ಒಟ್ಟು 1875 ಕಡೆಗಳಲ್ಲಿ , 111 ದಾಸರು , 1413 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲ್ಲವನಾದರೀ ತಳ್ಳಿಬೇಡ ಅಲ್ಲದ ಪಥವಿದರಾಸೆಯ ಬಿಡು ನೀನು ಪ ಸರ್ಪನ ಪಣೆಯೊಳು ಜೇನುತುಪ್ಪವ ಕಂಡು ಅಪ್ಪನೆ ತಾರೆಂದು ಅಳುತಿರಲು ತುಪ್ಪದ ಸವಿಯನು ಜನರುಂಡು ತೀರಲು ಮುಪ್ಪಾಗಿಯಿರುವುದ ಕಂಡು ಮೂದಲಿಸುವ 1 ನಂಬಿದ ಮನುಜರ ಹಂಬಲ ಮರವದು ಡೊಂಬಿಯವರು ಕಂಡು ತಡೆಯಲಾಗಿ ಅಂಬರವನು ಕಂಡು ನಗುತಿಪ್ಪ ಮನುಜನ 2 ಅಂಬರವಡಗಿಯೆ ಕುಂಭಿನಿ ಜಾರಿಯೆ ನಂಬಿದ ಮನುಜರು ನಡೆವೆಡೆಯ ಕುಂಭದ ನೀರನು ಚೆಲ್ಲುತ್ತ ಮಗುಳಲ್ಲಿ ಕಂಭದ ಹಾಗೆಲ್ಲ ನಿಂತಿಹ ಜನರನು 3 ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ ದುಷ್ಟನೊಬ್ಬನು ಬಂದು ನಿಂತಿಹನು ಇಟ್ಟಿಹ ಬಾಗಿಲ ಕಾಣದೆ ತಾ ಬಂದು ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ 4 ಕಡಹದ ಪಲ್ಲಕ್ಕಿ ಬೆಡಗನ್ನು ಕಾಣುತ್ತ ಮೃಗ ಬಂದು ಕುಳಿತಿರ್ದುದ ಒಡನೆ ಕಟ್ಟಿದ ವಾಹಕರ್ಹದಿನಾರು ಮಂದಿಯು ಕಡಿಮೆಯ ಸಂಬಳ ಕಡವಿಡುವವರನ್ನು 5 ಅಕ್ಕಿಯ ರಾಶಿಯು ತೀರಲು ಕೊಳಗವು ಬೆಕ್ಕನೆ ಬೆರಗಾಗಿ ಕುಳಿತಿಪ್ಪುದು ಬಿಕ್ಕಿದ ಅಕ್ಕಿಯ ಹಕ್ಕಿಯು ಹೆಕ್ಕಿಯೆ ಗಕ್ಕನೆ ಹಾರುವ ಪಕ್ಷಿಯ ನೋಡುತ್ತ 6 ರವಿಶಶಿಯೊಂದಾಗಿ ಇರುತಿಹ ಗಣಿತದಿ ಧರೆಯೊಳು ಸಾವಿರಯೆಲೆ ಬೀಳ್ವುದು ಎರವಿನಾಭರಣವ ಅವರವರೊಯ್ಯಲು ವರಾಹತಿಮ್ಮಪ್ಪನ ಮರೆ ಬೀಳು ಕಂಡ್ಯ 7
--------------
ವರಹತಿಮ್ಮಪ್ಪ
ಬಲ್ಲವಾಗಿಲ್ಲೆ ಪರಮಾತ್ಮಾ ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ ಪ ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು ಆಡಿÀದವೆಲ್ಲ ಹರಿಯ ರೂಪವೆಂದು ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು ಕೂಡಿದದ್ದೆಲ್ಲ ಹರಿ ಭಕ್ತರೆಂದು 1 ತಾಪತ್ರಯಗಳೆಲ್ಲ ಮಹಾ ತಪಸು ಎಂದು ರೂಪಗಳೆÀಲ್ಲ ಹರಿಕಾಂತಿ ಎಂದು ವ್ಯಾಪಾರ ಹರಿ ಅಧೀನವೆಂದು 2 ತಾರತಮ್ಯಕಿದು ಪರಲೋಕದಿ ಸರಿಯಿಲ್ಲ ಸಿರಿ ಹರಿಯದೊರೆ ತನಗೆ ಎಂದೆನುತಾ ನಿತ್ಯ ಕಾಲಕಾಲಕೆ ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ 3 ಒಲಿಸಿ ಒಲಿಸಿ ಒಲಿದು ಒಲಿದು ಖಳರೊಳಗಾಡದಲೆ ವಿಜಯವಿಠ್ಠಲ ವೆಂಕಟ ಶೈಲ ನಿವಾಸಾ ಸರ್ವೋತ್ತಮನೆ ಗತಿ ಎಂದು 5
--------------
ವಿಜಯದಾಸ
ಬಹುತೀರ್ಥ ಸಂಗಮದ ಭಾಗವತಗಂಗೆಯಲಿಬಹುಸ್ನಾನ ದೊರಕಿ ಜೀವನ್ಮುಕ್ತನಾದೆ ಪಶುಭ್ರವರ್ಣದ ಗಂಗೆ ತಾನೆ ನಾರದನಾಗೆಅಭ್ರವರ್ಣದ ಯಮುನೆ ವ್ಯಾಸನಾಗೆಇಬ್ಬರೊಂದಾಗಿ ಪ್ರವ'ಸಿ ಬಂದು ದೋಷಗಳದಬ್ಬುತಿಹ ಪುಣ್ಯ ಪ್ರಯಾಗಿಯಾಗಿರುತಿರುವ 1ಪೂರ್ವಪಶ್ಚಿಮವಾಗಿ ದಕ್ಷಿಣೋತ್ತರವಾಗಿಶರ್ವಾಗ್ನಿ ನೈಋತ್ಯವಾಯು ಮುಖದಿಪರ್ವಕಾಲಗಳೆಂದು ಪ್ರವ'ಸುವ ನದಿಯಲ್ಲಸರ್ವವ್ಯಾಪಕವಾಗಿ ತುಂಬಿ ಸೂಸುತಲಿರುವ 2ನಾರಾಯಣಾದ್ರಿಯಲಿ ಪುಟ್ಟ ಬ್ರಹ್ಮಾಂಡವನುಪೂರೈಸಿ ಪರಮಪಾವನ ಗಂಗೆಯೂಸೇರುವರೆ ತನಗೊಂದು ತೀರ್ಥಬೇಕೆಂದೆನುತಧೀರಶುಕ ಕಾವೇರಿಯಲಿ ಕೂಡಿ ನೆಲಸಿರುವ 3ಕಮಲಸಂಭವನೆಂಬ ಗೋದಾವರಿಯದೆನಿಸಿ'ಮಲಮತಿ ಸೂತ ಶೌನಕ ಸಂಗದಿಭ್ರಮನಿವಾರಣ ತುಂಗಭದ್ರೆಯೆಂದೆನಿಸುವದುರಮೆಯ ರಸನೊಲಿದವರಿಗದು ದೊರಕುತಿಹುದು 4ಈ ನದಿಯ ಕೂಡಿರುವ ತೀರ್ಥಗಳನೆಣಿಸುವರೆನಾನೆಂಬ ಕ' ಯಾರು ಶೇಷ ತೊಡಗಿಸ್ವಾನುಭವ ಸಂಸಿದ್ಧ ನಿಜಭಕ್ತರೆಂದೆನಿಪಜ್ಞಾನಿಗಳ ಮ'ಮೆಗಳ ನದಿಗಳೊಡೆ ಬೆರೆದಿರುವ 5ಶೀತಬಾಧೆಯು ಲೇಶಮಾತ್ರ'ದರೊಳಗಿಲ್ಲವಾತಾದಿ ವ್ಯಾಧಿಗಳ ಕೊಡುವುದಲ್ಲನೂತನದ ಕಾಲದೇಶಗಳ ಬಯಕೆಯದಲ್ಲಆತುಕೊಳದಿದ್ದರೂ ಪಾತಕವ ಪರಿಹರಿಪ 6ಉತ್ತಮ ಪರೀಕ್ಷಿತನೇನು ಮೈತ್ರೇಯ 'ದುರರುಸತ್ಯಸಂಧನು ಕಪಿಲ ದೇವಹೂತಿಮತ್ತೆ ಉತ್ತಾನಪಾದನು ಧ್ರುವನು ಪೃಥು ಚಕ್ರವರ್ತಿಯೆಂಬೀ ತೀರ್ಥವ ತರಿಸಿಕೊಂಡಿರುವ 7ಪುಣ್ಯಾತ್ಮ ಪ್ರಾಚೀನ ಬರ್'ಯಾತ್ಮಜರಾದಸನ್ಮನದ ಮ'ಮರವರೀರೈವರುಇನ್ನಿವಳ ಗರ್ಭದಲಿ ಬಂದ ದಕ್ಷನು ತಾನುಕನ್ನೆಯರನರುವತ್ತ ಪಡೆದ ತೀರ್ಥಗಳಿರುವ 8ಅಪರ ಸೂರ್ಯನ ತೆರದ ಪ್ರಿಯವ್ರತನ ಸಂತತಿಯುತಪದಲನುಪಮ ವೃಷಭದೇವನುದಿಸೀಗುಪಿತ ತೇಜೋಮೂರ್ತಿ ಭರತನವತರಿಸಿರಲುಉಪಮಾನ'ಲ್ಲದೀ ತೀರ್ಥಗಳು ಬೆರೆದಿರುವ 9ದ್ವೀಪವೇಳರ ಸುತ್ತ ವ್ಯಾಪಿಸಿದ ವನಧಿಗಳುದೀಪಿಸುವ ಸೂರ್ಯಾದಿ ಚಕ್ರಗತಿಯೂಈ ಪರಿಯ ತೀರ್ಥಗಳು ಭೂ'ು ಸ್ವರ್ಗಾದಿಗಳವ್ಯಾಪಿಸಿಹ ಮ'ಮ ನದಿಗಳು ಒಂದುಕೂಡಿರುವ 10ನದಿಗಳಿಗೆ ನಿಜರೂಪವಾದ ನಾಮದ ಮ'ಮೆಒದಗಿಯಜ'ುಳನಘವನೊದೆದು ನಿಜದೀಹುದುಗಿಸಿದ ವರ್ಣನೆಯ ತಂಪು ಬಹುರುಚಿಕರವುಸದಮಲಾನಂದ ನಿಧಿಯಾಗಿ ಹುದುಗಿರುತಿರುವ 11ವೃತ್ರ ಚಾರಿತ್ರ ನದಿ ಮತ್ತೀತನಾರೆನಲು ಚಿತ್ರಕೇತುವು ಚಕ್ರವರ್ತಿಯಾಗಿಪುತ್ರ ಸಂತತಿುಂದ ಪ್ರಖ್ಯಾತ 'ಮಗಿರಿಯಪುತ್ರಿಶಾಪವು ಬಂದ ಸಿದ್ಧ ನದಿ ಬೆರೆದಿರುವ 12ನರಹರಿಯ ಚರಣಾರ'ಂದ ಮಕರಂದದಲಿಎರಗಿ ತುಂಬಿಯ ತೆರದಿ ಭಜಿಸುತಿರುವನೆರೆ ಭಕ್ತಪ್ರಹ್ಲಾದ ಗಜರಾಜ ಮನುಚರಿತಪರಮ ಪುಣ್ಯೋದಯದ ನದಿಗಳೊಂದಾಗಿರುವ 13ಕ್ಷೀರಸಾಗರ ಮಥನ ಕೂರ್ಮನಾದನು ಹರಿಯುಶ್ರೀರಮಣಿ ಸುಧೆಯುದಿಸಿದತಿ ಮ'ಮೆಯೂಶ್ರೀರಮಣ ವಟುವಾಗಿ ಬಲಿಯ ಸಲ'ದ ಬಗೆಯುಸಾರತರ ನದಿಗಳಿವು ಸೇರಿಕೊಂಡಿಹವಾಗಿ 14ಉಷ್ಣ 'ಮಕರರಂಶಸಂಭವ ಮಹಾತ್ಮರನುವ್ಣೃ ಸಂತತ್ಯುದ್ಧವಾದಿಗಳನೂ'ಷ್ಣುವಾದರು ಗಣಿಸಲಾರನೀ ತೀರ್ಥಗಳುಕೃಷ್ಣಸಾಗರದಲ್ಲಿ ಸೇರಿ ಪೂರೈಸಿರುವ 15ಯದುಕುಲಾಂಬುಧಿಯಲ್ಲಿ ಮದನಪಿತ ತಾ ಜನಿಸಿಮುದದಿಂದ ಗೋಕುಲದಿ ಬೆಳೆದು ನಲಿದುಚದುರಿಂದ ಗೋವು ಗೋವತ್ಸಪರನೊಡಗೂಡಿಸದದು ದೈತ್ಯರ ನಂದಗಾನಂದ'ತ್ತಾ 16ಬಾಲಕರ ಭೋಜನದ ನೆವದಿ ಬ್ರಹ್ಮನಿಗೊಲಿದುಕಾಳೀಯ ಫಣಗಣಾಗ್ರದಿ ನರ್ತಿಸಿಜ್ವಾಲೆಯನು ನೆರೆನುಂಗಿ ಗೋಕುಲದವರ ಸಲ'ಬಾಲಲೀಲೆಯ ಬಹಳ ಪುಣ್ಯತೀರ್ಥಗಳಿರುವ17ಗೋವಕ್ಕಳೊಡಗೂಡಿ ವನಮಧ್ಯದಲಿ ಚರಿಸಿದೇವತಾ ಯಜ್ಞ ಪತ್ನಿಯರಿಗೊಲಿದೂಗೋವರ್ಧನೋದ್ಧರಣ ಗೋಪಾಂಗನಾ ಜನದಭಾವನೆಯ ಪೂರ್ತಿಗೊಳಿಸಿದ ತೀರ್ಥ'ರುವಾ 18ವರಧನು'ನುದಯ ದರ್ಶನನೆವದಿ ಮಧುರೆಯನುನೆರೆಪೊಕ್ಕು ಕುಬ್ಜೆಗತಿಶಯದ ರೂಪಕರೆದಿತ್ತು ಕುಸುಮವನು ಕೊಟ್ಟವನಿಗೊಲಿದಾಗಪಿರಿದಾಗಿ ಕಂಸನಿಗೆ ತಾನೆ ಮುಕ್ತಿಯ ಕೊಟ್ಟು 19ದ್ವಾರಕಾ ನಿರ್ಮಾಣ ದುರುಳ ಜನಸಂಹರಣನಾರಿಯರ ನೆಂಟನೊಡಗೂಡಿ ಬಳಿಕಾಪಾರಿಜಾತವ ಕಂಡು ಈರೆಂಟು ಸಾಸಿರದನೀರೆಯರ ಸಂಸಾರ ಸಂಪತ್ತಿನತಿಶಯದ20ಮಾಸಿದರುವೆಯ ಭಕ್ತನವಲಕ್ಕಿಯನು ಮೆದ್ದುಲೇಸಾದ ಸಂಪತ್ತನೊಳಗೆ ಕೊಟ್ಟೂ'ುೀಸಲಳಿಯದ ಮ'ಮ ಭಕ್ತಜನಸಂಸಾರಿವಾಸುದೇವನ ಮ'ಮೆ ಜಲನಿಧಿಯ ಕೂಡಿರುವ 21ತತ್ವಸಾರವನು ನವಯೋಗಿಗಳು ನಿ'ುಗೊರೆದುಮತ್ತೆ ನಾರದನು ವಸುದೇವನೆಡೆಗೆಚಿತ್ತಜನ ಜನಕನಭಿಮತದಿಂದವತರಿಸಿಚಿತ್ತವನು ವಸ್ತು'ನೊಳೈಕ್ಯವನು ಮಾಡಿಸಿದ 22ವೇದಾಂತ ನಿಧಿಯಾದ ಉದ್ಧವಗೆ ತತ್ವವನುಮಾಧವನೆ ತಾನೊರೆದು ಧರಣಿಯೊಳಗೆವೇದಾಂತ 'ಸ್ತರಕೆ ನಿಲಿಸಿ ನಿಜಪಾದುಕೆಯವೇದವೇದ್ಯನು ಕೊಟ್ಟು ನಿಜಜನಕೆ ನಿಧಿಯಾದ23ಕಾಲಗತಿಗಳನೊರೆದು ಮತ್ತೆ ಭೂಲೋಕವನುಪಾಲಿಸುವ ದೊರೆಗಳಭಿಮತದ ಗತಿಯೂಮೇಲಾಗಿ ಕಲಿಯುಗದ ಗತಿ'ಸ್ತರವನೆಲ್ಲಲೋಲನೃಪಗೊಲ'ಂದ ಪೇಳ್ದ 'ವರಗಳಿರುವ 24ಪರಮಾತ್ಮನೊಡನಾಡಿ ಪರಮ ಪಾವನರಾಗಿಮೆರೆವ ಗೋಪೀ ರತ್ನ ಮಾಲೆಯೊಡನೆನೆರೆಶಿಖಾಮಣಿಯೆನಿಸಿ ತಿರುಪತಿಯ ವೆಂಕಟನುಧರಣಿಯೊಳು ಸಕಲರನು ನೆರೆ ಸಲಹುತಿಹನೂ25
--------------
ತಿಮ್ಮಪ್ಪದಾಸರು
ಬಾ ಬಾ ಬಾ ಗುರು ದತ್ತಾತ್ರೇಯ ನೀ ಕರುಣಾಮಯಾ ನೀ ತೋರೈದಯಾ ಬಾ ಬಾ ಬಾ ಗುರುವತ್ತಾ ಪರಿ ಹರಿಸೆನ್ನಯ ಮಯಾ ಎರಗುವೆ ಚರಣಕ್ಕೆ ಜೀಯಾ ಕರುಣಿಸುನೀ ಗುರು ರಾಯಾ ಈ ಭವಾ ಈ ಭವಾಬ್ಧಿದಾಂಟಿಸು ಕೈವಲ್ಯ ತೋರಿಸು ದತ್ತಾತ್ರೇಯ ಬಾಳಿನ ಭ್ರಮಯನು ಬಿಡಿಸಿ ಪಾಲಿಸು ಹೃದಯ ನಿವಾಸಿ ನಿನ್ನ ಸ್ವರೂಪವ ತಿಳಿಸಿ ಬೋಧಿಸು ಕುರುಪುರವಾಸಿ ಶ್ರೀ ಗುರÉೂೀ ಶ್ರೀ ಗುರೋ ನಮಿಸುವೆನು ಪ್ರಭೋ ದಯಾಮಯ ದತ್ತಾತ್ರೇಯಾ ಚಿನು ಮಯರೂಪನು ನೀನು ಚಿರನದ್ವೈತನುನೀನು ನೀಡೈ ಚಿತ್ತಕೆ ಶಾಂತಿ ನೀಗಿಸು ಎನ್ನಯ ಭ್ರಾಂತಿ ಆನಂದ ಸಾಗರ ದತ್ತಾತ್ರಯ
--------------
ಶಂಕರಭಟ್ಟ ಅಗ್ನಿಹೋತ್ರಿ
ಬಾ ಬಾ ಬಾ ಹರಿಯೇ ಮೂರ್ಲೋಕದ ದೊರೆಯೇ ಪ. ಸರ್ವೋತ್ತಮ ಸರ್ವಾಂತರ್ಯಾಮಕ ಸರ್ವಾಧಾರ ಪ್ರವೀರ ಶೂರವರ 1 ನಿತ್ಯಮುಕ್ತ ಪರಿಪೂರ್ಣಗುಣಾರ್ಣವ ಸತ್ಯನಿಯಾಮಕ ಸತ್ಯವಾದರೆ ತ್ವರೆ 2 ರೂಪತ್ರಯ ಭವತಾಪಶಮನ ಸ- ದ್ವ್ಯಾಪಕ ಸ್ಥಾಪಕ ಶ್ರೀ ಪುರುಷೋತ್ತಮ 3 ಭಜಕರ ಭಾಗ್ಯನಿಧಿಯು ನೀನೆಂಬುದು ನಿಜವಾಗಿರೆ ಶ್ರೀ ರುಜುಗಣೇಶಪತಿ 4 ಶ್ರೀಲಕ್ಷ್ಮೀನಾರಾಯಣ ನಿರ್ಗುಣ ಮೂಲೇಶ ಮುಕುಂದ ಮುನೀಂದ್ರವಂದಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಾ ವೆಂಕಟಶೈಲಾಧಿಪ ಮನ್ಮನಕೆ ತಡಮಾಡುವುದ್ಯಾಕೆ ಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆ ನಮಿಸುವೆ ಪ್ರತಿ ಕ್ಷಣಕೆ ಪ ನೀ ಒಲಿದೆನ್ನ ದಯಾವಲೋಕನದಿ ಪಾವನಮಾಡಲು ದೇವವರೇಣ್ಯ ಅ.ಪ. ವೈಕುಂಠಾಧೀಶ ವಿಗತಕ್ಲೇಶ ಚಿತ್ಸುಖಮಯವಪುಷ ಭವ ಮದನ ದಿ ವಾಕರ ಪ್ರಮುಖ ದಿವೌಕಸ ವರದ 1 ಮಮಸಮಾಸ್ವಾಮಿ ಮದಂತರ್ಯಾಮಿ ಸರ್ವಾಂತರ್ಯಾಮಿ ಅಮಿತಾತ್ಮ ಅತಿರೋಹಿತ ನಿಷ್ಕಾಮಿ ಸೇವಿತ ಶ್ರೀಭೂಮಿ ಅಮಿತ ಸುಗುಣಪೂರ್ಣ ಅಮಲಮಹಿಮ ಖಳದಮನ ದಯಾಳೊ 2 ನಾಮಾಭಿಧೇಯ ಲೋಕಾಧ್ಯಕ್ಷಾ ಕಮಲಾಯತಾಕ್ಷ ಸೋಮ ಭೂಮ ನಿಸ್ಸೀಮ ಮಹಿಮ ತ್ರಿ ಧಾಮರಾಮ ಘನಶ್ಯಾಮ ಲಲಾಮ 3 ಪವನಂತರಾತ್ಮಾ ನಿರ್ಮಲಾತ್ಮಾ ಪರಮಾತ್ಮ ಜ್ಞಾನಾತ್ಮಾ ಅವಿಕಾರ ಅತಿರೋಹಿತ ಭೂತಾತ್ಮ ಪೂತಾತ್ಮ ಮಹಿತಾತ್ಮ ತ್ರಿವಿಧ ಜೀವರಿಗೆ ವಿವಿಧ ಫಲಂಗಳ ತವಕದಿ ಕೊಟ್ಟವರವರ ಪಾಲಿಸೋ 4 ಸೃಷ್ಟ್ಯಾದಿಕರ್ತ ತ್ರಿಜಗದ್ಭರ್ತ ಲೋಕೈಕ ಸಮರ್ಥ ವೃಷ್ಣೀಶಾ ವೃಂದಾರಕ ರಿಪುಹರ್ತಾ ಮುಕ್ತರ ಪುರುಷಾರ್ಥ ಪರಮೇಷ್ಟಿ ಜನಕ ಶಿ ಷ್ಟೇಷ್ಟ ಹೃಷ್ಟ ಅನಿವಿಷ್ಟ ನಿವಿಷ್ಟ 5 ವೇದಸ್ತೇಯಾರಿ ಮಂದರಧಾರಿ ಭೂವರ ನರಹರಿ ಭೂ ದಾನವ ಬೇಡಿದ ಚಾಪಕುಠಾರಿ ರಾವಣಕುಲವೈರಿ ಯಾದವ ವಂಶ ಮಹೋದಧಿ ಚಂದಿರ ಸಾದಿತ ತ್ರಿಪುರ ಖಳೋದರ ಪಾಹಿ 6 ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾ ಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯಸಾರಾ ಹಯಮುಖ ಲೋಕತ್ರಯ ಪತ್ರಯಾಮಯ ವಯನಗಯ್ಯ ನಾ ಬಯಸುವೆ ನಿನ್ನ7 ಭವ ಭಯಹಾರಿ ಬಿನ್ನೈಸುವೆ ಶೌರಿ ವಿಹಿತಾಹಿತಗಳು ನಿನ್ನನು ಮೀರಿ ಮಾಳ್ಪೆಗೆ ಕಂಸಾರೀ ಮಹಿತ ಶಮಲ ಸದಹಿತ ಲಕುಮಿ ಭೂ ಸಹಿತ ಮನದಿ ಸನ್ನಿಹಿತನಾಗೆಲೋ 8 ದಾತಾ ನೀನಲ್ಲದನ್ಯರರಿಯೇ ಕಂಡವರನು ಕರಿಯೇ ಪ್ರೀತನಾಗೆನ್ನೊಳು ಶ್ರೀ ಹರಿಯೇ ಮೂರ್ಲೋಕದ ದೊರೆಯೇ ಶ್ರೀ ತರುಣಿಯೊಡಗೊಡೀ ತನು ಸದನಕೆ ನೀ ತ್ವ ರಿತದಿ ಜಗನ್ನಾಥ ವಿಠ್ಠಲ 9
--------------
ಜಗನ್ನಾಥದಾಸರು
ಬಾಗೀನಮಿಪೆ ಬೇಗಬಾರೋ ಶ್ರೀ ನರಹರಿಯೇ ಪ ಭಾಗವತರು ನಿನ್ನ ಕೂಗಿ ಕರೆವರಯ್ಯ ಅ.ಪ ನಾಗಶಯನೆ ನಿನ್ನ ನಾಗರಾಜನು ಸ್ತುತಿಸೆ ಬೇಗಸಲಹಿದಿ ಬಂದು ನಾಗಾರಿವಾಹನ 1 ಸ್ತಂಭದಿಂದಲಿ ಬಂದು ಡಿಂಭಗೊಲಿದವನೆಂದು ನಂಬಿದ ಭಕುತರ ಹಂಬಲ ಪೂರ್ತಿಸಲು2 ಕಾರ್ಪರ ಋಷಿ ತಪಕೆ ಒಪ್ಪಿ ಭುವಿಯೊಳ್ ಬಂದು ಪಿಪ್ಪಲ ತರುವಿನೊಳ್ ಇಪ್ಪ 'ಶ್ರೀನರಹರಿಯೇ' 3
--------------
ಕಾರ್ಪರ ನರಹರಿದಾಸರು
ಬಾರಯ್ಯ ಎನ್ನ ಮನ ಮಂದಿರಕೆ ಪ ಬೇರೊಂದು ಯೋಚನೆ ಮಾಡದೆ ಸಿರಿಪತಿಅ.ಪ ಸೋನೆ ಸೊರಗುವುದೆವಾರ ವಾರಕೆ ಮೇಘವಾರಿಯ ಕರೆದರೆಧಾರುಣಿಗೆ ಕ್ಷಾಮ ಬರುವುದೆ ಕೃಷ್ಣ1 ತಾಮಸ ಬುದ್ಧಿಯೆಂಬಿಯ ನಿನ್ನಶ್ರೀಮೂರ್ತಿ ಹೊಳೆದರೆ ತಮವಡಗದೆಶ್ರೀ ಮನೋಹರನೆ ಭಾನು ಉದಿಸಿದರೆತಾಮಸವಡಗದೆ ಜಗದೊಳು ಕೃಷ್ಣ 2 ನಾ ದೋಷಿ ಕಠಿಣನೆಂತೆಂಬೆಯ ನಿನ್ನಪಾದಪದುಮ ಪಾಪಹರವಲ್ಲವೆಆ ದುಷ್ಟ ಶಿಲೆ ಸೋಕೆ ಋಷಿಪತ್ನಿಯಾದಳುನೀ ದಯಮಾಡೆ ನಾ ನೀಚನೆ ಸಿರಿಕೃಷ್ಣ 3
--------------
ವ್ಯಾಸರಾಯರು
ಬಾರಯ್ಯ ಕೃಷ್ಣ ಬಾರೈ ಬಾಹದಿದ್ದಡೆಕಾರುಣ್ಯನಿಧಿಯೆಂಬ ಕಥೆಯ ಅ-ದಾರು ಬಣ್ಣಿಪರು ವೇದಾಂತದೇವಿಯರೆಮ್ಮದೂರುವರೀಗೆ ಪ. ಕುಂಜರವರದ ನೀಲಾಂಜನವರ್ಣ ನೀಕಂಜನೇತ್ರನೆ ಕಾಮನಯ್ಯಮಂಜುಳಮೂರ್ತಿ ಮನೋಹರಕೀರ್ತಿ ಪ್ರ-ಭಂಜನನೊಡೆಯ ಬಾರೊ 1 ಮಂದರಗಂಧದ ಮಂದಮಾರುತ ಬಂದಚಂದಿರಮುಡಿದ ಚದುರಬಂದಕಂದರ್ಪನರವಿಂದನೆಂಬ ಕಣೆಯ ತೊಟ್ಟ ಮಂದರಧರನೆ ಬಾರೊ2 ನೋಡುವೆ ನುಡಿಸುವೆ ಪಾಡುವೆ ಬಯಕೆಯಬೇಡುವೆ ಹಯವದನನಮಾಡುವೆ ಪೂಜೆಯ ಕೂಡುವೆ ನಿನ್ನೊಡ-ನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ 3
--------------
ವಾದಿರಾಜ
ಬಾರಯ್ಯ ಗುರು ಸ್ವಾಮಿ ಶ್ರೀಸದ್ಗುರು ಎನ್ನ ಮನೋಮಂದಿರಕೆ ಕರುಣಾನಂದದ ಸುಖ ಬೀರುತ ಬಾರೈ ಆತ್ಮಾನುಭವಕೆ ಧ್ರುವ ಕಣ್ಣು ಹಾರುತಿದೆÀ ಬಲದೆನ್ನ ಖೂನದೋರವ್ಹಾಂಗಿಂದು ಚೆನ್ನಾಗ್ಹೊಳಿಯುತಿ ಸುಚಿಹ್ನ ನೀನೊಲಿಯವ್ಹಾಂಗೆ ಬಂದು ಎನ್ನೋಳೀವ್ಹಾಂಗ ಸನಾತನ ಪಾಲಿಸಿದೆನಗೊಂದು ಧನ್ಯಗೈಸುವ ದಯಾಳು ನೀನಹುದೊ ಕೃಪಾಸಿಂಧು 1 ಏನೊಂದರಿಯೆ ಒಂದು ಸಾಧನ ಧ್ಯಾನಮೌನ ಹ್ಯಾಗೆಂದು ಖೂನಬಲ್ಲೆನೊ ನಿಮ್ಮ ಬಿರುದಿನ ದೀನನಾಥ ನೀ ಎಂದು ನ್ಯೂನಾರಿಸದೆನ್ನೊಳಗಿನ ನೀನೆ ಅನಾಥಬಂಧು ಎನಗುಳ್ಳ ಸ್ವಾಮಿ ಸದೋದಿತ ನೀನಹುದೊ ಎಂದೆಂದು 2 ತಾಯಿ ಶಿಶುಸ್ತನಪಾನಕೆ ಬಾಯಿಯೊಳಗಿಡುವ್ಹಾಂಗ ಸಾಯಾಸವಿಲ್ಲದೀಪರಿ ದಯಮಾಡುವದೆನಗೆ ಶ್ರೇಯಸುಖದಾಯಕೊಬ್ಬನು ನೀನೆ ಭಾನುಕೋಟಿ ಎನಗೆ ಅನುದಿನ ದೀನಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಗುರುದೇವರಾಯ ಶ್ರೀ ಹರಿಯೆ ನಮ್ಮಯ್ಯ ಗುರು ಭಕ್ತಜನ ಪ್ರಿಯ ಧ್ರುವ ನೀರೊಳು ಪೂಕ್ಕು ನಿಗಮನ ತಂದಿ ಬಾರಯ್ಯ ಧರಿಯ ಬೆನ್ನಿಲಿ ಪೊತ್ತು ನಿಂದಿ ನೀ ಬಾರಯ್ಯ ಧಾರುಣಿಯ ಗೆದ್ದು ಹಿರಣ್ಯಕನ ಕೊಂದಿ ಬಾರಯ್ಯ ಎಂದೆನಯ್ಯ ಗುರುತಂದೆಬಾರಯ್ಯ 1 ಮೂರು ಪಾದವನಳಿದುಕೊಂಡಿ ನೀ ಬಾರಯ್ಯ ಶಿರಗಳನೆ ಚೆಂಡಾಡಿ ಸಿರಿ ತಂದಿ ಬಾರಯ್ಯ ಗಿರಿಯೆನೆತ್ತಿ ನಿಂದಿ ಬಾರಯ್ಯ ಶ್ರೀ ಹರಿ ಮುಕುಂದಯ್ಯ ಗೋವಿಂದ ಬಾರಯ್ಯ 2 ಬರಿಯ ಬೆತ್ತಲೆ ಆಗಿ ವ್ರತವಳಿದಿ ಬಾರಯ್ಯ ಏರಿ ಕುದುರಿಯನೆ ರಾವುತನಾದಿ ಬಾರಯ್ಯ ಪರಮಭಕ್ತರನು ಹೊರಿಯಲಿ ಬಂದಿ ಬಾರಯ್ಯ ಪರಿಪರಿ ರೂಪವಾದಯ್ಯ ತರಳ ಮಹಿಪತಿ ಪ್ರಾಣದೊಡೆಯ ಬಾರಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು | ತಾರಯ್ಯಾ ಒಂದು ಚುಂಬನ ಕರುಣ | ಬೀರಯ್ಯಾ ನಮ್ಮ ವಶಕೆ ಪ ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ | ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ 2 ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ | ಪೋರ ಬುಧ್ಧಿಗಳ ಬಿಡವಲ್ಲಿ 3 ತುರುಕರಗಳ ಕಾಯ್ದು | ಚರಿಸಿದೆ ಅಡವಿಯ | ಪರಸತಿಯರ ವ್ರತಗಳ | ಪರಸತಿಯರ ವ್ರತಗಳ ಕೆಡಿಸಿದ | ಪರಮಾತ್ಮನಿಗೆ ಎಣೆಯುಂಟೆ 4 ಕೇಸಕ್ಕಿ ತಿರುಮಲ ಲೇಸಯ್ಯಾ ನಿನ್ನ ಗುಣ | ಕಾಸುಕಾಸಿಗೆ ಬಿಡದಲೆ | ಕಾಸುಕಾಸಿಗೆ ಬಿಡದೆ | ಬಡ್ಡಿಕೊಂಬ ಆಶೆಗಾರನು ಬಹು ಸೂರಾಳೊ 5 ಅಣಕವಾಡಲಿ ಬೇಡ ಕೆಣಕಿದರೆ ನಿನ್ನ | ಹೊಣಿಕೆಹಾಕುವೆ ಹಿಡತಂದು ಎನ್ನಯ | ಮನವೆ ನಿನ್ನಯ ಚರಣಕ್ಕೆ ಶೋಭಾನೆ 6 ಬೆಟ್ಟದ ಕೊನೆ ಏರಿ ಎಷ್ಟು ದೂರ ಓಡೀ | ಗಟ್ಯಾಗಿ ನಿನ್ನ ಚರಣದ | ಗಟ್ಯಾಗಿ ನಿನ್ನ ಚರಣದ ಕೊನಿಯ ಉಂ ಗುಷ್ಟ ಕಚ್ಚದಲೆ ಬಿಡೆ ನಾನು 7 ಹಿಂದೆ ಯಾರು ಏನು ತಂದು ಕೊಟ್ಟರೋ ನಿನಗೆ | ಇಂದು ನಾನೇನು ಕೊಡಲಿಲ್ಲವೆಲೋ ತಂದೆ | ಕಣ್ಣಿರದು ನೋಡೊ ಕಮಲಾಕ್ಷ | ಶೋಭಾನೆ 8 ಭಕ್ತನ ನುಡಿಕೇಳಿ ಚಕ್ಕನೆ ಬಿಗಿದಪ್ಪಿ | ತೆಕ್ಕಿಸಿದಾ ವಿಜಯವಿಠ್ಠಲ ಎನ್ನ ಅಕ್ಕರವೆಲ್ಲ ತೀರಿಸಿದಾ | ಶೋಭಾನೆ 9
--------------
ವಿಜಯದಾಸ
ಬಾರಯ್ಯ ದಯಮಾಡಿ ತ್ವರಿತದಿ ಬೇಗಬಾರಯ್ಯ ದಯಮಾಡಿ ಪ. ಒದರಲು ಕರಿರಾಜನೊದಗಿ ಬಂದೆ ಅಲ್ಲಿಮದಭಯ ಭಾಗ್ಯವು ಒದಗಿದುಬ್ಬಸದಿಂದ 1 ಸ್ತಂಭದಿ ನರಹರಿ ಎಂಬಭಾವದಿ ಬಂದುಕುಂಭಿನಿಪತಿ ಬಹು ಸಂಭ್ರಮಗೊಳುತಲಿ 2 ನರನು ಅರ್ಚಕನೆತ್ತ ನರಹರಿ ನೀನೆತ್ತಕರುಣದಿ ಬರಬೇಕು ಸಿರಿಹಯವದನ 3
--------------
ವಾದಿರಾಜ
ಬಾರಯ್ಯ ದಯೆದೋರಯ್ಯ ನೀರಜನಾಭನೆ ಕರುಣಿಸು ಮಹರಾಯ ಪ ಸಂಸಾರಸರಕಿನೊಳು ಸಿಲುಕಿ ನಾ ಬಳಲುವೆ ಶಿಶುವಿನೊಳು ದಯವಿಟ್ಟು ಸೆರೆ ಬಿಡಿಸೆನ್ನಯ್ಯ 1 ಪುಸಿನುಡಿ ನುಡಿದು ನಾ ದೆಸೆ ಬಾಯ ಬಿಡುವೆನು ಕುಸುಮಾಕ್ಷ ಪಿಡಿದೆನ್ನ ಹಸನ ಮಾಡೆನ್ನಯ್ಯ2 ಜಡಭವತೊಡರನು ಗಡನೆ ಕಡೆಹಾಯ್ಸಿ ನಿ ನ್ನಡಿಭಕ್ತಿ ಕೊಡು ಬೇಗೆನ್ನೊಡೆಯ ಶ್ರೀರಾಮಯ್ಯ 3
--------------
ರಾಮದಾಸರು
ಬಾರಯ್ಯ ಬಾ ಗುರುವೆ ಪರಬ್ರಹ್ಮದರುವೆ ಪ ಮೂರ್ತಿ ಪ್ರಭುವೆ ಅ.ಪ. ಸುರನದಿ ಉರಗ ಕಂಕಣ ಕರಕಪಾಲ ಪಿಡಿವೆ | ಹರ ಹರ ಎಂಬ ಭಕ್ತರಿಗೆ ವರವೆ || ಬಾರಯ್ಯ 1 ತರಣಿ ಸೆಳೆದ ವಸನ ಮಿಂಚಿನ ವರ್ಣ |ಶರಣು ಮಾಡುವೆ ನಿಮ್ಮ ಎರಡೂ ಚರಣ || ಬಾರಯ್ಯ 2 ಧಾಮ ಮಾಡಿದಿ ನಿಮ್ಮ ಭೃಂಗಾವಳೀ ಗ್ರಾಮಾ | ಭೀಮಾಶಂಕರಗೊಲಿದ ಸದ್ಗುರು ಆತ್ಮಾ || ಬಾರಯ್ಯ 3ಚಿ
--------------
ಭೀಮಾಶಂಕರ