ಒಟ್ಟು 914 ಕಡೆಗಳಲ್ಲಿ , 92 ದಾಸರು , 804 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಪಾಹಿಮಾಂ-ಶ್ರೀಯಮಯನ್ಮನೋರಮಾಂ ಪ ದೀನಲೋಲ ಕಾಮನ-ಧೀರಮುನಿವಿಭಾವನ 1 ಪೂರ್ಣಚಂದ್ರಾನನ-ಪುಣ್ಯವೃಕ್ಷಕಾನನ 2 ಸೇವಕಾನಂದನ-ದೇವಕೀನಂದನ 3 ಶಂಖಚಕ್ರ ರಂಜನ-ಕಿಂಕರಾರ್ತಿಭಂಜನ 4 ದೂರಕೋಟಿ ಸುಮದರ-ಶ್ರೀರಮಾಮನೋಹರ 5 ದೂರಿತಾಘ ಸಂಕುಲ-ದುಷ್ಟಕುಲಾನಲ 6 ಪುಂಡರೀಕ ಲೋಚನ-ಚಂಡ ಪಾಪಮೋಚನ 7 ಭವ ಭಯೋತ್ತಾರಣ-ಭವ್ಯ ಸುಗುಣ ಪೂರಣ8 ವ್ಯಾಘ್ರಾದ್ರಿ ನಾಯಕ-ವ್ಯಕ್ತ ಸೌಖ್ಯದಾಯಕ 9 ತವಪದಾಂಬೋರುಹಂ ಭವತು ಹೃತ್ಸುಖಾವಹಂ10 ವರದ ವಿಠಲ ಶ್ರೀಧರ-ಶರಣ ಜನ ದಯಾಕರ 11
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ ದಾನಿ ನೀನೆಂದು ನಂಬಿದೆ ಪ ಜ್ಞಾನಗಮ್ಯನೆ ವಾಙ್ಮನೋಮಯ ಮಾನಿ ಮಾನಸರಾಜಹಂಸ ಅ.ಪ ಲೋಕಭರಿತ ಶ್ರೀಕಳತ್ರ-ತ್ರಿಕಕುದ್ಧಾಮದಧಿನಾಥ ಶ್ರೀಕಮಲಭವಾದಿವಂದಿತ ಮುಕುತಾಮುಕುತಜನ ಸಂಸೇವಿತ ಅಖಿಳಾಗಮಕೆ ಅತೀತ-ಶ್ರೀಕರಪಲ್ಲವಪೂಜಿತ ಅಖಿಳಾಜಾಂಡದಿ ವ್ಯಾಪ್ತ-ಭಕುತರಗತಿಯಪ್ರದಾತ1 ನಿಗಮವಿತ್ತೆ ನಗವಪೊತ್ತೆ ಬಗೆದು ಬೇರ ನರ- ಮೃಗಾಂಗನೇ ತ್ಯಾಗಿಯೊಳು ಪೋಗಿ ನೃಪರ ನೀಗಿಸಿ ವನವನವಾ ಚರಿಸಿದೆ ಬಗೆಬಗೆ ಆಟದಿ ಬಾಲ್ಯದಿ ಹಗೆಗಳ ಮಡುಹಿದೆ ಕಾರ್ಯದಿ ಆಗಮಕರ್ಥಮೋಹಿಸಿ-ಜಗದೊಳುತುರಗವನೇರ್ದೆ 2 ಅಂತರಾತ್ಮಪರಮಾತ್ಮ ಅನಂತಾನಂತರೂಪಾತ್ಮ ಪ್ರಾಂತಕಾಣದೇ ನಿರಂತರದಿ ನಿಂತು ಸಿರಿ ನಿತ್ಯಮುಕ್ತಳಾದಳೋ ಕಂತುಪಿತ ಎನ್ನಂತರದಿ ನಿಂತಿಹೆ ನಿರಂತರದಿ ಕಾಂತ ಶ್ರೀ ವೆಂಕಟೇಶನೆ-ಅಂತರ್ಬಹಿರದಿ ನಿಂತಿಹ ಪ್ರಭೊ 3 ಅಪ್ರಮೇಯ ಸ್ವಪ್ರಕಾಶ ಅಪ್ರಾಕೃತಗುಣಗಣಾರ್ಣವ ಸ್ವಪ್ರಯೋಜನರಹಿತ ಸತತ ತ್ವತ್ಪ್ರಸಾದದಿಂದ ಜಗವು ಕ್ಷಿಪ್ರದಿ ನೃಪಸಂಸ್ತುತಿಸೆ ವಿಪ್ರನಮನ ಸಂತೈಸಿದೆ ಅಪ್ರತಿಹತಮಹಿಮನು ಸುಪ್ರೀತನು ಜನರ್ಗೆ 4 ಪರಮ ಪುರುಷ ಪೂರ್ಣಾನಂದ ಪರಮಕರುಣಶರಧಿಯೆ ಉರಗಾದ್ರಿವಾಸ ವಿಠ್ಠಲ ಕರಾವಲಂಬನವಿತ್ತು ಸಲಹೆಲೋ ಪರಿಪರಿ ಎನ್ನಪರಾಧ ನೋಳ್ಪರೆ ಭೋ ಜಗದೊಡೆಯ ಕರುಣವು ತೋರದೆ ನೀನಿರೆ ನರಪಶು ನಾನೆಂತು ಬಾಳ್ವೆನೋ5
--------------
ಉರಗಾದ್ರಿವಾಸವಿಠಲದಾಸರು
ಶ್ರೀನಿವಾಸಗಾರುತೀಯ ಮಾನುನೀಯರು ಬೆಳಗಿರೀಗ ಪ ಗಾನಲೋಲ ದೀನಪಾಲ ಆನಂದಕಂದ ಸುಂದರಾಂಗ ಅ.ಪ ಭಕ್ತಪಾಲಾಸಕ್ತÀ್ತಶೀಲಾ ಮುಕ್ತೀಶ ರಮಾಲೋಲಗೀಗ ಮುತ್ತಿನಾರುತೀಯನೆತ್ತೀರೆ ಭಕ್ತವತ್ಸಲ ದೇವಗೆ ಬೇಗ 1 ಆದಿಮೂಲನೆ ವೇದೋದ್ಧಾರನೆ ಸಾಧುವಂದ್ಯ ಗಿರಿಧರನೆ ಕಂದಗೊಲಿದಾನಂದ2 ಭೂಮಿ ಅಳಿದ ಭೂಪರ ಕೊಂದ ಭೂಮಿಜೆ ಅರಸ ಭೂಪ ಕೃಷ್ಣಾ ಭಾಪುರೆ ಬೌದ್ಧ ಭೂಪ ಕಲ್ಕಿ ಶ್ರೀಪ ಶ್ರೀಶ್ರೀನಿವಾಸನಾದ 3
--------------
ಸರಸ್ವತಿ ಬಾಯಿ
ಶ್ರೀನಿವಾಸನೆ ಗಾನಲೋಲನೆ ಸಾನುರಾಗದೊಳೀಕ್ಷಿಸೈ ಜ್ಞಾನಪೂರ್ಣನೆ ಸೂನುವೆಂಬಭಿಮಾನದಿಂ ಪರಿಪಾಲಿಸೈ ಪ. ದೀನಪಾಲಕ ದಾನವಾಂತಕ ದೈನ್ಯದಿಂ ಮೊರೆಹೊಕ್ಕೆನೈ ಜ್ಞಾನಗಮ್ಯನೆ ಭಾನುತೇಜನೆ ನೀನೇ ಗತಿಯೆಂದೆಂಬೆವೈ ಅ.ಪ. ಸಾರಸಾಕ್ಷನೆ ಶ್ರೀರಮೇಶನೆ ಸಾರಿ ಬಾ ಭವದೂರನೇ ಗಾರುಗೊಂಡೆವು ಪಾರುಗಾಣಿಸು ನೀರಜೋದ್ಭವ ಜನಕನೆ ಕಾರ್ಯಕಾರಣ ಕರ್ತೃ ನೀನಹುದಾರಯಲ್ ಜಗದೀಶನೆ ಬೇರೆ ಕಾಣೆವದಾರ ನಿನ್ನನೆÉೀ ಸಾರೆ ಬೇಡುವೆ ದೇವನೆ 1 ಸಾರ ಸಂಗ್ರಹ ಮಾಡುತೆ ಆರ್ಯಕೀರ್ತಿಯ ಸಾರಿಪಾಡುತೆ ವೀರನಾದವ ಗೈಯುತೆ ಭೂರಿ ವೈಭವವೆಲ್ಲವಂ ಧೈರ್ಯದಿಂ ನಲವೇರೆ ಕೀರ್ತಿಸಿ ಕಾರ್ಯಸಿದ್ಧಿಯ ಪೊಂದುವೋಲ್2 ನಿರ್ಗುಣಾತ್ಮನೆ ನಿರ್ವಿಕಲ್ಪನೆ ನಿತ್ಯನಿರ್ಮಲಚರಿತನೆ ಮಾರ್ಗದರ್ಶಕನಾಗಿ ನಮ್ಮೊಳಗಾವಗಂ ಕೃಪೆ ಗೈವನೇ ಸಾರ್ವಭೌಮನೆ ಸರ್ವಶಕ್ತನೆ ಶೇಷಶೈಲ ನಿವಾಸನೇ ಸಾರ್ವಕಾಲದೊಳೋವುದೆಮ್ಮನು ಪಾರ್ವತೀಪತಿ ಮಿತ್ರನೆ 3
--------------
ನಂಜನಗೂಡು ತಿರುಮಲಾಂಬಾ
ಶ್ರೀನಿವಾಸಾದ್ರಿ ವಿಠಲ | ನೀನೆ ಪೊರೆ ಇವಳಾ ಪ ಗಾನಲೋಲನೆ ಕೃಷ್ಣ | ದೀನಮಂದಾರಅ.ಪ. ಕಲುಷ ಕರ್ಮದಿನೊಂದು ಇಳೆಯೊಳಗೆ ಮಧ್ವಮತಜಲಧಿಯಲ್ಲುದಿಸಿಹಳೊ | ಜಲಜಾಕ್ಷ ಹರಿಯೇಒಲವಿನಿಂದಿವಳನ್ನು | ಸಲಹಲ್ಕೆ ಪ್ರಾರ್ಥಿಸುವೆಕಲಿಮಲಾಪಹ ಕೃಷ್ಣ | ಚೆಲುವ ಮಾರುತಿಯೇ 1 ಮೂರ್ತಿ | ಪಾರ್ಥ ಸಾರಥಿಯೇ 2 ಪತಿ ಸೇವೆಯಲಿ | ಎರಗಲೀಕೆಯ ಮನಸುದುರಿತ ದುಷ್ಕøತ ಹರವು | ಗುರು ಸೇವೆ ಎಂದೆಂಬಅರಿವಿತ್ತು ಈಕೆಯನು | ಸಾಧನದಲಿರಿಸೋ 3 ಜಿಹ್ವೆ | ಶ್ರೀ ಪುರುಷೋತ್ತಮಾನಿರುಪಾದಿಕ ಹಿರಿಯರ | ಚರಣ ಸೇವೆಗೆ ಮನವುತ್ವರೆಗೊಳ್ಳುವಂತೆಸಗೂ | ಶಿರಿ ವೆಂಕಟೇಶಾ 4 ಕರಿವರದ ಧ್ರುವವರದ | ತರಳೆ ದ್ರೌಪದಿವರದಕರುಣಾಳು ನೀನೆಂದು | ಮೊರೆ ಬಿದ್ದು ಪೇಳ್ವೆಕರುಣೆಯನು ಪೊರೆ ಎಂಬ | ಬಿನ್ನಪವ ಸಲಿಸಯ್ಯಶಿರಿಯಿಂದ ವಂದ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀಮಾಧವ ತೀರ್ಥರ ಸ್ತೋತ್ರ ಮಾಧವ ಸುತೀರ್ಥ ಗುರು | ಭಕ್ತಜನಕಲ್ಪತರುಆದಿ ಗುರುಗಳ ಕರಜ | ಮಾಡೆನ್ನ ವಿರಜ ಪ ಸನ್ನುತ ಚರಣ | ಮೌನದಿಂ ಭಜನನೀ ಮಾಡಿ ಆನಂದ ವಾರಿಧೀಯಲಿ ಮಿಂದುಆ ಮಹಿಮೆ ಪೊಗಳಲೂ | ಎನಗಾವ ಅಳಲೂ 1 ಜ್ಞಾನಾಯು ರೂಪಕನೆ | ಪ್ರಾಣಪತಿ ಎನಿಪನ್ನನೀನಾಗಿ ತೋರುವಲಿ | ನಿನ್ನ ದಯವಿರಲಿ |ಮೌನೀಶ ಇದ ಹೊರತು | ಅನ್ಯಬೇಡೆನು ಒಳಿತುಪ್ರಾಣ ಮುಖ ತತ್ವೇಶ | ರೊಲಿಮೆ ಸಹ ಆಶ 2 ಆನಂದ ತೀರ್ಥ ಮತ | ಶಿಷ್ಟರಲಿ ಭೋಧಿಸುತದೀನಜನ ಪರಿಪಾಲ | ಹರಿಭಕ್ತ ಲೋಲಾ |ಜಾಣ ಗುರುಗೋವಿಂದ | ವಿಠಲ ಮಹಿಮಾನಂದನೀನಾಗಿ ಕೊಟ್ಟೆನ್ನ ಉದ್ಧರಿಸೊ ಘನ್ನ 3
--------------
ಗುರುಗೋವಿಂದವಿಠಲರು
ಶ್ರೀಮಾಧವ ಪಾದವ ಸಂತತ ಮನದಿ ನೇಮದಿ ಧ್ಯಾನಿಸು ನೀ ಪ ಪ್ರೇಮಮೂರ್ತಿಯನೆನೆವರಾರಾದರೇನಯ್ಯ ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ ಮದಗಜವನುಸರದಿ ಮೊಸಲೆಯನು ತಾನು ಅಧಿಕ ಕಷ್ಟವ ಗೊಳಸೆ ಪದುಮನಾಭ ನೀನೆ ಪೊರೆಯಬೇಕೆನ್ನಲು ಮುದದಿಂದಲೊದಗುತ್ತ ಸೌಖ್ಯವ ತೋರಿದೆ 1 ತರಳನಾದ ಧ್ರುವನು ಪ್ರಹ್ಲಾದನು ಶರಣೆಂದು ಮೊರೆವೋಗಲು ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ 2 ಮಾನಿನಿ ದ್ರೌಪದಿಯು ತನ್ನಯ ಘನ ಮಾನಭಂಗದ ಕಾಲದಿ ದೀನರಕ್ಷಕ ಕೃಷ್ಣ ದಾನವಾರಿಯೆನೆ ಸಾನುರಾಗದಿಂದಲಕ್ಷಯ ವರವಿತ್ತ3 ಅಜಮಿಳ ಬಹುಪಾಪದಿ ಮೆರೆಯುತಲಿದ್ದು ನಿಜಸುಖ ಮರೆತಂತ್ಯ ಕಾಲದಿ ಬಜಬಜಿಸುತಮಗನನು ಹೆಸರೆತ್ತಲು ಭಜನೆಯಾಯ್ತು ನಾರಾಯಣ ನಾಮವು 4 ವಿದುರನುಧ್ದವನರ್ಜುನ ಕುಚೇಲನು ಮೊದಲಾದ ಭಕ್ತರೆಲ್ಲ ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ ಪದವಿಯಿತ್ತು ಕಾಯ್ದ ಜಾಜಿಯೀಶನ5
--------------
ಶಾಮಶರ್ಮರು
ಶ್ರೀರಂಗೇಶವಿಠಲ | ಪೊರೆಯೆನ್ನ ಹೃದಯಾ- ಧಾರನೆ ಮಾಲೋಲ | ಸ್ಮರಕೋಟಿ ಸುಂದರಾ- ಕಾರ ನತಜನಪಾಲ | ಅರಿಮಸ್ತಕ ಶೂಲ ಪ ಆರು ಅರಿಗಳ ಗೆಲಿಸಿಯೆನ್ನಿಂ- ದಾರು ಎರಡನು ಮುರಿಸಿ ನಿನ್ನೊಳು ಆರು ಮೂರನೆಯಿತ್ತು ಸರ್ವದ ಪಾರುಗೈಯ್ಯಬೇಕೆಂಬೆ ದೇವ ಅ.ಪ. ಆನೆಗೊಂದಿ ನಿವಾಸ | ಭಕುತರ ನಿರಂತರ ಮಾನದಿಂ ಪೊರೆವ ಶ್ರೀಶ | ಎಂದೆಂದಿಗು ನಾನಿನ್ನ ದಾಸರ ದಾಸ | ನೆಂದು ಕರುಣಿಸು ನೀನೆನಗೆ ಲೇಸ | ಭಾನುಕೋಟಿ ಪ್ರಕಾಶ ಮಾನ ಅವಮಾನಗಳು ನಿನ್ನಾ- ಧೀನವೆಂದೇ ನಂಬಿಕೊಂಡಿಹ ದೀನನೆನ್ನನು ದೂರ ನೋಡದೆ ಸಾನುರಾಗದಿ ಪೊರೆವುದೈಯ್ಯಾ ನಳಿನಭವ ಅಂಡದೊಳಗೆ ದಾನಿ ನೀನಲ್ಲದನ್ಯರುಂಟೆ ಏನ ಬೇಡೆನು ನಿನ್ನ ಬಳಿಯಲಿ ಜ್ಞಾನ ಭಕುತಿ ವೈರಾಗ್ಯವಲ್ಲದೆ1 ವರಾಹ ಜನ ತಾಪ | ತ್ರಯ ದೂರ ವಾಮನ ಮಾನವೇಂದ್ರರ ಪ್ರತಾಪ | ವಡಗಿಸಿದೆ ಪ್ರಬಲ ದಾನವೇಂದ್ರನ ಶಾಪ | ನೀನೆ ಕಳೆದೆಯೊ ಶ್ರೀಪಾ ವಾನರ ಬಲ ನೆರಹಿಕೊಂಡು ನೀನು ರಾವಣನನ್ನು ಕೊಂದು ಮಾನಿನಿಯ ಪೊರೆದು ಶರಣಗೆ ನಿ ದಾನ ಮಾಡದೆ ಪಟ್ಟಗಟ್ಟಿದೆ ದಾನವಾಂತಕನೆಂಬ ನಾಮವ- ನ್ಯೂನವಿಲ್ಲದೆ ಪರಸತಿಯರಭಿ ಮಾನ ಕಳುಪಿದ ಜಾಣ ಕಲ್ಕಿಯೆ 2 ಸೂರಿಜನ ಪರಿಪಾಲ ಸದ್ಗುಣಗಣನಿಲಯ ಘೋರರಕ್ಕಸಕಾಲ | ವರಶೇಷತಲ್ಪವ ನೇರಿ ನಿರುಪಮ ಬಾಲ | ನಂದದಿ ನಿರುತ ನೀ ತೋರುತಿರುವೆಯೊ ಲೀಲ | ಶ್ರೀ ರಂಗೇಶವಿಠಲ ಮಾರ ಜನಕನೆ ಮಂಗಳಾಂಗನೆ ಕ್ರೂರ ಕುಲವನದಾವ ಅನಲನೆ ಭೂರಿ ಕರುಣವ ಬೀರಿ ಎನ್ನಸು ಭಾರ ನಿನ್ನದು ವಾರಿಜಾಕ್ಷನೆ ಎನ್ನ ಹೃದಯದಿ ಚಾರು ಬಿಂಬವ ಸಾರಿ ಬೇಡುವೆ ಬಾರಿ ಬಾರಿಗೆ ಶರಧಿ ಬಡಬನೆ3
--------------
ರಂಗೇಶವಿಠಲದಾಸರು
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಶ್ರೀರಾಮ ಜಯರಾಮ ಶ್ರೀರಾಮರಾಮ ಕಾರುಣ್ಯ ನಿಧಿರಾಮ ಕೌಸಲ್ಯ ರಾಮ ಪ ಜಾನಕೀ ಪತಿರಾಮ ಜಯರಘುರಾಮ ಜಾನ್ಹವೀ ಪಿತರಾಮ ಸರ್ವೇಶರಾಮ 1 ಭಯ ನಿವಾರಣರಾಮ ಪಾವನರಾಮ ನಯಗುಣ ಶ್ರೀರಾಮ ನರಹರೇ ರಾಮ 2 ತ್ರಿಜಗ ಮೋಹನ ರಾಮ ದಿವಿಜೇಶರಾಮ ಅಜಭವನುತರಾಮ ಆನಂದರಾಮ 3 ಭುವನ ಪಾಲಕರಾಮ ಭೂಪತೆ ರಾಮ ಸವನ ರಕ್ಷಕರಾಮ ಶತ್ರುಘ್ನ ರಾಮ 4 ಭವ ವಿಮೋಚನ ರಾಮ ಪದ್ಮಾಕ್ಷರಾಮ 5 ವೈದೇಹಿ ಪತಿರಾಮ ವೈಕುಂಠರಾಮ ವೇದಗೋಚರ ರಾಮ ವೆಂಕಟೇಶರಾಮ 6 ಮಂಗಳಾತ್ಮಕರಾಮ ಮಾಧವರಾಮ ಶೃಂಗಾರ ಶೇಖರರಾಮ ಶ್ರೀರಾಮ ರಾಮ7 ದಶರಥಸುತರಾಮ ದನುಜಾರಿರಾಮ ಕುಶಲವ ಪಿತರಾಮ ಕೋದಂಡರಾಮ 8 ಕರುಣಸಾಗರ ರಾಮ ಕಾಕುಸ್ಥರಾಮ ಶರಧಿಶಯನ ರಾಮ ಶಾಶ್ವತರಾಮ9 ಶ್ರೀಕರಾವ್ಹಯರಾಮ ಶ್ರೀಧರರಾಮ ಪಾಕಾರಿಸುತ ರಾಮ ಪರಮೇಶರಾವÀು 10 ಮಧುರ ಭಾಷಣರಾಮ ಮಧುವೈರಿರಾಮ ಮದನಾರಿನುತರಾಮ ಮೌನೀಶರಾಮ 11 ಸತಿ ಶಾಪ ಖಂಡನ ರಾಮ ಪಾತಕ ಹರ ರಾಮ ಪ್ರಖ್ಯಾತ ರಾಮ12 ರಾಮ ಗರ್ವವಿರಾಮ ರಾಮಾಭಿರಾಮ ಸೌಮಿತ್ರಿವರರಾಮ ಸೌಂದರ್ಯರಾಮ 13 ಸುಗ್ರೀವಸಖರಾಮ ಶುಭಕರ ರಾಮ ಅಗ್ರಜಾಧಿಪ ರಾಮ ಅಮಿತಬಲರಾಮ 14 ಅನ್ಯಮಾನಸರಾಮ ರಘುರಾಮ ಇನಕುಲೇಶ್ವರ ರಾಮ ವಿಭುದೇಂದ್ರರಾಮ 15 ಚಾರು ಚರಿತ ರಾಮ ಜಯಜಯ ರಾಮ ಮಾರುತಾತ್ಮಜ ವಂದ್ಯ ಮಾನಿತರಾಮ 16 ವಾಲಿ ಮರ್ದನರಾಮ ವರದಶ್ರೀರಾಮ ಫಾಲಾಕ್ಷ ಸಖರಾಮ ಭದ್ರಶ್ರೀರಾಮ 17 ಸೇತುಬಂಧನ ರಾಮ ಚಿನ್ಮಯರಾಮ ಸೀತಾಪತೆ ರಾಮ ಜಿತದೈತ್ಯ ರಾಮ 18 ನತವಿಭೀಷಣರಾಮ ನಗಧರ ರಾಮ ಚತುರಾಶ್ಯಪಿತ ರಾಮ ಚಂದ್ರಶ್ರೀರಾಮ 19 ಮಾರೀಚ ಮದಭಂಗ ಮಹಾದೇವರಾಮ ವೀರಾಗ್ರಣೀರಾಮ ವಿಶ್ವೇಶರಾಮ 20 ರಾಮರಾಮ ರಾಮರಾಮ ಶ್ರೀರಾಮ ಕಾಮಿತಾರ್ಥಪ್ರದ ಕಲ್ಯಾಣರಾಮ 21 ಅಗಣಿತ ಮಹಿಮ ವಿಲಾಸ ಶ್ರೀರಾಮ ನಿತ್ಯ ಶ್ರೀರಾಮ 22 ಕಂಬುಕಂಧರ ರಾಮ ಘನತರರಾಮ ಕುಂಭಕರ್ಣಾಂತರ ಗೋವಿಂದರಾಮ 23 ಸುಜನ ಹೃತ್ಕಮಲ ಭಾಸುರ ಸೂರ್ಯರಾಮ ನೃಪತಿ ಶ್ರೀರಾಮ 24 ಲೀಲಾ ಮನುಜ ವೇಷ ರಿಪು ಜೈತ್ರರಾಮ ಪ್ರಕಟ ಪರಾಕ್ರಮ ರಾಮರಾಮ ಶ್ರೀರಾಮ 25 ಅಕಲಂಕ ನಿರುಪಮಾನ ಸಹಾಯ ರಾಮ ಭಕ್ತವತ್ಸಲ ದೀನ ಬಂಧು ಶ್ರೀರಾಮ 26 ಮುಕ್ತಿದಾಯಕ ರಾಮ ಪೂಜಿತರಾಮ ದಶಕಂಠ ಮರ್ದನ ತಾರಕನಾಮ 27 ಶಶಿಬಿಂಬ ವದನ ದಾಶರಥಿ ಶ್ರೀರಾಮ ನಾರಾಯಣಾಚ್ಯುತಾನಂತ ಶ್ರೀರಾಮ 28 ವಾರಿಜೋದರ ಶ್ರೀನಿವಾಸ ಶ್ರೀರಾಮ ಹರಧನುರ್ಭಂಗ ದಯಾನಿಧೆ ರಾಮ 29 ಪುರುಷೋತ್ತಮ ಪುರಾಣ ಪುರುಷ ಶ್ರೀರಾಮ ಸರ್ವಲೋಕ ಶರಣ್ಯ ಸೌಭಾಗ್ಯರಾಮ 30 ಶರ್ವರೀಚರ ಹರಕ್ಷ್ಮಾಪತೇರಾಮ ಸರಶಿಜನಾಭ ದಾಶಾರ್ಹ ಶ್ರೀರಾಮ 31 ಶರಣಾಗತ ತ್ರಾಣ ಶರಣು ಶ್ರೀರಾಮ ಮೂರ್ತಿ ಶ್ರೀರಾಮ 32 ಬುಧ ಜನಾಧಾರ ಸರ್ವೋತ್ತಮರಾಮ ವರ ಹೆನ್ನೆಪುರನಿವಾಸ ಶ್ರೀರಾಮ 33 ನರಸಿಂಹ ಭಕ್ತ ಚಿಂತಾಮಣಿ ರಾಮ ಇಷ್ಟದಾಯಕ ಹೆನ್ನೆ ವಿಠಲರಾಮ 34 ಕಷ್ಟ ರಕ್ಷಿಸುಯನ್ನ ಶ್ರೀರಾಮರಾಮ ಕುಜನವನ ಕುಠಾರ ಕೋವಿದ ರಾಮ 35
--------------
ಹೆನ್ನೆರಂಗದಾಸರು
ಶ್ರೀರಾಮ ಮನೋಹರ ಕೃಪಾಸಾಗರ ಪ ಸಾರಸಾಪ್ತ ವಂಶ ಭೂಪ ಸಾಧು ಪೋಷಕ ಮಾರುತಾತ್ಮಜಾ ಪೂಜಿತ ಅ.ಪ ಗಾಧಿತನಯ ಯಾಗರಕ್ಷಗಾಧ ಮಹಿಮನೇ ಬೋಧ ರೂಪ ಬುಧ ಜನ ಪ್ರಿಯಾ ವೇದವಂದ್ಯ ವಿಶ್ವವಲ್ಲಭಾ 1 ರಾವಣಾದಿದನುಜ ಭಂಜನಾನತರ ಕಾವನೆ ಭಾವಜಾರಿ ಚಾಪಭಂಗ ಭಾಸುರಾಂಗನೆ ದೇವ ದೇವ ದೀನರಕ್ಷಕಾ 2 ಭೂಮಿಗಧಿಕ ನೂತನ ಪುರಿಧಾಮ ನೀನಲಾ ಕಾಮಿತಾರ್ಥದಾತ ಸಾಮಗಾನ ಲೋಲಕ್ಷೇಮವೀವ ಗುರುರಾಮ ವಿಠ್ಠಲ 3
--------------
ಗುರುರಾಮವಿಠಲ
ಶ್ರೀರಾಮ ರಾಮ ಧ್ರುವ ಜಯ ಜಯಾತ್ಮಾರಾಮ ದಯಗುಣದಿ ನಿಸ್ಸೀಮ ಕಾಯ ಕೃಪಾನಿಧಿ ನಮ್ಮ 1 ಮುನಿಜನರ ಪ್ರತಿಪಾಲ ದೀನಬಂಧು ದೀನ ದಯಾಳ ಘನಸುಖದ ಕಲ್ಲೋಳ ನೀನಹುದೈ ಅಚಲ 2 ಕರುಣಾಬ್ಧಿ ನೀನೆ ರಾಮ ಹರಹೃದಯ ವಿಶ್ರಾಮ ತರಳ ಮಹಿಪತಿ ನಿಮ್ಮ ಸ್ಮರಿಸುವ ಪಾದಪದ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀರಾಮಾ ರಘುಕುಲಸೋಮ ಕಾಮಿತ ಶುಭಫಲದಾಯಕ ಪ. ರಮಾರಮಣನೆ ಭೀಮ ಪರಾಕ್ರಮ ಸುಂದರ ಅ.ಪ. ದಾನವಾಂತಕ ಶ್ರೀ ಜಾನಕೀ ನಾಯಕರಾಮ ದೀನಾನಾಥ ಪರಿತ್ರಾಣ ಪ್ರಪನ್ನ ಜನಪ್ರಾಣ 1 ವಾಸವಾನುಜ ಜಗದೀಶ ಪರೇಶ ಪರಾತ್ಪರ ದಾಸಜನಾಶ್ರಯ ಶ್ರೀಶ ಸರ್ವೇಶ ದಯಾಸಾಗರ 2 ಮಂಗಳಾತ್ಮಕ ಭವಭಂಗ ಶ್ರೀರಂಗನಾಯಕಿ ರಮಣ ಅಂಗಜಜನಕ ಪಾಂಡುರಂಗ ಕರುಣಾಂತರಂಗ 3 ನಾಗೇಶಪಾಲಕ ನಾಗೇಶವರತಲ್ಪನೆ ಶ್ರೀ ನಾಗಾರಿವಾಹನ ವರನಾಗಾದ್ರಿನಿಕೇತನ ರಾಮಾ 4
--------------
ನಂಜನಗೂಡು ತಿರುಮಲಾಂಬಾ
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು
ಶ್ರೀಶ ವೇದವ್ಯಾಸನಾದನು ಪ ಶ್ರೀಶ ವೇದವ್ಯಾಸನಾಗಲು ಸಾಸಿರ ನಯನ ಸಾಸಿರ ವದನ ಕರ ಮಿಕ್ಕ ಸುರರೆಲ್ಲ ತು- ತಿಸಿ ಹಿಗ್ಗುತ ಹಾರೈಸಲಂದು ಅ.ಪ. ದರ್ಪಕ ಜನಕ ಸರ್ಪತಲ್ಪನಾಗಿ ತಪ್ಪದನುಗಾಲ ಇಪ್ಪ ವಾರಿಧೀಲಿ ಕಂದರ್ಪ ಹರನೈಯ ಸುಪರ್ಣರಥನಾಗಿ ಒಪ್ಪಿಕೊಂಡು ಇಪ್ಪತ್ತು ಲಕ್ಷಗಲಿಪ್ಪ ಯೋಜನದ ಅಪ್ಪನ ಅರಮನೆ ದರ್ಪಣದಂತೆ ತಾ ರಪ್ಪಥ ಮೀರಿದಂತಿಪ್ಪದು ನೋಡಿ ಸಾ- ಮೀಪಕ್ಕೆ ವಾಣೀಶ ಬಪ್ಪ ಬೇಗಾ 1 ಬಂದು ಬೆನ್ನೈಸಿದ ಮಂದಮತಿ ಕಲಿ- ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು ಕುಂದ ಭಕ್ತನಿಗೆ ಒಂದೆ ಮಾತಿನಲಾ- ನಂದ ಬಡಿಸಿ ಪೋಗೆಂದು ಪೇಳೆ ಅಂದು ಸುಯೋಜನಗಂಧಿ ಗರ್ಭದಲ್ಲಿ ನಿಂದವತರಿಸುತ ಪೊಂದಿದ ಅಜ್ಞಾನ ಅಂಧಕಾರವೆಲ್ಲ ಹಿಂದು ಮಾಡಿ ಸುರ- ಸಂದಣಿ ಪಾಲಿಸಿ ನಿಂದ ದೇವ 2 ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ ಕಂಜಾಪ್ತನಂದನದಿ ರಂಜಿಸುವ ಕಾಯ ಮಂಜುಳ ಸುಜ್ಞಾನ ಪುಂಜನು ವಜ್ಜರ- ನಿತ್ಯ ಅಂಜಿದಗೆ ಸಂಜೆಯ ತೋರಿ ಧನಂಜಯ ಶಿಷ್ಯ ನೀ- ಗಂಜದಂತೆ ಕರಕಂಜವ ತಿರುಹಿ ನಿರಂಜನ ಪೇಳಿದ ಕುಂಜರ ವೈರಿಯ ಭಂಜನನು 3 ಗಂಗಾತೀರದಲಿ ಶೃಂಗಾರ ಉಪವ- ನಂಗಳದರೊಳು ಶಿಂಗಗೋಮಾಯು ಭು ಮೂಷಕ ಮಾತಂಗ ಸಾರಮೇಯ ಕೊಂಗಹಂಗ ಸರ್ವಾಂಗ ರೋಮ ಶರಭ ವಿಹಂಗ ಶಾರ್ದೂಲ ಸಾ- ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ ವಂಗ ತುರಂಗ ಪತಂಗ ಭೃಂಗಾದಿ ತು- ರಂಗವು ತುಂಬಿರೆ ಮಂಗಳಾಂಗ 4 ಬದರಿ ಬೇಲವು ಕಾದರಿ ಕಾಮರಿ ಮಧುಮದಾವಳಿ ಅದುಭುತ ತೆಂಗು ಕದಳಿ ತಪಸಿ ಮದಕದಂಬ ಚೂ- ತದಾರು ದ್ರಾಕ್ಷಿಯು ಮೃದು ಜಂಬೀರವು ಬಿದಿರು ಖರ್ಜೂರ ಮೋದದಿ ದಾಳಿಂಬ ತುದಿ ಮೊದಲು ಫ ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ ಇದೆ ಆರು ಋತು ಸದಾನಂದ 5 ವನದ ನಡುವೆ ಮುನಿಗಳೊಡೆಯ ಕಾನನ ಸುತ್ತಲು ಆ- ನನ ತೂಗುತ್ತ ಧ್ವನಿಯೆತ್ತಿ ಬಲು- ಗಾನ ಪಾಡಿದವು ಗುಣದಲ್ಲಿ ಕುಣಿದು ಖಗಾದಿ ಗಣಾನಂದದಿಂದಿರೆ ವನನಿಕರ ಮೆಲ್ಲನೆ ಮಣಿದು ನೆ- ಲನ ಮುಟ್ಟುತಿರೆ ಅನಿಮಿಷರು ನೋ ಡನಿತಚ್ಚರಿಯನು ಪೇಳೆ 6 ಮೌನಿ ನಾರದನು ವೀಣೆ ಕೆಳಗಿಟ್ಟು ಮೌನವಾದನು ಬ್ರಹ್ಮಾಣಿ ತಲೆದೂಗಿ ಗೀರ್ವಾಣ ಗಂಧರ್ವರು ಗಾನ ಮರೆದು ಇದೇನೆನುತ ಮೇನಕೆ ಊರ್ವಸಿ ಜಾಣೀರು ತಮ್ಮಯ ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ ದೀನರಾದರು ನಿಧಾನಿಸಿ ಈಕ್ಷಿಸಿ ಎಣಿಸುತ್ತಿದ್ದರು ಶ್ರೀನಾಥನ 7 ನಮೋ ನಮೋಯೆಂದು ಹಸ್ತ- ಕಮಲ ಮುಗಿದು ನಮಗೆ ನಿಮ್ಮಯ ಅಮಲಗುಣ ನಿಗಮದಿಂದೆಣಿಸೆ ಕ್ರಮಗಾಣೆವು ಉತ್ತಮ ದೇವ ಕೂರ್ಮ ಖಗಮೃಗ ಸಮವೆನಿಸಿ ಅ- ಚಮತ್ಕಾರದಲ್ಲಿ ನಾಮಸುಧೆಯಿತ್ತ ರಮೆಯರಸ ಆಗಮನತ8 ಇದನು ಪಠಿಸೆ ಸದಾ ಭಾಗ್ಯವಕ್ಕು ಮದವಳಿ ದಘವುದದಿ ಬತ್ತೋದು ಸಾಧನದಲ್ಲಿಯೆ ಮದುವೆ ಮುಂಜಿ ಬಿಡದಲ್ಲಾಗೋದು ಶುಭದಲ್ಲಿ ಪದೆಪದೆಗೆ ಸಂಪದವಿಗೆ ಜ್ಞಾನ- ನಿಧಿ ಪೆಚ್ಚುವುದು ಹೃದಯ ನಿರ್ಮಲ ಬದರಿನಿವಾಸ ವಿಜಯವಿಠ್ಠಲ ಬದಿಯಲ್ಲೆ ಬಂದೊದಗುವ 9
--------------
ವಿಜಯದಾಸ