ಒಟ್ಟು 16359 ಕಡೆಗಳಲ್ಲಿ , 135 ದಾಸರು , 7416 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಸಾಕದಿದ್ದರೆ ಸಾಕುವರಾರೊದಾಸಾಭಿಮಾನಿ ನೀನಲ್ಲದಾರೊ ಕೃಷ್ಣಾ ಪ.ನಿನ್ನವರನು ಬಾಧಿಸ ಬಂದ ಮೂರ್ಖರುಮುನ್ನೆ ದುರ್ಭಾಗ್ಯರಾಗಿ ಹೋದರುಕುನ್ನಿ ಕಚ್ಚಿದರಾನೆ ಅಳುಕುವುದೆ ರಂಗಎನ್ನ ನಂಬಿಕೆಯ ಮೂರುತಿ ಶ್ರೀನಿವಾಸ 1ಹಸಿದು ಮಳಲ ಮೆದ್ದವನಂತೆ ಕಂಗೆಟ್ಟುತೃಷೆಯಾಗಿ ಬಿಸಿಲ್ದೊರೆಗೋಡುವನಂತೆವಿಷಮ ಮಾನಿಸರನುಸರಿಸುವುದುಚಿತಲ್ಲಬಿಸಜದೇವಿಯರಸ ಸುದಾಮಘಭಂಗ2ಬಂಟರ ಮಾತ ಕೇಳದೆಭಾರತಾಳದೇನುಂಟು ಕಾರ್ಯವು ನಿನಗೆಲೆ ದಯಾಳುಕಂಟಕಜನಕಪಕಾರಿ ದೀನೇಶ ವೈಕುಂಠವಲ್ಲಭ ಪ್ರಸನ್ವೆಂಕಟ ಬಂಧು 3
--------------
ಪ್ರಸನ್ನವೆಂಕಟದಾಸರು
ನೀ ಸಾಹೆಯಾಗು ಯಮಗನುಗಾಲ |ಶೇಷಾದೇವರೆ ರೋಹಿಣಿ ಬಾಲಾ ಪಮೂರುತಿಯಲ್ಲಿ ಪುಟ್ಟಿ | ನಾರಾಯಣನ್ನ ಕೂಡಿ ||ಚಾರುಬದರಿಯಲ್ಲಿ ತೋರುತಿಹನೆ 1ದಶರಥನ ಮಡದಿ | ಬಸುರೀಲಿ ಜನಿಸೀದಿ ||ಕುಸುಮನಾಭನರ್ಚನೆ ಎಸಗಿದಿಯೋ 2ಪ್ರದ್ಯುಮ್ನಪರಿಯಂಕ| ರುದ್ರಾನಲಂಕಾರ ||ಭದ್ರ ಪ್ರದಾಯಕ ಭಕ್ತ ಪೋಷಾ3ನೀಲಾಂಬರವನುಟ್ಟ | ತಾಳಾಂಕಬಿನ್ನಪ||ಲಾಲೀಸೊ ನಿನ್ನವನೆಂದ ನಿಶಾ4ಪ್ರಾಣೇಶ ವಿಠಲನ | ಧ್ಯಾನದೋಳಿರುವಂತೆ ||ನೀನೊಲಿವದು ದೂರು ನೋಡದಲೇ 5
--------------
ಪ್ರಾಣೇಶದಾಸರು
ನೀ ಹೋಗುತಲಿ ಬಾಗೂ |ಗುರುಕೃಪೆ ಪಡೆಯುತೆಪರಿಭವನೀಗೂಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ನಗಕನಕದಪರಿಈ ಜಗ ಸೋಗೂ |ಜಗದೀಶನ ಸುಖ ಪೊಂದಿ ನೀ ತೂಗೂ1ತತ್ತ್ವಂ ಪದಗಳ ಕಳೆದುಳಿ ವೇಗೂ |ಸಚ್ಚಿತ್ಸುಖ ಅಸಿಜÕಪ್ತಿ ನೀನಾಗು2ಪ್ರೇಮಾಮೃತ ಸವಿಯುತೆ ನೀ ತೇಗೂ |ಕಾಮದಹನ ಶಿವಶಂಕರನಾಗೂ3
--------------
ಜಕ್ಕಪ್ಪಯ್ಯನವರು
ನೀನಲ್ಲದನ್ಯರೆ ಸಲಹಲು ಕಾಯೊ |ಜಾನಕೀಪತಿ ದೂತ ಹನುಮಂತ ಪಗುರುವೆ ನಿನ್ನಯಪಾದಭಜಿಸುವರನ್ನ |ಧರೆಯೊಳು ಬನ್ನಬಡಿಸುವೋರೆ ||ಗಿರಿಸುತ ನೀ ಗತಿಯೆನಲಾಗ ಬೇಗ |ಪೊರೆದೆಯಾತನ ಜಲಧಿಯೊಳಿಟ್ಟು1ರವಿಜಶಕ್ರಜನಿಂದ ಬಳಲುತ ಬಂದು |ಪವನ ಪಾಲಿಪುದೆನ್ನಲಾಕ್ಷಣ ||ಭುವನೇಶನಿಂದ ವಾಲಿ ಕೊಲ್ಲಿಸಿ ಕಾಳೀ |ಧವಸುಗ್ರೀವನ ಭಯ ಬಿಡಿಸಿದೆ2ತಂದೆ ಪ್ರಾಣೇಶ ವಿಠ್ಠಲನಿಗೆ ನಿನಗಂ |ದುಂಟಿಂದಿಲ್ಲೇ ಈ ಮಹಿಮೆಯು ||ಬಂದದುರಿತನಿವಾರಣ ಮಾಡಿ ದಯ-ದಿಂದ ಪಾಲಿಸೋ ನಿನ್ನ ದಾಸರ 3
--------------
ಪ್ರಾಣೇಶದಾಸರು
ನೀನಲ್ಲದೆನಗಾರಿಲ್ಲ ಗೋವಿಂದನೀನಲ್ಲದೆ ಇಹಪರವಿಲ್ಲ ಪಪರರ ಬೇಡಿ ಪಂಥವಾಡಿ ಹೋಯಿತಲ್ಲನರರ ಕೊಂಡಾಡಿ ನಾಲಗೆ ಬರಡಾಯಿತಲ್ಲ ||ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾತಕದ ಪಂಜರಗೆ 1ತನುವು ತನ್ನದಲ್ಲ ತನ್ನವರು ತನಗಿಲ್ಲಧನಧಾನ್ಯ ಸಂಪತ್ತು ಅವಗಿರದು ||ತನುವು ಹೋಗಿ ಇನ್ನು ಮಣ್ಣು ಕೂಡುವಾಗತನುಮನಕ್ಕೆ - ಇನ್ನಾರಯ್ಯ ಸ್ವಾಮಿ 2ಮಾತಾಪಿತರು ಗೋತ್ರಜರು ಮೊದಲಾಗಿಪ್ರೀತಿಯಿಂದ ಬಹಳ ಸತಿಸುತರು ||ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂಗಾತಿಗಿನ್ನಾರಯ್ಯಪುರಂದರವಿಠಲ3
--------------
ಪುರಂದರದಾಸರು
ನೀನಾರವ ಪೇಳೆನ್ನ ಕಣ್ಣ ಮುಚ್ಚುವೆ |ಮೌನಗೊಂಡರಿಯದಂತಿಪ್ಪ ಮಗುವೆ ಪಅತಿ ಚೆಲುವಿಗೆ ರತಿಪತಿಪಿತನೊ-ನೀ |ಶ್ರುತಿಸಕಲಾನ್ವುಯ ಸನ್ನುತನೊ ||ಚತುರ್ದಶ ಭುವನವನಾಳಿದನೋ-ನೀ |ಶತತಪ್ಪುಗಳನೆಣಿಸಿದವನೊ?1ವರಗೋಕುಲಕೊಪ್ಪವ ದೊರೆಯೊ-ನೀ |ಕರಿವೈರಿಯ ಮದಪರಿಹಾರಿಯೊ ||ಗಿರಿಯನುದ್ಧರಿಸಿದ ನಖರುಚಿಯೊ-ನೀ |ಮುರದೈತ್ಯನ ಮಡುಹಿದ ಸಿರಿಯೊ? 2ಮಂಗಳ ಶೋಭನ ಮಣಿಖಣಿಯೊ-ನೀ |ಹಿಂಗದೆ ಸ್ತುತಿಪರ ಗತಿದಾನಿಯೊ-ಗೋ-||ಪಾಂಗನೆಯರ ಪ್ರಾಣದ ಧನಿಯೊ-ನೀ |ಸಿಂಗರ ಸೊಬಗಿನ ಶ್ರೀಪತಿಯೊ 3ಆಪತ್ತಿಗೆ ನೆನೆವರ ಗೋಚರನೊ-ನೀ |ಪಾಪಸಂಹಾರ ಪುರುಷೋತ್ತಮನೊ ||ಚಾಪದಿಂದಸುರರ ಗೆಲಿದವನೊ-ಸಾಂ-|ದೀಪನ ಮಗನ ತಂದಿತ್ತವನೊ? 4ಬೆಸಗೊಂಡಳುಗೋಪಿನಸುನಗುತ-ಆಗ |ಯಶೋದೆಗೆ ಚತುರ್ಭುಜ ತೋರಿಸುತ ||ಅಸುರಾರಿಯ ಕಂಡು ಮುದ್ದಿಸುತ ನೀ ||ಶಿಶುವಲ್ಲ ಪುರಂದರವಿಠಲೆನುತ 5
--------------
ಪುರಂದರದಾಸರು
ನೀನೆ ಗತಿಯೆಂದು ನಂಬಿದೆ ಕಾಯಯ್ಯ ಶ್ರೀನಿವಾಸ ಎನ್ನಹೀನಗುಣಗಳೆಣಿಸಲಿ ಬ್ಯಾಡ ದಯಮಾಡೊ ಶ್ರೀನಿವಾಸ 1ನಾನಾ ದುಷ್ಕøತಫಲವ ಉಂಡೆ ಇನ್ನಾರೆ ಶ್ರೀನಿವಾಸಎಂದೂ ದುರ್ವಿಷಯಕೆಮನ ಎರಗದಂತೆ ಮಾಡೊ ಶ್ರೀನಿವಾಸ 2ಸತ್ಕಥಾ ಶ್ರವಣ ಭಾಗ್ಯವ ಕೊಡುಅನುದಿನಶ್ರೀನಿವಾಸ ಎನ್ನಹೃತ್ಕಮಲದಿ ವ್ಯಕ್ತನಾಗಯ್ಯ ಶ್ರೀನಿವಾಸ 3ಪುತ್ರಕಳತ್ರಮಿತ್ರರು ನಿನ್ನ ದಾಸರೊ ಶ್ರೀನಿವಾಸ ತ್ವದ್ಭøತ್ಯಭೃತ್ಯರ ಪರಿಚಾರಕ ನಾನು ಶ್ರೀನಿವಾಸ 4ಅನಂತ ಜನ್ಮದ ಸತ್ಕರ್ಮ ನಿನಗೇವೆ ಶ್ರೀನಿವಾಸನಿತ್ಯದೀನೋದ್ಧಾರÀ ಪ್ರಸನ್ನವೆಂಕಟ ಮುಕುಂದ ಶ್ರೀನಿವಾಸ 5
--------------
ಪ್ರಸನ್ನವೆಂಕಟದಾಸರು
ನೀನೆ ಪಾಲಿಸು ಕರುಣಾವಾರಿಧಿದೀನಜನರಾಧಾರ ಹರಿಯೆ ಪನಿನ್ನಾಧೀನವು ತೋರ್ಪುದೆಲ್ಲಮಾನವನ ಸ್ವಾಧೀನವೇನಿದೆನಿನ್ನ ನೆರಳಲಿ ಮೂರು ಜಗವುಭಿನ್ನವಿಲ್ಲದೆ ಬದುಕಿ ಬಾಳ್ವುದು 1ನಿನ್ನ ಸಹಾಯವಿಲ್ಲದೀಭವವನ್ನು ಗೆಲಿಯುವ ಸಾಧ್ಯದಾರಿಗೆನಿನ್ನ ಕೃಪಾಕಟಾಕ್ಷದಿಂದಲೆಮುನ್ನ ಹಿರಿಯರು ಧನ್ಯರಾದರು 2ಮತ್ರ್ಯಲೋಕಕ್ಕೆಳೆದು ತಂದೆನ್ನಮರ್ತುಬಿಡುವುದುಚಿತವೇನಯ್ಯನಿರ್ತಸುಖವಿತ್ತು ರಕ್ಷಿಸಭವಕರ್ತುಶ್ರೀಗುರು ರಾಮ ಪ್ರಭುವೆ3
--------------
ರಾಮದಾಸರು
ನೀನೆ ಭಕುತಾಭಿಮಾನಿ ಕರುಣಿ ಪಮರೆಬಿದ್ದ ಭಕುತರ ಪೊರೆಯಲು ತವಸಮಕರುಣಿ ದೇವರ ಕಾಣೆಧರೆಎರಡೇಳರೊಳ್1ಶಿಲೆಯನು ಪೆಣ್ಣೆನಿಸಿ ಕುಲದೊಳು ಕಲೆಸಿದಿಸಲಹಿದಿ ಗಜನ ಮಹ ವಿಲಸಿತಮಹಿಮ ಪ್ರಭು 2ಮೊರೆಯಿಟ್ಟು ಸ್ಮರಿಸುವ ಚರಣದಾಸನ ಆಸೆಕರುಣದಿಂ ಪೂರೈಸು ಪರತರ ಶ್ರೀರಾಮ 3
--------------
ರಾಮದಾಸರು
ನೀನೆ ಸ್ವತಂತ್ರ ಸರ್ವೇಶಧ್ಯಾನಮಾಳ್ಪದಾಸರ ಪ್ರಾಣ ಪಭುವನತ್ರಯದಿ ಬಿಡದೆ ಒಂದೇಸಮದೆ ದೃಢದಿ ವೇದಸ್ಮøತಿಭಯನಿವಾರಣನೆಂಬ ಬಿರುದುಜಯಭೇರಿ ನುಡಿಸುತಿಹ್ಯವು 1ರಂಗ ನಿನ್ನ ದಾಸಜನಕೆಭಂಗವೇನು ಭುವನತ್ರಯದಿಮಂಗಲಮಹಿಮ ಭಕುತಾಂತರಂಗ ಭಜಿಪೆಭಂಗಗೆಲಿಸು2ಮಾಯ ನಾಟಕವಾಡುವ ಮಹಮಾಯಾಮಹಿಮ ಶ್ರೀರಾಮ ತಂದೆಮಾಯಮೋಹಿಗಳಿಂದುಳಿಸಿ ಎನ್ನಕಾಯೊ ಕೈಯ ಪಿಡಿದು ಸತತ 3
--------------
ರಾಮದಾಸರು
ನೀನೆಕರ್ತಎನ್ನಕರ್ತನಾ ನಿನ್ನಭೃತ್ಯಹಿತಮಾನಹಾನಿ ನಿನ್ನದಯ್ಯ ಕೊನೇರಿ ತಿಮ್ಮ ನಮ್ಮ್ಮಯ್ಯ ಪ.ತನುಧನ ನೆಚ್ಚಿಕಿಲ್ಲಮಾನಿನಿತನ್ನವಳಲ್ಲಸೂನುಬಂಧುಗಳೆಲ್ಲ ಕ್ಷಣದವರಲ್ಲನಾನಾ ಜನ್ಮದಲಿ ಎನ್ನ ಪ್ರಾಣ ಕಿತ್ತೈಯ್ಯ ಚೈತನ್ಯದಾನವಾರಾತಿ ಕೃಷ್ಣಯ್ಯ ದೀನನ ಬಿಡದಿರಯ್ಯ 1ಭವಾಂಧಕಾರದೊಳನುಭವಿಸಿ ಬೆಂಡಾಗುವೆನುವಿವರಿಸಿನಿತ್ಯಹಿತವ ಕಾಣೆನುಜಾವ ಒಂದದರೊಳರ್ಧ ದಾರಿಯಲಿ ಶ್ರೀಪಾದಭಾವಿಸಲೊಲ್ಲೆ ನೋಡಲವಗುಣಾಂಕಿತ ಮೂಢ 2ಸ್ವಾಮಿ ನಿನ್ನ ಮುದ್ರಾಂಕನ ಮಾಡಿನ್ನನುಮಾನ್ಯಾಕೆಶ್ರೀಮಂತ ಭಾಗವತರ ಪ್ರೇಮಾನ್ವಿತರಶ್ರೀ ಮಧ್ವರಾಯರ ಸಿಕ್ಷಾನೇಮರಾಚರಣಾಧ್ಯಕ್ಷಸಾಮೀಪ್ಯ ಮುಕ್ತಿಯನೀಯೊ ನನ್ನ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ನೀನೆಗತಿಕೃಷ್ಣ ಎನಗೆ ನೀನೆಗತಿಕೃಷ್ಣಪ.ನೀನೆ ಗತಿಯೆಂದಾನತನಾಗಿಮಾನಾಪಮಾನವ ನಿನಗೊಪ್ಪಿಸಿದೆಜ್ಞಾನವಿಹೀನನ ಪಾವನ ಮಾಡಿಶ್ರೀನರಹರಿ ಕರುಣಿಸು ನಮ್ಮ್ಮಯ್ಯನೆ 1ತನುವಸ್ಥಿರ ಮನವತಿಚರ ಒದಗಿದಧನ ನಶ್ವರ ನಿನ್ನಯ ಪಾದಾಬ್ಜದನೆನವಿಗೆಯೊಂದನೆ ಕೊಡು ಕಡೆ ಮೊದಲಿಗೆಜನನವಸಾನದ ಬಳ್ಳಿಯ ಕಡಿಯಲು 2ಶರಣಾಗತ ಶರಣರ ಕರವಿಡಿವಬಿರುದಿನ ದೊರೆಗಿನ್ನನುಮಾನ್ಯಾಕೆಪರಮಪತಿತನ ಪೂತನ ಮಾಡ್ಯುದ್ಧರಿಸುವಸಿರಿಪ್ರಸನ್ನವೆಂಕಟಕೃಷ್ಣ3
--------------
ಪ್ರಸನ್ನವೆಂಕಟದಾಸರು
ನೀನೆಗತಿನೀನೆ ಮತಿ ನೀನೆ ಸ್ವಾಮಿನೀನಲ್ಲದನ್ಯತ್ರ ದೈವಗಳ ನಾನರಿಯೆ ಪನಿನ್ನ ಪಾದಾರವಿಂದದ ಸೇವೆಯನು ಮಾಡಿನಿನ್ನ ಧ್ಯಾನದಲಿರುವ ಹಾಗೆಮಾಡು||ನಿನ್ನ ದಾಸರ ಸಂಗದಿಂದ ದೂರಿಡದೆನಗೆಸನ್ಮಾರ್ಗವಿಡಿಸೊ ಜಗದೀಶ ಅಘನಾಶ 1ಕಮಲನಾಭಿಯೊಳು ಬೊಮ್ಮರ ಪುಟ್ಟಿಸಿದೆ ಹರಿಯೆಕಮಲಸಖಕೋಟಿ ಪ್ರಕಾಶ ಈಶಕಮಲಕರ ತಳದಿ ಅಭಯವನಿತ್ತು ಭಕುತರಿಗೆಕಮಲಾಕ್ಷನೆನಿಸಿದೆಯೊ ಕಮಲಾರಮಣನೆ 2ಶಿಶುಪಾಲ ದಂತವಕ್ತ್ರರ ಶಿರವ ಭೇದಿಸಿದೆಪಶುಪತಿಯ ಆಭರಣ ವೈರಿವಾಹನನೆ ||ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆವಸುಧೇಶಸಿರಿಪುರಂದರವಿಠಲರಾಯಾ3
--------------
ಪುರಂದರದಾಸರು
ನೀನೇ ಅಚ್ಚುತ ನೀನೇಮಾಧವ|ಹರಿಗೋವಿಂದನು ನೀನೆ ||ನೀನೆಗತಿಯೆಂದು ನಂಬಿದ ದಾಸಗೆ |ಅಭಯಕೊಟ್ಟಾತನು ನೀನೆಪಜಲದೊಳು ಪೊಕ್ಕು ಮೈನಡುಗಿಸಿ ಭಾರವ |ತಳೆದಾತನು ನೀನೆ ||ಇಳೆಯ ಕದ್ದ ಸುರನ ದಾಡೆಯಿಂದ ಸೀಳಿ ಕಂಬ |ದೊಳು ಉದ್ಭವಿಸಿದೆ ನೀನೆ 1ಬಲಿಯ ಪಾತಾಳಕೆ ತುಳಿದೆಯೊ ನೀನು ಕೊ-|ಡಲಿಯ ಪಿಡಿದವನು ನೀನೆ ||ಜಲಧಿಯ ದಾಟಿ-ಅಸುರರ ಕಡಿದು |ಲಲನೆಯ ತಂದಾತ ನೀನೆ 2ಗೊಲ್ಲರ ಮನೆಯಲಿ ಬೆಣ್ಣೆಯ ಕದ್ದು |ಕಳ್ಳನೆನಿಸಿದವ ನೀನೆ ||ಬಲ್ಲಿದತ್ರಿಪುರದಿ ಬತ್ತಲೆ ನಿಂತು |ಒಳ್ಳೆ ಹಯವ ಹತ್ತಿದೆ ನೀನೆ 3ಪಾಂಡವರಿಗತಿ ಪ್ರಿಯನೆಂದೆನಿಸಿದ |ಪುಂಡರೀಕಾಕ್ಷನು ನೀನೆ |ಪುಂಡಲೀಕ ಪುರುಷೋತ್ತಮ ಮೂರುತಿ |ಪುರಂದರವಿಠಲನು ನೀನೆ 4
--------------
ಪುರಂದರದಾಸರು
ನೀನೇಕೊ ನಿನ್ನ ಹಂಗೇಕೊ - ನಿನ್ನ -ನಾಮದ ಬಲವೆನಗಿದ್ದರೆ ಸಾಕೊ ಪ.ಆ ಮರ ಈ ಮರವೆಂದೆನ್ನುತಿರೆ ರಾಮ - |ನಾಮವೆ ವ್ಯಾಧನ ಮುನಿಪನ ಮಾಡಿತು 1ನಾರಾಯಣೆನ್ನದೆ ನಾರಗನೆನ್ನಲು |ಘೋರಪಾತಕಿಯನು ನಾಮವೆ ಕಾಯ್ದಿತೊ2ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |ವಿಂದನೆಂಬ ಸಿರಿನಾಮವೆ ಕಾಯ್ದಿತೊ 3ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |ಪರಮಪುರುಷ ಹರಿನಾಮವೆ ಕಾಯ್ದಿತೊ 5ನಾರಿಯನೆಳತಂದು ಸೀರೆ ಸೆಳೆಯುತಿರೆ |ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7ನಿನ್ನ ನಾಮಕೆ ಸರಿಯಾವುದ ಕಾಣೆನೊಪನ್ನಗಶಯನ ಶ್ರೀ ಪುರಂದರವಿಠಲ 8
--------------
ಪುರಂದರದಾಸರು