ಒಟ್ಟು 32405 ಕಡೆಗಳಲ್ಲಿ , 137 ದಾಸರು , 8458 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂದೇಹ ವೇತಕೆ ಸರ್ವೇಶಾ ಇಂದೆನ್ನ ಹೃದಯಾದಿ ನಿಂದೆನ್ನ ರಕ್ಷಿಸಲು ಪ ಹಿಂದೆ ನೀ ಸಲಹಿದವರು ಹೊಂದಿದವರೇನಾ ಪಾದ ಹೊಂದಲಲ್ಲೇ ಬಂದೆನ್ನ ಅತಿತ್ವರದಿಂದೆನ್ನ ಕೈಯಪಿಡಿದು ಅಂಧ ನಾ ತೋರಿಸಾ ನಂದನ ಸುತಹರಿ 1 ಭಂಡಾರ ವುಳ್ಳವನಾಗಿ ನೀನುಯನ್ನ ಕಂಡಾರೆ-------------- -------------- ಏನು ಹೆಂಡಾರ ಮೇಲೆ ದೃಷ್ಟಿ ಗಂಡಾರಿಗಿಲ್ಲದಿರೆ ದುಂಡೇರಿಗೇನುಗತಿ ಪುಂಡರೀಕ್ಷಾಕ ಹರಿ 2 ನಿನ್ನನ್ನೇ ನಂಬಿದವ ನಾನು ಇನ್ನು ಯನ್ನಾ ನೀಕಡೆ ದೃಷ್ಟಿ ನೋಡ್ವದೇ ನೋ ನಿನ್ನಾಣೆ ನಿನಗೆ ಇನ್ನು ಎನ್ನ ನೀ ಸಲುಹದಿರೆ ಮುನ್ನೀನಾ ದೋಷ ಕಳೆದು 'ಹೆನ್ನೆಯ ವಿಠಲಾ’ 3
--------------
ಹೆನ್ನೆರಂಗದಾಸರು
ಸದ್ಗತಿಗೆ ಅನ್ಯ ಸಾಧನ ಹೋಕು ಪ ತನ್ನ ತೋರುವಂತೆ ನಿಜವಾಗೀ | ಮನಸಿನ್ನ ಕದಡು ಗಳಸುವನು ಯೋಗೀ 1 ಓದಿ ಕೇಳಿ ತಿಳಿದರೇನು ಭೇದಿಸದು ನಿಜ ಸುಖ | ಸಾಧಿಸಿ ಬಯಲ ಗಂಬಾರನಲ್ಲಿ | ಮುತ್ತು ಇದ್ದರೇನು ಯಜ್ಞವಾಗದಲ್ಲಿ | ಅದಕ ಸಾಧು | ಜೋಹರೆನೆವೆ ಬುದ್ಧಿಯಲ್ಲಿ 2 ಗರಡಿಲಿಟ್ಟು ಹುಳುವ ತನ್ನ ಗುರುತ ತೋರುವದು ಭ್ರಂಗೀ | ಅರಿಯದೇನು ಜನಾ ಗಾದಿಯಲ್ಲಾ | ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ | ಇದು ಸಾರಿದನು ಮಹಿಪತಿ ಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸದ್ಗುರು ದಯಾ ಸಾಧ್ಯವಾಗದೇ ಜ್ಞಾನವಿಲ್ಲಾ | ಸದ್ಗತಿ ಕೀಲರಿತವನೇ ಬಲ್ಲಾ ಪ ಖಟಪಟ ವೃತದೊಳಿಲ್ಲಾ | ಘಟಮಟ ಶಬ್ದದೊಳಿಲ್ಲಾ | ಥಟ್ಟನೆ ಸಂಸಾರ ತೊರೆದರಿಲ್ಲಾ 1 ಬಹೂನಾಂ ಜನ್ಮನಾ ಜಾಯಂತೆ | ಜ್ಞಾನವಾನ್ ಮಾಂ ಪ್ರಪದ್ಯತೆ | ಶ್ರೀ ಹರಿ ಹೇಳಿದ ಗಾದಿಮಾತೆ 2 ವಸುಧಿಯೊಳೆಲ್ಲಾ ಜನಕೆ | ಹಿಂಗಾದರ ಸಾಧನ ಬೇಕು | ಋಷಿಮುನಿಗಳು ಸಾಹಸಬಡುವರ್ಯಾಕ 3 ಮನುಷ್ಯಣಾಂ ಸಹಸ್ರೇಷು | ವೆಂಬಾ ಗೀತೆಯ ನುಡಿಲೇಸು | ಜನದಲಿ ಗರ್ವಾಭಿಮಾನಿಗೆ ಬಿರುಸು 4 ಅಂಬು ತಾನು | ಎರಗುದೇ ಗುರಿಯಾ ಸ್ಥಳವನು | ಗುರುಮಹಿಪತಿ ನಂದನು ಸಾರಿದ ನಿಜನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸದ್ದು ಮಾಡಲು ಬೇಡವೋ-ನಿನ್ನ ಕಾಲಿಗೆಬಿದ್ದು ನಾ ಬೇಡಿಕೊಂಬೆ ಪ ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂದಿದ್ದದ್ದು ಕಂಡರೇನೆಂಬುವರೋ ರಂಗಅ.ಪ. ಬಳೆ ಘಲ್ಲುಕೆನ್ನದೇನೋ-ಕೈಯ ಪಿಡಿದುಎಳೆಯದಿರೋ ಸುಮ್ಮನೆಮೊಲೆಗಳ ಮೇಲಿನ ಸೆರೆಗನೆಳೆಯಲು ಕೊ-ರಳ ಪದಕಗಳು ಧ್ವನಿಗೆಯ್ಯುವವೊ ರಂಗ 1 ನಿರುಗೆಯ ಪಿಡಿಯದಿರೊ-ಕಾಂಚಿಯ ದಾಮಕಿರುಗಂಟೆ ಧ್ವನಿಗೆಯ್ಯದೆಕಿರುದುಟಿಗಳ ನೀನು ಸವಿದು ಚಪ್ಪರಿಸಲುತರವಲ್ಲ ಗಂಡ ಮತ್ಸರವ ತಾಳುವನಲ್ಲ 2 ನಾಡಮಾತುಗಳೇತಕೊ-ಸಂಗೀತವಪಾಡುವ ಸಮಯವೇನೊಗಾಡಿಕಾರ ಶ್ರೀ ರಂಗವಿಠಲನಪಾಡಿಪಂಥಗಳೊಡಗೂಡುವ ಸಮಯದಿ 3
--------------
ಶ್ರೀಪಾದರಾಜರು
ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ ಧ್ರುವ ಕಣ್ಣಿಂದ ಕಡಿಯಲಿಲ್ಲ ಚೆನ್ನಾಗೆಲೆವೆ ನೋಡಿ ಉನ್ನಂಥ ಮಹಿಮ ಪೂರ್ಣ ತಾನೆತಾನಾಗಿಹ್ಯ ಕೂಡಿ ಉನ್ಮನವಾಗಿ ಬ್ಯಾಗ ಘನಸುಖ ಬೆರೆದಾಡಿ ಪುಣ್ಯಕ ಪಾರವಿಲ್ಲ ಖೂನದೋರುದಿದರಡಿ 1 ಸದ್ಬಕ್ತಿಗಿದೇ ಕೀಲ ಸಾಧಿಸುವದೀ ವಿಚಾರ ಸದ್ಗತಿಗಿದೆಮೂಲ ಸಾಧುಜನರ ಸಹಕಾರ ಸಾಧಕರ ಸುಶೀಲ ಬುಧಜನರ ಮಂದಾರ ಸದ್ಫನದ ಕಲ್ಲೋಳ ವಸ್ತುದೋರುವ ವಿವರ 2 ಗುರುದಯದಿಂದ ನೋಡಿ ಇದೆರಿಟ್ಟುವಂತೀ ಖೂನ ಕರುಣಾಳು ಸ್ವಾಮಿ ನಮ್ಮ ತಾನೆದೋರಿದ ಸಾಧನ ತರಣೋಪಾಯಕ ಪೂರ್ಣ ತೋರುದಿದನು ಸಂಧಾನ ತರಳಮಹಿಪತಿಗಿದೆ ಇಹ್ಯ ಪರಕ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸದ್ಭಾವದಿಂದ ಗುರುವೇ ಗುರುವೆಂದು ಬಾಗಿ ಸದ್ಭಕ್ತನಾಗಿ ಮರಿಯಾ ಮರಿಯಾದೆ ಹೋಗಿ ಸದ್ಭೋಧಸಾರ ಗರವಾ ಗರವಾಮೃತಾದಾ ಚಿದ್ಭಾನುದೋರಿ ಹೊರೆವಾ ಹರಿವಾಭವಾಂಧಾ 1 ಗುರುಪಾದ ಕಾಣದನಕಾದನ ಕಾವನಾಗೀ ಮರದೆನ್ನ ತನ್ನದೆನುತಾದೆನುತಾಂನರಾಗಿ ಅರಿತೀಗ ಮಾಡಿ ಗುರುತಾಗುರು ತಾತನಂಘ್ರಿ ಪರಮಾರ್ಥವಸ್ತು ವರ ದೇವರ ದೇಶಸಾರಿ 2 ಗುರುಮಾರ್ಗ ಬಿಟ್ಟು ಬರುದೇ ಬರುದೇನೊ ಪ್ರಾಣಿ ಅರತೇನುಶಾಸ್ತ್ರ ಪರಮಾಪರಮಾರ್ಥಗಣೀ ಇಂದು 3 ಗುರುಹಸ್ತಮಸ್ತಕದಲೀ ಕದಲೀತೆ ಕ್ಲೇಶಾ ದೊರವನು ಹೃತ್ಕಮಲದಾಮಲದಾತ್ಮ ಈಶಾ ಗುರುಮಿತ್ರ ಮಾತೃ ಜಕನಕಾಜನಕಾರ್ತಬಂಧು ಶರಣ್ಹೋಕ್ಕು ನೋಡಿ ಸುಖವಾ ಸುಖವಾಗದೆಂದು4 ಇರುತಿಪ್ಪನೆಲ್ಲಿ ಗುರುತಾ ಗುರುತಾದ ಕಾಶೀ ನೆರೆಗಂಗಿ ಪಾದತೀರ್ಥತೀರಥಾಧರಾಶಿ ಗುರು ವಿಶ್ವನಾಥನೆನುವಾನೆನುವಾವನೆಲ್ಲಿ ನರರೋಳು ಧನ್ಯ ತಮನುತ್ತ ಮನೊರ್ವಿಯಲ್ಲಿ5 ಕಾಣದೆ ಕಂಗಳಲಿತಾ ಲಲಿತಾದ ನೋಟಾ ಜಾಣೀಸಿ ಕೋಟಿ ತರಣೀ ತರುಣೀಯ ಕೂಟಾ ಕಾಣೀಸಿ ಉನ್ನಮನೆಯಾ ಮನಿಯಾವೆ ನೋಡಿ ಪ್ರಾಣವಕಾವ ಗುರುವೀ ಗುರುವೀನ ಪಾಡಿ 6 ಮನಮುಟ್ಟಿಮುದ್ರಿ ಸಲಿತಾಸತಿತಾಳಭೇರಿ ಅನುಹಾತ ಘೋಷಶ್ರವಣಾಶ್ರವಣಕ್ಕೆ ಬೀರಿ ತನುಭಾವವನ್ನು ಮರಸೀ ಮೆರಸೀದನೆಂದು ನೆನಿಬೇಕು ಸದ್ಗುರುವಿನಾರೂವ್ಹಿನಾಗತಂದು 7 ಗುರುಮೂರ್ತಿಗೆಂದನರನೇ ನರನೇವನವನು ಗುರುಭಕ್ತಿ ಗಳ್ಳಕುಶಲಾಕುಶಲಾದವನು ಗುರುನಾಮ ಕೂಗದವನೈದುವನೇ ಗತಿಯಾ ಗುರುಪಾದಪೂಜಿಮರತಾ ಮರತಾವನೀಯಾ 8 ಗುರುಅಷ್ಟಕದ ಮಹಿಮಾ ಮಹಿಮಗೇಬಲಾ ಸ್ಮರಿಸೀದನ್ನು ಭಕುತೀಭಕುತೀವದೆಲ್ಲಾ ಗುರು ಮಹೀಪತಿ ಕರುಣಾ ಕರುಣ ನುಪಾಡೀ ಕರಕೊಂಡುಜ್ಞಾನಸುಧೆಯಾ ಸುಧಿಯಾದೆ ನೋಡಿ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸನುಮತವೆಂಬುದಿಲ್ಲ ಅನುನಯವಿಲ್ಲ ಪ ಮಮತೆಯೆಂಬುದು ಇಲ್ಲ ಇನಿತುಗುಣವಿಲ್ಲ ವನಜನಾಭನ ನೆನೆವಾ ತನುವೆನ್ನೊಳಿಲ್ಲಾ ಅ.ಪ ಪಂಚಭೂತಗಳೆಲ್ಲ ಸಂಚು ಮಾಡುತಲಿಪ್ರ ಪಂಚದ ಸುಖದೊಳು ಪಂಚೇಂದ್ರಿಯಗಳಾ ಹಂಚುತೆ ಮನವನು ಚಂಚಲಗೈದುವಲ್ಲ ಅಂಚೆಯಿಲ್ಲದ ಸರಸಿಯಂತಾಗಿಯೆನ್ನ 1 ಹರಿಯ ನೋಡುವ ನೇತ್ರ ಪರನಾರಿಯರ ಸೊಬಗ ಹರಿಯ ಪೂಜಿಪ ಹಸ್ತ ಪರರ ವಿತ್ತಂಗಳರಸಿ ಹರಿ ತುಳಸಿಯ ತೊರೆದು ಪರಿಮಳವ ನಾಸಿಕವಾಂತು ಹರಿಗೆರಗುವ ಶಿರವು ಗರುವವ ಬಯಸಿದೆ 2 ಚಕ್ರಪಾಣಿಯಮರೆದು ತಕ್ರಾನ್ನವನು ಸವಿದು ಮುಕ್ತಿ ಚರಿತೆಯ ತೊರೆದು ಅಕ್ಕರೆಯಿಂದಾ ಕರ್ಣ ಠಕ್ಕು ಕೌಳಿಯ ಮೆದುಳು ಸೊಕ್ಕಿ ಬಯಸುತಲಿವೆ ದಿಕ್ಕಾರೋ ಯೆನಗೇ 3 ಸುಡುಯಿದುರ್ನೇತ್ರವ ಕೊಡು ದಿವ್ಯದೃಷ್ಟಿಯ ತೊಡೆ ಯೀ ದುರಿಂದ್ರಯಗಳ ಕೊಡು ಸತ್ವಗುಣವಾ ದೃಢಗೈದು ಒಮ್ಮೆ ಮಾತ್ರ ಅಡಿಗೆರಗುವೆನಯ್ಯ ಬಿಡಬೇಡ ಎನ್ನ ಕೈಯ ಮಾವಿನಾಕೆರೆರಂಗಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತ ವಿಠಲ | ಇವನ ಪೊರೆಯೋ ಪ ಅವಿಕಾರಿ ಆದ್ಯ ನಿರ | ವದ್ಯ ಎಲೊ ಹರಿಯೆ ಅ.ಪ. ತೈಜಸನೆ ನೀನಾಗಿ | ಮಾಜದಲ್ಯುಪದೇಶಯೋಜಿಸುವೆನೆಂದೆನುತ | ಪೇಳ್ದುದಕ್ಕಾಗೀಆರ್ಜವದ ಮನದಲ್ಲಿ | ಪ್ರಾರ್ಥಿಸಲು ಸ್ವಪ್ನದಲಿಯೋಚಿಸಿಹೆ ಅಂಕಿತವ | ಹೇ ನೈಜಮೂರ್ತೇ 1 ಚಿಣ್ಣನಿರುವನು ಇವನು | ಕಣ್ಣೆಗೆವೆಯಂದದಲಿಇನ್ನೀವನ ಕಾಯುವುದು | ಬನ್ನಬಡಿಸದಲೇಅನ್ನ ಆರೋಗ್ಯಕ್ಕೆ | ನಿನ್ನನೆ ಮೊರೆಯಿಡಲಿಅನ್ಯ ಹಂಬಲ ನೀಗೊ | ಪನ್ನಂಗ ಶಯನಾ 2 ತೊಡರು ಬರಲಿ | ಬಿಡದೆ ನಿನ್ನಂಘ್ರಿಯನುಧೃಡಭಕ್ತಿಯಿಂ ಸ್ಮರಿಪ | ಮುದ ಮನವ ನೀಯೋ |ಎಡಬಲದಿ ನೀನಾಗಿ | ಬಿಡದೆ ಬೆಂಬಲ ವಿರಲುಕಡು ಭವಾರ್ಣವವೆಲ್ಲ | ಅಡಿಯ ಪರಿಮಿತಿಯೋ 3 ಸಿರಿ ವಾಯು ಮೊದಲಾದಸುರರೆಲ್ಲ ಹರಿಯ ಕಿಂಕರರೆಂಬ ಮತಿಯಿತ್ತುಪೊರೆವುದಿವನನ ಎಂದು | ಹರಿಯೆ ಭಿನ್ನವಿಪೆ 4 ನಾಮ ಸ್ಮರಣೆ ಯೆಂಬ | ವಜ್ರಕವಚವ ತೊಡಿಸಿಈ ಮಹಾ ಕಲಿಯುಗದಿ | ಸಾಧನವ ಗೈಸೋಶ್ರೀ ಮನೋಹರ ಗುರು | ಗೋವಿಂದ ವಿಠಲಯ್ಯಈ ಮಹತ್ತುಪಕಾರ | ನಾ ಮರೆಯನಯ್ಯ 5
--------------
ಗುರುಗೋವಿಂದವಿಠಲರು
ಸನ್ನುತ ಸತತ ಸದ್ಗುಣಪೂರ್ಣ ಪ್ರಥಮಾಂಗ ಸಂಪೂಜ್ಯ ಶರ್ವಮಿತ್ರ ಪ ಪ್ರತಿ ಪ್ರತಿ ಕ್ಷಣ ನಿನ್ನ ಪತಿತಪಾವನ ಪಾದ ಕ್ಕತಿ ದೈನ್ಯದಲ್ಲೆರಗಿ ಮೊರೆ ಇಡುವೆ ಪೊರೆಯೆಂದು ಅ.ಪ. ಕೋರಿದರೆ ಮನಕರಗಿ ಹಾರಿ ಬರುವಿಯೆಂದು ನಾರದರೆ ಮೊದಲಾದ ನಿಜಭಕ್ತರೆಲ್ಲ ಸಾರಿಹರು ಸರ್ವೇಶ ಸಾರತಮ ಸರ್ವರೊಳು ಘೋರ ಭವದಿಂದೆನ್ನ ಪೊರೆ ಎನಲು ಬರೆಯಂತೆ 1 ಕೃಪೆಯಿಂದ ನೀ ನೋಡೆ ಬ್ರಹ್ಮಾಂಡ ದೋಷಗಳು ಲುಪ್ತವಾಗುವುದಯ್ಯ ಒಂದೆ ಕ್ಷಣದಿ ನಿಪುಣನಾಗುವನವನು ಇಹಪರ ನಿಧಿ ಒದಗಿ ಅಪರಿಮಿತ ಸುಖ ಉಣುವ ಅಪ್ರತಿಮ ಕೀರ್ತಿಯು 2 ವಿಧಿ ಶಿವ ಶಕ್ತ ಸುರರಿಂದ ಸಂಸೇವ್ಯ ಜಯೇಶವಿಠಲ ಕೀರ್ತಿಪೂರ್ಣಾ ಪರಿ ದೋಷಗಳು ಪರಮ ಕೃಪೆ ವೀಕ್ಷಣದಿ ಪರಿಹರಿಸಿ ಬೆರೆ ಎನ್ನ ಪರಭಕ್ತಿ ನಿಧಿ ಇತ್ತು 3
--------------
ಜಯೇಶವಿಠಲ
ಸನ್ನುತ ಪಾದ ಭಕುತಿಯ ಬಿತ್ತಿ 1ದೇಹವೆ ನಾನೆಂಬ ದೈನ್ಯವ ಬಿಡಿಸಿಸಾಹಸದಲಿ ಸಕಲ ಸಾಧನವ ತೊಡಿಸಿಮೋಹ ಮತ್ಸರವೆಂಬ ಮೋಸವ ಕೆಡಿಸಿಸೋಹಮೆಂಬರಿವಿನಲ್ಲಿ ಸೊಗಸಾಗಿ ನಡೆಸಿ 2ಕಾಲಕರ್ಮಂಗಳ ಮೂಲವ ಕಿತ್ತು ಗೋಪಾಲಾರ್ಯ ನಿಜಸುಖ ಶೀಲವನಿತ್ತುಮೇಲಾದ ಮುಕುತಿಯ ಕೀಲಕಳೆದೆತ್ತುಶ್ರೀಲಕ್ಷ್ಮಿಯರಸನೆ ಚಿತ್ತವನಿತ್ತು 3
--------------
ಗೋಪಾಲಾರ್ಯರು
ಸನ್ಮಾರ್ಗಪಿಡಿದು ಸದ್ವಸ್ತಿಯೊಳು ಬೆರೆದಿಹ ಸದ್ಬ್ರಹ್ಮರಿಗೆ ನಮಸ್ಕಾರ 1 ಸದ್ಗುರು ಕೃಪೆಯಿಂದ ಸದ್ಗತಿಯ ಪಡೆದಿಹ ಸದ್ಭಕ್ತರಿಗೆ ನಮಸ್ಕಾರ 2 ಅಧ್ಯಾತ್ಮವಿದ್ಯ ಸಾದ್ಯ ಮಾಡಿಕೊಂಡಿಹ ಬುದ್ಧಿವಂತರಿಗೆ ನಮಸ್ಕಾರ 3 ಸಿದ್ಧಾಂತ ಅನುಭವದ ಸಾಧನವು ಬಲಿದಿಹ ಶುದ್ಧ ಬುದ್ಧರಿಗೆ ನಮಸ್ಕಾರ 4 ಇದೆ ನಿಜತಿಳಿದಿಹ ಸದ್ಬೋಧದಲ್ಲಿ ಪೂರ್ಣ ಸದ್ಭಾವಿಗಳಿಗೆ ನಮಸ್ಕಾರ 5 ಆದಿತತ್ವದ ನೆಲೆಯು ಭೇದಿಸಿ ಬೆರೆದಿಹ ಬುದ್ದಜನರಿಗೆ ನಮಸ್ಕಾರ 6 ಕ್ರೋಧ ಕಳೆದು ಸದಾ ಶಾಂತಪದಹೊಂದಿದ ಸಾಧುರಿಗೆ ನಮಸ್ಕಾರ 7 ಭಿನ್ನ ಭೇದವನಳಿದು ತನ್ನ ತಾ ತಿಳಿದ ಸುಜ್ಞಾನಿಗಳಿಗೆ ನಮಸ್ಕಾರ 8 ಮೇಲ್ಗಿರಿಯೊಳಗಿಪ್ಪ ಮೂಲಮೂರ್ತಿಯ ತಿಳಿವ ನೆಲೆವಂತರಿಗೆ ನಮಸ್ಕಾರ 9 ಮಾಯಮೋಹವನಳಿದು ಸೋಹ್ಯ ಸೊನ್ನೆಯ ತಿಳಿದ ಮಹಾಮಹಿಮರಿಗೆ ನಮಸ್ಕಾರ 10 ಆರುಮೂರನೆ ಗೆದ್ದು ಏರಿ ತ್ರಿಪುರ ದಾಟಿ ಮೀರಿಹರಿಗೆ ನಮಸ್ಕಾರ 11 ಮನಕರಗಿ ಘನ ಬೆರೆದು ತಾನೆ ತಾನಾಗಿಹ ಮೋನ ಮುಗ್ಧರಿಗೆ ನಮಸ್ಕಾರ 12 ತತ್ವಮಸಿ ಅರ್ಥದಿತ್ಯರ್ಥವನು ತಿಳಿದಿಹ ಮುಕ್ತಜನರಿಗೆ ನಮಸ್ಕಾರ 13 ತಾನರಿತು ಸುಖಿಯಾಗಿ ಇನ್ನೊಬ್ಬರಿಗೆ ಕಣ್ದೆರೆಸುತಿಹರಿಗೆ ನಮಸ್ಕಾರ 14 ತರಳ ಮಹಿಪತಿ ಹೊರೆವ ಅರುಹು ಕುರುಹವನಿತ್ತ ಗುರುಹಿರಿಯರಿಗೆ ನಮಸ್ಕಾರ 15
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಪತ್ತು ನಿನಗಿಂದು ಪೊಸದಾಯಿತೆ | ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪ ಪಾಲು ಮೊಸರು ಕದ್ದು ಗೋವಳರೆಂಜಲನುಂಡು | ತಾಳ ಫಲಗಳ ಮೆದ್ದದು ಮರದಿಯಾ || ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು | ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು 1 ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ | ಕೊಂಡು ಭಂಡಾಗಿ ಇದ್ದದು ಮರದಿಯಾ || ವಾಹನ | ಕರ ಮುಗಿದು ಕೊಂಡಾಡುವ ಭರವೊ 2 ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ | ವತಿಯಲ್ಲಿ ವಾಸವಾದದು ಮರದಿಯಾ || ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ | ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ 3 ಈ ವೈವಸ್ವತ ಮನ್ವಂತರ ಉಳ್ಳತನಾಕಾ | ಕರ್ಮ ತಪ್ಪಲರಿಯದು || ಕೋವಿದರು ಪೇಳುವದು ಪುಸಿ ಎನ್ನದಿರು ದೇವ | ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ 4 ಕ್ಲೇಶ ಕಳಿಯದಿರಲು | ಭಕುತವತ್ಸಲನೆಂಬ ಬಿರಿದು ಬರಿದೇ || ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | ವಿ |ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ 5
--------------
ವಿಜಯದಾಸ
ಸಪ್ತಕೋಟಿ ಮಹಾಮಂತ್ರಾರ್ಥ ಹೃದಯಾಬ್ಜ ಚಕ್ರಮಂಡಲದೊಳು ಪ್ರತಿಪಾದ್ಯ ಪ ಮುದದಿಂದ ಜ್ಞಾನೇಛ್ಛಾ ಕ್ರಿಯಾ ಶಕ್ತಿ ತ್ರಯಗಳು ತದಭಿಮಾನಿಗಳ ನೆನೆದುದಳದಿ ಸೂರ್ಯ ಕರಿ ಅಜ ರಥ ವೀಥಿಗಳಧಕರಿಸಿ ಅದರ ಮೇಲೊಂದು ಮಂಡಲ ನಿರ್ಮಿಸಿ ಷÀಟ್ಸರೋ- ಜದಳಗಳನೆ ರಚಿಸಿ ಇದರೋಳು ಪೂರ್ಣ ಜ್ಞಾನ್ವೆಶ್ವರ್ಯ ಪ್ರಭಾನಂದ ತೇಜ ಸತ್ಯಮೂರ್ತಿಗಳ್ಚಿಂತಿಸೀ ಮಾಸ ತಾರಾರಾಶಿಗಳ ಗುಣಿಸಿ ಬದಿಯಲಿ ಏಕಾ ಪಂಚಾಶದ್ವರ್ಣ ತಿಳಿಯೋದಿದು ವ್ಯಾಪ್ತಿ 1 ಮೇಲೊಂದು ಮಂಡಲದ ಅಷ್ಟದಳಗಳಲಿ ಅಷ್ಟ ಬೀಜಾಕ್ಷರಗಳನೆ ರಚಿಸೀ ಶನಿ ರಾಹು ಗುರು ಬುಧ ಶುಕ್ರ ಸೋಮ ಮಂಗಳ ಕೇತುಗಳ ನಿರ್ಮಿಸಿ ವಲಯದಿ ಪ್ರಣವದಷ್ಟಕ್ಷರಗಳ ನಿರ್ಮಿಸಿ ವಿಶ್ವಾದ್ಯಷ್ಟರೂಪನನೆ ಚಿಂತಿಸಿ ಅದರಿಂದಭಿವ್ಯಕ್ತ ವರ್ಣಗಳ್‍ಭಜಿಸೀ ವರ್ಗಕೆ ತತ್ವತನ್ಮಾನಿಗಳನೆ ಚಿಂತಿಸಿ ಅಷ್ಟಾಕ್ಷರಾತ್ಮಕನ ದೃಢಮನಸಿನಿಂದ ಸ್ತುತಿಸಿ ಇದು ವ್ಯಾಪ್ತಿ2 ಮೇಲೊಂದು ಮಂಡಲ ದ್ವಾದಶದಳದೊಳ್ ದ್ವಾದಶ ಬೀಜಾಕ್ಷರ ಕೇಶವಾದಿ ದ್ವಾದಶನಾಮ ವರ್ಣವಿಭಾಗವು ರಾಶಿಗಳ ವಿವರ ವಲಯದಿ ತಾರಾಯೋಗಗಳ್ವಿಸ್ತಾರ ಮೇಲ್ಮಂಡಲದೊಳು ಚತುರ್ವಿಂಶತಿ ಬೀಜಾಕ್ಷರ ಕೇಶವಾದಿನಾಮ ತಾರೆರಾಶಿಗಳೆಣಿಸೀ ಮೇಲೆ ಐವತ್ತೊಂದು ಅಜಾದಿಗಳ ಚಿಂತಿಸಿ ಅಲ್ಲಿಹ ಶ್ರೀ ವೇಂಕಟೇಶಾತ್ಮಕ ಶ್ರೀ ಉರಗಾದ್ರಿವಾಸವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಸಪ್ತಾನ್ನ ತಿಳಿವುದು ಸಾಧನವಯ್ಯ ಪ ಆಪ್ತ ಹರಿಯು ಕೊಟ್ಟ ಬುದ್ಧಿಯಿಂದಲಿ ಜನರು ಅ.ಪ ಮಕ್ಕಳು ಮೊದಲಾದವರ ಪೋಷಣೆ ಒಂದು ಪಕ್ಕಿಗೆ ಮೇವನ್ನು ಕೊಡುವುದೊಂದು ಅಕ್ಕರದಲಿ ಗೋಗೆ ತೃಣವ ನೀಡುವುದೊಂದು ಲೆಕ್ಕವಿಲ್ಲದ ಫಲವು ಅತಿಥಿ ಪೂಜೆ 1 ತಾತ ಮೊದಲಾದ ಹಿರಿಯರಪೂಜೆ ಆರು ತಾತಿಳಿದು ಉಂಬೋದು ಏಳನೆಯ ಅನ್ನವು ಶ್ರೀತರುಣೀವರನ ಸೇವಕರೆ ಕೇಳಿ 2 ಭೂಸುರ ಜನ್ಮವು ಸಾರ್ಥಕವು ಶ್ರೀಸತಿಯರಸ ಶ್ರೀ ಗುರುರಾಮ ವಿಠಲ ದಾಸತ್ವವಿತ್ತು ಎಂದೆಂದಿಗೂ ಪೊರೆವ 3
--------------
ಗುರುರಾಮವಿಠಲ
ಸಂಪ್ರದಾಯದ ಹಾಡು ವೆಂಕಟೇಶನ ಉರುಟಣೆಯ ಹಾಡು ಭಾರ್ಗವಿ ರಮಣಾ | ಜಗದಾಭಿ ರಮಣಾ ಪ ಲೋಕನಾಯಕ ಸ್ವಾಮಿ | ವೈಕುಂಠಾದಿಂದ ಬಂದೂಏಕಾಂತವಾನಾಡಿದಾ | ಲಕ್ಷೀಯರೊಡನೆ 1 ಧರೆಗೆ ವೈಕುಂಠಾದ | ಚರ್ಯವ ತೋರುವೆನೆಂದುಶಿರಿ ಮಹಾಲಕ್ಷೀಯೊಡನೆ | ಸಂಧಿಸಿದಾನೂ 2 ಸ್ವಾಮಿ ಕಾಸಾರದಲೀ | ಧಾಮಾವ ರಚಿಸೂವೆಆ ಮಹಾ ವೈಕುಂಠಾವ | ಅಗಲೀ ಬಂದೂ 3 ವತ್ಸರ ಕಾಲದಲೊಂದು | ಉತ್ಸವ ಮಾಡುವೆನೆಂದುಇಚ್ಛೆ ಮಾಡಿದನೂ ವೆಂಕಟ ಇಂದಿರೆಗೂಡಿ 4 ನವರಾತ್ರಿ ದಿವಸದಲೀ | ವಿವಾಹ ಲಗ್ನವ ರಚಿಸೀಅವನಿಯೊಳು ಡಂಗುರವನ್ನು ಹೊಯಿಸೀದ ಸ್ವಾಮೀ 5 ಕಾಶಿ ಕರ್ನಾಟಕದ | ದೇಶಾ ದೇಶದ ಜನರುಶ್ರೀಶಾನುತ್ಸವಕೇ ಜನರು ಒದಗೀದರಾಗಾ 6 ಹದಿನಾಲ್ಕು ಲೋಕಾದ | ಪದುಮಜಾದಿಗಳೆಲ್ಲಾ ಮದುವೆಯಾ ದಿಬ್ಬಣದಾ | ಜನರು ಬಂದರಾಗಾ 7 ಗರುಡಾ ಕಂಬದ ಸುತ್ತಾ | ಪರಿಪರಿ ವೈಭವದಿಂದಗಿರಿಯಾ ವೆಂಕಟಗೇ | ಕಂಕಣ ಕಟ್ಟಿದರಾಗಾ 8 ಆಗಮಾ ಪುರಾಣ | ರಾಗ ಮದ್ದಳೆ ತಾಳಭಾಗವತರೂ ಸುತ್ತ ಮಾಡುತಿರಲೂ 9 ತಾಳ ತಮ್ಮಟೆ ಕಾಳೆ | ಭೋರೆಂಬೋ ವಾದ್ಯಗಳೂವರ ನಾರಿಯರು ಸುತ್ತಾಗ್ಹಾಡುತಿರಲೂ 10 ಚಿನ್ನದ ಕರಿಮಣಿ | ರನ್ನ ಮಂಗಳಸೂತ್ರಹಿರಿಯಾ ವೆಂಕಟನೂ ಲಕ್ಷ್ಮೀಗೆ ಕಟ್ಟಿದ ನಗುತಾ 11 ಮುತ್ತಿನಾ ಕರಿಮಣಿ | ರತ್ನ ಮಂಗಳಸೂತ್ರಾಸ್ವಾಮಿ ವೆಂಕಟ ಲಕ್ಷ್ಮೀಗೆ ಕಟ್ಟಿದ ನಗುತಾ 12 ಅಂತರಾ ಮಾರ್ಗದೊಳೂ | ನಿಂತು ದೇವತೆಗಾಳು ಸಂತೋಷದಿಂದಲಿ ಜಯ ಜಯವೆಂದು ಪಾಡಿದರಾಗ 13 ಅಂಗಾನೆ ಶ್ರೀ ಭೂಮಿ | ರಂಗಾಮಂಟಪದೊಳಗೆಬಂಗಾರ ಗಿರಿಯಾ ವೆಂಕಟ ಒಪ್ಪಿದ ಸ್ವಾಮೀ 14 ಅತಿರಸಾ ಮನೋಹರ | ಮಿತಿಯಿಲ್ಲದ ಪದಾರ್ಥಗಳೂಸತಿಯರೆಲ್ಲರು ಭೂಮಕೆ ತಂದು ಬಡಿಸಿದರಾಗ 15 ಬೆರದ ನಾರಿಯರೆಲ್ಲ | ಹರಿಭೂಮಾ ನಂತರದೀಭರದಿ ಉರುಟಣಿಗೆ ಅಣಿ ಮಾಡಿದರಾಗಾ 16 ಮಿತ್ರೆ ಲಕ್ಷ್ಮೀಗೆ ತಕ್ಕ | ಹಿರಿಯರು ಪೇಳಲುಛಂದದಿಂದಲಿ ಅರಿಷಿನ ಕಲಸಿ ನಿಂತಳಾಗ 17 ಪನ್ನಗ ನಗವಾ | ಸೇರಿದ ಮಹರಾಯದುಡ್ಡು ದುಡ್ಡಿಗೆ ಬಡ್ಡಿಯನ್ನು ದುಡಿವಾ ಲೋಭಿ 18 ವಂಚಿಸಿ ಜನರನ್ನು | ಲಂಚಾ ಲಾವಣಿ ತೆಗೆದುಹಿಂಚಾಸಿ ವರ ಕೊಡುವಾ ಹಿತದಾ ದೇವಾ 19 ಬಡವಾ ಬಲ್ಲಿದರೆಂದು | ಬಿಡದಾಲೆ ಅವರಿಂದಮುಡುಪು ಹಾಕಿಸಿಕೊಂಡು (ಮುಂದಕೆ) ಬಿಡುವೋ ದೇವಾ 20 ಅನ್ನವೆಲ್ಲವ ಮಾರಿ | ಹೊನ್ನು ಕಟ್ಟುವೆಯಲ್ಲೊಅನ್ನದಾನವ ಮಾಡಲೊಲ್ಲಿ ಅನ್ಯಾಕಾರಿ 21 ಹೊನ್ನು ಸಾಲವ ತೆಗೆದು | ಎನ್ನಾ ಕಟ್ಟಿಕೊಂಡುಮನೆ ಮನೆಗೆ ಭಿಕ್ಷವ ಬೇಡುವ ಮಾನವಂತಾ 22 ಹೊನ್ನು ಸಾಲದು ಎಂದು | ಎನ್ನ ಸಾಕುವೆ ಹೇಗೋನಿನ್ನಾ ಕೃಪಣತನಕೆ ನಾನು ಎಣೆಗಾಣೆನೋ 23 ಇಪ್ಪತ್ತು ದುಡ್ಡೀಗೆ | ಸೇರು ತೀರ್ಥವ ಮಾರಿದುಡ್ಡು ಕಟ್ಟಿ ಜಾಳಿಗೆ ಗಳಿಸುವ ಜಾಣ ನೀನೂ 24 ಅಟ್ಟಾ ಮಡಿಕೆಯಲ್ಲಾ | ಕುಟ್ಟಿ ನಾಮವ ಮಾಡಿಗಟ್ಟಿಯಾಗಿ ಗಂಟು ಗಳಿಸುವ ಘನವಂತಾ 25 ದೇಶದೊಳು ನಿಮ್ಮಂಥಾ | ಆಸೆ ಉಳ್ಳವರಿಲ್ಲಕಾಸು ಕಟ್ಟಿ ಕವಡೆ ಗಂಟು ದುಡಿವ ಲೋಭಿ 26 ಮಡದಿ ನಾನಿರಲಿಕ್ಕೆ | ಕಡಿಮೆ ಏನಾಗೋದುಬಡತನ ನಿನಗೆ ಯಾತಕೆ ಬಂತೂ ಸ್ವಾಮೀ 27 ನಾರೀಯಾ ನುಡಿ ಕೇಳಿ | ವಾರೆ ನೋಟದಿ ನೋಡಿಮೋರೆ ತಗ್ಗಿಸಿ ವೆಂಕಟ ಮುನಿದು ನಿಂತಾ 28 ಕಡುಕೋಪಾ ಮಾಡುವರೆ | ಹುಡುಗನಂತಾಡುವರೆಕೊಡಲೀಯ ಪಿಡಿವಾರೆ ನಾನು ನುಡಿದಾ ನುಡಿಗೇ 29 ಕಣ್ಣಾನೆ ಬಿಡಬ್ಯಾಡ | ಬೆನ್ನ ತೋರಲಿ ಬ್ಯಾಡಾಇನ್ನು ಮುಖವಾ | ತಗ್ಗಿಸಬ್ಯಾಡ ಇತ್ತ ನೋಡೂ 30 ಎನ್ನರಸಾ ಹೊನ್ನರಸಾ | ಚೆನ್ನಿಗ ವೆಂಕಟರಾಯಾನಿನ್ನ ಪೋಲುವರ್ಯಾರೊ | ಜಗದೊಳು ನೀಲಗಾತ್ರಾ 31 ಎನ್ನರಸಾ ಚೆನ್ನರಸಾ | ಚೆನ್ನಿಗ ವೆಂಕಟರಮಣಾನಿನ್ನ ಮುದ್ದು ಮುಖವ ತೋರೊ ಅರಿಷಿಣ ಹಚ್ಚೇನು 31 ಎನ್ನುತ ಅರಿಷಿಣ | ಹಚ್ಚಿ ಕುಂಕುಮವಿಟ್ಟುರನ್ನ ಹಾರವ ಹಾಕಿ ತಾನು ಕುಳಿತಾಳಾಗ 33 ಮಂದರಧರ ತಾನೂ | ಛಂದದರಿಶಿನ ಪಿಡಿದೂಇಂದಿರಾದೇವಿಯನ್ನು ಮಾತನಾಡಿಸಿದಾ 34 ಎನ್ನರಸಿ ಹೊನ್ನರಸಿ | ಚೆನ್ನಿಗ ಮಾಯಾದೇವಿನಿನ್ನ ಮುದ್ದು ಮೊಗವಾನೆ ತೋರು ಅರಿಷಿನ ಹಚ್ಚೇನು 35 ಭಿಡೆಯಾ ನೋಡದೆ ಇಂಥಾ | ನುಡಿಗಳಾಡಿದ ಮ್ಯಾಲೆನಡುಗಿ ಮೋರೆಯ ತಗ್ಗಿಸಲಿಹುದೆ ನಾಚಿಕೆ ಯಾಕೆ 36 ಭಾಗ್ಯಾದ ಮೊಬ್ಬಿಲಿ | ಬಾಗಿ ನೀ ನಡೆಯಾದೇಅಗ್ಗಳಿಕೆ ಮಾತುಗಳನ್ನು ಆಡಿದೆಯಲ್ಲೇ 37 ಮಿಂಚಿನಂದದಿ ಬಹಳಾ | ಚಂಚಲ ಬುದ್ಧ್ಯವಳೇವಂಚಿಸೂವಳೆ ಜಗವಾ ವಾರಿಜಾಕ್ಷೀ 38 ಬಂಗಾರಾ ಮುಡುಪಿಗೆ | ಎನ್ನ ಕಂಗೊಳಿಸೀಗಾ ಹಿಂಗಾದೆ ಮಂಕು ಮಾನವರ ಮಾಡುವುದರಿದೇ 39 ಕಂಚುಕ ವೆಂಕಟ ಬಿಗಿದಾ ನಗುತಾ 40 ತಾಂಬೂಲವನೆ ಮೆದ್ದು | ಮಡದಿಯಾ ಮುಖ ಸೂಸೆಇಂಬೀಲ್ಹಚ್ಚೆ ಬರೆದರಾಗ ಅತಿ ಸಂಭ್ರಮದೀ 41 ತಿರುಮಲೇಶನು ತನ್ನ | ಮಡದೀಯನು ಎತ್ತಿಭರದಿಂದಾ ತನ್ನರಮನೆಗಾಗಿ ತೆರಳಿದಾನು 42 ದ್ವಾರದಾದಡಿಯಲ್ಲಿ | ನಾರೇರೆಲ್ಲರು ನಿಂತುವಾರಿಜಾಕ್ಷಿ ಪತಿಯ ಹೆಸರಾ ಹೇಳೆಂದರು 43 ಕಿರುನಗೆಯಿಂದ ಲಕ್ಷ್ಮೀ | ಗಿರಿಯಾ ವೆಂಕಟನೆನಲೂಹರಿಯೆ ನಿನ್ನ ರಮಣಿ ಹೆಸರಾ ಹೇಳೆಂದರೂ 44 ಜಾತಿ ನಾಚಿಕೆ ತೊರೆದು | ಶ್ರೀ ತರುಣಿ ಎನುತಾಲೆಪ್ರೀತಿಯಿಂದಲಿ ಸಿಂಹಾಸನದಿ ಕುಳಿತರಾಗಾ 45 ಮತ್ತೆ ನಾರಿಯರೆಲ್ಲಾ | ಮುತ್ತಿನಾರತಿ ಪಿಡಿದೂಸತ್ಯಾಭಾಮೆಗೆ ಜಯ ಜಯವೆಂದರಾಗ 46 ವಿಭುವಿನ ಗುಣವನ್ನು ವಿಸ್ತರ ಪೇಳಿದ ಜನಕೆಸಮಯದಂಥ ಭಾಗ್ಯವನಿತ್ತು ಸಲಹುವ ಸ್ವಾಮಿ 47 ಮಂಗಳ ವೆಂಕಟರಾಯಾ | ಮಂಗಳ ಮಾಧವರಾಯಾಮಂಗಳ ಮಾನಸಗೇಯಾ | ಮಂಗಳ ಮಾಧವರಾಯಾ 48 ಧರೆಯೊಳಧಿಕನಾದ | ದೊರೆ ವ್ಯಾಸವಿಠಲಾನುಪರಮ ಭಕ್ತಿ ಸುಜ್ಞಾನವನು ಪಾಲಿಸೂವಾ 49
--------------
ವ್ಯಾಸವಿಠ್ಠಲರು