ಒಟ್ಟು 1057 ಕಡೆಗಳಲ್ಲಿ , 98 ದಾಸರು , 821 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವಗೇಕೆ ಪರಿಮಳ ಇವಗೇಕೆ ಶೃಂಗಾರ |ನವನೀತ ಚೋರ ನಾರುವ ಗೊಲ್ಲಗೆಪಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ಲೇಪ |ತಲೆದೋರದವಗೇಕೆ ದಟ್ಟ ಪುನುಗು |ಬಲು ಕೇಶದವಗೇಕೆ ಬಾವನ್ನದ ಲೇಪ |ಸಲೆಘೋರರೂಪಿಗೇಕೆ ನೊಸಲ ಸಾದು 1ತುಲಸಿಮಾಲೆಯ ಧರಿಸಿದವಗೇಕೆ ಜವ್ವಾಜಿ |ಕೊಲೆಗಡುಕಗೀಕೆ ಕುಂಕುಮತಿಲಕ ||ಅಲೆದಾಡುವವಗೇಕೆ ಅಂಗರಾಗದ ಸುಖ|ಕಳವು ಮಾಡುವವಗೇಕನಂಗ ಸೊಬಗು 2ಪರಸತಿಯ ಬಯಸುವಗೆ ಪನ್ನಗಶಯನವೇಕೆಹರಿದಾಡುವನಿಗೇಕೆ ಅಡಪ - ಡವಿಕೆ ||ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ |ಧರೆಗಧಿPನಾದನೀಪುರಂದರ ವಿಠಲ3
--------------
ಪುರಂದರದಾಸರು
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು
ಈಗಾಗೋ ಇನ್ನಾವಾಗೋ ಮತ್ತೀಗಾತ್ರ ಅಸ್ಥಿರವಣ್ಣಹೇಗಾದರು ಹೊಗಳಾಡಲಿ ಬೇಕುನಾಗಾರಿಗಮನನ್ನ ಪ.ಮನಹರಿದತ್ತಲೆ ಹರಿಹರಿದಾಡಿದಿನ ಹೋದವು ವೃಥಾ ನೋಡಿ ದುರ್ಧನದಾಸೆಲಿ ಬಾಡಿ ದುರ್ಜನರಾರಾಧನೆ ಮಾಡಿ ಈತನು ಚಪಲತೆ ಹೋಗಾಡದೆ ಶ್ರೀಹರಿಗುಣಕುಣಿದು ಕೊಂಡಾಡಿ1ತುಂಬಿದಸಿರಿಬಿಡಿಸಿ ಸೆರೆ ಒಯಿವರು ವಿಲಂಬಿಲ್ಲದೆ ಜವನವರು ಕೃಪೆಯೆಂಬುದ ಅರಿಯರು ಅವರುಹಲವ್ಹಂಬಲಿಸಿದರೊದೆವರು ಸುಡುನಂಬಲಿಬಾರದು ಸಂತೆಯವರಅಂಬುಜನಾಭನ ಸಾರು 2ಸಕಳಾಗಮ ವೇದೋಕ್ತಿ ವಿಚಾರಕೆಮುಖವೆನಿಸುವುದಾಚಾರ ಆಸುಖವೇ ಧರ್ಮದಸಾರಈಅಖಿಳಕೆ ಪ್ರಭು ಯದುವೀರಭಕ್ತವತ್ಸಲ ಪ್ರಸನ್ವೆಂಕಟರಾಯನಸಖ್ಯವಿಡಿದರೆ ಭವದೂರ 3
--------------
ಪ್ರಸನ್ನವೆಂಕಟದಾಸರು
ಊದೊ ಕೊಳಲನು ಕೃಷ್ಣ ಊದೊ ಕೊಳಲನುವೇದ ವೇದ್ಯ ಊದು ಕೊಳಲ ನಾದ ತುಂಬೆ ನಭದಿ ಕೃಷ್ಣ ಪಮದನಜನಕ ಮೋಹನಾಂಗಚದುರೆಯರಿಗೊಲಿದು ವನದಿವಿಧ ವಿಧ ಕ್ರೀಡೆಗಳನಾಡಿಮುದವನಿತ್ತ ಮಧುಸೂದನನೆ 1ಗೋಪಿಕಾ ಸ್ತ್ರೀಯರ ವಾಕ್ಯಶ್ರೀಪತಿಯುಕೇಳಿಮುದದಿತಾಪಕಳೆದುಸುರರುತಲೆಯತೂಗೆ ಹರುಷದಿಂದಕೊಳಲನೂದಿದ ಚಲುವ ಕೊಳಲನೂದಿದ 2ನಾರಿಯರು ನಲಿದು ಬಂದುವಾರಿಧಿಯೊಳು ಸರಸವಾಡೆಮಾರಮಣನು ಸೀರೆಗಳನುಗಾರುಮಾಡಿ ಕದಿವರೇನೊತಾರೊ ವಸನವದುರುಳಕೃಷ್ಣ ತಾರೊ ವಸನವÀ3ಅಂಗನೆಯರೆ ನಿಮ್ಮ ವ್ರತಕೆಭಂಗವಾದ ಕಾರ್ಯವೆಸಗೆವಂದಿಸಿದರೆ ಕೊಡುವೆನೆಂದುರಂಗ ನಲಿದು ನುಡಿದ ಮುದದಿವಸನನೀಡಿದ ರಂಗವಸನನೀಡಿದ4ತರುಳರೆಲ್ಲ ಕೂಡಿಕೊಂಡುಕರುಗಳನ್ನೆ ಪಾಲಿಸುತಿರೆಮರೆಯ ಮಾಡಿ ಕರುಗಳನ್ನುದುರುಳತನವು ತರವೆ ಕೃಷ್ಣತಾರೊ ಕರುಗಳ ಕೃಷ್ಣ ತಾರೊ ಕರುಗಳ 5ಮಾತೆಯರನೆ ಅರಸುತಿರಲುಪ್ರೀತಿಯಿಂದ ಕರುಗಳನ್ನುಜೋಕೆಯಿಂದ ಪಿಡಿದು ತರಲುಯಾತಕೀಪರಿ ನಿಂದಿಸುವದುನೋಡಿ ಕರುಗಳ ನಿಂತಿರುವದು ನೋಡಿ ಕರುಗಳ 6ಗೊಲ್ಲತಿಯರ ಮನೆಯ ಪೊಕ್ಕುಮೆಲ್ಲುತಿರಲು ಬೆಣ್ಣೆ ಮೊಸರುನಲ್ಲೆಯರು ಪಿಡಿದು ಹರಿಯನಿಲ್ಲೊ ನಿಲ್ಲೊ ನಿಲ್ಲೊ ಕೃಷ್ಣಚೋರ ಕೃಷ್ಣನೆ ತೋರೊ ನಿಜವಜಾರಕೃಷ್ಣನೆ7ಚಿಕ್ಕ ಪ್ರಾಯದವರೆಕೇಳಿಸೊಕ್ಕಿನಿಂದ ನುಡಿವರೇನೆಬೆಕ್ಕು ತಿಂದ ತೆರವರಿಯದೆಧಿಃಕರಿಸುವುದುಚಿತವಲ್ಲನುಡಿವರೇನೆಲೆ ನಿಷ್ಠುರ ನುಡಿವರೇನೆಲೆ 8ಮಕ್ಕಳೆಲ್ಲ ಆಡುತಿರಲುಕಕ್ಕು ಬಿಕ್ಕು ಮಾಡಿಅವರದಿಕ್ಕು ದಿಕ್ಕುಗಳಿಗೆ ನಡೆಸಿಠಕ್ಕುತನವು ತರವೆ ಕೃಷ್ಣನಡತೆಯಲ್ಲವೊತುಡುಗಕೃಷ್ಣ ನಡತೆಯಲ್ಲವೊ9ಮಕ್ಕಳಾಡುತಿರಲು ಮಧ್ಯಸರ್ಪವೆರಡು ಕಾದಿ ಬರಲುದಿಕ್ಕು ತೋರದಂತೆ ಭಯದಿದಿಕ್ಕು ದಿಕ್ಕಿಗೆ ಓಡದಿಹರೆದುಡುಕು ನನ್ನದೆ ದೂರುವಿರೆನ್ನ ದುಡುಕು ನನ್ನದೆ 10ಹರಿಯ ಮಾತುಕೇಳಿಮುದದಿಹರುಷದಿಂದ ನಮಿಸಿ ಕೃಷ್ಣಗೆತ್ವರಿತದಿಂದಲಿ ಒಲಿಯೊ ಮುರಳೀ-ಧರನೆ ಹರುಷದಿಂದ ಕೃಷ್ಣನಮಿಸಿ ಬೇಡುವೆವೊ ಕೃಷ್ಣ ಸ್ಮರಿಸಿ ಪಾಡುವೆವೊ 11ಸರಸವಾಡÀುತಿಹಿರಿ ಎನ್ನಸ್ಮರಣೆಯಿಂದ ತನುವ ಮರೆತುಕ್ಷಮಿಪೆ ನಿಮ್ಮ ಗೃಹಕೆ ತೆರಳಿವನಜಮುಖಿಯರೆಲ್ಲರುತೆರಳಿರೆಂದನು ತರುಣಿಯರೆನ್ನ ಸ್ಮರಿಸಿರೆಂದನು 12ಕರುಣದಿಂದ ಸಲಹುತಿಹೆನುದುರಿತವೆಲ್ಲ ತರಿದು ಮುದದಿಕಮಲನಾಭ ವಿಠ್ಠಲನೆಂದುಕುಣಿದು ಪಾಡಿ ವನಿತೆಯರೆನಲಿದು ಪಾಡಿರೆ ನಾರಿಯರೆಲ್ಲ ಕುಣಿದು ಪಾಡಿರೆ 13
--------------
ನಿಡಗುರುಕಿ ಜೀವೂಬಾಯಿ
ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ |ಗುಣನಿಧಿಯೆ ನೀ ಎನ್ನ ಕಡಹಾಯಿಸಯ್ಯ ಪಒಡಲಿನಾಸಗೆ ಪರರ ಕಡೆಯಿಂದ ಧನವನ್ನು |ತಡೆಯದಲೆ ತಂದು ಸಂತೋಷ ಪಡುವೆ ||ಕೊಡುವ ವೇಳೆಗೆಅವರಬಿರುನುಡಿಗಳನು ಕೇಳ್ವ |ಕಡು ಪಾಪವನ್ನು ನೀ ಕಡೆಹಾಯಿಸಯ್ಯ 1ಕೊಟ್ಟ ದೊರೆಗಳು ಬಂದು ನಿಷ್ಠುರದ ಮಾತಾಡಿ |ಎಷ್ಟು ಬೈಯ್ವರೊ ತಮ್ಮ ಮನದಣಿಯಲು ||ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ |ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ 2ಆಳಿದೊಡೆಯನ ಮಾತಕೇಳಿನಡೆಯಲು ಬಹುದು |ಉಳಿಗವ ಮಾಡಿ ಮನದಣಿಯ ಬಹುದು ||ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |ಪೇಳಲಳವಲ್ಲ ಋಣದವಗೊಂದು ಸೊಲ್ಲ 3ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||ಉರಿವ ಉರಿಯೊಳು ಹೊಕ್ಕು ಹೊರ ಹೊರಟು ಬರಬಹುದು |(ಬೆರೆದು) ಸೇರಲು ಬಹುದು ವೈರಿಗಳ ಮನೆಯ 4ಹೆತ್ತಸೂತಕಹತ್ತುದಿನಕೆ ಪರಿಹಾರವು |ಮೃತ್ಯು ಸೂತಕವು ಹನ್ನೆರಡು ದಿನವು ||ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ 5ಅವರದ್ರವ್ಯವ ದಾನ-ಧರ್ಮವನು ಮಾಡಿದರೆ |ಅವರಿಗಲ್ಲದೆ ಪುಣ್ಯ ಇವರಿಗುಂಟೆ ||ಅವರದ್ರವ್ಯದಿ ತೀರ್ಥ-ಯಾತ್ರೆಯನು ಮಾಡಿದರೆ |ಅವರಮನೆಬಾಡಿಗೆಯ ಎತ್ತಿನಂದದಲಿ6ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ |ಕಂದಿ ಕುಂದಿದೆನಯ್ಯ ಕರುಣಾನಿಧೆ ||ಇಂದಿರಾರಮಣ ಶ್ರೀ ಪುರಂದರವಿಠಲನೆ |ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ 7
--------------
ಪುರಂದರದಾಸರು
ಎಚ್ಚರದಲಿ ನಡೆ ಮನವೆ - ನಡೆಮನವೆ - ಮುದ್ದುಅಚ್ಯುತನ ದಾಸರ ಒಡಗೂಡಿ ಬರುವೆ ಪ.ಧರ್ಮವ ಮಾಡುವುದಿಲ್ಲಿ - ಇನ್ನುಬ್ರಹ್ಮನ ಸಭೆಯ ತೋರುವರು ಮುಂದಲ್ಲಿಕರ್ಮಯೋಜನೆಗಳು ಇಲ್ಲಿ - ಬೆನ್ನಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ 1ಅನ್ನದಾನವ ಮಾಳ್ಪುದಿಲ್ಲಿ - ಮೃಷ್ಟಾನ್ನವ ತಂದು ಮುಂದಿಡುವರು ಅಲ್ಲಿಅನ್ಯಾಯ ನುಡಿಯುವುದಿಲ್ಲಿ - ಭಿನ್ನಭಿನ್ನವ ಮಾಡಿ ತಿನ್ನಿಸುವರು ಅಲ್ಲಿ 2ಮೋಸವ ಮಾಡುವದಿಲ್ಲಿ - ಸೀಸಕಾಸಿ ಬಾಯೊಳಗೆ ಹೊಯ್ಯುವರಲ್ಲಿದಾಸರ ಪೂಜಿಪುದಿಲ್ಲಿ - ಉರ್ವೀಶಾಧಿಪತಿ ಬಂದನೆಂಬರು ಅಲ್ಲಿ 3ವಂಚನೆ ಮಾಡುವದಿಲ್ಲಿ - ಕಾದಹಂಚಿನ ಪುಡಿಯ ತಿನ್ನಿಸುವರು ಅಲ್ಲಿಪಂಚಾಮೃತದ ಪೂಜೆ ಇಲ್ಲಿ ನಿನಗೆಕಂಚು - ಕಾಳಾಂಜಿಯ ಪಿಡಿದಿಹರಲ್ಲಿ 4ಚಾಡಿಯ ನುಕಿವುದು ಇಲ್ಲಿ ಅದ -ನಾಡಿದ ನಾಲಗೆ ಸೀಳುವರಲ್ಲಿಬೇಡಬಂದರೆ ಬಯ್ವುದಿಲ್ಲಿ ನಿನ್ನ -ಓಡಾಡುವ ಕಾಲು ಕತ್ತರಿಪರಲ್ಲಿ 5ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು -ಹದ್ದು ಕಾಗೆಗಳಿಗೆ ಈಯುವರಲ್ಲಿಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ -ಗುದ್ದಲಿ ಬೆನ್ನೊಳು ಎಳೆಯುವರಲ್ಲಿ 6ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ -ಕಟ್ಟಿ ಈಟಿಯಿಂದ ಇರಿಯುವರಲ್ಲಿಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲುಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ 7ಆಲಯದಾನವು ಇಲ್ಲಿ ವಿ -ಶಾಲ ವೈಕುಂಠನ ಮಂದಿರವಲ್ಲಿಆಲಯ ಮುರಿಯುವುದಿಲ್ಲಿ ನಿನ್ನ -ಶೂಲದ ಮೇಲೇರಿಸಿ ಕೊಲುವರಲ್ಲಿ 8ತಂದೆ ಮಾತನು ಮೀರುವುದಿಲ್ಲಿ ಹುಲ್ಲು -ದೊಂದೆಯಕಟ್ಟಿ ಸುಡಿಸುವರಲ್ಲಿತಂದೆ ತಾಯ್ಗಳ ಪೂಜೆ ಇಲ್ಲಿ ದೇ -ವೇಂದ್ರನ ಸಭೆಯ ತೋರುವರು ಮುಂದಲ್ಲಿ 9ಗಂಡನ ಬೈಯ್ಯುವುದಿಲ್ಲಿ ಬೆಂಕೆಕೆಂಡವ ತಂದು ಬಾಯಲಿ ತುಂಬುವರಲ್ಲಿಕೊಂಡೆಯ ನಡಿಸುವುದಿಲ್ಲಿ ಬೆಂಕೆಕುಂಡವ ತಂದು ತಲೆಯಲಿಡುವರಲ್ಲಿ 10ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನಕಣ್ಣಿಗೆ ಸುಣ್ಣವ ತುಂಬುವರಲ್ಲಿಕನ್ಯಾದಾನವ ಮಾಳ್ಪುದಿಲ್ಲಿ ನಮ್ಮಚಿನ್ನಪುರಂದರವಿಠಲನೊಲಿವನು ಅಲ್ಲಿ11
--------------
ಪುರಂದರದಾಸರು
ಎಂತಹುದೊ ನಿನ್ನ ಭಕುತಿ ? |ಸಂತತ ನಿನ್ನ ದಾಸರ ಸಂಗವಿರದೆನಗೆ ಪ.ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ - ಕೃ - |ಪಣ ಮನಕೆ ಎಂತಹದು ನಿನ್ನಯ ಭಕುತಿ 1ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |ಒಡಲ ತೋರಿಸಿದೆನೊ ಕಡುದೈನ್ಯದಿ ||ಒಡೆಯ ನೀನಹುದೆಂದು ಮಡದಿ - ಮಕ್ಕಳಿಗೆ ಹೆಸ - |ರಿಡುವ ಅವರಡಿಗೆ ಎರಗುವನ ಮನಕೆ 2ಹೋಗಿಬಾರೈ ಎಂದು ಅತಿಗಳೆದರು ತಲೆ - |ಬಾಗಿ ನಿಂತು ಅಲ್ಲಿ ಮೌನವಾಗಿ ||ಓಗರತೆ ಮನೆಮನೆ ತಪ್ಪದೆ ತಿರುಗುವ |ಜೋಗಿಯ ಕೈಯಕೋಡಗದಂಥ ಮನಕೆ 3ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನಪರಿ - |ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ 4ವಟುವಾಗಿ ಬಲಿಯ ದಾನವನು ಬೇಡಹೋದ |ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||ವಟಪತ್ರಶಾಯಿ ಶ್ರೀಫಣಿ ವರದಪುರಂದರ - |ವಿಠಲ ನಿನ್ನ ದಾಸರ ಸಂಗಸುಖವಿರದೆ 5
--------------
ಪುರಂದರದಾಸರು
ಎಂತು ಶೋಭಿಸುತಿಹಳು ಈ ಕನ್ನಿಕೆಸಂತೋಷದಿಂದಲಿಸುರರುಸ್ತುತಿಸುತಿರಲುಪಮಂಧರಗಿರಿ ತಂದು ಸಿಂಧುವಿನೊಳಗಿಟ್ಟುಚಂದದಿಂ ಮಥಿಸಲಮೃತ ಪುಟ್ಟಲುಬಂದು ದಾನವರ ಪಹರಿಸಬೇಕೆನುತಿರಲುನಿಂದರುಸುರರುಮುಂದೋರದೆ ಚಿಂತಿಸೆಇಂದಿರಾಪತಿ ಇವರ ಭಾವವಕಂಡುಮನದಲಿ ಹರುಷಪಡುತಲಿಬಂದು ಅಸುರರ ಸುರರ ಮನ್ನಿಸಿನಿಂದ ಶ್ರೀ ಗೋವಿಂದ ಮುದದಲಿ 1ಸಾಲಾಗಿ ಕುಳಿತಿರಿ ಮೇಲಾದಮೃತವನ್ನುಲೀಲೆಯಿಂದಲಿ ಬಡಿಸುವೆನೆನ್ನಲುಕೇಳಿಅಸುರರು ಹರುಷತಾಳಿ ಸಂಭ್ರಮದಿಂದಸಾಲಾಗಿ ಕುಳಿತು ಆ ವೇಳೆ ನೋಡುತಲಿರಲುಶ್ರೀ ರಮಣ ಕರದಲ್ಲಿ ಕಲಶವÀಲೀಲೆಯಿಂದಲಿ ಪಿಡಿದು ನಿಲ್ಲಲುತಾಳಿ ಹರುಷವ ದಾನವರು ಸÀು-ಮ್ಮಾನದಿಂದಲಿ ನೋಡÀುತಿಹರು 2ಗಂಗೆಯ ಪಡೆದ ಪಾದಗಳ ಶೃಂಗಾರಅಂದಿಗೆ ಕಿರುಗೆಜ್ಹೆ ಸರಪಣಿಯುಚಂದುಳ್ಳ ಬೆರಳುಗಳಿಗೆ ಪಿಲ್ಲಿ ಕಿರುಪಿಲ್ಲಿ ಕಾ-ಲುಂಗರಗಳನಿಟ್ಟು ರಂಭೆಯಂತ್ಹೊಳೆಯಲುಬಂದಿ ಬಾಪುರಿ ಥಳಥಳಿಸುತಲಿಚಂದದನಾಗಮುರಿಗಿ ತಾಯಿತಸುಂದರಹಸ್ತಕಡಗ ಹಾಸರಇಂದಿರಾಕ್ಷಿ ಕೈ ಬಳೆಗಳ್ಹೊಳೆಯುತ 3ಹಲವು ಸೂರ್ಯರ ಕಾಂತಿ ಹೊಳೆವೊ ಪೀತಾಂಬರಸರಿಗೆ ಅಂಚಿನ ಕುಪ್ಪುಸವನೇ ತೊಟ್ಟುನಡುವಿಗೆ ನವರತ್ನ ಬಿಗಿದ ಪಟ್ಟೆಯನಿಟ್ಟುಸಡಗರದಲಿ ಆಣೆಮುತ್ತಿನ ಸರಗಳುಸರಗಿ ಏಕಾವಳಿಯು ವಜ್ರದಪದಕಗಳು ಥಳಕೆಂಬ ಸರಗಳುಕೊರಳ ಗೆಜ್ಜೆಟ್ಟಿಕೆಯು ಕಂಠಿಯುಮುರಳಿಸರ ಕಠ್ಠಾಣಿವಲಿಯುತ 4ಹೊಳೆವೊಗಲ್ಲಕೆ ಥಳಥಳಿಪ ಅರಿಶಿನಹಚ್ಚಿಹೊಳೆವೊ ಮೀನ್ ಬಾವುಲಿ ಕರ್ಣದಲಿಗಿಳಿಗೆಜ್ಜೆ ಚಳತುಂಬು ಬುಗುಡಿ ಬಾವುಲಿ ಚಂದ್ರಮುರುವುಸರಪಳಿಗಳು ಥಳಥಳ ಹೊಳೆಯಲುಆಣಿಮುತ್ತಿನ ಮುಖುರ ಬೇಸರಿಜಾಣೆ ನಾಶಿಕದಲ್ಲಿ ಹೊಳೆವ ಬು-ಲಾಕುನಿಟ್ಟಿ ಬೆಳಕು ಗಲ್ಲದಮೇಲೆ ಥಳಥಳ ಹೊಳೆವ ಕಾಂಚಿಯು 5ಸಣ್ಣ ಬೈತಲೆ ಬಟ್ಟು ಚಂದ್ರ ಸೂರ್ಯರ ನಿಟ್ಟುಹಿಂದೆ ಜಡೆಬಿಲ್ಲೆ ಗೊಂಡ್ಯಗಳನಿಟ್ಟುಚಂದ್ರ ಸೂರ್ಯರ ಪೋಲ್ವ ಚೌರಿ ರಾಗಟಿ ಜಡೆಬಂಗಾರ ಹೊಳೆಯುತ್ತ ಬಡನಡು ಬಳಕುತ್ತಕಂಗಳ ಕಡೆನೋಟದಿಂದಲಿಭಂಗಪಡಿಸುತ ಅಸುರ ಕೋಟಿಯಮಂದಗಮನದಿ ಅಡಿಯನಿಡುತಲಿಬಂದಳಮೃತದ ಕಲಶ ಪಿಡಿಯುತ 6ಕಂಗಳುಮುಚ್ಚಿ ಕುಳಿತಿರಲು ದಾನವ ಪಂಕ್ತಿಮುಂದೆ ಕಾಲ್ಗೆಜ್ಜೆ ಧ್ವನಿಯ ಮಾಡುತಅಂದಿಗೆ ಸರಪಣಿನಾದ ತುಂಬಲು ಭರದಿಸುಂದರಿ ಬಂದಿಹಳೆÀಂದು ದಾನವರೆಲ್ಲಮಂದಹಾಸದಿ ಮೈಮರೆತು ಮತ್ತೊಂದು ತೋರದೆ ಕಳವಳಿಸುತಲಿರೆಇಂದಿರೇಶನು ದೇವೆತೆಗಳಿಗೆಪೊಂದಿಸಿದ ಅಮೃತವನು ಹರುಷದಿ 7ಕಲಕಲಕೂಗುತ ಕಲಹಕೆನ್ನುತ ಬರೆಬಲವು ಸಾಲದೆ ಹಿಂದಿರುಗಲವರುಸುರರುಪುಷ್ಪದ ಮಳೆಕರೆದರು ದೇವನವರಋಷಿಗಳು ನೆರೆದು ಸ್ತುತಿಸಿ ಕೊಂಡಾಡಲುಪರಮಪುರುಷನೆ ಪುಣ್ಯಚರಿತನೆಗರುಡ ಗಮನನೆ ಉರಗಶಯನನೆಸರಸಿಜಾಕ್ಷನೆ ನಮಿಪೆವೆನ್ನುತಸನಕಾದಿಗಳು ಸಂಸ್ತುತಿಸೆ ದೇವನ 8ಪರಶಿವನಿದ ನೋಡಿ ಪರಿಪರಿ ಪ್ರಾರ್ಥಿಸಿತರುಣಿಯ ರೂಪವ ನೋಡಲನುವಾಗಲುಸರಸಿಜಾಕ್ಷನ ಸ್ತ್ರೀರೂಪ ನೋಡುತಲಿ ಮೈಮರೆದು ಕೈಮುಗಿದು ಕೊಂಡಾಡಿ ಸುತ್ತಿಸಿದನುಮರಳಿ ಭಸ್ಮಾಸುರನ ಭಾಧೆಗೆತರಹರಿಸಿ ಮುಂದೋರದಿರುವಸಮಯದಲಿ ಸ್ತ್ರೀರೂಪ ತಾಳುವತ್ವರದಿ ರಕ್ಷಿಸಿ ಪೊರೆದ ದೇವನು 9ಕಮಲಸಂಭವನಯ್ಯಕಮಲಜಾತೆಯ ಪ್ರಿಯಕಮಲಾಕ್ಷಕಂಸಾರಿಕರುಣಾನಿಧೆಶರಣು ಶರಣೆನ್ನುತ ನಭವ ತುಂಬಲು ಸ್ವರಸುರಗಂಧರ್ವರು ಪಾಡಿಪೊಗಳುತಿಹರೊ ದೇವಕನಕಗರ್ಭನ ಪಿತನೆ ರಕ್ಷಿಸುಕಮಲನಾಭ ವಿಠ್ಠಲನೆ ನಮಿಸುವೆಸವಿನಯದಿ ನಿನ್ನ ಸ್ತುತಿಪ ಭಾಗ್ಯವಕರುಣಿಸೆನಗೆ ಶ್ರೀ ಕರುಣಾನಿಧಿಯೆ 10
--------------
ನಿಡಗುರುಕಿ ಜೀವೂಬಾಯಿ
ಎತ್ತಿಕೊಳ್ಳೆ ಗೋಪೀ ರಂಗನ |ರಚ್ಚೆಮಾಧವರಾಯ ನಿಲುವನಲ್ಲ||ಪ||ಕರ್ಣದ ಮಾಗಾಯಿ ಕದಪಲಿ ಹೊಳೆಯುತ |ಎಣ್ಣೆಮಣಿಯ ಕೊರಳಲಿ ಹುಲಿಯುಗುರು ||ಚಿನ್ನದ ಬಾಯೊಳು ಅಮೃತವ ಸುರಿಯುತ್ತ |ಬೆಣ್ಣೆ-ಹಾಲನುಂಬುವೆನೆಂದು ಬಂದ 1ಅಂಬೆಗಾಲಿಕ್ಕುತ ತುಂಬಿಯೊಲ್ ಮೊರೆಯುತ &mಜಚಿsh; |[ಚೆಂದದ] ಅರಳೆಲೆ ನಲಿದಾಡುತ ||ಬಂದು ಸರಳನಂದದಿ ಬಾಯ ಬಿಡುತ ಮು &mಜಚಿsh; |ಕುಂದನು ಮೊಲೆಯನುಂಬುವೆನೆಂದು ಬಂದ 2ಬಿಗಿದ ಪಟ್ಟೆಯಲಿ ಬಾಯ್‍ತಲೆಯು ಹೊಳೆಯುತಿರೆ |ಚಿಗುಟುತ ಎಡದ ಕೈಯಲಿ ಕುಚವ ||ನಗುತ ನಾಚುತ ಗೋಪಿಯ ಮುಖ ನೋಡುತ |ಮಿಗೆ ನಲಿನಲಿದುಂಡ ಪುರಂದರವಿಠಲ 3
--------------
ಪುರಂದರದಾಸರು
ಎಂಥ ಉಪಕಾರಿಗಳು ಸುಜನರು ಶ್ರೀಕಾಂತ ನಿನ್ನೊಲುಮೆಯ ಉಪಾಯದೋರುವರು ಪ.ಅಜ್ಞಾನ ಕತ್ತಲೆಯೊಳು ಎಡಹಿ ನಡೆಗೆಟ್ಟಡಿ ಯವÀ? ರಿಗೆಸುಜ್ಞಾನವೆಂಬ ಅಂಜನವನಿಟ್ಟುಪ್ರಜ್ಞಾಪೂರ್ಣರ ಶಾಸ್ತ್ರಪ್ರಭೆಯಲ್ಲಿ ಪಥವಿಡಿಸಿಯಜೆÕೀಶ ನಿನ್ನ ಬಳಗವ ಕೂಡಿಸುವರೊ 1ಭವತಾಪದಲಿ ಬಳಲಿ ಎದೆಯಾರಿದರಿಗೆ ಸನ್ನವಭಕ್ತಿಯಮೃತ ರಸವಾರಿನಿಧಿಯಸವಿದೋರಿ ಸ್ನಾನಪಾನವ ಕಲಿಸಿ ಸುಖವಿತ್ತುಸವಿಯದಾನಂದ ಉರದಲಿ ಪೊಯ್ದಿಡುವರು 2ವಿಷಮ ವಿಷಯ ಧ್ಯಾನ ದಾರಿದ್ರ್ಯ ಪೀಡಿತಮಾನುಷರ ಜಂಗುಳಿಗೆ ವೈರಾಗ್ಯವೆಂಬಅಸಮಭಾಗ್ಯವನಿತ್ತುಭವಬಿಡಿಸಿ ಸಲಹಿ ಅಕಲ್ಮಷ ಪ್ರಸನ್ನವೆಂಕಟಪತಿಯ ನಂಬಿಸಿದರು 3
--------------
ಪ್ರಸನ್ನವೆಂಕಟದಾಸರು
ಎಂಥ ವಿಕ್ರಮಳೆ ನೀನುಎಂಥ ವಿಕ್ರಮಳೆ ನಿನಗೆಣೆ ಯಾರು ಶ್ರೀ ಲಕ್ಷ್ಮೀ-ಕಾಂತ ರೂಪದಿ ಕೊಂದೆ ಮಧುಕೈಟಭರ ದೇವಿಪಹರಿಕಿವಿಯಲಿ ಅವತರಿಸಿ ಮಧು ಕೈಟಭರ-ವರೆನಿಸಿ ಪಡೆಯೆ ವಿಧಿಯಿಂ ವರವಅರಿದುವಿಷ್ಣುವಿನಿಂದ ಮರಣ ಇವರಿಗೆಂದುಸ್ಮರಣೆಯ ಮಾಡಿದ ದೇವಿ ಪಾದಪಂಕಜಪರಮಮಂಗಳ ವಿಷ್ಣು ಎಬ್ಬಿಸು ಈ ಕ್ಷಣಹರಣವನೆ ಕಾಯಲಿ ಮೂರ್ವರು ನಿಮ್ಮಚರಣವ ನಂಬಿರಲಿ ಎತ್ತಿದಳಾಗಅರಳಿದವು ಕಣ್ಣು ಉಸಿರಾಡಿತು ಮೂಗಿನಲಿ1ಎದ್ದವನಚ್ಯುತ ಬ್ರಹ್ಮ ಏಳನೇ ಶರಧಿಯೊಳೆದ್ದ ಬಡಬನಂದದಲಿ ಮೃತ್ಯುವಗೆದ್ದ ಮೃತ್ಯುವಿನಂತಾಗಲು ಸಿಡಿಲಿನಮುದ್ದೆಯಂದದಿ ಕಣ್ಣ ಕಿಡಿಯುಕ್ಕೆ ಔಡಗಿ-ದೆದ್ದು ಚಕ್ರಕೆ ಕೈಯನಿಕ್ಕುತ ಹೊಯ್ದನುಅದ್ದಲು ಆ ಮಧುವ ಕೈಟಭನನ್ನುಒದ್ದು ಹಾಕಿದ ಶಿರವ ಇಬ್ಬರ ಕೂಡೆಬಿದ್ದರು ಮಹಾಹವ ಮೂರ್ವರ ಬಹು-ಯುದ್ಧವ ಹೇಳುವುದೇನು ಆ ಬಹು ರೌದ್ರವ2ಆದುದು ಪಂಚ ಸಹಸ್ರ ವರುಷ ಯುದ್ಧತೊಯ್ದರು ರಕ್ತದಿ ಕ್ರೋಧದುಬ್ಬಟ್ಟೆಯಿಂದಕಾದು ಕರಗಿದುದುಕವು ವಿಷ್ಣು ಬೇಸರ್ತ-ಮದ ಬೇಡಿರಿ ವರವನು ನೀಬೇಡೆನೆ ಕೊಟ್ಟ-ರಾದರೆ ಚಕ್ರದಿ ತಲೆ ಹರಿಯಲೆಂದುಛೇದಿಸಿದನು ಶಿರವ ಮೇಧಸು ಕೊಬ್ಬುಮೇದಿನಿಯಾದಿರವ ಹೊಗಳಿದ ಬ್ರಹ್ಮಮಾಧವನ ಸ್ತೋತ್ರವ ತಾನೆಯಾದಬೋಧಚಿದಾನಂದ ಬಗಳಾ ಚಾರಿತ್ರವ3
--------------
ಚಿದಾನಂದ ಅವಧೂತರು
ಎಲೊ ರಮಾಪತಿ ಹಕ್ಕಿಗಳು ಬಾಯಿ ಬಿಡುವಂತೆಬಳಲುವೆವೊ ಈಗ ನಾವೆಲ್ಲ | (ನಾವೆಲ್ಲ) ಈ ಬ್ರಹ್ಮಕುಲದ ಅಭಿಮಾನ ನಿನದಲ್ಲೆ ಪಗೌಡ ಪ್ರಬಲಾಗೆ ತಲೆಗೂಡೆನಿಸಿತೆನಗೆ ನೋಡ ಮನೆಕಡೆಗೆ ಮಡಿವಾಳ | (ಮಡಿವಾಳ) ಮರ ಹಾಳುಮಾಡುವರು ದ್ವಿಜರೆಂಬನು ಜೀಯ 1ಗಡಿಗೆಗಳು ಒಂದನ್ನ ಕೊಡನು ಗ್ರಹಣಗಳು ಹನ್ನೆ-ರಡೂ ಆದರನ್ನಾ ಕುಂಬಾರ | (ಕುಂಬಾರ)ನಿದ ಸ್ಮರಿಸಿಅಡವಿಯೊಳು ಕುಳಿತು ಆ(ಅ ?)ಳಬೇಕು 2ಭಕ್ರಿಯೆಂಬುದು ತುಪ್ಪ ಸಕ್ರಿ ಮಾಡಿದ ಬಡಿಗಅಕ್ರೂರ ವರದ ದಯಾಸಿಂಧು | (ದಯಾಸಿಂಧು) ಎಂದು ಈಅಕ್ರಮವ ನಿನಗೇ ಉಸಿರುವೆ3ಕಾಲರಕ್ಷೆಯ ಹೊಲಿಯ ಧಾಳಾಯ ಕೊಡುಯೆಂದುಗೋಳಾಡಿಸುವನು ಅತಿಶೂದ್ರ | (ಅತಿಶೂದ್ರ) ಈ ದುಃಖಕೇಳುವರೇ ಇಲ್ಲೋ ಪರಮಾತ್ಮ 4ಯರಿಬೀಳು ಅದಕೂ ಮತ್ತೇರಿಸುವನೋ ಎಲ್ಲೋ ಎಂ-ದಿರುಳೆಲ್ಲ ನಿದ್ರಿಲ್ಲೋ ಮೇಲ್ಪøತ್ತಿ | (ಮೇಲ್ಪøತ್ತಿ)ಯೆಂಬುವದುಗುರುತಿಲ್ಲಧೋಯ್ತೋ ಗುರುವರ್ಯ 5ಇದ್ದ ಜ್ಞಾತಿಗಳಿಂದೆ ಮುದ್ದ್ಯಾಗಬೇಕೆಂಬಶ್ರದ್ಧೆಯನೇ ಬಿಟ್ಟು ಅವನನ್ನೇ | (ಅವನನ್ನೇ) ಕೊಂಡಾಡಿಹೊದ್ದಿ ದಿನಗಳದೂ ಬದುಕುವರು6ಈ ರೀತಿ ನೋಡಲ್ಕೆ ಮೂರನೆ ಕಾಲವೇಂತೋರುವದೊ ಯಮಗೆ ಪ್ರಾಣೇಶ | (ಪ್ರಾಣೇಶ) ವಿಠಲ ಉ-ದ್ಧಾರ ಮಾಡುವದು ನೀ ಬಲ್ಲೆ7
--------------
ಪ್ರಾಣೇಶದಾಸರು
ಎಷ್ಟೋಹರಿಮರುತರ ಕೃಪಿ ನಿನ್ನಲ್ಲಿ |ಕೆಟ್ಟುದೇ ಭೂಷಣವಾಗಿಹುದೋ ಪಾರ್ವತೀ ರಮಣ ಪವಿಷವನ್ನೆ ಭೋಜನ ಮಾಡಿ ಜೀರ್ಣಿಸಿಕೊಂಡಿ |ವಸನಬಿಟ್ಟು ಜಿನಸ್ಥಿ ಭಸ್ಮ ಧರಿಸಿ ||ವೃಷಭವಾಹನನಾಗಿ ಭೂತ ಪ್ರೇತಗಳೊಳು ಸ್ಮ |ರಿಸದ ಭೂಮಿಯೊಳಿರಲು ಪೂಜಿಪರು ಸುರರೆಲ್ಲ 1ತಂದೆ ತಲೆ ಕಡಿದುದಕೆಕುಂದುಹೊಂದದಲಿದ್ದೆ |ನಿಂದಿತನ ಶಿರದ ಮೇಲಿರಿಸಿಯಿದ್ದೆ ||ಒಂದೊಂದೆ ನೀನೆ ಪರದೈವ ಎಂದು ಪೇಳ್ದೆ | ಗೋವಿಂದನಿಂದರ್ಚನೆಯ ಕೊಂಡೆ ಭಳಿ ಭಳಿರೆ ಶಿವ 2ಗುರುವೆನಿಸಿಕೊಂಬೆ ಪ್ರಾಣೇಶ ವಿಠಲನೊಳು | ಮತ್ಸರಿಸುತಿಹ ಖಳರಿಗೆ ಇದಲ್ಪವೇನೊ ||ಸರಿವಬ್ಬರಿಗೆ ಆಹೆನೆಂಬುವನು ಕೆಡುವ ನೀ |ಉರುಗನಂತಾಗಬೇಕೆಂದಾಗಿ ಮೆರೆದೆಲವೊ3
--------------
ಪ್ರಾಣೇಶದಾಸರು
ಏನಾದರೂ ಒಂದಾಗಲಿ - ನಮ್ಮ -ಮನೆತುಂಬ ದೇವರು ಮರತುಂಡು ಕಲ್ಲು ಪಅತ್ತೆಯ ಕಣ್ಣೊಂದು ಹರಿಯಲಿ |ಮತ್ತೆ ಮಾವನ ಕಾಲು ಮುರಿಯಲಿ ||ಹಿತ್ತಲಗೋಡೆಯು ಬಿರಿಯಲಿ - ಕಾ -ಳ್ಗತ್ತಲೆಯಾದರೂ ಕವಿಯಲಿ ಹರಿಯೆ 1ಮನೆಯಗಂಡ ಮಾಯವಾಗಲಿ |ಉಣಬಂದ ಮೈದುನ ಒರಗಲಿ -ಸಿರಿ -ಮನೆಯು ಹಾಳು ಹಾಳಾಗಲಿ - ನಾ -ದಿನಿ ಅತ್ತಿಗೆಯರು ಸಾಯಲಿ ಹರಿಯೆ........... 2ಕಂದನ ಕಣ್ಣೊಂದು ಮುಚ್ಚಲಿ | ಆಚಂದ್ರಂಗೆ ಹಾವು ಕಚ್ಚಲಿ ||ದ್ವಂದ್ವಾರ್ಥವನು ಬಿಚ್ಚಲಿ ಪು -ರಂದರವಿಠಲ ಮೆಚ್ಚಲಿ ಹರಿಯೆ............ 3
--------------
ಪುರಂದರದಾಸರು
ಏನೆಂದಳಯ್ಯ ಸೀತೆ |ನಿನಗೇನ ಮಾಡಿದಳೊ ಪ್ರೀತೆ ಪದಾನವನ ಪುರದೊಳಗೆ ದಾರಿಯನು ನೋಡುತಲೆ |ಧ್ಯಾನವನು ಮಾಡುತಿಹಳೊ ಹನುಮಾ ಅ.ಪಎಲ್ಲಿಂದ ಬಂದೆ ಹನುಮಾ - ನೀಯೆನ್ನ -ಕೇಳುಸೊಲ್ಲೆನ್ನ ಪ್ರೇಮ ||ವಲ್ಲಭನ ನೆನೆದರೆ ನಿಮಿಷ ಯುಗವಾಗುತಿದೆನಿಲ್ಲಲಾರೆನು ಎಂದಳೊ ಹನುಮಾ 1ದೇವರಾಯನ ಪಾದವ - ಎಲೆ ಕಪಿಯೆ -ದಾವಪರಿಯಲಿ ಕಾಂಬೆನೊ ||ರಾವಣನ ಶಿರವರಿದು ಲಂಕಪಟ್ಟಣವನೆಲ್ಲ |ಹವನವಮಾಡಿಸು ಎಂದಳೊ ಹನುಮಾ || 2ಅಂಜನಾತನಯ ಕೇಳೊ - ನೀ ಹೋಗಿ -ಕಂಜನಾಭನಿಗೆ ಪೇಳೊ ||ಕುಂಜರವಕಾಯ್ದು ಶ್ರೀಪುರಂದರವಿಠಲನ |ಪಂಜರದ ಗಿಣಿಯೆಂದಳೊ ಹನುಮಾ 3
--------------
ಪುರಂದರದಾಸರು