ಒಟ್ಟು 931 ಕಡೆಗಳಲ್ಲಿ , 91 ದಾಸರು , 832 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗುರುಪ್ರಾಣೇಶದಾಸರಾಯರ ಸ್ತೋತ್ರ ತರುಳನ ಪರಿಪಾಲಿಸು ಜೀಯಾ ಪ ಪತಿ ಸದ್ವಂಶೋದ್ಭವನೆ ವರಕವಿ ಪ್ರಾಣೇಶರ ಸುತನೆ ಕೋಪವಿತಾಪಮೋಹಕ ಜಿತನೆ ಶ್ರೀ ಕಮಲಾಪತಿ ಸೇವಕನೆ ಭವಜನಿ ತಾಪದಾದಿ ಸಂ - ತಾಪ ಹರಿಸುತಲಿ ಶ್ರೀಪದ್ಮಜ ಮತ್ತಾಪಿನಾಕಿನುತ ಶ್ರೀಪರಮಾತ್ಮದಾಸರಿಗೆ ಸದಾಪರೋಕ್ಷ ತೋರ್ದಾ 1 ರತಿಪತಿ ಪಿತನನಾಮ ಸ್ಮರಣೆಯಲ್ಲಿ ನಲಿ - ಯುತಸುಖಿಸುವಕರುಣಿ ಬಿಡದೆ ಸಂತತ ಹರಿಗುಣಗಾನಾ- ದಲ್ಲಿ ಬಲುತರನಿರುತಿಹ ಜಾಣಾನಾನತಿ ಪತಿತನಾಗಿ ಇರುವೆ ಅತಿ ದುಷ್ಕøತಿಯನೆಸಗಿ ಸದ್ಗತಿಗೆ ದಾರಿಗಾಣೇ ಪತಿತಪಾವನ ನಿಮ್ಮನಾ ತುತಿಪೆನೆ ಮತಿಮಂದ2 ಮತಗಳಹಳಿದು ಪ್ರೇಮದಿಂದ ಪೊರೆದು ಪಾತಕಿ ಪಾಮರನೆನ್ನಗೆ ರಾಮ ಶ್ರೀವರದೇಶ ವಿಠಲನ ದೂತಮಹಾಮುನಿವರದೇಂ- ಪ್ರೇಮದಿ ಕೊಡು ಮುದದಿ 3
--------------
ವರದೇಶವಿಠಲ
ಶ್ರೀನಾಥ ಸಲಹೊ ಸತತ ನಿನ್ನ ಪದ ಧ್ಯಾನಾನಂದವಿತ್ತು ಪ ತಂದೆ ನಿನ್ನನುಗ್ರಹದಿ | ಜಗದೊಳಗೆ ಬಂದೆ ಭೂಸುರ ಜನ್ಮದಿ ಪೊಂದಿ ತ್ವತ್ವದ ಭಜಿಸದೆ ಭವದೊಳಗೆ ಬೆಂದು ಬೆಂಡಾದೆನು ನಾ1 ಪಗೆಯಾರುಖಳರು ಎನ್ನ | ಪಾಶದಲಿ ಬಿಗಿದು ಬಂಧಿನಿ ಎಳೆಯುತ || ಬಗೆ ಬಗೆಯ ಮಂಗನಂತೆ ಕುಣಿಸ್ಯಾಡಿ ಹಗರಣವ ಮಾಡುತಿಹರೋ 2 ಪರಸ್ವತಿಯರ ರೂಪನೋಡಿ | ಮರಳಾಗಿ ಬೆರೆತವಳ ಕ್ರೀಡಿಸುತಲಿ ಪರಗತಿಯ ಚಿಂತೆ ಬಿಟ್ಟು | ಪರಮಾತ್ಮ ನರಕಕ್ಕೆ ಗುರಿಯಾದೆನೋ 3 ಧನದಾಪೇಕ್ಷೆಯಿಂದ | ಧನಿಕರ ಮನೆಗ್ಹೋಗಿ ಲಜ್ಜೆ ತ್ಯಜಿಸಿ ಘನದಾತರೆಂದವರನು | ಬಲು ತುತಿಸಿ ದಿನಗಳೆದೆ ಶುನಕನಂತೆ 4 ಹರಿನಿನ್ನವಾಸರದಿ | ಉಪವಾಸ ಇರುಳು ಜಾಗರವ ಜರಿದು ಬರಿದೆ ಕಾಲವ ಕಳೆದೆನೋ ರವಿಸುತಗೆ | ಅರುಹಲು ಬಾಯಿಲ್ಲವೋ 5 ಪವಮಾನ ಕೃತಸುಶಾಸ್ತ್ರ | ಪ್ರವಚನವ ಕಿವಿಗೊಟ್ಟು ಕೇಳಲಿಲ್ಲ ಅವನಿ ದ್ವಿಜರ ಪಾದವ ಸೇವಿಸದೆ ಭಾರ ನಾನಾದೆನೊ 6 ಬಾಯೆಂದು ಕೂಗಿ ಕರೆವೆ | ಸರ್ವೇಶ ಓಯೆಂದು ಬೇಗ ಬಾರೋ || ಮಾಯಾ ಮೋಹವನೆ ಬಿಡಿಸೋ | ನಿನ್ನಂಘ್ರಿ ತೋಯಜಧ್ಯಾನವನಿತ್ತು 7 ಶಿಲೆಯಾದ ಸಲಹಿದ ತೆರದಿಲಿ ತುಳಿದು ಸಲಹಿದ ತೆರದಲಿ ಇಳಿಸುರನ ಮಹತ್ಪಾಪ ಕಳೆದವಗೆ ಸಲೆಮುಕ್ತಿ ಸಲಿಸಿದಂತೆ 8 ಇಂದಿನಾರಭ್ಯವಾಗಿ | ಎನ್ನಿಂದ ನಿಂದ್ಯಕರ್ಮವ ನಡೆಸದೆ ಮಂದರೋದ್ಮರನೆ ನಿನ್ನ |ಸದ್ಭಕ್ತ ವೃಂದದೊಳು ಕೂಡಿಸಯ್ಯ 9 ಅಪರಾಧ ಕ್ಷಮಿಸುವಲ್ಲಿ | ನಿನ್ನಂಥ ಕೃಪಣವತ್ಸಲ ಕಾಣೆ ಕೃಪೆಯಿಂದ ಕರಪಿಡಿಯೊ ಕರಿವರದ ಕೌಸ್ತುಭ ಕೃಷ್ಣ 10 ನಿನ್ನ ನಾಮದ ಭೂಸುರ ಕುಲಹೀನ ಕನ್ಯೆಯಳ ಸಂಗ ಮಾಡಿ ನಿನ್ನ ಪರ್ವತ ಮೆಟ್ಟಿಲು ಅವಗೊಲಿದು ನಿನ್ನಾಪ್ತನೆನಿಸಿದಂತೆ 11 ನಿನ್ನೊಲುಮೆ ಪಾತ್ರರಾದ ಗುರು ಜಗನ್ನಾಥಾಖ್ಯ ದಾಸಾರ್ಯರ ಸನ್ನಿಧಾನದಲಿ ಇಪ್ಪ | ಇವನೆಂದು ಮನ್ನಿಸೊ ಮಹಮಹಿನೆ 12 ದುರಿತ ರಾಶಿ | ಪೇಳಲ್ಕೆ ಭೂಮಿಧರಗಳವಲ್ಲವೋ ಪ್ರೇಮದಿಂದಲಿ ಪಾಲಿಸೋಮಮಸ್ವಾಮಿ ಶಾಮಸುಂದರ ದಯಾಳು 13
--------------
ಶಾಮಸುಂದರ ವಿಠಲ
ಶ್ರೀನಿವಾಸ ತವಚರಣ ಸರೊರುಹ-ಮಾನತೋಸ್ಮಿ ಸತತಂ ಫಲದಂ ಶುಭಚರಿತಂ ಪ ಸನ್ನುತ ವಾಸುಕಿ ಶ್ರೀಶವಾಸ ಹಿರಣ್ಮಯವಾಸ ಸಮಸ್ತ ವಾಸತರುಣಿಶತ ಬಾಸಸುಮನೋಲ್ಲಾಸ ವಿಜಿತ ರೊಷ ವಾಸರೇಶ ಶತ ಭಾಸುರ ಭೂಷಣ ಭೂಷಿತಾಂಗವಿಶೇಷಕರುಣಮೃದುಭಾಷಣ ಭವಜಲಶೋಷಣ ಪೂಷಣ 1 ಸುರಮಂಡಲಸೇವಿತ ಚಂಡನಿಶಾಚರ ಮಂಡಲ ಖಂಡನ ಪಂಡಿತರಣ ಶೌಂಡ ಪುಂಡರೀಕ ನಯನಾಂಡಜವಾಹನ ಪುಂಡರೀಕಗಿರಿ ಮಂಡನ ಹಿಮಕರಮಂಡಲ ಸನ್ನಿಭಕುಂಡಲಾಭರಣ 2 ನೀಲ ಸುಮಂದರಧಾರಣ ಚತುರುತಲಾಗ್ರವಿ ಮೃಗೇಂದ್ರಾ ವಾರಿಜನಿಲಯಾವರ ಕರುಣಾಕರ ಮಾರಜನಕ ಸುರವಾರವಂದ್ಯಪದ ಸಾರಸುಗುಣ ಪರಿ ಜಲದಿ ಗಂಭೀರ ವ್ಯಾಘ್ರಗಿರಿವರದ ವಿಠಲಹರಿ 3
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ ತವಚರಣಸರೋರುಹಮಾನತೋಸ್ಮಿ ಸತತಂ ಸಾನುರಾಗ ಮನಸಾ ವಚಸಾ ಶಿರ ಸಾನುಕೂಲಫಲದಂ ಶುಭಚರಿತಂ ಪ ಶ್ರೀಶವಾಸ ಹಿರಣ್ಮಯ ವಾಸ ಸಮಸ್ತಾವಾಸ ತರಣಿಶತ ಭಾಸ ಸುಮನೋಲ್ಲಾಸ ವಿಜಿತರೋಷ ಭೂಷಿತಾಂಗ ವಿಶೇಷ ಕರುಣ ಮೃದು ಭಾಷಣ ಸಜ್ಜನ ಪೋಷಣ ನಿರ್ಜಿತ ದೂಷಣ ಭವಜಲ ಶೋಷಣ ಪೂಷಣ 1 ಪುಂಡರೀಕಾಸನ ಖಂಡಪರಶು ಅ ಖಂಡಲ ಮುಖ ಸುರಮಂಡಲ ಸೇವಿತ ಪಂಡಿತ ರಣಶೌಂಡ ಪುಂಡರೀಕನಯ- ನಾಂಡಜವಾಹನ ಖಂಡಿತಕೇಶ ಕೋ ದಂಡ ಕೃತಾರ್ಚನ ಪುಂಡರೀಕಗಿರಿ ಮಂಡನ ಹಿಮಕರ ಮಂಡಲ ಸನ್ನಿಭಕುಂಡಲಾಭರಣ 2 ವಾರಿದನೀಲಶರೀರ ಧರಾರ ಧೀರ ಸುಮಂದರಧಾರಣ ಚತುರ ಕರಾಗ್ರವಿ ದಾರಿತ ಶೂರ ಹಿರಣ್ಯಕವೀರ ನರಮೃಗೇಂದ್ರಾ ಮಾರಜನಕ ಸುರವಾರ ವಂದ್ಯಪದ ಪರಿ ವ್ಯಾಘ್ರಗಿರಿ ವರದವಿಠಲ ಹರಿ 3
--------------
ವೆಂಕಟವರದಾರ್ಯರು
ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ ದಾನಿ ನೀನೆಂದು ನಂಬಿದೆ ಪ ಜ್ಞಾನಗಮ್ಯನೆ ವಾಙ್ಮನೋಮಯ ಮಾನಿ ಮಾನಸರಾಜಹಂಸ ಅ.ಪ ಲೋಕಭರಿತ ಶ್ರೀಕಳತ್ರ-ತ್ರಿಕಕುದ್ಧಾಮದಧಿನಾಥ ಶ್ರೀಕಮಲಭವಾದಿವಂದಿತ ಮುಕುತಾಮುಕುತಜನ ಸಂಸೇವಿತ ಅಖಿಳಾಗಮಕೆ ಅತೀತ-ಶ್ರೀಕರಪಲ್ಲವಪೂಜಿತ ಅಖಿಳಾಜಾಂಡದಿ ವ್ಯಾಪ್ತ-ಭಕುತರಗತಿಯಪ್ರದಾತ1 ನಿಗಮವಿತ್ತೆ ನಗವಪೊತ್ತೆ ಬಗೆದು ಬೇರ ನರ- ಮೃಗಾಂಗನೇ ತ್ಯಾಗಿಯೊಳು ಪೋಗಿ ನೃಪರ ನೀಗಿಸಿ ವನವನವಾ ಚರಿಸಿದೆ ಬಗೆಬಗೆ ಆಟದಿ ಬಾಲ್ಯದಿ ಹಗೆಗಳ ಮಡುಹಿದೆ ಕಾರ್ಯದಿ ಆಗಮಕರ್ಥಮೋಹಿಸಿ-ಜಗದೊಳುತುರಗವನೇರ್ದೆ 2 ಅಂತರಾತ್ಮಪರಮಾತ್ಮ ಅನಂತಾನಂತರೂಪಾತ್ಮ ಪ್ರಾಂತಕಾಣದೇ ನಿರಂತರದಿ ನಿಂತು ಸಿರಿ ನಿತ್ಯಮುಕ್ತಳಾದಳೋ ಕಂತುಪಿತ ಎನ್ನಂತರದಿ ನಿಂತಿಹೆ ನಿರಂತರದಿ ಕಾಂತ ಶ್ರೀ ವೆಂಕಟೇಶನೆ-ಅಂತರ್ಬಹಿರದಿ ನಿಂತಿಹ ಪ್ರಭೊ 3 ಅಪ್ರಮೇಯ ಸ್ವಪ್ರಕಾಶ ಅಪ್ರಾಕೃತಗುಣಗಣಾರ್ಣವ ಸ್ವಪ್ರಯೋಜನರಹಿತ ಸತತ ತ್ವತ್ಪ್ರಸಾದದಿಂದ ಜಗವು ಕ್ಷಿಪ್ರದಿ ನೃಪಸಂಸ್ತುತಿಸೆ ವಿಪ್ರನಮನ ಸಂತೈಸಿದೆ ಅಪ್ರತಿಹತಮಹಿಮನು ಸುಪ್ರೀತನು ಜನರ್ಗೆ 4 ಪರಮ ಪುರುಷ ಪೂರ್ಣಾನಂದ ಪರಮಕರುಣಶರಧಿಯೆ ಉರಗಾದ್ರಿವಾಸ ವಿಠ್ಠಲ ಕರಾವಲಂಬನವಿತ್ತು ಸಲಹೆಲೋ ಪರಿಪರಿ ಎನ್ನಪರಾಧ ನೋಳ್ಪರೆ ಭೋ ಜಗದೊಡೆಯ ಕರುಣವು ತೋರದೆ ನೀನಿರೆ ನರಪಶು ನಾನೆಂತು ಬಾಳ್ವೆನೋ5
--------------
ಉರಗಾದ್ರಿವಾಸವಿಠಲದಾಸರು
ಶ್ರೀನಿವಾಸ-ಶ್ರೀನಿವಾಸ-ಶ್ರೀನಿವಾಸ ಪ ಶ್ರೀನಿವಾಸ ನಾನಿಹೆ ನಿನ್ನ ದಾಸ-ನಿನ್ನ ದಾಸ ನಿನ್ನದಾಸ ಅ.ಪ. ಈಶ, ತರಿಯುವೆ ಕ್ಲೇಶಾ ಕೊಡುಲೇಶ, ಕೊಡುಲೇಶ ಜೀಯ, ಸಡಗರ ದೈವ ಬಡವನು ನಾನು ಕೊಡುವುದು ಏನು, ಅಡಿಗಳನೀಡು, ಇಡುವೆನು ಮೌಳಿ, ಇಡುವೆನು ಮೌಳಿ ಘನಸುಖದಾತ, ಚಿನ್ಮಯಗಾತ್ರ, ವನರುಹ ನೇತ್ರ, ಅನಿಲನಸೂತ್ರ ಅನುದಿನ ತನುಮನನಾಥ ತನುಮನನಾಥ ಕುಂದುಗಳಳಿದು, ಕಂದನ ಸಲಹೋ ಕಂದನ ಸಲಹೋ 1 ವೇದವ್ಯಾಸ, ವಾದಾಗಾರ, ಬೋಧಿಸಿವಿದ್ಯೆ ಸಾಧನೆಗೈಸೋ ವೇಧನ ತಂದೆ ವೇಧನತಂದೆ ಸೋದರ ಪ್ರಜೆಗಳು ದೈತ್ಯರ, ಖೇದವನೀಡ್ಡೆ ಖೇದವನೀಡ್ದೆ ಧೀರವರಾಹ, ಯಾಗಶರೀರ, ಬಹುಗಂಭೀರ ಶೃತಿಗಳಸಾರ ಸಾರ ಸಾರಕೆ ಸಾರ ಕಂಭದಿಬಂದೆ ಕಂದನ ಪೊರೆದೆ ಕಂದನ ಪೊರೆದೆ 2 ಬಲಿಯೆಡೆನಿಂದ ಬೇಡುವೆನೆಂದ ಬೇಡುವೆನೆಂದ ಮೂರಡಿಯಿಂದ ಬೆಳೆಯುತ ಬಂದ ಬೆಳೆಯುತ ಬಂದ ಭೂಮಿಯು ಮುಗಿಯೆ ಶಿರವನ್ನೀಯೆ, ಭಕ್ತನಕಾಯೆ, ಬಾಗಿಲಕಾಯ್ದೆ, ಬಾಗಿಲಕಾಯ್ದೆ ವಿಪ್ರರ ಪೊರೆದ, ವರಸಮರಿಲ್ಲ ವರಸಮರಿಲ್ಲ ಭಾರ್ಗವರಾಮ, ಋಷಿಗಣಸ್ತೋಮ, ದೈತ್ಯವಿರಾಮ, ಸತ್‍ಜನಪ್ರೇಮ, ಮಂಗಳ ನಾಮ ಮಂಗಳನಾಮ 3 ತಾರಕನಾಮ, ಕಲಿಗಿವ ಭೀಮ, ದಶರಥರಾಮ, ಸೀತಾರಾಮ ಜಯಜಯರಾಮ ಜಯಜಯರಾಮ ಲಕ್ಷ್ಮಣನಣ್ಣ, ಸಗುಣಸಂಪನ್ನ, ಜಗಕಿವ ಅನ್ನ, ಬಿಡಬಿಡಬೆನ್ನ ಪ್ರಾಣನೆ ಅನ್ನ, ಕೇವಲನಣ್ಣ, ರವಿಶಶಿಕಣ್ಣ, ಸಿದ್ಧವಿದಣ್ಣ ಆಗಿಸಿ ಯಾಗ, ಸಾಗುತ ಬಂದ ಸಾಗುತ ಬಂದ ಕೊಂದನು ಖಳರ, ಮುಂದಕೆ ನಡೆದ 4 ಮುಟ್ಟಿ, ಕಳ್ಳನ ಮೆಟ್ಟಿ ರಾಜ್ಯವಕೊಟ್ಟ ಜಗಜ್ಜಟ್ಟಿಜಗಜ್ಜಟ್ಟಿ ನಿಜಮುನಿಇವನೆ, ನಿಜವಿಧಿ ಇವನೆ, ಸರ್ವೇಶ, ಸರ್ವೇಶ ಬೆಣ್ಣೆಯ ತಿಂದ ಪೋರನು ಎನಿಸಿ, ಚೋರನು ಎನಿಸಿ ಎನಿಸಿ, ಕ್ರೂರನು ಎನಿಸಿ, ನಾರೇರ ವರಿಸಿ, ಭೂರಿದನೆನಿಸಿ, ಲೀಲೆಯ ತೋರ್ದ 5 ಊರಿಗೆ ಬಂದೆ, ಜರೆಸುತ ಬಂದು, ಬಹುಮಡಿನೊಂದು, ಮರಳಿಯು ಬಂದು ಕದನಕೆ ನಿಂದ, ಬಲುಭಂಢ, ಬಲುಭಂಢ ರಾತ್ರಿಯಲೊಂದು ಸಾಗಿಸಿ ಬಂದು, ವೊಕ್ಕೂ, ತಾಮುಕುಂದ ತಾಮುಕುಂದ, ಸೂತ, ಜಗವಿಖ್ಯಾತ ಕೊಲ್ಲಿಸಿದಾತ ಸರ್ವಸಮರ್ಥ, ಸರ್ವಸಮರ್ಥ ಕಾಲದಿ ಭೇದ ಇಲ್ಲವು ಎಂದು ವಿಭುಶರಣೆಂಬೆ, ವಿಭುಶರಣೆಂಬೆ 6 ವೇದಸುವೃಂದ, ತ್ರಿಪುರರಕೊಂದ, ಬಲ್ಲ, ಎಲ್ಲವ ಬಲ್ಲ ನಿತ್ಯವಿದೆಲ್ಲ, ತಿಳಿದವರಿಲ್ಲ, ಸಾರಿಸಾಕಲ್ಯ ಜಗವನೆಲ್ಲ, ಬಿಗಿದಿಹನಲ್ಲ, ನಾಮದಿನಲ್ಲ, ನಾಮದಿನಲ್ಲ, ಆದಿಯು ಇಲ್ಲ, ಮಧ್ಯವು ಇಲ್ಲ, ಕೊನೆತಾನಿಲ್ಲ, ಖೇದವು ಇಲ್ಲ, ಮೋದವೆ ಎಲ್ಲ, ಭಗನಿಹನಲ್ಲ ಅಪಜಯವಿಲ್ಲ, ಶ್ರೀಗಿವನಲ್ಲ, ಅಪ್ರತಿಮಲ್ಲ, ಪ್ರಕೃತಿಯು ಅಲ್ಲ, ಸ್ವಾಮಿಯು ಇಲ್ಲ, ತಾನೇ ಎಲ್ಲ ಪ್ರೇರಿಪನೆಲ್ಲ, ಭಿನ್ನನು ನಲ್ಲ, ಸರ್ವೋತ್ಕøಷ್ಠ 7 ಕುಜನರ ಮುರಿಯೆ, ಎನಿಸಿ, ಧರ್ಮವನುಳುಹಿ, ಭಕ್ತರಿಗೊಲಿದು, ಪೊರೆವುದು ಸತ್ಯ, ಪೊರೆವುದು ಸತ್ಯ, ಸತ್ಯರ ಸತ್ಯ, ಸಂತರ ಮಿತ್ರ, ಪರಮ ಪವಿತ್ರ, ಲೋಕವಿಚಿತ್ರ ಸುಖಚಾರಿತ್ರ, ಮಂಗಳಗಾತ್ರ, ನಿಖಿಳಸುಭರ್ತ, ಭಕ್ತರ ಭೃತ್ಯ ನತ ಜನಪಾಲ, ವೇದಗಳೆಲ್ಲ, ಶಬ್ದಗಳೆಲ್ಲ, ಘೋಷಗಳೆಲ್ಲ ನಾಮಗಳೆಲ್ಲ, ಇವನನೆ ಎಲ್ಲ, ಪೊಗಳುವವಲ್ಲ, ಮುಕ್ತರಿಗೆಲ್ಲ, ಪ್ರಕೃತಿಯ ಸತ್ತಾ, ಸಕಲವ ನೀತ, ನೀಡುವ ದಾತ, ಸರ್ವಸುವ್ಯಾಪ್ತ, ಸರ್ವಸ್ವತಂತ್ರ8 ವೇದವ್ಯಾಸ, ಬದರೀನಿವಾಸ, ವೇದಸ ಪೀಠ, ಸಾಧಿಸುವಂತ್ಯ ಮೋದಕವೀಂದ್ರ, ಮಧ್ವನಪೋಷ, ಆದರವೀಯೊ ಪಾದಗಳಲ್ಲಿ ವೇದಗಳಳಿಯೆ, ವಿಧಿ ಮುಖಸುರರು, ಪಿಡಿದರು ಪಾದ ಮಾಧವ ನೀನು ಮೇದಿನಿಗಿತ್ತೆ ಸೂತ್ರ ಗೈದ ಮಹೇಶ, ವೇದಕುಮಿಗಿಲು, ಭಾರತಕರ್ತ, ಭಾರತ ಕರ್ತ ಛಂದದಸುಕಾಯ ಕುಡಿಸೈ ಜೀಯ ಹರಿಸುತಮಾಯ, ಹರಿಸುತಮಾಯ, ಹರಿಸುತಮಾಯ 9 ಶ್ರೀ ಇಹವಕ್ಷ, ಜ್ಞಾನಸುಪಕ್ಷ, ಸರ್ವಾಧ್ಯಕ್ಷ, ದಿವಿಜರಪಕ್ಷ ಬೃಹತೀಭಕ್ಷ, ತಾನಿರಪೇಕ್ಷ, ಆಶ್ರಿತರಕ್ಷ, ಕರುಣ ಕಟಾಕ್ಷ, ಕರುಣಿಸು ರಕ್ಷ, ನೀಜಗರಕ್ಷ, ಅಜಗರ ಶೈಯ್ಯ, ಮನ್ಮಥನಯ್ಯ ಭವಬಿಡಿಸಯ್ಯ, ಭಯಹರಿಸಯ್ಯ ದಯಮಾಡಯ್ಯ ಶರಣುಪರೇಶ ಇಚ್ಛೆ ಅನೀಶಾ, ಕಳೆಕಳೆ ಆಶಾ, ಕಡಿಕಡಿಪಾಶಾ, ನಾಬಡದಾಸ, ತೈಜಸ ಶರಣು, ಪ್ರಾಜ್ಞನೆ ಶರಣು, ತುರ್ಯನೆ ಶರಣು, ಕಪಿಲನೆ ಶರಣು ಶರಣು ಅನಂತ, ಶರಣು ಅನಂತ 10 ವೆಂಕಟರಮಣ, ಕಿಂಕರನಾನು, ಸಂಕಟಹರಿನೊ ಶಂಕರತಾತ ತಿದ್ದೊ, ಪಂಕಜನಯನ ದಡ್ಡನು ನಾನು ಭಕ್ತಿಗಡ್ಡೆಗೆಸೇರಿಸು ಪ್ರಾಣನ ಆಣೆ ರಾಜರ ಆಣೆ ಜಯಮುನಿ ಆಣೆ, ಗುರುಗಳ ಆಣೆ, ಉರಗಾದ್ರಿವಾಸ, ಪದ್ಮಜಳೀಶ, ಹರಿಸುತ ದೋಷ, ಚರಣದಿವಾಸ, ನಿರುತಲೀಯೊ, ಕರುಣವ ಸುರಿಸಿ, ಮರುತನ ಮತದ ಅರುಹುತಲೆನಗೆ, ಸಂತತ ವೆಂಬೆ, ಸಂತತವೆಂಬೆ, ಸಂತತವೆಂಬೆ ನಂದದಿ ಪಠಿಸೆ ನಂದವು ಶಾಶ್ವತ, ಜಯಮುನಿಹೃಸ್ಥ, ಮಧ್ಯರಮೇಶ ಶ್ರೀಕೃಷ್ಣವಿಠಲ ವಲಿಯುವ ಸಿದ್ಧ, ವಲಿಯುವ ಸಿದ್ಧ 11
--------------
ಕೃಷ್ಣವಿಠಲದಾಸರು
ಶ್ರೀಮದಕ್ಷೋಭ್ಯ ತೀರ್ಥರ ದಿವ್ಯ ಚರಿತಂ ಕಾಮಿತ ಪ್ರದವಹುದು ಶೃಣ್ವತಾಂ ಸತತಂ ಪ ಈ ಮಹಿಯೊಳವತರಿಸಿ ಭೂಮಿಜಾಸಹಿತ ಶ್ರೀ ರಾಮನಂಘ್ರಿದ್ವಯವ ಪೂಜಿಸುತಲಿ ನಿರ್ಜರ ಜನಸ್ತೋಮ ವಂದಿತರಾಗಿ ವ್ಯೋಮ ಕೇಶಾಂಶರೆಂದೆನಿಸಿ ಮೆರೆವಂಥ 1 ಮೋದತೀರ್ಥರ ಮತ ಮಹೋದಧಿಗೆ ಪೂರ್ಣಹಿಮ ದೀದಿತಿಯರೆಂದೆನಿಸಿ ದಿಗ್ವಲಯದಿ ಭೇದ ಬೋಧಕ ಸೂತ್ರವಾದದಿಂದಲಿ ಮಹಾ ವಾದಿ ವಿದ್ಯಾರಣ್ಯ ಯತಿವರನ ಜಯಿಸಿದ 2 ವಿಟ್ಠಲನ ಪದಪದುಮ ಷಟ್ಟದರೆಂದೆನಿಸಿ ಸ್ವಪ್ನಸೂಚಿತ ಚಂದ್ರಭಾಗತಟದಿ ಶ್ರೇಷ್ಠ ಕುದುರೆಯನೇರಿ ನದಿಯ ಜಲಕುಡಿದವರ ಇಷ್ಟರೆನ್ನುತ ಕರೆದು ಕೊಟ್ಟರಾಶ್ರಮವ 3 ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬ ದೃಷ್ಟಿಯಿಂದಿವರಿಗೆ ಸುಮುಹೂರ್ತದಿ ಪಟ್ಟಗಟ್ಟಿದರು ಜಯತೀರ್ಥ ನಾಮವನಿಡುತ ಕೊಟ್ಟರಾಜ್ಞೆಯನು ದಿಗ್ವಿಜಯ ಮಾಡಿರಿ ಎಂದು 4 ದೇಶದೇಶದಿ ಬರುವ ಭೂಸುರೋತ್ತಮರ ಅಭಿ ಲಾಷೆಗಳನೆಲ್ಲ ಪೂರೈಸಿ ಪೊರೆವ ಶ್ರೀಶಕಾರ್ಪರ ಕ್ಷೇತ್ರವಾಸ ಅಶ್ವತ್ಥನರ ಕೇಸರಿಯ ನೊಲಿಸಿದ ಯತೀಶರಿವರೆಂದು 5
--------------
ಕಾರ್ಪರ ನರಹರಿದಾಸರು
ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ- ನಾಮ ಸರ್ವಾಂತರ್ಯಾಮಿ ಪ. ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ- ಸ್ತೋಮವಂದಿತ ಭೀಮಬಲ ಗುಣ- ಧಾಮ ವರನಿಸ್ಸೀಮ ಮಹಿಮನೆ ಅ.ಪ. ಅಂತರ್ಬಹಿವ್ರ್ಯಾಪ್ತನೆ ಸತತ ರಮಾ- ಕಾಂತಗೆ ಪರಮಾಪ್ತನೆ ಚಿಂತಿಪ ಭಕ್ತರ ಚಿಂತಾಮಣಿ ನಿ- ಶ್ಚಿಂತನೊಂದೆ ಶಿರದಿ ಸಾಸವೆ- ಯಂತೆ ಲೋಕವನಾಂತುಕೊಂಡಿಹೆ 1 ರಾಮನ ಸೇವೆಗಾಗಿ ಲಕ್ಷ್ಮಣನೆಂಬ ನಾಮವ ತಾಳ್ದ ಯೋಗಿ ಯಾಮಿನೀಚರರ ನಿರ್ನಾಮಗೈದ ವೀರಲ- ಲಾಮ ನಿರ್ಜಿತಕಾಮ ಸಜ್ಜನ- ಪ್ರೇಮ ಭೌಮ ನಿರಾಮಯನೆ ಜಯ 2 ಸಂಕರ್ಷಣ ಸುಗುಣಾ-ಭರಣ ನಿ- ಶ್ಯಂಕ ವೈರಿಭೀಷಣ ಶಂಕರಾದಿಸುರಸಂಕುಲನುತಪಾದ- ಪಂಕಜನೆ ತಾಟಂಕಗೋಪಾ- ಲಂಕೃತಾಂಗ ಶುಭಂಕರನೆ ಜಯ 3 ಸಾರತತ್ತ್ವಬೋಧನೆ ಶರಣುಜನ ವಾರಿಧಿಚಂದ್ರಮನೆ ಘೋರಭವಾರ್ಣವತಾರಕನಮಲ ಪಾ- ದಾರವಿಂದದ ಸೌಂದರ್ಯ ನಿಜ ಭೂರಿ ನೇತ್ರಗಳಿಂದ ಕಾಣುವೆ 4 ಮಂಜುಳ ನಗರೇಶನೆ ಭಕ್ತಭಯ- ಭಂಜನ ಸುವಿಲಾಸನೆ ಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ- ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ ಪಾಪಹರ ನಿನ್ನೊಳಗೆ ಯನ್ನ ಮನವಿರಲಿ ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ ಕಾಪಾಡಿಕೋ ಸ್ವಾಮಿ ದಾಸಾನುದಾಸನಂ1 ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ ದಿನಕರಪ್ರಭು ಮೂರ್ತಿಯವತಾರ ತೋರಿ ಅನುನಯದಿ ಪದಯುಗವ ಶರಣು ಹೊಂದುವ ಪರಿಯ ಕನಿಕರದಿ ಕರುಣಿಸೈ ಕಮಲನಯನ 2 ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ ಅಪರಿಮಿತ ಸುಂದರಾನಂದ ನೀಡಿ ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ 3 ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ ದೊರೆಯೆನೀ ಸೋದರನು ಸಖನು ಬಂಧೂ ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ 4
--------------
ಶಾಮಶರ್ಮರು
ಶ್ರೀಮಾಧವ ಪಾದವ ಸಂತತ ಮನದಿ ನೇಮದಿ ಧ್ಯಾನಿಸು ನೀ ಪ ಪ್ರೇಮಮೂರ್ತಿಯನೆನೆವರಾರಾದರೇನಯ್ಯ ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ ಮದಗಜವನುಸರದಿ ಮೊಸಲೆಯನು ತಾನು ಅಧಿಕ ಕಷ್ಟವ ಗೊಳಸೆ ಪದುಮನಾಭ ನೀನೆ ಪೊರೆಯಬೇಕೆನ್ನಲು ಮುದದಿಂದಲೊದಗುತ್ತ ಸೌಖ್ಯವ ತೋರಿದೆ 1 ತರಳನಾದ ಧ್ರುವನು ಪ್ರಹ್ಲಾದನು ಶರಣೆಂದು ಮೊರೆವೋಗಲು ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ 2 ಮಾನಿನಿ ದ್ರೌಪದಿಯು ತನ್ನಯ ಘನ ಮಾನಭಂಗದ ಕಾಲದಿ ದೀನರಕ್ಷಕ ಕೃಷ್ಣ ದಾನವಾರಿಯೆನೆ ಸಾನುರಾಗದಿಂದಲಕ್ಷಯ ವರವಿತ್ತ3 ಅಜಮಿಳ ಬಹುಪಾಪದಿ ಮೆರೆಯುತಲಿದ್ದು ನಿಜಸುಖ ಮರೆತಂತ್ಯ ಕಾಲದಿ ಬಜಬಜಿಸುತಮಗನನು ಹೆಸರೆತ್ತಲು ಭಜನೆಯಾಯ್ತು ನಾರಾಯಣ ನಾಮವು 4 ವಿದುರನುಧ್ದವನರ್ಜುನ ಕುಚೇಲನು ಮೊದಲಾದ ಭಕ್ತರೆಲ್ಲ ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ ಪದವಿಯಿತ್ತು ಕಾಯ್ದ ಜಾಜಿಯೀಶನ5
--------------
ಶಾಮಶರ್ಮರು
ಶ್ರೀಮೋದವಿಠಲದಾಸರ ಸ್ತೋತ್ರ ಮೋದವಿಠಲದಾಸರಾಯ ನಿನ್ನ ಪಾದವನಂಬಿದೆ ಪಾಲಿಪುದಯ್ಯ ಪ ಭೇದಮತಾಬ್ಧಿ ಪಾಠಿನ ಆದು - ರ್ವಾದಿಮಾಯಿಗಳಿಗೆ ಗಂಟಲಗಾಣ ಸಾಧುಜನರ ಪಂಚಪ್ರಾಣನೆನಿಪ ಮೇದಿನಿಯೊಳು ಹರಿಭಕ್ತ ಪ್ರವೀಣ 1 ಗುರುಪ್ರಾಣೇಶದಾಸರಲಿ ಜ್ಞಾನ ವರ ಉಪದೇಶವ ಕೊಂಡು ಭಕ್ತಿಯಲಿ ವರದೇಂದ್ರಾರ್ಯರ ಸನ್ನಿಧಿಯಲಿ ಸತತ ಹರಿಭಜನೆಯ ಮಾಳ್ಪ ನಲಿನಲಿಯುತಲಿ 2 ಸ್ನಾನಸಂಧ್ಯಾದ್ಯನುಷ್ಠಾನವನು ಙÁ್ಞನಪೂರ್ವಕದಿ ಚರಿಸುವ ನಿಧಾನ ಹೀನಜನಗಳಲ್ಲಿ ಮೌನ ನಿರುತ ಶ್ರೀನಿವಾಸನ ಮನದಲಿ ಮಾಳ್ಪ ಧ್ಯಾನ 3 ಬಾಲ್ಯತನದಿ ನಿಮ್ಮಾಜ್ಞ್ಞವನು ಮೀರಿ ಕಾಲಕಳೆದೆ ದುರ್ವಿಷಯದಿ ನಾನು ಶ್ರೀಲೋಲನಂಘ್ರಿ ಮರೆದೆನು ಮುಂದೆ ಪಾಲಿಸೆನ್ನಯ ಮೊರೆ ಶರಣು ಬಂದಿಹೆನು 4 ಶ್ರೀ ಮರುನ್ಮತಙÁ್ಞನವನು ನಮ್ಮ ಸ್ವಾಮಿ ವರದÉೀಶವಿಠಲನ ದಾಸ್ಯವನು ಆ ಮುನಿವರನ ಸೇವೆಯನು ಕೊಟ್ಟು ನೀ ಮುದದಲಿ ಕರುಣಿಸು ಸುರಧೇನು5
--------------
ವರದೇಶವಿಠಲ
ಶ್ರೀಯತಿವೃಂದ ಸ್ತೋತ್ರ ಯತಿಗಳ ಸತತ ಸಂಸ್ತುತಿಸುವೆ ಅತಿತ್ವರಿತದಲಿ ದುರಿತಗಳ ತರಿವೆ ಪ ಮೋದತೀರ್ಥಾದಿ ಸುಬೋಧೇಂದ್ರ ಪರಿಯಂತ ಮೋದದಿಂದವರ ಶ್ರೀಪಾದಕ್ಕೆ ನಮಿಪೆ 1 ಅಜನಪಿತನಪಾದ ಭಜಿಸುವ ಭಕುತ ನಿಜವಾಗಿ ಪಾಲಿಪ ಸುಜನೇಂದ್ರ ತೀರ್ಥ 2 ಆನತಜನ ಪಾಪಕಾನನದಹಿಪ ಕೃ ಶಾನನಂತಿಪ್ಪ ಸುಙÁ್ಞನೇಂದ್ರ ತೀರ್ಥ 3 ದುರ್ಮತಧ್ವಂಸ ಸದ್ಧರ್ಮ ಸಂಸ್ಥಾಪಕ ಕರ್ಮಂದಿವರ ಸುಧರ್ಮೇಂದ್ರ ತೀರ್ಥ 4 ಅಗಣಿತಮಹಿಮ ಮೂಜಗದೊಳು ಪ್ರಖ್ಯಾತ ನಿಗಮಾಗಮಜ್ಞ ಶ್ರೀ ಸುಗುಣೇಂದ್ರ ತೀರ್ಥ 5 ಸಸುಪ್ರಸಿದ್ಧ ಮುನಿ ವಿಪ್ರಸಮೂಹವ ಕ್ಷಿಪ್ರದಿಪಾಲಿಪ ಸುಪ್ರಙÉ್ಞಂದ್ರಾಖ್ಯ 6 ಶ್ರೀಶ ಪದಾರ್ಚಕ ಸುಕೃತೀಂದ್ರ 7 ಮೂಲೋಕ ವಿಖ್ಯಾತ ಶ್ರೀಲೋಲನಂಘ್ರಿ ಕೀ - ಲಾಲಜಮಧುಪ ಸುಶಿಲೇಂದ್ರ ಮುನಿಪ 8 ವರದೇಶ ವಿಠಲನ ಪರಿಪರಿ ಪೂಜಿಪ ಪರಮಹಂಸರ ಪಾದಕ್ಕೆರಗಿ ಬಿನ್ನೈಪೆ 9
--------------
ವರದೇಶವಿಠಲ
ಶ್ರೀರಾಘವೇಂದ್ರರು ಸಂತಜನರ ಪ್ರಿಯ ಸಂತತಕರುಣಿಸು ಮಂತ್ರಾಲಯ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ಪ ಬಾಗಿವಂದಿಪೆ ದಯಾಸಾಗರ ನಿಜಯತಿ ರಾಘವೇಂದ್ರ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 1 ಜ್ಞಾನಕವಚ ತೊಟ್ಟು ಕ್ಷೋಣಿಯೊಳ್ ಅವತರಿಸಿದಿ ಜ್ಞಾನಶರಧಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 2 ಮೇದಿನ್ಯುದ್ಧರಿಸಿದಿ ವೇದವೇದಾಂತದ ಸ್ವಾದವರಿದು ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 3 ವಾದಿಮತರ ಕುವಾದ ಮುರಿದು ಸು ಮಂತ್ರಮೂರ್ತಿ ಗುರುನಾಥ 4 ಜಗದೊಳಗನುಪಮ ಭಗವದ್ಭಕ್ತಿ ಘನ ಮಿಗಿಲೆನಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 5 ನಿತ್ಯ ನೆನಿಪ ನಿಜ ತತ್ತ್ವದಾದಿ ಜಗ ಕುತ್ತರಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 6 ಸತ್ಯವಾದ ಪರಮಾರ್ಥಪಥದಿ ನಿಂತು ನಿತ್ಯದಾಡಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 7 ಪೃಥ್ವಿಯೊಳು ನಿಮ್ಮ ಭಕ್ತಜನರ ಬಿಡ ಗುರುನಾಥ 8 ಕೂಡಿಸಿ ದ್ವಿಜವೃಂದಾಡುತಲನುದಿನ ಮಂತ್ರಮೂರ್ತಿ ಗುರುನಾಥ 9 ನಿರುತ ಭೂಸುರಗಣಕ್ಹರುಷವಿತ್ತು ಸದಾ ಮಂತ್ರಮೂರ್ತಿ ಗುರುನಾಥ 10 ಬೇಡಿದವರಿಗೆ ಬೇಡಿದ ವರಗಳ ಮಂತ್ರಮೂರ್ತಿ ಗುರುನಾಥ 11 ಗಾಢಮಹಿಮೆ ತೋರಿ ರೂಢಿಜನರ ಕಾ ಪಾಡ್ಹಿದ್ಹಿತದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 12 ಧರೆಯೊಳು ನರಹರಿ ಶರಣಜನರ ಕೂಡಿ ಮಂತ್ರಮೂರ್ತಿ ಗುರುನಾಥ 13 ಮುಳುಗಿರ್ದ ಪುಣ್ಯಮಯದಿಳೆಯನು ನಿಮ್ಮೊಳು ಗುರುನಾಥ 14 ಧರ್ಮಗೆಟ್ಟಿಳಗೆ ಸದ್ಧರ್ಮ ಬಿತ್ತಿದಿ ಸ್ಥಿರ ಮಂತ್ರಮೂರ್ತಿ ಗುರುನಾಥ 15 ಸಾಧಿಸಿ ಮಹ ತಪದಾದಿ ಮೂರ್ತಿಯಿಂ ಮಂತ್ರಮೂರ್ತಿ ಗುರುನಾಥ 16 ನಿಗಮಾತೀತನೊಳ್ ಬಗೆಬಗೆಯಾಟವ ಮಂತ್ರಮೂರ್ತಿ ಗುರುನಾಥ 17 ಮಂಗಳಮೂರ್ತಿಯ ಕಂಗಳಿಂದ ಕಂಡು ಭವ ಮಂತ್ರಮೂರ್ತಿ ಗುರುನಾಥ 18 ತುಂಗನಿವಾಸ ಮಹ ಮಂಗಳಾಂಗ ಸುಜ ಮಂತ್ರಮೂರ್ತಿ ಗುರುನಾಥ 19 ನಿತ್ಯ ನಿಮ್ಮಪಾದ ಭಕ್ತಿಯಿಂ ಭಜಿಸಲು ಮಂತ್ರಮೂರ್ತಿ ಗುರುನಾಥ 20 ಮುಕ್ತಿದಾಯಕ ಜಗದಾಪ್ತ ಶ್ರೀರಾಮನಂ ಮಂತ್ರಮೂರ್ತಿ ಗುರುನಾಥ 21
--------------
ರಾಮದಾಸರು
ಶ್ರೀರಾಮ ಎನ್ನಿರೊ ಶ್ರೀರಾಮ ಎನ್ನಿರೊ ಪ ದುರಿತ ಪರ್ವತಕೆ ವರವಜ್ರವೆನಿಪುದು ಜಗವರಿಯೆ ಅ.ಪ. ನಿತ್ಯ ಪೊರೆಯುವ ಸತ್ಯ ತಾರಕ ನಾಮಕೆ ಮತ್ತೊಂದು ಸಾರ ಸಹಸ್ರನಾಮಕೆ ಶ್ರೀರಘುನಾಥನ ನಾಮವೆಂತೆಂದು ಸಾರಿ ಮಹೇಶನು ಸುರನರ ವಂದ್ಯನು ಗಿರಿಜೆಗೆ ಪ್ರೇಮದಿ ಪೇಳಿದನು ಮರುತಾತ್ಮಜನು ನಿರುತದಿ ಭಜಿಪನು ಪರಿಪರಿ ಪಾಡಿ ಸುಖಗೂಡಿ 1 ಪತಿತ ಪಾವನ್ನ ಸತತ ಈ ನಾಮ ಗತಿಯಿಲ್ಲದವರಿಗೆ ಗತಿ ಈವ ನಾಮ ಹತವೆ ಮಾಡುತಲಿದ್ದ ಕಿತವನಿಗೊಲಿದು ಕ್ಷಿತಿಯೊಳು ಮುನಿಪತಿ ಎನ್ನಿಸಿತು ಪಥದಿ ಪಾಷಾಣವ ಪೆಣ್ಣನು ಮಾಡಿದ ಅತುಳ ಮಹಿಮನ ಹಿತನಾಮ 2 ಕುಲ ಶೀಲಗಳನ್ನು ಎಂದೂ ಎಣಿಸನೊ ಸುಲಭರೊಳಗೆ ಬಲು ಸುಲಭನು ಇವನು ಕಲುಷದಿ ದೂರನು ಶಬರಿಯ ಫಲವನು ಮೆಲ್ಲುತೆ ಮುಕ್ತಿಯನಿತ್ತಿಹನು ಲಲನೆಯ ಕದ್ದೊಯ್ದ ಖಳನ ತಮ್ಮನಿಗೆ ನೆಲವಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಶ್ರೀರಾಮ ತುಳಸಿವರ ಶ್ರೀಕೃಷ್ಣ ತುಳಸಿ ಪ ನಿನ್ನ ಪಾದವು ಚತುರ್ಮುಖನ ಭಾಗವು ದೇವಿ ನಿನ್ನ ತುದಿ ಕೈಲಾಸನಾಥ ಶಿವ ಭಾಗವು ನಿನ್ನ ಮೈಯೊಳು ಸಕಲ ದೇವತೆಗಳಿಹರು 1 ಗಂಗೆ ಗೋದಾವರಿಯು ತುಂಗಭದ್ರೆಯು ಯಮುನೆ ರಂಗನಾಥ ಸಮೇತ ದಿವ್ಯ ಕಾವೇರಿಯು ಮಂಗಳೆಯೆ ನಿನ್ನಾವಾಸವಾಗಿಹರು 2 ಕಾಶಿ ಕಂಚಿಯು ಮಧುರೆ ನೈಮಿಷ ಹರಿದ್ವಾರ ಭಾಸುರದ ಗೋಕರ್ಣ ದ್ವಾರಕಾವತಿಯು ಶ್ರೀಶೈಲ ಹಿಮವಂತ ಸರ್ವ ಸುಕ್ಷೇತ್ರಗಳು ಭಾಸಮಾಗಿರುತಿಹವು ನಿನ್ನ ನೆರಳಿನಲಿ 3 ನಿನ್ನ ಬೃಂದಾವನವೆ ವೈಕುಂಠ ಕೈಲಾಸ ನಿನ್ನ ತೀರ್ಥವೆ ಸಕಲ ಪುಣ್ಯತೀರ್ಥ ನಿನ್ನ ದರ್ಶನವೆಲ್ಲ ದೇವತಾ ದರ್ಶನವು ನಿನ್ನ ಪೂಜೆಯೆ ಸಕಲ ದೇವತಾ ಪೂಜೆ 4 ನೀನಿರುವ ದೇಶದಲಿ ರೋಗಗಳ ಭಯವಿಲ್ಲ ನೀನಿರುವ ದೇಶದಲಿ ಯಮನ ಭಯವಿಂತಿಲ್ಲ ನೀನಿರುವ ದೇಶದಲಿ ಭೂತ ಭಯವಿಲ್ಲ 5 ಗಂಧ ಪುಷ್ಪವು ಧೂಪ ದೀಪ ನೈವೇದ್ಯದಿಂ ವಂದಿಸುತ ನಿನ್ನ ನಾಂ ಪೂಜೆಗೈಯುವೆನು ಇಂದಿರೆಯ ಸೌಭಾಗ್ಯ ಸಂತತಿಯ ನೀನಿತ್ತು ಮುಂದೆ ಪಾಲಿಸು ಭಕ್ತಿ ಮುಕ್ತಿ ಸಂಪದವಂ6 ಜಯ ಮಂಗಳಂ ತುಳಸಿ ಸರ್ವಮಂಗಳೆ ದೇವಿ ಜಯ ಮಂಗಳಂ ತುಳಸಿ ಮುರಹರನ ರಮಣಿ ಜಯ ಮಂಗಳಂ ತುಳಸಿ ಲೋಕಪಾವನೆ ಮೂರ್ತಿಜಯ ಮಂಗಳಂ ತುಳಸಿ ಧೇನುಪುರ ದೇವಿ 7
--------------
ಬೇಟೆರಾಯ ದೀಕ್ಷಿತರು