ಒಟ್ಟು 15952 ಕಡೆಗಳಲ್ಲಿ , 137 ದಾಸರು , 7176 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮಹಿಮೆಗಳೆಲ್ಲ ನೀನೆ ಬಲ್ಲೈಯ್ಯ ವರದಚಿನ್ಮಯ ಗರುಡಗಿರಿಯ ಮಾನ್ಯ ತಿಮ್ಮ್ಮಯ್ಯ ಪ.ನಿಜರಾಣಿಗಂಘ್ರಿನಖನಿಜವು ತಿಳಿಯದ ಮಹಿಮೆವ್ರಜದಿ ವದನದಿ ತಾಯ್ಗೆತ್ರಿಜಗತೋರಿದ ಮಹಿಮೆಅಜಫಣಿಗಳುಗ್ಘಡಿಪ ಮಹಿಮೆಮಂದಅಜಮಿಳ ಬೆದರ್ಯೊದರೆ ಭಜಕನಾದ ಮಹಿಮೆ 1ನಿಲ್ಲದಾ ಮುನಿಮನದಿ ಚೆಲ್ವ ಚರಣದ ಮಹಿಮೆಬಲ್ವಿಂದ ಉಂಗುಟದಿ ತಳ್ವೆಂಗದ ಮಹಿಮೆದುರ್ಲಭ ಮಮರಿಗೆ ನೋಟ ಮಹಿಮೆ ಆಗೊಲ್ವೆಂಗಳೇರ ನೋಡಿ ಭುಲ್ಲೈಪ ಮಹಿಮೆ 2ವೈಕುಂಠ ಮಂದಿರದಿ ಮುಕುತರೊಂದಿತ ಮಹಿಮೆಗೋಕುಲದಿ ಗೊಲ್ಲರೊಳು ಆಕಳ ಕಾಯುವ ಮಹಿಮೆ ಅನೇಕಜಾಂಡದಿ ಪೂರ್ಣ ಮಹಿಮೆ ಪ್ರಸನ್ವೆಂಕಟಾದ್ರಿಯ ಮೇಲೆ ಏಕೈಕ ಮಹಿಮೆ 3
--------------
ಪ್ರಸನ್ನವೆಂಕಟದಾಸರು
ನಿನ್ನನಾಶ್ರಯಿಸುವೆ - ನಿಗಮಗೋಚರನಿತ್ಯಬೆನ್ನ ಬಿಡದಲೆ ಕಾಯೊ ಮನದಿಷ್ಟವೀಯೋ ಪಕುಂದಣದ ಆಶ್ರಯವು ನವರತ್ನಗಳಿಗೆಲ್ಲಚಂದಿರನ ಆಶ್ರಯ ಚಕೋರಗಳಿಗೆ ||ಕಂದರ್ಪನಾಶ್ರಯ ವಸಂತ ಕಾಲಕ್ಕೆ ಗೋವಿಂದ ನಿನ್ನಾಶ್ರಯವು ಮರಣಕಾಲದೊಳು 1ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವುಪುಣ್ಯನದಿಗಳು ಋಷಿಗಳಿಂಗೆ ಆಶ್ರಯವು ||ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವುಎನ್ನಿಷ್ಟ ಪಡೆಯುವರೆ ನಿನ್ನ ಆಶ್ರಯವು 2ಪತಿವ್ರತಾವನಿತೆಗೆ ಪತಿಯೊಂದೆ ಆಶ್ರಯವುಯತಿಗಳಿಗನುಶ್ರುತದಿ ಪ್ರಣವದಾಶ್ರಯವು ||ಮತಿವಂತನಿಗೆಹರಿಸ್ತುತಿಗಳೇ ಆಶ್ರಯವುಹಿತವಹುದು ಪುರಂದರವಿಠಲನಾಶ್ರಯವು 3
--------------
ಪುರಂದರದಾಸರು
ನಿನ್ನನು ನಂಬಿದೆನು ನಾ ಸುಂದರ ಗೋವಿಂದನೇ | ಪನ್ನಗಾಶಯನಗೋಪಿಕಂದನೇ | ಮುಕುಂದನೆದುಷ್ಟರ ಶಿಕ್ಷಿಪಘೋರಕಾಲನೆ | ರಣಶೂರನೆ |ಶಿಷ್ಟರ ರಕ್ಷಿಪ ಭಕ್ತಪಾಲನೆ ಗುಣಶೀಲನೇ ಪಹೊಳೆವ ಮತ್ಸ್ಯಾವತಾರನೆನ್ನಿಸಿಇಳೆಯ ಭಾರವ ಕಳೆದನೆ ||ಜಲದಿವಾಸವಮಾಡಿಕೊಂಡು |ಜಲದಿನಾಲ್ದೆಸೆ ನಲಿದನೆ 1ಧರೆಯ ಬೆನ್ನಲಿ ಪೊತ್ತು ನೆಲಸಿದಕೂರ್ಮನೆ |ಸ್ಮøತಿಧರ್ಮನೇ ||ಶರದ ಸೇತುವೆ ಧರಿಸಿ ನಿಂದಾ |ಮರ್ಮವರಿತೇ | ಸುಶರ್ಮನೆ 2ರಸತಳದಿ ಕೆಸರೊಳಗೆ ಹೊರಳುವಹಂದಿಯೇ | ಭೂಮಿ ತಂದಿಯೇ ||ಬಸುರ ಬಗಿದಾ ಹೇಮನೇತ್ರನಕೊಂದೆಯೇ ಮಮ ತಂದೆಯೇ 3ಕಂಬದಲಿ ಮೈದೋರಿ ತರಳನ |ಪೊರೆದನೇ ನರಸಿಂಹನೇಕುಂಭಿನಿಯ ಬಾಧಿಸಲು ದುರುಳನ |ಕರುಳನೇ ಹರಿದೆಳದನೇ 4ಭೂಮಿಯಲಿ ಮೂರಡಿಯದಾನವ ಕೊಟ್ಟಾನೇಬಲಿಕೆಟ್ಟಾನೇವಾಮನನು ಎರಡಡಿಯ ತೀರಿಸಿ |ಮೆಟ್ಟುತಲಿವರಕೊಟ್ಟನೇ 5ಕೊರಳ ಕುತ್ತಿಯೆ ಮಾಲೆಮಾಡುತ್ತಾಹೆತ್ತವಳ ಕತ್ತರಿಸಿದೆ ||ಧರಣಿಪರ ಶಿರವದೆಭಾರ್ಗವ|ಸತ್ಯ ಭೂಮಿಯ ಸುತ್ತಿದೆ6ವನದಿ ರಾಮನ ಸತಿಯರಾವಣ ಕದ್ದನೇ ವಿಷ ಮೆದ್ದನೇ ||ವನದಿ ಕಪಿಗಳ ಕೂಡಿ ದೈತ್ಯರಕೊಂದನೆ ಸೀತೆಯ ತಂದನೇ 7ಸರಸಿಯಲಿ ಮೊರೆಯಿಡುವ ಗಜವ |ಕಾಯ್ದನೇ ಯಾದವನೇ ||ಧುರದಿ ಕಾಳಿಯ ಶಿರದಿ ನಲಿದ |ದೇವನೇ ಮಾಧವನೇ 8ಬತ್ತಲೆಯ ಬೌದ್ಧಾವತಾರನೆ |ಮೃತ್ಯು ತೆಕ್ಕಲ ಹೊಕ್ಕನೇ ||ಸತ್ಯ ಧರ್ಮವನರಿಯದಧರ್ಮರ |ಸೊಕ್ಕ ಮುರಿವನೆ ಪಕ್ಕನೆ 9, 10ಕಲಿಯುಗದ ಕಡುಪಾಪಿ ನರರನು |ಕಡುಗದಿಂದಲಿ ಕಡಿದನೇ ||ಕಾಲಭೈರವನಂತೆ ಕಲ್ಕ್ಯನು |ಕಿಡಿಯನುಗುಳುತ ಸುಡುವನೇ 11ದಾಸಜನರನು ಪೊರೆವಶ್ರೀನಿವಾಸನೇ | ಜಗದೀಶನೇ |ಶೇಷಶಯನನೆಂದೆನಿಪ |ಗೋವಿಂದನೇ | ಗುಣವೃಂದನೇ 12
--------------
ಗೋವಿಂದದಾಸ
ನಿನ್ನಯ ಬಲವೊಂದಿದ್ದರೆ ಸಾಕಯ್ಯ ಸೀತಾನಾಥ ಮಿಕ್ಕಅನ್ಯರ ಬಲವಿನ್ನ್ಯಾಕೆ ಬೇಕಯ್ಯ ಸೀತಾನಾಥ ಪತನ್ನ ಮುಖವ ಕಂಡ ಜನರಿಂ ಕೇಳ್ವುದಕಿಂತ ಸೀತಾನಾಥತನು ಉನ್ನತವಾದಂಥ ಕನ್ನಡ್ಯೊಂದೇ ಸಾಕೊ ಸೀತಾನಾಥತನ್ನಿಷ್ಟಗರೆವಂಥ ಸುರಧೇನೊಂದೆ ಸಾಕೊ ಸೀತಾನಾಥ ಮತ್ತುಇನ್ನು ಬನ್ನಬಡುತಾನಂತಾಕಳ್ಯಾಕೊ ಸೀತಾನಾಥ 1ವರಹೆಣ್ಣು ಹೊನ್ನು ಮಣ್ಣಿನಕಿಂತ ಸೀತಾನಾಥಸ್ಥಿರ ಸ್ಮರಿಸಿದ್ದನ್ನೀವಂಥ ಸುರತರೊಂದೆ ಸಾಕೊ ಸೀತಾನಾಥಪರಮಚಿಂತಾಮಣಿಯ ಸಾಧ್ಯವೊಂದೆ ಸಾಕೊ ಸೀತಾನಾಥಪರಿಪರಿಮಂತ್ರ ತಂತ್ರದಿ ಸಿದ್ಧಿಗಳ್ಯಾಕೊ ಸೀತಾನಾಥ2ಪಾಮರ್ಹಲವು ಬಂಧುಬಳಗ ಬಲದಕಿಂತ ಸೀತಾನಾಥ ಮಹಾಸ್ವಾಮಿಪ್ರೇಮವೆಂಬ ಪರುಷವೊಂದೆ ಸಾಕೊ ಸೀತಾನಾಥಕಾಮಿಸ್ಹಲವು ದೈವ ಭಜಿಸಲಿನ್ಯಾತಕೊ ಸೀತಾನಾಥ ಶ್ರೀರಾಮ ನಿಮ್ಮಯ ನಿಜ ಧ್ಯಾನವೊಂದೆ ಬೇಕೊ ಸೀತಾನಾಥ 3
--------------
ರಾಮದಾಸರು
ನಿನ್ನರಮನೆ ಕಾಯ್ವ ಪಶುದೇಹಧಾರಿಯಮಾಡುಕಂಡ್ಯ ಕೃಷ್ಣನಿನ್ನವನಲ್ಲದಮಾನವಜನುಮೆಂದು ಬ್ಯಾಡ ಕಂಡ್ಯಪ.ಅಚ್ಯುತಚಿತ್‍ಸ್ವರೂಪೋಚ್ಚಾರಿಪ ಗಿಣಿಮಾಡುಕಂಡ್ಯ ಕೃಷ್ಣನಿಚ್ಚಾರಿ ನಿಶಾಚರಹರನೆಂಬ ಜಾಣ್ವಕ್ಕಿಮಾಡುಕಂಡ್ಯ1ಅಹೋ ಮಾಉಮೇಶವಿಧಿಪನೆಂಬ ನವಿಲುಮಾಡುಕಂಡ್ಯ ಕೃಷ್ಣಕುಹಕಕುವ್ರತವೈರಿಅವರಿಗೆಂಬ ಪಿಕನಮಾಡುಕಂಡ್ಯ2ಹರಿಯವಯವಗಳೆಂಬ ಪುಷ್ಪದಿ ಚರಿಪಾಳಿಯಮಾಡುಕಂಡ್ಯ ಕೃಷ್ಣಪರಮಮುಕ್ತಾಹಾರದ ಪರಮಹಂಸನಮಾಡುಕಂಡ್ಯ3ಭುಲ್ಲಿಪ ವೈಕುಂಠ ಸಿರಿಯ ನಿಟ್ಟಿಪಹುಲ್ಲೆಮಾಡುಕಂಡ್ಯ ಕೃಷ್ಣಎಲ್ಲ ಪ್ರಕಾರದ ಸಾರಿ ಕೂಗುವ ನರಿಯಮಾಡುಕಂಡ್ಯ4ಸ್ವರೂಪ ಬಿಂಬವ ನೋಡಿ ನರ್ತಿಪ ಕುದುರೆಯಮಾಡುಕಂಡ್ಯ ಕೃಷ್ಣವರಮುಕ್ತರರಮನೆಭಾರ ಹೊರುವ ಗೂಳಿಮಾಡುಕಂಡ್ಯ5ನವೀನ ಮುಕ್ತರಿಗೊದಗುವ ಬಾಗಿಲ ಕುನ್ನಿಮಾಡುಕಂಡ್ಯ ಕೃಷ್ಣಗೋವಿಂದ ಗೋವಿಂದೆಂದು ಬೀದಿಲೊದರುವ ಕತ್ತೆಮಾಡುಕಂಡ್ಯ6ಹರಿನಿರ್ಮಾಲ್ಯ ಕಸ್ತೂರಿ ಕರ್ದಮದ ಪತ್ರಿಮಾಡುಕಂಡ್ಯ ಕೃಷ್ಣಸ್ವರ್ಗಾಮೃತ ತಟವಾಪಿಯ ಮೀನವಮಾಡುಕಂಡ್ಯ7ಬಾಡಿ ಕೆಡದ ಪುಷ್ಪಲತೆ ತರುಗುಲ್ಮವಮಾಡುಕಂಡ್ಯ ಕೃಷ್ಣನೋಡಿ ಸ್ವಾನಂದದಿ ಜಿಗಿದಾಡುವ ಕಪಿಯಮಾಡುಕಂಡ್ಯ8ನಾಕಕೈವರ ಸಂಗತಿ ಬಿಟ್ಟಗಲದಂತೆಮಾಡುಕಂಡ್ಯ ಕೃಷ್ಣಆಕಾಂಕ್ಷವಿಲ್ಲದುಗ್ಗಡಿಪ ಭಟನನ್ನೆಮಾಡುಕಂಡ್ಯ9ಮಣಿಮಯ ಭಿತ್ತಿ ಸೋಪಾನ ವಿತಾನವಮಾಡುಕಂಡ್ಯ ಕೃಷ್ಣತೃಣ ಮುಕ್ತಾದವರೊಳಗೊಂದಾರೆ ಜಾತಿಯಮಾಡುಕಂಡ್ಯ10ಜ್ಞಾನಾನಂದಗಳ ಯೋಗ್ಯತೆ ನೋಡಿ ಕೂಡುವಂತೆಮಾಡುಕಂಡ್ಯ ನೀದಾನಕ್ಕೆ ಮೊಗದೋರಿಕೈವಲ್ಯಪುರಾಗಾರಮಾಡುಕಂಡ್ಯ11ಈಪರಿಬಿನ್ನಹವಾಲಿಸಿ ಭವದೂರಮಾಡುಕಂಡ್ಯ ಕೃಷ್ಣಶ್ರೀ ಪ್ರಸನ್ವೆಂಕಟಪತಿ ಬಿಂಬಾತ್ಮಕ ಕೃಪೆಮಾಡುಕಂಡ್ಯ12
--------------
ಪ್ರಸನ್ನವೆಂಕಟದಾಸರು
ನಿನ್ನೆ ಇರುಳಿನಲಿ ಚೆನ್ನಿಗ ಪುರುಷನುಕಣ್ಣು ಬಿಡುತಲೆ ಬೆನ್ನೊಳಗಡಗಿಸಿಜಲವ ಬಿಟ್ಟರೆ ಸತತ ನೆಲನೆ ಕೆದರುತಲಿಪ್ಪಚರಣರೋಮಗಳಿಲ್ಲ ಮಗನ ಮೂಗಿಲೆ ಬಂದ
--------------
ಗೋಪಾಲದಾಸರು
ನಿರುತ ನಿನ್ನಯ ಲೀಲೆಯನೆ ಹಾರೈಸುವೆ ಮುದ್ದುತಾರೊ ಕಂದಕಿರುಗುರುಳಿನ ಚೆಲ್ವ ಬಾಲಕರನ್ನನೆ ಮುದ್ದು ತಾರೊ ಪ.ನಿದ್ರೆ ಪೂರಿತವಿಲ್ಲದೆ ನಡೆಯುತ ಬಂದು ಮುದ್ದು ತಾರೊ ಕಂದಮೆದ್ದು ಕಾಯಿ ಕಳಲೆ ಕಿರುನಗೆ ಜೊಲ್ವಾಯ ಮುದ್ದು ತಾರೊ 1ಧುಡುಮೆಂಬ ಕಡೆವ ದನಿಗೆ ದುಡು ದುಡು ಬಂದುಮುದ್ದು ತಾರೊ ಕಂದಉಡುಗೆ ಜಗ್ಗುತ ತೊದಲ್ನುಡಿದು ಮೊಗವ ನೋಡಿ ಮುದ್ದು ತಾರೊ 2ನವನೀತನೀಡಲು ಆಯೆಂಬ ಪುಟ್ಬಾಯ ಮುದ್ದು ತಾರೊ ಕಂದಹವಣಾದ ಸಣ್ಹಲ್ಲು ಎಳೆದುಟಿ ಸೊಂಪಿನ ಮುದ್ದು ತಾರೊ 3ಅಂಬೆಗಾಲಿಕ್ಕುತೆನ್ನನು ಕಂಡು ಕರವೆತ್ತಿ ಮುದ್ದು ತಾರೊ ಕಂದಕಂಬುಕಂದರ ನಿನ್ನ ಮನದಣಿಯಪ್ಪುವೆ ಮುದ್ದು ತಾರೊ 4ಚಿನ್ನರ ಬಡಿದು ನಾನಲ್ಲೆಂದು ಬಾಯಾರ್ವ ಮುದ್ದು ತಾರೊ ಪ್ರಸನ್ನವೆಂಕಟಾಚಲವಾಸವಿಲಾಸನೆ ಮುದ್ದು ತಾರೊ 5
--------------
ಪ್ರಸನ್ನವೆಂಕಟದಾಸರು
ನಿರ್ಭಯವಾಗಲಿಯೋಗಿಜಿತಭೋಗಿಪ.ಲಭ್ಯಸುಕೃತವಿರಭ್ಯುದಯವಾಗಿ ಅ.ಪ.ಸತ್ಯಜ್ಞಾನ ಸುವಿರಕ್ತಿ ಹರಿಭಕ್ತಿಚಿತ್ತದೊಳಿದ್ದರೆ ನಿತ್ಯಾಸಕ್ತಿ 1ಹೊದ್ದಿದನಿವನು ಬ್ರಾಹ್ಮಣನು ನಮ್ಮವನುಇದ್ದರೆ ಪುಣ್ಯವು ಶುದ್ಧಾಂತಃಕರಣನು 2ರಕ್ಷಿಸುವದು ನಿನ್ನಭಾರಸರ್ವಾಧಾರಲಕ್ಷ್ಮೀನಾರಾಯಣ ಲಕ್ಷ ನಮಸ್ಕಾರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಿರ್ವೈಷಮ್ಯ ಯಾಚನೆ ಸ್ತೋತ್ರ(ತ್ರಿವಿಕ್ರಮ ದೇವರ ಸ್ತೋತ್ರ)17ವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖ ವಂದ್ಯ ಕರಣ ಸೌಭಾಗ್ಯದನೆಬ್ರಹ್ಮಾಂಡ ಬಹಿರಂತ ವ್ರ್ಯಾಪ್ತ ಸರ್ವೇಶ ಪವಾಮನನು ವಿಶ್ವರೂಪ ಪ್ರಕಟಿಸಿ ದಾನ ವಸ್ತುಭೂಮಿ ದಿವಿಯ ಈರಡಿಯಲಿ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳ್ದ ಮಾಯಾಜಾಲವು ಅಲ್ಲವಿಷಮ ವಂಚನ ದೋಷಕಿಂಚಿತ್ತು ಇಲ್ಲ 1ಪ್ರಥಮವಾಗಿ ಶ್ರೀ ವಿಷ್ಣುರೂಪ ಒಂದೊಂದಲ್ಲೂಅನಂತರೂಪ ಬಲ ಸುಖಜ್ಞÕನಾದಿ ಪೂರ್ಣವಾಗಿಶಶ್ವಧೇಶ ಪ್ರಕಾರ ಇಹುದೆಂದು ಶಾಸ್ತ್ರ ಸಾರುತಿದೆಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವಇಚ್ಛೆಯಿಂ ಆಗಾಗ2ಅಣೋರಣೀಯಾನ್ ಮಹಿತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೆ ವ್ಯಕ್ತ ಮಾಡಿದನು ವಿಷ್ಣು ವ್ಯಾಪನ ಶೀಲಗುಣರೂಪಅಭಿನ್ನ ಅವ್ಯಯನು3ಮತ್ತು ಬಲಿರಾಜನಿಗೆ ಶುಕ್ರಾಚಾರ್ಯರುಮೊದಲೇವೆ ಹೇಳಿಹರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿಪರ್ವದ ಎರಡು ಪಾದದಿಂ ಅಳೆವನೆಂದು4ಈ ರೀತಿ ಬಲಿರಾಜ ದಾನ ಕೊಡುವ ಪೂರ್ವದಲೆಹರಿವ್ಯಾಪನ ಶೀಲ ಅವ್ಯಯನೆ ವಾಮನ ಎಂದುಅರಿತೇವೆ ಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರಿ ವಿಷಮ ವಂಚನೆಗೆ ಸಿಲುಕಿ ಅಲ್ಲ 5ಮೋಸಕ್ಕೆ ಓಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಶ್ರೀ ಶಾರ್ಪಣ ಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿಹರು ದೇವಗಾಯಕರು 6ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿ ನಾನೇನ ಕೃತಂ ಸುದುಷ್ಕರಂವಿದ್ವಾದದಾದ್ ಯದ್‍ರಿಪವೇ ಜಗತ್ರಯಂಏಕೋನವಿಂ ಶದ ಧ್ಯಾಯ ಶ್ಲೋಕ ಇಪ್ಪತ್ತು 7ಬಲಿರಾಜನೂ ರಾಣಿ ವಿಂದ್ಯಾವಳಿಯೂಅಲ್ಲಿ ಬಂದ ಪ್ರಹ್ಲಾದ ಮಹಾರಾಜನೂಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾನುಗ್ರಹ ಮಾಡ್ಡನೆಂದು ತಿಳಿದಿಹರು 8ಮಧ್ವಸ್ತ ಸರ್ವಸ್ಥ ಮಸ್ತ ವಿಧಿತಾತಜ್ಯೊತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುತ ಪ್ರಸನ್ನಶ್ರೀನಿವಾಸಮುದಜ್ಞಾನ ಧನ ಆಯುರ್ ಭಾಗ್ಯದನೆ ಶರಣು 9|| ಶ್ರೀ ಮಧ್ವೆಶಾರ್ಪಣಮಸ್ತುಃ ||
--------------
ಪ್ರಸನ್ನ ಶ್ರೀನಿವಾಸದಾಸರು
ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾನಿಲ್ಲಬೇಕಯ್ಯಾ ನೀನು ಪನಿಲ್ಲಬೇಕಯ್ಯಾ ನೀಮಲ್ಲಮರ್ದನಸಿರಿವಲ್ಲಭಎನ್ನ ಹೃದಯದಲಿ ಸತತಅ.ಪಸುಪ್ಪಾಣಿಮುತ್ತಿಟ್ಟು ನೋಡುವೆ ನಿನ್ನಚಪ್ಪಾಳಿ ತಟ್ಟುತ ನಾ ಪಾಡುವೆ ||ಅಪ್ಪ ಶ್ರೀ ಕೃಷ್ಣ ನಿನ್ನನೆತ್ತಿ ಮುದ್ದಿಸಿಕೊಂಬೆಸರ್ಪಶಯನ ಕೃಪೆ ಮಾಡೆಂದು ಬೇಡುವೆ 1ಚೆಂದದ ಹಾಸಿಗೆ ಹಾಸುವೆಪುನಗುಗಂಧದ ಕಸ್ತೂರಿಯ ಪೂಸುವೆ ||ತಂದು ಮುದದಿ ಮುತ್ತಿನ ಹಾರ ಹಾಕುವೆಅಂದದಿಂದಲಿ ನಿನ್ನನೆತ್ತಿ ಮುದ್ದಿಸಿಕೊಂಬೆ 2ನೀಲದ ಕಿರೀಟವನಿಡುವೆ ಬಲುಬಾಲಲೀಲೆಗಳನು ಪಾಡುವೆ ||ಚೆಲ್ವ ಶ್ರೀಪುರಂದರವಿಟ್ಠಲರಾಯನೆನಿಲ್ಲು ಎನ್ನ ಮನದಲಿ ಒಂದೇ ಗಳಿಗೆ 3
--------------
ಪುರಂದರದಾಸರು
ನಿಲ್ಲು ರಂಗ ನಿಲ್ಲು ರಂಗ ನಿಲ್ಲೆಲೊ ರಂಗನಿಲ್ಲು ಮಜ್ಜಿಗೆಯನೆಲ್ಲ ಚೆಲ್ಲಿ ಬೆಣ್ಣೆ ಮೆದ್ದ ಕಳ್ಳ ಪ.ಜಾವ ಜಾವಕೆ ಕಾಡುವೆ ನಾವು ಕಟ್ಟಿದರೋಡುವೆಹಾವಳಿಗಾರೆವೊ ನಿನ್ನ ದೇವಕಿ ಚಿನ್ನಗೋವಳೆಗಾರ್ತಿರ ಚಿತ್ತವ ಆವಾಗೆ ಗೆದ್ಯೊಮಾಧವದೇವಿ ಗೋಪಿಗೆ ಹೇಳುತೈದೆವೊ ನಡೆ ಯಾಕೊ ಪಿಂತೆ 1ಬಾಲ ಬಾಲ ಬಾಲನೆಂದು ತಾಳಬೇಕೆಷ್ಟು ದಿನೆಂದುಮೇಲೆ ಬಲ್ಲಿದರ ಮಗ ನೀಲಮೇಘಾಂಗಕಾಲಿಗೆರಗುವೆವಿನ್ನು ಪಾಲಿಸೊ ನಮ್ಮನು ನೀನುನಾಲಿಗೇಲಿ ನಿಮ್ಮ ಗುಣಂಗಳ ಹೇಳೋದು ಕಠಿಣ 2ಬಿಟ್ಟು ಕೆಟ್ಟೆವೊ ಪಾದವ ಕಟ್ಟೆವೊ ಬಾರೊ ದೇವಸಿಟ್ಟಲಿ ಯಶೋದೆ ಮೇಲೆ ಅಟ್ಟಿ ಬಿಡಲುಗಟ್ಟಿ ಮೊಸರು ಹಾಲನು ಅಷ್ಟು ಕುಡಿದಧಿಕನೊದಿಟ್ಟ ಪ್ರಸನ್ನವೆಂಕಟ ಕೃಷ್ಣ ನಿಮ್ಮಮ್ಮನಾಣಿಟ್ಟೆ 3
--------------
ಪ್ರಸನ್ನವೆಂಕಟದಾಸರು
ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ಬೇರೆಏಕಮತಿ ಎನ್ನೊಳಿಲ್ಲಶ್ರೀಕಾಂತ ಕರುಣಿ ನೀನಕ್ಲಿಷ್ಟ ಕಾಣಯ್ಯಬೇಕೆಂದು ಸಾಕುತಿಹೆ ಹರಿಯೆ ಪ.ವೇದ ಶಾಸ್ತ್ರ ಪುರಾಣ ಸಾರಾರ್ಥ ತಿಳಿದರಿಯೆಸಾಧನ ಸುಮಾರ್ಗವರಿಯೆಆದರದಿ ಭಕುತಿ ಬಲಿದೊಮ್ಮೆ ಪೂಜಿಸಲರಿಯೆಮಾಧವಮುರಾರಿ ಕೃಷ್ಣಾ ತುಷ್ಟಾ1ಮನ ಮರ್ಕಟವು ತನ್ನ ಮತಿಯಲ್ಲಿ ವಿಷಯ್ಯೆಂಬವನಕೆ ಮೆಚ್ಚಿದೆ ನೋಡಯ್ಯವನಚರತ್ವವನೀಗಿಕ್ಷಣವಾರೆ ತವಚರಣವನಜರಸವುಣ್ಣದಲ್ಲೈ ರಂಗಯ್ಯ 2ಜನುಮ ಜನುಮದ ತಾಯಿ ತಂದೆಗುರುಬಂಧುನನ್ನನು ಗತಿಗಾಣಿಪ ದಾತನೆಎನ್ನಭವತಪ್ಪುಗಳನರಸದಿರು ಅರಸಿದರೆನಿನಗುಚಿತೆ ಪ್ರಸನ್ವೆಂಕಟೇಶ ಶ್ರೀಶ 3
--------------
ಪ್ರಸನ್ನವೆಂಕಟದಾಸರು
ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|ಗೋಕುಲಪತಿಗೋವಿಂದಯ್ಯಪನೋಡುವೆ ನಿನ್ನನು ಪಾಡುವೆ ಗುಣಗಳ |ಕಾಡುವೆ ಬೇಡುವೆ ನಾಡೊಳಗೆ ||ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |ಕಾಡೊಳು ತುರುಗಳ ಕಾಯ್ದರಸನೆಹರಿ1ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |ಗಂಟಿಗೆ ಮೋಸವೆ ದಾಸರಿಗೆ ||ಎಂಟುಂಟೆನಿಸುವೆ ಬಂಟರ ಬಾಯಲಿ |ತುಂಟತನವ ಬಿಡು ತುಡುಗರರಸೆ 2ಅಪ್ಪನೆ ಅಯ್ಯನೆ ಅಮರರಿಗೊಲಿದನೆ |ಸರ್ಪನೆ ಮೇಲೆ ಮಲಗಿಪ್ಪವನೆ |ಒಪ್ಪಿಸಿಕೊಟ್ಟರೆಪುರಂದರವಿಠಲನೆ |ಒಪ್ಪವ ತೋರುವೆ ಒಡೆಯನಿಗೆ 3
--------------
ಪುರಂದರದಾಸರು
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀಜನರೊಳಗೆ ಘನವಂತನೆನಿಸಿಕೊಂಬೆಅನುಗಾಲ1ಹರಿನಿಮ್ಮ ವರಚರಣಕರುಣವಿರೆ ಧರೆಮೇಲೆದುರುವಾದಿಗಳ ಜೈಸಿ ನಿರುತನೆನಿಪಿಅನವರತ2ವರವೇದಸ್ಮøತಿಶಾಸ್ತ್ರ ಸ್ಥಿರದರಿವು ನಿಜಜ್ಞಾನವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ 3
--------------
ರಾಮದಾಸರು
ನೀ ದಯಾಪರನೊ, ನಿನ್ನವರ ಸಾಧನವೊ ? |ಮುದ್ದು ಹಯವದನ ಪೇಳಿದನ ಪ.ಮದಕರಿಯು ಸರಸಿಯೊಳು ಮಕರಿಬಾಧೆಗೆ ಸಿಲುಕಿ |ಪದುಮಾಕ್ಷ ಪದುಮೇಶ ಪದುಮನಾಭ ||ಪದುಮಸಂಭವನಯ್ಯಪಾಹಿ ಪಾಹಿ - ಯೆನಲು |ಒದಗಿ ರಕ್ಷಿಸದೆ ತವ ದಯೆಯೊ, ಸಾಧನವೊ ? 1ಅಂತ್ಯಜೆಯ ಸಹವಾಸದಲಿ ವಿಪ್ರವರನೊಬ್ಬ |ಸಂತಸದಿಂದ ಬಹುಕಾಲ ಕಳೆದು ||ಅಂತ್ಯಕಾಲಕೆ ತನ್ನ ಮಗನ ಕರೆಯಲು ಕಾಯ್ದೆ |ಚಿಂತಾಯತನೆ, ವೈರಾಗ್ಯ ಸಾಧನವೊ ? 2ಅವರವರ ಯೋಗ್ಯತೆಯನರಿತು ಪ್ರೇರಕನಾಗಿ |ಅವರಿಂದ ನುಡಿಸಿ ನುಡಿನುಡಿಗೆ ಹಿಗ್ಗಿ ||ಅವರಿಗೊಲಿದೆ ನಮ್ಮ ಪುರಂದರವಿಠಲ |ಅವನೀಶನಿನ್ನ ದಯವೊ ಸಾಧನವೊ ?3
--------------
ಪುರಂದರದಾಸರು