪೂರ್ವಕದಿಂದಲಿ ಶುದ್ಧ ಮಂದರನೆಲ್ಲ ಎಂದೆಂದಿಗೂ ಬಿಡದೆ ಪೊದ್ದರ್ದ ಪಾಪಗಳು ತಿರುಗಗೊಡದಲೆ ಕಾಲಿ ಮಾರ್ಗದ ಪದ್ಧತಿಯ ಸ್ಥಿತಿ ಪೇಳಿದ 3 ವರದಪ್ಪನೇ ಸೋಮ ಗುರುರಾಯ ದಿನಕರನು ಗುರು ಮಧ್ವಪತಿಯೆ ಭೃಗು ಅಭಿನವನೆ ಜೀವ ಉಪದೇಶಿಸಿ ಪರಮ ಜ್ಞಾನಿಗಳ ಮಾಡಿ ಶರಧಿ ತೆರೆಯಂತೆ ಹರಿಗುಣಗಳನ್ನು ಪೊಗಳುತಿಹ ತರಳರನು ನೋಡಿ ಗುರು ವ್ಯಾಸಮುನಿರಾಯರಿಗೆ ಕರಣ ಚರಿತೆಯಲಿ ನಲಿದಾಡಿದ 4 ಫೃತದ ಬಿಂದಿಗೆ ತಂದ ಅತಿಥಿಯ ವೋಗರನುಂಡ ಸತಿಯಳೆಂದಾ ನುಡಿಗೆ ಚತುರ ಭಾಗ್ಯವನಿತ್ತ ಹಿತನಾಗಿ ದೃಢನೋಡಿದ ಯತಿಯ ಪಂಕ್ತಿಗೆ ಭಾಗೀರಥಿ ನದಿಯ ತರಸಿದ ಸುತನಾಗಿ ನೀರು ನಿಶಿತದಲಿ ತಂದ ಅ ಪ್ರತಿ ದೈವತಾ ಕಿಂಕರ 5 ವಜ್ರ ಪ್ರಹರವಿದು ಸಜ್ಜನರ ದಿವ್ಯ ಚರಣಾಬ್ಜಕ್ಕೆ ಭೃಂಗವಿದು ಹೆಚ್ಚು ಲಜ್ಜೆಯನು ತೊರೆದು ನಿತ್ಯ ಹೆಜ್ಚ್ಚಿ ಹೆಜ್ಚಿಗೆ ಬಿಡದೆ ದಾಸರ ಕರುಣವೆಂಬ ವಜ್ರ ಕವಚವ ತೊಟ್ಟು ನುಡಿದವನ ನುಡಿ ಸತ್ಯ ಅಬ್ಜಭವನೊಡನೆ ಗತಿಗೆ 6 ಎಂತು ವರ್ಣಿಸಲಿ ಎನಗಳವಲ್ಲ ಧರೆಯೊಳಗೆ ಸಂತತಿ ನೆಲಸಿದಂತೆ ಕಾವ್ಯವನೆ ಸ್ಥಾಪಿಸಿ ದಾಸರನ ಸಂತರಿಸಿ ಧರೆಗೆ ತೋರಿ ಸಿರಿ ವಿಠಲನ ಸ್ಮರಿಸುತ ಸು ಪಂಥವನು ಹಿಡಿದು ಸದ್ಗತಿಯಲ್ಲಿ ಸೇರಿದರು ಚಿಂತೆಯೊಳಗಿಟ್ಟ ಗುರುವೆ 7
--------------
ವಿಜಯದಾಸ
ಮಗಟಖಾನ ಹುಬ್ಬಳ್ಳಿ ಶ್ರೀಯಾದವಾರ್ಯರ ಕರಾರ್ಚಿತ ಶ್ರೀನರಸಿಂಹ ಸ್ತೋತ್ರ ಕರುಣವೆಂತುಂಟೋ ನಿನಗೆ | ಶ್ರೀನಾರಸಿಂಹಾ ಪ ವರತಟನಿ ಮಲಪ್ರಭೆಯ | ತೀರಸ್ಥನೆನಿಸೀ ಅ.ಪ. ಪೂರ್ವದಲಿ ಋಷಿ ಚ್ಯವನ | ರಿಂದರ್ಚಿತವು ಎನೆಓರ್ವ ಶಿಲೆಯಲಿ ನಿಂದು ಯಾದವಾರ್ಯಾ |ಪಾರ್ವ ಯೋಗೀಶ ರಚಿ | ತಾಕಾರ ಗಂಧದಲಿಆಹ್ವಾನಿತನು ಆಗಿ ನೀನಿಲ್ಲಿ ಇರುವೇ 1 ಆದಿ ವ್ಯಾಧಿಲಿನೊಂದ | ಬುಧರಿಂದ ಬಹುಸೇವ್ಯಯಾದವಾರ್ಯಾಂತಸ್ಥ | ಶ್ರೀ ನಾರಸಿಂಹಾ |ಬಧಿರ ಮೂಕರು ತಮ್ಮ | ವ್ಯಾಕುಲವ ಕಳೆಯುತ್ತಮುದವಾಂತು ತವ ಮಹಿತಿ ಕೀರ್ತಿಸುತ್ತಿಹರೋ 2 ಮಾಸ ನಿಶಿ ಜೇಷ್ಠದಲಿಮತ್ತೆ ಹರಿದಿನದಲ್ಲಿ | ಮಂದವಾರದಲೀ |ಮತ್ಸರಾದ್ವಿರಹಿತರು | ಸತ್ಸುಜನರಿಂದ ಕೂಡಿಉತ್ಸಹದ ಜಾಗರವ | ನೀ ಮಾಡಿ ಮಾಡಿಸಿದ್ಯೊ 3 ಬೆಟ್ಟದಾಚಾರ್ಯರೆನೆ | ಸುಷ್ಠು ಕೀರ್ತನೆಗೊಂಡಶ್ರೇಷ್ಠ ಹುಚ್ಚಾಚಾರ್ಯ | ರಿಲ್ಲಿ ನೆಲೆಸುತಲೀಇಷ್ಟ ಸಿದ್ಧಿಗಾಗಿ ಶ್ರೇಷ್ಟ | ತಪವನೆ ಗೈದುಇಷ್ಟಾರ್ಥ ಪೊಂದಿತಾ | ಬೆಟ್ಟಕ್ಕೆ ತೆರಳಿದರೋ 4 ಮೋದ ಪಡಿಸುತ ಬುಧರಯಾದವೇಶನ ನೊಲುಮೆ | ಸಂಧಿಸುತ ಮೆರೆದೂ |ಆದರಿಸಿ ಮಂಗಳ ಸು | ಭೋದಗಳ ಬೀರುತಲಿಮೋದ ಬಡಿಸಿದ ಹರಿಯ | ಭೂದೇವ ಆರ್ಯ 5 ಪ್ರೇರ್ಯ ಪ್ರೇರಕರಾಗಿ | ಬೆಳಗಾವ್ಕರು ಎಂಬಪಾರ್ವನಲಿ ನೀ ನಿಂತು | ಅಚ್ಚರಿಯನೆಸಗೀಭಾರ್ಯೆ ತವ ಕೊಲ್ಲಾಪುರ | ಮ್ಮ ಸತ್ಯವ್ರತರಆರ್ಯಗೊಡ ದರ್ಶಿಸುವ | ಯೋಗ ನೀನಿತ್ತೇ 6 ಸೃಷ್ಠ್ಯಾದಿ ಅಷ್ಟಕವ | ದೃಷ್ಟಿ ಮಾತ್ರದಿಗೈವಇಷ್ಟ ಭಕುತಿಗೆ ಮೆಚ್ಚಿ | ಘಟ್ಟಿ ಕಂಬದಿ ಜಿಗಿದೂದುಷ್ಟನ್ನ ಸಂಹರಿಸಿ | ಕಷ್ಟಗಳ ಕಳೆದಂಥಕೃಷ್ಣ ಗುರು ಗೋವಿಂದ ವಿಠಲಾ ಗಾನಮಿಪೇ 7
--------------
ಗುರುಗೋವಿಂದವಿಠಲರು
ಮಗನಿಂದೆ ಗತಿಯುಂಟೆ ಜಗದೊಳಗೆನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ ? ಪ ತ್ರಿಗುಣರಹಿತ ಪರಮಾತ್ಮನ ಧ್ಯಾನದಿಹಗಲಿರುಳು ನಿತ್ಯಾನಂದದಿಂದತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆಮಗನಿದ್ದರೇನು ಇಲ್ಲದಿದ್ದರೇನು ?1 ಶೋಣಿತ ಶುಕ್ಲದಿಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ ? 2 ಪರಮ ದುಷ್ಟನಾಗಿ ಮರೆತು ಸ್ವಧರ್ಮವಗುರು ಹಿರಿಯರ ಸಾಧುಗಳ ನಿಂದಿಸಿಬೆರೆದನ್ಯ ಜಾತಿಯ ಪರನಾರಿಯ ಕೂಡಿಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ 3 ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು-ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನುಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆಹೆತ್ತರೇನು ಇನ್ನು ಹೆರದಿದ್ದರೇನಯ್ಯ ? 4 ಸುತರಿಲ್ಲದವಗೆ ಸದ್ಗತಿ ಇಲ್ಲವೆಂತೆಂಬಕೃತಕ ಶಾಸ್ತ್ರವು ಲೌಕಿಕಭಾವಕೆಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ-ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ ? 5
--------------
ಕನಕದಾಸ
ಮಂಗಲಂ ಮಂಗಲಂ ಭವತು ತೇ ಮಂಗಲಂ ಮಂಗಲಂ ಪ. ಅಂಗಜ ರೂಪಗೆ ಅಖಿಲ ಲೋಕೇಶಗೆ ಶೃಂಗಾರಮೂರ್ತಿಗೆ ಶ್ರೀಕಾಂತಗೆ ಸಂಗೀತ ಲೋಲಗೆ ಸಾಮಜವರದಗೆ ಬಂಗಾರಗಿರಿವಾಸ ಭವಭವ ಹರಗೆ 1 ಕೃತ್ರಿಮ ರಕ್ಕಸ ಮೊತ್ತ ಸಂಹರಗೆ ಭಕ್ತರ ಹೃದಯದಿ ಬೆಳಗುವಗೆ ಸತ್ಯಾತ್ಮಕನಿಗೆ ಸತ್ಯನೇತ್ರನಿಗೆ ಚಿತ್ತಜಪಿತ ಚಿನುಮಯ ಮೂರ್ತಿಗೆ 2 ಉತ್ತಮ ಗೌಡಸಾರಸ್ವತ ವಿಪ್ರರಿಂ ನಿತ್ಯ ಪೂಜೆಯಗೊಂಬ ನೀಲಾಂಗಗೆ ಛತ್ರಾಖ್ಯಪಟ್ಟಣ ಮಸ್ತಕ ಮಕುಟಗೆ ಕರ್ತ ಲಕ್ಷ್ಮೀನಾರಾಯಣ ಗುಣಾಂಬುಧಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ. ತುಂಗಬಲ ಭದ್ರಾಂಗ ಸದಯಾ- ಪಾಂಗ ಭಕ್ತಜನಾಂಗರಕ್ಷಗೆ ಅಂಗಜಾರಿ ಕುರಂಗಹಸ್ತಗೆ ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1 ವಾಮದೇವಗೆ ವಾಸವಾದಿ ಸು- ಧಾಮ ವಿಬುಧಸ್ತೋಮ ವಿನುತಗೆ ವ್ಯೋಮಕೇಶಗೆ ಸೋಮಚೂಡಗೆ ಭೀಮವಿಕ್ರಮಗೆ ಹೈಮವತಿಪತಿಗೆ 2 ಪ್ರಾಣಪತಿ ಲಕ್ಷ್ಮೀನಾರಾಯಣ- ಧ್ಯಾನಪರಗೆ ಪಾವಂಜೆಗ್ರಾಮ ಪ್ರ- ಧಾನಪುರುಷಗೆ ದೀನಜನಸಂ- ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಾರತಿಯ ಪಾಡಿರೇ | ರಂಗನಾಥರುಕ್ಮಿಣೀಗೆ ಪ ಸಿಂಧು ಸುತೆಗೇ | ಸೀತಾರಾಮಚಂದ್ರಗೇ | ಉಪೇಂದ್ರಗೇ ಅ.ಪ ಮತ್ಸ್ಯ ಕೂರ್ಮವರಹಾವತಾರಗೇ ಕರುಳ ಮಾಲೆಧರಿಸಿದಾ ಲಕ್ಷ್ಮಿನಾರಸಿಂಹಗೇ 1 ಬಲಿಯ ದಾನವನ್ನೇ ಬೇಡಿ ಮಾತೆ ಶಿರವನಳಿದವಗೇ ಜಗವತೋರ್ದವಗೇ 2 ಬೆತ್ತಲಾಗಿ ನಿಂತಿದ್ದ ಉತ್ತಮ ಬೌದ್ಧ ಕಲ್ಕಿಗೇ ಸೃಷ್ಟಿಗೊಡೆಯ ಬಳ್ಳಾರಿ ಲಕ್ಷ್ಮೀನಾರಸಿಂಹವಿಠಲಗೇ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಮಂಗಳ ಕರಿಗಿರಿ ನರಹರಿಗೇ | ಜಯಮಂಗಳ ಶರಣರ ಪೊರೆವನಿಗೇ ಪ ಕಣ್ಣ ತೆರದು ಗಿರಿ ಬೆನ್ನೊಳು ಪೊತ್ತಗೆಮಣ್ಣನು ಅಗಿಯುತ ಚಿಣ್ಣಗೊಲಿದಗೇ 1 ಚಿನ್ನ ವಟುಪು ಆದ ಘನ್ನ ಪರಶುಧರಮನ್ನು ಜರೂಪಗೆ ಕೃಷ್ಣ ಮೂರುತಿಗೇ2 ಬೆತ್ತಲೆ ನಿಂತಗೆ | ಉತ್ತಮ ಕಲ್ಕಿಗೇಹತ್ತಾವತಾರ ಗುರು ಗೋವಿಂದ ವಿಠಲಗೇ 3
--------------
ಗುರುಗೋವಿಂದವಿಠಲರು
ಮಂಗಳಂ ಕಲ್ಯಾಣ ಸಾಂದ್ರಗೆ ಪ ವಾದೀಂದ್ರ ಗುರುವರ ಕುವರಗೆ ಮಂಗಳ ಮೇದಿನಿ ಸುವಿನುತಗೆ ಮಂಗಳ ಸಾಧಿತ ಸಕಲ ಸುತತ್ವ್ವಗೆ ಮಂಗಳ ವಾದಿ ವಾರಿದ ಚಂಡ ಪವಮಾನಗೆ 1 ವರಹತನಯ ತೀರ ಧರಣಿ ಧರಾಹ್ವಯ ಪುರದಿ ವಿರಾಜಿಸುವಗೆ ಮಂಗಳ ವರದೇಂದ್ರ ಯತಿವರರ ಕಮಲಾರ್ಚಿತ ಚರಣ ಪಂಕೇಜ ಯುಗ್ಮಗೆ ಮಂಗಳ 2 ಸೂರಿಕುಲೋತ್ತಮ ಶ್ರೀ ರಾಘವೇಂದ್ರ ಗುರು ಸದ್ವಂಶ ಜಾತಗೆ ಮಂಗಳ ನಾರದನುತ ಜಗನ್ನಾಥವಿಠಲನ ಕರುಣ ಪಾತ್ರ ಸಂಯಮಿವರಗೆ ಮಂಗಳ 3
--------------
ಜಗನ್ನಾಥದಾಸರು
ಮಂಗಳ ಜಯ ಜಯ ಮಂಗಳ ತುಳಸಿಗೆ ಮಂಗಳ ಜಯ ಜಯ ರಂಗನಾಯಕಗೆ ಪ ವಾರಿಧಿ ಮಥÀನದಿ ವಾರಿಜನಾಭನ ವಾರಿಜನೇತ್ರನ ವಾರಿಗಳಿಂದ ತೋರಿದ ತುಳಸಿಯು ಸೇರಿದಳೆಲ್ಲ ಶ- ರೀರವ ಪಾವನ ಮಾಡಬೇಕೆನುತ 1 ತುಳಸಿಯ ನಾಮವ ಬೆಳೆಸಿಯೆ ಲೋಕವ ಬಳಸಿಕೊಂಡಿರುವೆನು ಎನುತಲೆ ಬಂದು ಕಳಸಿದ ಮನುಜರ ಉಳಿಸಬೇಕೆನುತಲೆ ಕಳಸದ ತೆರನಂತೆ ಉದಿಸಿದಳು ತುಳಸಿ 2 ಸಾಲಿಗ್ರಾಮವು ಇಲ್ಲದಾತನ ಮನೆಯೊಳು ಕಾಲೂರಿ ನಿಲ್ಲಳು ಹರುಷದೊಳಿವಳು ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು ಓಲಗವಾಗಿಯೆ ತೋರುತ್ತಲಿಹಳು3 ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ ಫುಲ್ಲನಾಭನು ಕೃಷ್ಣ ಆಡಿದ ಪರಿಯನು ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು 4 ಬಂದಳು ಭಕ್ತರ ಮಂದಿರದೆಡಗೆ ಗೋ- ವಿಂದನ ಕಂಡಿರೆ ಎಂದು ಕೇಳಿದಳು ವೃಂದಾವನದೊಳು ನಿಂದಳು ತುಳಸಿಯು ಚಂದವು ನಿಮ್ಮಯ ಭವನದೊಳೆನುತ 5 ಗೋವಿನ ತುಪ್ಪದಿ ದೀವಿಗೆಯಿರಿಸಿಯೆ ಭಾವ ಶುದ್ಧತ್ವದಿ ಬಲವಂದರವಳು ಕಾವಲು ಪೋಗಿಯೆ ಕರ್ಣದ ಒಳಗಿದ್ದು ಜೀವಿತ ಮುಕ್ತಿಯ ತೋರುವೆನೆನುತ 6 ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ ಸರ್ವ ದೇವರ್ಕಳ ಮಧ್ಯದೊಳಿರಿಸಿ ಸರ್ವ ವೇದಂಗಳ ಶಿರದೊಳು ಧರಿಸಿಯೆ ಸರ್ವವ ಕಾಲಗೆ ನಿರ್ವಹಿಸುತಿಹಳು 7 ಅಂಗಳದೊಳಗಿಹ ಮಂಗಳ ಮಹಿಮಗೆ ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ ಬಂಗಾರ ಮನೆಯನ್ನು ತೋರುವಳಿವಳು 8 ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು ಕಾಲದಿ ಸ್ನಾನವ ಮಾಡಿದ ನರರು ಭಾಳವಾಗಿಹ ಅಘರಾಶಿಯನೆಲ್ಲವ ಚಾಳಿಸಿ ಕಳೆವರು ಕಾಲನ ಗೆಲಿದು 9 ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ ಕರ್ಣದಿ ಧರಿಸಿದ ಮನುಜರಿಗೆಲ್ಲ ಉನ್ನತ ಪದವಿಯ ತೋರುವೆನೆನುತಲೆ ಪನ್ನಗಶಯನಗೆ ಪ್ರೀತಿಯಾಗಿಹಳು 10 ಉತ್ತಮವಾಗಿಹ ಕಾರ್ತಿಕ ಮಾಸದಿ ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ ಕರ್ತನ ಕೀರ್ತನೆ ರಚಿಸುವ ಮನದಿ 11 ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು ನಿರ್ಮಲ ತೀರದಿ ತಿದ್ದಿಯೆ ಕೊಂಡು ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು ಕರ್ಮ ಬಂಧಗಳೆಲ್ಲ ಕಡಿದುಕೊಳುವುದು 12 ಸಾಯಂಕಾಲದಿ ದೀವಿಗೆ ಹಚ್ಚಲು ಮಾಯಗಳೆಲ್ಲವು ಮರುಗಿ ಪೋಗವುವು ದಾಯವಾಗಿಯೆ ಸುರರಾಯನೊಳರ್ಥವ ಬೇವಿನವರು ಕಂಡು ಹೊರಸಾರುತಿಹರು 13 ಸರ್ವದಾನಗಳನ್ನು ಸರ್ವಪೂಜೆಗಳನ್ನು ಸರ್ವರು ಋಷಿ ಪಿತೃ ತರ್ಪಣಗಳನು ಸರ್ವಥಾ ತುಳಸಿಯ ತಪ್ಪಿಸಬೇಡೆಂದು ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು 14 ಅಂಗದೊಳಗಿಹ ಮಂಗಳ ಮಹಿಮಗೆ ಸಾಂಗ್ಯದೊಳಿದನು ಪಠಿಸಿ ಪೇಳಿದರೆ ಗಂಗೆ ಗೋದಾವರಿ ತುಂಗಭದ್ರೆಯ ಮಿಂದು ರಂಗನ ಕ್ಷೇತ್ರವ ನೋಡಿದ ಫಲವು 15 ಅಂಗಳ ತುಳಸಿಯ ದಿನ ದಿನದಿ ತಾವೆದ್ದು ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ ಬಂಗಾರಗಿರಿವಾಸ ವರಾಹತಿಮ್ಮಪ್ಪನ ಮಂಗಳಮೂರ್ತಿಯ ನೋಡಿದ ಫಲವು 16
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ರಾಮ ಸಜ್ಜನರ ಪ್ರೇಮ ಮಂಗಳಂ ಲೋಕಾಭಿರಘುರಾಮ ಪಟ್ಟಾಭಿರಾಮ ಪ ಮಂಗಳಂ ಶ್ರೀ ದಶರಥಾತ್ಮಜಗೆ ಮಂಗಳಂ ಅಯೋಧ್ಯವಾಸಿಗೆ ಮಂಗಳಂ ಜನಕಜಾಮಾತೆಗೆ ಮಂಗಳಂ ಶ್ರೀ ರಾಮಚಂದ್ರಗೆ ಅ.ಪ ದೇವದೇವೋತ್ತಮ ವೈಕುಂಠದೊಳಗೆ ಶ್ರೀ ಭೂಮೇರಿಂದ ಸೇವೆಗಳ ಕೈಗೊಳ್ಳುತ ಮಲಗಿರಲು ದೇವಋಷಿ ಬ್ರಹ್ಮೇಂದ್ರಾದಿಗಳು ಸಹಿತ ಶ್ರೀಧರನ ಸ್ತುತಿಸುತ ರಾವಣಾಸುರನುಪಟಳ ವರ್ಣಿಸಲು ಸಂತೈಸಿ ಅವರನು ಭೂಮಿಪತಿ ದಶರಥನ ಪ್ರೇಮ ಕುಮಾರನಾಗುದಿಸುತಲಯೋಧ್ಯದಿ ಪ್ರೇಮ ತೋರುತ ಮೆರೆದವಗೆ ಜಯ1 ದಶರಥನ ಸುತರಾಗಿ ಬೆಳೆಯುತಲಿ ಕೌಶಿಕನÀಯಜ್ಞವ ಕುಶಲದಲಿ ರಕ್ಷಿಸುತ ಹರುಷದಲಿ ಶಶಿಮುಖಿಯ ಕೂಡುತ ಕುಶಲದಲಿ ವನವಾಸ ಚರಿಸುತಲಿ ದಶಶಿರನು ಜಾನಕಿಯ ಕದಿಯಲು ಶಶಿಮುಖಿಯನರಸುತಲಿ ವನವನ ವಸುಧಿಪತಿ ಕಪಿಗಳ ಕಳುಹಿ ಸತಿ ಕುಶಲ ತಿಳಿಯುತ ನಲಿದವಗೆ ಜಯ 2 ಬಂದ ಕಪಿ ಕಟಕವನೆ ನೋಡುತ್ತ ಸಾಗರಕೆ ಸೇತುವೆ ಒಂದೇ ನಿಮಿಷದಿ ರಚಿಸಿ ಶೀಘ್ರದಲಿ ಮಂದಮತಿ ರಾಕ್ಷಸರ ವಧಿಸುತಲಿ ಅಂದಣವ ಕಳುಹಿ ಮಂದಗಮನೆಯ ಕರೆಸಿ ಬೇಗದಲಿ ಬಂದ ರಾಮನು ಎಂದು ಮಾರುತಿ ಮುಂದೆ ಭರತಗೆ ಕುಶಲ ತಿಳಿಸಲು ತಂದೆ ಕಮಲನಾಥ ವಿಠಲ ಮುಂದೆ ಪ್ರಜೆಗಳ ಪೊರೆದವಗೆ ಜಯ 3
--------------
ನಿಡಗುರುಕಿ ಜೀವೂಬಾಯಿ