ಒಟ್ಟು 28225 ಕಡೆಗಳಲ್ಲಿ , 136 ದಾಸರು , 9942 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕಪಾಲನೆ ನಾಕವಂದ್ಯನೆ ಸಾಕುಬಿಡು ಚಲವಾ ಯಾಕೆ ಕೋಪ ದೀನ ನಾನೆಲೈ ಶ್ರೀಕರ ಸುಗುಣಾ ಪ ಕಾವರಿಲ್ಲವೋ ದೇವ ದೇವನೆ ಭಾವಜಾತಪಿತನೆ ಜೀವಕೋಟಿಯ ಜೀವರಾಶಿಯ ಪಾವನಾಂಗನೆ ಅ.ಪ ಪರರ ನಾನುಪರಿಚರಿಸಲಿಲ್ಲವೋ ದುರುಳಭಾವದಿ ಪರರ ಹಿಂಸೆಗೈದು ಎನ್ನ ಉದರ ಪೊರೆದೆನೋ 1 ವೇದಗಳ ನಾನೋದಿ ಅರಿಯೇ ಸಾಧು ಸಂಗಮ ಭೇದಗೈದೆ ಗರ್ವದಿಂದೆ ವೇದವೇದ್ಯನೆ 2 ಗಂಗಜನಕ ತುಂಗ ವಿಕ್ರಮ | ಮಂಗಳಾಂಗನೇ ಮಾಂಗಿರೀಶ ನಿನ್ನ ನಾಮಭೃಂಗವ ತೋರೈ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲೋಕಮಾತೆಯೆ ದಯಮಾಡೆ ತಾಯೆ ಪರಿ ಪೂಜಿಪೆ ಶ್ರೀಪತಿಯ ಸತಿಯೆ ಪುಲ್ಲನಾಭನ ಕೂಡಿ ಮೆಲ್ಲಡಿ ಇಡುತಲಿ ಉಲ್ಲಾಸದಿಂದಲಿ ಬಂದು ಕಾಯೆ ತಾಯೆ 1 ನಿತ್ಯ ಮಂಗಳನಾಗೆ ಅಚ್ಚುತನರಾಣಿ ನಿಚ್ಚದಿ ಭಕ್ತಿ ಜ್ಞಾನವಿತ್ತು ಕಾಯೆ ತಾಯೆ 2 ವಕ್ಷಸ್ಥಳದಲಿ ನಿಂತೂ ಕಾಯೆ ತಾಯೆ ಪಕ್ಷಿವಾಹನ ರುಕ್ಮಿಣೀಶ ವಿಠಲನ ರಾಣಿ 3
--------------
ಗುಂಡಮ್ಮ
ಲೋಕೇಶನೆನಿಪ ಶ್ರೀಗುರು ಸಿದ್ಧೇಶ್ವರಗೆ ಪ ನೀ ಕಮಲಮುಖಿ ಆಋವೈರಿಯ ನೇಕ ಮೈಯ್ಯಾಳು ಸುತ್ತಿಕೊಂಡು ವಿ ವೇಕವಿಲ್ಲದೆ ವಿಷವನುಂಡ ಪಿನಾಕಧರÀನಿಗೆ ಸೋಲುವರೆ ನೀ ಜಗವ ಮೋಹಿಪ ಮಾನಿನೀ ಮಣಿಯೇ ಅ.ಪ. ಶಿರದೊಳು ಶಶಿಯ ಕೆಂಜೆಡೆ ಇಹ ಜೋಗಿ ಸ್ಮರನ ದಹಿಸಿ ಭಸ್ಮ ಹಣೆಗಿಟ್ಟ ಯೋಗಿ ಇರುವರೆ ಸ್ಥಳವಿಲ್ಲದಂತೆ ತಾ ಪೋಗಿ ಮೆರೆವ ಸ್ಮಶಾನ ಮಂದಿರಕನುವಾಗಿ ಮರುಲು ಭೂತ ಪಿಶಾಚ ಯಕ್ಷರ ನೆರವಿಯಲಿ ಕುಣಿಕುಣಿದು ಬ್ರಹ್ಮನ ಶಿರವಿಡಿದು ತಿರಿದುಂಬ ಗೊರವಗೆ ಬರಿದೆ ತಿಳಿಯದೆ ಜಗವ ಮೋಹಿಪ ಮಾನಿನೀ ಮಣಿಯೇ 1 ಮಂಡೆಯೋಳ್ ಜಾನ್ಹವಿ ಶಶಿಯನ್ನೆ ಸೂಡಿ ರುಂಡಮಾಲೆಯ ಕೊರಳೊಳಗಿಟ್ಟಪಚಾಡಿ ಕುಂಡಲಿಗಳಾ ಧರಿಸಿರುವನ ನೋಡಿ ಖಂಡ ಪರಶುವೆಂದು ಅವನ ಕೊಂಡಾಡಿ ಧಿಂಡೆಯಾಗಿಹ ಪ್ರಾಯದವಳು ನೀ ನೀನವನನೊಲಿದೆ ಪ್ರ ಚಂಡೆ ಪಾರ್ವತಿ ಜಗವ ಮೋಹಿಪ ಮಾನಿನೀ ಮಣಿಯೇ 2 ಕರದಿ ತ್ರಿಶೂಲ ಧಮರುಗಳ ಧರಿಸಿರುವಾ ಕಂಚರ್ಮಾಂಬಕ ಪುಲಿದೊಗಲುಟ್ಟು ಮೆರೆವಾ ಹಿರಿಯತನಕೆ ವೃಷಭವನೇರಿ ಬರುವಾ ಶಿರಿಯ ಹೊಗಾಡಿ ಫಕೀರನಂತಿರುವಾ ವಿರಚಿಸಿದ ಲೀಲಾವಿನೋದದ ಪರತರ ಶ್ರೀ ಪ್ರಣವರೂಪನ ಗುರುವಿಮಲಾನಂದ ತೊಟ್ಟಿದ ಗುರು ಸಿದ್ಧೇ ಶ್ವರನೆಂದು ತಿಳಿಯದೆ ಜಗವ ಮೋಹಿಪ ಮಾನಿನೀಮಣಿಯೇ 3
--------------
ಭಟಕಳ ಅಪ್ಪಯ್ಯ
ಲೋಕೈಕ ಬಂಧು ಹೇ ದಯಾಸಿಂಧು ಜೋಕೆಮಾಡಭವ ನೀನೆನ್ನೊಳು ನಿಂದು ಪ ಹೇಯಪ್ರಪಂಚದ ಮಾಯಾಮೋಹದಿ ಎನ್ನ ಕಾವದೇವರು ನೀನೆ ಕೈಯ ಪಿಡಿದು ಸಲಹೊ 1 ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ ಜವನಿಗೀಡೆನಿಸುವ ಭವಮಾಲೆ ಗೆಲಿಸು 2 ಘನದು:ಖಮಯವಾದ ಜನನಮರಣಬಾಧೆ ರಿಣಭಾದೆ ತನುಭಾದೆಯನು ಪರಿಹರಿಸಿ ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು 3
--------------
ರಾಮದಾಸರು
ಲೋಲನೇಳುವದಕಿನ್ನ ಮುನ್ನ ಪ ತಾಳಮೇಳದವರೆಲ್ಲಿ ಬಂದು ದ್ವಾರ ದೊಳು ಸೇರಿ ಪಾಡುತಿಹರೊ ನಿಂದು 1 ಸುರರು ಸಭೆ ಯಲಿ ಬಂದಾಗಲೆ ಓಲೈಸುತಲಿಹರು 2 ತಡಮಾಡಬೇಡಯ್ಯ ನೀನು ನಿನ್ನ ಒಡೆಯನೆದ್ದು ನಿನ್ನನು ಕೂಗ್ಯಾನೊ 3 ಕಪಿಯಾಗಿ ನೀ ಪುಟ್ಟಬೇಕಂತೆ ತಾನು ವಿಪಿನವಾಸಕಾಗಿ ತೆರಳುವನಂತೆ 4 ಶರಧಿಯ ನೀ ದಾಟಬೇಕಂತೆ ಅಲ್ಲಿ ಸಿರಿಗೆ ಮುದ್ರೆಯ ನೀನೀಯಬೇಕಂತೆ 5 ದುರುಳನ ಪುರವ ನೀನುರುಹಬೇಕಂತೆ ಅವನ ಪರಿವಾರವೆಲ್ಲವ ನೀ ತರಿಯಬೇಕಂತೆ 6 ಕುಂತೀಲಿ ನೀ ಪುಟ್ಟಬೇಕಂತೆ ತಾನು ಕಂತುವಿಗೆ ಪಿತನಾಗುವನಂತೆ 7 ಮಗಧ ಮುಖ್ಯರ ನೀ ಸೀಳಬೇಕಂತೆ ದೇವ ಜಗಕೆ ಮಂಗಳವ ನೀ ಮಾಡಬೇಕಂತೆ 8 ದುರುಳ ದುಶ್ಶಾಸನನ ಇರಿಯಬೇಕಂತೆ ಅವನ ಕರುಳ ನಿನ್ನರಸಿಗೆ ಮುಡಿಸಬೇಕಂತೆ 9 ಮುದ್ದು ಭಾರತಿಯ ನೀ ಬಿಡಬೇಕಂತೆ ನೀನು ಹೊದ್ದು ಕಾವಿಬಟ್ಟೆ ಯತಿಯಾಗಬೇಕಂತೆ 10 ಅದ್ವೈತ ಮತವನು ನೀ ಖಂಡ್ರಿಸಬೇಕಂತೆ ಗುರು ಮಧ್ವಮುನಿಯೆಂದು ನೀ ಮೆರೆಯಬೇಕಂತೆ 11 ಬದರಿಕಾಶ್ರಮಕೆ ಪೋಗಬೇಕಂತೆ ಅಲ್ಲಿ ಬಾದರಾಯಣನಾಗಿ ತಾನಿರ್ಪನಂತೆ 12 ಹಿಂಗದೆ ಶ್ರೀಶನ ನೀ ನುತಿಸಬೇಕಂತೆ ಸಿರಿ ರಂಗೇಶವಿಠಲ ನಿನಗೊಲಿದಿಹನಂತೆ 13
--------------
ರಂಗೇಶವಿಠಲದಾಸರು
ವತ್ಸರ ಸಾರ್ಥಕವಾಗಲಿಪಾರ್ಥ ಸಖನ ಗುಣ ಕೀರ್ತಿಸುತಾ ಪ ಅರ್ಥಿಯಿಂದ ಹರಿಕೀರ್ತನೆ ಮಾಡಲುಆರ್ತೇಷ್ಟದ ಸಕಲಾರ್ಥವ ಕೊಡುವ ಅ.ಪ. ವತ್ಸರ ಸಾರಿತು ಹಿಂದೆಸಾರಿತು ನಮ್ಮಾಯುವು ಮುಂದೇ |ವಾರಿಜಾನಾಭನ ಸೇರಿ ಭಜಿಸಲುಸೇರಲಿಲ್ಲ ನಾವ್ ದಿನ ಒಂದೇ1 ತಂದೆ ವೆಂಕಟನ ಪ್ರೇಮದ ದಾಸರುಸಂದೇಶವನೆ ಕಳುಹಿಸದರೂಇಂದಿರೆಯರಸನ ಭಕ್ತ ವೃಂದದಿಛಂzಸÀದಿ ಭಜಿಸೆಂದರುಹಿದರೂ 2 ಇಂದಿನಿಂದಾದರು ಒಂದು ಗೂಡುತ ನಂದಕಂದನನು ಭಜಿಸುವ ಬನ್ನಿಸುಂದರ ಗುರು ಗೋವಿಂದ ವಿಠಲನದ್ವಂದ್ವ ಚರಣವನು ವಂದಿಸೆ ಬನ್ನಿ 3
--------------
ಗುರುಗೋವಿಂದವಿಠಲರು
ವದನದಲಿ ಮನವೇ ನೆನಿನಾಮ ಶ್ರಿಹರಿಯಾ | ಸದಮಲದಲಿ ಮರೆಯದೆ ಬಾವದಲಿ ಪ ದಾವನು ದಾಸರ ದಾಸರ ಪದರಾ | ಜೀವ ಯುಗಳ ದರುಶನದಲಿ | ತೀವಿಕೊಂಡಿಹ ಬಹುಜನ್ಮದು ಷ್ಕøತ | ಲಾವಡಗುತಿಹವು ನಿಮಿಷದಲಿ 1 ನಾಮದ ಮಹಿಮೆಯ ತಿಳಿಯಲು ಅರಸಲು | ಅಮಹಾನಿಗಮಾಗಮದಲಿ | ವ್ಯೋಮ ಕೇಶನಾರದಾಹನುಮರೆ ಬಲ್ಲ | ನಾಮದ ಸುಖವೆಂತೋ ಭುವನದಲಿ2 ಸರ್ವಧರ್ಮಾನ್ ಪರಿತ್ಯಜ್ಯಂಬ ವಾಕ್ಯವಾ | ಅರ್ವವ ಹಿಡದು ತ್ರಿಕರ್ಣದಲಿ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯ | ಮೆರ್ಪಪಾದುಕ ವಿಟ್ಟು ಹೃದಯದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಂದನೆ ಮಾಡಿರೈ ವ್ಯಾಸ ಮುನೀಂದ್ರರ ಪಾಡಿರೈ ಪ ವಂದಿಸುವರ ಭವಬಂಧವ ಬಿಡಿಸಿ ಆ ನಂದವ ಕೊಡುವ ಕರ್ಮಂದಿವರೇಣ್ಯರ ಅ.ಪ ಸದ್ಗುಣ ಸಾಂದ್ರಾ ಚಂದ್ರಿಕಾದಿ ಪ್ರಬಂಧತ್ರಯ ನಿರ್ಮಿಸಿದಾ ಮತವರ್ಧಿಸಿದಾ ಸತಿ ಮೆಚ್ಚಿಸಿದಾ ಹಿಂದಕೆ ಹರಿಯನು ಸ್ತಂಭದಿ ತೋರಿದ ಕಂದ ಪ್ರಹ್ಲಾದರೆ ಬಂದಿಹರೆನ್ನುತ 1 ಕೃಷ್ಣರಾಯನಿಗೆ ದುಷ್ಟಯೋಗ ಪರಿಹರಿಸಿ ರಾಜ್ಯವಹಿಸಿ ಯ- ಥೇಷ್ಟ ದಾನಫಲಕೊಟ್ಟು ನೃಪನನುಗ್ರಹಿಸಿ ರಾಜ್ಯದೊಳಿರಿಸಿ ಶ್ರೇಷ್ಠವಾದ ಸಿಂಹಾಸನದಲಿ ಕುಳ್ಳಿರಿಸಿ ಆಜ್ಞೆಯ ತಿಳಿಸಿ ಎಷ್ಟು ಮಹಿಮರೆಂದರಿತು ಇವರ ಮನ ಮುಟ್ಟಿ ಭಜಿಪರಿಗ ಭೀಷ್ಟೆಯಗರಿವರ 2 ಸೂರ್ಯಯತಿ ಕುಲ- ವರ್ಯ ಗುರುಮಧ್ವಮ ತದಿಸದ್ವೈಷ್ಣವ ಕುಮುದಕೆ ಭಾರ್ಯಾ ಪಾವನ ಚರ್ಯ ಪರಮಮಹಿಮ ಬ್ರಹ್ಮಣ್ಯ- ತೀರ್ಥರಿಗೆ ತನಯಾ ಕವಿಜನಗೇಯಾ ಶರಣರ ಪೊರಿಯುವ ಶಿರಿಕಾರ್ಪರನರಹರಿಯ ನೊಲಿಸಿರುವ ಪರಮ ಮಹಾತ್ಮರ3
--------------
ಕಾರ್ಪರ ನರಹರಿದಾಸರು
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು
ವಂದನೆಯನು ಮಾಡೋ ನಾಮವ ಛಂದದಿ ನೀ ಪಾಡೋ ಭವ ಬಂಧ ಹರಿವುದು ಮುಂದುವರಿದ ಮನಸೊಂದನು ಬಂಧಿಸಿ ಪ ಕಳೆಯದೆ ಮುದದಿಂದ ಮಾಧವ ಗೋವಿಂದನೆಂದು 1 ನಡೆ ನುಡಿಗೊಮ್ಮೊಮ್ಮೆ ಶ್ರೀ ವಿಷ್ಣು ಮಧುಸೂದನನೆಂದು ಒಡನೆ ತ್ರಿವಿಕ್ರಮ ವಾಮನ ಶ್ರೀಧರ ಬಿಡದೆನ್ನ ಸಲಹೋ ಹೃಷಿಕೇಶನಂದು 2 ಚಿತ್ತ ಶುದ್ಧಿಗಳಿಂದ ಶ್ರೀ ಪದ್ಮನಾಭನೆ ಗತಿಯೆಂದು ಮರುತಸುತನ ಕೋಣೆವಾಸ ಲಕ್ಷ್ಮೀಶಗೆ 3
--------------
ಕವಿ ಪರಮದೇವದಾಸರು
ವಂದನೆಯು ವಂದನೆಯು ವಂದನೆಗಳು ನಂದಕುಮಾರ ಗೋವಿಂದನ ಚರಣಕೆ ಪ ವಂದನೆ ಇಂದಿನ ಬಂಧನ ನಾಶಕೆ ಮುಂದಿನ ಭವಗಳ ಮುಂದಿನ ಹರಣಕೆ ಅ.ಪ ಹುಟ್ಟು ಸಾವುಗಳ ಕಟ್ಟಳೆ ಅವನದು ಕೊಟ್ಟುದನು ಪಡೆಯುವದೃಷ್ಟ ನನ್ನದು ಬೆಟ್ಟದ ಗಾತ್ರದ ಪಾಪವು ನನ್ನದು ಇಷ್ಟನು ಕ್ಷಮಿಸುವ ದೃಷ್ಟಿ ಅವನದು 1 ಶರಣರ ಪೊರೆಯುವ ಬಲವಾತನದು ಪರಿಪರಿ ಪಾಪವ ಗಳಿಸುವುದೆನ್ನದು ಕರುಣೆಯ ತೋರುವ ಮನವಾತನದು ವರದ ಮಾಂಗಿರಿರಂಗ ನೀ ಶರಣೆಂಬುದು ನನ್ನದು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಪೆ ಗುರುವೆ ನೀ ಕಲ್ಪತರುವೇ ಬಂಧನ ಕಳೆಯುವ ಭೋಧಾತ್ಮ ಗುರುವೆ ಅಗಣಿತ ಮಹಿಮಾ ಜಗದಾಧಾರ ಬಗೆಗೆ ನಿಲುಕದಿಹ ಘನನಿರ್ವಿಕಲ್ಪ ಮಾನವ ರೂಪದಿ ಸ್ವಾನುಭವವ ತೋರ್ದ ಮುಕುತಿದಾಯಕನೇ ಪರಮಾತ್ಮ ನೀನೆಂದು ಪರಶೃತಿ ಪೇಳೆ ಸರಿಯಾಗಿ ಬೋಧಿಸಿ ಕರುಣೆದೋರುವನೇ ಜಗವೆಲ್ಲ ಪುಸಿಯೆಂದು ಜಗಕೆಲ್ಲ ಪೇಳುವ ಭಗವಂತ ದಯದೋರಿ ಪೊರೆವುದು ದೇವಾ ಚಿನುಮಯರೂಪನೆ ಸ್ವಾನಂದರೂಪಾ ಮನವು ನಿನ್ನೊಳಗಿರಲಿ ಶಂಕರರೂಪಾ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದಿಪೆ ಚರಣಾರವಿಂದಕೆ ಸದ್ಗುರು ವಾದಿರಾಜ ಮಂದ ಮತಿಯ ಬಿಡಿಸಿಂದಿರೇಶನ ತೋರೋ ಪ ದುರುಳ ಬುದ್ಧಿಲಿಂದ ಮರೆದು ಬಿಟ್ಟೆ ನಿನ್ನ ವಾದಿರಾಜ ಧರಣಿಮಂಡಲದೊಳು ಪಾಪಿಷ ನಾನಾದೆ ವಾದಿರಾಜ ಪರಮ ಪುರುಷ ಭಾವಿ ಮರುತ ನೀನೆÉಂದು ವಾದಿರಾಜ ಹಿರಿಯರ ಮುಖದಿಂದ ನಿಶ್ಚೈಸಿದೆ ವಾದಿರಾಜ 1 ಶಿರದೊಳು ಹೂರಣದ್ಹರಿವಾಣ ಧರಿಸುತ ವಾದಿರಾಜ ವರ ಭಕ್ತಿಯಿಂದಲಿ ತುರುಗಾಸ್ಯಗುಣಿಸಿದ ವಾದಿರಾಜ ಗುರು ಜಗನ್ನಾಥ ದಾಸರ ಸ್ವಪ್ನದೊಳು ಬಂದು ವಾದಿರಾಜ ಹÀರಿಕಥಾಮೃತಸಾರವಿರಚಿ ಸೆಂದರು ವಾದಿರಾಜ 2 ಶ್ರೀಮಧ್ವಾರ್ಯಮತ ಸಾಮ್ರಾಜ್ಯ ಧ್ವಜಪೆತ್ತಿ ವಾದಿರಾಜ ಶಾಮಸುಂದರ ಕೃಷ್ಣ ನಾಮದ ಮಹಿಮೆಯ ವಾದಿರಾಜ ಪಾಮರಂಗೆ ಪೇಳಿ ಪ್ರೇಮದಿ ಸಲುಹಿದ ವಾದಿರಾಜ 3
--------------
ಶಾಮಸುಂದರ ವಿಠಲ
ವಂದಿಪೆ ನಾ ಭಗವಾನ್ ಪೂರ್ಣಘನಾ ನೀ ಮುಕುತಿನಿದಾನಾ ಜ್ಞಾನಘನಾ ಆನಂದಘನಾ ನಿತ್ಯಾನಂದನು ನೀ ಚೈತನ್ಯ ಮೂಲಪದ ಮಾಯಾರಹಿತ ಸದಾ ಆ ನಿರ್ವಿಕಲ್ಪಾತ್ಮಾ ಸತ್ಯನು ನೀ ಹೇ ಸರ್ವಾಂತರ್ಯಾಮೀ ಪ್ರೇಮಘನಾ ಆನಂದ ಕಣ್ಣು ಮನಗಳಿಗೆ ನಿಲುಕದಲೇ ನೀ ಸಾಕ್ಷಿಸ್ವರೂಪಾ ಇವುಗಳಿಗೇ ಕಲ್ಪಿತವ್ಯೆ ಮಾಯಾಮೋಹಿತವೈ ಈ ಜಗವೆಲ್ಲಾ ನಿನ್ನೊಳ್ ಸತ್ಯಘನಾ ಆನಂದ ಎಂತು ಬಣ್ಣಿಸಲೈ ನಿನ್ನನು ನಾ ಈ ವಾಣಿಯಿಂ ದೂರಾ ನಿಜಸಾರಾ ಯೋಗಿವರಾ ಗುರು ಶ್ರೀ ಶಂಕರಾ ಹೇ ಸರ್ವಾತ್ಮಪೂರ್ಣಾನಂದಘನಾ ಆನಂದ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದಿಪೆ ನಿನಗೆ ಕೇಶವಾ ತಂದೆ ವಂದಿಪೆ ನಿನಗೆ ಕೇಶವಾ ಪ ಪಾದ ಭಜಿಸಿದ ದಾಸರೆಲ್ಲ ಹೊಂದಿದರು ಮುಕ್ತಿಯನು ಕೇಶವಾ ತಂದೆ 1 ದುಷ್ಟರನ್ನು ತರಿಯಲು ಹತ್ತು ರೂಪಗಳನು ತಾಳಿ ಶಿಷ್ಟರನ್ನು ಸಲಹಿದ ಕೇಶವಾ ತಂದೆ 2 ಬಂದ ಕಷ್ಟಗಳನು ನೀಗಿ ಶ್ರೇಷ್ಠ ಭಕ್ತಿಯನ್ನು ಕೊಟ್ಟು ಮುಂದೆ ನೀ ರಕ್ಷಿಸೋ ಕೇಶವಾ ತಂದೆ 3
--------------
ಕರ್ಕಿ ಕೇಶವದಾಸ