ಒಟ್ಟು 957 ಕಡೆಗಳಲ್ಲಿ , 98 ದಾಸರು , 740 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿಧನ್ಯನಾದೆನು ಧರೆಯೊಳು ||ಇನ್ನು ಈಭವಭಯಕೆ ಅಂಜಲೇತಕೆ ದೇವಚೆನ್ನ ಶ್ರೀ ವೆಂಕಟೇಶಾ ಈಶಾ ಪಏಸುಜನುಮದಸುಕೃತಫಲವು ಬಂದೊದಗಿತೋಈ ಸ್ವಾಮಿ ಪುಷ್ಕರಣಿಯೊಳ್ನಾ ಸ್ನಾನವನು ಮಾಡಿವರಾಹದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಸಿನಿಂದಲಿ ಪೊಗಳುತಆ ಸುವರ್ಣದ ಗರುಡ ಗಂಬವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ 1ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲುದಟ್ಟಣೆಯ ಮಹಾಜನದೊಳುಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂಗೆಟ್ಟು ಹರಿಹರಿಯೆನುತಲಿಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿಕಟ್ಟಂಜನಕೆ ಪೋಗುತಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆಸುಟ್ಟೆ ಎನ್ನಯ ದುರಿತವಾ-ದೇವಾ 2ಶಿರದಲಿ ರವಿಕೋಟಿ ತೇಜದಿಂದೆಸೆಯುವಕಿರೀಟವರಕುಂಡಲಗಳಕೊರಳಲ್ಲಿ ಸರವೈಜಯಂತಿವನಮಾಲೆಯನುಪರಿಪರಿಯ ಹಾರಗಳನುಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳವರನಾಭಿಮಾಣಿಕವನುನಿರುಪ ಮಣಿಖಚಿತಕಟಿಸೂತ್ರಪೀತಾಂಬರವಚರಣಯುಗದಂದುಗೆಯನು - ಇನ್ನು 3ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆಲಕ್ಷ್ಮೀಪತಿ ಕಮಲಾಕ್ಷನೆಅಕ್ಷತ್ರಯಅಜಸುರೇಂದ್ರಾದಿವಂದಿತನೆಸಾಕ್ಷಾಜ್ಜಗನ್ನಾಥನೇರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರಪೇಕ್ಷ ನಿತ್ಯತೃಪ್ತನೇಕುಕ್ಷಿಯೊಳಗಿರೇಳು ಭುವನವನು ಪಾಲಿಪನೆರಕ್ಷಿಸುವುದೊಳಿತು ದಯದಿ -ಮುದದಿ 4ಉರಗಗಿರಿಯರಸ ನಿನ್ನಚರಣನೋಡಿದ ಮೇಲೆಉರಗಕರಿವ್ಯಾಘ್ರ ಸಿಂಹಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದಪರಿಪರಿಯ ಭಯಗಳುಂಟೇಪರಮವಿಷಯಗಳ ಲಂಪಟದೊಳಗೆ ಸಿಲುಕಿಸದೆಕರುಣಿಸುವುದೊಳಿತು ದಯವಾಸ್ಮರಗಧಿಕ ಲಾವಣ್ಯಪುರಂದರವಿಠಲನೇಶರಣಜನ ಕರುಣಾರ್ಣವಾ ದೇವಾ 5
--------------
ಪುರಂದರದಾಸರು
ನಿರ್ವೈಷಮ್ಯ ಯಾಚನೆ ಸ್ತೋತ್ರ(ತ್ರಿವಿಕ್ರಮ ದೇವರ ಸ್ತೋತ್ರ)17ವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖ ವಂದ್ಯ ಕರಣ ಸೌಭಾಗ್ಯದನೆಬ್ರಹ್ಮಾಂಡ ಬಹಿರಂತ ವ್ರ್ಯಾಪ್ತ ಸರ್ವೇಶ ಪವಾಮನನು ವಿಶ್ವರೂಪ ಪ್ರಕಟಿಸಿ ದಾನ ವಸ್ತುಭೂಮಿ ದಿವಿಯ ಈರಡಿಯಲಿ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳ್ದ ಮಾಯಾಜಾಲವು ಅಲ್ಲವಿಷಮ ವಂಚನ ದೋಷಕಿಂಚಿತ್ತು ಇಲ್ಲ 1ಪ್ರಥಮವಾಗಿ ಶ್ರೀ ವಿಷ್ಣುರೂಪ ಒಂದೊಂದಲ್ಲೂಅನಂತರೂಪ ಬಲ ಸುಖಜ್ಞÕನಾದಿ ಪೂರ್ಣವಾಗಿಶಶ್ವಧೇಶ ಪ್ರಕಾರ ಇಹುದೆಂದು ಶಾಸ್ತ್ರ ಸಾರುತಿದೆಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವಇಚ್ಛೆಯಿಂ ಆಗಾಗ2ಅಣೋರಣೀಯಾನ್ ಮಹಿತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೆ ವ್ಯಕ್ತ ಮಾಡಿದನು ವಿಷ್ಣು ವ್ಯಾಪನ ಶೀಲಗುಣರೂಪಅಭಿನ್ನ ಅವ್ಯಯನು3ಮತ್ತು ಬಲಿರಾಜನಿಗೆ ಶುಕ್ರಾಚಾರ್ಯರುಮೊದಲೇವೆ ಹೇಳಿಹರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿಪರ್ವದ ಎರಡು ಪಾದದಿಂ ಅಳೆವನೆಂದು4ಈ ರೀತಿ ಬಲಿರಾಜ ದಾನ ಕೊಡುವ ಪೂರ್ವದಲೆಹರಿವ್ಯಾಪನ ಶೀಲ ಅವ್ಯಯನೆ ವಾಮನ ಎಂದುಅರಿತೇವೆ ಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರಿ ವಿಷಮ ವಂಚನೆಗೆ ಸಿಲುಕಿ ಅಲ್ಲ 5ಮೋಸಕ್ಕೆ ಓಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಶ್ರೀ ಶಾರ್ಪಣ ಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿಹರು ದೇವಗಾಯಕರು 6ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿ ನಾನೇನ ಕೃತಂ ಸುದುಷ್ಕರಂವಿದ್ವಾದದಾದ್ ಯದ್‍ರಿಪವೇ ಜಗತ್ರಯಂಏಕೋನವಿಂ ಶದ ಧ್ಯಾಯ ಶ್ಲೋಕ ಇಪ್ಪತ್ತು 7ಬಲಿರಾಜನೂ ರಾಣಿ ವಿಂದ್ಯಾವಳಿಯೂಅಲ್ಲಿ ಬಂದ ಪ್ರಹ್ಲಾದ ಮಹಾರಾಜನೂಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾನುಗ್ರಹ ಮಾಡ್ಡನೆಂದು ತಿಳಿದಿಹರು 8ಮಧ್ವಸ್ತ ಸರ್ವಸ್ಥ ಮಸ್ತ ವಿಧಿತಾತಜ್ಯೊತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುತ ಪ್ರಸನ್ನಶ್ರೀನಿವಾಸಮುದಜ್ಞಾನ ಧನ ಆಯುರ್ ಭಾಗ್ಯದನೆ ಶರಣು 9|| ಶ್ರೀ ಮಧ್ವೆಶಾರ್ಪಣಮಸ್ತುಃ ||
--------------
ಪ್ರಸನ್ನ ಶ್ರೀನಿವಾಸದಾಸರು
ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|ಗೋಕುಲಪತಿಗೋವಿಂದಯ್ಯಪನೋಡುವೆ ನಿನ್ನನು ಪಾಡುವೆ ಗುಣಗಳ |ಕಾಡುವೆ ಬೇಡುವೆ ನಾಡೊಳಗೆ ||ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |ಕಾಡೊಳು ತುರುಗಳ ಕಾಯ್ದರಸನೆಹರಿ1ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |ಗಂಟಿಗೆ ಮೋಸವೆ ದಾಸರಿಗೆ ||ಎಂಟುಂಟೆನಿಸುವೆ ಬಂಟರ ಬಾಯಲಿ |ತುಂಟತನವ ಬಿಡು ತುಡುಗರರಸೆ 2ಅಪ್ಪನೆ ಅಯ್ಯನೆ ಅಮರರಿಗೊಲಿದನೆ |ಸರ್ಪನೆ ಮೇಲೆ ಮಲಗಿಪ್ಪವನೆ |ಒಪ್ಪಿಸಿಕೊಟ್ಟರೆಪುರಂದರವಿಠಲನೆ |ಒಪ್ಪವ ತೋರುವೆ ಒಡೆಯನಿಗೆ 3
--------------
ಪುರಂದರದಾಸರು
ನೀನಲ್ಲದೆನಗಾರಿಲ್ಲ ಗೋವಿಂದನೀನಲ್ಲದೆ ಇಹಪರವಿಲ್ಲ ಪಪರರ ಬೇಡಿ ಪಂಥವಾಡಿ ಹೋಯಿತಲ್ಲನರರ ಕೊಂಡಾಡಿ ನಾಲಗೆ ಬರಡಾಯಿತಲ್ಲ ||ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾತಕದ ಪಂಜರಗೆ 1ತನುವು ತನ್ನದಲ್ಲ ತನ್ನವರು ತನಗಿಲ್ಲಧನಧಾನ್ಯ ಸಂಪತ್ತು ಅವಗಿರದು ||ತನುವು ಹೋಗಿ ಇನ್ನು ಮಣ್ಣು ಕೂಡುವಾಗತನುಮನಕ್ಕೆ - ಇನ್ನಾರಯ್ಯ ಸ್ವಾಮಿ 2ಮಾತಾಪಿತರು ಗೋತ್ರಜರು ಮೊದಲಾಗಿಪ್ರೀತಿಯಿಂದ ಬಹಳ ಸತಿಸುತರು ||ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂಗಾತಿಗಿನ್ನಾರಯ್ಯಪುರಂದರವಿಠಲ3
--------------
ಪುರಂದರದಾಸರು
ನೀನೆಗತಿಕೃಷ್ಣ ಎನಗೆ ನೀನೆಗತಿಕೃಷ್ಣಪ.ನೀನೆ ಗತಿಯೆಂದಾನತನಾಗಿಮಾನಾಪಮಾನವ ನಿನಗೊಪ್ಪಿಸಿದೆಜ್ಞಾನವಿಹೀನನ ಪಾವನ ಮಾಡಿಶ್ರೀನರಹರಿ ಕರುಣಿಸು ನಮ್ಮ್ಮಯ್ಯನೆ 1ತನುವಸ್ಥಿರ ಮನವತಿಚರ ಒದಗಿದಧನ ನಶ್ವರ ನಿನ್ನಯ ಪಾದಾಬ್ಜದನೆನವಿಗೆಯೊಂದನೆ ಕೊಡು ಕಡೆ ಮೊದಲಿಗೆಜನನವಸಾನದ ಬಳ್ಳಿಯ ಕಡಿಯಲು 2ಶರಣಾಗತ ಶರಣರ ಕರವಿಡಿವಬಿರುದಿನ ದೊರೆಗಿನ್ನನುಮಾನ್ಯಾಕೆಪರಮಪತಿತನ ಪೂತನ ಮಾಡ್ಯುದ್ಧರಿಸುವಸಿರಿಪ್ರಸನ್ನವೆಂಕಟಕೃಷ್ಣ3
--------------
ಪ್ರಸನ್ನವೆಂಕಟದಾಸರು
ನುತಿಪ ಸುಜನರಿಗೆ ದೊರೆವೋನು ಕರುಣಿ ಪಕ್ಷಿತಿಯೊಳಗೆಮಣಿಮಂತಮೊದಲಾದತುಳ ಮಹಿಮನ ಸತತ ಸ್ಮರಿಸುವೆ ಅ.ಪತನುಜಸಂಭವ ದೇವಿಕಾಯನೋಡಿದನುಜಕೌರವರ ಕೊಂದನು ಭೀಮರಾಯಅಣುಗನೆನಿಸುತ ಘನದಿ ಮೆರೆದನು 1ರಾವಣಿಹಂತಕ ಹನುಮನೆನಿಸಿದೇವರೆಂತೆಂಬೊ ಸಂಕರನನಿರ್ಧೂಮದೇವಿ ಮೊರೆಯನುಕೇಳಿಕುರುಗಳಶೈವ ಶಾಸ್ತ್ರವ ಮುರಿದ ಮಧ್ವನು 2ನಗವೈರಿಮಗನಿಗೆ ನಿರುತ ಸಂತ್ರಾಣನಿಗಮವಾಕ್ಯದಿ ನಗುತ ಪೇಳಿದ 3
--------------
ಗುರುಜಗನ್ನಾಥದಾಸರು
ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿದಿವ್ಯ ಷಡುರಸಾನ್ನವನಿಟ್ಟೆನೊ ಪ.ಘಮಘಮಿಸುವ ಶಾಲ್ಯನ್ನ ಪಂಚಭಕ್ಷ್ಯಅಮೃತಕೂಡಿದ ದಿವ್ಯ ಪರಮಾನ್ನವು ||ರಮಾದೇವಿಯು ಸ್ವಹಸ್ತದಿ ಮಾಡಿದ ಪಾಕಭೂಮಿ ಮೊದಲಾದ ದೇವಿಯರ ಸಹಿತ ತಾನು 1ಅರವತ್ತು ಶಾಕ ಲವಣ ಶಾಕ ಮೊದಲಾದಸರಸ ಮೊಸರುಬುತ್ತಿ ಚಿತ್ರಾನ್ನವಪರಮ ಮಂಗಳ ಅಪ್ಪಾಲು ಅತಿರಸಗಳಹರುಷದಿಂದಲಿ ಇಟ್ಟ ಹೊಸ ತುಪ್ಪವ 2ವಡೆಯಂಬೋಡಿಯು ದಧಿವಡೆಯ ತಿಂಢಿಣಿಒಡೆಯಸೆ ಬಡಿಸಿದೆ ಅಧಿಕವಾಗಿ ||ದೃಢವಾದ ಪಡಿಪದಾರ್ಥವನೆಲ್ಲ ಇಡಿಸಿದೆಒಡೆಯ ಶ್ರೀ ಪುರಂದರವಿಠಲ ನೀನುಣ್ಣೊ 3
--------------
ಪುರಂದರದಾಸರು
ನೋಡುವುದೆ ಕಣ್ಣು, ಕೇಳುವುದೆ ಕಿವಿ |ಪಾಡುವುದೇವದನಪಗಾಡಿಕಾರಶ್ರೀ ವೇಣುಗೋಪಾಲನ |ಕೂಡಿಕೊಂಡಾಡುವ ಸುಖದ ಸೊಬಗನು ಅ.ಪಎಳೆದುಳಸಿಯ ವನಮಾಲೆಯಿಂದೊಪ್ಪುವ |ಎಳೆಯ ಗೋವಳರೊಡನಾಡುವ |ತಳಿತ ತರುವಿನ ನೆಳಲಲ್ಲಿ ನಲಿವನ |ನಳಿನನಾಭನ ಮುದ್ದು ನಗೆಯ ಸೊಬಗನು 1ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |ಮರಿಗೋಗಿಲೆಯಂತೆ ಕೂಗುವನ ||ಎರಳೆಯಂತೆ ಜಿಗಿಜಿಗಿದಾಡುವತುಂಬಿ|ಶಿರವ ತಗ್ಗಿಸುವಂತೆ ಝೇಂಕರಿಸುವನ 2ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |ಚೆಲ್ವೆಯರಿಗೆ ಮುಡಿಸುವನ ||ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3ಪೊಂಗೊಳಲೂದುತ ಮೃಗಖಗ ಜಾತಿಯ |ಸಂಗಡಿಸುತಲಿಪ್ಪನ ||ಅಂಗವ ಮರೆತು ನೂರಂಗನೆಯರಲಿ ಬೆಳು-|ದಿಂಗಳೊಳಗೆ ಕುಣಿದಾಡುವ ದೇವನ 4ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |ಸೆರಗಪಿಡಿಸಿ ಕೊಂಬನ ||ಕರುಣಾಕರ ಶ್ರೀ ಪುರಂದರವಿಠಲ |ಶರಣಾಗತ ರಕ್ಷಕ ರಮೆಯರಸನ 5
--------------
ಪುರಂದರದಾಸರು
ಪಂಚಭೇದತಿಳಿವದು ಪ್ರತಿದಿನದಲೀ |ಮುಂಚಿನಜ ಮಧ್ವಮುನಿ ಮತವನುಸರಿಸಿದವರೂ ಪಜೀವೇಶರಿಗೆ ಭೇದ ಜೀವ ಜೀವಕೆ ಭೇದ |ದೇವರಿಗು ಜಡಕು, ಜಡಕೆ ಜಡ ಭೇದಾ ||ಆವಾಗಜೀವರಿಗೆ ಜಡಗಳಿಗೆ ಭೇದುಂಟು |ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ 1ಈಶನಿತ್ಯಅನಾದಿಸ್ವರತಸರ್ವಗ ಸ್ವಪ್ರ- |ಕಾಶ ಸರ್ವಜÕವಿಶ್ವವಿಲಕ್ಷಣಾ ||ಮೇಶ ಅಪರಿಚ್ಛಿನ್ನಮೂರ್ತಿಪ್ರಾಣಿಗಳಿಂದ |ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ 2ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||ಆಮಯವಿದೂರ ಜ್ಞಾನಾನಂದ ಬಲ ಪೂರ್ಣ |ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ 3ಸುಖ ದುಃಖಭೋಗಿಜೀವನು ಅಸ್ವತಂತ್ರ ಬಹು |ಕಕುಲಾತಿಉಳ್ಳವನು ದುರ್ವಿಷಯದೀ ||ಲಕುಮೀಶನಲ್ಲಿ ಭಕ್ತಿ ವಿವರ್ಜಿತನುಪ್ರತಿಕ್ಷ- |ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು 4ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |ಮಾಧವನ ಬಂಧಕ ಶಕುತಿಯೊಳಗಿಹ್ಯಾ ||ತಾ ಧರಿಸಿಹನುಪ್ರಾಕೃತಪ್ರಾಕೃತಾವರಣ |ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ 5ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |ಯಂದು ಭೇದಗಳುಂಟವರ ಲಕ್ಷಣಾ ||ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು 6ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ 7ವಿಧಿಮೊದಲು ತೃಣ ಜೀವಪರಿಯಂತಸಾತ್ವಿಕರು |ಇದರೊಳಗೆ ದೇವ, ಋಷಿ, ಪಿತೃಪ, ನರರೂ ||ಸುಧಿಗೆ ಯೋಗ್ಯ ರಜಾದಿಗೀರ್ವಾಣಗಂಧರ್ವ |ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ 8ಇವರಿಂದ ಭಿನ್ನ ರಾಜಸರು ಗೋ ಭೂ ನರಕ |ತ್ರಿವಿಧಗತಿಉಳ್ಳವರು ಪಂಚಭೇದಾ ||ವಿವರ ತರತಮ ದೇವರ ಮಹತ್ಮಿಯನು ಅರಿಯ |ದವರು ಲಿಂಗಕಳಿಯರುಧಾಮತ್ರಯಪೊಗದವರೂ 9ಸಂಸಾರಿಗಳಿಗೆ ಭಿನ್ನರು ತಮೋಗುಣದವರು |ಕಂಸಾರಿಯಲಿ ದ್ವೇಷವರ ಸ್ವಭಾವಾ ||ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |ಕ್ಷಸರು, ಪಿಶಾಚರವರನುಗರು, ನರಾಧಮರು 10ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||ಜ್ಞಾನಿಭೇದವನರಿಯ ಪಂಚ ಮಹಾಪಾತಕಿ ಪು- |ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ 11ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |ಕುಜನರಿಗನೇಕ ಬಗೆ ಸಹಯವಹನೂ ||ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |ವೃಜನವನ ವಪು ತಾಯಿ ತಂಗಿಯಂಬರನರಿಯ 12ಬವರಬಂಗಾರ ದ್ಯೂತಾ ಪೇಯಅನೃತನಟ |ಯುವತಿಯೀಯಾರು ಸ್ಥಳ ನಿಲಯವವರಿಗೆ ||ನವವಿಧ ದ್ವೇಷಿಗಳಿಗಾಕಾರನೆನಿಸುವನು |ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ 13ಆ ನೀಚನ ಮಲಮೂತ್ರ ವಿಸರ್ಜನದಿಘೋರ|ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||ಕ್ಷೋಣಿಯೊಳವನ ನಿಂದೆ ನಿರುತದಲಿ ಮಾಡುವದೆ |ಶ್ರೀನಾಥನರ್ಚನೆ ಮಹಾಯಜÕವೆನಿಸುವದು 14ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||ಮೂವರಿಗೆ ಪಾಪಮಿಶ್ರಿತಕರ್ಮಪುಣ್ಯ ಬಹು |ನೋವು ಸ್ವರ್ಗ ನರಕ ಸುಮೋಕ್ಷಾದಿಗತಿಉಂಟು 15ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |ನೈಜವಾಯಿತು ಭೇದ ಜೀವ ಜಡಕೇ ||ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ,ನಿತ್ಯ|ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ 16ಪ್ರಾಕೃತವಿಕೃತ ವೈಕೃತತ್ರಯ ಅಸ್ಥಿರ ಜಡವು |ಪ್ರಾಕೃತವಜಾಂಡ ಧೊರ ಆವರಣವೂ ||ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು 17ಸರಸಿಜಭವಾಂಡದೊಳಿಹ ನೆಲಜಲಧಿಗಿರಿಗಳು |ಎರಡೇಳುಭುವನವೈಕೃತ ಜಡವಿದೂ ||ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ 18ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |ಜಾಲಕಾರಣತ ಸುಸ್ಥಿರವೆನಿಪವೂ ||ಮ್ಯಾಲೆ ಅದರಿಂದಾದ ತತ್ವಗಳನಿತ್ಯಮಹ |ಕಾಲವೆಂದಿಗ್ಯುನಿತ್ಯಅಣುಕಾಲಗಳ ನಿತ್ಯಾ19ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |ರಾಗಿರಲು ಜಡ ಜಡಕೆ ಭೇದ ಸಿದ್ಧಾ ||ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ20ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |ದೂ ಕೆಡದೆ ಸುಖಕಾಂತಿ ಯುಕ್ತವಾದಾ ||ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |ಶೋಕಪೂರಿತವಾದನಿತ್ಯನರಕಗಳಿಹವು 21ಈಪಂಚಭೇದಜ್ಞಾನಿಲ್ಲದವ ಶ್ರೀ ಮುದ್ರಿ |ಗೋಪಿಚಂದನ ಧರಿಸಿದರು ಫಲವೇನೂ ||ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ 22ಹರಿಗುರುಗಳ ದಯ ಪಡೆವರಿಗೆರುಚಿತೋರ್ವದಿತ |ರರಿಗೆ ಈ ಕೃತಿಯುಕರ್ಣಕಠೋರವೂ ||ತರಣಿಬರೆ ಸರ್ವರಿಗೆ ಘೂಕಗಾದಂತೆ ಇದು |ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು 23ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |ಸಾನುರಾಗದಲಿಹರಿಸರ್ವೋತ್ತುಮಾ ||ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |ಕಾಣರು ಕು ಸಂಸಾರ ಧಾಮತ್ರ ವೈದುವರು 24ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |ಒಪ್ಪುತಿಹ ಈ ಪಂಚಭೇದವನ್ನೂ ||ತಪ್ಪದಲೆನಿತ್ಯಪಠಿಸುವರ ಪೊರವವನು ಬೊಮ್ಮ- |ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ 25
--------------
ಪ್ರಾಣೇಶದಾಸರು
ಪಾಪೋಸು ಹೋದುವಲ್ಲ - ಸ್ವಾಮಿ ಎನ್ನ -ಪಾಪೋಸು ಹೋದುವಲ್ಲ................... ಪ.ಅಪಾರ ಜನುಮದಿ ಆರ್ಚನೆಯ ಮಾಡಿದ ..........ಅಪಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ |ಪರಿಪರಿ ತೀರ್ಥ ಸ್ನಾನಗಳ ಮಾಡೆ ||ಹರಿದಾಸರ ಕೊಡಿ ಶ್ರೀನಿವಾಸನ ಸಂ -ದರುಶನದಲ್ಲಿ ಮೈಮರೆದಿದ್ದೆನೊ ಎನ್ನ 1ಪರಮ ಭಾಗವತರು ಹರಿಕಥೆ ಪೇಳಲು |ಪರಮ ಭಕುತಿಯಲಿ ಕೇಳುತಿದ್ದೆ ||ಪರಮ ಪಾಪಿಷ್ಠರ ಪಾಲಿಗೆ ಪೋದವು |ಪರಮಾತ್ಮನ ಮನಸಿಗೆ ಬಂತು ಹೀಗೆ ............. 2ಮಾಯೆ ಒಲಿದು ಎನಗೆ ತಂದು ಕೊಟ್ಟದ್ದಳು |ದಾಯಾದಿಗಳು ನೋಡಿ ಸಹಿಸಲಿಲ್ಲ ||ಮಾಯಾ ರಮಣ ನೋಡಿ ಪುರಂದರವಿಠಲಮಾಯೆಯಿಂದ ಮಟ್ಟಮಾಯವಾದವು ಈಗ 3
--------------
ಪುರಂದರದಾಸರು
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತಕಾಲಭೈರವ ನುತಿಪೆ ನಾ ಸತತಕಾಲಕಲ್ಪಿತ ಲೀಲೆಯರಿತು ಸು-ಶೀಲತನವನು ಮೆರೆಯಲೋಸುಗಸ್ಥೂಲಸೂಕ್ಷ್ಮಾಕೃತಿಯ ಧರಿಸಿದಮೂಲಿಕಾ ಶ್ರೀನಿವಾಸ ಭೈರವ 1ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ-ವೀರ ಶ್ರೀರಾಮನ ಸೇತು ನೋಡುತ್ತಧರೆಯ ಸಂಚರಿಸುತ್ತ ಬರುತಿರೆಮಿರುಪ ಶೇಷಾಚಲ ನಿರೀಕ್ಷಿಸಿಭರದಿ ಗಿರಿಮೇಲಡರಿ ಶ್ರೀಶನಚರಣಕಾನತನಾಗಿ ಸ್ತುತಿಸಿದೆ 2ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿಇರಿಸಿ ಮೆರೆಸಿದೆ ಕೀರ್ತಿಕರವಲ್ಲಿತ್ವರಿತದಿಂ ನೀನೆಲ್ಲ ದೇಶದಪರಿಪರಿಯ ಕಾಣಿಕೆಯ ತರಿಸುತಹರಿಯ ದರುಶನಗೈವ ಮೊದಲೆಹರುಷದಿಂದಲಿ ಪೂಜೆಗೊಂಬುವೆ 3ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿಧರಿಸಿ ಮೃದುತರವಾದ ವಾಕ್ಯದಲಿಕರೆಸಿ ಒಬ್ಬೊಬ್ಬರ ವಿಚಾರಿಸಿಸರಸದಿಂದಲಿ ಪೊಗಳಿಕೊಳ್ಳುತನರರ್ಗೆ ಸೋಂಕಿದೆ ಭೂತಪ್ರೇತದಭಯಗಳನು ಪರಿಹರಿಸಿ ಪಾಲಿಪೆ 4ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪಖ್ಯಾತ ವೆಂಕಟಪತಿಗೆ ಸಖಿಯಷ್ಪಖ್ಯಾತಿಯಿಂ ದೊರೆಯಿದಿರಿನಲಿ ಸಂ-ನಿಧಿಸನ್ನುತನಾಗಿ ಮೆರೆದಿಹೆಓತು ಕರುಣದೊಳೊಲಿದು ಪಾಲಿಪದಾತಲಕ್ಷ್ಮೀನಾರಾಯಣಾಪ್ತನೆ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸೋ ವೆಂಕಟಗಿರಿ ರಾಯಾ ಲಕ್ಷ್ಮೀ |ಲೋಲನೀಲಾಂಬುದ ಸಮ ಕಾಯಾ ಪಮಾಕಮಲಾಸನವಾಸವ- ಸುರ |ನೀಶ ಕರಾಧ್ಯ ಕೇಶವ ||ಲೋಕೇಶ ಯನ್ನಲ್ಲಿ ವಾಸವ-ಮಾಡಿನೂಕು ತುಚ್ಛತರ ಕ್ಲೇಶವ 1ಹಿಂದಿನ ಜನುಮಗಳೆಣಿಕಿಲ್ಲ - ದಯಾ |ಸಿಂಧುಸಾಧನವೀಗಲಿನಿತೆಲ್ಲಾ ||ಮುಂದಿನ ಗತಿಯೇನೋ ತಿಳಿದಿಲ್ಲ - ಇದ |ರಿಂದಲಂಜುವೆ ಜಾಂಬವತೀ ನಲ್ಲ 2ಬಾಲಕನಾದೆ ಕೆಲವು ದಿನ - ಪ್ರಾಯ |ಕಾಲವೊದಗಲು ಪರಾಂಗನಾ ||ಮೇಲೆ ಅಭಕ್ಷಣೆಯಲಿ ಮನವಿಟ್ಟೆ - ಹೇ |ಳಲೊಂದೆರಡೇ ಯನ್ನವಗುಣ 3ಉದಯ ಸ್ನಾನವು ಸಂಧ್ಯಾವಂದನೆ - ಅಘ್ರ್ಯ |ವಿಧಿಗುರುಹಿರಿಯರ ವಂದನೆ |ಮೊದಲಾಗಿ ಪಿತರಾರಾಧನೆ ಬಿಟ್ಟೆ |ಮದದಿಂದ ಹೀನನೆಂಬುವ ನಾನೇ4ಅನ್ಯರ ಮನೆ ದ್ವಾರ ಕಾಯ್ವೆನೋ - ಸ್ವಾಮಿ |ನಿನ್ನ ಸ್ಮರಣೆಯ ಕ್ಷಣ ಮಾಡೆನೋ ||ಅನ್ನಕ್ಕೆ ಬಹುದೂರ ಪೋಪೆನೋ - ಸಾರೆ |ಪುಣ್ಯಕ್ಷೇತ್ರಗಳಿರೆ ನೋಡೆನೋ 5ಧನಹೀನನಾದ ಕಾರಣದಿಂದ -ಸತಿ|ಮನೆ ಹೊಂದಿಸಳೋ ಪರಮಾನಂದ ||ತನುಜರಶನ ವಸನಗಳಿಂದ ಕಾಡು |ವಣು ಮಾತ್ರ ಸುಖವಿಲ್ಲ ಇದರಿಂದ6ಏಸುಹೇಳಲಿ ಮಾತ ಲಾಲಿಸೋ - ಶ್ರೀ ಪ್ರಾ- |ಣೇಶ ವಿಠ್ಠಲ ನೀನೇ ತಾರಿಸೋ ||ಆ ಸತ್ಕರ್ಮದಿ ಮನ ಪ್ರೇರಿಸೋ - ನಿನ್ನ |ದಾಸವರ್ಗದೊಳೆನ್ನ ಕೂಡಿಸೋ 7
--------------
ಪ್ರಾಣೇಶದಾಸರು
ಪಿಂಡಾಂಡದೊಳಗಿನ ಗಂಡನ ಕಾಣದೆ |ಮುಂಡೆಯರಾದರು ಪಂಡಿತರೆಲ್ಲ ........... ಪ.ಆಧಾರ ಮೊದಲಾದ ಆರು ಚಕ್ರಮೀರಿ |ನಾದಬಿಂದು ಕಳೆಯಳಿದ ಬಳಿಕ ||ಶೋಧಿಸಿ ಸುಧೆಯ ಪ್ರಸಾದವನುಣ್ಣದೆ |ಓದುತ ಮನದೊಳು ಒಂದನು ತಿಳಿಯದೆ 1ನಾದದೊಳಗೆ ಸುನಾದ ಓಂಕಾರದಿ |ಪದವ ಬಿತ್ತಿ ಪರಿಣಾಮಿಯಾಗದೆ ||ವೇದಾಂತರೂಪ ತದ್ರೂಪ ನಾಲಗೆಯಲಿ |ವಾದಿಸಿ ಮನದೊಳು ಒಂದನು ಅರಿಯದೆ............. 2ನವನಾಳ ಮಧ್ಯದಿ ಪವನ ಸುತ್ತಿದ್ದು ಪಣಿ |ಶಿವನ ತ್ರಿಪುಟ ಸ್ಥಿತಿ ಸ್ಥಿರವಾಗದೆ ||ಭವರೋಗ ವೈದ್ಯನ ಧ್ಯಾನವ ಮಾಡದೆ |ಶವುರಿ ಶ್ರೀಪುರಂದರ ವಿಠಲನ ಸ್ಮರಿಸದೆ3
--------------
ಪುರಂದರದಾಸರು
ಪುಟ್ಟಿಸಬೇಡವೊ ದೇವ - ಎಂದಿಗು ಇಂಥ-|ಕಷ್ಟಪಟ್ಟು ತಿರುಗುವ ಪಾಪಿ ಜೀವನವ ಪನರರ ಸ್ತುತಿಸಿ ನಾಲಗೆ ಬರಡು ಮಾಡಿಕೊಂಡು |ದರಪೋಷಣೆಗಾಗಿ ಅವರಿವರೆನದೆ ||ಧರೆಯೊಳು ಲಜ್ಜೆ - ಮಾನಗಳೆಲ್ಲವೀಡಾಡಿ |ಪರರ ಪೀಡಿಸಿ ತಿಂಬ ಪಾಪೀ ಜೀವನವ 1ಎಂಟುಗೇಣು ಶರೀರವ ಒಂದು ಗೇಣು ಮಾಡಿಕೊಂಡು|ಪಂಟಿಸುತ್ತ ಮೆಲ್ಲಮೆಲ್ಲನೆ ಪೋಗಿ ||ಗಂಟಲಸೆರೆಗಳುಬ್ಬಿ ಕೇಳುವ ಸಂಕಟ ವೈ-|ಕುಂಠಪತಿ ನೀನೆ ಬಲ್ಲೆ ಕಪಟನಾಟಕನೆ 2ಲೆಕ್ಕದಲಿ ನೀ ಮೊದಲು ಮಾಡಿದಷ್ಟಲ್ಲದೆ |ಸಖ್ಯಕೆವೆಗ್ಗಳಕೊಡುವರುಂಟೆ ||ಕಕ್ಕುಲತೆಪಟ್ಟರಿಲ್ಲ ಕರುಣಾಳು ನಿನ್ನ ಮೊರೆ |ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ 3
--------------
ಪುರಂದರದಾಸರು
ಪೂಜೆಯ ಮಾಡುವೆನೊ ಸದ್ಗುರುವಿನ |ಪೂಜೆಯ ಮಾಡುವೆನು ||ಮಾಜದೆ ತನು ಮನ ಧನವೆಲ್ಲ ಅರ್ಪಿಸಿ |ಪೂಜೆಯ ಮಾಡುವೆನುಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗಣಪತಿ ಹರಿಹರರಾ ನಿಜಶಕ್ತಿ ದಿನಪತಿ ನಿಜಭಾಸವು |ತನುವೆಂಬ ಅಷ್ಟಕಂಬದ ಮನೆಯೊಳು ನಾಲ್ಕುಗುಣದ ಚೌಕಿಯನಿಡುವೆ1ವೃತ್ತಿಉದಾಸೀನಕೆ ನಿರ್ಗುಣವಾದಸುತ್ತ ರೇಖೆಯ ಬರೆದು | ಚಿತ್ತವೆಂಬಷ್ಟದಳದಕಮಲದೊಳಿಷ್ಟಮೂರ್ತಿಯ ಧ್ಯಾನಿಸುವೆ2ವೇದಾದಿ ಕಾರಣದಿ ಉಪನಿಷದಾದಿಅರ್ಥದಿ ಶಿರಸಾಮೇದಿನಿ ಮೊದಲಾದತತ್ತ್ವಭೂಷಣದಿಂದ ಆದಿನಾಥನ ಪೂಜೆಯ3ಪ್ರವೃತ್ತಿ ಸ್ಥಾನದಲ್ಲಿ ಫಣಿಯಲ್ಲಿ ನಿವೃತ್ತಿ ವಿಭೂತಿಯುನಿರ್ವಂಚನೆಯಾದ ಆಚಮನ ಕೊಡುವೆನುಸರ್ವಾತ್ಮ ಗುರುಮೂರ್ತಿಗೆ4ಭಕ್ತಿಯ ಜಲದಿಂದಲಿ ಸದ್ಗುರುವಿನನಿತ್ಯಚರಣತೊಳೆದು |ಮುಕ್ತಿಯ ಪಾವನ ಮಾಡುವ ಗುರುಪಾದ ತೀರ್ಥವಂದಿಸಿಕೊಂಬುವೆ5ಸದ್ವಾಸನೆ ಗಂಧವ ಶ್ರೀಗುರುವಿಗೆ ಚಿದ್ ವೃತ್ತಿಯಕ್ಷತೆಯು |ಸದ್ಭಾವದಿಂದಲಿ ತೋರುವ ಪರಿಮಳಮದ್ಗುರುವಿನ ತನುವಿಗೆ6ಮೂರು ಮಾತ್ರೆಯ ಹೊಸೆದು | ನಿರ್ಗುಣವಾದ ಧಾರವಶಿವಸೂತ್ರಕ್ಕೆ | ತೋರುವ ವಿಶ್ವಚರಾಚರ ಪುಷ್ಪದ ಹಾರಕೊರಳಿಗೆ ಹಾಕುವೆ7ನಾನೆಂಬ ಧೂಪ ಸುಟ್ಟು ಸದ್ಗುರುವಿಗೆ ಜ್ಞಾನದೇಕಾರತಿಯು |ಬೋನ ನೈವೇದ್ಯ ಜೀವದ ಭಾವವರ್ಪಿಸಿ ಜ್ಞಾನಕರೋದ್ವರ್ತಿಯ8ವಾಚ್ಯಾರ್ಥ ತಂಬೂಲವಾ ಸದ್ಗುರುವಿಗೆ |ಲಕ್ಷ್ಯಾರ್ಥವೆ ದಕ್ಷಿಣಾ ಲಕ್ಷ್ಯಾತೀತಗೆ ಮಂಗಳಾರತಿಬೆಳಗುವೆಅಕ್ಷಯಮಂತ್ರಪುಷ್ಪ9ಸಂತ ಸನಕಾದಿಕರೂ ಸುರರೆಲ್ಲ ಅಂತರಿಕ್ಷದಿ ಬಂದರು |ತಂತಿ ಮದ್ದಳಿ ತಾಳ ಗೀತ ಶಂಖದ ವಾದ್ಯತಿಂತಿಣಿಯಲಿ ಕುಣಿಯುತ10ಅದ್ವೈತಸಾಷ್ಟಾಂಗವಾ ಸದ್ಗುರುವಿಗೆ | ಚಿದ್ಬೋಧದಿಎರಗಲು ಶುದ್ಧಿ ಸಿದ್ಧಿಗಳೆಂಬ ಚರ್ಯವ ತೋರುವಮುದ್ರೆ ಶ್ರೀ ಗುರುಗಿಟ್ಟೆನು11
--------------
ಜಕ್ಕಪ್ಪಯ್ಯನವರು