ಒಟ್ಟು 1129 ಕಡೆಗಳಲ್ಲಿ , 101 ದಾಸರು , 946 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಶೇಷ ಚಂದ್ರಿಕಾರಾಯರ ಸಂಕ್ಷಿಪ್ತ ಚರಿತ್ರೆ (ವಾರ್ಧಿಕ ಷಟ್ಪದಿ) ರಘುನಾಥರಂ ಸೇವಿಸೀ |ರಘುನಾಥ ತೀರ್ಥರಂ ಮಿಗಿಲಾಗಿ ಸೇವಿಸುವಅಘಗಳನು ನೀಗಿ ಶ್ರೀ ರಘುವರನ ಪ್ರೀತಿಯನುಮಿಗೆ ಪೊಂದಿ ಭವದಾಟಿ ನಗಧರನ ಲೋಕದೊಳು ಬಗೆ ಬಗೆಯ ಸುಖದಿ ಬಾಳ್ವ ಪ ಏಕಮೇವನ ಚರಣ | ತೋಕರೆಂದೆನಿಸಿ ಸಾತ್ವೀಕರೆನಿಪ ತಾಯ್ತಂದೆಗಾಕುವರನೆನಿಸುತಏಕಋಷಿ ಶೌನಕ ಸುಗೋತ್ರದೊಳುವೆಂಕಟವರಮೃಗಾಭಿದನು ಎನಿಸೀ ||ನೂಕಿ ಪಂಚಾಬ್ದಗಳನಾ ಕುವರಗಾಗುಪನಯನಕೈಗೊಂಡು ಗುರು ಚರಣನೇಕ ವಿಧ ಸೇವಿಸುತವಾಕಾದಿ ಶಾಸ್ತ್ರಗಳ ಸಾಕಷ್ಟು ಅಭ್ಯಸಿಸಿ ಸ್ವೀಕರಿಸಿ ದ್ವಿತೀಯಾಶ್ರಮಾ 1 ಅನುಜ ಅಂಭ್ರಣಿಯ ರಮಣಪದಅಂಭುಜಗಳಂ ಭಜಿಸಿ ಸಂಭ್ರಮದಿ ಸತಿವೆರಸಿ ಉಂಬುಡುವ ಸರ್ವವೆಲ್ಲ |ಬಿಂಬನಲಿ ಅನ್ವಯಿಸಿ ಇಂಬುಗೊಂಡವರಾಗಿಸಂಭ್ರಮದ ಸಂತಾನದಂಬಲನೆ ತಾ ತೊರೆದುಹಂಬಲಿಸಿ ಹರಿಪಾದ ಗುಂಭದಿಂದಲಿ ಭಜಿಸಿ ಇಂಬಿಟ್ಟ ಸನ್ಯಾಸದೀ 2 ಹತ್ತು ಮೂರ್ಮತ್ತೈದು ವತ್ಸರದಿ ವಿಠಲ ಪದವರ್ತಿ ಲಕುಮಿನರೆಯಣ ತೀರ್ಥರಿಂ ಸನ್ಯಾಸದುತ್ತ ಮಾಶ್ರಮ ಪೊಂದಿ ಭೃತ್ಯರಿಗೆ ಶ್ರೀಮಧ್ವ ಶಾಸ್ತ್ರಗಳ ಬಿತ್ತರಿಸುತಾ |ಮತ್ತೆ ಬದರಿಯ ಸೇತು ಉತ್ತಮ ಕ್ಷೇತ್ರ ತ್ರೈರಾವರ್ತಿ ಸಂಚರಿಸಿ ಬಲು ಮತ್ತ ಮಾಯ್ಗಳನಳಿದುಕೃತ್ತಿ ವಾಸನ ತಾತ ಉತ್ತಮೋತ್ತಮನೆಂದು ವತ್ತಿ ಪೇಳ್ದರು ಸುಜನಕೇ 3 ಶೇಷನಾವೇಷದಿಂ ವ್ಯಾಸಾಭಿದಾನ ಸ ನ್ಯಾಸಿ ಎನಿಸುತಲಿ ದೀನೇಶನಂಶಜರಿಂದವಾಸಿಸುತ ಹಂಪೆಯಲಿ ಲೇಸು ಸುತ್ಸೂತ್ರಗಳ ಭಾಷ್ಯಾವ್ಯಾಖ್ಯಾ ಚಂದ್ರಿಕಾವ್ಯಾಸ ತ್ರಯಗಳು ಎಂದು ಭಾಸುರದ ಕೀರ್ತಿಯಲಿಕಾಶಿ ಗಧದರ ಮಿಶ್ರ ಏಸು ಮಾಯ್ಗಳ ಜಯಕೆಲೇಸು ಕಾರಣವೆನಿಪ ಆಸಿ ಗ್ರಂಥಗಳ್ರಚನೆ ಬೇಸರದೆ ನೆಡೆಯುತಿರಲೂ 4 ವರಶಿಷ್ಯರಿಂವರೆಸಿ ಇರುತಿರಲು ದಿನ ಒಂದುಅರೆವಾಸಿಯಾದಂಥವರ ಚಂದ್ರಿಕಾಗ್ರಂಥಎರಡು ಅಧ್ಯಾಯಗಳು ಪೂರಣವು ಯಾರಿಂದ ಒರೆವುದೆಂದೆನೆ ಪ್ರಾರ್ಥಿಸೀ ||ವರನರರ ಸಲಹುದಕೆ ಹರಿಯಾಜ್ಞೆಯಿಂ ಮತ್ತೆಎರಡು ಮೂರ್ಜನ್ಮಗಳ ಧರಿಸುವೆವು ನಾವು ಎರಡೈ-ದರಿಲ್ಲಿಂದ ನರಜನ್ಮದೊಳು ಗ್ರಂಥ ಪೂರಣವು ಆಹುದೆಂದರು 5 ಉಕ್ತಿಗನು ರಘುನಾಥ ತೀರ್ಥರೆಂದುರೆ ಮರೆದುಗ್ರಂಥ ಶೇಷವ ರಚಿಸಿ ತತ್ತರಭಿಧರು ಎನಿಸಿತತ್ವ ಕಣಿಕಾಖ್ಯವನು ತಂತ್ರಸಾರದ ವ್ಯಾಖ್ಯಮತ್ತಿತರ ಗ್ರಂಥಗಳನು ||ಬಿತ್ತರಿಸಿ ಹರಿಯನ್ನು ತೃಪ್ತಿಸುತ ಪೂರ್ವದಲಿಛಾತ್ರರಂ ಪಡೆದಂತೆ ಮತ್ತೆ ಈ ಜನ್ಮದಲಿಉತ್ತಮರು ಶಿಷ್ಯ ಸಂಪತ್ತಿನಿಂ ಮೆರೆದಿಹರು ತತ್ವಕೋವಿದರು 6 ತೈಜಸ ಪೇಳಿದ 7 ಮಹಿಷಿ ಕ್ಷೇತ್ರದೊಳುಸಿರಿ ಕೃಷ್ಣನಂ ನಿಲಿಸಿ ಹರಿರಥೋತ್ಸವ ಪೂಜೆವರುಷ ವರುಷದಿ ಗೈಯ್ಯೆವರ ಭೂಮಿ ಕಾಣೆ ಭೂಸುರರಿಗಿತ್ತಿಹರು ಅಯ್ಯಾ 8 ಆಷಾಢ ಸಿತ ತೃತಿಯ ಭಾಸಿಸುವ ಮಧ್ಯಾಹ್ನಕಾಶೀಗೇ ಮಿಗಿಲೆನಿಪ ತ್ರಿಮಕೂಟಗಾಗಮಿಸಿಭೂಸುರರಿಗೇ ತಮ್ಮ ಆಶ್ವಾಸ ತಿಳಿಸುತ್ತ ಲೇಸು ಸಂಗಮವೀಯತಾ ||ಶೇಷ ಚಂದ್ರಿಕಾಚಾರ್ಯ ಶ್ರೀಶನರ್ಚಿಸಿ ಕಾಯರಮೇಶ ಚರಣದಲೀಯ ಲೋಸುಗದಿ ಮನಮಾಡಿಆಸುಸತ್ತಿಥಿ ಚೌತಿ ಲೇಸೆನಿಸಿ ಉದಿಸುತಿರಲೀ ಶರೀರವನು ಅರ್ಪಿಸಿದರು 9 ಇವರ ವೃಂದಾವನವು ಅಶ್ವತ್ಥ ನರೆಯಣನಪವಿತರದ ಪದ ಧ್ರುವಕೆ ಬೀಳುವ ಸ್ಥಳದೊಳಗೆ ಸ್ಥಾಯವದು ಮಠಬಿರಿದುಗಳು ಅಶ್ವತ್ಥತರುಛಾಯವೇ ಛತ್ರಿಯೆನಿಸುತಿಹುದೂ ||ಕವೇರ ಕನ್ಯೆಯು ಕಪಿಲ ದಿವ ದೀವಟಿಗೆ ಸಮವುಇವರಿರುವ ಕ್ಷೇತ್ರವೇ ಪ್ರವರ ಗಯಪ್ರಯಾಗವಿಶ್ವೇಶ ಸನ್ನಿಧಿಯು ಇವರ ಗುಣ ಸ್ಥವನವೇಶಶ್ವದಾನಂದ ಸಂದೋಹವು 10 ವತ್ಸರವು ನೂರೆರಡು ಸತ್ಸಿದ್ದಿಗೇ ಪೊತ್ತಸತ್ಸರೀರವ ತ್ಯಜಿಸಿ ಮತ್ಸರಾದ್ವಿರಹಿತರುವತ್ಸಾರಿ ಸಿರಿಕೃಷ್ಣ ವತ್ಸರೆಂದೆನಿಸುತ್ತ ಸತ್ವ್ಸಭಾವದಿ ಮೆರೆಯುತಾ ||ಹೃತ್ಸರೋಜದಿ ಪವನ ಹೃತ್ಸರೂಜದಿ ಶಿರೀವತ್ಸಲಾಂಛನ ಗುರುಗೋವಿಂದ ವಿಠಲಪದಸತ್ಸರೋಜದ ಧ್ಯಾನ ಉತ್ಸುಕದಿ ಗೈದು ತನವತ್ಸರ್ಗ ಬೀಷ್ಟಗಳಗರೆವಾ 11
--------------
ಗುರುಗೋವಿಂದವಿಠಲರು
ಶ್ರೀ ಶ್ರೀನಿವಾಸ ಕಲ್ಯಾಣ ಲಾವಣಿ ಮಾಧವ ಪ ಮುದಮೋದ ಘನ ಸುಖ ಭಕ್ತರಿಗೀಯಲು ಅ.ಪ. ದೇವ ದೇವೇಶನು ಯಾರೆಂತೆಂದು ಕೋವಿದ ಭೃಗುಮುನಿ ಹುಡುಕುತ ಬಂದು ಪಾರ್ವತಿ ಪತಿಹರ ವಿಧಿಗಳ ಜರಿದು ಧಾವಿಸಿ ಹರಿಯೆಡೆ ಬರ್ಪುದ ಕಂಡು ಭಾವಜ ಪಿತರತಿ ಸೋಗನು ಹಾಕೆ ದೇವನ ಮಾಯೆಯು ಮುಸುಕಲು ಮುನಿಗೆ ಈ ವಿಧ ಸಲ್ಲದು ಹರಿಗೆಂತೆಂದು ಪಾವನ ನೆದೆಯನು ವದ್ದನು ದುಡುಕಿ1 ಮಾಧವ ಚರಣವ ತೊಳೆದು ಹರಿಸುತ ದುಗುಡವ ಭಕ್ತನಿಗಂದು ಕರದಿಂ ದೊತ್ತುತ ಚರಣದ ಕಣ್ಣು ತರಿಯಲು ಹೆಚ್ಚಿನ ಸಾಧನೆ ಮುನಿಗೆ ಹರುಷದಿ ತೆರಳಿದ ಋಷಿವರ ತಾನು ಅರಿಯುತ ಕಾಂತನ ಮನವಂ ಸಿರಿಯು ಸರಸರ ಕೋಪವ ನಟಿಸುತ ತಾನು ಬಿರುಸಿನ ನುಡಿಗಳ ಆಡಿದಳಂದು 2 ಏನಿದು ಮುನಿ ವಿಪರೀತವು ಥರವೆ ನಾನಿಹ ಸ್ಥಳವನು ವದೆಯುವದೆಂದು ಮಾನಿನಿ ಗೌರವ ಕಾಯದೆ ಕ್ಷಮಿಸಿಹೆ ನಾನಿಹೆ ಬರಿಸತಿ ಭಕ್ತರೆ ಹೆಚ್ಚು ಕಾನನ ಸೇರುವೆ ನನಗೇಕೀ ಮನೆ ಮಾನವು ಹೊಯಿತು ಯನ್ನಲು ಸತಿಯು ಮೌನವ ಧರಿಸಲು ಗಂಡನು ನಗುತ ದೀನರ ಪೊರೆಯಲು ಬಂದಳು ಭುವಿಗೆ 3 ಗಂಡನ ಬಿಡುವಳೆ ಲಕ್ಷ್ಮೀದೇವಿ ಪುಂಡರ ಮಾತಿದು ನಂಬಿಲುಬೇಡಿ ಗಂಡನ ಮನತೆರ ನಟಿಸಿದಳಷ್ಟೆ ಗಂಡನು ಹಾಗೆಯೆ ತೊರೆಯುತ ಧಾಮ ಕುಂಡಿಲಿ ಗಿಳಿಯುತ ಅಲೆಯುತ ಹೊರಟ ಕಂಡಲ ಗಿರಿಯೆಡೆ ನಡೆತಾತಂದ ಕಂಡನು ಹುತ್ತವ ಒಂದೆಡೆ ತಾನು ಕುಂಡಲಿಗೊಡೆಯನು ನೆಲಸಿದನಲ್ಲಿ 4 ಪಾವನ ಗಿರಿಯದು ಕೇಳಿರಿ ಎಲ್ಲ ದೇವನ ಖಗಮೃಗ ಬಳ್ಳಿಗಳಾಗಿ ದೇವ ಸಮೂಹವು ಸೇವಿಪರಲ್ಲಿ ಕೋವಿದ ಋಷಿಗಳು ಧ್ಯಾನಿಪರೈಯ ಭಾವಸು ಭಕ್ತಿಲಿ ನೋಡಲು ಗಿರಿಯ ಜೀವರ ಪಾಪಗಲೆಲ್ಲಾ ನಾಶ ನೋವನು ಕಾಣರು ಹರಿಕೃಪೆ ಮುಂದೆ ದೇವನು ಇರೆ ಇದೆ ಭೂವೈಕುಂಠ 5 ಕೃತಯುಗದಲ್ಲಿದು ವೃಷಭಾಚಲವು ಗತಿಸಿದ ರಕ್ಕಸ ಹರಿಯಿಂತೆಂದು ಸುತನಂ ಪಡೆಯಲು ಅಂಜಿಲಿದೇವಿ ಅತಿ ತಪಗೈದಳು ತ್ರೇತೆಯಲೆಂದು ಉತ್ತಮ ನೆಂಬುವ ಗರ್ವವ ನೀಗಿ ಸ್ತುತಿಸಿದ ಶ್ವಾಸನ ಶೇಷನು ಎಂದು ಇತ್ತರು ಮೂರಲಿ ಶೇಷನ ನಾಮ 6 ವೆಂಕಟ ಗಿರಿಯಿದು ಕಲಿಯುಗದಲ್ಲಿ ಸಂಕಟ ನೀಗಿದ ಮಾಧವನಿಲ್ಲಿ ಸಂಕಟ ನೀಡುವ ಪಾಪಗಳನ್ನು ಶಂಕರ ಹರಿತಾ ಕಡಿಯುವನೆಂದು ವೆಂಕಟ ನೆನಿಸುತ ಮೆರೆಯುವ ನಿಲ್ಲಿ ಶಂಕೆಯ ಮಾಡದೆ ಶರಣೆಂದಲ್ಲಿ ಪಂಕಜ ನೇತ್ರನು ಪೊರೆಯುವನಿಲ್ಲಿ ಮಂಕುಗಳಾಗದೆ ಭಜಿಸಿರಿ ಬೇಗ 7 ಇಂದಿರೆ ಕೆರಳೆ ತಂದೆಯು ತೊರೆದನೆ ನಿಜ ವೈಕುಂಠ ಪೊಂದಿಹ ಹುತ್ತವ ಏನಿದು ಛಂದ ಕಂದನು ನಾನಿಹೆಎನ್ನುತ ಬೊಮ್ಮ ತಂದೆಗೆ ಕ್ಷೀರವ ಕರೆಯಲುನಿತ್ಯ ಛಂದದ ಗೋತನು ಧರಿಸುತ ಶಿವನ ಕಂದನ ಗೈಯುತ ಮಾತೆಯ ಸಹಿತ ಬಂದನು ಚೋಳನ ಅರಮನೆಯೆಡೆಗೆ 8 ಕೊಳ್ಳಲು ರಾಣಿಯು ಸೇರುತ ಗೋಷ್ಠಿ ನಲ್ಲಗೆ ಪ್ರತಿದಿನ ಕ್ಷೀರವ ಸುರಿಸೆ ಇಲ್ಲವೆ ಆಗಲು ರಾಣಿಗೆ ಹಾಲು ಗೊಲ್ಲನ ಶಿಕ್ಷಿಸಿ ಬೈಯಲು ಬಹಳ ಗೊಲ್ಲನು ಪತ್ತೆಯ ಹಚ್ಚುತ ಚರ್ಯೆ ಕೊಲ್ಲಲು ಗೋವನು ಕೊಡಲಿಯನೆತ್ತೆ ಬಲ್ಲಿದ ತಡೆಯಲು ಶಿರವನು ಒಡ್ಡೆ ನಿಲ್ಲದೆ ಗಗನದಿ ಚಿಮ್ಮಿತು ರಕ್ತ 9 ನೋಡುತ ಮಡಿಯಲು ಗೊಲ್ಲನು ಅಲ್ಲೆ ಓಡುತ ಗೋಗಣ ಹಟ್ಟಿಯ ಸೇರೆ ಜಾಡನು ಪಿಡಿಯುತ ಚೋಳನು ಬರಲು ಕೇಡಿಗ ನೃಪನೆ ಪಿಚಾಚಿಯು ಆಗೆನೆ ಬೇಡಲು ಕ್ಷಮೆಯನು ಬಹುಪರಿಹರಿಯ ನೀಡಿವಿಶಾಪವ ವೆಂಕಟ ಕರುಣಿ ಆಡಲು ತೊಡಗಿದ ಈ ವಿಧ ಮುಂದೆ 10 ಆದುದು ಆಯಿತು ಚೋಳನೆ ಕೇಳು ಭುಂಜಿಸು ಕರ್ಮ ಪದ್ಮಾವತಿ ಯೆಂಬಾಕೆಯ ಮುಂದೆ ಮೋದದಿ ಮುದುವೆಯ ನಾಗುವೆ ಆಗ ಭೂಧವ ಮಾವನು ನೀಡುತ ಮಕುಟ ಕವಿ ವಾರ ನಾಧರಿಸುವಾಗಿಲ್ಲದೆ ಬಾಧೆ ಪೊಂದುವಿ ಕಲಿಕೊನೆ ಪೂರ್ವಾವಸ್ಥೆ 11 ಪೇಳತ ಲೀಪರಿ ಚೋಳಗೆ ದೇವ ಲೀಲೆಯ ತೊರಲು ಘಾಯವ ಪಿಡಿದು ಕೇಳಲು ಔಷಧ ಗುರುವನು ಸ್ಮರಿಸಿ ಆಲಸ್ಯಗೈಯದೆ ಬಂದವ ನುಡಿಯೆ ಮೂಲಿಕೆ ಹುಡುಕುತ ಗಿರಿಯಲಿ ಅಲೆಯೆ ಶೈಲದ ಸ್ವಾಮಿ ವರಾಹನು ಸಿಗುತ ಕೇಳಲು ವೆಂಕಟ ಕಥೆ ವಿಸ್ತಾರ ಪೇಳಲು ತಬ್ಬಿದ ಕ್ರೋಡನ ಚತುರ 12 ಏನಿದು ಬಹು ವಿಪರೀತವು ಪೇಳಿ ಸತಿ ಬಿಟ್ಟಲೆಯುವುದೆಂತು ಪೂರ್ಣಾನಂದಗೆ ಗೊಲ್ಲನ ಪೆಟ್ಟೆ ಚಿನ್ಮಯ ನೆತ್ತರು ಚಿಮ್ಮುವದುಂಟೆ ಕ್ಷುಧೆ ತೃಷೆ ದೂರಗೆ ಹಾಲು ಅನ್ಯರು ವೈದ್ಯರೆ ಧನ್ವಂತ್ರೀಗೆ ಕಾಣನೆ ಔಷಧಿ ಪೂರ್ಣಪ್ರಜ್ಞ ತಾನಿರೆ ವೆಂಕಟ ತಿಳಿಯನೆ ಕ್ರೋಡ 13 ಲೀಲೆ ಇದೆಲ್ಲವು ಕೊಡುವದವಗೆ ಬೀಳಿಸಿ ಮೋಹದಿ ಕುಜನರ ತರಿವ ಪಾಲಿಪ ಸುಜನರ ಬೀರುತ ಜ್ಞಾನ ಲೀಲಾಮಯನವ ಸರಿಯೆಂತೆನ್ನಿ ಕೇಳಲು ಕ್ರೋಡನ ವಾಸಿಸೆ ಜಾಗ ಕೇಳುವರಾರೈ ನೀನಿರೆ ಯನ್ನ ಬೀಳುವರೆಲ್ಲರು ನಿನ್ನಡಿಭರದಿ ಧಾಳಿಯೆ ನನ್ನಯ ಪ್ರಭುತನವೆಂದ 14 ಮುಂದೆಯೆ ನೀನಿರು ನಾಹಿಂದಿರುವೆ ಬಂದವರೆಲ್ಲರು ನಿನಗೊಂದಿಸುತ ವಂದಿಸಲೆನ್ನದು ವಲಿಯುವೆನಾಗ ಮುಂದಿಹ ನಿನಗೇ ಮೊದಲಲಿ ಪೂಜೆ ಛಂದದಿ ಶಾಸನ ಹೀಗೇ ಬರದು ಮಂದಿರ ಕೆಡೆ ಕೊಡು ಎನ್ನಲು ನಗುತ ನಂದದಿ ನೀಡುತ ಹಾಗೆಯೆ ಎಲ್ಲ ಕಂದನ ಸೇವಿಸೆ ಬಕುಳೆಯ ಕೊಟ್ಟ 15 ತಗ್ಗಿರೆ ಸಾಧನ ವೆಗ್ಗಳಗೈವ ವೆಗ್ಗಳ ಸಾಧನೆ ತಗ್ಗಿಪ ದೈವ ಹಗ್ಗವು ಸರಿಇವ ನಿಚ್ಚೆಯು ಕೇಳಿ ಅಗ್ಗದ ಪ್ರಭುವರ ಇವತಾನಲ್ಲ ತಗ್ಗಿಸಿ ವಿಷಯ ಬಗ್ಗಿಸಿ ಮನವನು ಹಿಗ್ಗುತ ಭಜಿಸಲು ಚರಣ ಸರೋಜವ ತಗ್ಗದ ಸೌಖ್ಯವ ನೀಡುತ ಕಾವ ಮುಗ್ಗದೆ ಭವದಲಿ ಭಜಿಸಿರಿ ಬೇಗ 16 ಬಕುಳೆ ಯಶೋದೆಯು ಪೂರ್ವದಿ ಕೇಳಿ ರುಕ್ಮಿಣಿ ಮುದುವೆಯ ನೋಡದಲಾಕೆ ಉಕ್ಕಿದ ಮೋಹದಿ ಬಯಸಲು ನೋಡೆ ಭಕ್ತಳ ಬಯಕೆಯ ಸಿದ್ಧಿಸೆ ದೇವ ಬಕುಳೆಯ ಜನ್ಮದಿ ನಿಂದಿಹಳೆಂದು ಅಕ್ಕರೆಯಿಂದಲಿ ತಾ ಕರತಂದು ಚೊಕ್ಕಸುಕಂದನ ತೆರದಲಿ ನಿಂದ ಭಕ್ತಿಲಿ ಸೇವೆಯ ಗೈದಳು ಬಕುಳೆ 17 ನಾರಾಯಣ ಪುರ ನಾಮದ ನಗರಕೆ ದೊರೆಯೆನಿಸಿದ್ದನು ಆಕಾಶರಾಯ ಕೊರಗುತ ಬಹುದಿನ ಸುತರಿಲ್ಲೆಂದು ಧರಣಿಯ ಶೋಧಿಸೆ ಯಾಗಕ್ಕೆಂದು ದೊರಕಲು ಕಮಲವು ದೊಡ್ಡದು ಒಂದು ತೆರೆಯುತ ನೋಡಲು ಶಿಶು ತಾನೊಂದು ಬೀರುತ ಕಾಂತಿಯ ಕಾಣಿಸಲಂದು ದೊರಕಿತು ಕನ್ಯಾಮಣಿಯೆಂತೆಂದು 18 ಅರಮನೆ ಗಾ ಶಿಶು ಹರುಷದಿ ತಂದು ಸರಸಿಜಮುಖಿ ಪದ್ಮಾವತಿಯೆಂದು ಕರೆಯುತ ರಾಣಿಯು ಸಾಕುತ ಬಂದು ವರುಷಗಳುರುಳಲು ಕಾಲದಿ ಕನ್ಯೆ ಸಿರಿತೆರ ಲಕ್ಷಣ ಗಣದಿಂ ಬೆಳೆಯೆ ವರಿಸಲು ಈಕೆಯ ನರರಿಂದಾಗದು ಹರಿಯೇ ಸರಿವರವೆನ್ನುತ ಮನದಿ ಅರಸುತ ವರನಂ ಬಳಲಿದ ಧೊರೆಯು 19 ವೇದವತೀ ಈಕೆಯು ತ್ರೇತೆಯಲೆನ್ನಿ ಮಾಧವ ಮನತೆರ ತೆರಳುವ ಸೀತೆ ಮೋದದಿ ಸೇರಲ್ ಗಿರಿ ಕೈಲಾಸ ಖÉೀದಗಳುಣ್ಣುತ ಲಂಕೆಯಲಿದ್ದು ಸಾಧಿಸಿ ಖಳರವಿನಾಶವನಲ್ಲಿ ಮೇದಿನಿ ಸುತೆಯಳ ಸೇವಿಸಿ ಬಹಳ ಮೋದದಲಾಗಲಿಯಂದಳು ಸೀತೆ 20 ಶಕ್ರನು ಶಿಖಿಸಹ ಇದ್ದಹಾಗೆ ಲೋಕಕೆ ತೋರಲು ಸೀತೆಯ ರಾಮ ಚೊಕ್ಕ ಪರೀಕ್ಷೆಯ ನಡಿಸಲು ಶಿಖಿಯಲಿ ತಕ್ಕಣ ಬಂದರು ಸೀತೆಯರಿಬ್ಬರು ಅಕ್ಕರೆಯಿಂದಲಿ ನುಡಿಯುತ ಕಥೆಯು ಸಕ್ಕದಿ ನಿಂತಿಹ ಈಕೆಯ ನೀನು ಈಕ್ಷಿಸಿ ಪಿಡಿಕೈಯೆನ್ನಲು ಸೀತೆ ರಕ್ಕಸ ವೈರಿಯು ಮಡದಿಗೆ ನುಡಿದ 21 ಒಂದೇ ಬಾಣವು ಒಂದೇ ವಚನವು ಒಂದೇ ನಡತೆಯು ಒಬ್ಬಳುಮಡದಿ ಇಂದೆನಗೆಂಬುದು ತಿಳಿಯದೆ ನಿನಗೆ ಛಂದದಿ ಕಲಿಯಲಿ ನಡಿಸುವೆ ಬಯಕೆ ಇಂದ್ರನು ಅಗ್ನಿಯ ಪುಟ್ಟಲಿ ವಡಲಲಿ ಇಂದಿನ ಯುಗದಲಿಯನ್ನಲು ರಾಮ ವಂದಿಸಿ ನಡೆದರು ಎಲ್ಲರು ಆಗ ಹಿಂದಿನ ವರತೆರ ಬಂದಿಹಳೀಗ 22 ಭೂಸುರ ಪೊಟ್ಟಿಲಿ ಪುಟ್ಟುತ ಹಿಂದೆ ಶ್ರೀಶನ ಮಡದಿಯ ತಪದಿಂ ಮೆಚ್ಚಿಸಿ ಭಾಷೆಯ ಪಡದಿರೆ ಸವತಿಯ ಪಟ್ಟಕೆ ಘಾಸಿಯ ನೀಡುತ ರಾವಣ ಬಂದು ಆಶಿಸಿ ಸಂಗವ ದುಡುಕುತ ನುಡಿಯೆ ರೋಷದಿ ಶಾಪವ ನೀಡಿದಳೀಕೆ ನಾಶಕೆ ಕಾರಣಳಾಗುವೆ ನಾನೆ ಭ್ರಷ್ಟನೆಯೆನ್ನುತ ಶಿಖಿ ಸೇರಿದಳು 23 ಲಕ್ಷ್ಮೀ ವಿಭೂತಿಯೆ ಇವಳೆಂತೆನ್ನಿ ಲಕ್ಷಣ ನಿಭಿಡಿತಳಾಗಿಹ ಕನ್ಯೆ ಕುಕ್ಷಿಯು ತೆಳ್ಳಗೆ ಸಿಂಹಸುಮಧ್ಯಮೆ ಪಂಕಜ ನೇತ್ರೆಯು ಪಂಕಜವದನೆಯು ಪಂಕಜ ಗಂಧಿ ಭುಜಂಗ ಸುವೇಣಿ ಶಂಕರ ನಗೆನುಡಿ ಗುರುಲಾವಣ್ಯ ಶಂಖ ಸುಪದ್ಮಾರೇಖೆಗಳಿಂದ ಲಂಕೃತ ಅಂಗೈ ಪಾದಗಳ್ಹಾಗೆ 24 ಕಾಮನ ಬಿಲ್ಲನು ಹಳಿಯುವ ಹುಬ್ಬು ಸೋಮನ ಮೀರಿಪ ಯುಗಯುಗ ಕಾಂತಿ ಸಾಮಜಗಮನೆ ರಂಭೋರುಗಳು ಕೋಮಲ ಚಂಪಕ ನಾಶಿಕ ತುಟಿಗಳು ಕಾಮದ ಪೀವರ ಕುಚಯುಗಹಾಗೆ ಸು ನೇಮದಿ ಬೆಳದಿಹ ಪಲ್ಗಳ ರಾಜಿ ವಾಮನಿತಂಬಜಘನದ್ವಯವ ಭಾಮೆ ಸಫಾಲದಿ ಮೆರೆದಳು ತಾನು 25 ಈಕೆಯು ಕಮಲೆಯ ತೆರೆದಿಂ ಬೆಳೆದು ಸಾಕಲು ಕರೆದಳು ಕನಕಸುವೃಷ್ಟಿ ಕಾಕನು ಕಾಣದೆ ರಾಜನು ಮೆರೆದ ನಾಕವೆ ಎನಿಸಿತು ರಾಜನಮನೆಯು ಜೋಕೆಯಲೊಂದಿನ ಸಖಿಯರ ಕೂಡಿ ಈಕ್ಷಿಸೆ ಪುರವುದ್ಯಾನವ ಕುವರಿ ಸೌಖ್ಯದಿ ತೆರಳುತೆಯಿರುತಿರುವಲ್ಲಿ ನಾಕದ ನಾರದ ವದಗಿದನಲ್ಲಿ 26 ಹರಿಕಾರ್ಯಾಂಗನು ಬಂದನು ಎನ್ನುತ ಗುರು ಸತ್ಕಾರಂಗಳಗೈದು-ಆ ತುರ ತೋರಲು ತಿಳಿಯೆ ಭವಿಷ್ಯ ಕರಗಳ ನೋಡುತ ತೂಗುತ ತಲೆಯು ಸಿರಿತೆರ ಲಕ್ಷಣ ಕಾಣುವೆನಮ್ಮ ಹರಿಯೇ ಸರಿ ವರಿಸಲ್ ನಿನ್ನ ಅರಸುತ ಬರುವನು ತಾನೆ ನಿನ್ನ ಬರಿ ಮಾತಲ್ಲವು ನೋಡೆಂತೆಂದ 27 ಪರಿ ಹೊರಡಲ್ ಮುನಿಯು ಲಾಲಿಸಿ ª
--------------
ಕೃಷ್ಣವಿಠಲದಾಸರು
ಶ್ರೀ ಸತ್ಯಬೋಧರು ಭೀಕರ ರೂಪವ ತೋರುವ ಯತಿವರನ್ಯಾರೆ ಪೇಳಮ್ಮಯ್ಯ ಪ. ನಾಕಲೋಕಪತಿ ಪಿತನ ಬಲದಿ ಯಮಪಾಶ ಗೆದ್ದ ಸತ್ಯಬೋಧಕಾಣಮ್ಮ ಅ.ಪ. ಹರಿ ಆಚಾರ್ಯರ ಉದರದಿ ಜನಿಸಿದನ್ಯಾರೇ ಪೇಳಮ್ಮಯ್ಯಮಾರನ ಪೋಲುವ ರೂಪದಿಂದ್ಹೊಳಿಯುವ-ನ್ಯಾರೇ ಪೇಳಮ್ಮಯ್ಯಗುರುಮುಖದಿಮಂದಧ್ಯಯನ ಮಾಡುತಮನಮೋಹಗೊಳಿಪ ಬಾಲಕನಾರಮ್ಮ1 ಸುಂದರರೂಪನ ಸತಿಯನಾಮ ಕಳವರಿಸಿ-ನ್ಯಾರೆ ಪೇಳಮ್ಮಯ್ಯಮುದದಿಂದಲಿ ಸತ್ಪುತ್ರರ ಪಡೆದಿಹನ್ಯಾರೆ ಪೇಳಮ್ಮಯ್ಯಮಿಂದಸಂಸಾರದಿ ಇಂದಿರೇಶನ ಭಜಿಸುವಶ್ರೀರಾಮಾರ್ಯ ಕಾಣಮ್ಮ2 ಸತ್ಯಪ್ರೇಮರ ಪ್ರೀತಿಗೆ ಪಾತ್ರನುದಾರೆ ಪೇಳಮ್ಮಯ್ಯತಂತ್ರಿಣಿ ತಲದಲಿ ಆಶ್ರಯಗೊಂಡವನ್ಯಾರೆ ಪೇಳಮ್ಮಯ್ಯಮತ್ತೆ ಜಗದೊಳಿಹ ಮಿಥ್ಯವಾದಿಗಳೆಂಬಾಮತ್ತಗಜಗಳಂಕುಶನಿವನಮ್ಮಾ 3 ಶ್ರವಣಾಖ್ಯಪುರದಿ ಮಾಡಿಹನ್ಯಾರೆ ಪೇಳಮ್ಮಯ್ಯಶೇಷರೂಪದ ದುಷ್ಟದೈತ್ಯನ ಸುಟ್ಟವನ್ಯಾರೆ ಪೇಳಮ್ಮಯ್ಯಶೇಷಗತಿಯ ಮನ ಭೂಸುರ ವೃಂದಕೆನಿಶಿಯಲಿ ರವಿಯನು ತೋರಿದನಮ್ಮ 4 ತಪದ ಪ್ರಭಾವದಿ ಗಂಗೆಯನೊಲಿಸಿಹನ್ಯಾರೆ ಪೇಳಮ್ಮಯ್ಯಗೋಪಿಯ ಮಗನನು ತೀರ್ಥದ ದಡದಲಿ ನಿಲಿಸಿಹನ್ಯಾರೆ ಪೇಳಮ್ಮಯ್ಯಗೋಪರೊಡೆಯ ತಂದೆವರದವಿಠಲನನ್ನುಸತತ ಭಜಿಸುವ ಯತಿವರನೆ 5
--------------
ಸಿರಿಗುರುತಂದೆವರದವಿಠಲರು
ಶ್ರೀಗಣಪತಿಗೆರಗಿ ಶಾರದೆಯನುರಾಗದಿಂದಲಿ ಸ್ಮರಿಸಿ ಶ್ರೀಗಿರಿಜಾತೆಯಲೋಕೈಕ ಮಾತೆಯ ಬೇಗದಿ ಹಸೆಗೆ ಕರೆದ ಸುಪದಂಗಳಾ ರಾಗದಿ ಪಾಡಿ ಪೊಗಳುವೆ 1 ಮಿಸುನಿಯ ಮಂಟಪದಿ ರಾರಾಜಿಪಪೊಸಪಸೆವಣೆಯನಿಟ್ಟು ಪೊಸದೇವಾಂಗವ ಮೇಲೆಪಸರಿಸಿ ಹಾಕುತ ಶಶಿಮುಖಿಯರು ನೆರೆದೊಂದಾಗಿ ಪಾಡುತ ಕುಶಲದಿ ಹಸೆಗೆ ಕರೆದರು 2 ಕಡೆಯಾಣಿಯ ಚಿನ್ನದ ಜಗಜ್ಯೋತಿಯಎಡಬಲದೊಳಗಿಟ್ಟು ಉಡುರಾಜಮುಖಿಯರುಮೃಗರಾಜಕಟಿಯರು ಕಡುಬೆಡಗಿಂದಪಾಡುತ ನಲಿದಾಡುತ ಮೃಡನರಸಿಯ ಹಸೆಗೆ ಕರೆದರು 3 ಚಿನ್ನದಪಿಲ್ಲಿಮಿಂಚು ಉಂಗುರಗಳುರನ್ನದಲ್ಲಣಿವೆಟ್ಟು ಉನ್ನತವಾದ ಕಾಲ್ಗಡಗಸರ್ಪಣಿಗೆಜ್ಜೆಯನ್ನು ತಳೆದ ಪಾದಪದುಮದಿಂದೊಮೈವ ಪೂರ್ಣೇಂದು ಮುಖಿಯರು || ಹ 4 ವರರತ್ನಖಚಿತವಾದ ಗೆಜ್ಜೆಮೊಗ್ಗೆಯಸರವೊಡ್ಯಾಣವು ಡಾಬು ಮಿರುಪಮಂಡೆಳೆಯುಡುದಾರ ಕಿಂಕಿಣಿಗಳ ಸರಫಲಿರೆನೆ ಚೆಂಗಾವಿಸೀರೆಯನುಟ್ಟು ಗಿರಿರಾಜತನುಜೆ || ಹ 5 ಚಳಿಕೆ ಹಿಂಬಳೆದೊರೆಯ ಚೂಡಾಕಟ್ಟುಬಳೆಕಂಕಣ ಕಡಗ ಪೊಳೆವ ಮುಂಗೈಯಮುರಾರಿ ಮುತ್ತಿನದಂಡೆ ಥಳಥಳಿಸುವಬೆರಳುಂಗುರಗಳನಿಟ್ಟು ಲಲಿತಾಂಗಿ ಬೇಗ | ಹಸೆಗೇಳು 6 ವರನಕ್ಷತ್ರದ ಸರವು ಏಕಾವಳಿ ಸರಗುಂಡಿನಸರವು ಮಿರುಪಬಿಲ್ಸರ ಚಳ್ಯಸರ ಚಕ್ರಸರಗೋಧಿಸರ ಮೋಹನಮುತ್ತಿನ ಸರಗಳನಿಟ್ಟವರಕಂಬುಕಂಠಿ ಬೇಗ | ಹಸೆಗೇಳು 7 ಅಣಿ ಮುತ್ತಿನ ಮೂಗುತಿ ಐದೆಳೆಯ ಕ-ಟ್ಟಾಣಿ ಕಾಶಿಯ ತಾಳಿ ಮಾಣಿಕಮಯಬತಿಮಲಕು ಅಡ್ಡಿಕೆ ಮಲಕಾಣಿ ಮುತ್ತಿನಬಟ್ಟುಮಲಕು ಸರಿಗೆಯಿಟ್ಟ ಏಣಾಕ್ಷಿ ಬೇಗ | ಹ 8 ತೊಳಪ ಮುತ್ತಿನಮಾಲೆ ಸರ್ಪಣಿಯಂಥಳಥಳಿಪ ವಜ್ರದವಾಲೆ ಚಳತುಂಬು ಮೀನ ಬಾ-ವಲಿ ಹಂಸೆಗಿಳಿಯ ಬಾವಲಿಯು ಹೊನ್ನೂಲುಕುಪ್ಪಿನವೆಂಟ್ಟೆಯವಿಟ್ಟ ಕಲಹಂಸಗಮನೆ | ಹ9
--------------
ಕೆಳದಿ ವೆಂಕಣ್ಣ ಕವಿ
ಶ್ರೀಧರಾಕರ ಕಂಜ ಸೇವಿತ ಪಾದ ಪದ್ಮಜ ಪದದ ಪುರು ಕರು- ಣೋದಧಿಯೆ ಲಾಲಿಪುದು ಪಾಮರನೆಂಬ ಬಿನ್ನಪವ ಸೋದರ ಸ್ಥಿತ ಸಕಲ ಬ್ರಹ್ಮಾಂ- ಪತಿ ನೀನರಿವಿಯಾದರು ಮಾಧವನೆ ಮನದಿರವ ಪೇಳ್ವೆನು ಮನುಜಭಾವದಲಿ 1 ಸುಕೃತ ಫಲವೋ ದೋಷದೂರನೆ ನಿನ್ನ ಪದವನು ಮೀಸಲಳಿಯದೆ ಸೇವೆ ಮಾಳ್ವದು ಲೇಸುಲೇಸೆಂದು ದಾಸಕೂಟದಿ ಸೇರಿ ಮನೆಯಲಿ ವಾಸವಾಗಿರಲಿದರ ಮಧ್ಯಮ ರಾಶೆ ಬಲೆಯಲಿ ಸಿಲುಕಿದೆನು ಕರುಣಾ ಸಮುದ್ರಹರಿ 2 ತನ್ನಿಕೃಷ್ಟ ಮನೋವಿಕಾರಗ- ಳಿನ್ನು ಬಿಡದಲೆ ಪೀಡಿಸುವ ಪರಿ ಯನ್ನು ಪರಮ ಕೃಪಾಳು ನೀನೆಂದೊರವೆನಖಿಳೇಶ ಮಾನ್ನವರ ಮಧ್ಯದಲಿ ಮಾನದಿ ಎನ್ನ ಕಾಪಾಡುವದು ಭಾರವೆ ತನ್ನ ಫಲಗಳ ತಾನೆ ಕೆಡಹುವದುಚಿತವೇ ತೆಗೆ 3 ಯುಕ್ತಿಯಲಿ ನಿನ್ನಂಥ ದೇವರ ರೆತ್ತಿ ವೈದಮೃತವನು ಸುಲಭದೊಳಿತ್ತೆ ದಿವಿಜರಿಗೆ ಔತ್ತರೇಯನ ಕಾಯ್ದ ದ್ರೌಣಿಯ ನೆತ್ತಿಯೊಳಗಿನ ರತ್ನ ಭೀಮನಿ ಗಿತ್ತ ಪರಿಯನು ಪಠಿಸಿ ತಿಳಿದೆನು ಪಾವನಾತ್ಮಕನೆ 4 ಬ್ರಹ್ಮತೇಜೋ ವೃದ್ಧಿ ಬಲಿಯೊಳು ಬ್ಯಾಡ ಸಂಗರ ನಮಗೆನುತ ನಿ- ಮ್ಮಮ್ಮನೊಳ್ ನುಡಿದಂದು ಕಶ್ಯಪನಿಂದಲವತರಿಸಿ ಬ್ರಹ್ಮಚಾರಿಯ ರೂಪದಿಂದೀ ಕ್ಷಮ್ಮೆಯನು ಸೆಳೆದಿಂದ್ರಗಿತ್ತಮ- ಹಾನ್ಮಹಿಮ ನಿನಗಾವದಘಟಿತ ನೀರಜಾರಮಣ5 ನಾರದರ ನುಡಿ ನಿಜವೆನುತ ಮೂ- ರಾರು ಭಕ್ತಿಯ ತಾಳ್ದ ಮನುವಿನೊ- ಳಾರುಭಟಿಸುತ ಕಾಶ್ಯಪನು ಮದವೇರಿ ನಿಂದಿರಲು ಯಾರು ತಿಳಿಯದ ತೆರದಿ ಕಂಭದಿ ಮೃಗ ರೂಪವನು ಹೆ- ಮ್ಮಾರಿ ದೈತ್ಯನ ತರಿದು ತ್ವತ್ಪದವಿತ್ತೆ ದಾಸನಿಗೆ 6 ಏನು ಶ್ರಮವಿಲ್ಲದಲೆ ಪಿಡಿದು ದ- ಶಾನನನ ತೊಟ್ಟಿಲಿಗೆ ಕಟ್ಟಿ ಪ್ರ- ವೀಣತೆಯ ತೋರಿಸಿದ ವಾಲಿಯ ಪಕ್ಷವನು ತ್ಯಜಿಸಿ ದೀನ ಬಾಂಧವನೆಂಬ ಬಿರುದನು ದಿಟವೆ ನಿಶಿತದ್ರಾಜ್ಯ ಪದವಿಯ ಭಾನುಜನಿಗೊಲಿದಿತ್ತ ಭಕ್ತಜನಾರ್ತಿ ಭಂಜನನೆ 7 ಶಬ್ದಗೋಚರವಾದ ಕಥೆಗಳು ಬದ್ಧವೆಂಬುದು ಪೂರ್ವದನುಭವ ಸಿದ್ಧವಾಗಿಹುದೆನಗೆ ಸಜ್ಜನಲಬ್ಧಪದ ಪದ್ಮ ಬುದ್ಧಿಹೀನತೆಯಿಂದ ನುಡಿದರು ಮಧ್ವವಲ್ಲಭ ನಿನ್ನ ದಾಸನ- ನುದ್ಧರಿಸು ನೀನಲ್ಲದೆನಗಿನ್ನಾರು ಗತಿ ಹರಿಯೆ8 ಒಡೆಯರೆಂಬರನೆಲ್ಯುಕಾಣದೆ ಉಡುವದುಂಬುದಕೇನು ದೊರೆಯದೆ ಗಿಡವ ನಿಲುಕದ ಬಳ್ಳಿಯಂದದಿ ಬಡುವ ಕಷ್ಟವನು ತಡೆಯಲಾರದೆ ತಳಮಳಿಸುತಿರೆ ಪಿಡಿದು ಕರವನು ಕಾಯ್ದೆಯೆನ್ನನು ನುಡಿವದೇನಖಿಳಾಂಡ ನಾಯಕ ನಿನ್ನ ಮಹಿಮೆಯನು 9 ಮಾರಿಯಂದದಿ ಮಧ್ಯದೊಳಗೊ- ಬ್ಯಾರುವೇನೆಂಬಧಮ ಹೂಣನು ತೀರಿಸುವೆನೆಂದೆನ್ನೊಳಿಲ್ಲದ ದೂರ ಸಂಗ್ರಹಿಸಿ ಗಾರಗೊಳಿಸುವದರಿತು ಕಕ್ಷವ ಹಾರಿಸುತ ಸುರವಂದ್ಯ ಮೂರ್ತಿಯ ತೋರಿ ತಂದಿಲ್ಲಿರಿಸಿ ಪೊರೆದವನ್ಯಾರು ಪೇಳ್ದೊರೆಯೆ 10 ಶ್ರೀಶ ನಿನ್ನ ಪದಾಬ್ಜ ಪೊಗಳುವ ದಾಸ ಕೂಟದಿ ಸೇರಿ ಸೇವೆಯ ಬ್ಯಾಸರದೆ ನಡೆಸುತಿರೆ ಮತ್ತೊಬ್ಬಾಸುರನ ತೆರದಿ ದ್ವೇಷದಿಂದಿರೆ ದೂರ ಓಡಿಸಿ ದುರಿತ ಭಯಗಳ ಪರಿಹರಿಸಿದ ಮ- ದೀಶ ನೀನೆಂದನವರತ ನಂಬಿರುವೆ ಶ್ರೀಪತಿಯ 11 ಇಷ್ಟು ಪರಿಯಿಂದೆನ್ನ ರಕ್ಷಿಸು- ತಿಷ್ಟ ಫಲಗಳನೀವ ವೆಂಕಟ ಬೆಟ್ಟದೊಡೆಯನೆ ಬೇಡಿಕೊಂಬುವೆ ಒಂದು ಕೃತ್ಯವನು ಮಾನವ ನುಡಿಯಕಾಡನು ಸುಟ್ಟು ಸೂರೆಯಗೈದು ನಾ ಮನ ಸಿಟ್ಟ ತೆರದಲಿ ತೋರು ಚಿತ್ತವ ಸೃಷ್ಟಿಕರ ಶ್ರೀಶ 12
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ ವಾಸವಿಸೂನು ಪ ಪತಿ ತ್ಯಜನೆ ತಥ ಚರಣಪಾಣಿ ಪರಮಾನಂದಾ ಚರಣಾಯುಧನಾದವಗೆ ಸೋಕಿದಳ ಚರಣದಿ ಪಾವನಗೈಸಿದೆ ದೇವಾ1 ಪತಿ ಗುರು ಪಿತೃ ಪಿತಾಮಹಾ ದೈ ವತ ಗುರೋರ್ಗುರು ಸ್ವಶುರ ಜಾರಾ ಅತಿಶಯ ಭೂತಿರಭೂತಿ ಎಂದು ಸಂ ತತ ಉಪಾಸ್ಯತನಾಗಿ ಮೆರೆವನೆ 2 ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ ಪಂಚ ರೂಪದಿ ಕೊಂಬನಾಡಿಸ್ಥ ಪಂಚಜನ ಪಂಚಮೊಗವೇಶ ತಾಳಿದ ಪಂಚ ಕುಸುಮಸಾರ ಮಧು ವಿದ್ಯಮೂರ್ತಿ 3 ಹೃದಯಾಖ್ಯಪುರ ಪಂಚದ್ವಾರದಲಿ ನೀ ವಿಧಿ ಭವರಿಂದಾರ್ಚನೆ ಗೊಂಬೆ ಪದುಮಾಷ್ಟ ದಳದಲಿ ಪ್ರಹರೇಯ ತಿರುಗುವ ಸುದರುಶನಾಬ್ಜಾದಿ ಅಷ್ಟಬಾಹು ಚನ್ನಾ 4 ಗುಣಪೂರ್ಣ ಐಶ್ವರ್ಯಾನಂತ ಮೋದಾ ಗಾನೆ ತ್ರಾಣ ಕರ್ತೃ ಪ್ರಣವ ತ್ರಿಚರಣಸ್ತಾ ಎಣಿಸುವೆ ಷÀಟುಚತು ತ್ರಿಭಿರೂಪಾತ್ಮಾ5 ಪದ್ದುಮ ಶಾಂತಸಿಂಹ ಅನಿರುದ್ಧ ಪ್ರದ್ಯುಮ್ನ ಸಂಕರುಷಣ ವಾ ಸುದೇವ ನಾರಾಯಣ ರೂಪಗಳಿಂದ ಹೃದ್ಗತನಾಗಿ ಒಪ್ಪುವ ಮಹಾಮಹಿಮಾ 6 ಗೋಕುಲನಾಥ ಗೋವಿಂದ ತಿರುಮಲ ಕಾಕೋದರಾದ್ರಿನಿಲಯ ಸ್ವಾಮಿ ಸಿರಿ ವಿಜಯವಿಠ್ಠಲ ಪ ರಾಕು ಈ ರಥದೊಳು ಕುಳ್ಳಿ ವೇಗಸಾಗಿ7
--------------
ವಿಜಯದಾಸ
ಶ್ರೀನಿವಾಸದೇವರು ಬಾರಯ್ಯ ವೇಂಕಟ ಮನ್ಮನಕೆ ತ್ವರಿತದಿ ನಿಜನಾರೀಸಹಿತದಿ ಈ ಸಮಯಕೆ ಶರಣೆಂಬೆನು ಪದಯುಗಕೆ ಪ ಸಾರಿದ ನಿಜಶÀರಣನ ಈ ಭವಭÀವ ಘೋರಭಯವ ಪರಿಹÀರಿಸುವುದಕ್ಕೆಅ.ಪ ವ್ಯಕ್ತಾವ್ಯಕ್ತ ತ್ರಿಜಗದ್ವ್ಯಾಪ್ತಾ ದೋಷ ನಿರ್ಲಿಪ್ತಾ ಮುಕ್ತಾ ಮುಕ್ತ ಜೀವರ ಗಣದಾಪ್ತಾ ನೀ ಸರ್ವತ್ರದಿ ವ್ಯಾಪ್ತ ಭಕ್ತನ ಹೃದಯದಿ ವ್ಯಕ್ತನಾಗಿ ನಿಜ ಮುಕ್ತಿಪಥವ ತೋರೊ ಭಕ್ತಿಯನಿತ್ತು 1 ಕವಿಜನಗೇಯಾ ಆನಂದದಾಯಕ ನಿರ್ಜಿತಮಾಯಾ ಕಾಯಯ್ಯಾ ಜೀಯಾ ಆನತಜನಸನ್ಮಾನದ ಮನ್ಮನ ವನಜದಿ ನೀ ಸನ್ನಿಹಿತಾಗುವುದಕೆ 2 ಸೋಮಾಸುರನಾಮಕ ದೈತ್ಯನ ಕೊಂದೂ ವೇದವ ತಂದೂ ಕೂರ್ಮ ಕಿಟ ನರಹರಿ ರೂಪದಿ ನಿಂದೂ ವಾಮನನೆಂದೂ ರಾಮ ಭಾರ್ಗವ ಯದುಕುಲಸಾಗರ - ಸೋಮ ಬೌದ್ಧ ಕಲ್ಕಿ ಪ್ರೇಮದಿ ಮನಕೆ 3 ನಿಗಮಗೋಚರ ನಿತ್ಯಾನಂದಾ ಬಗೆಬಗೆ ಜನ್ಮವನೈದಿದೆ ಮುಕುಂದಾ ಮುಗಿವೆನೊ ಕರದಿಂದಾ ಅಗಣಿತ ಗುಣನಿಧಿ ಸುಗಮದಿ ಭವದ ಬಗೆಯನು ತಿಳಿಸೊ ನಗೆ ಮೊಗದಿ ಬಾ 4 ವಿಧಿಶಂಭುವಂದಿತ ಪದಯುಗಕಮಲಾ ನಿತ್ಯ ನಿರ್ಮಲಾ ಆಧಿಭೂತಾಧ್ಯಾತ್ಮಿಕತಾಪದ ಶಮಲಾ ನೀ ಮಾಡೆನ್ನನು ವಿಮಲಾ ಸದಯ ಸುಧಾಕರ ಹೃದಯದಿ ತವಪದ ಪದುಮ ಭಜಿಪೆ ನೀ ಮುದದಲಿ ಮನಕೆ5 ಸಾಸಿರನಾಮ ನತಜನಪ್ರೇಮಾ ಪೊರೆಯೋ ಶ್ರೀ ರಾಮಾ ಆಶೀ ಪೂರ್ತಿಸಿ ಮಾಡೆನ್ನಲಿ ಪ್ರೇಮಾ ಸುರಸಾರ್ವಭೌಮಾ ವಾಸಮಾಡಿ ಅಭಿಲಾಷೆಯ ಪೂರ್ತಿಸೊ ವಾಸುದೇವ ವಾರಾಸಿಜರಮಣಾ 6 ಶರಣಾಗತಜನಪರಿಪಾಲಾ ಕರುಣಾಲವಾಲಾ ಕರುಣಿಸೆನ್ನನು ಹೇ ಶಿರಿಲೋಲಾ ನಮಿತಜನಸುgಸಾಲ ಅಜ ಭವ ಸುರ ನಿಕರಾರ್ಚಿತಪದ ಸರಸಿಜಯುತ ನೀ ಸುರವರದೇವಾ 7 ಪನ್ನಗಗಿರಿ ನಿಜಕೃತವಾಸಾ ಪೊರೆ ಎನ್ನನು ಶ್ರೀಶಾ ಬಿನ್ನಪ ಮಾಳ್ಪೆನು ಹೇ ಶ್ರೀನಿವಾಸಾ ಕೊಡು ಎನಗೆ ಲೇಸಾ ಎನ್ನ ಸಲಹೋದಕೆ ಅನ್ಯರ ಕಾಣೆನೊ ಮನ್ನಿಸು ನೀನಾಪನ್ನಜನಸುಖದಾ 8 ಲಕ್ಷ್ಮೀನಾಯಕ ವರಪಕ್ಷಿಗಮನಾ ಅಕ್ಷಯ ಫಲವನ್ನ ರಕ್ಷಿಸಿ ಕಾಯ್ವದೋ ನೀ ಎನ್ನಾ ಲಕ್ಷ್ಮಣನಣ್ಣಾ ಕ - ಟಾಕ್ಷದಿ ಎನ್ನ ವೀಕ್ಷಿಸು ಕ್ಷಣ ಕ್ಷಣ..... 9 ಧರ್ಮಾರ್ಥಕಾಮಮೋಕ್ಷವ ನಾನೊಲ್ಲೇ ಕರ್ಮದ ಸುಳಿಯಲ್ಲೇ ಮರ್ಮವ ತಿಳಿಯದೆ ಬೀಳುವೆ ನಾನಲ್ಲೇ ನಿರ್ಮಿಸದಿರು ಎನ್ನಲ್ಲೇ ಕರ್ಮಭವದ ಮಹÀ ಮರ್ಮವ ತಿಳಿಸೀ ದುರ್ಮನ ಬಿಡಿಸೆಲೊ ಬೊಮ್ಮನ ತಾತಾ 10 ದಿಟ್ಟ ಗುರು ಜಗನ್ನಾಥವಿಠಲ ನಾನನಾಥಾ ಥಟ್ಟಾನೆ ನೀ ಎನ್ನನು ಕಾಯೋ ಶ್ರೀನಾಥಾ ಇಷ್ಟೇ ಎನಮನದರ್ಥ ಸೃಷ್ಟಿಯೊಳಗೆ ಬಹು ಭ್ರಷ್ಟರಸ್ತುತಿಸಿ ನಿ - ಕೃಷ್ಟನಾದೇನೋ ಶ್ರೇಷ್ಠ ಮೂರುತೀ 11
--------------
ಗುರುಜಗನ್ನಾಥದಾಸರು
ಶ್ರೀನಿವಾಸಾದ್ರಿ ವಿಠಲ | ನೀನೆ ಪೊರೆ ಇವಳಾ ಪ ಗಾನಲೋಲನೆ ಕೃಷ್ಣ | ದೀನಮಂದಾರಅ.ಪ. ಕಲುಷ ಕರ್ಮದಿನೊಂದು ಇಳೆಯೊಳಗೆ ಮಧ್ವಮತಜಲಧಿಯಲ್ಲುದಿಸಿಹಳೊ | ಜಲಜಾಕ್ಷ ಹರಿಯೇಒಲವಿನಿಂದಿವಳನ್ನು | ಸಲಹಲ್ಕೆ ಪ್ರಾರ್ಥಿಸುವೆಕಲಿಮಲಾಪಹ ಕೃಷ್ಣ | ಚೆಲುವ ಮಾರುತಿಯೇ 1 ಮೂರ್ತಿ | ಪಾರ್ಥ ಸಾರಥಿಯೇ 2 ಪತಿ ಸೇವೆಯಲಿ | ಎರಗಲೀಕೆಯ ಮನಸುದುರಿತ ದುಷ್ಕøತ ಹರವು | ಗುರು ಸೇವೆ ಎಂದೆಂಬಅರಿವಿತ್ತು ಈಕೆಯನು | ಸಾಧನದಲಿರಿಸೋ 3 ಜಿಹ್ವೆ | ಶ್ರೀ ಪುರುಷೋತ್ತಮಾನಿರುಪಾದಿಕ ಹಿರಿಯರ | ಚರಣ ಸೇವೆಗೆ ಮನವುತ್ವರೆಗೊಳ್ಳುವಂತೆಸಗೂ | ಶಿರಿ ವೆಂಕಟೇಶಾ 4 ಕರಿವರದ ಧ್ರುವವರದ | ತರಳೆ ದ್ರೌಪದಿವರದಕರುಣಾಳು ನೀನೆಂದು | ಮೊರೆ ಬಿದ್ದು ಪೇಳ್ವೆಕರುಣೆಯನು ಪೊರೆ ಎಂಬ | ಬಿನ್ನಪವ ಸಲಿಸಯ್ಯಶಿರಿಯಿಂದ ವಂದ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀನುತ ಕರವರ ಗೀತಾವಾದಿ ಪರಮ ದಯಾಳು ಗುರೋ ಪ ಜಲಚರರೂಪದಿ ವೇದವ ತಂದಿರೆ ಮತ್ಸ್ಯನೆನಿಸಿದೆಯೋ ಬಲವಂತನೆನಿಸಿಯದ್ರಿಯ ನೆತ್ತಿದಿ ಬಲುಘನ ಕಚ್ಛಪಾದಿ ನೆಲಸಿದ ಭೂಗೋಲವನಾಸದಿ ಭಲೆ ವರಾಹವತಾರಿ ಸ್ಮರಿಸಲು ತಕ್ಷಣದಿ 1 ವಟುವಾಗಿ ಬಲಿಯನ್ನಿಳಿಗೊತ್ತೀದಿ ದಟಹರ ವಾಮನನಹುದೋ ಹಟದಿ ಮಾತೆಯ ಶಿರವಾರಿಸಿದಿ ಭಟ ಪರಶುರಾಮ ನೀನು ಕುಟಿಲ ದುಶ್ಶಾಸನ ಧ್ವಂಸಗೈದಿ ಪಟು ರಾಮನೆನಿಸಿದೆಯೋ ಶಠರ ಸಂಹರಿಲು ಶ್ರೀ ಕೃಷ್ಣನೆನಿಸಿದಿ ನಿಟ್ಟಿಪುದೀಗೆನ್ನ ಕೃಪಾನಿಧಿ 2 ತರುಣಿ ವೃಂದದ ವ್ರತವನ್ನಳಿದಿ ಪರಮ ಬೌದ್ಧನಹುದೋ ಕರದ ಖಡ್ಗದಿ ದನುಜರನಳಿಸಿ ವರ ಕಲ್ಕಿರೂಪ ನೀನು ಪರಬ್ರಹ್ಮ ಪುಟ್ಟುವಿ ಜವದಿ ಪೊರೆಯುವಿ ನುತಿಪರನಾ ಕಾರುಣ್ಯನಿಧಿ 3
--------------
ನರಸಿಂಹವಿಠಲರು
ಶ್ರೀಪತಿಯ ನೈವೇದ್ಯ ಕೊಡುವದು ಧೂಪದಾಂತರ ಭೂಮಿಶೋಧನ ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ಸೂಪ ಅನ್ನವು ಅಗ್ನಿಕೋಣದಿ ಆ ಪರಮ ಅನ್ನವನು ಈಶಾ ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ 1 ವಾಯುದಿಶದಲಿ ಉಪಸುಭೋಜ್ಯವು ವಾಯಸಾನ್ನದ ಮಧ್ಯ ಘೃತಸಂ ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ಬಾಯಿಯಿಂದಲಿ ದ್ವಾದಶ ಸ್ತುತಿ ಗಾಯನದಿ ನುಡಿಯುತಲಿ ಈ ಕಡೆ ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ 2 ಓದನಕ ಅಭಿಮಾನಿ ಶಶಿಪರ ಮೋದನಕ ಅಭಿಮಾನಿ ಭಾರತಿ ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ಸ್ವಾದುಕ್ಷೀರಕ ವಾಣಿ ಮಂಡಿಗಿ ಲೀ ದ್ರುಹಿಣನವನೀತ ಪವನಾ ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ 3 ಶಾಕದಲಿ ಶೇಷಾಮ್ಲ ಗಿರಿಜಾ ನೇಕನಾಮ್ಲದಿ ರುದ್ರಸಿತದಲಿ ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ಈ ಕಟು ಪದಾರ್ಥದಲಿ ಯಮ ಬಾ ಹ್ಲೀಕ ತಂತುಭದಲ್ಲಿ ಮನ್ಮಥ ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ 4 ಕೂಷುಮಾಂಡದ ಸಂಡಿಗಿಲಿ ಕುಲ ಮಾಷದಲಿ ದಕ್ಷ ಪ್ರಜಾಪತಿ ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ಈ ಸುಫಲ ಷಡ್ರಸದಿ ಪ್ರಾಣ ವಿ ಶೇಷ ತಾಂಬೂಲದಲಿ ಗಂಗಾ ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ 5 ಸಕಲ ಭಕ್ಷ್ಯಗಳಲ್ಲಿ ಉದಕದಿ ವಿಶ್ವ ಮೂರುತಿ ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ ನಖ ಚತು ಪದಾರ್ಥದಲಿ ಆ ಸ ಮ್ಯಕು ಚತುರವಿಂಶತಿ ಅಭಿಮಾ ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ6 ಕ್ಷೀರ ದÀಧಿ ಕರ್ಪೂರ ಸಾಕ ರ್ಜೀರ ಪನಸ ಕಪಿಥ್ಥ ಪಣ್ಕದ ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ಪೂರ ಶಂಖದಿ ಉದಕ ಓಂ ನಮೊ ನಾರೆಯಣಾ ಅಪ್ಟಾಕ್ಷರವು ತನ ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ7 ಸೌರಭೀ ಮಂತ್ರದಲಿ ಪ್ರೇಕ್ಷಿಸಿ ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ ಪೂರ್ವ ಆಪೋಶನವು ಹೇಳಿ ಅ ಪೂರ್ವ ನೈವೇದ್ಯವು ಸಮರ್ಪಿಸಿ ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ 8 ಪೂಗ ಅರ್ಪಿಸಿದಂತರದಿ ಅತಿ ಬ್ಯಾಗದಲಿ ಲಕ್ಷ್ಯಾದಿ ನೈವೇ ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ಸಾಗಿಸೀ ಶ್ರೀ ಹರಿಯ ಸಂಪುಟ ದಾಗ ನಿಲ್ಲಿಸಿ ವೈಶ್ವದೇವವು ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ9
--------------
ವಿಜಯದಾಸ
ಶ್ರೀಮಾಧವ ಪಾದವ ಸಂತತ ಮನದಿ ನೇಮದಿ ಧ್ಯಾನಿಸು ನೀ ಪ ಪ್ರೇಮಮೂರ್ತಿಯನೆನೆವರಾರಾದರೇನಯ್ಯ ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ ಮದಗಜವನುಸರದಿ ಮೊಸಲೆಯನು ತಾನು ಅಧಿಕ ಕಷ್ಟವ ಗೊಳಸೆ ಪದುಮನಾಭ ನೀನೆ ಪೊರೆಯಬೇಕೆನ್ನಲು ಮುದದಿಂದಲೊದಗುತ್ತ ಸೌಖ್ಯವ ತೋರಿದೆ 1 ತರಳನಾದ ಧ್ರುವನು ಪ್ರಹ್ಲಾದನು ಶರಣೆಂದು ಮೊರೆವೋಗಲು ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ 2 ಮಾನಿನಿ ದ್ರೌಪದಿಯು ತನ್ನಯ ಘನ ಮಾನಭಂಗದ ಕಾಲದಿ ದೀನರಕ್ಷಕ ಕೃಷ್ಣ ದಾನವಾರಿಯೆನೆ ಸಾನುರಾಗದಿಂದಲಕ್ಷಯ ವರವಿತ್ತ3 ಅಜಮಿಳ ಬಹುಪಾಪದಿ ಮೆರೆಯುತಲಿದ್ದು ನಿಜಸುಖ ಮರೆತಂತ್ಯ ಕಾಲದಿ ಬಜಬಜಿಸುತಮಗನನು ಹೆಸರೆತ್ತಲು ಭಜನೆಯಾಯ್ತು ನಾರಾಯಣ ನಾಮವು 4 ವಿದುರನುಧ್ದವನರ್ಜುನ ಕುಚೇಲನು ಮೊದಲಾದ ಭಕ್ತರೆಲ್ಲ ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ ಪದವಿಯಿತ್ತು ಕಾಯ್ದ ಜಾಜಿಯೀಶನ5
--------------
ಶಾಮಶರ್ಮರು
ಶ್ರೀರಂಗಪುರದೊಳ್ ಮೆರೆವ ಗಂಗಾಪಿತಗೆ ಮಂಗಳಂ ಶ್ರೀರಂಗನಾಯಕಿ ಮನೊಹರಂಗೆ ಮಂಗಳಂ ಪ. ವರದೆಕಾವೇರಿ ಸುತ್ತುವರಿಸಿ ಮೆರೆಯಲು ಉರಗತಲ್ಪದಿ ಶಿರಕೆ ಬಲದಕರವೆÀ ದಿಂಬಿರಲ್1 ಚರಣತಲದಿ ಮೆರೆಯೆ ಸಿರಿಯು ಧರೆಯು ಕುಳ್ಳಿರೆ ಪರಮಭಾಗವತರು ಮುಂದೆ ನೆರೆದು ನಿಂದಿರೆ 2 ಇಕ್ಕೆಲದಿ ಮೆರೆವ ಗಂಗಾ ಗೌರಿ ಅಕ್ಕತಂಗಿಯರ್ ನಕ್ಕುನಲಿವನೊಂದೆಡೆ ಮುಕ್ಕಣ್ಣ ಸನಿಯದಿ 3 ಆರ್ತಜನರ ಪೊರೆವನೆಂಬ ಕೀರ್ತಿಗೊಂಡಿಹ ಕರ್ತೃನೃಹರಿ ತನ್ನರಸಿಯೊಡನೆ ಇತ್ತ ಮೆರೆಯುವ 4 ಉಭಯಕಾವೇರಿ ಮಧ್ಯದಿ ಪ್ರಭುವು ತಾನೆನೆ ವಿಭವದಿಂದ ಮೆರೆವನೀಪರಿ ಪ್ರಭೆಯ ಬೀರುತ 5 ಶರಣಜನರಿಗೆರೆಯ ಶೇಷಗಿರಿಯ ವರದನ ಕರುಣ ಶರಧಿರಂಗಪುರದ ವರದನೆಂಬೆನೆ 6
--------------
ನಂಜನಗೂಡು ತಿರುಮಲಾಂಬಾ
ಶ್ರೀರಮಣಿ ದಯದೋರು ಬ್ರಹ್ಮ ಸಮೀರಜನ ನೀ ಬೇಗ ಮೂರುತಾಪದ ದೂರಗೈಸಿ ಸರೋರುಹಾಕ್ಷನ ಸಾರಗೈಸುತ ಪ. ಶ್ರೀನಿವಾಸನ ಸರ್ವಸೇವೆಯ ತಾನೆ ಮಾಳ್ಪೆನೆಂದು ಭಾನುಕೋಟಿ ಸಮಾನಭಾಸ ವಿಮಾನವಾಗಿ ನಿಂದು ಮಹಾನಭೀಯ ಸಮಸ್ತ ವಸ್ತು ವಿ- ಧಾನರೂಪಿಣಿಯಾಗಿ ಭಕ್ತಜನಾನುವರ್ತಿಯ ಭಾವ ಗ್ರಹಿಸಿದ 1 ಹಾರಕಟಕ ಕಿರೀಟವರ ಕೇಯೂರ ಬಾಹುಪುರಿಯು ಚಾರುತರ ಗಂಭೀರರವ ಶೃಂಗಾರದ ನೂಪುರವ ಮಾರನೈಯ್ಯನ ಮುದ್ದು ಹಸ್ತದಿ ವಾನೈಜಾರಿಗದಾಬ್ಜರೂಪದಿ ಸೇರಿ ಶೋಭಿಪ ಶಕ್ತಿ ನಿನ್ನ ಪದಾರವಿಂದವ ನಂಬಿ ನಮಿಪೆನು 2 ಕುಂದ ನೋಡದಿಂದೂ ಹರಿ ಚಂದನಾತ್ಮಕ ವೆಂಕಟೇಶನು ಬಂದಿಲ್ಲಿಹನೆಂದು ಮುನಿಜನವೆಂದ ಮಹಿಮೆಯ ನಿಂದು ತೋರುತ ಸನ್ನಿಹಿತಳಾಗೆಂದು ಚರಣದ್ವಂದ್ವ ಪೊಗಳುವೆ 3 ,
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಶ್ರೀರಾಮ ಶ್ರೀರಾಮ ಶ್ರೀರಾಮ ಶ್ರೀರಾಮ ಸರಸಿಜಾಸನ ಪುರಹರನನ್ನು ಮೊದಲು ನೀ ಶರೀರದಿ ಪಡೆದೆ ಸರ್ವೇಶ | ಕೇಶವ ಪರಮಪುರುಷನೆ ಕೈಪಿಡಿಯೊ1 ಅರಿವಿಗಾಶ್ರಯನೀನೆ ಸರ್ವಶಬ್ದವಾಚ್ಯ ದುರಿತವಿದೂರ ಪರಮಾತ್ಮ | ನಾರಾಯಣ ಕರುಣವಾರಿಧಿಯೆ ಕೈಪಿಡಿಯೊ 2 ಮಾಧವ ರಾಯನೀ ಒಲಿದು ಕೈಪಿಡಿಯೊ 3 ಸೂರ್ಯ ನೀವೊಲಿದೆಲ್ಲರ ಸಲಹುವೆ | ಎನ್ನಯ್ಯ ಗೋವಿಂದ ನೀನೆ ಕೈಪಿಡಿಯೊ 4 ಆಪತ್ಭಾಂಧವನೇ ಕೈಪಿಡಿಯೊ 5 ಕಲುಷ ಪನ್ನಗಶಯನ ಕೈಪಿಡಿಯೊ 6 ಶಕ್ರಗೋಸುಗ ನೀನೆ ಶುಕ್ರ ಶಿಷ್ಯನ ಬೇಡಿ ವಿಕ್ರಮದಿಂ ಭೂಯಳದೆ | ಅದ್ಭುತತ್ರಿ ವಿಕ್ರಮ ಮೂರುತಿಯೆ ಕೈಪಿಡಿಯೊ 7 ಆಮಹಾವಟುರೂಪದಿಂದಲದಿತಿಯೊಳು ವಾಮನ ಮೂರ್ತಿಯೆ ಕೈಪಿಡಿಯೊ 8 ತ್ವರಿತದಿ ಎನ್ನ ಕೈಪಿಡಿಯೊ 9 ಹೃಷಿಕೇಶ ನಿನ್ನ ಕಾಣರೊ | ಪಾಮರರು ಋಷಿಗಣವಂದ್ಯ ಕೈಪಿಡಿಯೊ 10 ಶೋಭನಚರಿತಾಮರವಿನುತ | ನೆ ಪದ್ಮ ನಾಭನೆ ಒಲಿದು ಕೈಪಿಡಿಯೊ 11 ನೀ ದಯದಲಿ ಯಶೋದಾದೇವಿಯಿಂದಲಿ ಬೋಧರೂಪನೆ ಕಟ್ಟಿಸಿಕೊಂಡೆ | ಸ್ವಾಮಿ ದಾಮೋದರ ಎನಗೊಲಿದು ಕೈಪಿಡಿಯೊ 12 ಹರನಲ್ಲಿ ನಿಂತು ಸಂಹರಿಸುವೆ ಜಗವನ್ನು ಪರಮ ನಿಷ್ಕರುಣದಲಿ | ನೀ ಸಂ ಕರ್ಷಣ ಮೂರುತಿಯೆ ಕೈಪಿಡಿಯೊ 13 ಭಾಸುರಗಾತ್ರ ದೇವಾಸುರ ಮನುಜರೆಂ- ಬೀಸಮುದಾಯದೊಳಗಿರ್ಪೆ | ಸರ್ವಾತ್ಮ ವಾಸುದೇವಾಖ್ಯ ಕೈಪಿಡಿಯೊ 14 ಸೂರಿ ಜನಾಶ್ರಯ ವಿದ್ವದ್ಭೀರೀಡ್ಯಾ ಸುಗುಣಾಢ್ಯ | ನೀನೆ ಶ್ರೀ ಪ್ರದ್ಯುಮ್ನ ಒಲಿದು ಕೈಪಿಡಿಯೊ 15 ಮುನಿಜನವಂದಿತ ಅನಿಮಿಷಸನ್ನುತ ಖಗವಾಹ | ಗತ ಮೋಹ ಅನಿರುದ್ಧ ಎನ್ನ ಕೈಪಿಡಿಯೊ 16 ಸರಸಿಜಭವ ಮೊದಲು ತೃಣಪರಿಯಂತವು ಪುರುಷೋತ್ತಮ ನೀನೆ ಕೈಪಿಡಿಯೊ 17 ಮೋಕ್ಷದಾಯಕ ಸರ್ವಾಧ್ಯಕ್ಷ ಜೀವರಿಗೆಲ್ಲ ಸಾಕ್ಷಿಯಾಗಿರುವೆಯೊ ಹೊರ ಒಳಗೆ | ಸ್ವಾಮಿ ಅ- ಧೋಕ್ಷಜ ನೀನೆ ಕೈಪಿಡಿಯೊ 18 ಪರಮಸತ್ಪುರುಷನಾಗಿಹ ಪ್ರಹ್ಲಾದನ ನರಸಿಂಹ ಮೂರುತಿಯೆ ಕೈಪಿಡಿಯೊ19 ಇಚ್ಛಾಮಾತ್ರದಿ ಸೃಷ್ಟಿ ಸ್ಥಿತಿಲಯಗೈಯ್ಯುವೆ ನಿಚ್ಛಲನಾಗಿ ಜಗವನ್ನು | ನುಂಗುವೆ ಅಚ್ಯುತ ಎನ್ನ ಕೈಪಿಡಿಯೊ 20 ನಿರ್ದಯನಾಗಿ ಕೊಲ್ಲುವೆ | ನೀನೆ ಜ- ನಾರ್ಧನಸ್ವಾಮಿ ಕೈಪಿಡಿಯೊ 21 ವಿಧಿ ಚಂದ್ರಶೇಖರ ಮುಖ್ಯ ಸಂದೋಹ ನಿನ್ನ ಪೊಗಳುವರು | ಅಯ್ಯ ಉ- ಪೇಂದ್ರ ಮೂರುತಿಯೆ ಕೈಪಿಡಿಯೊ 22 ಕರುಣಸಾಗರ ನೀನೆ ಶರಣ ಜನೋದ್ಧಾರ ಸಿರಿದೇವಿಯರಸ ಸರ್ವೇಶ | ಸರ್ವಗ ಸ್ವಾಮಿ ಹರಿಯೆ ನೀ ಒಲಿದು ಕೈಪಿಡಿಯೊ 23 ಕಷ್ಟ ಎಂಬುವ ಬಲು ಉಷ್ಣ ಜಲದಿ ಬಿದ್ದು ವಿಷ್ಣುವೆ ನಾನು ಮೊರೆಯಿಡುವೆ | ಕಾದುಕೊ ಕೃಷ್ಣ ನೀ ಒಲಿದು ಕೈಪಿಡಿಯೊ 24 ವರಬಿಂಬಮೂರ್ತಿ ನೀನಯ್ಯಾ | ಸ್ವಾಮಿ ಶ್ರೀ ಗುರುರಾಮವಿಠ್ಠಲಾನತಪಾಲ 25
--------------
ಗುರುರಾಮವಿಠಲ