ಒಟ್ಟು 13912 ಕಡೆಗಳಲ್ಲಿ , 138 ದಾಸರು , 7210 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವರ್ಧನಗಿರಿಯ ನೆಗಹಿಬಂದು - ನೀನಿಲ್ಲಿಹಾವಿನ ಮಂಚದ ಮೇಲೆ ಮಲಗಿದೆಯೊ ರಂಗ? ಪಮಧುರೆಯೊಳಗೆ ಜನಿಸಿ ಗೋಕುಲಕ್ಕೆ ತೆರಳಿ |ಹಾದಿಹೋಗಿ ಕಾಲು ನೊಂದು ಮಲಗಿದೆಯೊ ರಂಗ? 1ಅಸುರೆ ಪೂತಣಿಯ ಮೊಲೆಯುಂಡು ಶಕಟನ ಒದೆದು |ಅಸುಗುಂದಿ ಮಲಗಿದೆಯೊ- ಶ್ರೀರಂಗ 2ಕಡಹದ ಮರದಿಂದ ಧುಮುಕಿ ಕಾಳಿಂಗನ |ಹೆಡೆಯ ತುಳಿದು ಕಾಲ್ನೊಂದು ಮಲಗಿದೆಯೊ? 3ಬಾಲ ಬ್ರಹ್ಮಣನಾಗಿ ಬಲಿಯ ದಾನವ ಬೇಡಿ |ನೆಲನನಳೆದು ಕಾಲುನೊಂದು ಮಲಗಿದೆಯೊ? 4ಶ್ರೀಶ ಶ್ರೀರಂಗರಾಜಪರಮಪಾವನ |ಶೇಷಶಯನ ಶ್ರೀಪುರಂದರ ವಿಠಲ 5
--------------
ಪುರಂದರದಾಸರು
ಗೋವಿಂದ ನಮೋ ಗೋವಿಂದಹರಿಗೋವಿಂದಂ ನಮೋ ಗೋವಿಂದ ಪಗೋವಿಂದಂ ನಮೋ ಗೋವಿಂದೆಂದೊಡೆಬಂದ ಜರಾಮರಣ್ಹರಿದುಪೋಪುದು ಅ.ಪಶರಧಿಮುಳುಗಿದ ಗೋವಿಂದಂ ನಮೋಶರಧಿಈಸಿದ ಗೋವಿಂದಕರಿಕೆಯನು ಮೆದ್ದ ಗೋವಿಂದಂ ನಮೋನರಮೃಗಾಕಾರ ಗೋವಿಂದಪರಶು ಧರಿಸಿದ ಗೋವಿಂದಂ ನಮೋಧರೆಯ ಬೇಡಿದ ಗೋವಿಂದಶರಧಿಹೂಳಿದ ಗಿರಿಯನೆತ್ತಿದಪುರವ ಭಂಗಿಸಿದ ತುರಗವೇರಿದ 1ಸಿಂಧುಕಲಕಿದ ಗೋವಿಂದಂ ನಮೋಸಿಂಧುಮಂದಿರ ಗೋವಿಂದಮಂದರೋದ್ಧಾರ ಗೋವಿಂದಂ ನಮೋಇಂದಿರೆಯ ಪ್ರಿಯ ಗೋವಿಂದಬಂದ ಭುವನಕೆ ಗೋವಿಂದಂ ನಮೋನಿಂದ ಗಿರಿಯಲಿ ಗೋವಿಂದಬಂದ ಭಕುತರ ಬಂಧ ಕಳೆದಾನಂದ ನೀಡುತ ಚೆಂದದಾಳುವ 2ದನುಜಸಂಹರ ಗೋವಿಂದಂ ನಮೋಚಿನುಮಯಾತ್ಮಕ ಗೋವಿಂದಮ(ನುಮುನಿಯಾ) ನಂದಗೋವಿಂದಂ ನಮೋಚಿನುಮಯಾತ್ಮಕ ಗೋವಿಂದವಿನಮಿತಾಗಮ ಗೋವಿಂದಂ ನಮೋಜನಕಜೆಯವರಗೋವಿಂದವನಜಸಂಭವವಿನುತ ವಿಶ್ವೇಶಜನಕ ಜಾಹ್ನವೀಸುಜನಶುಭಕರ3ನೀಲಶ್ಯಾಮಹರಿಗೋವಿಂದಂ ನಮೋಲೋಲಗಾನ ಸಿರಿಗೋವಿಂದಕಾಲಕುಜ(ನ) ಕುಲ ಗೋವಿಂದಂ ನಮೋಪಾಲಮೂಲೋಕ ಗೋವಿಂದಮಾಲಕೌಸ್ತುಭ ಗೋವಿಂದಂ ನಮೋಮೇಲುಆಲಯಗೋವಿಂದಕಾಳಿಮದ್ರ್ನ ಕಾಲಭಯಹರಲೀಲಸಮ ವಿಶಾಲಮಹಿಮ 4ಸತ್ಯ ಸಂಕಲ್ಪ ಗೋವಿಂದಂ ನಮೋಸತ್ಯಸನ್ನುತಗೋವಿಂದಭಕ್ತವತ್ಸಲ ಗೋವಿಂದಂ ನಮೋನಿತ್ಯನಿರ್ಮಲ ಗೋವಿಂದಚಿತ್ತಜನಪಿತ ಗೋವಿಂದಂ ನಮೋಮೃತ್ಯು ಸಂಹರ ಗೋವಿಂದಭಕ್ತಜನರಾಪತ್ತು ಪರಿಹರಮುಕ್ತಿದಾಯಕಕರ್ತುಶ್ರೀರಾಮ5
--------------
ರಾಮದಾಸರು
ಘಟಿಕಾಚಲದಿ ನಿಂತ-ಶ್ರೀ ಹನುಮಂತ ಪಘಟಿಕಾಚಲದಿ ನಿಂತ-ಪಟು ಹನುಮಂತ ತನ್ನಪಠನೆಯ ಮಾಡಲುತ್ಕಟದಿ ಪೊರೆವೆನೆಂದು ಅ.ಪಚತುರ ಯುಗದಿ ತಾನು-ಮುಖ್ಯ ಪ್ರಾಣ- ಚತುರ ಮುಖನಯ್ಯನ |ಚತುರಮೂರ್ತಿಗಳನು ಚತುರತನದಿ ಭಜಿಸಿ |ಚತುರ್ಮುಖವಾಣಿ ಜಗಕೆ ಚತುರ್ವಿಧ ಫಲವ ಕೊಡುತ 1ಸರಸಿಜಭವಗೋಸುಗ- ಕರ್ಮಠ ದೂಮವರಚಕ್ರತೀರ್ಥಸರ |ಮೆರೆವ ಛಲದಿನಿತ್ಯನರಹರಿಗೆದುರಾಗಿಸ್ಥಿರ ಯೋಗಾಸನದಲಿ ಕರೆದು ವರಗಳ ಕೊಡುತ 2ಶಂಖಚಕ್ರವ ಧರಿಸಿ-ಭಕ್ತರ ಮನಃ-ಪಂಕವ ಪರಿಹರಿಸಿ |ಪಂಕಜನಾಭಶ್ರೀ ಪುರಂದರವಿಠಲನ |ಬಿಂಕದ ಸೇವಕ ಸಂಕಟ ಕಳೆಯುತ 3
--------------
ಪುರಂದರದಾಸರು
ಚಂಚಲಾಕ್ಷಿ ಕೇಳ್ ಪಂಚಬಾಣನ |ಮಿಂಚಿನಂಥ ಶರ ತಾಳಲಾರೆ ನಾನು |ಕಂಚುಕಿಯನು ನಿನಗೊಂಚಿಸದೀವೆನು |ಕೊಂಚ ಮುಖ ತೋರಿನ್ನು ಚಂಚಲಾಕ್ಷಿ 1ಜಾಣೆ ನಿನ್ನನು ಕಾಣೆದೆನ್ನಯ |ಪ್ರಾಣನಿಲ್ಲದೇನೇ ||ತ್ರಾಣಗುಂದಿತು ಪ್ರಾಣನಾಯಕಿ |ಕಾಣೆ ನಿನ್ನ ಗಂಡನಾಣೆ || 2ಪಟ್ಟೆ ಸೀರೆಯನ್ನುಟ್ಟುಕೊಳ್ಳೆ ನಿನ್ನ |ತೊಟ್ಟಿಕೊಳ್ವೆ ಬಾರೆ ||ಗಟ್ಟಿಗೆ ನಿನ್ನಯ ಗುಟ್ಟನರಿತೆನು |ಗಟ್ಟಿ ಬಳೆಯ ಕೊಡುವೆ ನೀರೆ 3ಮಂದಗಾಮಿನಿ ಸುಂದರಾಂಗಿಯೆ |ಬಂದು ಎನ್ನ ಕೂಡೆ ||ಚಂದದಿಂದ ಗೋವಿಂದನೊಡನೇ ಬೇ |ಗೊಂದು ಮಾತನಾಡೇ ||ಹ|| 4
--------------
ಗೋವಿಂದದಾಸ
ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾದಿಂಡೆಯರಾದವರ ಖಂಡಿಸುತಿರುವ ಕತ್ತಿಯತಿರುಹುತಿರುವ ಗದೆಯಪನಿಷ್ಟರಾಗಿಹ ಭಕ್ತರ ದೂರನುಕೇಳಿಕೋಪವತಾಳಿಕಟ್ಟುಗಳಿಲ್ಲದ ರೌದ್ರವು ತೋರಲುಮೋರೆಕಂಗಳುಕೆಂಪೇರಲುಉಟ್ಟಿಹ ಪೀತಾಂಬರವನೆ ಕಾಶಿಯಹೊಯ್ದು ದಿಟ್ಟ ನಿಟ್ಟುಸಿರಸುಯ್ದುಕಟ್ಟಿದಳು ಆಯುಧಂಗಳ ಧರಿಸಿ ಝಳಝಳ ಝಳಪಿಸಿ1ಹೂಕಾಂರವನೇ ಮಾಡುತ ದೇಹವ ಮರೆದು ಕಂಗಳ ತೆರೆದುಬೆಂಕಿಯ ಸುರಿಯಲು ಎಡಬಲ ಅದಿರೆ ಹರಿಹರ ಬೆದರೆಅಂಕೆಯಿಲ್ಲದ ಸಿಡಿಲಬ್ಬರದಂತಾಗೆ ಹಾ ಎಂದು ಕೂಗೆಪಂಕಜಮುಖಿತಾ ಕೂಗುತ ಅವುಡುಗಚ್ಚೆಭೂಮಿ ಬಾಯಿ ಬಿಚ್ಚೆ2ನಡೆದಳು ಶತ್ರುಗಳೆಡೆಗೆ ಆಗ ವೇಗದಲಿ ಮನೋ ಯೋಗದಲಿತೊಡರಿಕೊಂಡಳುವೈರಿಸೇನೆಯ ನಿಲಿಸಿ ತಾ ಘುಡು ಘುಡಿಸಿತುಡುಕಿ ಪಿಡಿದಳು ದುಷ್ಟರ ಜಿಹ್ವೆಯನೂಕಿ ತಾ ಮುಂದಕೆ ಜೀಕಿಖಡುಗದಿ ಸೀಳುತ ರೌದ್ರದಿ ನಿಂತಳು ವೀರೆಕಂಗಳುಕಿಡಿಯನೆ ಕಾರೆ3ಹೊಯ್ದಳಾಕ್ಷಣ ದುರ್ಜನ ಸೇನೆಯ ಬಗಳೆರಿಪುತಲೆಗಳು ಉರುಳೆತೊಯ್ದಳಾಕ್ಷಣ ರಕ್ತದ ಬಿಂದಿಗೆ ಉಕ್ಕೆ ಮುಖ ಪುಟವಿಕ್ಕೆಸುಯ್ದರು ವೈರಿಗಳೆಲ್ಲರು ಗತಿಮತಿಗೆಟ್ಟು ಬಹುಕೇಡ ಕೆಟ್ಟುಕಾಯ್ದಳು ತನ್ನನು ನಂಬಿದವರ ಭಯ ಹರಿಯೆಬಹು ಸುಖ ಸುರಿಯೆ4ಹಮ್ಮಿನವರನೆಲ್ಲರ ತೊಳೆದು ಶಾಂತಳಾಗಿ ಬಗಳೆ ತಾ ತೃಪ್ತಳಾಗಿಬ್ರಹ್ಮ ಚಿದಾನಂದ ಭಕ್ತನಾಥನ ಸೇರಿ ಅಮಿತಾನಂದವೇರಿಸುಮ್ಮಗೆ ಪೂಜಿಸಿಕೊಳುತ ಕೇವಲ ಘನದಿ ತಾ ನಿತ್ಯನುದಿನದಿಬ್ರಹ್ಮರಂದ್ರದಿ ವಾಸ ಮಾಡಿಹ ಸುಖಿಯಆ ಬಗಳಾಮುಖಿಯ5
--------------
ಚಿದಾನಂದ ಅವಧೂತರು
ಚತುರ್ದಶಿಯ ದಿನ(ಹನುಮಂತನನ್ನು ಕುರಿತು)ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆ ಪ.ಇವನ್ಯಾರೆ ಮಹಾಶಿವನಂದದಿ ಮಾ-ಧವನ ಪೆಗಲೊಳಾಂತು ತವಕದಿ ಬರುವವ 1ದಾಡೆದಂತಮಸಗೀಡಿರುವದು ಮಹಾಕೋಡಗದಂತೆ ಸಗಾಢದಿ ಬರುವವ 2ಕಡಲೊಡೆಯನು ಮೃದುವಡಿಯಡರಿಸಿ ಬಿಡದಡಿಗಡಿಗಾಶ್ರೀತರೊಡಗೂಡಿ ಬರುವವ 3ಊರ್ವಶಿ : ನಾರಿ ಕೇಳೆಲೆಗೆ ವೈಯಾರಿ ನೀ ಮುದದಿನಾರಾಯಣನಿಗೀತ ಬಂಟನಾದಾದರಿದಿವೀರ ರಾಮವತಾರದಿ ಹಿಂದೆ ಹರಿಯಚಾರಕನಾಗಿ ಸೇವೆಯ ಗೈದ ಪರಿಯಕ್ರೂರ ದಶಾಸ್ಯನ ಗಾರುಗೆಡಿಸಿನೃಪವೀರನ ಪೆಗಲಿನೊಳೇರಿಸಿ ದೈತ್ಯರಭೂರಿವಧೆಗೆ ತಾ ಸಾರಥಿಯಾದವಕಾರುಣೀಕ ಮಹಾವೀರ್ಹನುಮಂತ 1ಆಮೇಲೆ ವೀರಾವೇಶದಿ ವಾರಿಧಿಯನುರಾಮನಪ್ಪಣೆಯಿಂದ ದಾಟಿದನಿವನುಭೂಮಿಜೆಗುಂಗುರ ಕೊಟ್ಟ ನಂತರದಿಕಾಮುಕರನು ಸದೆಬಡಿದನಾ ಕ್ಷಣದಿಹೇಮಖಚಿತ ಲಂಕಾಮಹಾನಗರವಹೋಮವ ಗೈದು ಸುತ್ರಾಮಾರಿಗಳ ನಿ-ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ-ಡಾಮಣಿ ತಂದ ಮಹಾಮಹಿಮನು ಇವ 2ವಾರಿಮುಖಿ ನೀ ಕೇಳಿದರಿಂದ ಬಂದವೀರ ಹನುಮಂತನನೇರಿ ಗೋವಿಂದಸ್ವಾರಿಗೆ ಪೊರಟ ಚಾತುರ್ದಶಿ ದಿವಸಆರತಿಯನು ಕೈಕೊಳ್ಳುವ ಶ್ರೀನಿವಾಸಭೇರಿಮೃದಂಗ ಮಹಾರವದಿಂದ ಸ-ರೋರುಹನಾಭ ಮುರಾರಿ ಶರಣರುದ್ಧಾರಣಗೈಯುವ ಕಾರಣದಿಂದ ಪಾ-ದಾರವಿಂದಗಳ ತೋರಿಸಿ ಕೊಡುವ 3ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿನಲವಿಂದ ವೇದಘೋಷವ ಕೇಳ್ವಶೌರಿಜಲಜಭವಾದಿ ನಿರ್ಜರರಿಗಸಾಧ್ಯಸುಲಭನಾದನು ಭಕ್ತಜನಕಿದುಚೋದ್ಯಸುಲಲಿತ ಮಂಟಪದೊಳೊ ನೆಲಸುತ ನಿ-ಶ್ಚಲಿತಾನಂದ ಮಂಗಲದ ಮಹೋತ್ಸವಗಳನೆಲ್ಲವ ಕೈಕೊಳುತಲಿ ಭಕ್ತರಸಲಹುವ ನಿರುತದಿ ಮಲಯಜಗಂಧಿನಿ 4ಶ್ರೀಕಾಂತ ಬಳಿಕ ಭಕ್ತರ ಒಡಗೂಡಿಏಕಾಂತ ಸೇವೆಯಗೊಂಡ ಕೃಪೆಮಾಡಿಸಾಕಾರವಾಗಿ ತೋರುವ ಕಾಣೆ ನಮಗೆಬೇಕಾದ ಇಷ್ಟವ ಕೊಡುವ ಭಕ್ತರಿಗೆಶ್ರೀಕರ ನಾರಾಯಣ ಶ್ರೀನಿವಾಸ ಕೃ-ಪಾಕರ ವಿಬುಧಾನೇಕಾರ್ಚಿತ ರ-ತ್ನಾಕರಶಯನ ಸುಖಾಕರ ಕೋಟಿ ವಿ-ಚಾರಕ ಭಾಸತ್ರಿಲೋಕಾಧಿಪನಿವ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ|ಪೆಂಡೆಯರುಳಿಯನಿಟ್ಟು ||ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |ಬಂದಾಳು ಬೀದಿಗಾಕೆ ಪಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ |ಮೇಲಿನ ಕೇರಿಯಲಿ ||ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು |ಹಾಲು ನಿಲ್ಲಿಸೆಂದನು 1ಕೊಂಡವನು ನೀನಲ್ಲ ಡಂಭಕರ ಮಾತೇಕೊ |ಗಂಡನುಳ್ಳವಳ ಕೂಡ ||ಮಂಡಲವಾಳುವ ಅರಸಿನ ಮುಂದೆ ಹೇಳಿ |ದಂಡವ ತೆರಸುವೆನೊ 2ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ |ತಡೆದವ ನೀನಾರೊ? ||ನಡೆ ಊರ ಮುಂದಕೆ ತಳವಾರರೈದಾರೆ |ಗಡನೆ ಪೇಳುವೆನೆಂದಳು 3ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ |ಎಲ್ಲಿಹ ತಳವಾರನೆ ||ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು |ಅಲ್ಲಲ್ಲಿ ದೊರದಿರೆ 4ಕೋಲು ಕೈಯಲಿ ಪಣೆಯಲಿ ಸಿರಿನಾಮವು |ಆಲದ ಮರದಡಿಯೆ ||ಕಾಲಮೊದಲು ಹಾಲ ಮಾರಿದ ಸುಂಕರೆ |ನಿಲ್ಲೆಂದು ಸೆರಗ ಪಿಡಿದ 5ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ |ಅಪ್ಪಯ್ಯ ಸೆರಗ ಬಿಡೊ ||ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿ-|ಮ್ಮಪ್ಪನ ಅಳಿಯ ಕಾಣೆ 6ಮಾವ ಸೆರಗ ಬಿಡೊ,ಭಾವಸೆರಗ ಬಿಡೊ |ಭಾವಯ್ಯ ಸೆರಗ ಬಿಡೊ ||ಮಾವನು ನಾನಲ್ಲ, ಭಾವನು ನಾನಲ್ಲ |ಮಾವನ ಮಗನು ಕಾಣೆ 7ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ |ಅಣ್ಣಯ್ಯ ಸೆರಗ ಬಿಡೊ ||ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿ-|ಮ್ಮಣ್ಣನಭಾವಕಾಣೆ8ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ |ಕಂದಯ್ಯ ಸೆರಗ ಬಿಡೊ ||ಕಂದನು ನಾನಲ್ಲ, ತಂದೆಯು ನಾನಲ್ಲ |ಕಂದನ ತಂದೆ ಕಾಣೆ 9ನೆತ್ತಿಮೇಲಿನ ಕೊಡ ಎತ್ತಿ ಈಡಾಡುತ |ಎತ್ತಿಕೊಂಡಳು ಕೃಷ್ಣನ ||ಭಕ್ತರ ಸಲಹುವ ಪುರಂದರವಿಠಲ |ವತ್ಸವೆಂಕಟರಾಯನ10
--------------
ಪುರಂದರದಾಸರು
ಚಂದ್ರಚೂಡ ಶಿವಶಂಕರ ಪಾರ್ವತಿ ರಮಣಾನಿನಗೆ ನಮೋ ನಮೋ ಪಸುಂದರ ಮೃಗಧರ ಪಿನಾಕಧರ ಹರ |ಗಂಗಾಧರಗಜಚರ್ಮಾಂಬರಧರಅ.ಪನಂದಿವಾಹನಾನಂದದಿಂದ ಮೂಜಗದಿ ಮೆರೆವನು ನೀನೆ |ಕಂದರ್ಪನ ಕ್ರೋಧದಿಂದ ಕಣ್ದೆರೆದು ಕೊಂದ ಉಗ್ರನು ನೀನೆ ||ಅಂದು ಅಮೃತ ಘಟದಿಂದುದಿಸಿದ ವಿಷತಂದುಭುಂಜಿಸಿದವನು ನೀನೆ |ಬಂದು ಚೆಂದದಿ ಇಂದಿರೇಶ ಶ್ರೀ ರಾಮನ ಪೊಂದಿಪೊಗಳುವವ ನೀನೆ 1ಬಾಲಮೃಕಂಡನ ಕಾಲನು ಎಳೆವಾಗಪಾಲಿಸಿದಾತನು ನೀನೆ |ನೀಲಕಂಠ ಕಾಲಕೂಟ ವಿಷವ ಮೆದ್ದಶೂಲಪಾಣಿಯು ನೀನೆ |ವಾಲಾಯದಿ ಕಪಾಲವ ಪಿಡಿದುಭಿಕ್ಷೆಕೇಳುವ ದಿಗಂಬರ ನೀನೆ |ಜಾಲಮಾಡುವ ಗೋಪಾಲನೆಂಬಪೆಣ್ಣಿಗೆ ಮರುಳಾದವ ನೀನೆ 2ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರನಿವಾಸನು ನೀನೆ |ಕರದಲಿ ವೀಣೆಯ ನುಡಿಸುವ ನಮ್ಮಉರಗಭೂಷಣನು ನೀನೆ ||ಕೊರಳಲಿ ಭಸ್ಮ ರುದ್ರಾಕ್ಷಿಯ ಧರಿಸಿದಪರಮವೈಷ್ಣವನು ನೀನೆ |ಗರುಡಗಮನಶ್ರೀಪುರಂದರವಿಠಲನ ಪ್ರಾಣ ಪ್ರಿಯನುನೀನೆ3
--------------
ಪುರಂದರದಾಸರು
ಚಪ್ಪಾಳೆನಿಕ್ಕೆಲೊ ಕೃಷ್ಣಮ್ಮ ಚಪಲ ಬಾಲ ರಂಗಮ್ಮಕಾಪುರುಷರ ಚಪ್ಪಾಳೆ ಮಾಳ್ಪ ಚಪ್ಪಾಳೆ ಪ.ತುಪ್ಪ ಬೆಣ್ಣೆ ಪಾಲನೊಲ್ಲೆ ಹೆಪ್ಪನಿಟ್ಟ ದಧಿಯೊಲ್ಲೆಗೋಪಿಯರೊಡನೆ ಕೇಳಿಗೊಪ್ಪಿದ ಚಪ್ಪಾಳೆ 1ಪಾಯಸವುಣ್ಣಲೊಲ್ಲೆ ಕಜ್ಜಾಯ ಸಕ್ಕರೆಯನೊಲ್ಲೆಆಯತಾಕ್ಷಿಯರ ಮೇಲೆ ಸ್ನೇಹದ ಚಪ್ಪಾಳೆ 2ತನಿವಣ್ಣ ಮೆಲ್ಲಲೊಲ್ಲೆ ಮನೆಯ ಸೇರಲೊಲ್ಲೆ ಪ್ರಸನ್ನ ವೆಂಕಟಾದ್ರಿಲಿ ಕುಣಿವ ಚಪ್ಪಾಳೆ 3
--------------
ಪ್ರಸನ್ನವೆಂಕಟದಾಸರು
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ಪ.ಇಟ್ಟು ಹಣೆಯೊಳು ಉಗುರು ನಾಮವ ಗೋವಗಟ್ಟಿಗೆಯನು ಕರದೊಳು ಪಿಡಿದುಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆಮೆಟ್ಟಿ ಅಣ್ಣ ಬಲರಾಮ ನಡೆಯೆಂದು 1ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿಕೂಡಿಕೊಂಡು ಅಣ್ಣ ತಮ್ಮನೆಂದುಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ 2ಚಿಣ್ಣಿ ಪೊಂಬಗರ್ಚೆಂಡು ಗುಮ್ಮ ಗುಸಕು ಹಬ್ಬೆಅಣ್ಣೆಕಲ್ಲು ಹÀಲ್ಲೆ ಗಜಗ ಗೋಲಿಕಣ್ಣುಮುಚ್ಚಾಲೆ ಮರನೇರಾಟ ನೀರಾಟಸಣ್ಣರೊಳಾಡಿ ಸೋಲಿಪೆನೆಂಬ ತವಕದಿ 3ರಾಜಿಪ ರಾಜಬೀದಿಲಿನಿಂದುನೋಡುವರಾಜಮುಖಿಯರೊಳು ಸೆಣಸ್ಯಾಡುತರಾಜಕುಲಾಗ್ರಣಿ ಸರ್ವಭೂಷಣದಿ ವಿರಾಜಿತನಾಗಿ ಗೋಳಿಡುತ ಮುರಾರಿ 4ಜಗವ ಪುಟ್ಟಿಸಿ ನಲಿದಾಡುವಾಟವು ತನಗೆ ಸಾಲದೆಂದು ಆವಹಳ್ಳಿಲಿಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆಸುಗತಿನೀವೆನೆಂದು ಪ್ರಸನ್ವೆಂಕಟ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.ಏಳುತುದಯಕಾಲದಲ್ಲಿ |ವೇಳೆಯರಿತು ಕೂಗುವಂಥ ||ಕೋಳಿ ತನ್ನ ಮರಿಗೆ ಮೊಲೆಯ |ಹಾಲಕೊಟ್ಟು ಸಲಹಿತೆ ? 1ಸಡಗರದಲಿ ನಾರಿಜನರು |ಹಡೆಯುವಾಗ ಸೂಲಗಿತ್ತಿ ||ಅಡವಿಯೊಳಗೆ ಹೆರುವ ಮೃಗವ |ಪಿಡಿದು ರಕ್ಷಣೆ ಮಾಳ್ಪರಾರು 2ಹೆತ್ತ ತಾಯಿ ಸತ್ತ ಶಿಶುವು |ಮತ್ತೆ ಕೆಟ್ಟಿತೆಂಬರು ಜನರು ||ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |ನಿತ್ತು ರಕ್ಷಣ ಮಾಡುವರಾರು 3ಗಟ್ಟಿಮಣ್ಣಿನ ಶಿಶುವ ಮಾಡಿ |ಹೊಟ್ಟೆಯೊಳಗೆ ಇರಿಸುವಂಥ ||ಕೊಟ್ಟ ದೈವ ಕೊಂಡೊಯ್ದರೆ |ಕುಟ್ಟಿಕೊಂಡು ಅಳುವುದೇಕೆ 4ನಂಬಿಗೆಗಿವು ಸಾಲವೆಂದು |ಹಂಬಲಿಪುದು ಲೋಕವೆಲ್ಲ ||ನಂಬಿ ಪುರಂದರವಿಠಲ - |ನೆಂಬ ನಾಮ ನುಡಿದ ಮೇಲೆ 5
--------------
ಪುರಂದರದಾಸರು
ಚಿತ್ತಿಟ್ಟು ನಮಿಸುವೆ ನಿಮ್ಮ ಮೂಲಚೈತ್ಯದಲಿಹ ಚೆನ್ನಿಗ ಬಲ ಹನುಮ ಪ.ಮೊದಲೆ ರಾಮರ ಭಟನಾಗಿ ಅಂದುಪದ್ಮದೇವಿಯ ಚರಣಕೆ ತಲೆಬಾಗಿಮುದದಿ ಮುದ್ರಿಕೆಯ ನೀ ಕೊಟ್ಟೆ ಬಲುಮದ ಸೊಕ್ಕಿದಸುರನ ಪುರವನೆ ಸುಟ್ಟೆಚೂಡಾಮಣಿಯ ತಂದಿಟ್ಟೆ ಬಲು ಹರುಷವ ಕೊಟ್ಟೆ 1ಕೊಬ್ಬಿದ ಕುರುಪತಿ ಬಲದಿ ಪೊಕ್ಕುಬೊಬ್ಬೆಯನಿರಿದು ಶೂರರ ಶಿರ ಹರಿದೆಆರ್ಭಟವನು ತೋರಿದೆ ಬಲುದುರ್ಬುದ್ಧ್ಯ ದುಶ್ಯಾಸನನ್ನೋಡಲ್ಬಗಿದೆ ಖಳರ ಹÀಲ್ಲುಮುರಿದೆಮಪುರಕೆ ಕಳುಹಿದೆ 2ಪರಮಪುರುಷ ಹರಿಯೆಂದು ಮಿಕ್ಕಸುರರುಈತನ ದಾಸಾಂಕಿತರಹುದೆಂದುಅರುಹಿದೆಶ್ರುತಿಇತಿಹಾಸಅಹಿಗಿರಿಯ ಪ್ರಸನ್ವೆಂಕಟೇಶನ ದಾಸ ತುಂಗಾತೀರವಾಸನೆ ಸಲಹೊ ಮುಖ್ಯೇಶ 3
--------------
ಪ್ರಸನ್ನವೆಂಕಟದಾಸರು
ಚಿತ್ತೈಸಿದ ವ್ಯಾಸರಾಯ |ಚಿತ್ತಜನಯ್ಯನ ಬಳಿಗೆ ಪ.ಮುತ್ತಿ ಮುತ್ತೈದೆಯರೆಲ್ಲಎತ್ತೆ ರತುನದಾರತಿಯ ಅಪಹೇಮಪಿಡಿಗಳುಳ್ಳಂತಹ |ಚಾಮರಂಗಳನು ಪಿಡಿದು ||ಕಾಮಿನಿ ಮಣಿಯರು ಕೆಲವರು |ಸ್ವಾಮಿಯೆಂದು ಬೀಸುತಿರೆ 1ಹಾಟಕದ ಬೆತ್ತನೂರು |ಸಾಟಿಯಿಲ್ಲದಲೆ ಪಿಡಿದು ||ನೀಟಾದ ಓಲಗದವರ |ಕೂಟಗಳ ಮಧ್ಯದಲಿ 2ಸಾಧುವಿಪ್ರಜನಂಗಳು |ವೇಧಘೋಷ ಮಾಡುತಿರೆ ||ಮೋದದಿಂದ ಗೋವಿಂದನ |ಸಾಧನ ಮಾರ್ಗವ ಪಿಡಿದು 3ಭೇರಿ ತುತ್ತೂರಿ ಮೃದಂಗ |ಮೌರಿ ಚಾರುವೇದ್ಯಂಗಳು ||ಬಾರಿಬಾರಿಗೆ ಹೊಡೆಯೆ |ನಾರದರು ತಾ ಕೂಡಿಯೆ | 4ಅರವಿಂದಾಸನನಯ್ಯ |ಪುರಂದರವಿಠಲನು||ಸಿರಿಸಹಿತದಿ ಬಂದು |ಕರಪಿಡಿದೆತ್ತಿದ್ದು ಕಂಡೆ 5
--------------
ಪುರಂದರದಾಸರು
ಚಿತ್ರ ವಿಚಿತ್ರವುಹರಿವ್ಯಾಪಾರಚಿತ್ತದಿ ಚಿಂತಿಪರಿಗೆ ಪಸತ್ಯಭಾಮೆಯ ರಮಣನ ಕ್ರಿಯೆಗಳುಉತ್ತಮ ಋಷಿವರರರಿಯರೆನಲು ಬಹು ಅ.ಪಮಿತ್ರೆ ರುಕ್ಮಿಣಿ ಕೂಡುತಹರಿಇರಲು ಪಾರಿಜಾತದ ಹೂಮತ್ತೆ ಮಾಧವಗೀಯಲು ನಾರದರು ಕೌತುಕವನೆ ಕೇಳುತಸತ್ಯಭಾಮೆಯು ಕೋಪವ ತಾಳುತಲಿ ಶಚಿಪತಿಯೊಳು ಕಲಹಉತ್ತಮ ಶ್ರೀಹರಿ ಸಮರದಿ ಸೋಲಲುಮತ್ತೆ ಇಂದ್ರ ಜಯಭೇರಿಯ ಹೊಡಿಸಲುಸತ್ಯಭಾಮೆ ಸಮರದಿ ಗೆಲ್ಲುತ ಪುಷ್ಪವೃಕ್ಷಸಹಿತ ದ್ವಾರಕಿಗೈತರೆ ಬಹು 1ದುರುಳದೈತ್ಯರು ಕೂಡುತ ಗುಂಪಾಗಿ ಶ್ರೀಹರಿಯನು ಪಿಡಿಯಲುಭರದಿಂದೋಡುತ ಬರುತಿರಲದ ನೋಡಿ ಶ್ರೀಹರಿ ತಾ ತಿಳಿದುತ್ವರದಿಂದೋಡುತ ಬರುತಲಿ ಗುಹೆ ಸೇರಿ ಮುಚುಕುಂದರಾಯನಿಗೆಜರದವಲ್ಲಿ ಹೊದಿಸುತ ಮಾಯವಾಗಲುಖಳರು ಬಂದೊದ್ದರು ಮಚುಕುಂದಗೆತೆರೆದು ಕಣ್ಣ ನೋಡಲು ಖಳರೆಲ್ಲರುಉರಿದು ಭಸ್ಮವಾದರು ಕೇಳಿರಿ ಬಹು 2ಮತ್ತೊಮ್ಮೆ ಖಳರೆಲ್ಲರು ಸೇರುತಲಿ ಸತ್ಯೇಶನ ಪಿಡಿಯಲುಸುತ್ತಮುತ್ತ ಚೀರುತ ಬರುತಿರಲು ಹರಿಬೆದರಿದಪರಿಮತ್ತೋಡೂತ ಹಿಂದಕೆ ನೋಡುತ ಓಡುತಲಿ ಪರ್ವತವನೆ ಏರಲುಸುತ್ತಲು ನಿಂತರು ಖಳರೆಲ್ಲರುಹರಿಒತ್ತಿ ತುಳಿಯೆ ಪರ್ವತ ಕುಸಿಯಲು ಜಲಎತ್ತಿ ಮುಖಕೆರಚಲು ಖಳರೋಡಲುಮೆತ್ತನಿಳಿದುದ್ವಾರಕಿ ಸೇರಿದ ಬಹು 3ಚಕ್ರವ್ಯೂಹದಿ ಸಿಕ್ಕಿದ ಅಭಿಮನ್ಯು ಷಡುರಥದೊಳು ಕಾದಿದಿಕ್ಕು ದಿಕ್ಕಿಲಿ ಬಾಣದ ಮಳೆಸುರಿಸಿ ರಥಿಕ ಮಹರಥರÉೂಳುಉಕ್ಕಿ ಬರುತಿಹ ರೋಷದಿ ಹೊಯ್ದಾಡಿ ದುರುಳರ ವಶವಾಗಲುಅಕ್ಕರದಲಿ ದೇವಕಿತನಯ ತನ್ನಮಿತ್ರನ ಸುತನ ವಿಯೋಗ ದು:ಖದತಕ್ಕ ಉಪಾಯದಿ ಪರಿಹರಿಸಲು ಸಾ-ಮಥ್ರ್ಯನಾಗಿರಲು ನರನಂತೆ ನಟಿಸಿದ 4ಹತ್ತು ಹನ್ನೊಂದನೆ ಸಲ ಸಮರದಲಿ ಸರ್ವೇಶನ ಜಯಿಸಲುದೈತ್ಯದಾನವಜರೆಸುತ ಬರುತಿರಲು ಶ್ರೀಹರಿತಾ ತಿಳಿದುಉತ್ತಮ ದ್ವಾರಕಾಪುರ ರಚಿಸುತಲಿ ಜಲಮಧ್ಯದೊಳಿರಲುಪಟ್ಟದರಿಸಿ ಅಷ್ಟ ಸತಿಯರು ಸೌಳಸಾಸಿರ ಸತಿಯರ ಕೂಡುವ ಹರುಷದಿಕರ್ತೃಕಮಲನಾಭ ವಿಠ್ಠಲ ಭಕುತರಇಚ್ಛಿಸಲಿಸಲೀಪರಿ ನಟಿಸಿದ ಬಹು 5
--------------
ನಿಡಗುರುಕಿ ಜೀವೂಬಾಯಿ
ಚೂರ್ಣಿಕೆಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾಕಾಳಿಯ ದಮನಾ ಭುವನತ್ರಯಾಕ್ರಮಣಪದ್ಮಾಲಯಾ ರಮಣ 1ಧನದಮಾತಿರಲಿ ಗೋಧನದ ಮಾತಿರಲಿಭೂಧನದಮಾತಿರಲಿ ಶೌರೀಧನವೆಲ್ಲವೂ ಕರ್ಮವನು ಬೆನ್ಹಿಡಿದುಬಹದೆನುತಾಡುವರೊ ಮುರಾರಿತನುವು ನಿನ್ನಯ ಸೇವೆಯನು ಮಾಡುತಿರಲಿಕಂಸಾರಿಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿಈ ಕೃಪೆಯಭೂರೀ ದುರ್ಜನವಿದಾರೀಸುಜನೋಪಕಾರೀ ಗಿರಿನಾಥ ಧಾರೀಪಾಪಹಾರಿದಿತಿಜಾರಿನಿರ್ವಿಕಾರಿ ಉದಾರಿ2ನಾಕದೊಳಗಿರಲಿ ಭೂಲೋಕದೊಳಗಿರಲಿಅಧೋಲೋಕದೊಳಗಿರಲಿ ನಾನೂಶ್ರೀಕಾಂತ ನಿನಗೆ ಬೇಕಾದವನೆನುತ್ತಸಾಕಬೇಕೆನ್ನ ನೀನೂ ಭಕ್ತಜನಕಾಮಧೇನುಹೇಳಬೇಕಾದುದಿನ್ನೇನು 3ಬಿದ್ದಿರುವೆನೈ ರಜೋಗುಣದಿಒದ್ಯಾಡುತಿಹೆನೊ ಸಂಕಟದಿಇದ್ದು ಫಲವೇನೊ ಈ ಭವದಿಉದ್ಧರಿಸು ಕೃಪಾಜಲಧಿ 4ಬದ್ಧನಾನಯ್ಯ ಈ ಜಗದಿಶುದ್ಧಬುದ್ಧಿಯ ನೀಯೊ ಮುದದಿಕೃದ್ಧನಾಗದಿರೆನ್ನ ದುಷ್ಕøತದಿಎದ್ದು ಬಾರೆನ್ನಡಿಗೆ ದಯದಿಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ 5
--------------
ತಂದೆ ಮುದ್ದುಮೋಹನ ವಿಠಲರು