ಒಟ್ಟು 2180 ಕಡೆಗಳಲ್ಲಿ , 120 ದಾಸರು , 1676 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾದವಾದನು ನಾದದ ಮನೆಯಿದ್ದ ಅಚ್ಚರಿ ನೋಡಿವಾದಿಗಳನು ಗೆದ್ದು ಜಯವ ತಾ ಮಾಡಿ ನಾದವಾದನು ಪ ಸುಮನಸವೆಂದೆಂಬ ಕುದುರೆಯ ಹತ್ತಿಅಮಲವೆನಿಪ ಧೈರ್ಯದ ಕತ್ತಿಯ ಹಿಡಿದುಭ್ರಮಣೆಯಲ್ಲದ ವಿವೇಕ ಫೇರಿಯಿಂದವಿಮಲಾನಂದದಿ ದುಮುಕಿಸುತಿರುತಿಪ್ಪ ನಾದವಾದನು1 ಅಷ್ಟ ಆನೆಗಳ ತಲೆಗಳ ಹೊಡೆದುಷಷ್ಟರಧಿಕರ ಸಾಲನು ಕಡಿದುದುಷ್ಟಕುದುರೆಗಳ ಏಳರ ಕಾಲನು ಉಡಿದುಕಷ್ಟರೂಪದ ಚೋರರೈವರನು ದೂಡಿದ ನಾದವಾದನು 2 ಈಷಣತ್ರಯ ಪ್ರಧಾನರ ಜೀವವ ಕಳೆದುವಾಸನೆ ದಳವಾಯ್ಗಳೀರ್ವರ ನೆರೆ ತುಳಿದುಮೋಸಗಾರರ ದೊರೆ ನಾಲ್ವರನಳಿದುಏಸು ನುಡಿಯಲಿ ತಾನೊಬ್ಬನೇ ಉಳಿದು ನಾದವಾದನು 3 ದೋಷಕರೆಲ್ಲರ ದೇಶ ಬಿಟ್ಟೋಡಿಸೆನಾದವಾದರು ಎಲ್ಲರು ಕೊನೆಗೆ ಉಳಿದವರೆಲ್ಲಾಸಾಷ್ಟಾಂಗ ವೆರಗಿದರುವಾಸಿ ಪಂಥವ ಬಿಟ್ಟು ಕೊಂಡಾಡುತ ನಾದವಾದನು 4 ಇಂತು ರಣವ ಮಾಡಲು ಕೈಯ ಸುರಗಿಸಂತೋಷವೆಂಬ ಮೃತದಿ ತಾ ಮುಳುಗಿಶಾಂತನಾಗಿಯೆ ಚಿದಾನಂದ ಗುರುವಿಗೆರಗಿನಿಂತು ನೋಡಿಯೆ ಕಂಡನಾತನೆ ತಿರುಗಿ ನಾದವಾದನು 5
--------------
ಚಿದಾನಂದ ಅವಧೂತರು
ನಾನಿನ್ನ ಧ್ಯಾಸದೊಳಿರುವೆ ಹರಿ ನೀನೆನ್ನ ಧ್ಯಾಸದೊಳಿರಬೇಕು ಸತತ ಪ ಬೆಳಗು ನಿನ್ನೊಳಗಯ್ಯ ಬೆಳಗಿನೊಳಗೆ ನೀನು ಕಳೆಯೊಳಗೆ ನೀನಯ್ಯ ಕಳೆಯು ನಿನ್ನೊಳಗೆ ಇಳೆಮೂರು ನಿನ್ನೊಳಗೆ ಇಳೆಯೊಳು ನೀನಯ್ಯ ಒಲಿದು ನೀ ಎನ್ನನು ಸಲಹಯ್ಯ ಸತತ 1 ವೇದದೊಳಗೆ ನೀನು ವೇದ ನಿನ್ನೊಳಗಯ್ಯ ನಾದ ನಿನ್ನೊಳು ದೇವ ನಾದದಿ ನೀನು ಬೋಧ ನಿನ್ನೊಳು ಪ್ರಭು ಮಾಧವ ಸತತ 2 ನೀನಿಟ್ಟ ಸೂತ್ರದಿಂ ನಾನಾ ಸೃಷ್ಟಿಗಳೆಲ್ಲ ನಾನುತಾನೆನ್ನುತ ಕುಣೀತಿಹ್ಯವೊ ನಾನು ನಿನ್ನೊಳು ಜೀಯಾ ನೀನು ನಿನ್ನೊಳು ತಂದೆ ಧ್ಯಾನದಾಯಕ ಶ್ರೀರಾಮಯ್ಯ ಸತತ 3
--------------
ರಾಮದಾಸರು
ನಾಮವೆ ಗತಿಯೆನಗೇ ಕೇಶವ ನಿನ್ನ ಪ್ರೇಮವೆ ಗತಿಯೆನಗೇ ಪ ರಾಮ ನಿನ್ನಯ ನಾಮವ ಸುಮತಿ ಸ್ಮರಿಸಲು ಭೂಮಿಗಭಯವಿತ್ತ ಸ್ವಾಮಿಯೇ ನಿನ್ನ ಅ.ಪ. ತರುಣ ಪ್ರಹ್ಲಾದ ನನೀಲ ದ್ರೌಪದಿ ಮತ್ತೆ ದುರುಳ ವಾಲ್ಮೀಕ ವಿಭೀಷಣರನ್ನು ಕಿನ್ನರ ಮರುತಾತ್ಮಜ ಋಷಿಗಳ ಪೊರೆದಂಥ ನರಹರಿ ಕೇಶವನೆಂಬ 1 ಇಂತೀ ಭಕ್ತರ ಸಲಹಿದ ಪರಿಯ ಸತತ ಭಜಕರ ಪೊರೆವ ಶ್ರೀಧರನ ಕಂತುಪಿತನ ನಾಮ ಸ್ಮರಿಸುವ ದಾಸರ ಅಂತಾರಾತ್ಮವ ಶುದ್ಧಿಗೊಳಿಸುವ ಹರಿಯ 2 ಅಂತ್ಯಕಾಲದಲಿ ಬಂದೊದಗುವ ಪರಿಯ ಕುಂತಿಯ ಸುತರನ್ನು ಸಲಹಿದ ಪರಿಯ ಸಂತತ ದೂರ್ವಾಪಟ್ಟಣದಲ್ಲಿ ಮೆರೆಯುವ ಅಂತ್ಯಾದಿರಹಿತ ಶ್ರೀ ಚನ್ನಕೇಶವನ 3
--------------
ಕರ್ಕಿ ಕೇಶವದಾಸ
ನಾರದ ಕೊರವಂಜಿ ಜಯ ಜಯ ದಯಾಕರನೆ ಹಯವದನ ಭಯಹರನೆ ಜಯ ಶೀಲಸಾಧ್ವರನೆ ಜಯ ದೀನೋದ್ಧರನೆ ಪ್ರಿಯಜನ ಮನೋಹರನೆÀ ಸುಯತಿ ಸಾಕಾರನೆ 1 ಹರಿಯೇ ಪತಿಯಾಗಬೇಕೆಂದು ರುಕುಮಿಣಿ ಪರದೇವತೆಯ ನೆನವುತಿರಲು ಕೊರವಂಜಿ ವೇಷದಿ ರುಕುಮಿಣಿದೇವಿಗೆ ಪರಮ ಹರುಷವೀವೆನೆಂದು ನಾರದ ಬಂದ 2 ಧರಣಿ ಮಂಡಲದಲ್ಲಿ ನಾರದ ಧರಿಸಿ ಕೊರವಂಜಿ ವೇಷವ ಸುರನರಾದಿಗಳೆಲ್ಲರಿಗೆ ತಾ ಪರಮ ಆಶ್ಚರ್ಯ ತೋರುತ್ತ 3 ಬಂದಳು ಕೊರವಂಜಿ ಚಂದದಿಂದಲಿ ಮಂದಹಾಸವು ತೋರುತ್ತ ಪಾದ ಧಿಂಧಿಮಿ ಧಿಮಿ- ಕೆಂದು ನಿಂದಭೀಷ್ಟವ ಪೇಳುತ 4 ಗಗನದಂತಿಹ ಮಧ್ಯವು ಸ್ತ- ನಘನ್ನ ಭಾರಕೆ ಬಗ್ಗುತ ಜಗವನೆಲ್ಲವ ಮೋಹಿಸಿ ಮೃಗ ಚಂಚಲಾಕ್ಷದಿ ನೋಡುತ 5 ಕನಕಕುಂಡಲ ಕಾಂತಿಯಿಂದಲಿ ಗಂಡಭಾಗವು ಹೊಳೆವುತ್ತ ಕನಕಕಂಕಣ ನಾದದಿಂದಲಿ ಕಯ್ಯ ತೋರಿ ಕರೆಯುತ್ತ 6 ಕುಂಕುಮಗಂಧದಿ ಮಿಂಚುವೈಯಾರಿ ಚುಂಗು ಜಾರಲು ಒಲವುತ್ತ ಕಿಂಕಿಣಿ ಸರಘಂಟೆ ಉಡಿಯೊಳು ಘಲ್ಲು ಘಲ್ಲೆಂದು ಬಂದಳು ಘಲ ಘಲ ಘಲ್ಲು ಘಲ್ಲೆಂದು ಬಂದಳು 7 ಕರೆದಾಳೆ ಸುಪಲ್ಲವ ಸುಪಾಣಿ ಕೀರವಾಣಿ ಪರಿಮಳಿಸುವ ಫಣಿವೇಣಿ 8 ಪರಿಪರಿ ಬೀದಿಯಲ್ಲಿ ನಿಂದು ಹಿಂದೂ ಮುಂದೂ ಸರಸವಾಡುತ್ತ ತಾನೆ ಬಂದು 9 ಕೊರವಂಜಿ ಯಾರೊಳಗೆ ನೋಡಿ ಕೂಡಿಯಾಡಿ ಸರಿಯಿಲ್ಲವೆಂದು ತನ್ನ ಪಾಡಿ 10 ಮನೆಮನೆಯಿಂದ ಬಂದಳು ಕೊರವಂಜಿ ತಾನು ಮನೆಮನೆಯಿಂದ ಬಂದಳು ರನ್ನವ ತೆತ್ತಿಸಿದ ಚಿನ್ನದ ದಿವ್ಯ ಬುಟ್ಟಿ ತನ್ನ ನೆತ್ತಿಯಲ್ಲಿಟ್ಟು ಬೆನ್ನಿಲಿ ಸಿಂಗಾನ ಕಟ್ಟಿ 11 ಗದ್ಯ : ಸುಗುಣಾಂಗಿಯರು ಪೇಳಲು ಮುದದಿಂದ ರುಕುಮಿಣಿದೇವಿ ತಾನೂ ಮುಗುಳು ನಗೆಯಂ ನಗುತ ಕೊರವಂಜಿಯನೆ ಅತಿಬೇಗ ಜಗವರಿಯೆ ಕರೆಯೆಂದಳು. ಶ್ರೀ ರುಗ್ಮಿಣಿ ತಾ ಬಂದಳು ಸ್ತ್ರೀಯರ ಕೂಡಿ ಚಾರುಹಾಸದಿಂದೊಪ್ಪುತ ಚೆಲ್ವ ದಿವ್ಯ ನೋಟಂಗಳಿಂದ ರಾಜಿಪ ಕಂಕಣದಿಂದ ರಮ್ಯ ನೂಪುರಗಳಿಂದ ರಾಜಚಿಹ್ನೆಗಳಿಂದ ರಾಜೀವನೇತ್ರೆ ಒಲವುತ್ತ12 ರಾಜಾಧಿರಾಜ[ರು]ಗಳಿಂದ ರಾಜಸಭೆಯಲ್ಲಿ ಪೂಜಿತಳಾದ ರಾಜಹಂಸಗ-ಮನೆಯು ಬರಲು ರಂಜಿತಳಾಗಿ ಒಲೆವುತ್ತ ಗದ್ಯ : ಆಗಲಾ ದೂತಿಕೆಯರು ಕೊರವಂಜಿಯನೆ ಅತಿ ಬೇಗ ಕರೆಯಲು ಬೇಕಾದ ವಜ್ರವೈಢೂರ್ಯ ರಾಗವಿಲಸಿತವಾದ ದ್ವಾರ ಭೂಭಾರದಿಂದೆಸೆವ ಭಾಗಧೇಯದಿಂ ರಾಜ ಸತ್ಕುಲವಾದ ದಿವ್ಯ ಮಂದಿರಕೆ ತ್ಯಾಗಿ ರುಕುಮಿದೇವಿ ನೋಡಲಾ ಶ್ರೀ- ರಾಗದಿಂ ಗಾನವಂ ಪಾಡುತ್ತ ಕೊರವಂಜಿಯು ಬಂದ ಚೆಂದ13 ಬಂದಾಳಂದದಲಿ ಬಾಗಿಲೊಳಗೆ ದಿಂಧಿಮಿಕೆನ್ನುತ 14 ಚೆಲುವ ತುರುಬಿನಿಂದಲಿ ಜಗುಳುವ ಚಲಿಸುವ ಪುಷ್ಪದಂದದಿ ನಲಿನಲಿ ನಲಿದಾಡುತ್ತ ಮಲ್ಲಿಗೆ ಝಲಝಲಝಲ ಝಲ್ಲೆಂದು ಉದುರುತ್ತ ಕಿಲಿಕಿಲಿ ಕಿಲಿ ಕಿಲಿ ಕಿಲಿಯೆಂದು ನಗುತ್ತ 15 ಗದ್ಯ :ಥಳಥಳನೆ ಹೊಳೆವುತ್ತ ನಿಗಿನಿಗೀ ಮಿಂಚುತ್ತ ರನ್ನದ ಬುಟ್ಟಿಯ ಕೊಂಕಳಲಿಟ್ಟು ಧಿಗಿಧಿಗಿಯೆಂದು ನೃತ್ಯವನ್ನಾಡುತ್ತ ಎತ್ತರದಲಿ ಪ್ರತಿಫಲಿಸುವ ಮುತ್ತಿನಹಾರ ಉರದೊಳಲ್ಲಾಡುತ ನಿಜಭಾಜ ಮಾರ್ತಾಂಡ ಮಂಡಲ ಮಂಡಿತಾ ಪ್ರಭು ಪ್ರತಿಮ ದಿಶದಿಶ ವಿಲಸಿತವಾದ ಭುಜಕೀರ್ತಿಯಿಂದೊಪ್ಪುವ ಆಕರ್ಣಾಂತ ಸುಂದರ ಇಂದೀವರದಳಾಯತ ನಯನ ನೋಟಗಳಿಂದ ಚಂಚಲಿಸುವÀ ಮಿಂಚಿನಂತೆ ಮಿಂಚುವ ಕಾಂತೀ ಸಂಚಯಾಂಚಿತ ಕಾಂಚನೋದ್ದಾಮ ಕಾಂಚೀ ಪೀತಾಂಬರಾವಲಂಬನಾಲಂಬಿತಾ ನಿತಂಬದಿಂದೊಪ್ಪುವ ಝೇಂಕರಿಸುವ ಭೃಂಗಾಂಗನಾಸ್ವಾದಿತ ಜಗುಳುವ ಜುಗುಳಿಸುವ ಪರಿಮಳಿಸುವ ಜಘನ ಪ್ರದೇಶಗಳಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತ ನಿತಾಂತಕಾಂತಿಕಾಂತಾ ಸುಧಾಕುಂತಳ ಸಂತತಭರದಿಂದೊಪ್ಪುವ ಪುಂಜೀಕೃತ ಮಂಜುಭಾಷಣ ಅಪರಂಜಿ ಬಳ್ಳಿಯಂತೆ ಮನೋರಂಜಿತಳಾದ ಕೊರವಂಜಿಯು ನಿಶ್ಶಂಕೆಯಿಂದ ಕಂಕಣಕ್ಷಣತೆಯಿಂದ ಕೊಂಕಳ ಬುಟ್ಟಿಯ ಪೊಂಕವಾಗಿ ತನ್ನಂಕದಲ್ಲಿಟ್ಟುಕೊಂಡು ಬೆನ್ನಸಿಂಗನ ಮುಂದಿಟ್ಟು ಚೆಂದವಾಗಿ ರುಕುಮಿಣಿ ದೇವಿಯ ಕೊಂಡಾಡಿದಳು. ಗದ್ಯ :ಅವ್ವವ್ವ ಏಯವ್ವ ಕೈಯ್ಯ ತಾರೆ ಕೈಯ್ಯ ತೋರೆ ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡ್ಹಾಗೆ ಪೇಳುವೆನವ್ವಾ. ಶಿಖಾಮಣಿ ಏನೇ ರುಕುಮಿಣಿ ನಿನ್ನ ಚೆಲುವಿಕೆಯನೇನೆಂತು ಬಣ್ಣಿಪೆ. ಮದನ ಶುಭ ಅಮಿತ ರಸಶೃಂಗಾರದಿಂದೊಪ್ಪುವ ನಿನ್ನ ಕೀರ್ತಿಯ ಕೇಳಿ ಬಂದೆನಮ್ಮಾ ಅಂಗ ವಂಗ ಕಳಿಂಗ ಕಾಶ್ಮೀರ ಕಾಂಭೋಜ ಸಿಂಧೂ ದೇಶವನೆಲ್ಲ ತಿರುಗಿ ಬಂದೆನಮ್ಮಾ 16 ಮಾಳವ ಸೌರಾಷ್ಟ್ರ ಮಗಧ ಬಾಹ್ಲೀಕಾದಿ ಚೋಳ ಮಂಡಲವನೆಲ್ಲ ಚರಿಸಿ ಬಂದೆನಮ್ಮಾ17 ಲಾಟ ಮರಾಟ ಕರ್ಣಾಟ ಸೌಮೀರಾದಿ ಅಶೇಷ ಭೂಮಿಯ ನಾನು ನೋಡಿ ಬಂದೆನಮ್ಮಾ 18 ಮಾಯಾ ಕಾಶೀ ಕಾಂಚಿ ಅವಂತಿಕಾಪುರೀ ದ್ವಾರಾವತೀ ಚೇದಿ|| ಮೆಚ್ಚಿ ಬಂದ ಕೊರವಿ ನಾನಮ್ಮ ಪುರಗಳಿಗೆ ಹೋಗಿ ನರಪತಿಗಳಿಗೆ ಸಾರಿ ಬರÀ ಹೇಳಿ ನಾ ಕಪ್ಪವ ತಂದೆ 19 ಸತ್ಯಮುಗಾ ಚೆಪ್ಪುತಾನಮ್ಮಾ ಸಂತೋಷಮುಗಾ ವಿನುವಮ್ಮ ಸತ್ಯ ಹರುಶ್ಚಂದ್ರನಿಕಿ ಚಾಲ ಚೆಪ್ಪಿತಿ 20 ಕನ್ನೆ ವಿನವೆ ನಾ ಮಾಟ ನಿನ್ನ ಕಾಲಂನೆ ನೇನಿಕ್ಕು(?) ಚಿನ್ನ ಸಿಂಗಾನೀ ತೋಡೂನೆ ಚೆಪ್ಪ್ಪೆಗಮ್ಮಾನೇ 21 ಗದ್ಯ :ಆಗ ರುಕುಮಿಣಿದೇವಿಯು ಚಿತ್ರವಿಚಿತ್ರ ಚಿತ್ತಾರ ಪ್ರತಿಮೋಲ್ಲಸಿತ ತಪ್ತ ರಜತರಂಜಿತಸ್ಫಟಿಕ ಮಣಿಗಣ ಪ್ರಚುರ ತಟಿಕ್ಕೋಟಿ ಜ್ವಾಲಾವಿಲಸಿತವಾದ ವಜ್ರಪೀಠದಲಿ ಕುಳಿತು ಚಿನ್ನದ ಮೊರಗಳಲ್ಲಿ ರನ್ನಗಳ ತಂದಿಟ್ಟುಕೊಂಡು ಕೊರವಂಜಿಯನೆ ಕುರಿತು ಒಂದು ಮಾತನಾಡಿದಳು. ವೊಲಿಸೀನ ಸೊಲ್ಮೂಲೆಲ್ಲ ವನಿತೆನೆ ನಿಂತೂ(?) 22 ಗದ್ಯ : ಆಗ ರುಕುಮಿಣಿದೇವಿಯಾಡಿದ ಮಾತ ಕೇಳಿ ಕೊರವಂಜಿಯುಯೇ-ನೆಂತೆಂದಳು. ನೆನೆಸಿಕೊ ನಿನ್ನಭೀಷ್ಟವ ಎಲೆ ದುಂಡೀ ನೆನೆಸಿಕೊ ವನಿತೆ ಶಿರೋಮಣಿಯೆ ಘನಮುದದಿಂದ ನೆನೆಸಿಕೊ 23 ರನ್ನೆ ಗುಣಸಂಪನ್ನೆ ಮೋಹನ್ನೆ ಚೆನ್ನಾಗಿ ಮುರುಹಿಯ ಮಾಡಿ ನೆನೆಸಿಕೊ 24 ಮಾಧವ ಸೇತುಮಾಧವ ವೀರರಾಘವ ಚಿದಂಬರೇಶ್ವರ ಅರುಣಾಚÀಲೇಶ್ವರ ಪಂಚನದೇಶ್ವರ ಶ್ರೀಮುಷ್ಣೇಶ್ವÀÀರ ಉಡುಪಿನ ಕೃಷ್ಣ ಮನ್ನಾರು ಕೃಷ್ಣ ಸೋದೆ ತ್ರಿವಿಕ್ರಮ ಬೇಲೂರು ಚೆನ್ನಪ್ರಸನ್ನ ವೆಂಕಟೇಶ್ವರ ಸೂರ್ಯನಾರಾಯಣ ಇವು ಮೊದಲಾದ ದೇವತೆಗಳೆಲ್ಲ ಎನ್ನ ವಾಕ್ಯದಲಿದ್ದು ಚೆನ್ನಾಗಿ ಸಹಕಾರಿಗಳಾಗಿ ಬಂದು ಪೇಳಿರಯ್ಯಾ ಮಂಗಳದ ಕೈಯ್ಯ ತೋರೇ ಎಲೆದುಂಡೀ ಕೈಯ ತೋರೆ ಕೈಯ ತೋರೆ 25 ಕೇಳೆ ರನ್ನಳೆ ಎನ್ನ ಮಾತ ಬೇಗ ಇಳೆಯರಸನಾದನು ಪ್ರಿಯ26 ಕಳಸಕುಚಯುಗಳೆ ಚಿಂತೆ ಬೇಡ ನಿನ್ನ ಕರೆದಿಂದು ಕೂಡ್ಯಾನು ರಂಗ 27 ನಾಡಿನೊಳಧಿಕನಾದ ನಾರಾಯಣನ ಪತಿ ನೀನು ಮಾಡಿ ಕೊಂಡೆನೆಂದು ಮನದಲ್ಲಿ ನೆನಸಿದೆ ಕಂಡ್ಯಾ ನಮ್ಮ ಕೃಷ್ಣ ಕುತೂಹಲದಿ 28 ಸುಂದರಶ್ಯಾಮ ಅಲ್ಲಿ ನÀಂದಾ ನಂದಾನಾಡುವಾನಂದಮುಗಾವಚ್ಚಿ ಕೂಡೇನಮ್ಮಾ 29 ಶಂಖಚಕ್ರಯುಗಲ ಪಂಕಜನಾಭುಂಡು ಪಂಕಜಮುಖೀ ನೀವು ಪ್ರಾಣಿಗ್ರಹಣಮು ಚೇಸಿ ಕೂಡೆನಮ್ಮಾ 30 ಚೆಲುವಾ ನಾ ಮಾಟಾ ನೀಕು ಪುಚ್ಚಾ ಚೆಲುವಾ ನಾ ಮಾಟ ಕಲ್ಲಗಾದು ನಾ ಕಣ್ಣೂಲಾನೂ ಪಿಲ್ಲ ವಿನುವಮ್ಮ ಪಲ್ಲವಪಾಣೀ ಚೆಲುವಾ ನಾ ಮಾಟ31 ದಮಯಂತೀಕೀನೇ ಚೆಪ್ಪಿತಿ ನಮ್ಮವೆ ಮಾಟ ಅಮರುಲಕೆಲ್ಲಾ ಅನುಮೈನವಾಡು ಚೆಪ್ಪೀ ಅಮಿತ ಬಹುಮಾನಾಮಂದೀತೀನಮ್ಮಾ ಚೆಲುವ ನಾ ಮಾಟ ಚೆಲುವ 32 ಬಂತೆ ಮನಸಿಗೆ ನಾ ಹೇಳಿದ್ದು ಚಿಂತೆ ಸಂತೋಷದಿ ನಾನಾಡಿದ ಶಾಂತ ಮಾತೆಲ್ಲ ಇದು ಪುಸಿಗಳಲ್ಲ ಬೇಗ ಬಂದಾನೋ ನಲ್ಲಾ ಆಹಾ ಆಹಾ ಬಂತೇ ಮನಸ್ಸಿಗೆ
--------------
ವಾದಿರಾಜ
ನಾರಾಯಣ ಕೃಷ್ಣ ಬೆಳಗಾಯಿತೇಳಯ್ಯ ಮೂರು ಲೋಕಂಗಳಿಗೆ ಮಂಗಳವ ಬೀರಯ್ಯ ಪ ಹರಿಹರಿ ಶ್ರೀನಿಲಯ ಪರವಾಸುದೇವ ಅ.ಪ ಬಂದಿರುವರೈ ಬ್ರಹ್ಮ ರುದ್ರೇಂದ್ರರು ತಂದೆ ತಂದಿರುವರೈ ಮಹನಿಧಿ ಕನಡಿ ಧೇನುಗಳ ನಿಂದು ಗಾನವಮಾಡುತಿರುವರಾನಂದದಿ ಗಂಧರ್ವರಪ್ಸರೆಯರಿಂದು ಕುಣಿದಾಡಿ ಕೂಡಿ 1 ದಾಸರೊಡೆ ತುಂಬುರರು ನಾರದರು ಜಯಜಯ ಶ್ರೀಶನೇ ಕೇಶವ ಗಜವರದ ಎಂದು ಆಶ್ರಯಿಸಿ ಚರಣಕ್ಕೆ ಶರಣೆಂದು ಮಣಿಯವರು ದೋಷನಾಶನ ಲೋಕಕಲ್ಯಾಣ ತ್ರಾಣ 2 ಪತಿವ್ರತಾ ಸ್ತ್ರೀಯರುಗಳತಿಶಯ ಮಡಿಯುಟ್ಟು ಹಿತವಾದ ಹುಗ್ಗಿ ಸಜ್ಜಿಗೆಯ ಗೈದು ಪತಿತಪಾವನ ನಿನಗೆ ದಧ್ಯನ್ನ ನೀಡುವರೊ ಕ್ಷಿತಿನಾಥ ನೀನವನು ತೋಷದಿಂ ಭುಜಿಸೊ 3 ರೋಗರುಜಿನಗಳಳಿದು ಆಯುವೃದ್ಧಿಯದಾಗಿ ಭಾಗವತ ಸಕುಟುಂಬ ಸಂತೋಷಗೂಡಿ ಭಾಗವತ ಭಾರತ ರಾಮಾಯಣಗಳ ಹಾಡಿ ಆಗಲೈ ಆಗಮಾರ್ಚನೆ ಆಲಯಗಳೊಳಗೆ 4 ಕಮಲಲೋಚನ ಕೆಟ್ಟ ಸ್ವಪ್ನ ಫಲವಳಿಸಿ ಯಮಕಂಟವಂ ಕಳೆದು ಭ್ರಮೆಗಳನು ನೀಗಿ ಸುಮನಸರ ಕೂಡಿ ಶ್ರೀಹರಿಯ ಗುಣಗಾನ ಮಾಡಿ ಅಮಿತ ಅಮೃತವುಣಿಸೈ 5 ಕ್ಷುಧ್ರಪಾಕೀ-ಚೀನ ಕೊಬ್ಬಿ ಛದ್ರಿಸುತು ಭದ್ರತೆಯನಾಡೊಳಗಸ್ಥಿರತೆಗೈಯುತ್ತ ಆದ್ರಿಅಂಬುಧಿ ಮಧ್ಯೆ ಭಾರತಿಯ ನಲಿಸುತ್ತ ಮುದ್ರೆಯುಂ ಧ್ವಜವನುಂ ನಿನ್ನವಾಗಿರಿಸೈ 6 ಕಾಲಕಾಲಗಳಲ್ಲಿ ಮಳೆಬಿಡದೆ ಸುರಿದು ಶಾಲಿಸಂತರ ಧಾನ್ಯ ಎಲ್ಲೆಲ್ಲು ಬೆಳೆದು ಮಹಿಷಿ ಶ್ರೀಲೋಲ ಕರುಣಿಸೈ ಕನಕವೃಷ್ಟಿಯನು 7 ಎದುರು ನೋಡುತ ನದಿಯು ಹರಿವುದು ಸಾಗರಕೆ ಮುದದಿಂದ ತಾವರೆಯು ಸೂರ್ಯನನ್ನು ವಿಧಿವಶದಿ ಪಾಪಿಗಳು ಯಮಲೋಕವನ್ನು ಸುಧೆಸವಿಯೆ ಭಕ್ತರು ಪರಮಪದವನ್ನು 8 ಮಕ್ಕಳಿಲ್ಲದ ಜನರು ಮಕ್ಕಳನು ಹಡೆದು ಲಕ್ಷ್ಮಿಯೊಲವನು ಹಾಡಿ ಜನರೆಲ್ಲ ದುಡಿದು ಭಕ್ತರಾಗುತ ಸರ್ವ ವಣಿಗೆಗಳು ನಡೆದು ಮುಕ್ತರಪ್ಪಂತೆಲ್ಲರ ಮಾಡು ಜಾಜೀಶ 9
--------------
ಶಾಮಶರ್ಮರು
ನಾರಾಯಣ ನರಹರಿ ಪರಬ್ರಹ್ಮನಿರ್ವಿಕಾರಿ ಪ ದ್ರುಕ್ ದೃಶ್ಯ ಮಧ್ಯದಲ್ಲಿ ಚೊಕ್ಕಟ್ಟಾಗಿರುವನಲ್ಲಿ ಪ್ರಕಟವಾಗಿ ತ್ರಿಕೊಟ ನಿಜ ಸ್ಥಾನದಲ್ಲಿ ತೋರುವನಲ್ಲಿ 1 ಏನೊಂದು ತಿಳಿಯದದನೆ ತಾನೆಂದು ತಿಳಿಯಲವನೆ ಧ್ಯಾನದರುವಿನಲ್ಲಿ ಮನ ತಾನೆ ಚಿನ್ಮೂರ್ತಿ ಘನ 2 ತನುವಿನೊಳ ಹೊರಗಿರ್ಪ ತನ್ನ ತಾನೆ ಕಾಣುತಿರ್ಪ ಮೂರ್ತಿ 3 ಅಂತರಾತ್ಮ ಗುರು ಪೂರ್ಣನಂತ ಮಹಿಮ ನಾರಾಯಣ ಸಂತ ಸಾಧು ಸಾಧ್ಯ ಜ್ಞಾನ ಶಾಂತಿ ಪಾಲಿಪ ಘನ 4
--------------
ಶಾಂತಿಬಾಯಿ
ನಾರಾಯಣ ನಿನ್ನ ಚರಣ ಸೇವೆಯ ಬಿಟ್ಟು ಸಾರಸಾಕ್ಷನೆ ಪ್ರಾಣದಿರಲಾರೆ ಕ್ಷಣವೂ ಪ ದಾರಿಯೆನಗಿದೊಂದೇ ತೊರ್ಪದು ಸುಖನಿಧಿ ಬಾರಿಬಾರಿಗೂ ಹರಿ ದ್ಯಾನಾನಂದದೊಳಿಗೆ ಅ.ಪ ಅನ್ನವಸ್ತ್ರಂಗಳಿಗಾಗಿ ದುಡಿವದೊಂದು ಚೆನ್ನ ಪುತ್ರರ ರಕ್ಷಣೆಯೊಂದೆಡೆ ತನ್ನ ಮರ್ಯಾದೆ ಕುಂದುಗಳೆಂಬೊ ವ್ಯಸನದಿ ಭಿನ್ನಿಸಿ ತಾಪತ್ರಯ ಪಡುತಿರುವಿಲ್ಲಿ 1 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಪ್ರೇಮ ಬಾಂಧವರಾಗೆನ್ನನಪ್ಪಿಹರೋ ಸ್ವಾಮಿ ನೀಯೆನ್ನನವರ ಧಾಳಿಗಿಡದಂತೆ ಸಾಮಜವರದ ಸಲಹೆಂದು ಸಂತೋಷದಿ 2 ಭಾಗೀರತಿಪಿತ ಭಾಗವತಪ್ರೀತ ಯೋಗಿಜನಂಗಳೊಳತಿ ಹಿತನೇ ಸಾಗರಶಯನನೆ ಭೋಗಿಗಳ ಪುಣ್ಯನೆ ಬಾಗುವ ಶರಣರ ಬಹುಭಾಗ್ಯನೇ 3 ನಾನಿಲ್ಲಿಗೆ ಬಂದ ಕಾರಣ ಕಾಣೆನೋ ದೀನಪಾಲಕ ಕಾರ್ಯಮಾಡಿಸೋಯನ್ನಿಂ ಏನಾದರು ಮಾಡು ತಪ್ಪಹೊರಿಸಬೇಡ ಶ್ರೀನಿಧಿ ಹೆಜ್ಜಾಜಿಕೇಶವ ಪಾಲಿಸು 4
--------------
ಶಾಮಶರ್ಮರು
ನಾರಾಯಣ ನಿನ್ನ ಸ್ಮರಣೆಯಲಿ ಮನ ಬೇರು ವೂರಿರುವಂತೆ ಕಾರುಣ್ಯದಲಿ ಕಾಯೊ ಪ ವೇದನಾಲ್ಕರ ಕದ್ದಂಥಾ ದೈತ್ಯನ ಕೊಲ್ವಾ ಶದಿ ಮತ್ಯಾವತಾರ ಧರಿಸಿದೆ ಹರಿಯೇ 1 ಮಂದರ ಪೊತ್ತೆ ಭಾವಕಿಯಳ ಮೋಹಿಸಿ ಮೋಹಿನಿಯಾದೆ 2 ವರಹರೂಪದಿ ಪೋಗಿ ಧರೆಯನು ಧರಿಸಿದೆ ದುರುಳ ಹಿರಣ್ಯಕನಕರದಿಂದ ಸೀಳಿದೆ 3 ಕಂದನ ನುಡಿಕೇಳಿ ಕಂಬದಿಂದುದಿಸಿದೆ ತಂದೆಯ ಬಗೆದವನಾ ಛಂದದಿ ಸಲಹಿದೆ 4 ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ತುಳಿದು ಆತನ ಮನೆ ಬಾಗಿಲ ಕಾಯ್ದೆಯೊ 5 ತಾತನ ಮಾತನು ಕೇಳಿ ಮಾತೆಯ ಕೊಂದೆ ಖ್ಯಾತಿಯಿಂದಲಿ ಕ್ಷತ್ರಿಯರನು ಸಂಹರಿಸಿದೆ 6 ಮಾತೆಯ ವರ ಕೇಳಿ ನೀತಿಯಿಂದಲಿ ಪೋದೆ ಸೇತುವೆ ಕಟ್ಟಿ ನೀಖ್ಯಾತರಾವಣನಕೊಂದೆ 7 ಪುಟ್ಟ ಶಿಶುವಾಗಿ ಗೋಪಿಗೆ ಮುದ್ದು ತೋರಿದೆ ಬೊಟ್ಟಿಲಿ ಗಿರಿಯನು ನೆಗಹಿದೆ ಶ್ರೀ ಕೃಷ್ಣಾ 8 ತ್ರಿಪುರರ ಸತಿಯರ ವ್ರತವಗೆಡಿಸುವಂಥಾ ಅಪರಿಮಿತದಿ ಮೋಹಿಸುವಾ ಮೂರ್ತಿಯಾದೆ 9 ಭಕ್ತವತ್ಸಲ ದೇವಾ ಯುಕ್ತಿಯಿಂದಲಿ ಕಾಯ್ವ ವ್ಯಕ್ತಿ ಕಲ್ಕ್ಯಾವತಾರ ಧರಿಸಿದ ಹರಿಯೇ 10 ಶಬ್ದವ ನುಡಿಸುವ ಅಬ್ದಿನಿನ್ನದೊ ದೇವಾ ಶಬ್ದವಾಲಿಸದ ನಿಶ್ಯಬ್ದದೊಳಿರಿಸೆನ್ನಾ 11 ಅಂತರದೊಳಗೆನ್ನಾ ಕಂತುನಾರಾಯಣಾ ಸಂತಸದೊಳು ನಿಜ ಶಾಂತಿ ಪಾಲಿಪ ಗುರು 12
--------------
ಶಾಂತಿಬಾಯಿ
ನಾರಾಯಣನ ನೆನೆ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದಲರ್ಚಿಸಿ ಮೆಚ್ಚಿಸಿ ವೇದಪಾರಾಯಣಪ್ರಿಯನÀ ಪ. ಅವನ ಶ್ರವಣ ಮನನ ನಿಧಿಧ್ಯಾಸನಶ್ರೀವಿಷ್ಣುವಿನ ಭಕ್ತಿಮಹಾಪ್ರಸಾದಂಗಳುಕೈವಲ್ಯ ಪದಕಿಕ್ಕಿದ ನಿಚ್ಚಣಿಕೆ ಎಂದು ಭಾವಜ್ಞರು ಪೇಳ್ವರೊಜೀವನ ಜವನಬಾಧೆಯ ತಪ್ಪಿಸಿಪಾವನ ವೈಕುಂಠಪುರದೊಳಗೆಂದೆಂದುಆವಾಸವನು ಮಾಡಿ ಸುಖಿಸಬೇಕಾದರೆ ಸೇವಿಸು ವೈಷ್ಣವರ 1 ಲೋಕದಿ ವರಂ ವರಯ ಭದ್ರಂತೆಋತೆ ಕೈವಲ್ಯಮಾತ್ಮನಃಏಕಮೇವೇಶ್ವÀರಸ್ತ ಸಾದ್ಭಗವಾನ್ ವಿಷ್ಣುರವ್ಯಯ ಎಂಬಾಈ ಕಲಿಯುಗದಲಿ ಬೇಕಾದ ಪುರಾಣಾದಿವಾಕುವಿವೇಕವ ಮನದಿ ವಿಚಾರಿಸಿಸ್ವೀಕರಿಸು ವೈಷ್ಣವ ಮತವ ಜೀವ ನಿರಾಕರಿಸನ್ಯಮತವ 2 ದ್ವಾರಾವತಿಯ ಗೋಪಿಚಂದನದಿಂದಶ್ರೀರÀಮಣನ ವರ ನಾಮವ ನೆನೆ-ದೆರಡಾರೂಧ್ರ್ವ ಪುಂಡ್ರಗಳ ಧರಿಸೆಂದೆಂದು ವೀರವೈಷ್ಣವಗುರುವಸೇರಿ ಸಂತಪ್ತ ಸುದರುಶನ ಶಂಖಧಾರಣವನು ಭುಜಯುಗದಲಿ ಮಾಡಿಮುರಾರಿಯ ಮಂತ್ರಗಳವರಿಂದ ಕೇಳುತ ಓರಂತೆ ಜಪಿಸುತ್ತಿರು 3 ಹರಿ ನಿರ್ಮಾಲ್ಯವ ಶಿರದಿ ಧರಿಸುತಿರುಹರಿ ನೈವೇದ್ಯವನೆ ಭುಂಜಿಸುತಿರುಇರುಳು ಹಗಲು ಹರಿಸ್ಮರಣೆಯ ಬಿಡದಿರು ದುರುಳರ ಕೂಡದಿರೊಹರಿಪದ ತೀರ್ಥದ ನೇಮವಬಿಡದಿರುಹರಿಪರದೇವತೆ ಎಂದರುಪುತಲಿರುಗುರುಮುಖದಿಂದ ಸಚ್ಛಾಸ್ತ್ರ ಪುರಾಣವ ನಿರುತದಿ ಕೇಳು 4 ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆಅಷ್ಟಿಷ್ಟೆನ್ನದೆ ಸಕಲೇಷ್ಟಂಗಳಕೊಟ್ಟುಕಾಯ್ವನು ಶಕ್ರನಿಗೆ ತ್ರಿವಿಷ್ಟಪಪಟ್ಟವ ಕಟ್ಟಿದವದುಷ್ಟರನೊಲ್ಲ ವಿಶಿಷ್ಟರಿಗೊಲಿವ ಅ-ನಿಷ್ಟವ ತರಿದೊಟ್ಟುವ ಜಗಜಟ್ಟಿ ಅರಿಷ್ಟಮುಷ್ಟಿಕಾದ್ಯರÀ ಹುಡಿಗುಟ್ಟಿದ ವಿಠಲ ಬಹು ದಿಟ್ಟ 5 ಕಂದ ಬಾಯೆಂದರೆ ನಂದನಿಗೊಲಿದಿಹಕುಂದುಕೊರತೆ ಬಂದರೆ ನೊಂದುಕೊಳನುಇಂದಿರೆಯರಸ ಮುಕುಂದ ಮುಕುತಿಯ ನಂದನವನೀವ ದೇವಸಂದೇಹವಿಲ್ಲದೆ ಒಂದೆಮನದಿ ಸ-ನಂದನಾದಿಗಳು ಭಜಿಸಲು ಒಲಿವ ಉ-ಪೇಂದ್ರನ ಶುಭಗುಣಸಾಂದ್ರನ ಯದುಕುಲಚಂದ್ರನ ವಂದಿಸಿರೊ 6 ಓಡುವ ಅಡಗುವ ದೇವರೆ ಬಲ್ಲರುಬಾಡುವ ಬೇಡುವ ಮುನಿಗಳೆ ಬಲ್ಲರುನೋಡುವ ಕೂಡುವ ಮುಕುತರೆ ಬಲ್ಲರೊಡನಾಡುವ ರಮೆ ಬಲ್ಲಳುಊಡುವ ಪಾಡುವ ಯಶೋದೆ ಬಲ್ಲಳುಕಾಡುವ ಖಳರ ಮರ್ದಿಸಿ ಹುಡಿಗುಟ್ಟಿದನಾಡೊಳು ಕೇಡುಗಳೆವ [ಕೃಷ್ಣನಿಗೀಡೆಂದಾಡದಿರು] 7 ಆವನ ಪಕ್ಷವದಕೆದುರಿಲ್ಲಆವನ ಕುಕ್ಷಿಯೊಳಕ್ಕು ಜಗತ್ರಯಆವನು ಶಿಕ್ಷಿಪ ರಕ್ಷಿಪನು ಮತ್ತಾವನು ಪಾವನನುಆವನ ಶಿಕ್ಷೆಯ ಮಿಕ್ಕವರಿಲ್ಲ ಕೇ-ಳಾವನುಪೇಕ್ಷೆ ಕುಲಕ್ಷಯವೆನಿಪುದುಆವನುರುಕ್ರಮ ವಿಕ್ರಮನೆನಿಸಿದ ದೇವನಿಗಾವನೆಣೆ 8 ಪತಿ ಆವನ ಚರಣಸೇವಕನಾದಸುರರೊಳಗೀ ಹಯವದನಗಿನ್ನಾರನು ಸರಿಯೆಂದುಸುರುವೆನೊ 9
--------------
ವಾದಿರಾಜ
ನಾರಾಯಣನಲ್ಲದಿಲ್ಲ ಜಗದಿ ಪ ನಾರಾಯಣನೆ ವಾರಿಶಾಯಿಯಾದ ಮೇಲೆ ವಾರಿಸಂಪರ್ಕವಿಲ್ಲದ ವಸ್ತುವುಂಟೆಅ.ಪ ತೃಣ ಲತೆ ತರು ವನಸ್ಪತಿ ಸಂತತಿಯೊಳೆಲ್ಲ ಗಣನೆಯಿಲ್ಲದ ಪ್ರಾಣಿವರ್ಗದೊಳೆಲ್ಲ ಅಣುಮಹತ್ತೆನಿಪ ಚರಾಚರಗಳೊಳೆಲ್ಲ ಅಣಗಿ ಪೋಷಿಪ ರಸ ವಾರಿಯಾದ ಮೇಲೆ 1 ಧರೆಯೊಳಗಡಗಿಹ ಧಾತುಜಾಲವ ಕರಗಿಸಿ ನೆರೆ ವನಸ್ಪತಿವರ್ಗಕೆ ಉಣಿಸನಿತ್ತು ಪರಿ ಧಾನ್ಯ ಫಲಂಗಳ ರಚಿಸುತ್ತ ಹರಹಿ ಲೋಕದೊಳೆಲ್ಲರನು ಪೋಷಿಪ ಪ್ರಭು 2 ಒಂದೇ ಸ್ಥಳದಲಿ ಮೊಳೆತು ಬೆಳೆವ ಬೀಜಕ್ಕೆಲ್ಲ ಒಂದೇ ವಾಸನೆ ಗುಣ ರುಚಿಗಳುಂಟೇ ಸಂದೇಹ ಬೇಡ ನಿರ್ಲಿಪ್ತ ತಾನವುಗಳ ಕುಂದಿಸದೆ ಗುಣ ಸ್ವಭಾವಗಳ ಪೋಷಿಸುವ 3 ಸರ್ವವಸ್ತುಗಳಲ್ಲು ಅಂತರ್ಯಾಮಿಯಾಗಿ ಸರ್ವ ಚರಾಚರಕೆ ನಿಯಾಮಕನಾಗಿ ಸರ್ವರೊಳಡಗಿ ಪೋಷಿಪ ಘನಪ್ರಭುವಾಗಿ ಸರ್ವರುತ್ಪತ್ತಿ ಸ್ಥಿತಿಗೆ ಕಾರಣನಹ 4 ಪರಮಪುರುಷ ತನ್ನನಂತ ಮಹಿಮೆಯೊಳು ಕಿರಿದೊಂದಂಶದಿ ವಾರಿರೂಪದೊಳಿಂತು ಸರುವ ಚರಾಚರದಿರುತಂತರ್ಗತನಾಗಿಪೊರೆವ ಜನವ ರಘುರಾಮವಿಠಲ ಪ್ರಭು 5
--------------
ರಘುರಾಮವಿಠಲದಾಸರು
ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ ವಾರಿಯನು ಧರಿಸುವ ನಾರಿ ಗೌರಿ ಕೌಮಾರಿಪ ಬಾಣ ಕುಂಭನೆಂಬೊ ದಾನವರೀರ್ವರು ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ ಕಮಲ ಗರ್ಭನವೊಲಿಸಿ ವೇಗದಲಿ ಏನು ವರ ಬೇಡೆನಲು ನಗುತಲವನು ಸುರಿದನು 1 ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ ಬಗಿಯದಂತೆ ವರವನು ಪಾಲಿಸೆನಲು ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ 2 ಚತುರ್ದಶ ಲೋಕವನು ಗೆದ್ದು ತ್ರಿದಶರಾ ಮಿತಿಯಿಲ್ಲದೆ ಮಾನಭಂಗ ಮಾಡಿ ಪತಿತರು ಈ ತೆರದಲಿರುತಿರಲು ವಿಬುಧರು ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ3 ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ ಖಳ ಕಂಸನೆಂಬುವನು ಪುಟ್ಟಿ ತನ್ನ ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ 4 ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು 5 ಇಂತು ಪೇಳಲಿ ಅಜನು ಸಂತೋಷದಿರಲಿತ್ತ ದಂತಿ ಗಮನಳು ಉದುಭವಿಸಿ ಬಂದು ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ ಅಂತಕರಾಗಿದ್ದ ಖೂಳರ ಸದೆ ಬಡಿದು 6 ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು ಪರಮ ಮುನಿ ಅಗಸ್ತ್ಯ ಪೂಜಿಸಿದನು ಶರರಾಜ ಬಂದು ಮದುವೆನೈದಲು ಪರಮೇಷ್ಠಿ ಹರನ ಸಹಿತಲಿ ನಡೆತಂದಾ 7 ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ ಮರಳೆನಿಂದರು ವರ ಸುಧೇಂದ್ರವೆಂಬೊ ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ8 ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ ಬಂದು ನವತೀರ್ಥದಲಿ ಯಾತ್ರೆ ಜನರು ಮಿಂದಾಗಲೆ ಮನದಂತೆ ಭಕುತಿಯನಿತ್ತು ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ9
--------------
ವಿಜಯದಾಸ
ನಾರಿಯರಲಿ ಮಾದರಿಯೆಂದೆನಿಸಿರಮ್ಮ ಮೂರುಕುಲಕೆ ಕೀರುತಿಯನು ತನ್ನಿರಮ್ಮ ಸೇರಿದ ಪತಿಮಂದಿರವನುದ್ಧರಿಸಿರಮ್ಮ ಬೇರೆ ಜನಕೆ ಸೋದರಿಯೆಂದರಿಯಿರಮ್ಮ ಅಬಲೆಯರಿರಬಹುದು ದೇಹ ಶಕುತಿಯಲಿ ಪ್ರಬಲಸ್ಥಾನ ನಿಮಗಿಹುದು ಸಮಾಜದಲ್ಲಿ ಶುಭಪರಂಪರೆಗಳ ಪತಿಗೆ ಕೋರಿರಮ್ಮ ಲಭಿಸುವುದತಿಸುಲಭದಿ ಪರಲೋಕವಮ್ಮ ಗೃಹಿಣಿಯೇ ಗೃಹವೆಂಬ ಮಾತನರಿಯಿರಮ್ಮ ಗಹನದ ಸಂಸಾರಪಥವ ಜರಿಯಬೇಡಿರಿ 10 ವಹಿಸಿರಿ ಗೃಹಕೃತ್ಯಗಳನು ಆದರದಲ್ಲಿ ಸಹಿಸಿರಿ ಸುಖದು:ಖಗಳನು ಖೇದವಿಲ್ಲದೆ ಶ್ರದ್ಧೆಯಿರಲಿ ಗೃಹಿಣಿಯ ಕಾರ್ಯದಲಿ ಸರ್ವದ ಸ್ಪರ್ಧೆಯ ಮಾಡಬೇಡಿ ಪುರುಷಗುಚಿತ ಕಾರ್ಯದಿ ತಿದ್ದಿರಮ್ಮ ವಿನಯದಿಂದ ಪತಿಯ ದೋಷವÀ ಹದ್ದಿನಂತೆ ಕಾಯಿರಮ್ಮ ಪತಿಯ ಶ್ರೇಯವ ದೈವದತ್ತವಿಹುದು ನಿಮ್ಮ ಮುಖದ ಕಾಂತಿಯು ಸೇರಿಸಿ ಫಲವೇನು ವಿವಿಧ ಸುಣ್ಣಬಣ್ಣವ ಹೂವುಗಳನು ಕಸಕಲದರ ಗಂಧವಿರುವುದೆ ಯಾವ ಕೃತಕ ಬೇಕಿದೆ ಸ್ವಭಾವ ಶೋಭೆಗೆ 20 ಅನುಗಾಲವು ಊರಿಗೆ ಉಪಕಾರಿಯಾದರು ಮನೆಗೆ ಮಾರಿಯಾಗಬೇಡಿರಮ್ಮ ಎಂದಿಗು ವಿನಯವಿರಲಿ ನಡೆನುಡಿಯಲಿ ಸರ್ವ ಜನರಲು ಪ್ರಣಯ ಸರಸ ಬೇಡಿರಮ್ಮ ಬಂಧು ಜನರಲಿ ದುಡಿದು ದಣಿದು ಉಶ್ಶೆನುತಲಿ ಬರುವ ಪತಿಯಲಿ ಕಿಡಿಕಿಡಿಯಾಗಲಿ ಬೇಡಿರಿ ತರಲು ಮರೆತರೆ ಬಡತನವಿರಬಹುದು ಸದ್ಯ ನಿಮ್ಮ ಪಾಲಿಗೆ ಅಡಿಗಡಿಗದನಾಡಬೇಡಿ ಒಡೆಯನೆದುರಲಿ ನೆರೆಮನೆ ವೆಂಕಮ್ಮನೊಂದು ಸೀರೆ ಕೊಂಡರೆ ಗುರು ಗುರುಗುಟ್ಟುತಲಿ ನೋಡಬೇಡಿ ಪತಿಯನು 30 ಮರುಕದಿ ಸಂತೈಸಲವನು ಮನವು ಕರಗದೆ ಸೆರೆಸೆರೆ ಕಣ್ಣೀರುಗಳನು ಸುರಿಸಬೇಡಿರಿ ತುಳಸಿಯ ಪೂಜೆಯನು ಮಾಡ ಮರೆಯಬೇಡಿರಿ ಕೆಲಸಗಳನು ದಿಟ್ಟತನದಿ ಮಾಡಿ ಮುಗಿಸಿರಿ ಕಲಿಯಿರಿ ಸಂಸಾರದಲಿ ನೆಪ್ಪು ನೇರವ ಹಳಿಯಬೇಡಿರಮ್ಮ ನೀವು ನೆರೆ ಹೊರೆ ಜನರ ಉಳಿಸಿ ಬಳಸಿರಮ್ಮ ತಂದ ಧಾನ್ಯವ ತಿಳಿಸಬೇಡಿ ಮನೆಯ ಗೋಪ್ಯ ಪರರಿಗೆಂದಿಗು ಕಾಲ ಕಳೆಯಬೇಡಿ ಕೆಲಸವಿದ್ದರೆ ಪ್ರಳಯ ಮಾಡಬೇಡಿ ಸಣ್ಣ ಪುಟ್ಟ ಮಾತಿಗೆ 40 ಸೊಟ್ಟ ಬೈತಲೆಯನು ತಗೆಯಲಿಷ್ಟಪಡದಿರಿ ಅಷ್ಟವಕ್ರದುಡುಪುಗಳನು ಧರಿಸಬೇಡಿರಿ ರಟ್ಟು ಮಾಡಬೇಡಿರಮ್ಮ ರೂಪು ರಚನೆಯ ಸಿಟ್ಟು ಮಾಡಬೇಡಿ ಮುದಿಯ ಬುದ್ಧಿವಾದಕೆ ಶ್ರವಣ ಮಾಡಿರಮ್ಮ ಹರಿಯ ಕಥೆಗಳನುದಿನ ಶ್ರವಣ ಮಾಡುವಾಗ ಹರಟೆ ನಿದ್ರೆ ಬೇಡವು ಕಿವಿಯ ಕಚ್ಚಬೇಡಿರಮ್ಮ ಪರರ ವಾಕ್ಯಕೆ ಲವಲವಿಕೆಯು ಬೇಡಿರಮ್ಮ ಚಾಡಿ ಚುದ್ರದಿ ರೂಢಿಯಿಲ್ಲದಿರುವ ನಡತೆ ಬೇಡಿರೆಂದಿಗು ಮೂಢರೆನಿಸಬೇಡಿ ಹಾಡುಹಸೆಯ ಕಲಿಯದೆ 50 ಪಾಡುಪಡುತ ಪತಿಗೆ ಹರುಷನೀಡಿ ಗೃಹದಲಿ ಪ್ರೌಢವಿದ್ಯೆ ಕಲಿತು ದುಡಿಯಬೇಡಿ ಪರರಿಗೆ ಬಣ್ಣವಿಲ್ಲದಿರುವುದು ಬಂಗಾರವಲ್ಲವು ಕಣ್ಣಿಗೆ ಹಿತವಲ್ಲದು ಶೃಂಗಾರವಲ್ಲವು ಉಣಲು ತಾ ದೊರೆಯದಿರಲು ಸಂಪತ್ತಲ್ಲವು ಅನ್ನ ಮಾಡಲರಿಯದಿರಲು ಹೆಣ್ಣದಲ್ಲವು ದುಂದುಗಾರಿಕೆಯನು ಕಲಿಯಬೇಡಿರೆಂದಿಗು ಮುಂದೆ ಕಾಲಚಕ್ರಗತಿಯನು ಮನದಿ ಯೋಚಿಸಿ ಬಂದ ಮಾತುಗಳನು ಬಾಯಿತಡೆದು ಆಡಿರಿ ನಂದಗೋಕುಲವನೆ ಮಾಡಿ ಗೃಹವ ನಗುತಲಿ 60 ಬಳಕೆಯಲ್ಲದಿರುವ ಕಲೆಯ ಕಲಿಯಬೇಡಿರಿ ಕಲಿಸಿರಮ್ಮ ಕೆಲಸಕಾರ್ಯ ಮಕ್ಕಳುಗಳಿಗೆ ಗಳಿಸಿರಮ್ಮ ಪುಣ್ಯಕೀರ್ತಿ ತಿಳಿಯಮನದಲಿ ಸುಲಭವು ಸಾಧನವು ನಿಮಗೆ ಪುಣ್ಯಲೋಕಕೆ ಮನವತಿ ಚಂಚಲತೆಯನ್ನು ಹೊಂದಬಿಡದಿರಿ ಅನುಮತಿ ಕೊಡಬೇಡಿ ದುಷ್ಟ ಜನರ ಬೋಧೆಗೆ ಘನಮತಿಯನು ಪೊಂದಿ ಸತಿಯ ಮಾರ್ಗ ತೋರಿರಿ ಗುಣವತಿಯೆಂದೆನಿಸಿರಮ್ಮ ಹಿರಿಯ ಜನರಲಿ ದುಡುಕಿನ ಹೆಣ್ಣೆಂದು ಹೆಸರು ಪಡೆಯಬೇಡಿರಿ ಸಿಡುಕಿನ ಮೋರೆಯನು ತೋರಬೇಡಿ ಜನರಿಗೆ 70 ಒಡಕಿನ ಬಾಯವಳು ಎಂದು ಎನಿಸಬೇಡಿರಿ ಕೆಡುಕ ಕೋರಬೇಡಿ ಕೋಪದಿಂದ ಪರರಿಗೆ ಧ್ವನಿಯು ಮಧುರವಿರಲಿ ನಿಮ್ಮ ಮಾತುಕಥೆಯಲಿ ಕೆಣಕಬೇಡಿ ಮರೆತುಬಿಟ್ಟ ಜಗಳ ಕದನವ ಇಣಕಿ ನೋಡಬೇಡಿ ಪರರ ನಡೆನುಡಿಗಳನು ಸಾರಥಿಯೆಂದೆನಿಸಿರಿ ಸಂಸಾರ ರಥದಲಿ ವೀರರಮಣಿಯೆಂಬ ದಿವ್ಯ ಕೀರುತಿ ಬರಲಿ ನಾರಿಯರಲಿ ಮಾದರಿಯನು ಪಡೆದು ತೋರಿದ ಭಾರತ ಭೂಮಾತೆಗೆ ಪ್ರತಿಬಿಂಬವೆನಿಸಿರಿ 80 ದೇಶಸೇವೆಯೆಂದು ರಾಜಕೀಯ ಬೇಡಿರಿ ಮೋಸ ಹೋಗಬೇಡಿ ಆಸೆ ತೋರುವ ನುಡಿಗೆ ಕಾಯ ಕ್ಲೇಶ ಬೇಡಿರಿ ಭಾಷಣ ಬಹಿರಂಗದಲ್ಲಿ ಭೂಷಣಲ್ಲವು ಸಿರಿರಮಣಗೆ ತುಳಸಿಗಿಂತ ಪುಷ್ಪವಿಲ್ಲವು ಹಿರಿಯತನಕೆ ಸತ್ಯಕ್ಕಿಂತ ಯುಕ್ತಿಯಿಲ್ಲವು ಅರಸಿ ನೋಡೆ ತಾಯಿಗಿಂತ ನಂಟರಿಲ್ಲವು ಕರಿಮಣಿ ಸಮ ನಾರಿಜನಕೆ ನಗಗಳಿಲ್ಲವು ದಾಸರ ನುಡಿ ಧರ್ಮಗಳ ಪ್ರಕಾಶ ಮಾಡಿತು ಸ್ತ್ರೀ ಸಮೂಹದಿಂದ ನಾಶವಾಗದುಳಿದವು 90 ಆ ಸುಧಾಮ ಸತಿಯರೆ ಈ ದೇಶದ ಸೊಬಗು ಮಾಸದಂತೆ ರಕ್ಷಿಸಿ ಪ್ರಾಚೀನ ನಡತೆಯ ನುಡಿಯಬೇಡಿರಮ್ಮ ಪರರ ವಂಚನೆನುಡಿಯ ಕೊಡಲಿ ಹಾಕಬೇಡಿರಮ್ಮ ಕುಳಿತ ಕೊಂಬೆಗೆ ಇಡಲಿಬೇಡಿ ಮತ್ಸರವನು ದೀರ್ಘ ಕಾಲದಿ ಪುಡಿಯನಿಡಲಿಬೇಡಿರಮ್ಮ ಪುಣ್ಯ ಕಾರ್ಯಕೆ ಸಣ್ಣನುಡಿಗಳೆಂದು ತಿಳಿಯಬೇಡಿರಿವುಗಳ ಭಿನ್ನ ಭಿನ್ನ ದೇಶಕಾಲದನುಭವಗಳಿದು ಬಣ್ಣವತಿಶಯೋಕ್ತಿಯಲ್ಲ ಅರಿತು ನೋಡಿರಿ ಘನ್ನ ಸುಗುಣಭರಿತ ಶ್ರೀ ಪ್ರಸನ್ನ ಸಲಹುವ 100
--------------
ವಿದ್ಯಾಪ್ರಸನ್ನತೀರ್ಥರು
ನಿಜ ವೈಷ್ಣವಾ ಅವನೇ ನಿಜ ವೈಷ್ಣವಾ ಪ ಇತರರ ದುಃಖವು ತನಗೆಂದರಿವಾಸತತದಿ ಸೇವೆಗೆ ತತಪರನಿರುವಾ 1 ತೊರೆದು ಹೆಮ್ಮೆಯಾ ಸರುವರು ನಮಿಸುವ ಪರರನು ಜರಿಯಾ ನಿರುಮಲನಿರುವಾ 2 ಧನ್ಯನವನು ತಾಯನ್ಯ ಸತಿಯರನುತನ್ನ ತಾಯಿಯೊಲು ಮನ್ನಿಸುತಿರುವಾ 3 ಸಟಿಯನು ನುಡಿಯಾ ಪರಧನವೆಡಿಯಾಕಟ್ಟಿಲಿ ಸಿಕ್ಕದೆ ಸಮಮನನೆನವ 4 ನಡೆನುಡಿಗಳಲಿ ಮಡಿಯಿಂದಿರುವಾದೃಢ ಮನದಿಂ ಬಹು ಶಾಂತಿಯಲಿರುವಾ 5 ಪ್ರತಿಪ್ರಾಣಿಯಲಿ ಹರಿಯನು ನೋಡುವಾಅತಿಶಯ ದಯವನು ತೋರುತಲಿರುವಾ 6 ಕಾಮಕ್ರೋಧಗಳ ಗಡ ಜೈಸಿರುವರಾಮನಾಮವ ನೇಮದಿ ಭಜಿಸುವ 7 ಗದುಗಿನ ವೀರನಾರಾಯಣನಹೃದಯದಿ ಸತತ ಮುದದಲಿ ಪಿಡಿವ 8
--------------
ವೀರನಾರಾಯಣ
ನಿಜದಿ ಸುಖಪದ ಕೊಡುವೆಯೋ ಭಜಕರಿಗೆ ಶುಭದಾಯಿಯೋ ಪ ತ್ರಿಜನ ಪೂಜೆಯಗೊಂಬೆಯೋ ಅಂ- ಗಜಜನಕ ಗೋಕಾಯ್ದೆಯೋ ಅ.ಪ ಸುತನಕೊಂದೇ ಸತಿಯ ತೊರೆದೇ ಅತಿಯ ದುಃಖವ ನಟಿಸಿದೇ ಸತತ ಸರ್ವವ್ಯಾಪಿಯೆಂಬರು ಹಿತನೆ ಕಾಣಿಸೆಯೆಲ್ಲಿಹೇ 1 ನಾರಿಯರ ಸೆರೆ ನೀಗಿಸೀ ಹದಿ ನಾರು ಸಾವಿರ ಸೇರ್ದೆಯೋ ಚೋರನೆನ್ನಿಸಿ ಸೀರೆಕದ್ದು ಮಾರಕನೆ ತಾಮಮೃತನೇ 2 ಕೂರ್ಮ ವರಾಹನೇ ನರ ಕೇಸರೀ ವಾಮನನು ನೀ ಹಸ್ತಪರಶು ಶ್ರೀ ರಾಮಕೃಷ್ಣನೆ ವಿಶ್ವ ಬುದ್ಧನೆ ಕಲ್ಕಿಯೇ 3 ಘೋರ ದೈತ್ಯ ವಿದಾರಿಯೋ ಹರಿ ಸಾರಿ ಹಲವವತಾರದಿಂ ತೋರಿದವ ನೀನಾದರೂ ಜಾ ಮಾಧವ ನಂಬಿದೇ 4
--------------
ಶಾಮಶರ್ಮರು
ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು