ಒಟ್ಟು 2062 ಕಡೆಗಳಲ್ಲಿ , 101 ದಾಸರು , 1654 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾನೇನೆಂದೆನೋ ರಾಮೇಶ್ವರನಿನ್ನ ನಾನೇನೆಂದೆನೋ ಸಕಲ ಲೋಕವನ್ನು ಪೊರೆವ ಪಾರ್ವತೀಶನೆಂದೆನಲ್ಲದೆ ಪ ತಾರಕಾಸುರನ ಪುತ್ರರ ಬಾಧೆಯನು ತಾಳಲಾರದೆ ಹರಿಮುಖ್ಯ ನಿರ್ಜರರುಶ್ರೀರುದ್ರ ಸಲಹೆಂದು ಪಾದಕೆ ಮಕುಟವ-ನೂರೆ ಪೊರೆದ ತ್ರಿಪುರಾರಿಯೆಂದೆನಲ್ಲದೆ ವಿಧಿ ಶಿರವ ಕೈ-ಯ್ಯಾರೆ ಕಡಿದನೆಂದೆನೆ ಭಕ್ತವತ್ಸಲವಾರಿಜಭವನುತಿಲೋಲನೆಂದೆನಲ್ಲದೆ 1 ನಾರದಸಹಿತ ಮತ್ಯಾರು ಕಾಣದಂದದಿಓರುಗಲ್ಲರಸಿನ ಮನೆಗೆ ಪೋಗಿತೋರುವ ಭಿತ್ತಿಯ ಕೊರೆದಾತನಿಷ್ಟವಪೂರಿಸಿದನುಪಮಮಹಿಮನೆಂದೆನಲ್ಲದೆಚೋರರ ಗುರುವೆಂದೆನೆ ಪಾರ್ಥಚಾಪದಿಂ-ದೇರುವಡೆದನೆಂದೆನೆ ಬತ್ತಲೆಮದವೇರಿ ಕುಣಿದನೆಂದೆನೆ ಅರ್ಜುನಗೊಲಿದಾರಾಜಿಸುವ ಮಹಾನಟನೆಂದೆನಲ್ಲದೆ2 ಸುರರು ದಾನವರೆಲ್ಲ ನೆರೆದು ವಾದಿಸಿ ಕ್ಷೀರಶರಧಿ ಮಥನವ ವಿರಚಿಸಲುಉರು ಹಾಲಾಹಲಮೊಗೆದುರುಹಲು ಸರ್ವರಪೊರೆದ ಶ್ರೀನೀಲಕಂಧರನೆಂದೆನಲ್ಲದೆಗರವ ಕುಡಿದನೆಂದೆನೆ ಪೆಣ್ಣಿತ್ತನಶಿರವನರಿದನೆಂದೆನೆ ಊರೂರೊಳುತಿರಿದುಗರುವನೆಂದೆನೆ ದುಷ್ಟ ಶಿಕ್ಷಕವರ ಕೆಳದಿಯ ರಾಮೇಶ್ವರನೆಂದೆನಲ್ಲದೆ3
--------------
ಕೆಳದಿ ವೆಂಕಣ್ಣ ಕವಿ
ನಿನ್ನ ಬೆನ್ನು ಬಿದ್ದೆ ಪನ್ನಂಗಶಯನ ಎನ್ನನ್ನು ನೀನೀಗ ಮನ್ನಿಸಿ ಸಲಹೆಂದು ಪ ಎನ್ನನೆಲ್ಲಿಗೆ ಒಯ್ವಿ ನಿನಗೆ ಕೂಡಿತು ನಿನ್ನ ಬಿಟ್ಟರೆ ಎನಗೆ ಅನ್ಯ ಗತಿಯಲ್ಲ 1 ವನಜಾಕ್ಷ ನಿಮಪಾದ ನೆನೆವು ನಿಲ್ಲಿಸಿ ಎನ್ನ ಮನದಾಸೆ ಪೂರೈಸಿ ಕನಿಕರದಿ ಕಾಯೆಂದು 2 ಶಾಮಸುಂದರ ಶ್ರೀರಾಮ ನಿಮ್ಮಯ ಪಾದ ಪ್ರೇಮ ಎನ್ನೊಳರಿಸಿ ಕ್ಷೇಮದಿಂ ಪೊರೆಯೆಂದು 3
--------------
ರಾಮದಾಸರು
ನಿನ್ನ ಮಹಿಮೆ ತಿಳಿಯುವುದೊಂದಗಾಧ ದೇವ ಉನ್ನತೋನ್ನತಚರಿತ ನುತಸಹಜಭಾವ ಪ ಯೋಗಿ ನೀನಾದಯ್ಯ ಜೋಗಿಯೆಂದೆನಿಸಿದಿ ಆಗಾಧ ದೇಹ ತಾಳ್ದಿ ಬಾಗಿಲವ ಕಾಯ್ದಿ ಮಿಗಿಲಾದ ರೂಪಾದಿ ಜಗವ ಪಾಲಿಸಿದಿ 1 ಕರುಣದಿಂದಾಳಿದಿ ವರವಿತ್ತು ಕಳುಹಿದಿ ಧರೆಗೆ ಭಾರೆನಿಸಿದಿ ತಿರುಗಿ ನೀ ಮುನಿದಿ ಘಟ ನೀಡ್ದಿ ಪರಮಭಟನೆನಿಸಿದಿ ಶರಗಳನು ಪೋಣಿಸಿದಿ ಧುರದೊಳಗೆ ಕೊಂದಿ 2 ತಮ್ಮನ ಪಕ್ಷ್ಹಿಡಿದಿ ತಮ್ಮನಣ್ಣನಕೊಂದಿ ತಮ್ಮಗಧಿಕಾರ ಗೈದಿ ಸಮ್ಮತದಿ ಕಾಯ್ದಿ ತಮ್ಮನಿಗೆ ಭಾವನಾದಿ ತಮ್ಮನಿಗೆ ಬೋವನಾದಿ ತಮ್ಮನಿಂ ಕೊಲ್ಲಿಸಿದಿ ಸಮ್ಮತವ ಗೈದಿ 3 ಮಾವಗಳಿಯನಾದಿ ಮಾವಗೆ ವೈರ್ಯಾದಿ ಮಾವನ ಕುಲವಳಿದಿ ತಾಯನ್ನ ಕಾಯ್ದಿ ಗೋವು ಪಾಲಕನಾದಿ ಗೋವಿಗೆ ಮಗನಾದಿ ಗೋವುಗಳನಾಳಿದಿ ಗೋವುಕುಲ ಪೊರೆದಿ 4 ಮೀನಾದಿ ಕೂರ್ಮಾದಿ ದಾನ ಬೇಡುವನಾದಿ ಕಾನನ ಮೃಗನಾಗಿ ಧ್ಯಾನಿಪರಕಾಯ್ದಿ ದೀನಪಾಲನೆ ನಿನ್ನ ಜಾಣಮಹಿಮಂಗಳನ್ನು ಹೀನರರಿವರೆ ಮಮಪ್ರಾಣ ಶ್ರೀರಾಮ 5
--------------
ರಾಮದಾಸರು
ನಿನ್ನ ಸಂಭ್ರಮದೊಳಗೆ ನೀನೆ ಇರುತಿರುವಿ ಎನ್ನಯ್ಯ ಮರೆದೇನು ಮುನ್ನಾದ ಬವಣೆ ಪ ಅನ್ನವನು ಕಾಣದೆ ಅನ್ನದಿಕ್ಕಿಲ್ಲದೆ ಉನ್ನತೋನ್ನತವಾದ ಚಿನ್ನದರಮನೆಯಲ್ಲಿ ಬಿನ್ನವಿಲ್ಲದೆ ಸಿರಿಯರನ್ನಬಡಿಪ ಮದವೋ 1 ಮಡದಿಯನು ಕಳಕೊಂಡು ಎಡೆಬಿಡದೆ ಅಡವ್ಯಡವಿ ಹುಡುಹುಡುಕಿ ಬೇಸತ್ತು ಕಡುಬಾಯ ಬಿಡುವಗೆ ಮೃಡಮಹಾದೇವತೇರು ಸಡಗರದಿ ನಿನ್ನಡಿಯ ದೃಢದಿ ಪೂಜಿಪರೆಂಬ ಕಡುಗರವದಿರವೇ 2 ನೀರೊಳ್ಜೀವಿಸಿ ಬಲು ನಾರುತಲಿರುವವಗೆ ಹಾರ ಹೀರಾವಳಿ ಗಂಧ ಕಸ್ತುರಿಯ ಮದವೋ ಸಾರಿ ಮನು ಮುನಿಗಳು ಸೇರಿ ನಿಮ್ಮಯ ಚರಣ ವಾರಿಜ ಭಜಿಪ ಮದ ಮೀರಿಹ್ಯದೋ ನಿನಗೆ 3 ತಿರುಕನು ತಾನಾಗಿ ಧರೆಯ ದಾನವ ಬೇಡಿ ಧರೆವರನ ಬಾಗಿಲವ ನಿರುತ ಕಾಯ್ದವಗೆ ಸುರರು ಗಂಧರ್ವ ತುಂಬುರರು ಸಂಗೀತದಿಂ ಹರುಷಗೊಳಿಪುದಕೆ ನೀ ನೇತ್ರ ಮುಚ್ಚಿರುವ್ಯೋ 4 ಭಾರಬೆನ್ನಲಿ ಪೊತ್ತು ಘೋರ ಬಡುತಿರುವವಗೆ ಈರೇಳುಲೋಕದ ದೊರೆಯೆಂಬಹಂಕಾರವೋ ಮಾರಪಿತ ಗತಿಯೆಂದು ಸೇರಿ ಭಜಿಸುವ ದಾಸರರಿಕೆ ಪೂರೈಸದಿದು ತರವೆ ಶ್ರೀರಾಮ 5
--------------
ರಾಮದಾಸರು
ನಿನ್ನನು ನಂಬಿದೆ ಶಾರದೆ ನೀನು ಪ್ರಸನ್ನಳಾಗಬಾರದೆ ಪನಿನ್ನನು ಬಿಟ್ಟg ಎನ್ನಯ ದುಃಖಗಳನ್ನು ಕಳೆಯುವರಿನ್ನಾರಿರುವರು ಅ.ಪಹೇಳಿಕೊಳ್ಳುವೆ ತಾಯೇ ದುಃಖವಕೇಳು ಮಹಾಮಾಯೆಹಾಳು 'ಷಯಗಳ ಜಾಲದಿ ಸಿಕ್ಕಿಹಗೋಳನು ನಾನೀಗ ತಾಳಲಾರೆನು ಹಾಯ್ 1ಆಟದ ವಸ್ತುಗಳ ಕೊಟ್ಟು ಚೆಲ್ಲಾಟವಾಡುವೆಯಾಸಾಟಿ ಇಲ್ಲದೀಆಟವ ಸಾಕು ಸಾಕುಕಾಟವಕಳೆನೀಂ ಭೇಟಿಯ ಕೊಟ್ಟು 2ಹರಿಹರಿಯೆನ್ನದೆ ಈ ನಾಲಿಗೆಯನರಗಳು ಸೊಕ್ಕಿಹವುನಿರುತವು ಹರಿನಾಮ ಭರವೆಡೆಬಿಡದಂತೆಹರಸಿ ಕಾಯೆ ಚಿಚ್ಛರೀರದ ತಾಯೆ3
--------------
ಹೊಸಕೆರೆ ಚಿದಂಬರಯ್ಯನವರು
ನಿನ್ನನೆ ನಂಬಿದೆ ನೀರಜನಯನ ನಿನ್ನ್ಹೊರತು ಎನಗನ್ಯ ಗತಿಯಿಲ್ಲ ಹರಿಯೆ ಪ ನಿನ್ನ ಪಾದವೆ ಎನಗೆ ಮಾತಾಪಿತೃಯೆಂಬೆ ನಿನ್ನ ಪಾದವೆ ಎನಗೆ ಬಂಧುಬಳಗವೆಂಬೆ ನಿನ್ನ ಪಾದವೆ ಎನಗೆ ಸಕಲಸಂಪದವೆಂಬೆ ನಿನ್ನ ಪಾದವೆ ಎನಗೆ ನಿಖಿಲಬಲವೆಂಬೆ 1 ನಿನ್ನ ಕರುಣವೆ ಎನಗೆ ಭವತರಿವ ಶಸ್ತ್ರೆಂಬೆ ನಿನ್ನ ಕರುಣವೆ ಎನಗೆ ಸ್ಥಿರಸುಖವುಯೆಂಬೆ ನಿನ್ನ ಕರುಣವೆ ಎನಗೆ ರಕ್ಷಿಸುವ ದೊರೆಯೆಂಬೆ ನಿನ್ನ ಕರುಣವೆ ಎನಗೆ ಪರಮ ತೃಪ್ತ್ಯೆಂಬೆ 2 ನಿನ್ನ ನಾಮವೆ ಎನಗೆ ಅಮೃತವೆಂಬೆ ನಿನ್ನ ನಾಮವೆ ಎನ್ನ ಭವರೋಗಕ್ಕ್ವೈದ್ಯೆಂಬೆ ನಿನ್ನನಾಮ ಸ್ಥಿರಕೊಟ್ಟು ಪ್ರೇಮದಿಂ ಸಲಹು ಶ್ರೀರಾಮ ನೀನೆ ಎನಗೆ ಪರದೈವಯೆಂಬೆ 3
--------------
ರಾಮದಾಸರು
ನಿನ್ನನ್ನೆ ನಂಬಿದೆನೊ ಪನ್ನಂಗಶಾಯಿ ಎನ್ನ ನೀ ಕಾಯಬೇಕೊ ಪ ದೀನದಯಾಳು ದೇವ ನೀನೆ ಕಾಯದೆ ಬಿಟ್ಟ ರಿನ್ನಾರು ಕಾಯ್ವರು ಎನ್ನನೀ ಜಗದೊಳುಅ.ಪ ಉನ್ನತ ಹೃದಯನೆ ಮುನ್ನ ನಾ ಮಾಡಿದ ಗನ್ನಗತಕತನವನ್ನು ದಯದಿ ಕ್ಷಮಿಸು ಇನ್ನೀಭವದಿ ಎನಗೆ ನಿನ್ನಯ ಸನ್ನುತಿ ಯನ್ನು ಪಾಲಿಸಿ ಸತತ ಬನ್ನಬಡಿಸದೆ ಕಾಯೊ 1 ಶರಣಾಗತರಕ್ಷಣಾನಾಥಜನಬಂಧುವೇ ಕರುಣದಿ ನಿಮ್ಮಂಥ ದೇವರನುಕಾಣೆ ದುರಿತದೂರನೆ ಎನ್ನ ದುರಿತದುರ್ಗಣವನ್ನು ಪರಿಹರಿಸಿ ಸಲಹಯ್ಯ ಶರಣುಜನರ ಪ್ರೀಯ 2 ಕೈಯ ಪಿಡಿದು ಪೊರೆಯೊ ಬಿಡದೆನಮ್ಮಯ್ಯ ಜಗ ದಯ್ಯ ಶ್ರೀರಾಮ ವಿಜಯವಿಠಲರಾಯ ಕೈಯ ಮುಗಿದು ಮರೆಹೊಕ್ಕು ಬೇಡುವೆಯ್ಯ ಜೀಯ ದಯದಿ ಕಾಯೊ ಪಂಢರಿರಾಯ 3
--------------
ರಾಮದಾಸರು
ನಿನ್ನಪಾದ ದೊರಕುವುದು ಎಂತೆನಗೆ ರಂಗ ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ 1 ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ ಬನ್ನ ಬಡಿಸಿದೆನಯ್ಯ ನನ್ನನಂಬಿದವರ ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ ನಿನ್ನ ಧ್ಯಾನದ ಖೂನವನ್ನರಿಯೆ ದೇವ 2 ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು ಪರರಿಗೊಂದಿಕ್ಕಿ ನಾನುಂಡಿರುವೆನೊಂದು ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ 3
--------------
ರಾಮದಾಸರು
ನಿನ್ನಬಿಟ್ಟನ್ಯಬಲ ಮುನ್ನಿಲ್ಲಸ್ವಾಮಿ ಎನ್ನಯ್ಯ ವಿಶ್ವೇಶ ಪನ್ನಂಗಶಾಯಿ ಪ ಇನಚಂದ್ರ ಮಂಗಳಬುಧಗುರು ಭಾರ್ಗವ ಶನಿರಾಹುಕೇತು ನವಮಹರ್ದಶನು ನೀನೆ ಘನನಿಮ್ಮ ಮಹಿಮೆಯಿಂ ವಿಧವಿಧದಿ ಸೃಷ್ಟಿಗೈ ದೊನರುಹ ಭುವನಂಗಳಾಳುವವ ನೀನೆ 1 ನಕ್ಷತ್ರಯೋಗಾದಿಕರಣಂಗಳು ನೀನೆ ಪಕ್ಷಮಾಸ ಸರ್ವಕಾಲ ವಾರ ತಿಥಿ ನೀನೆ ಸುಕ್ಷೇತ್ರಯಾತ್ರ ಮಹಪುಣ್ಯತೀರ್ಥವು ನೀನೆ ಸಾಕ್ಷಾತ ನಿಖಿಲ ಶುಭಮುಹೂರ್ತಗಳು ನೀನೆ 2 ಪರಮವೇದ ಪುಣ್ಯಪುರಾಣಕಥೆ ನೀನೆ ವರ ನಿಖಿಲ ಶಾಸ್ತ್ರರ್ಥ ಮೂಲವಿಧಿ ನೀನೆ ಚರಣದಾಸರ ಪ್ರಾಣಪದಕ ಶ್ರೀರಾಮಯ್ಯ ಸ್ಥಿರಮೋಕ್ಷ ಪಾಲಿಪ ಶ್ರೀಗುರುವು ನೀನೆ 3
--------------
ರಾಮದಾಸರು
ನಿನ್ನವ ನಾನೆಂದು ಸಿರಿನಲ್ಲಾ ರಕ್ಷಿಸೋ | ಎನ್ನವಗುಣಗಳ ಎಣಿಸದೆ ದಯದಿಂದ ಪ ನಿನ್ನ ಮೂರುತಿಯ ಬೆಳಗವದೋರಿಸಿ | ನಿನ್ನ ಪಾದಾಂಬುಜ ಪರಿಮಳ ಸುಳಿಸಿ | ನಿನ್ನ ನಾಮಾಮೃತ ಸವಿಸವಿ ಉಣಿಸಿ1 ನಿನ್ನ ಪೂಜಿಸಿಕೊಂಡು ಕರಗಳಿಂದ | ಚೆನ್ನಾಗಿ ಪ್ರದಕ್ಷಿಣೆಯಾ ಪಾದಗಳಿಂದ | ಕಾಯ ನಮನದಿಂದ - ಎನ್ನ ಮನವಿಟ್ಟು ನಿನ್ನ ನೆನುವಿನಿಂದಾ2 ಅನುದಿನ ಕೊಟ್ಟು ನಿನ್ನ ದಾಸರ ಸಂಗ | ಕೊನೆದೇಳದಿರಲೆನ್ನಾ ವಿಶ್ರಾಮದಂಗ | ನೀನಾಗಿರು ತುಂಬಿಯೆನ್ನಾ ಬಾಹ್ಯಾಂತರಂಗ | ಘನಗುರು ಮಹಿಪತಿ ಪ್ರಭುಶ್ರೀರಂಗ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವರ ಧರ್ಮ ವಿಹಿತವಾಗುವುದು ಮ ತ್ತನ್ಯರಾಚರಿಸಿದ ಧರ್ಮ ಅಧರ್ಮ ಪ ಕಡಲ ಮಥನದಲಿ ಕಪರ್ದಿ ಕಾಳಕೂಟ ಕುಡಿಯಲು ಕಂಠಭೂಷಣವಾಯಿತು ಒಡನೆ ರಾಹು ಕೇತು ಸುಧೆಯ ಪಾನದಿಂದ ಮಡಿದರೆಂದು ಮೂರ್ಲೋಕವೇ ಅರಿಯೆ 1 ಬಲಿನಿನ್ನ ಮುಕುಟ ಕದ್ದೊಯ್ಯ ಪಾತಾಳಕೆ ಸಲೆ ಭಕ್ತನೆಂದು ಬಾಗಿಲ ಕಾಯ್ದೆ ಇಳೆಯೊಳು ಸುರರಿಗೆ ಗೋ ಭೂ ಹಿರಣ್ಯವಿತ್ತಾ ಖಳ ಜರಾಸಂಧನ ಕೊಲಿಸಿದೆ ಹೋಗಿ 2 ಪತಿವ್ರತ ಧರ್ಮದಿ ಮೃತರಾದ ತ್ರಿಪುರರ ಸತಿಯರು ಶಿವನಿಂದ ಹತರಾದರು ಸತಿ ಉಡುಪ ಪತಿಯಿಂದಲಿ ನಿತ್ಯ ಸೇವೆಯೊಳಿರುವಳು 3 ಮೇದಿನಿಯೊಳು ಪ್ರಾಣಿ ಹಿಂಸಕನೆನಿಸಿದಾ ವ್ಯಾಧನ ಯಮಿಕುಲೇಶನ ಮಾಡಿದೆ ವೇದೋಕ್ತ ಕರ್ಮವಾಚರಿಸಿದ ಜಿನನೊಳ್ ಪ್ರಾದುರ್ಭೂತನಾಗಿ ಕೆಡಹಿದೆ ತಮಕೆ 4 ಪರಾಶರನು ಸತ್ಯವತಿಯ ಸಂಬಂಧಿಸೆ ಶ್ರೀರಮಣ ನೀನವತರಿಸಿದಲ್ಲಿ ಭವ ಸರೋಜ ಕನ್ನಿಕೆಯಸಾರಲು ಬಿಡುವ ಜಗನ್ನಾಥ ವಿಠಲ 5
--------------
ಜಗನ್ನಾಥದಾಸರು
ನಿನ್ನ್ಹೊರತು ನಾನಿನ್ನು ಅನ್ಯದೇವರರಿಯೆ ಪನ್ನಂಗಶಾಯಿಯೇ ಪರಿಪಾಲಿಸಭವ ಪ ನಿನ್ನಿಂದಜನಿಸಿ ನಾ ನಿನ್ನಿಂದ ಬೆಳೆದಿರುವೆ ನಿನ್ನಿಂದ ಮಲಗಿ ನಾ ನಿನ್ನಿಂದ ಏಳ್ವೆ ನಿನ್ನಿಂದ ನಡೆಯುವೆ ನಿನ್ನಿಂದ ಕೂಡುವೆನು ನಿನ್ನಿಂದ ಸುಖಬಡುವ ನಿನ್ನಣುಗ ನಾನು1 ನಿನ್ನದೇ ಉಣ್ಣುವೆನು ನಿನ್ನದೇ ತಿನ್ನುವೆನು ನಿನ್ನದೇ ಉಟ್ಟು ನಾ ನಿನ್ನದೇ ತೊಡುವೆ ನಿನ್ನದೇ ಹಾಸಿ ನಾ ನಿನ್ನದೇ ಹೊದೆಯುವೆ ನಿನ್ನ ಸೂತ್ರದಿ ಕುಣಿವ ನಿನ್ನ ಶಿಶು ನಾನು 2 ಎನ್ನ ಮಾತೆಯು ನೀನೆ ಎನ್ನ ತಾತನು ನೀನೆ ಎನ್ನ ಅರಸನು ನೀನೆ ನಿನ್ನ ಪ್ರಜೆ ನಾನು ಎನ್ನ ಬಂಧುವು ನೀನೆ ಎನ್ನ ಬಳಗವು ನೀನೆ ಎನ್ನೊಡೆಯ ಶ್ರೀರಾಮ ನಿನ್ನ ದಾಸ ನಾನು 3
--------------
ರಾಮದಾಸರು
ನಿರಂಜನ ನಿತ್ಯ ನಿರಂಜನ ಪ ಸುಗುಣ ಸಂತೃಪ್ತ ನಿಗಮಾದಿವಿನುತ ಅಗಜೇಶ ಜಗಪಾಲಯ 1 ಗಜಚರ್ಮಾಂಬರ ರಜತಾದ್ರಿ ಮಂದಿರ ಭಜಿಪರ ಭಯವಿದೂರ 2 ನಂಬಿದ ಭಕುತರ ಇಂಬುಗೊಟ್ಟು ವರ ಗುಂಭದಿ ಕೊಡುವ ದೇವ 3 ಮಹಿಮ ನೀ ಉದಯಾಗಿ ಮಹಿಯೊಳು ಮುಂಡರಗಿ ಮಹಸ್ಥಲವೆನಿಸಿದಿಯೋ4 ದೋಷವಿನಾಶನ ಶ್ರೀಶ ಶ್ರೀರಾಮನ ದಾಸರ ದಯಸಂಪೂರ್ಣ 5
--------------
ರಾಮದಾಸರು
ನಿರ್ವಿಘ್ನವನೆ ನೀಡೋ ನಭಕೀಶ ಪ ಉರ್ವಿಯೊಳಗೆ ಕಾರ್ಯ ಪ್ರಾರಂಭಿಕ್ಕೀಶ ಅ.ಪ. ಶೈಲಜೆ ಶರೀರ ಮಲಜನೆಂದೆನಿಸುತ್ತಶೀಲ ಸತ್ಕರ್ಮಾಳಿ ಪ್ರಾರಂಭದೀ |ಮಾಲೋಲನಾಜ್ಞಾದಿ ಪೂಜೆಯ ಕೊಳ್ಳುತ್ತಪಾಲಿಪೆ ಭಕುತರಾಭೀಷ್ಟವ ದಯದಿ 1 ಗಮನ ಪಿತ ಶ್ರೀಶಾನುಗ್ರಹ ಪಾತ್ರಾ 2 ವಿಶ್ವ ಮೂರುತಿಯಸತ್ಯ ಮೂರುತಿ ಗುರು ಗೋವಿಂದ ವಿಠಲನಹೃತ್ಪದ್ಮದಲಿ ತೋರಿ ಕೃತಕೃತ್ಯನೆನಿಸೋ 3
--------------
ಗುರುಗೋವಿಂದವಿಠಲರು
ನೀ ಕೈಯ ಬಿಟ್ಟರಿನ್ಯಾತಕೆನಗೀ ಸುಖ ಗೋಕುಲಗಣನಾಯಕ ಪ ಲೋಕೈಕ ನಾಥನೆಂದಾ ರೈಉಸುರಿದ ಮುನಿಯ ಯಾಕೀ ಪರಿಯೊಳೆನ್ನ ಕಾಕುಮಾಡುವೆರಂಗಾ ನೂಕಿ ನಿಮ್ಮಾಶ್ರಯವ ಮಾಡೈ ಎಂದಿಹ ವ್ಯಾಕುಲಾಂತ ಪರಾತ್ಮ ಸತ್ಯ ಸ ಲೊಕ ಸರ್ವಸಯೇಕ ಭೀಮಾ 1 ಸಮಾಜದೀ ಭೀತಿಯಿಂದ ಮಿತ ದು:ಖವನುಂಡೆ ಸುಮನ ಸತ್ಯ ಸಮಾಜ ಭೌಮನೆ ಅಮರಗುಣ ಕಟಕಾಮಣಿಯೆ ಸ ದ್ವಿಮಲ ಚರಿತ ವಿಶಾಲ ಭೂಪಾ2 ಕಿಂತುಭವದ್ಧರ್ಶನೇನಆಹಂಬೆಲ್ಲ ಕಥಯಾಮಿಕಾಲಾಂತಕೋ ಚಕ್ರಸುಧಾರ ತ್ವರಿತದಿ ಕಂತು ಜನಕನೆ ಪಾಲಿಸೆನ್ನು ಪಂಥವೇತಕೊ ಪರಮಜೀಯಾ 3 ಭ್ರಷ್ಟಸಂಗವ ಬಿಡಿಸಿ ಪಾಲಿಸೊ ವಿ ಶಿಷ್ಟಾದ್ವೈತನೆ ಕೃಷ್ಣನಾಮನೆ ಸೃಷ್ಟಿ ಶ್ರೀಗುರು[ತುಳಸಿ]ಕುಲ ಶ್ರೀರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು