ಒಟ್ಟು 50999 ಕಡೆಗಳಲ್ಲಿ , 138 ದಾಸರು , 11453 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿರ್ತವಾಗಿ ಪೂರ್ಣಬೆರ್ತು ಕೂಡುವಾ ಬನ್ನಿ ಗುರ್ತದಿಂದ ಧ್ರುವ ಸೂರ್ಯನಿಲ್ಲದ ಸೂಪ್ರಕಾಶ ತುಂಬೇದ ಹೇಳಲೇನ ತೂರ್ಯಾವಸ್ಥೆಯೊಳು ಬೆರೆದು ಕೂಡಿದ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರಿಯ ಹೇಳುವದಲ್ಲ ಅರುವ್ಹೆಸ್ಥಾನ ಪರಿಯಾಯದಿಂದ ಪರಿಣಿಮಿಸಿ ನೋಡಿ ಪರಮ ಪ್ರಾಣ 1 ಚಂದ್ರನಿಲ್ಲದೆ ಬೆಳದಿಂಗಲು ಬಿದ್ದದ ಬಲು ಬಹಳ ಇಂದ್ರಾದಿಕರೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದ್ರವಾದ ಸುವಸ್ತುವಳಗೊಂದದೆ ಅಚಲ ಸಾಂದ್ರವಾದ ಸುಖತುಂಬಿ ತುಳುಕತದೆ ಥಳ ಥಳ 2 ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬ್ಯಾಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ ದೀನ ಮಹಿಪತಿಗೆ ತಾನೆತಾನಾದ ಸದ್ಗುರುವೀಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರ್ಥಿಲೊಂದು ಹೇಳುವೆನಮ್ಮಅಲ್ಲಿವಾರ್ತೆಯಚಿತ್ತಗೊಟ್ಟು ಕೇಳ ತಾಯಿಅವರ ಕೀರ್ತಿಯ ಪ. ಹೋಗಿ ನಾನು ನಾಗವೇಣಿಯರ ಬಾಗಿಲು ಹೊಕ್ಕೆನುಸಾಗರಶಯನ ಮಂಚವೇರಲು ಧಕ್ಕನೆ ನಿಂತೆನು 1 ಮರ್ಯಾದಿಲೆ ಹರಿಯ ಮನೆ ಬಾಗಿಲು ಮರೆಯಲಿ ನಿಂತೆನುಸಿರಿಯರಸು ಸತಿಯರಿಂದ ಬೆರೆದು ಕುಳಿತೆ2 ಫುಲ್ಲನಾಭನು ಮಲ್ಲಿಗೆ ಮಂಚದೊಳಿರುತಿರೆವಲ್ಲಭೆಯರಿಬ್ಬರು ಗಂಧಪೂಸಿ ಅಲ್ಲೆ ಕುಳಿತಿಹರು3 ಪುನಗು ಜಾಜಿ ವನಿತೆಯರು ಹಚ್ಚುತಿಹರುಪುನಗು Pಸ್ತ್ತೂರಿ ಬೊಟ್ಟು ಮಾನಿನಿಯರು ಇಡುತಿಹರು4 ಚಾರು ಸೂರಿ ಸುಖಿಸುತ 5 ಕೃಷ್ಣರಾಯಗೆ ಕೊಟ್ಟು ಅಡಿಕೆ ತುಷ್ಟರಾಗಲಿಪಟ್ಟದ ರಾಣಿಯರಿಬ್ಬರು ಇಟ್ಟರು ತೊಡೆಮೇಲೆ 6 ಬಟ್ಟನೆ ವೀಳ್ಯ ರುಕ್ಮಿಣಿದೇವಿ ಕೊಟ್ಟೆನೆನುತಲಿಥಟ್ಟನೆ ಕೃಷ್ಣನವದನದಲ್ಲಿ ಇಟ್ಟಾಳು ಭಾವೆ ತಾ 7 ಭರದಿ ಕೋಪಿಸಿ ರುಕ್ಮಿಣಿದೇವಿ ತೆರೆದುಕಣ್ಣುತಾಹಿರಿಯಳೇನು ಮೊದಲು ಕೊಟ್ಟೆ ವೀಳ್ಯವೆನ್ನುತಲೆ 8 ಭೂಪÀ ರಾಮೇಶ ರುಕ್ಮಿಣಿದೇವಿಯ ತಾಪವ ಕಾಣುತಅಪಾರ ಕೋಪವ ಅರಘಳಿಗೆಯಲಿ ಇಳಿಸುವೆನೆಂದು ತಾ9
--------------
ಗಲಗಲಿಅವ್ವನವರು
ಅಲ್ಪದೇಹವು ಹುಟ್ಟಿ ಮಾಯ ಕಲ್ಪನೆಗೊಳಗಾಗಿ ಸ್ವಲ್ಪವನ (ಸ್ವಲ್ಪವು) ಶ್ರೀಹರಿ ನಾಮಸ್ಮರಿಸಿ ಸದ್ಗತಿ ಕಾಣುವ ಸಾಧನೆ ಇಲ್ಲದ್ಹೋಯಿತು ಪ ಜನುಮ ಜನುಮದಲಿ ಸಂಸಾರ ಜಲಧಿಯೊಳಗೆ ಮುಳುಗಿ ಘನ ಪುರುಷನ ಮಹಿಮೆ ಕಾಣದೆ ಗಾಢಾಂಧ ಕಾರದಲಿ ದಿನಗಳ ಕಳೆದು ದೇವರ ಭಜಿಸದೆ ಜನುಮಗಳಳಿದೂ ಚರಿಸುವದಾಯಿತು 1 ಭ್ರಾಂತಿಯ ಘನವಾಗಿ ಪ್ರಪಂಚ ಬದ್ಧನಾಗಿ ಕಾಂತೇರ ಮೋಹಕ್ಕೆ ಸಿಲುಕಿ ಕಾಲವುಕಳೆದಿನ್ನು ಚಿಂತನೆ ಮಾಡದೆ ಮುಕ್ತಿ ಸೇರದಂತಾಯಿತು 2 ಪನ್ನಗಶಯನನ್ನಾ ಪರಿಪರಿ ಭಕುತಿಲಿ ಮನದಿಂದ ವರ್ಣಿಸಿ ಜಿವ್ಹದಲಿ ಹರಿಪದವನ್ನೇ ಕಾಣದಲೆ ಇನ್ನು ಶ್ರೀ ವ್ಯರ್ಥವು ಹೋಯಿತು 3
--------------
ಹೆನ್ನೆರಂಗದಾಸರು
ಅಲ್ಲಲ್ಲಲ್ಲಲ್ಲಾ | ಸುಖವಿ | ನ್ನಿ ಲ್ಲಿ ಲ್ಲಿ ಲ್ಲಿ ಲ್ಲಾ ಪ ಮಾಯಾ ಭ್ರಾಂತಿಯ ಮನ | ಪೊಳ್ಳು ಇದೆಂದು ಬಲ್ಲವರಿಗೆ ನಿಜ ಅ.ಪ ರೊಕ್ಕವು ತೀರಿದ ಕಾಲಕೆ ತನ್ನನು ಮಕ್ಕಳು ಮರಿಗಳು ಲೆಕ್ಕಕ್ಕೆ ತರುವರು 1 ಅಂಗನೆ ಮಕ್ಕಳು ಆಪ್ತರು ಬಂಧುಜ- ನಂಗಳು ಒಬ್ಬರು ಸಂಗಡ ಬರುವವರ್ 2 ವಲ್ಲಭ ಶ್ರೀಗುರು ಲಕ್ಷ್ಮೀವೆಂಕಟ- ನಲ್ಲದೆ ಬೇರೊಬ್ಬರು ಬಂಧುಗಳಾರ್ 3
--------------
ಅನ್ಯದಾಸರು
ಅಲ್ಲಿ ಇಲ್ಲಿ ಮೊಸರನು ಚೆಲ್ಲಿ ಮೆಲ್ಲನೆ ಬಂದವ ಎಲ್ಲಿಹನಮ್ಮ ಪ ಬಲ್ಲಿದರಲ್ಲಿ ಬಲ್ಲಿದನಂತೆ ಇಲ್ಲಿಗೆ ಬಂದವ ಎಲ್ಲಿಹನಮ್ಮ ಅ.ಪ ಗೆಜ್ಜೆ ಪಾಡಗ ಕಡಗ | ಝಣ ಝಣ ಭಜ್ಜರ ರವವನು ಬೀರುವನಮ್ಮ ಸಜ್ಜನು ಬಲ್ಲವ ಅವನಮ್ಮ 1 ಹೊಂಗೊಳಲೂದುತ ಓಡುವನಮ್ಮ ಮಾಂಗಿರಿರಂಗನೆ | ಅವನೆನ್ನುವರಮ್ಮ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ ಧ್ರುವ ಅಲ್ಲಿಂದಲ್ಲಿದ್ದು ತಿಳಿಯದು ಲೋಕಾ 1 ಅಲ್ಯಾವನಾದರ ಅಲ್ಲೆವೇ ತಿಳಿದಾ 2 ಬಲ್ಲಮಹಿಮರ ಬಲಗೊಂಡು ಕೇಳಿ 3 ಒಳಗಲ್ಲ ಹೊರಗಲ್ಲ ಒಳಿತಾಗಿ ಕೇಳಿ4 ಕೆಳಗಲ್ಲ ಮ್ಯಾಲಲ್ಲ ತಿಳಿದುಕೊಂಡು ನೋಡಿ 5 ಹಿಂದಲ್ಲ ಮುಂದಲ್ಲ ಸಂಧಿಸಿ ನೋಡಿ 6 ಎಡಕಲ್ಲ ಬಲಕಲ್ಲ ಪಡಕೊಂಡು ನೋಡಿ 7 ದೂರಲ್ಲ ಸಾರ್ಯಲ್ಲ ಅರಿತಿನ್ನು ನೋಡಿ 8 ಬೆಡಗಿನ ಮಾತಲ್ಲ ಕಡಗಂಡು ನೋಡಿ 9 ಸ್ಥೂಲಲ್ಲ ಸೂಕ್ಷ್ಮಲ್ಲ ಭೇದಿಸಿ ನೋಡಿ 10 ಮನದಿರಗಿ ಉನ್ಮನವಾಗಲಿಕ್ಕೆ 11 ಕಣ್ಣದಿರಗಿ ಕಣ್ಣ ನೋಡಲಿಕ್ಕೆ 12 ಎಚ್ಚತ್ತು ಅಲ್ಲಿವೆ ಯೋಚಿಸಲಿಕ್ಕೆ 13 ಅರವಿನ ಮುಂದ ಮರವಿನ ಹಿಂದ 14 ಜಾಗ್ರ ನಿದ್ರಿ ಮಧ್ಯ ಅರುವಾಗಲಿಕ್ಕೆ 15 ಗುರುಕೃಪೆಯಿಂದಲಿ ಗುರುತಿಟ್ಟು ನೋಡಿ16 ಸಾಧಕನಾದರ ಸಾಧಿಸಬಹುದಿದು 17 ಭೇದಿಸೇನೆಂದರೆ ಭೇದಿಸಬಹುದಿದು 18 ಸೂರ್ಯಾಡೇನಂದರ ಸೂರ್ಯಾಡಬಹುದಿದು 19 ಖೂನಹೇಳಿದ ಮ್ಯಾಲ ಙÁ್ಞನೇನಬಹುದು 20 ಹೆಜ್ಜೆ ಹೇಳಿದ ಮ್ಯಾಲ ಸಜ್ಜನ ಅವನೀಗ 21 ಚೆನ್ನಾಗ್ಹೇಳಿದ ಮ್ಯಾಲ ಮನ್ನಿಸಬಹುದಿದು 22 ಗುರುತಹೇಳಿದ ಮ್ಯಾಲ ಗುರುಸ್ವರೂಪ ತಾಂ 23 ಸರಗಹೇಳಿದ ಮ್ಯಾಲ ಶರಣೆಂಬುದಾತಗ 24 ಅಲ್ಲಿಂದಲ್ಲೆಂಬುದನುಭವಾಗಬೇಕು 25 ಅನುಭವದೋರಿದ ಘನಗುರು ನಮ್ಮಯ್ಯ 26 ಲೇಸು ಲೇಸು ನಮ್ಮ ಭಾಸ್ಕರ ಗುರುದಯ 27 ಭಾಸುತ ಭಾಸ್ಕರಕೋಟಿ ತೇಜಾದನು 28 ದಾಸಮಹಿಪತಿಗೆ ಲೇಸು ಲೇಸಾಯಿತು 29
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಲ್ಲಿನೋಡಿ ಶ್ರೀನಿವಾಸನ ಪ ವಾಸವ ಮಾಡುತ ದಾಸಜನರ ಮನ ತೋಷಪಡಿಸುವುದ ನೋಡಿ 1 ಸಾಧು ಜನರ ಮನ ಮೋದಪಡಿಸುವುದ ನೋಡಿ2 ಪ್ರಾಣನಾಥÀವಿಠಲನು ಸಾನುರಾಗದಲಿ ವೇಣು ಸಿರಿ ಮಾನಿನಿಯಿಂದೊಪ್ಪಿರುವುದ ನೊಡಿ 3
--------------
ಬಾಗೇಪಲ್ಲಿ ಶೇಷದಾಸರು
ಅಲ್ಲೆ ನೋಡಿದರೀಹ್ಯ ಇಲ್ಲೆ ನೋಡಿದರೀಹ್ಯ ಎಲ್ಲಾ ಕಡೆಯಲ್ಲೇಕೋಮಯವೋ 1 ಸುಲ್ಲಭವಾಗಿ ನಮ್ಮ ಫುಲ್ಲಲೋಚನ ಕೃಷ್ಣ ಬಲ್ಲ ಮಹಿಮರಿಗೆ ಭಾಸುವನು 2 ಭೇದಿಸಿ ನೋಡಿರಯ್ಯ ಸಾಧು ಜನರೆಲ್ಲ ಮೇದಿನಿಯೊಳು ಘನತುಂಬಿಹುದು 3 ಕಣ್ಣಾರೆ ಕಂಡೆವಯ್ಯ ಪುಣ್ಯಚರಣಮಹಿಮೆ ಸಣ್ಣ ದೊಡ್ಡದರೊಳು ಸಾಕ್ಷಾತವೊ 4 ನಂಬಿನಡಿಯಲಿಕೆ ಅಂಜುಜಾಕ್ಷನ ಪಾದ ಗುಂಭಗುರುತವಾಗಿದೋರುವದು 5 ಗುರುಕೃಪೆಯಿಂದ ನೋಡಿ ಹರುಷವಾಯಿತು ಜೀವ ಬೆರತುಕೂಡಿತು ಸಮರಸವೊ 6 ಬೆರೆದು ಕೊಡುವದು ಹರಿಯ ಕಟಾಕ್ಷವಿದು ಮರುಳ ಮಂಕಗಳಿದು ಅರಿಯಾವೊ 7 ವದಗಿ ಬಂದತಿದರಿಟ್ಟು ಸದಮಲಬ್ರಹ್ಮಸುಖಾ ಮೊದಲಿನ ಪುಣ್ಯ ಪೂರ್ವಾರ್ಜಿತವೊ 8 ಧನ್ಯವಾಯಿತು ಮೂಢ ಮಹಿಪತಿ ಪ್ರಾಣಜೀವ ಮನವು ಆಯಿತು ಉನ್ಮನವೊ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಲ್ಲೇ ನಿಲ್ಲೇನು | ಯೋಗಿಗೆ | ಅಲ್ಲೇ ನಿಲ್ಲೇನು ಪ ಎಲ್ಲಿ ನೋಡಿದರಲ್ಲಿ ಘುಲ್ಲನಾಭನೇ ಇಹ | ಅಲ್ಲೇ ನೀಲ್ಲೇನು | ನಿಲ್ಲದ ಮನಸಿನ ಕಾಲಾಟ ಒದಗಿತು | ಅಲ್ಲೇ ನಿಲ್ಲೇನು 1 ನೀರೊಳಗಾನಂದಲ್ಯಾಡುವ ಮೀನಕ | ಅಲ್ಲೇ ನಿಲ್ಲೇನು | ಕಾನನ ತಿರುಗವ ಎರಳೆಗೆ | ಅಲ್ಲೇ ನಿಲ್ಲೇನು 2 ತಳಿತಿಹ ಬನದೊಳು ತಿರುಗುವ ಪಕ್ಷಿಗೆ | ಅಲ್ಲೇ ನಿಲ್ಲೇನು | ನೆನೆನುಡಿ ಸಾರಿದ ಮಹಿಪತಿ ನಂದನ | ಅಲ್ಲೇ ನಿಲ್ಲೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಲ್ಲೇನಿಲ್ಲೇನು ಮತ್ತಿಲ್ಲೇನು ಪ ಅಲ್ಲೇ ನಿಲ್ಲೇನು | ಹರಿರೂಪಗಾಣದೇ ಡಂಭದಿ ತಿರುಗಿದ | ಅಲ್ಲೇ ನಿಲ್ಲೇನು 1 ಕರ್ಮಧರ್ಮವ ಮಾಡಿ ಸ್ವರ್ಗವ ಪಡೆದನು | ಅಲ್ಲೇ ನಿಲ್ಲೇನು| ಮರ್ಮವ ಗಾಣದ ವಿಷಯದ ಸಂಭ್ರಮ | ಅಲ್ಲೇ ನಿಲ್ಲೇನು 2 ಅಲ್ಲೇನಿಲ್ಲೇನು | ವನಿತೆ ಮಕ್ಕಳ ಬಿಟ್ಟು ಶಿಷ್ಯರ ನೆರಹಿದ | ಅಲ್ಲೇ ನಿಲ್ಲೇನು 3 ಎಲ್ಲ ಶಾಸ್ತ್ರವನೋದಿ ಪ್ರಾಕೃತಹಳಿದನು | ಅಲ್ಲೇ ನಿಲ್ಲೇನು | ಬಲ್ಲವ ನಾನೆಂಬ ಗರ್ವವು ಸೇರಿತು | ಅಲ್ಲೇ ನಿಲ್ಲೇನು 4 ಅಲ್ಲೇ ನಿಲ್ಲೇನು | ಮನದಲೆಚ್ಚರವಿಲ್ಲ ಕವಾಟಹೊಕ್ಕನು ಅಲ್ಲೇ ನಿಲ್ಲೇನು 5 ಮಹಿಪತಿ ನಂದನ ಸಾರಿದ ಸ್ವಹಿತ ಅಲ್ಲೇ ನಿಲ್ಲೇನು | ಶ್ರೀಹರಿ ನಾಮದ ನಂಬುಗೆ ಇರಬೇಕು | ಅಲ್ಲೇ ನಿಲ್ಲೇನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಲ್ಲೇನು ಇಲ್ಲವೋ ಪ ಸಿರಿಯು ಇರುವದೆಂದು ನೀನು ಗರುವದಿಂದ ಹರಿಯ ಮರೆತು ಉರುಳಿ ಪೋಪ ತನುವ ಪೋಷಿಸುತಲಿ ಬಹುತೋಷಿಸೂತಲಿ 1 ಮತಿಯ ತೊರೆದು ಪತಿತನಾಗಿ ಬಾಳ ಬೇಡೆಲೊ ಗತಿತೋರರವರೆಲೊ 2 ಧರಣಿಗೊಡೆಯನಾದ ನಿನ್ನ ಭರದಿ ಯಮನ ಚರರು ಕರೆಯೆ ನೀ ತಿಳಿದು ನೋಡಲೆ 3 ಬನ್ನ ಬಿಟ್ಟು ಲಜ್ಜೆ ಬಿಟ್ಟು ಬಲು ನೀಚನಾದೆಲೊ 4 ಮಂದಮತಿಯೆ ಕೇಳು ನೀನು ಮುಂದೆ ಹಿರಿದು ಬಳಲಬೇಡ ಪೊಂದಿ ಭಜಿಸೊ ರಂಗೇಶವಿಠಲನ ಸುಖವೀವ ದೊರೆಯನ 5
--------------
ರಂಗೇಶವಿಠಲದಾಸರು
ಅವ ಸಂತನಲ್ಲಾ ಸಂತರ ವೇಷದಿ ತಿರುಗಲೇನು ಪ ಸಂತರಲ್ಲಿ ಹೋಗು | ಅಂತರ ಸುಖವರಿಲಿಲ್ಲಾ | ತಂತುವಿಡಿಯದೇ ಸ್ಥಿತಿ | ಭ್ರಾಂತತನಲ್ಯಾಡುವವ 1 ಮಂಜುಜ್ಞಾನದಿಂದ ಬಹು | ರಂಜನೆಯಾ ಮಾಡಿ | ಬಂಜೆ ಹೂವಿನಂತೆ ಒಣ | ಭಂಜನೆಯಾ ದೋರುವವ 2 ನಿಷ್ಠೆಯಿಂದ ಪರವಸ್ತು | ಮುಟ್ಟಿಗಾಣಲಿಲ್ಲಾ | ಭ್ರಷ್ಟ ಬೂಟಿಕೆಯ ಮಾಡಿ | ಹೊಟ್ಟೆಯನೇ ಹೊರೆವನವ 3 ಮ್ಯಾಲ ಸಾಧುವೇಷ | ಒಳಗೆ ಖಳದೋಷ | ಕುಂದ ನೀಡುವವ 4 ಗುರು ಮಹಿಪತಿಸುತ | ಸಾರಿದ ನೋಡಾ | ಶರಣರಿಗೇ ಬಾಗಿ ಅವರ ಚರಿತೆಯ ಕೊಂಡಾಡದವ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅವಗೆಲ್ಲಿಹುದೋ ನಿಜ ಮುಕ್ತಿ | ದಾವಗಿಲ್ಲವೋ ಗುರುಪಾದ ಭಕ್ತಿ ಪ ತಂದಿ ತಾಯಿ ಗುರು ಬಂಧು ಬಳಗಾ | ಎಂದು ಹಂಬಲಿಡದೆ ಮನಲೀಗಾ 1 ಗುರು ಕಂಡಾಗಳೆವೆ ಶರಣೆಂಬಾ | ತಿರುಗಿ ನೋಡಲು ಮರವನು ಡೊಂಬಾ2 ಹೊರಗ ದೋರುವ ಡೊಂಬ ಅನೇಕ | ಗುರುಸೇವೆಗೆ ಹೋದನು ಹೋಕಾ 3 ಪೂಜೆ ಸರ್ವೋಪಚಾರದಿ ಮಾಡಿ | ತ್ಯಾಜ ಪಡಿಯನು ಗುರುದಯ ಕೂಡಿ4 ಪರಮ ಗತಿಗಿದೇ ಕಾರಣವೆಂದು | ಗುರುಮಹಿಪತಿ ಬೋಧಿಸಿದನಿಂದು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅವತರಿಸಿದ ನೃಸಿಂಹ | ಶ್ರೀ ಹರಿ ಪರಬ್ರಹ್ಮ ಪ ತವಕದಿ ಭೂ ಭಾರವನಿಳುಹುವುದಕೆ ಅ.ಪ ನೊಡನೆ ಘುಡುಘುಡಿಸಿ ಕಿಡಿಗಳುದುರೆ ಕೋಟಿ ಸಿಡಿಲಿದೆನ್ನುತ ಕಿವುಡುಗೊಳೆ ಲೋಕವು 1 ತುಂಬಿ ಪೊಗೆ ಸುತ್ತಿ ಉರಿಯಲು ಶ ತಾನಂದಾದ್ಯಮರರು ಕರಗಳ ಮುಗಿ ದಾನತರಾಗಿ ನಮೋನಮೋಯೆನಲ್ 2 ಚಿಟಿಲು ಚಿಟಿಲು ನಿರ್ ನಿಟಿಲು ಶಬ್ದದಿ ಕ್ತಟಗಳೊಡೆಯೆ ಲಟಕಟಿಸೆ ಭುವನಚಯ ಹಟಯೋಗದ ಮುನಿಕಟಕವು ಗುರುರಾಮ ವಿಠಲನ ಪೊಗಳುತ ಮಿಟಿಮಿಟಿ ನೋಡಲು 3
--------------
ಗುರುರಾಮವಿಠಲ
ಅವತಾರ ಸಿರಿವರ ಘನ ಕರುಣಾಕರ ಪೊರೆಯೈ ಪ. ನಿಗಮಚೋರನನ್ನು ಕೊಂದು ನಗವಪೊತ್ತನೆ ವಿಗಡದೈತ್ಯನನ್ನ ಸೀಳಿ ಜಗವನಾಂತನೇ 1 ಘುಡುಘುಡಿಸಿ ಕಂಬವನು ಒಡೆದುಬಂದನೆ ಪಿಡಿದು ಖಳನ ಕರುಳಬಗೆದು ಕೊರಳೊಳಾಂತನೆ2 ಇಂದ್ರಗನುಜನಾಗಿ ದಾನವೇಂದ್ರ ಗೊಲಿದು ನೀಂ ನಿಂದು ಬಾಗಿಲಕಾವ ಗೊಲ್ಲನಂದಮೇನಿದೈ 3 ಹಡೆದತಾಯ ಶಿರವಪಿಡಿದು ಕಡೆದ ಭಾರ್ಗವ ಮಡದಿಚೋರನನ್ನು ಕೊಂದ ಒಡೆಯ ರಾಘವ 4 ಮಾವ ಕಂಸನ ಕೊಂದ ವಸುದೇವನಂದನ ಮಾಧವ 5 ಮತ್ತೆ ತ್ರಿಪುರ ಸತಿಯರ ಚಿತ್ತಕಲಕಿದ ಉತ್ತಮಾಶ್ವವನ್ನೆ ಹತ್ತಿ ಕಲ್ಕಿಯೆನಿಸಿದ 6 ಉರಗಶಯನ ಗರುಡಗಮನ ಪರಮಪಾವನ ವರದ ಶೇಷಶಿಖರಧಾಮ ಶ್ರೀನಿಕೇತನ 7
--------------
ನಂಜನಗೂಡು ತಿರುಮಲಾಂಬಾ