ಒಟ್ಟು 37131 ಕಡೆಗಳಲ್ಲಿ , 139 ದಾಸರು , 11109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗವಲಿದ ದಾಸರಾಯ | ಸಾಧು ಸಂಗವಿಡಿಸಿ ಕರುಣದಿ ಪಿಡಿ ಕೈಯ್ಯ ಪ ಕುಂಭಿಣಿ ಸುರನಾಥ | ನಂಬಿದೆ ನಿನ್ನ ಪಾದ ಬೆಂಬಿಡದಲೆ ಕಾಯೊ || ಕಂಬು ಕಂಧರ ಭಕ್ತಮಂದಾರ 1 ಹರಿಕಥೆ ಸುಧಾಸಾರ | ಸುರಸಗ್ರಂಥವ ಜಗದಿ | ವಿರಚಿಸಿರುವ ನಿನ್ನ || ವರ ಉಪಕಾರ | ವರ್ಣಿಸಲಪಾರ | ಪರಮೋದಾರ 2 ಸಾಮಗಾನ ವಿಲೋಲ | ಶಾಮಸುಂದರವಿಠಲ ಸ್ವಾಮಿಯ ಭಕುತಿ | ನಿ | ಅನುಜ ಸಲ್ಹಾದ ನೀಡೆನಗಲ್ಹಾದ 3
--------------
ಶಾಮಸುಂದರ ವಿಠಲ
ರಂಗವಲಿದ ರಾಯರ ಪಾಡಿರೆ ಪ ಸಲೆನಂಬಿದವರ ಕಲುಷಗಳೋಡಿಸಿ ಸಲುಹಲು ಸ್ತಂಭದಿ ನೆಲೆಸಿದಂಥ ರಾಯರ 1 ಬಾಗಿ ನಮಿಸಿ ಮುಂ ನವ್ಯಾತಕೆ ತವ ಸೂಸು ನಾನಲ್ಲವೆ | ಮಾನವಿ ನಿಲಯ 1 ದಾಸವರ್ಯನೆ | ಭಾಸುರಸ್ತಂಭ ನಿವಾಸ ಧೀರನೆ ಈ ಸಮಯಿದಿ ಷಡ್ದ್ವೇಷಿಗಳೆನ್ನತಿ ಘಾನಿಗೊಳಿಸುವರುದಾಸೀನ ಮಾಡದೆ 2 ಸಾಧು ಶೀಲನೆ ಪ್ರಹ್ಲಾದ ನನುಜ ಸÀಹ್ಲಾದ ಶಲ್ಯನೆ ವಾದಿರಾಜ ಶತಮೇಧ ನಾಮಾರ್ಯರ ಪಾದಾರಾಧಕ ಭೇದ | ಬೋಧಕ 3 ಭಾರತಿವರ ಕೃತ ಶಾಸ್ತ್ರಮರ್ಮವಿಚಾರ ಬಂಧೂರ ಸಾರಸಭವ ಪಿತ | ಶ್ರೀರಮಾಪತಿ ಸಾರ ವಕ್ತಾರ 4 ಪ್ರೇಮಸಾಗರ ನೀ ಮರೆದರೆ ಈ ಪಾಮರನಿಗೆ ಯಮ ಧಾಮವೆ ಗತಿ ನಿಜ ಹೇ ಮಮ ಸ್ವಾಮಿ 5
--------------
ಶಾಮಸುಂದರ ವಿಠಲ
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ಮಂಗಳ ಚರಿತ ಕೃಪಾಂಗನೆ ಎನ್ನಂತ ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ ನತಜನ ಸುರಧೇನು ನೀನೆಂದು ನುತಿಸಿ ವಂದಿಸುವೆನೋ ರತಿಪತಿಪಿತ ನುತ ಕಥಾಮೃತ ಗ್ರಂಥದಿ ಸತತ ಎನಗೆ ಮತಿ ಹಿತದಲಿ ಪ್ರೇರಿಸು 1 ಧನ್ಯನ ನೀಮಾಡೋ ಕರುಣದಿ ಮನ್ನಿಸಿ ಕಾಪಾಡೋ ಘನ್ನ ಮಹಿಮಕಿನ್ನು ನಿನ್ನ ಹೊರತು ಇನ್ನಾರು ಕಾವರರಿಯೆ ಕಾಣೆ ಗುರೋ 2 ಮಂದಮತಿ ಬಿಡಿಸೋ ಈ ಭವ ಬಂಧನ ಪರಿಹರಿಸೊ ಪತಿ ಶಾಮಸುಂದರವಿಠಲ ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
--------------
ಶಾಮಸುಂದರ ವಿಠಲ
ರಂಗವಲಿದರಾಯಾ ನೀ ಸತ್ಸಂಗ ಪಾಲಿಸಯ್ಯಾ ಪ ಮಂಗಳಪ್ರದ ಪ್ರಥಮಾಂಗಾ ಪ್ರಥಮಾಂಗ ಮತಾಂಬುಧಿ ಕವಿ ಜಂಗುಳಿಗೆ ಅ.ಪ ಬುಧಜನನುತ ಮನುಜಾ ಪಂಚವದಾನಾರ್ಯರ ತನುಜಾ ಪಾದ ಪದುಮವ ಭಜಿಸದೆ ಅಧಮನಾದೆ ನಾ ಸದಮಲ ಕಾಯಾ1 ಕ್ಷಿತಿಯೊಳು ಪೂರ್ವದಿ ಪತಿತರ ಸಲಹಲು ಶತಕ್ರತುರಾಯರ ಸುತನೆನಿಸಿದ ಗುರು 2 ವೃಂದಾರಕ ಸ್ತೋಮಾ ವಂದಿತ ನಂದನಂದನ ಶಾಮ ಸ್ತಂಬ ಸು ಮಂದಿರದೊಳು ಘನ ಸಿಂದು ಮೆರೆವ ಗುರು 3
--------------
ಶಾಮಸುಂದರ ವಿಠಲ
ರಂಗವಾಲಿಯನಿಡು ತಂಗಿ ನಿನ್ನಂತರಂಗ ದಂಗಳ ಸಾರಿಸಿ ರಂಗಗರ್ಪಿತವೆಂದು ಪ. ಮಂಗಳಮಹಿಮ ಶ್ರೀ ಕೃಷ್ಣ ತನ್ವಲಿವ ಎಂದಂಗನೆ ಸುಭದ್ರೆಗೆ ರಂಗಹೇಳಿದ ಅ.ಪ. ಅರಿಷಡ್ವರ್ಗಹಂಕಾರ ಮದಗಳೆಂಬ ಮಮಕಾರವ ಬಿಟ್ಟು ಮುನ್ನ ತೊಡರಬಿಡಿಸಿ ನಿನ್ನ ಕಡೆಹಾಯಿಸುವ ಪಥ ದೊಡೆಯ ಶ್ರೀಧರಪಾದವದರೊಳು ನಿಲುವಂತೆ 1 ಶ್ವೇತ ಕಲ್ಲನೆ ಕುಟ್ಟಿ ಅಚ್ಚುತನಾಮ ಪವಳ ಬೆರಸಿ ಸ್ವಚ್ಛ ಮುತ್ತುಗಳೆಂಬಂಥ ಶೀಲತೆಯಿಂದ ಅಚ್ಚ ಶ್ರೀ ತುಳಸಿಯ ಕಟ್ಟೆಯ ಬೆಳಗುವಂಥ2 ಹರಿನಾಮದರಿಶಿನವದರ ಮಧ್ಯದಿ ತುಂಬಿ ಅರಿಗಳ ಕಡಿವಂಥ ಕುಂಕುಮವ ಪರಮಾನಂದದಿನೆಲ್ಲಿ ಕರಿಯ ಬಣ್ಣ ಹರುಷದಗಸೆ ಹಸುರ ಬೆರಸಿ ಶ್ರೀ ಶ್ರೀನಿವಾಸಗೆ 3
--------------
ಸರಸ್ವತಿ ಬಾಯಿ
ರಂಗವೊಲಿದ ದಾಸರಾಯ | ಸತ್ಕವಿಜನಗೇಯ ಪ ಮಂಗಳಕರ ಕುಲಿಶಾಂಗ ಮತಾಂಬುಧಿ ಮಾನವ ಸಿಂಗಾರ್ಯರ ಸುತ ಅ.ಪ ಶರಣು ಮಂದಾರ ಪರಮೋದಾರ ಪರಿಪಾಲಿಸು ಧೀರ ಮಣಿ ಸುಹಾರ ಶೋಭಿತ ಕಂಧರ ಸಾರ ಸು ರಸಗ್ರಂಥ ಕೃತ ಕರುಣಾನಿಧೆ ಗುರು 1 ಜ್ಞಾನಿಕುಲನಾಥ ಭಾನುಜಸೂತ ಭವವಾರಿಧಿ ಪೋತ ಕ್ಷೋಣಿ ಸುರವ್ರಾತ ನಮಿತ ಸುಖ್ಯಾತ ವರದಾನಿ ಪುನೀತ | ಧೇನುಪಾಲ ದಾಸಾರ್ಯರ ಪದಯುಗ ಧ್ಯಾನಿತ ಮಾನಿತ ಮಾನವಿ ನಿಲಯ 2 ದುರಿತ ವಿದೂರ ಸನ್ಮಹಿಮಾಪಾರ ಪಾಮರ ಹೇಮಶಯ್ಯ ಕುಮಾರ ಕುಮತಾಬ್ಧಿ ಸಮೀರ ಕೋಮಲಾಂಗ ಮಮಸ್ವಾಮಿ ಸೋಮನುತ ಶಾಮಸುಂದರ ಸುಧಾಮ ಪ್ರೇಮ ಸಖ 3
--------------
ಶಾಮಸುಂದರ ವಿಠಲ
ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1 ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ ಕಾಕುಯುಕುತಿಗಳನ್ನು ತಾರರೋ ಮನಕೆ ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2 ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ ಬಂಡುಣಿಯಂದದಿ ನಾಮಾಮೃತವ ಸವಿವರೋ ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3 ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4 ಜಯಾಜಯ ಲಾಭಾಲಾಭ ಮಾನಾಪಮಾನಾ ಭಯಾಭಯ ಸುಖದುಃಖ ಲೋಷ್ಟ ಕಾಂಚನಾ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5 ಈಶಿತವ್ಯರೆಂಬರೋ ಏಕಾಂತ ಭಕ್ತರೋ ದೇಶಕಾಲೋಚಿತ ಧರ್ಮ ಕರ್ಮಾಸಕ್ತರು ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ಈ ಸುಜನರೇವೆ ಶಾಪಾನುಗ್ರಹ ಶಕ್ತರು 6 ನಗುವರೋ ರೋದಿಸುವರೊ ನಾಟ್ಯವಾಡೋರೊ ಬಗೆಯರೋ ಬಡತನ ಭಾಗ್ಯ ಭಾಗವತರು ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7
--------------
ಜಗನ್ನಾಥದಾಸರು
ರಂಗಾ ಮನೆಗೆ ಬಂದ ಪರಮ ಮಂಗಳದಾಯಿ ಹಿಂಗಿತು ದಾರಿದ್ರ್ಯವಿನ್ನು ಶೃಂಗಾರ ಭುಜಂಗ ಶಾಯಿ ಪ. ಪದ್ಮನಾಭ ಸಿರಿನಲ್ಲಕೃಷ್ಣ ತನ್ನ ಪಾದ ಪಲ್ಲವೆ ಶರಣೆಂದು ನಿಲ್ಲೆ ಧೈರ್ಯದಿ ಮೆಲ್ಲ ಮೆಲ್ಲಕಾಗಿ ತನ್ನ ವಲ್ಲಭೆಯ ಕೂಡಿ ಎನ್ನ ಸೊಲ್ಲ ಲಾಲಿಸುತ ಕಂಸದಲ್ಲಣ ತಡವಿಲ್ಲದಂತೆ 1 ಆರುವೆನನೆಂಬ ಹುಣ ಘೋರಭಾವದಿಂದಲುಂಡು ಗಾರುಮಾಳ್ಪ ಸಮಯದಲ್ಲಿ ಚೀರುತಿರುವುದ ಮಾರಜನಕ ಲಾಲಿಸಿ ಕೃಪಾರಸದಿ ಸಲಹಿ ನಿಜ ಪಾ ದಾರವಿಂದ ಯುಗ್ಮವನ್ನು ತೋರಿ ತಿರುಗಿ ಕಳುಹಿದಂಥ 2 ಭಕ್ತಾಭರಣನೆಂಬ ಬಿರುದ ವ್ಯಕ್ತವಾಗಿ ತೋರಿ ಸರ್ವೋ ದ್ವøಕ್ತ ಮಹಿಮ ತನ್ನೊಳ್ಪರಮಾ ಮತಿಯನಿತ್ತು ಮಾಯಾ ಶಕ್ತಿಯರಸ ವೆಂಕಟೇಶ ನಿತ್ಯ ಮುಕ್ತ ರಮೆಯ ಕೂಡಿ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ1 ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ 2 ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ 3
--------------
ಶ್ರೀಪಾದರಾಜರು
ರಘುಕುಲ ತಿಲಕ ವಿಠಲ ಇವಳ ಘಾವಳಿಗಳನುಬಗೆಹರಿಸಿ ಕಾಪಾಡ ಬೇಕೋ ಹರಿಯೇ ಪ ಭೃಗುವರದ ನಿನ್ನಂಘ್ರಿ ಸೇವೆಯಲಿ ಮಹಭಕ್ತಿಮಿಗೆ ಜ್ಞಾನ ಕೊಟ್ಟಿವಳ ಕಾಪಾಡ ಬೇಕೋ ಅ.ಪ. ಶಬರಿ ಎಂಜಲನುಂಡ | ಕಾರುಣ್ಯ ಮೂರುತಿಯೆಅಭಯದನು ನೀನಾಗಿ ವಂಶ ಉದ್ಧರಿಸೋ |ಕುಭವ ಪರಿಹರಕಾಗಿ ಸಾಧನವು ಎಂದೆನಿಪಶುಭ ಸದಾಗತಿ ಮತದಿ ದೀಕ್ಷೆಯನೆ ಈಯೋ 1 ಪಾದ ಸೇವಕಳೀಗೆಭೇದ ಪಂಚಕ ತಿಳಿಸಿ ಸಾಧನವಗೈಸೋ 2 ಸರ್ವಜ್ಞ ಸರ್ವೇಶ ಹಯಮೊಗಾತ್ಮಕನಾದಸರ್ವ ಸುಂದರ ಗುರುಗೋವಿಂದ ವಿಠಲ |ಸರ್ವದಾ ಸರ್ವತ್ರ ನಿನ್ನ ಸ್ಮøತಿಯನೆ ಕೊಟ್ಟುದರ್ವಿಜೀವಿಯ ಸಲಹೆ ಬಿನ್ನವಿಪೆ ನಿನಗೇ 3
--------------
ಗುರುಗೋವಿಂದವಿಠಲರು
ರಘುಕುಲತಿಲಕಾ ಮಾಂ ಪಾಹಿ ಪ ಅಘಕುಲನಾಶಕ ಮಾಂ ಪಾಹಿ ಅ.ಪ ಆಹವ ಭೀಮ ವೈದೇಹಿ ಮಾನಸ ಗೇಹ ಸುಧಾಕರ ಮಾಂ ಪಾಹಿ ರಾಮಾ 1 ಆದಿಮೂಲ ಹರಿ ಮಾಂ ಪಾಹಿ ರಾಮ 2 ಮಾಂಗಿರಿ ಮಂದಿರ ತುಂಗ ಕೃಪಾಕರ ಗಂಗಾಜನಕ ಹರಿ ಮಾಂ ಪಾಹಿ ರಾಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಘುನಂದನ ಬಾರೈ ಹಸೆಗೆ ನಿಗಮಾಗಮಾ ವಳಿಸನ್ನುತ ಪ ಶ್ರೀ ಜಾನಕಿ ಸಹಿತ ಅ.ಪ. ವೈರಿ ಕುಲಭಂಜನ ಪರಮೇಶವರ ಚಾಪಖಂಡನ ಕರುಣಾಕರ ಖರದೂಷಣಾದಿ ಹರನಾಶ್ರಿತ ವರ ಲೋಕಪಾಲ 1 ನವನೀರದಾಭ ನವಸುಂದರ ನವಮೀ ಸಂಜಾತ 2 ಶರಣಾಗತ ಭರಣಾಧೃತ ವರ ರಾಮಚಂದ್ರ 3
--------------
ಬೇಟೆರಾಯ ದೀಕ್ಷಿತರು
ರಘುನಂದನ ರಘುನಂದನ ರಘುನಂದನ ರಘುನಂದನ ಪಸುಖದಾಯಕ ಸಕಲಾಗಮ ನಿರುತಖಗವಾಹನ ಮಣಿಭೂಷಣ ಕರುಣಾಕರ ಚರಿತಕೌಸಲ್ಯ ವರನಂದನ ಘನಕುಂಡಲ ಮಣಿಮಂಡಲನಾರಾಯಣ ದಾಮೋದರ ಮಧುಸೂದನ ಕೃಷ್ಣ 1ಗೋ'ಂದ ಮುಕುಂದಾಚ್ಚುತ ಕೃಷ್ಣಾಂಬುಜನಾಥಲಕ್ಷ್ಮೀಶ ಕೃಪಾಳೋ, ಜಗದೀಶವಂದ್ಯ 'ಷ್ಣುಶ್ರೀ ರಾಘವ ರಾಮಾನುಜ ಪಾ' ಮುಕುಂದಸೀತಾರಮಣ ತ್ರಿನಯನ ಗೋಪಾಲ ಗಿರೀಶ 2ಗೋಪಾಲ ಗೋಪಾಲ ಗೋಪಾಲ ಗೋಪಾಲಭಕ್ತಪ್ರಿಯ ಗೋ'ಂದ ಮುಕುಂದ ಅತಿಭೀಷಣ ಕಟುಭಾಷಣ ಯಮಕಿಂಕರ ಪಠಳಂಕೃತತಾಡನ ಪರಪೀಡನ ಮರಣಾಗಮ ಸಮಯೇ 3ಶಿವ ಶಂಕರ ಶಿವ ಶಂಕರ ಶಿವ ಶಂಕರ ಶಿವ ಶಂಕರಉಮಯಾಸಾಮಮಪೇಕ್ಷಿತ ಯಮಶಾಶ್ವತ ಶೂಲಿಂಪರಮೇಶ್ವರ ಹರಗೌರಿರಮಣ * 4
--------------
ವೆಂಕಟದಾಸರು
ರಘುನಾಥ ದೀನಾನಾಥ ಸದ್ಗತಿದಾತ ನೋಡಿರ್ಯೋ ಜಾನಕಿ ಧವಗರ್ಪಿತವೆನೆ ಅವನಿಯೊಳಗೆ ಶಬರಿ ಘವಘವಿಸುತಿಹ ಅವಿರಳ ಪದದನುಭವ ನೀಡಿದಾ1 ದಾವನು ಶೃತಿಗಳು ಭಾವಿಸೆ ನುಡಿಯದು ದೇವನು ಹಿತಗುಜ ಕೇವಲ ವನಚರ ಜೀವರೊಳಾಡುತ ಸೇವೆಗೆ ನಲಿಯುತ ಕೈವಿಡಿ ಬಿತ್ತನು ಕೈವಲ್ಯಾದಾ 2 ಕುಂದದೆ ಬಾಂಧವ ನಿಂದಿಸಿ ನೂಕಲು ನೊಂದು ವಿಭೀಷಣ ಬಂದರ ಶರಣವ ತಂದೆ ಮಹಿಪತಿ ನಂದನ ಪ್ರಭು ಆ ನಂದದ ಸ್ಥಿರಪದ ಹೊಂದಿಸಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಘುಪತಿಯಾ ತೋರಮ್ಮಾ | ರಾಜೀವಾಂಬರೆ ಬಾರಮ್ಮಾ ಪ ಭಕುತರಾ - ಭೀಷ್ಟೇಯನು | ಪೂರಿಸುವನಾ ಅನುದಿನ ಕಾವನಾ | ನಿನ್ನಯ ಜೀವನಾ ಅ.ಪ ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ || ಸದ್ಗುಣ ಧಾಮನಾ | ದಶರಥ ರಾಮನಾ 1 ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ || ಅಸಮಧನು ವನೆತ್ತ್ಯಭಯವಿತ್ತನಾ | ನಿನಗೊಲಿದಾತನಾ | ರಘುಕುಲಜಾತನಾ 2 ಶರಣೆಂಬೆ ಮಹಾಮಾಯೆ ಸಲಹಬೇಕೆನ್ನತಾಯೆ ಗುರು ಮಹಿಪತಿಸ್ವಾಮಿ | ಜಗದಯ್ಯನಾಪವನಜ ಪ್ರಿಯನಾ ಸುರಮುನಿಧೇಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು