ಒಟ್ಟು 928 ಕಡೆಗಳಲ್ಲಿ , 100 ದಾಸರು , 760 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಬಾರದೆ ಕಂಜನಾಭನೆ ಕೈಯ ಮುಗಿವೆನಯ್ಯಾ ಪ.ವರಫಣಿಗಿರಿ ಸುಸ್ಥಿರಮಂದಿರ ಶ್ರೀಗುರುಜನಾರ್ದನಾಮರಗಣ ಪಾಲಕಅ.ಪ.ಅಪರಾಧಗಳಾಲೋಚಿಸುವರೆ ಸರೀ-ಸೃಪರಾಜನಿಗಳವೆಕೃಪೆಯಿಂದಲಿ ಸಂರಕ್ಷಿಸದಿದ್ದರೀ-ಯಪಕೀರ್ತಿಯು ಶ್ರೀಹರಿ ನಿನಗಲ್ಲವೆ 1ಕನಕಪುರಂದರಮುಖ್ಯ ದಾಸರಂತೆಗುಣವೆನಗಿನಿತಿಲ್ಲಜನರ ವಿಡಂಬನಕೆ ದಾಸನಾದರೂಘನಕೃಪಾರ್ಣವನೆ ಕನಕಾಂಬರಧರ2ಲಕ್ಷ ಮಾತ್ಯಾತಕೆ ಲಕ್ಷ್ಮೀನಾರಾಯಣರಕ್ಷಾಮಣಿ ನೀನೆಪಕ್ಷೀಂದ್ರವಾಹನ ಪಾಪವಿಮೋಚನತ್ರ್ಯಕ್ಷಮಿತ್ರನೆನ್ನಕ್ಷಿಗೋಚರನಾಗಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕೃಷ್ಣ ನಿಮ್ಮೆಲ್ಲರ ಬಿಟ್ಟನೆಒಬ್ಬ ಶ್ರೇಷ್ಠ ನಾರಿಯಮೇಲೆ ಮನಸಿಟ್ಟನೆ ಪ.ಸತ್ಯ ಸುಶೀಲಳು ಅವಳಮ್ಮಜನಕೆ ತತ್ವ ಬೋಧಿಸುವಳು ಇವಳಮ್ಮ 1ಕಾಂತೆ ಕೋಮಲ ಹೃದಯದವಳಮ್ಮಬುದ್ಧಿ ಭ್ರಾಂತಿ ಗೈಸುವವಳಿವಳಮ್ಮ 2ತಪ್ಪದೆ ಸಲಹುವಳವಳಮ್ಮಜನಕೆ ಒಪ್ಪುವ ಗುಣವ ತೋರುವಳಿವಳಮ್ಮ 3ಶ್ರೀಶನ ಬಿಡದಿಹಳವಳಮ್ಮಅತಿ ಮೋಸಗಾರುತಿಯು ಇವಳಮ್ಮ 4ಉತ್ತಮಳು ರಮಾ ಅವಳಮ್ಮಅತಿ ಕೀರ್ತಿಯ ಪಡೆದಿಹಳಿವಳಮ್ಮ 5
--------------
ಗಲಗಲಿಅವ್ವನವರು
ಕೇಳನೊಹರಿ ತಾಳನೋ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಪ.ತಂಬೂರಿ ಮೊದಲಾದಅಖಿಳ ವಾದ್ಯಗಳಿದ್ದುಕೊಂಬು ಕೊಳಲ ಧ್ವನಿಸಾರವಿದ್ದು ||ತುಂಬುರು ನಾರದರ ಗಾನ ಕೇಳುವಹರಿನಂಬಲಾರ ಈ ಡಂಭಕದ ಕೂಗಾಟ 1ನಾನಾಬಗೆಯಭಾವ ರಾಗ ತಿಳಿದು ಸ್ವರಜಾÕನ ಮನೋಧರ್ಮ ಜಾತಿಯಿದ್ದು ||ದಾನವಾರಿಯ ದಿವ್ಯ ನಾಮರಹಿತವಾದಹೀನ ಸಂಗೀತ ಸಾಹಿತ್ಯವ ಮನವಿತ್ತು 2ಅಡಿಗಡಿಗಾನಂದ ಬಾಷ್ಪ ಪುಳಕದಿಂದನುಡಿನುಡಿಗೂ ಶ್ರೀ ಹರಿಯೆನ್ನುತ ||ದೃಢಭಕ್ತರನು ಕೊಡಿ ಹರಿಕೀರ್ತನೆಯ ಪಾಡಿಕಡೆಗೆ ಪುರಂದರವಿಠಲನೆಂದರೆ ಕೇಳ್ವ 3
--------------
ಪುರಂದರದಾಸರು
ಕೇಳಿಮರೆವುದು ಮನ ಕುಶಶಯನನಆಳು ಕಂಡಂತೆಚಂದ್ರಮೌಳಿಹೇಳಿದಂತೆಪ.ಮುಂಜಾವದಿ ಗುರುಮಧ್ವಮತ ಮಹಿಮಾಹರಪಾದಕಂಜಗಳ ಬಲಗೊಂಡು ಕಲಿಯಾನಕೆಂದು ಲಕುಂಜರವರದನ ನಾಮ ಕೀರ್ತನೆ ಮಾಡೆಂದುಮಂಜುಳ ಶಾಸ್ತ್ರಶ್ರವಣ ಮಹಿಮೆ ಪುರಾಣ 2ಪ್ರಸನ್ವೆಂಕಟೇಶನಪಾದಪಿಡಿದವರಿಗಾಹ್ಲಾದನಿಶಿದಿನ ಸಂಸಾರ ನಿಸ್ಸಾರಘೋರ3
--------------
ಪ್ರಸನ್ನವೆಂಕಟದಾಸರು
ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರಪಾಳಿಕೆ ಭಕುತಿಯಿಂದಾಳಾಗಿ ಎಲೆ ಮನುಜ ಪ.ಖೂಳರೊಳು ಮಾತಾಡದೇಳು ಹರಿಭಟರಡಿಗೆಬೀಳು ಭಗವಜ್ಜನರ ಮ್ಯಾಳದೆದುರಿನಲಿಹೇಳು ಕೀರ್ತನೆ ನಾಮದೋಳಿಗಳ ತನುಮನದಿಊಳಿಗಮಾಡುಬಿಡದಾಳು ಕರಣಗಳ1ಕೂಳು ಕಾಸಿನ ಸವಿಗೆ ಕೀಳು ಮಾನಿಸರ ಹೊಗಳಿಕೋಳು ಬಂಧನ ಹೋಗದಿರು ಮನದಾಳಿಗೊಳಗಾಗಿಏಳೆರಡು ಭುವನಗಳ ಆಳುವ ಪಿತನಗುಣದೇಳಿಗೆಗೆ ಹರುಷವಂ ತಾಳು ಅನ್ಯವ ಮರೆದು 2ಗಾಳಿಯಸೊಡರುದೇಹ ನಾಳೆಗೆನ್ನದೆ ಸುಧೆಯಮೇಳೈಸಿಕೊಂಡು ಭವವೇಳಿಲಿಸು ನೀಜಾಳು ಭಾಷ್ಯಗಳಗತಿಹಾಳೆಂದು ಗುರುಮಧ್ವಹೇಳಿದಂತಿರುತಲಿ ದಯಾಳು ಪ್ರಸನ್ವೆಂಕಟನ 3
--------------
ಪ್ರಸನ್ನವೆಂಕಟದಾಸರು
ಕೊಂಡಾಡಲಳವೆ ಕರುಣಾನಿಧಿ ಕಾವನದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ಪ.ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿಭೂವಲಯಕೆ ಸುಜನಾವಳಿಗಾಶ್ರಯವೀವೆನೆನುತ ಶುಭದೇವವೃಕ್ಷವನಟ್ಟೆಈವರ ಪರಮಹಂಸಾವಲಂಬನ ತಾಳ್ದುಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇಕ್ಷಾವಂತರಾಗಿಹ ಜೀವಕೋಟಿಗಳ ಕೃಪಾವಲೋಕನದೊಳಿಟ್ಟ ಅಪೇಕ್ಷಿತಭಾವಾರ್ಥಗಳನೆ ಕೊಟ್ಟು ನಂಬಿದಸೇವಕರ್ಗಭಯವಿಟ್ಟ ಗುರುರಾಯನ 1ಭಾನುತೋರುವ ಮುನ್ನೆ ಸ್ನಾನವ ಮಾಡಿ ಸುಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀಮಾನಾಥನಂಘ್ರಿಯ ಮಾನಸದಲಿ ದೃಢಧ್ಯಾನದಿಂ ಬಲಿದುಗೀರ್ವಾಣಭಾಷ್ಯಾಮೃತಪಾನವ ಜನರಿಗೆ ಸಾನುರಾಗದಲಿತ್ತುನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆತಾನಂದು ಬೋಧಿಸಿದತಾಮಸಜ್ಞಾನವನೋಡಿಸಿದ ಆ ಕಾಮಧೇನುವೆನಿಸಿ ಎಸೆದ ಗುರುರಾಯನ 2ಭೇದವರ್ಜಿತ ಮತ್ತವಾದ ಕುಂಭಿಯಕುಂಭಭೇದಕಸಿಂಗಹಲಾಧಾರಿಹರಿಸಗುಣೋದರ ಸಾಕಾರಮಾಧವಹರನುತಪಾದನೆನುತಸೂತ್ರವೇದ ಪುರಾಣದಿಸಾಧಿಸಿ ಕುತ್ಸಿತವಾದಿಗಳಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯನಾದಭೇರಿಯ ಹೊಯಿಸಿದ ಮುಕ್ತಿಯಸಾಧನ ತೋರಿಸಿದ ಭ್ರಷ್ಟಂಕುರೋದಯ ಮಾಣಿಸಿದ ಗುರುರಾಯನ 3ಕಾಲಕಾಲಕೆ ಧರ್ಮ ಪಾಲಿಸಿ ಯಾಚಕಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತುಪಾಲಿಸಿ ತಾಯಿತಂದೆಗಳ ಹಂಬಲ ಬಿಡಿಸಿ ಲೋಕದವರಿಗಭಿಲಾಷಾ ಪೂರ್ಣಾನುಕೂಲಚಿಂತಾಮಣಿಯ ಯತಿಕುಲಮೌಳಿಮಕುಟಮಣಿಯ ವಿರತಿಭಾಗ್ಯಶಾಲಿ ಸುಗುಣಖಣಿಯ ಗುರುರಾಯನ 4ಮಣ್ಣು ವನಿತೆಸತಿಹೊನ್ನಿನ ಬಯಕೆಯಘನ್ನತೆಜರಿದುಪಾವನ್ನಮಹಿಮನಾದಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವತನ್ನಾಕಷೆಂಬುವಭಿನ್ನವಚಂದ್ರಿಕೆಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆಉನ್ನತ ಕಳೆಯುತ ಚಿನ್ಮಯ ವರದ ಪ್ರಸನ್ನ ವೆಂಕಟಾಧಿಪನ ಭಜಿಸಿನಿತ್ಯಧನ್ಯನೆನಿಸುತಿಪ್ಪನ ಸತ್ಯಾಭಿನವರನ್ನನ ಪೊರೆದÀಪ್ಪನ ಗುರುರಾಯನ 5
--------------
ಪ್ರಸನ್ನವೆಂಕಟದಾಸರು
ಕೋಲೆಂದು ಪಾಡಿರೆಕೋಮಲೆಯರೆಲ್ಲಗೋಪಾಲರಾಯನಮಡದಿಯರುಕೋಲಪ.ಶ್ರೀದೇವಿಯರ ಕೂಡ ವಾದ ಸರಸವೆಆದರದಿ ಪಾದಕ್ಕೆರಗಿಕೋಲಮಾಧವನರಸಿಯರ ಮೋದದಿಕರೆಯೆ ವಿನೋದವ ನುಡಿದಾನುರಾಯ 1ಸರಿಯ ರಾಣಿಯರ ಕೂಡ ತರವೇನು ಸರಸವುಕರವಜೋಡಿಸಿ ಕಮಲಾಕ್ಷಿಕೋಲಎರಗಿ ದೇವಿಯರಿಗೆ ಕರಿಯೆ ಬ್ಯಾಗಎಂದುಹರದೆಯರಿಗೆ ನುಡಿದ ಭೀಮನು ಕೋಲ 2ಕೀರ್ತಿವಂತರ ಕೂಡ ಯಾತಕ್ಕೆ ಸರಸವುಮಾತಿನ ಸುಖದ ವಾಣಿಯರಕೋಲಸ್ತೋತ್ರವ ಮಾಡುತ ಪ್ರೀತಿಲೆ ಕರೆಯೆಂದುಪಾರ್ಥ ಮಾತಾಡಿದ ಸತಿಗೆ ಕೋಲ 3ಸಕಲ ಗುಣಾಢ್ಯರ ಸಖಳೆಂದು ಕರೆಸಿಕೊನಕಲಿ ಮಾತಾಡಬ್ಯಾಡಕೋಲಮುಖವ ನೋಡುತ ಅತಿ ಸುಖವ ಪಡಿರೆಂದುನಕುಲಮಾತಾಡಿದ ಸತಿಗೆಕೋಲ4ಇಂತು ರಾಮೇಶನ ಕಾಂತೆಯರ ಕರೆಯೆವೇದಾಂತ ವೇದ್ಯಳೆ ದ್ರೌಪತಿಕೋಲಪಂಥವ ಬಿಟ್ಟು ಸಂತೋಷದಿ ಕರೆಯೆಂದುಕಾಂತೆಗೆ ನುಡಿದ ಸಹದೇವ 5
--------------
ಗಲಗಲಿಅವ್ವನವರು
ಚೌತಿಯ ದಿವಸರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ-ಮೌರಿರಭಸದಿ ಲಕ್ಷ್ಮೀಕಾಂತಭೂರಿವೈಭವದಿ ಪೊರಟನೆತ್ತ ಯಾವಕಾರಣವೆಂದು ಪೇಳೆಲೆ ಸತ್ಯ 1ದೇವರ ಪೂಜೆಗೋಸುಗ ಬಂದಪಾವನಮೂರ್ತಿಯಾದುದರಿಂದ ನಮ್ಮಕಾವನು ಕರುಣಾಕಟಾಕ್ಷದಿಂದ 2ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ-ನ್ನಾಥನಿಗ್ಯಾವ ಕುಲವು ಕಾಣೆರೀತಿಯನರುಹಬೇಕೆಲೆ ಬಾಲೆ ಸರ್ವಚೇತನಾತ್ಮನ ನಾಟಕದ ಲೀಲೆ 3ಕೊಂಡಕಾರಣದಿ ಪೂಜೆಗಳೆಲ್ಲಕಂಡು ಪೊಗಳಲು ಕವಿಗು ಸಲ್ಲ ಇನ್ನುಪುಂಡರೀಕಾಕ್ಷನವನೆ ಬಲ್ಲ 4ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ-ಭೋಜನಾಭನು ತಾಕ್ಷ್ರ್ಯನ ಮೇಲೆರಾಜಬೀದಿಯೊಳ್ ಬರುವದೇನೆ ಇಂಥಸೋಜಿಗವೇನು ಪೇಳೆಲೆ ಜಾಣೆ 5ಬಟೆನಿಸ್ಸಾಳರವದಿ ಬರುವ ಚಂದಸಟೆಯಲ್ಲ ಕೇಳು ಕರುಣದಿಂದ ನಮ್ಮಕಟಕರಕ್ಷಿಸಲು ಬರುವ ಗೋವಿಂದ6ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ-ಗಲಭೆಗಳಿಂದ ಪೋಗುವದೇನೆನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ-ಜಲಜನಾಭನ ಮಹಿಮೆಯ ಜಾಣೆ 7ದೀಪವೆಂದೆನುತ ಭಕ್ತರು ಮುದದಿಶ್ರೀಪರಮಾತ್ಮ ವಿಲಾಸದಿ ಭಕ್ತ-ರಾಪೇಕ್ಷೆಗಳನು ಸಲ್ಲಿಸುವಂದದಿ 8ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ-ಸ್ತೋಮಜೇನುಂಡೆಬಿರುಸುಮಿಗಿಲುವ್ಯೋಮಕೇಶಗಳ ಪೊಗಳತೀರದು ಸರಿಭೂಮಿಯೊಳ್ ಕಾಣೆನೆಂಬಂತಾದುದು 9ಅಮಮ ಇದೇನೆ ಇಂದಿನ ಲೀಲೆ ಜನ-ರಮರಿಕೊಂಡಿಹರೇನಿದು ಬಾಲೆಸಮವಿಲ್ಲ ಇಂತೀ ವೈಭೋಗಕ್ಕೆಲೆ ನ-ಮ್ಮಮರಾವತಿಗಿಂತಧಿಕ ಬಾಲೆ 10ಲಾರ್ತಿ ಹರಣವಾಗ್ವದು ಜಾಣೆಕೀರ್ತಿತರಂಗಮಾಗಿಹುದೇನೆ ಶೇಷ-ತೀರ್ಥವೆಂದರೆ ಕೇಳಿದು ಪ್ರವೀಣೆ 11ರಂಭೆ :ಏಸುದೊಡ್ಡಿತೆ ಕೇಳಲೆ ಬಾಲೆ ಅನಂ-ತಾಸನದಂತೆ ಮರೆವುದಲ್ಲೇನಾಸಿರ ದೀಪಸೋಪಾನದಲೆ ಮಹಾ-ಶೇಷನಿಹನು ಮಧ್ಯದೊಳಿಲ್ಲೇ 12ಊರ್ವಶಿ :ಕರುಣಾಕರನು ನಮ್ಮೆಲ್ಲರನುನಿತ್ಯಪೊರೆಯಲೋಸುಗ ಬಂದನು ತಾನುಸುರುಚಿರ ಮಂಟಪವೇರಿದನು ಭೂ-ಸುರರಿಂದ ವೇದಘೋಷವ ಕೇಳ್ವನು 13ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮಸೃಷ್ಟಿಗೆ ಪೊಸತಾಗಿಹುದು ಕಾಣೆಕಟ್ಟಿಸಿದವನು ಪುಣ್ಯೋತ್ತಮನು ಪರ-ಮೇಷ್ಠಿ ಜನಕನ ಕೃಪೆಯಿನ್ನೇನು 14ಭಜಕರ ಮುಖದಿಂದೆಲ್ಲ ತಾನು ಭೂ-ಭುಜನಾಗಿ ನಡೆಸುವನಿದನೆಲ್ಲನುನಿಜವಾಗಿನಿತ್ಯಸಾಕಾರವನು ತೋರಿತ್ರಿಜಗವನೆಲ್ಲ ರಕ್ಷಿಸುತಿಹನು 15ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ-ದೊಡೆಯ ಪೊರಡುವ ಕಾಲದಿ ಭಾರಿಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥಕಡು ಬೆಡಗನು ಉಸುರೆಲೆ ಬಾಲೆ 16ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮತನುವಿಗೆ ಸೋಂಕಲದನೆಲ್ಲವಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ-ಧ್ವನಿಯೆಸಗಿದರು ಕೇಳಿದರಂದವ 17ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು-ಬರುವನು ವೇದನಿನಾದದಲಿವರರತ್ನ ಖಚಿತ ಮಂಟಪದಲ್ಲಿ ನಿಂತನಿರವದಿ ಸುಖದಾಯಕನಲ್ಲಿ 18ಶರಣರ ಪಾಪ ಮನಕೆ ತಾರ ದುಡಿದವರಭೇರಿಗೆರೆವ ಬಿಸಿನೀರವರಲಕ್ಷ್ಮೀನಾರಾಯಣಧೀರ ಸುರು-ಚಿರ ಸಿಂಹಾಸನವೇರಿದ ವೀರ 19
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯತು ಜಯತು ಜಯತೆಂಬೆನು ವಿಠಲಭಯನಿವಾರಣ ನಿರಾಮಯ ನೀನೆ ವಿಠಲ ಪ.ಮನವೆನ್ನ ಮಾತ ಕೇಳದು ಕಾಣೊ ವಿಠಲಮನಸಿಜನಾಯಸ ಘನವಾಯ್ತು ವಿಠಲನಿನಗಲ್ಲದಪಕೀರ್ತಿಯೆನಗೇನು ವಿಠಲತನುಮನದೊಳಗನುದಿನವಿರು ವಿಠಲ 1ಕದನಮುಖದಿ ಗೆಲುವುದ ಕಾಣೆ ವಿಠಲಮದನಮುಖ್ಯಾದಿ ವೈರಿಗಳೊಳು ವಿಠಲವಿಧವಿಧದಿಂದ ಕಷ್ಟಪಟ್ಟೆನು ವಿಠಲಇದಕೇನುಪಾಯ ತೋರಿಸಿ ಕಾಯೋ ವಿಠಲ 2ಹುಟ್ಟಿದೆ ನಾನಾ ಯೋನಿಗಳೊಳು ವಿಠಲಸುಟ್ಟ ಬೀಜದ ವೋಲ್ ಫಲವಿಲ್ಲ ವಿಠಲಇಷ್ಟಾರ್ಥಗಳನಿತ್ತು ಸಲಹಯ್ಯ ವಿಠಲಇಷ್ಟಕ್ಕೆ ನೀ ಮನ ಮಾಡಯ್ಯ ವಿಠಲ 3ಬಂಗಾರ ಭಂಡಾರ ಬಯಸೆನು ವಿಠಲಮಂಗಲ ಕೊಡು ಯೆನ್ನ ಬುದ್ಧಿಗೆ ವಿಠಲರಂಗ ರಂಗನೆಂಬ ನಾಮದಿ ವಿಠಲಭಂಗವ ಪರಿಹರಿಸಯ್ಯ ನೀ ವಿಠಲ 4ಏನು ಬಂದರೂ ಬರಲೆಂದಿಗು ವಿಠಲಮಾನಾವಮಾನ ನಿನ್ನದು ಕಾಣೊ ವಿಠಲನಾನು ನಿನ್ನವನೆಂದು ಸಲಹಯ್ಯ ವಿಠಲಲಕ್ಷ್ಮೀನಾರಾಯಣ ನೀನೆ ತಂದೆ ಕೇಳ್ ವಿಠಲ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯಮಂಗಳಂನಿತ್ಯಶುಭಮಂಗಳಂಪ.ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂಪ.ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
--------------
ಪುರಂದರದಾಸರು
ತದಿಗೆಯ ದಿವಸ(ಶೇಷ ದೇವರನ್ನು ಕುರಿತು)ರಂಭೆ :ನ್ಯಾರೆಂಬುದನೆನಗೆ ಪೇಳೆಕ್ರೂರತನದಿ ತಾ ತೋರುವನೀಗ ಮ-ಹೋರಗನೆನ್ನುತ ಕೋರಿಕೆ ಬರುವದು 1ಒಂದೆರಡು ಶಿರವಲ್ಲ ಬಹುಹೊಂದಿಹವು ಸಟೆಯಲ್ಲಕಂಧರದಲಿ ಕಪ್ಪಂದದಿ ತೋರ್ಪವುಚಂದಿರಮುಖಿ ಯಾರೆಂದೆನಗರುಹೆಲೆ 2ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ-ಸಾಮಾನ್ಯನೆ ಕಾಣೆಭೂಮಿಯ ಪೊತ್ತ ನಿರಾಮಯನಾದಸುಧೀಮನಿವನು ಜಾಣೆ 1ವಾಸುದೇವಗೆ ಈತ ಹಾಸಿಗೆಯವ ನಿ-ರ್ದೋಷನಿವನು ಜಾಣೆಸಾಸಿರಮುಖದ ವಿಲಾಸನಾಗಿಹ ಮಹಾ-ಶೇಷನಿವನು ಕಾಣೆ 2ಅದರಿಂದಲಿ ಕೇಳ್ ತದಿಗೆಯ ದಿವಸದಿಮಧುಸೂದನನಿವನಅಧಿಕಾನಂದದಿ ಒದಗಿಸಿ ಬರುವನುಇದೆಯಿಂದಿನಹದನ3ಎಂದಿನಂತೆ ಪುರಂದರವಂದ್ಯ ಮುಕುಂದಸಾನಂದದಲಿಅಂದಣವೇರಿ ಗೋವಿಂದ ಬರುವನೊಲ-ವಿಂದತಿ ಚಂದದಲಿ 4ಕಂಟಕಗಳು ಎಲ್ಲುಂಟೆಂಬಂತೆ ನೃಪ-ಕಂಠೀರವಗೈದಘಂಟಾನಾದದಿ ಮಂಟಪದೊಳು ವೈ-ಕುಂಠನು ಮಂಡಿಸಿದಾ 5ಕಾಂತಾಮಣಿ ಕೇಳಿಂತೀಪರಿ ಶ್ರೀ-ಕಾಂತ ನತತಂಡಸಂತವಿಸುತ ಮಹಾಂತಮಹಿಮನೇ-ಕಾಂತಸೇವೆಯಗೊಂಡ 6* * *ಪರಶಿವನನ್ನು ಕುರಿತುರಂಭೆ : ಯಾರಮ್ಮಾ ಮಹಾವೀರನಂತಿರುವನುಯಾರಮ್ಮಾ ಇವನ್ಯಾವ ಶೂರ ಯಾವಊರಿಂದ ಬಂದ ಪ್ರವೀರ ಆಹಾಮಾರಜನಕನ ವಿಸ್ತಾರಪೂಜೆಯ ವೇಳ್ಯಧೀರನಂದದಿ ತಾ ವಿಚಾರ ಮಾಡುವನೀತ 1ಕರದಿ ತ್ರಿಶೂಲವ ಧರಿಸಿ ಮತ್ತೆವರಕೃಷ್ಣಾಜಿನವನುಕರಿಸಿಹರಿಚರಣಸನ್ನಿಧಿಗೆ ಸತ್ಕರಿಸಿ ಆಹಾಜರಿಯ ದುಕೂಲವ ನಿರಿದುಟ್ಟುಕೊಂಡು ವಿ-ಸ್ತರವಾದ ತೋಷದಿ ಮೆರದು ನಲಿವ ಕಾಣೆ 2ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ.ಈತನೀಗ ಪೂರ್ವದೊಳಗೆಭೂತನಾಥ ಸೇವೆಯೊಲಿದಓತು ವಿಷ್ಣುಭಕ್ತಿಯಿಂದಪೂತನಾದ ಪುಣ್ಯಪುರುಷ ಅ.ಪ.ಊರು ಇವಗೆ ಮೊದಲು ಗಂಗಾತೀರವಾಯ್ತುವೇಣುತಾ ವಿ-ಚಾರದಿಂದ ಪೊದನೈಉದಾರತನದಿ ರಾಮೇಶ್ವರಕೆಸಾರಗ್ರಹಿತ ಮುಕ್ತಿ ಪಥವನು ಕರುಣದಿಂದತೋರಿಸುವನು ವಿಷ್ಣುವೆಂದೆನುತ ಗಿರಿಯನೇರಿ ಕರುಣ ವಾರಿಧಿಯಪದಾರವಿಂದಸೇವೆಗೈದುಮಾರಪಿತನ ಭಕ್ತಿಯೊಳು ತಾ ಹೇರಿನಲಿವ ಚಾರುಚರಿತ 1ಪರಮಪುರುಷ ಹರುಷದಿಂದೀಪುರಕೆಬರುವಕಾಲದಲ್ಲಿಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆಚರಿಸುವ ತ್ರಿಕಾಲಪ್ರಜÕನು ಇವನ ಗುಣವ-ನರಿವರ್ಯಾರು ಮನುಜಭುಜಂಗರಲಿಮಹತ್‍ಕಾರಣೀಕಪುರುಷನಿವ ಮಹಾ ಬಲಾಢ್ಯಕರುಣವುಳ್ಳ ವಿಷ್ಣುಭಕ್ತ 2ಶ್ರೀನಿವಾಸ ಕರುಣದಿಂಪ್ರಧಾನಿಯೆಂದು ನಡೆಸಿಕೊಡುವಏನಗೈದರೀತ ಮನದಿ ತಾನುತೋಷಪಟ್ಟು ಇರುವಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತನಾನಾ ಉಪದ್ರವಗಳ ಬಿಡಿಸುವ ಧನಿಯ ಆಜೆÕಏನ ದೊರಕಿತದನು ಬೇಗ ತಾನೆಬಂದು ಪೇಳಿ ಜನರಮಾನಿಸುತ ನಿಧಾನಗೊಳಿಸಿಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತಂದೆ ಪುರಂದರದಾಸರ ಸ್ಮರಿಸುವೆ ಎನ್ನಮಂದಮತಿಗಳೆದು ಹರಿಭಟನೆನಿಸುವೆ ಪ.ಗುರುವ್ಯಾಸರಾಜರ ಚರಣಾಬ್ಜ ಷಟ್ಚರಣನವಿರತಿಭಕುತಿ ಜ್ಞಾನದಾರ್ಣವನವರಉಪನಿಷದ್ವಾರಿನಿಧಿಗೆ ತಿಮಿಂಗಿಲನಹನಧರೆಯ ಕವಿಕುಲ ಶಿಖಾಮಣಿಯೆನಿಪನ 1ದಿನ ದಿನ ಯದೃಚ್ಛಾರ್ಥಲಾಭದಲಿ ತುಷ್ಟನಕನಕಲೋಷ್ಠ ಸಮಾನದೀಕ್ಷಿಸುವನಘನಸಿದ್ಧಿಗಳು ತಾವೆ ಬರಲೊಡಂಬಡದನಹರಿಗುಣಕೀರ್ತನೆಯಲ್ಲಿ ಪರವಶದಿಹನ2ಭವಜಲಧಿ ಗೋಷ್ಪದಕೆ ಸರಿದಾಟಿ ಕಾಮ ಕ್ರೋಧವಮೆಟ್ಟಿ ಭಕ್ತಿಸುಧೆಯುಂಡು ತೇಗಿಭುವಿಯಲ್ಲಿ ನಿಜಕೀರ್ತಿಯನು ಹರಹಿ ಪವನಮತದವರೆನಿಪ ದಾಸರಿಗೆ ತವರೂಪ ತೋರಿದನ 3ಕವನೋಕ್ತಿ ಮಳೆಗರೆದು ಹರಿದಾಸ ಪೈರ್ಗಳಿಗೆಅವಿರಳಾನಂದವಿತ್ತಥಿರ್üಸುವನನವಭಕುತಿ ಮನಗಂಡು ಸವೆಯದಾನಂದಪುರ ಪಥವನು ತೋರಿಸಿದಂಥ ಬಹುಕೃಪಾಕರನ 4ಗೀತ ಠಾಯಿ ಸುಳಾದ್ಯುಗಾಭೋಗ ಪದ್ಯಪದವ್ರಾತಪ್ರಬಂಧ ರಚಿಸಿ ವಿಠಲನಪ್ರೀತಿ ಬಡಿಸಿ ಕಂಡು ನಲಿವ ವೈಷ್ಣವಾಗ್ರನಾಥ ಪ್ರಸನ್ವೆಂಕಟ ಕೃಷ್ಣಪ್ರಿಯನ 5
--------------
ಪ್ರಸನ್ನವೆಂಕಟದಾಸರು
ತಪ್ಪ ಪಾಲಿಸಯ್ಯ ತಿಮ್ಮಯ್ಯತಪ್ಪ ಪಾಲಿಸಯ್ಯ ಪ.ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳುಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆ ಅ.ಪ.ಜಲಜನಾಭ ನಿನ್ನ ಮಹಿಮೆಯನೆಲೆಯನರಿಯದೆನ್ನ ಮನವದುನೆಲೆಯಿಲ್ಲದ ಭವಜಲಧಿಯೊಳಾಡುತ್ತಲಲನಾ ವಿಷಯದ ಬಲೆಗೆ ಮೋಹಿಸಿ ಮನಸಿಲುಕಿ ಮಲಿನವಾಯ್ತು ತತ್ವದನೆಲೆಯನರಿಯದಾಯ್ತು ಹೀಗೆನ್ನುತಕಳೆದುಹೋಯ್ತು ವಿಂಶತಿ ವತ್ಸರಗಳುತೊಳಲಿ ಸಕಲ ಭವದೊಳಗಾರ್ಜಿತವಹ 1ಹಾಳು ಮನವು ಕೂಡಿ ನಾನಾಚಾಳಿ ಮಾಳ್ಪುದಾಡಿ ಬುದ್ಧಿಯಪೇಳಿದಷ್ಟು ದುಶ್ಯೀಲವೆ ಮಾಳ್ಪುದುತಾಳೆಂದರೆ ಒಂದು ವೇಳೆಗೆ ಸುಮತಿಯಆಲೋಚನೆಯೊಳಗೆ ಬಿದ್ದರೆಮೇಲಿಲ್ಲವು ಕ್ಷಣಕೆ ತನ್ನಯಶೀಲವನೆ ಸ್ವೀಕರಿಸುತಿರುವುದುಪೇಳಲೇನು ಕರುಣಾಳು ನೀ ಯೆನ್ನಯ 2ನಾನಾ ಕಷ್ಟಪಟ್ಟೆ ಇನ್ನಾದರುಮಾನಿಸಬೇಕಷ್ಟೆ ಎನ್ನೊಳುಊನ ಗ್ರಹಿಸಿ ಅನುಮಾನ ಸಾಧಿಸಿದರೆನಾನೆಂಬುವದೇನು ಸ್ವತಂತ್ರವಕಾಣೆನು ಎನ್ನೊಳಗೆ ಸಂತತನೀನೇ ಗತಿಯೆನಗೆ ಇದಕನು-ಮಾನವಿಲ್ಲ ಪಾದಾನತಜನರಾಧೀನನೆಂಬ ಬಿರುದಾನಬೇಕಾದರೆ 3ಅಪರಾಧಿಯೆ ನಾನು ಹೇಗೈಅಖಿಲಾತ್ಮನು ನೀನು ಹೃದಯದಿಕೃಪೆಯ ಬೀರಿ ತೋರಿಪ ಪರಮಾತ್ಮನೆಚಪಲನಾಗಿ ಎನ್ನುಪಮೆಗೆಯೊಡ್ಡಿದೆಸಫಲವಾಯ್ತು ಎನಗೆ ಕೀರ್ತಿಯುಅಪಕೀರ್ತಿಯು ನಿನಗೆ ಪಾದವಜಪಿಸುವಂತೆ ಕರುಣಿಪುದಿನ್ನಾದರೂಕಪಟವಾಯ್ತೆ ಸರೀಸೃಪಗಿರಿರಾಜನೆ 4ದೂಷಣಾರಿ ನಿನ್ನ ಪಾದದದಾಸಗೈಯ್ಯೊ ಎನ್ನ ಎನ್ನೊಳುದೋಷವಿಲ್ಲ ಜಗದೀಶ ಜನಾರ್ದನದಾಶರಥಿಯ ಕರುಣಾಶರಧಿಯೊಳಗೆಈಸಾಡಿದ ದಾಸ ಕಾರ್ಕಳಾಧೀಶ ಶ್ರೀನಿವಾಸ ರವಿಶತಭಾಸ ಶ್ರೀಲಕ್ಷ್ಮೀನಾರಾಯಣ ಸರ್ವೇಶ ಭಕ್ತಜನಪೋಷ ನೀಯೆನ್ನಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತಪ್ಪುಗಳೆಲ್ಲ ಪರಿಹರಿಸುವ ನಮ್ಮಪ್ಪನಲ್ಲವೆ ನೀನುಒಪ್ಪಿದ ಬಳಿಕವಗುಣ ನೋಡದ ತಿಮ್ಮಪ್ಪನಲ್ಲವೆ ನೀನು ಪ.ಬೆಳಗಿನ ಜಾವದಿಹರಿನಿನ್ನ ಸ್ಮರಣೆಗೆಹಳವಿಗೆಗೊಳ್ಳದ ತಪ್ಪುಮಲಮೂತ್ರವಿಸರ್ಜನೆಯ ಮೃತ್ತಿಕೆಯಲಿಮಲಿನವ ತೊಳೆಯದ ತಪ್ಪುತುಲಸಿ ವೃಂದಾವನ ಗೋಸೇವೆಗೆಅಲಸಿಕೆ ಮಾಡುವ ತಪ್ಪುನಳಿನಸಖೋದಯಕಘ್ರ್ಯವ ನೀಡದಕಲಿವ್ಯಾಸಂಗದ ತಪ್ಪು 1ದಿನದಿನ ಉದಯದಿ ಸ್ನಾನವ ಮಾಡದತನುವಂಚನೆಯ ತಪ್ಪುಕ್ಷಣ ಶ್ರೀ ಹರಿಗುಣ ಜಿಜ್ಞಾಸಿಲ್ಲದಮನವಂಚನೆಯ ತಪ್ಪುಮುನಿಸುರ ಭೂಸುರರಾರಾಧಿಸದಧನ ವಂಚನೆಯ ತಪ್ಪುವನಜಾಕ್ಷನೆ ನಿನ್ನಪಾದವಿಮುಖ ದುರ್ಜನ ಸಂಸರ್ಗದ ತಪ್ಪು 2ಕಣ್ಣಲಿ ಕೃಷ್ಣಾಕೃತಿ ನೋಡದೆಪರಹೆಣ್ಣಿನ ನೋಟದ ತಪ್ಪುನಿನ್ನ ಕಥಾಮೃತ ಒಲ್ಲದೆ ಹರಟೆಯಮನ್ನಿಸುವ ಕಿವಿ ತಪ್ಪುಅನ್ನವ ನಿನಗರ್ಪಿಸದಲೆ ಹರುಷದಿಉಣ್ಣುವ ನಾಲಿಗೆ ತಪ್ಪುಚಿನ್ಮಯ ಚರಣಕ್ಕೆರಗದೆಉನ್ಮತ್ತರ ನಮಿಸುವ ತಲೆ ತಪ್ಪು 3ಶ್ರೀ ನಿರ್ಮಾಲ್ಯದ ವಿರಹಿತ ಸುರಭಿಯಘ್ರಾಣಿಪನಾಸಿಕತಪ್ಪುಆನಂದದಿ ಸಂಕೀರ್ತನೆ ಮಾಡದಹೀನವಿವಾದದ ಬಾಯ ತಪ್ಪುಶ್ರೀನಾಥಾರ್ಚನೆ ಇಲ್ಲದೂಳಿಗಮಾಣದಿರುವ ಕೈ ತಪ್ಪುಶ್ರೀನಾರಾಯಣ ವೇಶ್ಮನಿಗೈದದನಾನಾಟನಪಾದತಪ್ಪು4ಯಜ್ಞಾತ್ಮಗೆ ಯಜ್ಞಾರ್ಪಿಸದೆ ಸುಖಮಗ್ನಾದ ಮೇಢ್ರದ ತಪ್ಪುಅಗ್ರದ ಕರ್ಮವ ಶೌಚವ ಜರಿದ ಸಮಗ್ರ ಗುಹ್ಯಕೃತ ತಪ್ಪುಅಜ್ಞಾನ ಜ್ಞಾನದಿ ಕ್ಷಣಲವಶತವೆಗ್ಗಳಘ ಗಳಿಸುವ ತಪ್ಪುಯಜೆÕೀಶ ಪ್ರಸನ್ವೆಂಕಟ ಕೃಷ್ಣ ನಾಮಾಗ್ನಿಗೆ ತೃಣವೀ ತಪ್ಪು 5
--------------
ಪ್ರಸನ್ನವೆಂಕಟದಾಸರು