ಒಟ್ಟು 40875 ಕಡೆಗಳಲ್ಲಿ , 138 ದಾಸರು , 10069 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವನಜಾಕ್ಷಿ ಕೇಳೆನ್ನ ಮನದನ್ನನಂದವನು ಮನನಲಿದು ಪೇಳುವೆನು ಮಹಿಮೆಯನ್ನು ತುಚ್ಛಮಾಗಿರುತಿರ್ಪ ಕಚ್ಛಪಾಕಾರದೊಳು ಇಚ್ಛೆಗೊಂಡವನಿವನೆ ಮಚ್ಚನಯನೆ ಹೆಡ್ಡತನದಲಿ ಬಂದು ದೊಡ್ಡ ಮಡುವೊಳು ನಿಂದು ಗುಡ್ಡವನು ಪೊತ್ತಿಹನೆ ದಡ್ಡನಿವನೆ ಸುರುಚಿರಾಂಗವನಿಂತು ಮರೆಗೈದು ಮುಸುಕಿನಿಂ ಪರಮಸಂಭ್ರಮವಾಂತು ಮೆರೆಯುತಿಹನೆ ಕ್ಷೋಣಿಯೊಳಗಿಂತಹರ ಕಾಣೆನಿನ್ನು ಪ್ರಾಣೇಶನಾಗಿನಾಂ ಪಡೆದೆನಿವನಂ ಏಣಾಕ್ಷಿ ನಡೆದುದಿನ್ನಾಡಲೇನು ಜಾಣ ಶೇಷಾದ್ರೀಶನಾಣ್ಮನಹನು
--------------
ನಂಜನಗೂಡು ತಿರುಮಲಾಂಬಾ
ವನಭೋಜನ ಊರ್ವಶಿ: ಇದೀಗ ಮನವು ಇಂದಿರಾಕ್ಷಿ ಇದೀಗ ಮನವುಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವುಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ4 ಊರ್ವಶಿ : ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ5
--------------
ತುಪಾಕಿ ವೆಂಕಟರಮಣಾಚಾರ್ಯ
ವನಭೋಜನ ಊರ್ವಶಿ:ಇದೀಗ ಮನವು ಇಂದಿರಾಕ್ಷಿ ಇದೀಗ ಮನವು ಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ 1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ 2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ 3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು 5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವು ಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ 1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ 2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ 3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ 4 ಊರ್ವಶಿ :ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತ ಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ 2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ 3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ 4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ 5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ 6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ 7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆ ಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ 2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ 3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ 4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ 5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ 1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ 2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು 3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂ ಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ 1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ 2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ 2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ 3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು 4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ 5 ಭೋಗವಿನ್ನಂತೆಯಿಲ್ಲಿ ರೋಗ ದುರಿತವೆಲ್ಲ ನೀಗಿತು ಎನುತನು- ರಾಗದಿ ಸವಿದುಂಡು ತೇಗಿದರೆಲ್ಲರು 6 ಪುಣ್ಯ-ಫಲದಿಂದ ದೊರಕಿತಲ್ಲೇ ನಲವಿಂದಾನತರು ಕೈ ತೊಳೆದ ನೀರಿನೊಳಿದ್ದ ಜಲಜಂತು ಸಹವು ನಿರ್ಮಲಿನವಾದವು ಕಾಣೆ 7 ಪಾವನವಾದರು ಹಿಂಡು ಉದ್ದಂಡ ಮೃಗಗಳೆಲ್ಲ &ಟಿb
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವನಿತೆ ನೀನು ಕರೆದು ತಾರೆ ರಾಮೇಶನುಮುನಿಸಿದನೆ ನೀರೆ ಪ ಹಂಬಲಿಸುತಿದೆ ಮನ ಹೇಗೆ ನಾ ತಾಳಲೆರಂಬಿಸಿ ಪೊರೆದವನಕುಂಭ ಕುಚದ ಮೇಲೆ ಕೂರುಗುರಿನ ಬರೆಯಂಬ ಶಶಿಯ ನೇಮಗಾರನ 1 ಎನ್ನ ಮೇಲಿನಿತು ತಪ್ಪನಾದರೆ ತೋರಿಭಿನ್ನವಿಸುವುದು ಆಕನ್ನೆಯೋರ್ವಳ ಕೂಡುತಮುನ್ನಿನ ಲೇಸನು ತೋರದೆ ಎನ್ನ ಮರೆತ2 ಧರೆಯೋಳತ್ಯಧಿಕವೆಂದು ಕೆಳದಿಪುರದರಸುತನದಲೆ ನಿಂದುವರದನದಿಯ ತೀರವಾಸ ಶ್ರೀ ರಾಮೇಶನೆರದುಳುವಿದ ಲೇಸ ನಟನೆಯಿಂದ ಮಹೇಶ 3
--------------
ಕೆಳದಿ ವೆಂಕಣ್ಣ ಕವಿ
ವನಿತೆಯರ ಆರತಿಕಂ||ಸಿರಿಧರಣಿಯರೊಡೆವೆರಸಿಯೆತಿರುಪತಿಯಧಿನಾಥನೊಲಿದು ಶಯ್ಯಾಸನದೊಳ್ುರುತಿರೆ ಸತಿಯರು ಹರುಷದಿಪರಿಪರಿಯಾರತಿಯನೆತ್ತಿ ನಡೆದರು ಮುದದಿಂಆವ ಜನ್ಮದ ಪುಣ್ಯ ಫಲಿಸಿತು ನಮಗೆದೇವಾಧಿದೇವ ಬಂದನು ನಮ್ಮ ಮನೆಗೆ ಪನೆನೆಯಲು ಮನದೊಳು ನೆಲೆಗೊಂಡನಮ್ಮ ಸನಿಯಕೆ ಕರೆದರೆ ುದಿರಾದನಮ್ಮಮನದ ಮಧ್ಯಕೆ ಮತ್ತೆ ಬರುವ ಕಾಣಮ್ಮವನಿತೆಯರಾರತಿಯ ತಂದೆತ್ತಿರಮ್ಮಾ 1 ಪಾದವ ತೊಳೆದು ಪನ್ನೀರಿಂದ ನಾನುಆದರದಿಂ ಹಸ್ತಕಿತ್ತು ಹಸ್ತವನುಪಾದಾವಧಾನವ ಪೇಳಲೈದಿದನುಮೋದದಿಂದಾರತಿಯಾ ತಂದೆತ್ತಿರಮ್ಮಾ 2 ತಿರುಪತಿುಂದ ಭಕ್ತರ ಪಾಲಿಸಲೆಂದುವರದ ವೆಂಕಟರಾಯ ತಾ ಬಂದನಿಂದುಗುರುವಾಸುದೇವಾರ್ಯನಾದನೀ ಬಂಧುತರುಣಿಯರಾರತಿಯ ತಂದೆತ್ತಿರಮ್ಮಾ 3ಓಂ ಯುಧ್ಠಿರಪ್ರತಿಷ್ಠಾತ್ರೇ ನಮಃ
--------------
ತಿಮ್ಮಪ್ಪದಾಸರು
ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು - ಈಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು ಪ ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು - ಬಹುಕೋಪಿಗಳಿದ್ದಲ್ಲಿ ಅನುಭವಗೋಷ್ಠಿಯ ಮಾಡಬಾರದು1 ಅಡಿ ಸತ್ತ ಮಡಕೆಗೆ ಜೋಡಿಸಿ ಒಲೆಗುಂಡು ಹೂಡಬಾರದು - ಬಹುಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು2 ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು - ತಾಪರರನು ಬೈದು ಪಾತಕಕೆ ಮುನ್ನೊಳಗಾಗಬಾರದು 3 ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು - ಬಾ-ಯ್ಬಡಿಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು 4 ಮುಂದೆ ಭಲಾ ಎಂದು ಹಿಂದೆ ನಿಂದಿಪರನ್ನು ಕೂಡಬಾರದು - ನಮ್ಮತಂದೆ ಬಾಡದಾದಿಕೇಶವನ ಸ್ಮರಣೆಯ ಬಿಡಬಾರದು5
--------------
ಕನಕದಾಸ
ವರಗಡದಿನ್ನೀಶೇಷ ವಿಠಲ ಪೊರೆ ಇವನ ಪ ನಿರುತ ತವ ಚರಿತೆಗಳ | ಸ್ಮರಿಸುತ್ತ ಭಕ್ತಿಯಲಿಮರುತಾಂತರಾತ್ಮ ತವ | ಚರಣಕರ್ಪಿಪನ ಅ.ಪ. ಭವ | ಬಂಧದೊಳು ಸಿಲ್ಕಿ ಬಹುನೊಂದವಗೆ ಕರುಣದಲಿ | ಕುಂದನೆಣೆಸದಲೇಮಂದ ಹಾಸವ ಬೀರಿ | ಸಂಧಿಸೋ ಸಂತೋಷಇಂದಿರಾರಾಧ್ಯ ಪದ | ಮಂದರೋದ್ಧಾರೀ 1 ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸಿಹನಿವನುಮತ್ತೆ ದಾಸರ ಕರುಣ | ಪಾತ್ರನಿರುವಾಅರ್ಥಿಯಲಿ ದಾಸತ್ವ | ಪ್ರಾರ್ಥಿಸುತ್ತಿಹಗೆ ನಾ-ನಿತ್ತಿಹೆನೊ ಅಂಕಿತವ | ಸುಪ್ತೀಶನಾಜ್ಞಾ2 ಮೋದ ತೀರ್ಥರ ತತ್ವ | ವಾದಾನುವರ್ತಿ ಇವಭೋಧಿಸೀ ಪರತಮವ | ಭೇದ ಪಂಚಕನಆದರದಿ ಕೈ ಪಿಡಿದು | ಉದ್ಧರಿಸ ಬೇಕೆಂದುವೇದ ವೇದ್ಯನೆ ನಿನ್ನ | ಪ್ರಾರ್ಥಿಸುವೆ ಹರಿಯೇ 3 ಶ್ರವಣ ಮನಕಾನಂದ | ಭುವನ ಪಾವನವೆನಿಪತವಮಹಿಮೆ ಪೊಗಳಲ್ಕೆ | ಕವನ ಶಕ್ತಿಯನೂನೀವೊಲಿದು ಅಭಿವೃದ್ಧಿ | ಗೈವುದಿವನಲಿಯೆಂದುಪವನಾಂತರಾತ್ಮ ಬಿ | ನ್ನವಿಪೆನೋ ದೇವಾ4 ಭಾವಕ್ರಿಯೆ ದ್ರವ್ಯದೊಳು | ಅದ್ವಿತಿಯ ನೀನೆಂಬಭಾವದನುಭವವಿತ್ತು | ನೀ ವೊಲಿಯೊ ಇವಗೇಕಾವರನ್ಯರ ಕಾಣೆ | ಗೋವರ್ಧನೋದ್ಧರನೆಕೋವಿದರ ಒಡೆಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರಗಿರಿವಾಸನ ಅರಮನೆ ಸೊಬಗನೆ ದೊರೆಗಳು ನೋಡಿ ಶಿರಗಳ ತೂಗುತ ಬೆರಗಾಗಿಪ. ಛÀತ್ರ ಚಾಮರ ರಾಜ ಪುತ್ರರು ಚಂದಾಗಿಅಚ್ಚಮುತ್ತುಗಳ ಅಲವುತಅಚ್ಚಮುತ್ತುಗಳ ಅಲವುತಬ್ಯಾಗ ಹೊಕ್ಕರು ಚಿತ್ತಜನೈಯ್ಯನÀ ಅರಮನೆಯೊಳಗೆ 1 ತಾರಾಪತಿಗಳಂತೆ ತೋರುತಲೈವರುಥೋರ ಮುತ್ತುಗಳ ಅಲವೂತಥೋರ ಮುತ್ತುಗಳ ಅಲವೂತ ಹೊಕ್ಕರುವೀರಕೃಷ್ಣಯ್ಯನ ಅರಮನೆ ಬ್ಯಾಗ2 ಪಚ್ಚದ ಪಾವಟಿಗೆ ರತ್ನ ಹಚ್ಚಿದ ಚೌಕಟ್ಟುಅಚ್ಚಮುತ್ತುಗಳ ಅಲವುತಅಚ್ಚಮುತ್ತುಗಳ ಅಲವುತ ಹೊಕ್ಕರುಚಿತ್ತಜನಯ್ಯನ ಅರಮನೆ ಬ್ಯಾಗ 3 ಪಕ್ಷಿ ವಾಹನನರಮನೆ ದಕ್ಷಿಣ ದ್ವಾರದಿಲಕ್ಷಣವುಳ್ಳ ವನಿತೆಯರುಲಕ್ಷಣವುಳ್ಳ ವನಿತೆಯರು ತೆರೆದ ಬಾಗಿಲೊಳು ನಕ್ಷತ್ರದಂತೆ ಹೊಳೆಯುತ4 ಎಡಬಲ ಶ್ರೀತುಳಸಿಗಿಡಗಳು ಅಲವುತ ಕಡಲಶಯನನ ಅರಮನೆ ಒಳಹೊಂದಿಕಡಲಶಯನನ ಅರಮನೆ ಒಳಗಿನ್ನುನಾರಿಯರು ನೆರೆದರು 5 ಗಂಧದ ಥಳಿ ಕೊಟ್ಟು ಚಂದುಳ್ಳ ಅಂಗಳಕಹಂದರಗಳ್ಹಾಕಿದ ಇಂದಿರೇಶನರಮನೆಇಂದಿರೇಶನ ಅರಮನೆಯೊಳಗೆಬಂದುನಾರಿಯರು ನೆರೆದರು 6 ಚಂದ್ರನಂತೊಪ್ಪುತ ಚಂದಾಗಿನಿಂತತಂದೆ ರಾಮೇಶನ ಅರಮನೆ ತಂದೆ ರಾಮೇಶನ ಅರಮನೆ ವೃಂದಾವನಕೆಹೊಂದಿ ನಾರಿಯರುನೆರೆದರು ಬೆರಗಾಗಿ 7
--------------
ಗಲಗಲಿಅವ್ವನವರು
ವರದ ಗುರು ಗೋವಿಂದ ವಿಠಲ ಪೊರೆ ಇವನಾ ಪ ತರಳನನು ಒಪ್ಪಿಸಿಹೆ | ಕರಪಿಡಿಯೊ ಹರಿಯೆ ಅ.ಪ. ಮರುತ ಮತದಲಿ ಭಾವಿ | ಮರುತರೆಂದೆನಿಸುತಿಹಗುರುರಾಜ ಸಚ್ಚರಣ | ಕರುಣ ಪಾತ್ರಾಇರುವ ಈ ಶಿಶುವ ತವ | ಚರಣ ಕಮಲಂಗಳಿಗೆಅರ್ಪಿಸುತ ಭಿನ್ನವಿಪೆ | ನಿರುತ ಪೊರೆಯೆಂದು 1 ಗುರು ಹಿರಿಯರ ಸೇವೆ | ನಿರುತ ಗೈಯ್ಯುವ ಮನವಕರುಣಿಸುತ ಧರೆಯೊಳಗೆ | ಮೆರೆಸೊ ಕೀರ್ತಿಯಲೀಬರ ಬರುತ ವೈರಾಗ್ಯ | ಹರಿ ಗುರೂ ಸದ್ಭಕ್ತಿಉರುತರದ ಸುಜ್ಞಾನ | ಪರಿಪಾಲಿಸಿವಗೇ 2 ಭೃತ್ಯ ವತ್ಸಲನೇ 3 ಸರ್ವಗುಣ ಸಂಪೂರ್ಣ | ಸರ್ವವ್ಯಾಪ್ತ ಸ್ವಾಮಿನಿರ್ವಿಕಾರನೆ ದೇವ | ಶರ್ವ ವಂದ್ಯಾಸರ್ವದಾ ಸರ್ವತ್ರ | ದುರ್ವಿಭಾವ್ಯನೆ ಹರಿಯೆಪ್ರವರ ತವ ಸಂಸ್ಮರಣೆ | ಸರ್ವದಾ ಈಯೋ 4 ಜೀವ ಪರತಂತ್ರತೆಯ | ಭಾವುಕಗೆ ಅರಿವಿತ್ತುಭಾವದೊಳು ಮೈದೋರೊ | ದೇವದೇವೇಶಾಈ ವಿಧದ ಭಿನ್ನಪವ | ನೀ ವೊಲಿದು ಸಲಿಸುವುದುಮಾವಿನೋದಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದ ನರಹರಿ ವಿಠಲ | ಪೊರೆಯ ಬೇಕಿವಳ ಪ ಕರಿವರದ ಶ್ರೀ ಹರಿಯೆ | ಕರುಣಿ ನೀನೆಂದರಿತುಮೊರೆಯಿಡುವೆ ನಿನ್ನಡಿಗೆ | ಮರುತಾಂತರಾತ್ಮಾ ಅ.ಪ. ದಾಸದೀಕ್ಷೆಯಲಿ ಮಹ | ದಾಶೆಯನು ಉಳ್ಳವಳಲೇಸಾಗಿ ಕೈಪಿಡಿದು | ನೀ ಸಲಹ ಬೇಕೋವಾಸವಾನುಜ ದಾಸ | ವೇಷದಿಂ ಸ್ವಪ್ನದಲಿಸೂಸಿ ಸೂಚಿಸಿದ ಉಪ | ದೇಶವಿತ್ತಿಹೆನೋ 1 ಮಧ್ವಮತ ಪದ್ಧತಿಗ | ಳುದ್ಧರಿಸಿ ಇವಳಲ್ಲಿಶ್ರದ್ಧೆಯಿಂ ತವಪಾದ | ಪದ್ಮಗಳ ಭಜಿಸೇಶುದ್ಧ ತತ್ವ ಜ್ಞಾನ | ಸದ್ಭಕ್ತಿ ವೈರಾಗ್ಯಮಧ್ವಾಂತರಾತ್ಮ ಅನಿ | ರುದ್ಧ ಪಾಲಿಪುದೋ 2 ಪತಿಯ ಕೈಂಕರ್ಯವನು | ಹಿತದಿಂದ ಮಾಳ್ಪಂಥಮತಿಯ ನೀ ಕರುಣಿಸುತ | ಕೃತ ಕೃತ್ಯಳೆನಿಸೋಕ್ಷೀತಿಭಾರಹರಣ ಶ್ರೀ | ಪತಿಯೆ ನೀ ಒಲಿದಿವಳಅತುಳ ವಿಭವದಿ ಮೆರೆಸಿ | ಗತಿಪ್ರದನು ಆಗೋ 3 ಸಂತತದಿ ತವನಾಮ | ಚಿಂತಿಸುವ ಸೌಭಾಗ್ಯವಂತೆಯೆಂದೆನಿಸಿವಳ | ಕಾಂತೆಯ ಸಖನೇಅಂತರಾತ್ಮಕ ನೀನೆ | ಅಂತರಂಗದಿ ತೋರಿಸಂತಸವ ನೀಡಯ್ಯ | ಪಂಥಭಿಧ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವವ್ಯಾಪಕ ದೇವನಿರ್ವಿಕಾರನೆ ಹರಿಯೆ | ದುರ್ವಿ ಭಾವ್ಯಾಸರ್ವವಿಧ ಪರತಂತ್ರ | ದರ್ವಿ ಜೀವಿಯ ಕಾಯೋಸರ್ವಸುಂದರ ಗುರೂ ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದ ನಿನ್ನ ರೂಪ ಶ್ರೀ ನಿರುತ ನೋಡುವರೆ ಶ್ರೀ ಸರಸಿಜಭವ ಸಕಲ ಪ ಸುರರು ಮನುಗಳು ಮುನೀಶ್ವರರು ಶ್ರುತಿತತಿ ಯರು ದಿಗ್ವರರು ತಾಕ್ಷ್ರ್ಯಕನ ಮತ[ದವರು] ಅ.ಪ ಪರಭಕ್ತರಿಗೆ ದುಸ್ತರವಾದೊಡೆಯು ಕಾಡುವರಿಷಡ್ವರ್ಗವನೂ ತೊರೆದು ಹೃದಯದಿ ತೀರ್ಥ ಚರಣಾರವಿಂದಗಳಿಂ ನಿರಿಸಿ ಪೂಜಾತಪವನುರೆ ಚರಿಸಿ ವ್ರತಗಳಿಂ1 ಧರೆಯನಳೆದಂಗವೇನಯ್ಯ ಅಂದು ನರನಿಂಗೆ ತೋರಿದುದೆ ಜೀಯಾ ಶರಣರುಗಳೊದೆಯುವ ಕಾಯಾ ನಿನ್ನ ನಿರುಗೆಯನು ತೋರಿಸಲು ಒಡೆಯ ಕಾಣ 2 ಅರಿಯಬರುವುದಿಲ್ಲೀ ಚಿತ್ರಮಯ ಅಲ್ಪ ನರನರಿತರಿಯದವನು ನೆಲೆಯಾ ನೋಡ ಮಾಯಾ ವೇಲಾ ಪುರಿವಾಸ ವೈಕುಂಠ ಚೆನ್ನಕೇಶವರಾಯಾ 3
--------------
ಬೇಲೂರು ವೈಕುಂಠದಾಸರು
ವರದ ವೆಂಕಟ ಶ್ರೀನಿವಾಸ ಪ ಕರುಣದಿ ಪಿಡಿಯೊ ಎನ್ನ ಶೇಷಗಿರೀಶಾಅ.ಪ. ಘೋರ ಭವದಿ ನೊಂದೆನು ಇಂದು ಭಾರ ನಿನ್ನದು ಎಂದು ಸಾರಿ ಬೇಡಿದೆ ನಿನಗೆ ಭಕ್ತಬಂಧು ದೂರಮಾಡಲು ಬೇಡ ಕರುಣಾ ಸಿಂಧು ವಾರಿಜಾಸನ ವಂದ್ಯ ನೀರಜನಯನನೆ ಶರಣರ ಪೊರೆಯುವ ಸುರ ದ್ರುಮನೆ ಪರಿಪರಿ ಭವಣೆಯ ತರಿಮಹಿದಾಸನೆ ಚರಣ ಸೇವಕರ ಸೇವಕನೆನಿಸೊ ಶ್ರೀಶನೆ ದುರುಳ ಅಸುರನ ಶಿರವ ತರಿದು ತರಳ ಪ್ರಹ್ಲಾದನ ಪೊರೆದೆ ಎಂದು ಸುರರು ಪೊಗಳವುದನ್ನು ತಿಳಿದು ಭರದಿ ಬಂದು ಶಿರವ ನಮಿಸುವೆ ನಿಂದು 1 ಸಿರಿ ಅಜಭವಾದಿ ವಂದಿತ ಚರಣ ಪರಿಮಿತಿಯಿಲ್ಲದ ಗುಣ ಗಣ ಪೂರ್ಣ ನೀರಜ ಭವಾಂಡೋದಯಕೆ ಕಾರಣ ದುರಿತ ಹರಣ ಕ್ರೂರಜನ ಕುಠಾರ ದೇವನೆ ಗರುಡಗಮನ ಭೀಮರೂಪನೆ ಅರಗಳೆಣಿಸದೆ ಪೊರೆಯಂ ಬೇಗನೆ ಕರವ ಮುಗಿದು ಸಾರಿ ಬೇಡುವೆ ಕರಿಯ ತೊಡರನು ತರಿದು ನಕ್ರನ ಶಿರವ ಸೀಳಿದ ಕರುಣಿ ಕೃಷ್ಣನೆ ಸೀರೆ ಪಾಲಿಸಿ ಪೊರೆದ ದಾತನೆ ಮರಳಿ ಬರುವ ಭವವ ಬಿಡಿನೊ ರಂಗನೆ 2 ನಂಬಿದವರ ಕಲ್ಪವೃಕ್ಷ ನಂಬದವರ ಕಲುಷಕೆ ಶಿಕ್ಷಾ ಇಂಬಾಗಿ ಸರ್ವತ್ರ ಸುಜನರ ರಕ್ಷಾ ತುಂಬಿದ ವೈಭವದಿ ಮೆರೆಯೊ ದಕ್ಷಾ ಕಂಬುಕಂಠನೆ ನಿನ್ನ ನಂಬಿದೆ ಅಂಬರದಲಿ ಕಾಣೆಂದು ಬೇಡಿದೆ ಬಿಂಬನ ನಾಮನುಡಿಸೆಂದು ಕೇಳಿದೆ ಶಂಬರವೈರಿ ನಿನ್ನ ಚರಣವ ಸಾರಿದೆ ಶಂಭುವಂದಿತ ತುಂಬುರ ಪ್ರಿಯ ನಂಬಿ ಭಜಿಸುವೆ ತುಂಬು ಮನದೊಳು ಅಂಬುಜಾಕ್ಷನೆ ಜಯತೀರ್ಥ ಮುನೀಂದ್ರ ಬೆಂಬಲವಾಯುಗ ಶ್ರೀ ಕೃಷ್ಣವಿಠಲಾ 3
--------------
ಕೃಷ್ಣವಿಠಲದಾಸರು
ವರದರಾಜ ಪಾಲಿಸೆನ್ನ ಧರಣಿಯೊ- ವರದರಾಜ ಪಾಲಿಸೆನ್ನ ಪ ಕಾಂತೆಯ ಕಾಂತಿಯೊಳಿರುವೆ ನಿನ್ನಯ ಭಾವವರಿಯದ ರಸಿಕರಾರಿಹರು ಪರಮ ಪುರುಷ ನಿನ್ನ ಚರಣ ಸೇರಿದ ಭಕ್ತ ಜನರೆಲ್ಲ ರಸಿಕರಾಗಿಹರು 1 ದ್ವಿಜವರರಿಗಿಷ್ಟವ ಪಾಲಿಸಿರುವಿ ಅಜನ ನೀನೆಂದು ತೋರಿಸುವಿ ಯಜ್ಞಭೋಜನವನ್ನು ಮಾಡುತಿರುವಿ 2 ಚೇತನಾಚೇತನಗಳಿಗೆ ಶ್ರೇಷ್ಠನರಸೂತ ರಾಜೇಶ ಹಯಮುಖ ನಿನ್ನ ವಾತವಿಧಿ ಹರ ಮುಖ್ಯರು ಭಜಿಸುತಲಿ ನಿತ್ಯ ಮುಕ್ತರಾದರು ಎಂದೊರೆಯುವುದು ಶ್ರುತಿಯು 3
--------------
ವಿಶ್ವೇಂದ್ರತೀರ್ಥ
ವರದರಾಜ ವಿಠಲ | ಪೊರೆಯ ಬೇಕಿವನಾತರಳತವದಾಸ್ಯಕ್ಕೆ | ಮೊರೆಯನಿಡುತಿಹನಾ ಪ ಜನಿತ ಜನಿತ ಸಂಸ್ಕಾರಗಳನೀನಾಗಿ ಕಳೆಯುತಲಿ ಮಾನನಿಧಿ ಸಲಹೋ 1 ತೈಜಸನೆ ಓಲೆಯಲಿ | ಯೋಜಿಸಿದ ಅಂಕಿತವಾಮಾಜದಲೆ ಇತ್ತಿಹೆನೊ | ವಾಜವರ ವದನಾಮಜಗಜ್ಜನ್ಮಾದಿ | ಬ್ರಾಜಿಷ್ಣುಕರಿವರದಓಜಸವನಿತ್ತಿವಗೆ | ನೀ ಜಯನ ಬೀರೋ 2 ಲೌಕಿಕದಿ ಅಭಿಮಾನ | ತೋಕನಿಗೆ ನೀ ಬಿಡಿಸಿಏಕಮೇವನೆ ನಿನ್ನ | ಏಕಮಾನಸದೀ |ಪ್ರಾಕೃತಸುಗೀತೆಯಲಿ | ಝೇಂಕರಿಪ ಸುಕೃಪವಮಾಕಳತ್ರನೆ ಈಯೋ | ಲೋಕೈಕ ಮೂರ್ತೇ 3 ಪತಿ | ಭೂಮಗುಣಪೂರ್ಣಸೋಮಧರ ಮಧ್ಯ ಸತ್ | ಶ್ರೀ ಮಧ್ವ ಮತದೀಕ್ಷೆಕಾಮನಕೆ ತವದಾಸ್ಯ | ಸ್ವಾಮಿ ಕರುಣಿವುದೋ 4 ಪಾವಮಾನಿಗೆ ಪ್ರೀತ | ಭಾವಜಾರಿಯ ತಾತದಾವಗ್ನಿ ಬಹು ಪೀತ | ಗೋವಗಳರತ್ರಾತಗೋವತ್ಸದನಿಗೆ ಹಸು | ಧಾವಿಸೀ ಪೊರೆವಂತೆತಾವಕನ ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದೇ ಕಾರುಣ್ಯ ಶರಧೇ ಕರೆದೆನ್ನ ತವ ಸನ್ನಿಧಿಯಲಿಟ್ಟು ಪೊರೆಯೇ ಪ ವರದೆ ವರದೇ ಎಂದು ಕರೆದ ಮಾತ್ರದಲಿ ವಗ್ದುರಿತಗಳ ಪರಿಹರಿಸಿ ಪೊರೆವ ನೀನು ಕರಣ ಶುದ್ಧಿಯಲಿ ಸಂದರುಶನಭಿವಾದನವ ವಿರಚಿಸುವ ಮಾನವಗೆ ಪರಮ ಸೌಖ್ಯವನೀವೆ 1 ಸ್ನಾನ ಸಂಧ್ಯಾನ ಜಪ ಧ್ಯಾನಾರ್ಚನೆಯ ಮಾಳ್ಪ ಮಾನವರಿಗನುದಿನದಲೇನು ಫಲವೋ ಸಾನುರಾಗದಿ ಒಲಿದು ನೀನಿತ್ತು ಪಾಲಿಸಿದೆ ಆನರಿಯೆ ವಾರಿನಿಧಿ ರಾಣಿ ಕಲ್ಯಾಣಿ 2 ಕರುಣಿಸೆನಗಿದನೆ ವರ ವರವ ಬೇಡುವೆ ನಿನಗೆ ಹರಿಗುರುಗಳಲಿ ಭಕುತಿ ಪರಮ ಜ್ಞಾನ ಮರುತಾಂತರಾತ್ಮಕ ಜಗನ್ನಾಥ ವಿಠಲ ಒಂ ದರೆಘಳಿಗೆ ಬಿಡದೆ ಪೊಂದಿರಲಿ ಮನ್ಮನದಿ 3
--------------
ಜಗನ್ನಾಥದಾಸರು