ಒಟ್ಟು 49258 ಕಡೆಗಳಲ್ಲಿ , 138 ದಾಸರು , 11863 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮದಗಜಗಮನೆಯರ ಮುದದಿ ಮುಯ್ಯಕ್ಕೆ ಸರಿ ಹದಿನಾಲ್ಕು ಲೋಕದೊಳಗಿಲ್ಲಕೇಳಮ್ಮ ದೂತೆ ಹೇಳಮ್ಮ ಹೋಗಿ ಈ ಮಾತೆ ಪ. ಚಂದ್ರ ಉದಿಸಿದಂತೆ ಬಂದರೆ ಐವರು ಇಂದೆಮ್ಮ ಪುಣ್ಯ ಫಲಿಸಿತೆ ಇಂದೆಮ್ಮ ಪುಣ್ಯ ಫಲಿಸಿತೆ ಐವರುಬಂದೆರಗೋರಮ್ಮ ಕ್ಷಣದೊಳು 1 ಎಂಥ ದಯವ ಮಾಡಿ ಕಾಂತೆಯರು ಬಂದಾರೆಎಂತು ನಮ್ಮ ಪುಣ್ಯ ಫಲಿಸಿತುಎಂತೆಮ್ಮ ಪುಣ್ಯ ಫಲಿಸಿತುಲಕ್ಷಿ ್ಮಕಾಂತನೆ ಬಂದ ಮನೆತನಕ 2 ಹರದೆಯರು ಬಂದದ್ದು ಅರಿದು ಎಷ್ಟೇಳಲಿಬೆರಗಾದರಮ್ಮ ಹರಬೊಮ್ಮಬೆರಗಾದರಮ್ಮ ಹರಬೊಮ್ಮ ಕಾಮಧೇನುಕರೆದಂತಾಯಿತು ಸುಖವನೆ3 ಸಚ್ಚಿತಾನಂತ ಬಂದದಾಶ್ವರ್ಯ ನೋಡÀ ತಾಯಿಅಚ್ಚ ಕರುಣದಲೆ ಐವರಿಗೆ ಅಚ್ಚ ಕರುಣದಲೆ ಐವರಿಗೆ ಪರಿಪರಿಉತ್ಸಾಹ ಉನ್ನತಿಯ ಕೊಡುವವನೆ4 ಅತಿಶಯ ಮುಯ್ಯವನು ಸುತಿಸಲಾರೆವ ಕೆಲದಿಚತುರಂಗ ಬಲವ ಸಹಿತಾಗಿಚತುರಂಗ ಬಲವ ಸಹಿತಾಗಿ ರಾಮೇಶನ ಸತಿಯರ ಕರೆಯ ಬರತೇವ5
--------------
ಗಲಗಲಿಅವ್ವನವರು
ಮಂದಗಮನೆ ಕರೆದುತಾರೆ ಇಂದಿರೇಶನ ಚಂದ್ರ ಸೂರ್ಯಕೋಟಿ ತೇಜದಿಂದ ಮೆರೆವನಾ ಪ ನಿಗಮ ಚೋರನ ಕೊಂದು ವೇದವತಂದ ಮತ್ಸ್ಯನಾ ನಗವ ಬೆನ್ನೊಳಾಂತ ಮಥನದೊಳಗೆ ಕೂರ್ಮನ ಜಗವ ಕದ್ದ ಖಳನ ಕೊಂದ ವರಹರೂಪನ ಮಗನ ಕೊಲಲು ಬಂದು ಕಾಯ್ದ ನಾರಸಿಂಹನ 1 ಬೆಡಗಿನಿಂದ ಬಲಿಯಬೇಡಿ ಧರೆಯ ನಳೆದನ ಬಿಡದೆ ಕ್ಷತ್ರಿಯರನು ಕೊಂದ ಪರಶುರಾಮನ ಮಡದಿಗಾಗಿ ಜಲಧಿಗಟ್ಟಿ ಸತಿಯ ತಂದನ ಕಡಲ ಮನೆಯ ಮಾಡಿನಿಂದ ವಾರಿಜಾಕ್ಷನ 2 ವರ ಪತಿವ್ರತೆಯ ಮಾನಗೊಂಡ ವರದ ಭೌದ್ಧನ ಹರಿಯನೇರಿ ಮ್ಲೇಂಛ ಕುಲವ ಕೊಂದ ಕಲ್ಕ್ಯನಾ ಮರುತ ಸುತನ ಕೋಣೆವಾಸ ಲಕ್ಷ್ಮೀ ರಮಣನ ಸರಿಸಿ ಜಾಕ್ಷಿ ತಂದು ತೋರೆ ಸುಜನರೊಡೆಯನ 3
--------------
ಕವಿ ಪರಮದೇವದಾಸರು
ಮದನ ಗೋಪಾಲಗೊ ಸುದತಿ ಯಶೋದೆ ನಂದ ಕಂದನಿಗೊ ಪ ಶ್ರೀಶ ಶ್ರೀ ಕೇಶವ ನಾರಾಯಣನಿಗೊ ಮಾಧವ ಗೋವಿಂದ ಹರಿಗೊ ಸಾಸಿರ ನಾಮದ ವಿಷ್ಣು ಮಧುಸೂದನಗೊ ಭೂಸುರ ಪಾಲ ತ್ರಿವಿಕ್ರಮ ವಾಮ£ಗೊ 1 ಮುದ್ದು ಮೂರುತಿ ಶ್ರೀಧರ ಹೃಷಿಕೇಶಗೊ ಪದ್ಮನಾಭ ದಾಮೋದರಗೊ ಶುದ್ಧಮನದಿ ಸಂಕರ್ಷಣ ವಾಸುದೇವಗೊ ಅನಿರುದ್ಧ ಮೂರುತಿಗೊ 2 ಹರುಷದಿ ನಾರಸಿಂಹ ಅಚ್ಚುತಗೊ ಸರಸಿಜನಯನ ಜನಾರ್ದನುಪೇಂದ್ರಗೊ ಸಿರಿ ಹರಿ ಕೃಷ್ಣಗೊ 3 ಶಂಖು ಚಕ್ರ ಗದಾ ಪದ್ಮವು ಧರಿಸಿದ ವೆಂಕಟರಮಣಗೊ ಶ್ರೀಹರಿಗೊ ಪಂಕಜನಯನ ಶ್ರೀರಂಗನಾಥನಿಗೊ ಬಿಂಕದಿ ಪಾಂಡುರಂಗ ವಿಠ್ಠಲಗೊ 4 ಘನಮಹಿಮ ಮನು ಕಂಚಿ ವರದರಾಜನಿಗೊ ಇನಕುಲ ತಿಲಕ ಶ್ರೀರಾಮಚಂದ್ರನಿಗೊ ವನಿತೆಯರೊಡಗೂಡಿ ಮೆರೆವ ಕೃಷ್ಣನಿಗೊ ವನಜಾಕ್ಷ ಪಶ್ಚಿಮ ರಂಗಧಾಮನಿಗೊ 5 ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ ಅಗಣಿತ ಮಹಿಮಗೊ ಆಶ್ಚರ್ಯಗೊ ಖಗವಾಹನ ಕರಿರಾಜ ವರದಗೊ ನಿತ್ಯ ತೃಪ್ತನಿಗೊ 6 ಶ್ರದ್ಧೆಯಿಂದಲಿ ತನ್ನ ಭಜಿಪ ಭಕ್ತರ ಕಾಯ್ವ ರೌದ್ರಿನಾಮ ಸಂವತ್ಸರದಿ ಮುದ್ದು ಮೂರುತಿ ಕಮಲನಾಭ ವಿಠ್ಠಲನಿಗೆಪದ್ಮಾಕ್ಷಿ ವನಮಾಲೆ ಹಾಕಿದೆಯಾ 7
--------------
ನಿಡಗುರುಕಿ ಜೀವೂಬಾಯಿ
ಮದನ ಜನಕ ಹೃದಯ ನಿಲಯಕೆ ಮುರವÀುಥನ ಪ ಆದರದಲಿ ಉಪಚರಿಸುವೆನು ಕಲಿ ಬಾಧೆಯ ಪರಿಹರಿಸೋ ಮಧುಸೂದನ ಅ.ಪ ಪೂರ್ಣಸದಾಗಣಿತೇಡ್ಯಗುಣಾನುಭ ವೈಕಶರೀರ ಕಲುಷದೂರ ಚೀರ್ಣ ಪುಣ್ಯಚಯದಿಂದ ಕರೆಯಲು ತ್ರಾಣವಿಹುದು ಮನ್ಮನದಲಿ ನೆಲಿಸೊ 1 ಶಮದಮಗಳನುಗ್ರಹಿಸುತ ಸಜ್ಜನ ಸಮಿತಿಯ ಸಹವಾಸವ ನೀಡೋ ಅಮಿತಪ್ರಮತಿಗಳ ಶಾಸ್ತ್ರಪ್ರವಚನದಿ ಮಮತೆಯ ಸ್ಥಿರಪಡಿಸೊ ಶೃತಿಪತೇ 2 ಗುರುಕರಣವು ನಿನ್ನನರಿಯಲು ಕಾರಣ ಶರಣಂಭವ ಸಂತತ ಹಿರಿಯರು ಮಾಡಿದ ಸಾಧನಗಳಿಗಿದು ಹಿರಿದಾಗುವುದೇ ಪ್ರಣತ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮದನ ಜನಕ ಪುರು| ಷೋತ್ತಮ ಪರತರ ಶೇಷಗಿರಿವಾಸಾ| ಪ ಕರುಣ ನೋಟದಿ ಸರ್ವಜೀವನುಳಹಿ ಕೊಂಡು| ಅಮೃತ ನುಣಿಸಿದನು| ಧರಣಿಯ ಮೋಹಿಸಿ ಬಿಗಿದಪ್ಪಿ ತರಳನು| ಹರಣಗಾಯ್ವ ದೇವ ಶರಣೆಂದೆನಲ್ಲದೆ| ತೆರೆಗಣ್ಣಿನವನೇಂದೆನೇ ಉಬ್ಬಿಗೊಂಡ| ಬಿರುಸು ಮೈಯ್ಯವನೆಂದನೇ ದಾಡಿಲಿಂದ| ಸುರಿವ ಜೊಲ್ಲುವನೆಂದನೇ ಬ್ರಹ್ಮಾದಿಗ| ಳರಸ ಉಗ್ರಾವ ತಾರೀ ಬಾಯೆಂದೆನಲ್ಲದೆ1 ಚಿಕ್ಕಮಾಟದಿ ಬಹು ಚಲುವ ಭೂಸುರರುಗೆ ಪುಕ್ಕಟೆ ಅರಸು ತನವ ಕೊಟ್ಟನು| ಸಿಕ್ಕಿದ ದೇವರ ಸೆರೆಬಿಡಿಸಿದ ಕುಂತೀ| ಸಾರಥಿ ಶರಣೆಂದೆನಲ್ಲದೇ| ಕಕ್ಕು ಲಾತೆವನೆಂದೆನೇ ಕೊಡಲಿಹೊತ್ತ| ನಿಕ್ಕರುಣಿಕನೆಂದನೇ ವಾನರ ಕೂಡಾ| ಹೊಕ್ಕವನನೆಂದೆನೇ ಕೌರವರ| ಸೊಕ್ಕು ಮುರಿದ ಸ್ವಾಮಿ ಬಾಯೆಂದೆನಲ್ಲದೆ2 ನೊಸಲಗಣ್ಣಿನವನ ಸಾಹ್ಯಕ ಶರವಾಗಿ| ಯಶೆವ ಮುಪ್ಪುರವನು ಧರೆಗಿಳುಹೀ| ವಸುಧಿಲಿ ಕಲಿಮಲ ಬಿಡಿಸಿ ಸಜ್ಜನರಪಾ| ಲಿಸಿದ ಮಹಿಪತಿ ಸುತಪ್ರಭು ಎಂದೆನಲ್ಲದೆ ಹುಸಿನುಡಿಯುವ ನೆಂದನೇ ಯವನರ| ದೆಸಿಗೆಡಿಸಿದ ನೆಂದನೇ ಆರಿಗೆ ನೆಲೆ| ತುಸುಗುಡದವ ನೆಂದನೇ ಜಗದೊಳು| ದಶ ಅವತಾರನೇ ನಮೋ ಎಂದೆ ನಲ್ಲದೆ.3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮದನ ಮೋಹನ ಕೃಷ್ಣ ಉದಧಿ ಶಯನ ಹರಿ ಮಾಧವನ ಪ ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ ಇಂದಿರೆ ರಮಣ ಗೋವಿಂದನ ಮಹಿಮೆಯ ಒಂದೆ ಮನದಿ ಸ್ತುತಿಸುವ ಜನರ ಕುಂದೆಣಿಸದೆ ಮುಚುಕುಂದ ವರದ ಹೃನ್ಮಂದಿರದಲಿ ನಲಿದಾಡುವನು 1 ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ- ನೇಕ ವಿಧದಿ ಸ್ತುತಿಸುವ ಜನರ ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು ತೋಕನಂದದಿ ಪರಿಪಾಲಿಸುವ 2 ಪದ್ಮನಾಭನ ಪಾದಪದ್ಮವ ಸ್ಮರಿಸುತ ಶುದ್ಧಮನದಿ ಪಾಡಿ ಪೊಗಳುವರಾ ಸಿದ್ಧಾರ್ಥನಾಮ ವತ್ಸರದಲಿ ಸುಜನರ ಹೃದ್ರೋಗವಳಿಯುತ ಸಲಹುವನೂ 3 ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ- ಕಾಂತನನೇಕ ವಿಧದಿ ಸ್ಮರಿಸೆ ದಂತಿವರದ ಅನಂತ ಮಹಿಮ ತನ್ನ ಕಾಂತೆ ಸಹಿತ ಒಲಯುವನವರ್ಗೆ4 ಕಮಲಸಂಭವಪಿತ ನಮಿಸಿ ಸ್ತುತಿಸುವೆನು ಕಮಲ ಪತ್ರಾಕ್ಷಹರಿ ಕರುಣಾನಿಧೆ ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ- ತ್ಕಮಲದಿ ಪೊಳೆಯುವ ಸುಜನರಿಗೆ5
--------------
ನಿಡಗುರುಕಿ ಜೀವೂಬಾಯಿ
ಮದನ ಜನಕ ಮುದ್ದುರಂಗ ನಿತ್ಯ ಹೃದಯದೊಳಗೆ ಭಜಿಸುವರಂತರಂಗ ಪ ಅಜ ಭವನ ಮಿತ್ರ ಸರ್ವೇಶ ನಿನ್ನ ಕ್ಲೇಶ ನಾಶ ಮಜಡ ನೆನಗೆ ನೀ ನುಡಿಸ ಕೊಡು ಸುಜನ ಸೇವಿತ ನರಹರಿ ಲಕ್ಷ್ಮೀಶ 1 ದಯವ ನೀ ಎನ್ನೊಳುಬೀರೋ ನಿನ್ನ ಸ್ವಯಂ ಮೂಲ ನಿಜದ ಮೂರ್ತಿಯನೀಗ ತೊರೋ ಭಯಗಳನೆಲ್ಲವ ತೋರೋ ಚೆಲ್ವ ನಯವಿದ ಸರ್ವ ಸದ್ಗುಣ ನಿಧಿ ಬಾರೋ 2 ಪರಮ ಪಾವನಮೂರ್ತಿ ನಿನ್ನ ಸಿರಿ ಚರಣ ಕೆರಗುವೆ ನಾ ಮುನ್ನ ಕರುಣದಿ ಸಲಹೋ ನೀ ಎನ್ನ ನಿತ್ಯ ಪೊರೆವ ಚಿಪ್ಪಳಿ ಗೋಪೀವರ ಸುಪ್ರಸನ್ನ 3
--------------
ಕವಿ ಪರಮದೇವದಾಸರು
ಮದನ ಜನಕ ಸದಯ ಎನ್ನ ಹೃದಯ ಮಂದಿರದಲಿ ಕಮಲ ನಿಲ್ಲಿಸೊ ಸತತ ಯದುತಿಲಕ ಪ ಮದ ಮತ್ಸರದಿಂದ ಬಹಳ ಚದುರುತಿರುವ ಎನ್ನ ಮನದ ಹದವಗೈದು ನಿನ್ನ ದಿವ್ಯ ಪದಸೇವೆಯ ಮುದವೊದಗಿಸೊ ಅ.ಪ ಮಲಿನವಾದ ಎನ್ನ ಮನವು ಹಲವು ವಿಧದÀ ಅನುಭವಗಳಿÀಂ ಪೊಂದಿರುವೆನೊ 1 ಕಲಿಪುರುಷನಿಗೆ ಸುಲಭದಲಿ ಸಿಲುಕದಂತೆ ಎನ್ನ ಮನಕೆ ಬಲವನಿತ್ತು ಹರುಷದಿಂದ ಒಲಿಯುತ ಪ್ರಸನ್ನನಾಗೊ 2
--------------
ವಿದ್ಯಾಪ್ರಸನ್ನತೀರ್ಥರು
ಮದನನಗೇಹ ಸುಖ ಮರಣ ಸುಖಮದನನ ತೊತ್ತಿನ ಮಕ್ಕಳಾಗ ಬೇಡಿರೋ ಪ ಸ್ತ್ರೀಯರೂಪವ ಕಂಡು ಸೈರಿಸದೆ ಕಳಕಳಿಸಿಸುಯ್ಗರೆದು ಶರೀರವು ಬೆವರೇರುತಕೈಕಾಲ್ಗಳಿಗೆ ನಡುಕ ಹುಟ್ಟಿ ಕಾಮ ಶರಕೆ ಮೈಯನಿತ್ತುಕೊಯಿಸಿಕೊಳ್ಳುವ ಕೊರಳ ನಿತ್ಯದಿ ಕಷ್ಟದಿ ಸುಖವು 1 ಮುಖ ಕಾಂತಿಯ ನೋಡಿ ಮೋಹದಲಿ ಮುಳುಗಾಡಿಸುಖವೆಂದು ಬಗೆಯುತ ಸಂಗಯೋಗದಕಕುಲಾತಿಪಡುತಲಿ ಕೆಡೆದುತಾಪದಿ ಹೊರಳಿಬಕಧ್ಯಾನದಲಿ ತನ್ನ ನಿಜಸುಖವ ಮರೆವ 2 ಪತಿ ಚಿದಾನಂದ ಕಾಣದ ಸುಖವು3
--------------
ಚಿದಾನಂದ ಅವಧೂತರು
ಮದನಮೋಹನ ಮಾಮನೋಹರ ಶ್ರೀದೇವ ಸಾಧುಪಾಲನಕಾಗಿ ಬಂದು ಮೇದಿನಿಯ ಭಾರಿಳುಹಿದೆ ಧ್ರುವ ಬಂದು ಯದುಕುಲದಲಿ ಜನಿಸಿದೆ ಶ್ರೀ ಕೃಷ್ಣನು ಪೂತಣಿ ನಂದಗೋಕುಲಲ್ಯಾಡಿದೆ ಮಂದರಧರ ಸುಂದರರೂಪ ಮುಕುಂದ ವೃಂದಗೋಪರ ನಂದದಲಿ ಕೂಡಿ ಚಂದ ಚಂದದಲ್ಯಾಡಿದೆ1 ದೇವಕೀ ಕಂದ ದೇವಾಧಿದೇವ ಗೋವಿಂದ ಹಾವನ್ಹಿಡಿದಿ ನೀ ಮೆಟ್ಟಿ ಫಣಿಯಲಿ ಮಾವನ ಮರ್ದಿಸಿದೆ ಸಾವಿರನಾಮ ಪಡೆದ ನೀ ಪೂರ್ಣ ಶ್ರೀಹರಿ ದೇವ ಇಂದ್ರನು ಮಳಿಯಗರೆ ಗೋವರ್ಧನವ ನೀನೆತ್ತಿದೆ 2 ವಿದುರವಂದ್ಯ ಸದಾ ಪಾಂಡವಪಕ್ಷ ಶ್ರೀಧರ ನಿರ್ಮಿಸಿ ಮಡುಹಿದೆ ವಾಸುದೇವ ನಮ್ಮಯ್ಯ ಮಹಿಪತಿಯ ಘನಸುಖದಾಯಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಪ ಜಪತಪಗಳರಿಯೆ ಉಪವಾಸಗಳರಿಯೆ ಕೃಪೆ ಮಾಡಲರಿಯೇ ಪರಿಜನಗಳಲ್ಲಿ ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ 1 ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ ಗಾತ್ರದಂಡಣಿಯ ಮಾಡಲರಿಯೆ ಗಾತ್ರ ಲಘು ನೋಡಿ ಸ ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ2 ಅನ್ನದಾನವರಿಯೆ ಮನ್ನಣೆ ಮಾಡಲರಿಯೆ ಚನ್ನಾಗಿ ಬಂಧುಗಳು ಪೊರಿಯಲರಿಯೆ ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ 3
--------------
ವಿಜಯದಾಸ
ಮಂದಮತಿಯೇ ಮಾನವಾ ಪ ಹಿಂದೊ ಮುಂದೊ ಎಂದು ಯೋಚಿಸದಿರು ಅ.ಪ ಸತತವು ಲಕ್ಷ್ಮೀಪತಿಯ ಭಜಿಸು 1 ಭಾವದಿ ತಿಳಿದತಿಭಕ್ತಿಯೊಳಿರು 2 ಈ ಚರಾಚರಕು ಗೋಚರಿಸುವ ಕಂಜ- ಲೋಚನನೆಂದು ನಿನ್ನ ನಾಚಿಕೆ ಬಿಡು 3 ಕೊರಳು ನೋಯುವಂತೆ ಕೂಗುತಲಿರು 4 ಪರದಲಿ ಮುಕ್ತಿಯು ಇಹದಲಿ ಸೌಖ್ಯವು ಗುರುರಾಮವಿಠಲನೆ ಕರುಣಿಸುವನು 5
--------------
ಗುರುರಾಮವಿಠಲ
ಮಂದರಧರ ಪಾವನ ಇಂದಿರಾರಮಣನ _ ಗೋವಿಂದ ಎನ್ನಿರೋ ಪ ನಂದನ ಕಂದ ಮುಕುಂದಾಬ್ಧಿಶಯನನ - ಗೋವಿಂದ ಎನ್ನಿರೋ ಅ ಗರಳ ಕಂಧರ ಸಖನನುಜನ ಕೊಂದನ - ಗೋವಿಂದ ಎನ್ನಿರೋಸುರಮುನಿಯನುಜನ ಪಾದವ ಪಿಡಿದನ - ಗೋವಿಂದ ಎನ್ನಿರೋಪರಮ ವೈಷ್ಣವರ ಕೈಲಿ ದಾನವ ಪಿಡಿದನ _ ಗೋವಿಂದ ಎನ್ನಿರೋಉರಗನ ಮಗಳ ಗಂಡಗೆ ಪ್ರಾಣವಿತ್ತನ - ಗೋವಿಂದ ಎನ್ನಿರೋ 1 ಸತಿ ರೂಪ ತಾಳ್ದನ _ ಗೋವಿಂದ ಎನ್ನಿರೋಪಿತನ ಮಾತನು ಶಿರದೊಳಗಾಂತು ನಡೆದನ - ಗೋವಿಂದ ಎನ್ನಿರೋಮತಿವಂತನಾಗಿ ಮಾತೆಯ ಶಿರವ ತರಿದನ - ಗೋವಿಂದ ಎನ್ನಿರೋ 2 ಕರೆತರಿಸಿದ ಮಾವನ ಕೊಂದಾತನ - ಗೋವಿಂದ ಎನ್ನಿರೋಧರೆಯ ಒಯ್ದನ ಕಾಯಗಳೆದನ - ಗೋವಿಂದ ಎನ್ನಿರೋಈರೇಳು ಭುವನಗಳ ಉದರದೊಳಿಟ್ಟಹನ - ಗೋವಿಂದ ಎನ್ನಿರೋಮಾರಜನಕ ಕಾಗಿನೆಲೆಯಾದಿಕೇಶವನ - ಗೋವಿಂದ ಎನ್ನಿರೋ 3
--------------
ಕನಕದಾಸ
ಮಂದರೊದ್ಧಾರ ಮುಚುಕುಂದವರದ ಮುಕುಂದ ಇಂದಿರಾನಂದ ಗೋವಿಂದ ವರದ ಕಂದನತಿ ದೈನ್ಯದಿಂ ತಂದೆ ಬಾರೆನ್ನಲಾ ನಂದದಿಂ ಭದಿಂ ಬಂದೆ ಭರದಿಂ ನಂದಾತ್ಮ ಸಂಜಾತನೆಂದೆನಿಸಿ ನಲವಿನಿಂ ಬೃಂದಾವನದಿ ನಿಂದೆ ವರದನೆಂದೆ ನಂದಮಂ ಕೃಪೆಗೆಯ್ದುದರರೆ ಪಿರಿದು ಅಚ್ಚುತಾನಂತ ಚಿದ್ರೂಪ ವಿಭವ ಪಚ್ಚಕರ್ಪೂರದಿಂ ಮಿಳಿತವಾಗಿ ಪೆರ್ಚೆ ಪರಿಮಳ ವೀಳ್ವಮಿದನುಕೊಂಡು ಮೆಚ್ಚಿ ಪೊರೆಯೆನ್ನ ಶೇಷಾದ್ರಿರನ್ನ
--------------
ನಂಜನಗೂಡು ತಿರುಮಲಾಂಬಾ
ಮಂದರೋದ್ಧರಾ-ಬಂದು ಕಣ್ಣಮುಂದೆ ನಿಲ್ಲೋ ಪ ಬಡವರೊಡೆಯನೆಂದು ನಿನ್ನ ಅಡಿಯ ಬಿಡದೆ ನಂಬಿದೆನೋ ಕಡುದಯಾನಿಧೆ ಬಡಕುಚೇಲನ ಪಿಡಿಯವಲಿಗೆ ಒಲಿದು ಪೊರೆದೆ1 ಸರ್ವಸಾರಭೋಕ್ತ ನೀನೆ ತೋರ್ವುದಿಲ್ಲ ಕೊಡಲು ನಿನಗೆ ಸರ್ವದೇವಸಾರ್ವಭೌಮನೀ ನೋರ್ವ ವ್ಯಾಪ್ತನಿರ್ಲಿಪ್ತ 2 ಪ್ರಣತಕಾಮದನೆಂದು ಅಂದು ಅಣುಗಧೃವನಾಕ್ಷಣದಿ ದಣಿಸಲಾಗದೋ ದೀನರಕ್ಷಕ 3 ಮುಕುತರೊಡೆಯ ಭಕುತವತ್ಸಲ ಯುಕುತಿತೋರದೊ ನಿನ್ನ ಧ್ಯಾನಕೇ ಶಕುತಿಯಿತ್ತು ಸಲಹೊ ಎನ್ನನು ಸಕಲಲೋಕೋದ್ಧ್ದಾರ ಧೀರ 4 ಎಲ್ಲಜನರ ಪೊರೆಯಲು ಶ್ರೀನಲ್ಲ ನಿಂತೆಯೊ ಶೇಷಶೈಲದಿ ವಲ್ಲಭಾ ಶ್ರೀ ವೆಂಕಟೇಶ ನೀ- ನೆಲ್ಲಬಲ್ಲೆನ್ನ ಸೊಲ್ಲ ಲಾಲಿಸೊ 5
--------------
ಉರಗಾದ್ರಿವಾಸವಿಠಲದಾಸರು