ಒಟ್ಟು 941 ಕಡೆಗಳಲ್ಲಿ , 69 ದಾಸರು , 814 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಪತಿಕೇಶವ ಒಲೀ ಒಲೀ ಪ ಸನ್ನುತ ಗೋಪೀನಂದನ ನಲೀ ನಲೀ ಅ.ಪ ನಳಿನನಾಭ ಮಾಂಗಿರಿಪತಿಯೆನ್ನಯ ಕೊಳೆಯಾವರಣವ ಸುಲೀ ಸುಲೀ || 1 ವಂದಿಸುವಗಾನಂದವನೀಯಲು ನೊಂದಿಹ ಭಕ್ತರ ಬಂಧನ ನೀಗಲು ನಿಂದು ನಲಿದು ನೀ ಕುಣೀ ಕುಣೀ 2 ಪಾಡಿಪೊಗಳಿ ಕೊಂಡಾಡುವರೆಡೆಯೊಳು | ದಯ ಬೇಡಿದ ವರಗಳ ನೀಡುತೆ ಭಕ್ತರು ಮಾಡಿದ ಪಾಪವ ಸೆಣೀ ಸೆಣೀ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಯತಿವರ ನಮಿಪರ ಸುರತರುವೆ | ಮಮಗುರುವೆ | ನಿರುತದಿ ಭಕುತರ ಪೊರೆವೆ ಅ.ಪ ದಯಾಸಾಂದ್ರ ರಾಘವೇಂದ್ರ | ಸುರುಚಿರಮಂತ್ರಾಲಯೇಂದ್ರ | ಜಯಯತಿವರ ನಮಿಪರ ಸುರತರುವೆ 1 ಭಾಸುರಾಂಗ ಜಿತಾನಂದ | ರಘುವರಪದಮಲಭೃಂಗ | ಜಯಯತಿವರ ನಮಿಪರ ಸುರತರುವೆ 2 ಶ್ರೀಸುಧೀಂದ್ರವರಕುಮಾರ | ಶ್ರೀಶಕೇಶವಾಂಘ್ರಿರುಚಿರ | ಜಯಯತಿವರ ನಮಿಪರ ಸುರತರುವೆ 3
--------------
ಶ್ರೀಶ ಕೇಶವದಾಸರು
ಶ್ರೀರಂಗನಾಥ ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ ಪ ಕಾಯೊ ಕಾಯೊ ಕಾವೇರಿ ನಿಲಯನೆ ಕಾಯೊ ವಾಙ್ಮನ ಪೂರ್ವಕದಿ ತವ ತೋಯಜಾಂಘ್ರಿಯ ನಂಬಿದೆನುಭವ ಮಾಯಗೆಲುವ ಉಪಾಯ ತೋರಿ ಅ.ಪ ದೇವಾಧಿದೇವ ನೀನು | ಪ್ರಣತ ಜನರಿಗೆ ದೇವತರು ಮಣಿಧೇನು | ಎಂದರಿತು ನಿಷ್ಟಿಲಿ ಧಾವಿಸಿ ಬಂದೆ ನಾನು | ರಘುವಂಶ ಭಾನು ಕಾವನಯ್ಯ ನೀನೊಲಿದು ಕರುಣದಿ ಪಾವಮಾನಿಯ ಶಾಸ್ತ್ರವರಿತು ಭಾವ ಭಕ್ತಿಲಿ ನಿನ್ನ ಪಾಡುವ ಕೋವಿದರ ಸೇವಕನ ಮಾಡಿ 1 ಪನ್ನಂಗಪತಿಶಯನ | ಶಿರಬಾಗಿ ಪ್ರಾರ್ಥಿಪೆ ಪನ್ನಂಗರಿಪುವಾಹನ | ಎನ್ನಪರಾಧವ ಮನ್ನಿಸೊ ಹಯವದನ | ವೈಕುಂಠ ಸದನ ನಿನ್ನನುಗ್ರಹ ಪೂರ್ಣಪಡೆದು ಜಗನ್ನಾಥದಾಸರ ಸನ್ನಿಧಾನದಿಂ ಬಂದೆ ತಂದೆ 2 ನೇಸರ ಕುಲಜಾತ | ವೇದೋಕ್ತಕ್ರಮದಿಂ ಭೂಸುರ ಕರಪೂಜಿತ | ಕೌಶಿಕನ ಯಜ್ಷವ ಪೋಷಕ ಪವನಪಿತ | ಪಾವನ್ನ ಚರಿತ ವಾಸುದೇವಾನಂತ ಮಹಿಮೆ | ವಿಭೀಷಣಪ್ರಿಯ ದೋಷಕಳೆಯುವ | ಭೇಷಪುಷ್ಕರಣೀಶ ಕೇಶವ ದಾಶರಧಿ ಶ್ರೀ ಶಾಮಸುಂದರ 3
--------------
ಶಾಮಸುಂದರ ವಿಠಲ
ಶ್ರೀರಮಣೀಮಣಿ ಬಾರೌ ಶ್ರೀಕರಮಣಿಪೀಠಕೆ ಪ. ಸಾರಸದಳನಯನೆ ಸುಗುಣಾಭರಣೆ ಸಾರಸಭವವಂದಿತಚರಣೆ ಕ್ಷೀರಸಾಗರನಂದನೇ ವರ ಕಾರುಣ್ಯಾಮೃತಪೂರಿತ ವದನೆ 1 ಪವನಾತ್ಮಜಸಂಸೇವಿತಾಂಘ್ರಿಯುಗಳೇ ಪಾಲಿತಾಮರ ಜಾಲೇ ಪಾವನಗುಣಶೀಲೇ ಶಶಾಂಕನಿಭಫಾಲೇ ಪಾಲಿಸುನೀಂ ಪಂಕಜಸುಮಮಾಲೆ 2 ಕೇಶವಹೃದಯನಿವಾಸಿನೀ ಪದ್ಮಾಸಿನೀ ಕ್ಲೇಶ ನಿವಾರಿಣಿ ಭುವನೈಕ ಜನನಿ ಕಾಂಕ್ಷಿತಾರ್ಥ ಪ್ರದಾಯಿನಿ 3
--------------
ನಂಜನಗೂಡು ತಿರುಮಲಾಂಬಾ
ಶ್ರೀರಮಾಧವಾಶ್ರೀತಜನಪಾಲಿತ ಮಾರಕೋಟಿರೂಪ ವಾರಿಧಿಶಯನ ಮುರಾರಿ ಕೇಶವ ಶ್ರೀಮ- ನ್ನಾರಾಯಣ ನೀರಜದಳಲೋಚನಪ. ಮಾನುಷತ್ವವಾಂತ ಸಮಯದಿ ಹೀನ ಭೋಗದ ಚಿಂತೆ ನಾನು ನೀನೆಂಬಾಭಿಮಾನದಿ ಮನಸು ನಿ- ಧಾನವಿಲ್ಲದೆ ಅನುಮಾನದಿಂದಿಹುದೈ ಏನು ಕಾರಣ ಹೃದಯನಳಿದೊಳು ನೀನೆ ನೆಲಸಿಕೊಂಡೀ ನರಯೋನಿಗೆ ನೀನೆ ಬರಿಸಿಯವಮಾನ ಬಡಿಸುವದು ಊನವಲ್ಲವೆ ಪದದಾಣೆ ಸತ್ಯವಿದು1 ಬಾಲಕತನದೊಳಗೆ ಕಾವ್ಯದ ಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನ ಬಾಲಭೂಷಿತಂಗಳ ಕೇಳೈ ಶ್ರೀಲಕ್ಷ್ಮೀಲೋಲ ವೆಂಕಟರಾಯ ಕಾಲಕಾಲಪ್ರಿಯ ಪಾಲಿಸೊಲಿದು ಕರು- ಣಾಲವಾಲ ನತಪಾಲಶೀಲ ಮುನಿ ಜಾಲವಂದ್ಯ ವನಮಾಲದಾರಿ ಜಗ ಮೂಲಸ್ವರೂಪ ವಿಶಾಲ ಗುಣಾರ್ಣವ2 ಹಿಂದಾದುದನರಿಯೆ ಇದರಿಂ ಮುಂದಾಗುವುದು ತಿಳಿಯೆ ಹಿಂದು ಮುಂದಿಲ್ಲದೆ ಬಂಧನದೊಳು ಬಲು ನೊಂದೆನೈ ನಿನಗಿದು ಚಂದವೆ ಶ್ರೀಹರಿ ತಂದೆ ತಾಯಿ ಬಂದು ಬಾಂಧವ ಬಳಗ ನೀ ನೆಂದು ನಿನ್ನಯ ಪದದ್ವಂದ್ವವ ಭಜಿಪಾ ನಂದಸುಜ್ಞಾನದಿಂದೆಂದಿಗೂ ಸುಖ ದಿಂದಿರುವಂದದಿ ತಂದೆ ನೀ ಪಾಲಿಸು3 ಧಾರಿಣಿಗಧಿಕವಾದ ಮೆರೆವ ಕು ಮಾರಧಾರೆಯ ತಟದ ಚಾರುನೇತ್ರಾವತಿ ತೀರ ಪಶ್ಚಿಮ ಭಾಗ ಸಾರಿ ತೋರುವ ವಟಪುರದೊಳು ನೆಲಸಿಹ ವೀರ ವೆಂಕಟಪತಿ ವಾರಿಜನಾಭ ಖ- ರಾರಿ ತ್ರಿದಶಗಣವಾರವಂದ್ಯ ಭಾ- ಗೀರಥೀಪಿತ ದುರಿತಾರಿ ದೈತ್ಯಸಂ- ಹಾರಿ ಶ್ರೀಲಕ್ಷ್ಮೀನಾರಾಯಣ ಹರಿ4
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ ಪ ಅನಿಮಿಷರಂದದಿ ವನವಾಸಕೆ ಹೋದವನ _ ಶ್ರೀರಾಮ ಎನ್ನಿರೊಮನಸಿಜ ನಾರಿಯ ಪಿತನ ಕೊಂದನ ಪಿತನ ಪೊತ್ತವನ _ ಶ್ರೀರಾಮ ಎನ್ನಿರೊಘನ ಕೋಡ ಕೊನೆಯಿಂದ ಧರಣಿಯ ತಾಳ್ದವನ _ ಶ್ರೀರಾಮ ಎನ್ನಿರೊದಿನಕರನಳಿವಿನಲಿ ಪಗೆಯ ಗೆದ್ದಾತನ _ ಶ್ರೀರಾಮ ಎನ್ನಿರೊ1 ಗಜವನೇರಿದವನ ತಂದೆಯ ತಾಯನಳೆದವನ _ ಶ್ರೀರಾಮ ಎನ್ನಿರೊಭುಜಬಲದಿಂದ ಭೂಪಾಲರ ಗೆದ್ದವನ _ ಶ್ರೀರಾಮ ಎನ್ನಿರೊನಿಜಮುನಿಗಳ ವನದಿಂದ ತನಯರ ತಂದವನ _ ಶ್ರೀರಾಮ ಎನ್ನಿರೊಭುಜಗಧರನ ಕೈಯ ಆಯುಧವನು ತಂದವನ _ ಶ್ರೀರಾಮ ಎನ್ನಿರೊ 2 ವಾಸವ ಹೊಕ್ಕವನ _ ಶ್ರೀರಾಮ ಎನ್ನಿರೊತೃಣಕೆ ಬಾಯಿತ್ತನ ಮೇಲೇರಿ ಬಪ್ಪನ _ ಶ್ರೀರಾಮ ಎನ್ನಿರೊ ಅಣುರೇಣು ತೃಣದೊಳು ಪರಿಪೂರ್ಣನಾದನ _ ಶ್ರೀರಾಮ ಎನ್ನಿರೊಪ್ರಣವಗೋಚರ ಕಾಗಿನೆಲೆಯಾದಿಕೇಶವನ _ ಶ್ರೀರಾಮ ಎನ್ನಿರೊ 3
--------------
ಕನಕದಾಸ
ಶ್ರೀರಾಮ ಶ್ರೀರಾಮ ಶ್ರೀರಾಮ ಶ್ರೀರಾಮ ಸರಸಿಜಾಸನ ಪುರಹರನನ್ನು ಮೊದಲು ನೀ ಶರೀರದಿ ಪಡೆದೆ ಸರ್ವೇಶ | ಕೇಶವ ಪರಮಪುರುಷನೆ ಕೈಪಿಡಿಯೊ1 ಅರಿವಿಗಾಶ್ರಯನೀನೆ ಸರ್ವಶಬ್ದವಾಚ್ಯ ದುರಿತವಿದೂರ ಪರಮಾತ್ಮ | ನಾರಾಯಣ ಕರುಣವಾರಿಧಿಯೆ ಕೈಪಿಡಿಯೊ 2 ಮಾಧವ ರಾಯನೀ ಒಲಿದು ಕೈಪಿಡಿಯೊ 3 ಸೂರ್ಯ ನೀವೊಲಿದೆಲ್ಲರ ಸಲಹುವೆ | ಎನ್ನಯ್ಯ ಗೋವಿಂದ ನೀನೆ ಕೈಪಿಡಿಯೊ 4 ಆಪತ್ಭಾಂಧವನೇ ಕೈಪಿಡಿಯೊ 5 ಕಲುಷ ಪನ್ನಗಶಯನ ಕೈಪಿಡಿಯೊ 6 ಶಕ್ರಗೋಸುಗ ನೀನೆ ಶುಕ್ರ ಶಿಷ್ಯನ ಬೇಡಿ ವಿಕ್ರಮದಿಂ ಭೂಯಳದೆ | ಅದ್ಭುತತ್ರಿ ವಿಕ್ರಮ ಮೂರುತಿಯೆ ಕೈಪಿಡಿಯೊ 7 ಆಮಹಾವಟುರೂಪದಿಂದಲದಿತಿಯೊಳು ವಾಮನ ಮೂರ್ತಿಯೆ ಕೈಪಿಡಿಯೊ 8 ತ್ವರಿತದಿ ಎನ್ನ ಕೈಪಿಡಿಯೊ 9 ಹೃಷಿಕೇಶ ನಿನ್ನ ಕಾಣರೊ | ಪಾಮರರು ಋಷಿಗಣವಂದ್ಯ ಕೈಪಿಡಿಯೊ 10 ಶೋಭನಚರಿತಾಮರವಿನುತ | ನೆ ಪದ್ಮ ನಾಭನೆ ಒಲಿದು ಕೈಪಿಡಿಯೊ 11 ನೀ ದಯದಲಿ ಯಶೋದಾದೇವಿಯಿಂದಲಿ ಬೋಧರೂಪನೆ ಕಟ್ಟಿಸಿಕೊಂಡೆ | ಸ್ವಾಮಿ ದಾಮೋದರ ಎನಗೊಲಿದು ಕೈಪಿಡಿಯೊ 12 ಹರನಲ್ಲಿ ನಿಂತು ಸಂಹರಿಸುವೆ ಜಗವನ್ನು ಪರಮ ನಿಷ್ಕರುಣದಲಿ | ನೀ ಸಂ ಕರ್ಷಣ ಮೂರುತಿಯೆ ಕೈಪಿಡಿಯೊ 13 ಭಾಸುರಗಾತ್ರ ದೇವಾಸುರ ಮನುಜರೆಂ- ಬೀಸಮುದಾಯದೊಳಗಿರ್ಪೆ | ಸರ್ವಾತ್ಮ ವಾಸುದೇವಾಖ್ಯ ಕೈಪಿಡಿಯೊ 14 ಸೂರಿ ಜನಾಶ್ರಯ ವಿದ್ವದ್ಭೀರೀಡ್ಯಾ ಸುಗುಣಾಢ್ಯ | ನೀನೆ ಶ್ರೀ ಪ್ರದ್ಯುಮ್ನ ಒಲಿದು ಕೈಪಿಡಿಯೊ 15 ಮುನಿಜನವಂದಿತ ಅನಿಮಿಷಸನ್ನುತ ಖಗವಾಹ | ಗತ ಮೋಹ ಅನಿರುದ್ಧ ಎನ್ನ ಕೈಪಿಡಿಯೊ 16 ಸರಸಿಜಭವ ಮೊದಲು ತೃಣಪರಿಯಂತವು ಪುರುಷೋತ್ತಮ ನೀನೆ ಕೈಪಿಡಿಯೊ 17 ಮೋಕ್ಷದಾಯಕ ಸರ್ವಾಧ್ಯಕ್ಷ ಜೀವರಿಗೆಲ್ಲ ಸಾಕ್ಷಿಯಾಗಿರುವೆಯೊ ಹೊರ ಒಳಗೆ | ಸ್ವಾಮಿ ಅ- ಧೋಕ್ಷಜ ನೀನೆ ಕೈಪಿಡಿಯೊ 18 ಪರಮಸತ್ಪುರುಷನಾಗಿಹ ಪ್ರಹ್ಲಾದನ ನರಸಿಂಹ ಮೂರುತಿಯೆ ಕೈಪಿಡಿಯೊ19 ಇಚ್ಛಾಮಾತ್ರದಿ ಸೃಷ್ಟಿ ಸ್ಥಿತಿಲಯಗೈಯ್ಯುವೆ ನಿಚ್ಛಲನಾಗಿ ಜಗವನ್ನು | ನುಂಗುವೆ ಅಚ್ಯುತ ಎನ್ನ ಕೈಪಿಡಿಯೊ 20 ನಿರ್ದಯನಾಗಿ ಕೊಲ್ಲುವೆ | ನೀನೆ ಜ- ನಾರ್ಧನಸ್ವಾಮಿ ಕೈಪಿಡಿಯೊ 21 ವಿಧಿ ಚಂದ್ರಶೇಖರ ಮುಖ್ಯ ಸಂದೋಹ ನಿನ್ನ ಪೊಗಳುವರು | ಅಯ್ಯ ಉ- ಪೇಂದ್ರ ಮೂರುತಿಯೆ ಕೈಪಿಡಿಯೊ 22 ಕರುಣಸಾಗರ ನೀನೆ ಶರಣ ಜನೋದ್ಧಾರ ಸಿರಿದೇವಿಯರಸ ಸರ್ವೇಶ | ಸರ್ವಗ ಸ್ವಾಮಿ ಹರಿಯೆ ನೀ ಒಲಿದು ಕೈಪಿಡಿಯೊ 23 ಕಷ್ಟ ಎಂಬುವ ಬಲು ಉಷ್ಣ ಜಲದಿ ಬಿದ್ದು ವಿಷ್ಣುವೆ ನಾನು ಮೊರೆಯಿಡುವೆ | ಕಾದುಕೊ ಕೃಷ್ಣ ನೀ ಒಲಿದು ಕೈಪಿಡಿಯೊ 24 ವರಬಿಂಬಮೂರ್ತಿ ನೀನಯ್ಯಾ | ಸ್ವಾಮಿ ಶ್ರೀ ಗುರುರಾಮವಿಠ್ಠಲಾನತಪಾಲ 25
--------------
ಗುರುರಾಮವಿಠಲ
ಶ್ರೀರಾಮರ ಪೂಜಿಸಲಿಲ್ಲ - ಮೈಮರೆತೆನಲ್ಲ ಪ ಬಾಲತ್ವದಲಿ ಬಲು ಲೀಲೆಯಿಂದಲಿ ನಾನುಕಾಲವ ಕಳೆದೆನಲ್ಲ - ಮೈಮರೆತೆನಲ್ಲ 1 ಸತಿಸುತರೆ ಎನಗೆ ಗತಿಯೆಂದು ತಿಳಿದು ನಾನುಮತಿಗೆಟ್ಟು ಭ್ರಾಂತನಾದೆನಲ್ಲ - ಮೈಮರೆತೆನಲ್ಲ 2 ಹೊನ್ನ ಗಳಿಸಿ ಪರರಿಗೆ ಅನ್ನವಿಕ್ಕಲಿಲ್ಲಚೆನ್ನಕೇಶವನ ನಂಬಲಿಲ್ಲ - ಮೈಮರೆತೆನಲ್ಲ3
--------------
ಕನಕದಾಸ
ಶ್ರೀವರನೆ ಬಾ ಮುಕುಂದ ಮಾಧವ ಕಾವರನ್ಯರು ಇಲ್ಲ ಗೋವಿಂದ ಕೇಶವ ಪ ವೇದವಿದಿತ ಹರಿ ಸಾದರ ಮುರವೈರಿ ಮೇದಿನೀಪತಿ ಕೋದಂಡ ಸುವಿಹಾರಿ1 ನೋಡಿ ನಿನ್ನಯ ಚರಣ ಹಾಡಿ ನಿನ್ನಯ ಸುಗುಣ ಬೇಡಿ ನಿನ್ನಯ ಕರುಣ ಪಾಡುವೆನೋ ಶರಣ 2 ಮಂಗಳ ಸುವಿಲಾಸ ಶೃಂಗಾರ ಭಾನುಭಾಸ ಮಾಂಗಿರಿವರವಾಸ ರಂಗೇಶ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀವಾಸಾನತಮಾಕಲಯಾಚ್ಯುತ ಶ್ರೀವಾಸುಕಿಶಯಮಾಮನಿಶಂಹೃದಾ ಪ ಪುಂಡರೀಕ ನಯನಾಂಡಜವಾಹನ ಕುಂಡಲಶಯ ಮಾಂಡವ್ಯಸೇವ್ಯಪದ 1 ಪುಂಡರೀಕ ಸುಮಂಡಿತಾಂಗಪದ ಪುಂಡರೀಕಶ್ರಿತ ಪಾಂಡುತನಯ ಭೋ 2 ನಂದಗೋಪವರ ನಂದಸುಮನೋ ನಂದನಮುನಿಜನ ವಂದಿತಪದಯುಗ 3 ಧರ್ಮತನಯ ಸಹಧರ್ಮಚಾರಿಣಿ ವರ್ಮಪಾಲ ಸದ್ಧರ್ಮ ಶ್ರೀಲಹರಿ 4 ವ್ಯಾಘ್ರನಾಮ ದೈತ್ಯಾಗ್ರನಿಗ್ರಹ- ಣೋಗ್ರಸೇನ ತನಯಾಗ್ರವಿದಾರಣ 5 ಬಾಲಭಕ್ತ ಪರಿಪಾಲ ಹೇಮಮಯ ಚೇಲ ವಿಧೃತ ವನಮಾಲ ನರಹರೆ 6 ಮಾರಜನಕ ಸುರವಾರವಂದ್ಯ ಮಂ ದಾರ ಹಾರ ಸುಕುಮಾರಶರೀರ 7 ಮಂದರಧರ ಪೂರ್ಣೇಂದು ವದನ ಗೋ ವಿಂದ ಮುಕುಂದ ಸನಂದವಂದಿತ 8 ಖಂಡಪರಶು ಕೋದಂಡ ವೇ ತಂಡ ಹಸ್ತಭುಜದಂಡ ರಘೂದ್ವಹ 9 ಅಂಬರೀಷ ವರದಂಬುಜಾಸನಾ ಲಂಬಮಾನ ಚರಣಾಂಬುಜ ಕೇಶವ 10 ಸಾರವಸ್ತು ಪರಿಪೂರ ವ್ಯಾಘ್ರನಗ ಪಾರಿಜಾತ ವರದಾರ್ಯವಿಠಲ ಶ್ರೀ 11
--------------
ವೆಂಕಟವರದಾರ್ಯರು
ಶ್ರೀಶ ಕೇಶವ ಮಾಧವ ವಾಸವ ವಂದಿತ ಪ ಸಾಸಿರನಾಮನೆ ಭೂಸುರಪಾಲನೆ ದೋಷವಿದೂರನೆ ಶೇಷಶಯನಹರಿ 1 ಇಂದಿರಾರಮಣನೆ ನಂದಗೋಪಿಯ ಕಂದ ಮಂದರಧರ ಗೋವಿಂದ ಗೋ ಗೋಪಪಾಲ2 ಭುವನ ಮೋಹನರೂಪ ನವನವ ಚರಿತನೆ ನವನೀತಧರ ಕೃಷ್ಣ ಭುವನ ವಿಲಕ್ಷಣನೆ 3 ರಂಗನಾಯಕನೆ ಪ್ಲವಂಗ ವತ್ಸರದೊಳು ಭಂಗಗಳಳಿಯುವ ಶೃಂಗಾರ ಮೂರುತಿ4 ಶ್ರಮ ಪರಿಹರಿಸುತ ಮಮತೆಯಿಂದಲಿ ಕಾಯ್ವಸುಮನಸವಂದ್ಯ ಶ್ರೀ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ಶ್ರೀಶ ಕೇಶವ ವಿಠಲ ಸಲಹೊ ಇವನಾ ಪ ದೋಷದೂರನೆ ದೇವ | ರಾಶಿಪಾಪಂಗಳನುನಾಶಗೊಳಿಸುತ್ತ ನಿರ್ದೊಷನ್ನ ಗೈಯ್ಯೋ ಅ.ಪ. ಮೋದತೀರ್ಥರ ಮತದಿ | ಮೋದವನೆ ಪಡುತಿಪ್ಪಸಾಧುಜೀವಿಯು ನಿನ್ನ | ಪಾದಾಬ್ಜ ನಮಿಪವೇದೋದಿತವು ಎನ್ನೆ | ಬೋಧಗಳ ತಿಳಿಸುತ್ತಸಾಧನದಲ್ಲಿರಿಸಿವನ | ಕಾದುಕೋ ಹರಿಯೇ 1 ಮೂರ್ತಿ ಉಪ-ದೇಶಿಸಿಹೆನೋ ಸ್ವಾಮಿ | ಶ್ರೀಶ ನರಹರಿಯೇ 2 ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾಯೋ | ಶರ್ವವಂದ್ಯನಿರ್ವಿಘ್ನತೆಯಲಿವಗೆ | ಸರ್ವಶಾಸ್ತ್ರಾರ್ಥಗಳಸರ್ವಸಾರವ ತಿಳಿಸೊ | ಸರ್ವಾಂತರಾತ್ಮ 3 ನಿತ್ಯ ಮಂಗಳನೇ 4 ಆವ ಸಂಸೃತಿಯೆಂಬ | ದಾವಾಗ್ನಿ ಪರಿಹರಿಸೆಶ್ರೀವರನೆ ನಿನ್ನ ಸ್ಮøತಿ | ಸರ್ವಕಾಲದಲಿದೇವ ಹಯ ಮುಖ ಗುರು | ಗೋವಿಂದ ವಿಠ್ಠಲನೆಈವುದೆನೆ ಬಿನ್ನಪವ | ಮಾವಿನುತ ಸಲಿಸೋ 5
--------------
ಗುರುಗೋವಿಂದವಿಠಲರು
ಶ್ರೀಶ ಶ್ರೀ ಕೇಶವನೆ ಬಾ ಪರುಮ ಪುರುಷ ಶೇಷರಾಯನ ಮುಕುಂದ ಶರಣರಾನಂದ ಪ ಭೂಸುರರು ನಡೆಮುಡಿದು ಪೂರ್ಣಕುಂಭವು ವೇದ ಓಲಗ ಛತ್ರ ಚಾಮರ ದಿಮಿಗೆ ಅ.ಪ ಸುತ್ತಿಬರುತಿಹ ದನುಜ ವೃಂದವೆಲ್ಲವ ತರಿದು ಮುತ್ತಿನಂಥಾ ತನುವು ಧೂಳಾಗಿರುವುದೋ ಒತ್ತುತೆಣ್ಣೆಯ ನಿನಗೆ ಮತ್ತೆಬಿಸಿನೀರೆರೆದು ಕತ್ತುರಿಯ ಹಣೆಗಿಟ್ಟು ನುಡಿಯನುಡಿಸುವೆನೋ 1 ಸರಸಿ ಪೀತಾಂಬರ ಶಿರಕೆ ಮಣಿಯಳವಡಿಸಿ ಕೊರಳಿನೊಳುಹಾಕಿ ತುಳಸೀಮಾಲೆಯ ಕರಕೆ ಕಂಕಣ ಶಂಖ ಚಕ್ರಗಧೆಯಾ ಕಮಲ ದೊರೆನಡುವಿಗೊಡ್ಯಾಣ ಸಿರಿಪದಕೆ ಕಡಗ 2 ಅಂಗಕ್ಕೆ ಶ್ರೀಗಂಧ ಅಗರುಚಂದನ ಧೂಪ ಮಂಗಳದ ದೀಪವೂ ಮಂತ್ರಪುಷ್ಪ ಶೃಂಗಾರ ಮೂರ್ತಿಗೆ ಕನ್ನಡಿಯು ಬೀಸಣಿಗೆ ಸಂಗೀತ ನರ್ತನವು ಸ್ತುತಿಸೇವೆಯೂ 3 ವಸುಮತೀಪಾಲನೆಯ ಸತತ ನೀಗೈಯುತ್ತ ಹಸಿದು ಬಳಲುತ್ತಿರುವೆ ಕೃಷ್ಣಪರಮಾತ್ಮ ಬಿಸಿಯಹೋಳಿಗೆ ತುಪ್ಪ ಹಸುನಿನಾ ಬಿಸಿಹಾಲು ಮೊಸರು ಶಾಲ್ಯನ್ನ ಫಲಪಾನಕದ ಸುಖಹೀರಿ 4 ಶ್ರೀದೇವಿ ಭೂನೀಳ ಇವರೊಡನೆ ತೃಪ್ತಿಯಂ ಶ್ರೀಧರ ಮೂರುತಿ ಹೃದಯ ಕಮಲದಲಿ ಕೂಡೋ ಸಾದರದಿ ಕರ್ಪೂರ ತಾಂಬೂಲವನು ಸದಿಯೋ ಮೋದದಿಂದಾರತಿಯ ಬೆಳಗುವೆನೋ ರಂಗಾ 5 ಜಯತು ಜಗದಾಧಾರ ಪುಷ್ಪಾಂಜಲಿಯೊಧೀರ ಜಯ ಸಾಧು ಹೃದ್ಭಾಸ ಹೆಜ್ಜಾ ಜಿವಾಸ ಜಯತು ಮಂಗಳ ನಾಮ ಶ್ಯಾಮಂಗೆ ಪ್ರಣಾಮ ಜಯತು ಕರುಣಾಸಿಂಧು ಜಯಭಕ್ತ ಬಂಧು 6
--------------
ಶಾಮಶರ್ಮರು
ಶ್ರೀಶಾ ಹೃಷಿಕೇಶ ಕೇಶವ ವಸುಧಾಧೀಶ ಪ ಭವ ಸನ್ನುತ ಶೇಷಾಚಲ ಸನ್ನಿವಾಸ ಶಾಶ್ವತಾ ಪರಿಪಾಹಿ ಹರೇ ಅ.ಪ. ದುರಿತ ವಿಭಂಜನ ವಾಮನ ವರ ಸಂಕರ್ಷಣ ಧರಣೀ- ಧರ ಶ್ರೀಧರ ದೋಷದೂರ ಪರತರ ಪರಮೇಶ ಅಮಿತ ಸಮ ನರನಾರಾಯಣ ಸುರಗಣ ಪರಿಪಾಲ ಗಾನಲೋಲ ವರದ ಸುಖಾಸ್ಪದ ವಿಜಯದ 1 ಮಾಧವ ಮುರಹರ ಶರಣಾಗತ ಜನರಕ್ಷಕ ಭವ ಮೋಚಕ ನಿರುಪಮ ಗುಣಭರಿತ ಅರುಣಾಂಭೋರುಹಲೋಚನ ಸುರಗಂಗೋದಿತ ಚರಣ ಕರಿರಾಜವರದಾಚ್ಯುತ ಸ್ವರತಾ ಸ್ವತಂತ್ರ ಸುಚರಿತ 2 ಮಂದರ ಗಿರಿಧಾರಕ ಜಯ ಕಾಂಚನನಯನಾಂತಕ ಜಯ ಮನುಜ ಮೃಗೇಂದ್ರ ಜಯ ವೈರೋಚನಿ ದರ್ಪಹರ ಜಯ ಭೂಮಿ ಭುಜದಲ್ಲಣ ಜಯರಾಮ ಕೃಷ್ಣ ನಿಪುಣ ಕಲ್ಕಿ ಹಾ ಶ್ರೀಕಾಂತ ಜಯಜಯ 3
--------------
ಲಕ್ಷ್ಮೀನಾರಯಣರಾಯರು
ಶ್ರೀಹರಿ ನಿನ್ನನ್ನೆ ಪಡೆವುದು ಭಾಗ್ಯ ಬಾಹಿರನೆನಿಸದೆ ಸೇರಿಸು ಯೋಗ್ಯ ಪ ಹೃದಯಾರವಿಂದದೆ ದೇವಿಯರುಸಹಿತ ಸದಯ ಸನ್ನಿಧಿ ಮಾಡು ಅದು ನನಗೆ ವಿಹಿತ 1 ಭಾಗವತ ಕೈಕಂರ್ಯ ಹಗಲಿರುಳು ಇರಲಿ ನಿತ್ಯ ಸಿದ್ಧಿಸಲಿ 2 ಇಡುದೇವ ಪದಕಮಲ ನನ್ನ ತಲೆಮೇಲೆ ಅನುದಿನ ಲೀಲೆ 3 ಕೊನೆಗಾಲದಲಿ ಬಂದು ನೆನೆವಂತೆ ನೀಡೈ ಮನಕೆ ಮಂಗಳರೂಪ ಧ್ಯಾನ ದಯಮಾಡೈ 4 ಅವತಾರಫಲಗಳ ಸ್ಮರಣೆ ಬರುತಿರಲಿ ಭವವೆಲ್ಲ ಕರಣಗಳು ನಿನ್ನ ಸೇವಿಸಲಿ 5 ದಾಸನ್ನ ಚರಣಾಂಬುಜದÀಡಿಯಿರಿಸು ಶ್ರೀಶನೆ ಪ್ರೇಮದ ಸವಿಯನುಣಬಡಿಸು 6 ಎಲ್ಲವು ನಿನ್ನದೆ ನನ್ನದೇನಿಲ್ಲ ಬಲ್ಲವನೆ ನೀನಾಗಿ ಮುಕ್ತಿಕೊಡು ನಲ್ಲ 7 ಹಿಂದೇಳು ಮುಂದೇಳು ತಲೆಮಾರಿನವರು ತಂದೆ ನಿನ್ನಂಘ್ರಿ ಶೇಷಾಂಕಮುದ್ರಿತರು 8 ಕುಲಧನವೆ ನೀನಮ್ಮಕುಲಕೋಟಿಯನ್ನ ಒಲಿದು ಕಾಪಾಡಯ್ಯ ಕರುಣಿ ಪ್ರಸನ್ನ 9 ಹೆಜ್ಜಾಜಿ ಕೇಶವ ಇದು ನಮ್ಮ ಮೋಕ್ಷ ಅರ್ಜುನಸಾರಥಿ ಕಾಣು ಪ್ರತ್ಯಕ್ಷ10
--------------
ಶಾಮಶರ್ಮರು