ಒಟ್ಟು 12527 ಕಡೆಗಳಲ್ಲಿ , 133 ದಾಸರು , 6731 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾದರೂ ಬುದ್ಧಿ ಬಾರದು ಜನಕೆ ಕಣ್ಣಾರೆ ಕಂಡರು ಮರವುದು ಮನಕೆ ಪ. ಉದರದಲ್ಲಿ ರಚಿಸುವರ್ಯಾರು ರೂಪಾ- ತದಧೀನವಾಗಿ ಬರುವದೆಂದು ತಾಪ ಮದ ಮೋಹಾದಿಗಳೆಂತು ಮಸುಕುವದೆಂತರಿ- ತಿದ ನೋಡಿದರೆ ಕರ್ತ ತೋರುವ ಭೂಪ 1 ಕಾರಣ ಸಾಮಥ್ರ್ಯಯಿದ್ದರು ಕಾರ್ಯ ತೋರದು ಕೆಲರಿಗೆ ತನ್ನಂತಾಗುವದು ವಾರಿಧಿ ಶಯನನ ವಶವಾದರಿಂದಹಂ- ಕಾರದಿಂದಲಿ ತನ್ನಿಂದಹದೆಂಬ ಮೋಹದಿ 2 ರಕ್ಷಕರಿಲ್ಲದ ಶಿಶು ಬದುಕುವುದು ಲಕ್ಷ ಜನರ ಯತ್ನದಲಿ ಮತ್ತೊಂದಿರದು ಲಕ್ಷ್ಮೀರಮಣ ವೆಂಕಟೇಶನ ಗತಿಯೆಂದಾ- ಪೇಕ್ಷಿಸದಿರೆ ಕುಕ್ಷಿಯೊಳಗಿಟ್ಟು ಸಲಹುವಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಇನ್ನಾರಿಗುಸುರುವೆ ಇನ್ನಾರ ಬಳಲಿಸುವೆನಿನ್ನ ಚಿತ್ತಬಂದಂತೆ ನೀನೆ ಕಾಯಯ್ಯ ಪ. ಅನ್ನಾಥರೊಡೆಯ ಎನ್ನ ಮುನ್ನ ಮಾಡಿದ ಪಾಪತÀನ್ನ ಫಲವಾಯಿತೆಂದು ಇನ್ನುಬ್ಬಿ ಕೊಬ್ಬುತಿದೆಎನ್ನುದರದಿ ಅನುದಿನ್ನ ಕೂಡಿಘನ್ನಪಿತ್ತವೆಂಬ ಬಲುಕಿಚ್ಚು ಹೆಚ್ಚುತಿದೆ 1 ದ್ರೌಣ್ಯಸ್ತ್ರದಿಂದ ಬೆಂದ ನಿನ್ನ ತಂಗಿಯ ಮೊಮ್ಮಗಸನಕಾದಿಗಳರ್ಚಿಸುವ ಸೌಮ್ಯಪಾದದಕೊನೆಯನ್ನೆ ಮುಟ್ಟಿಸಿ ಪೆಣನಾಗಿರ್ದ ಹಸುಳೆಯ ಜನರು ಜಯಜಯವೆನೆ ಜೀವಂತನ್ನ ಮಾಡಿದೆ 2 ನಿತ್ಯ ಮೃತನು ನಾನುಭೃತ್ಯನು ಪಾಪವ ಕಿತ್ತು ಎತ್ತಿಕೋ ತಂದೆ 3 ಅಂಜಿದ ಕಪಿಕಟಕ ಸಭೆಯ ಪಂಜರ ಬಸಿವುತಿದೆ ನಿನ್ನಕಂಜಾಕ್ಷದಿಂದ ನೋಡಿದರವರಂಜಿಪೋಗದೆಅಂಜನಾದೇವಿಯ ಸುತನಾಳಿದ ರಘುರಾಯಅಂಜಿಸಬೇಡ ತಂದೆ ನಿನ್ನ ಕಂದನ ರಕ್ಷಿಸಿಕೊ 4 ವನ್ನದ ಹರಿಣನಂತೆ ಸುತ್ತ ಮುನ್ನ ಬರಲು ಕೃಷ್ಣಎನ್ನ ತಾಪವು ಅನುದಿನ್ನ ತಟ್ಟದುಇನ್ನೊಬ್ಬ ಮದ್ದನೀಯೆ ಅದು ಉನ್ನತವಾಗುತಿದೆ ತಂದೆಎನ್ನಾಳು ಹಯವದನ ಇನ್ನಾದರೆ ಸಲಹೊ 5
--------------
ವಾದಿರಾಜ
ಇನ್ನಾರು ಜಗದೀಶ---- ಎನ್ನ ಮೊರೆ ಕೇಳು ಶ್ರೀರಾಮ ಪ ನಿರ್ವಹಿಸಲಾದೆ ಶ್ರೀರಾಮಾ ತೋರಿ ಎಣಿಸುವರಾರು ರಾಮಾ 1 ಅಕಳಂಕ ಚರಿತ ಶ್ರೀರಾಮ ರುಕ್ಮಿಣಿಯರಸ ಶ್ರೀರಾಮ 2 ನೀನೆ ಎಂದು ಸ್ತುತಿಸುವೆನು ಶ್ರೀರಾಮಾ ಪರಿಹರಿಸಿ ಕಾಯೋ ರಾಮಾ 3 ಬ್ರಾಹ್ಮಂಡನಾಯಕ ಹರೇ ರಾಮಾ ಮೂರ್ತಿ ಕೋದಂಡದರ ಶ್ರೀರಘು ರಾಮಾ 4 ತೋರಿನಿಮ್ಮ ಸ್ಮರಿಸುವೆನು ರಾಮಾ ಭಾರವು ನಿನ್ನದು ಶ್ರೀರಾಮ 5
--------------
ಹೆನ್ನೆರಂಗದಾಸರು
ಇನ್ನಾರೆ ತಿಳಿದು ನೋಡು ಮನರಾಯಾ | ನಿನ್ನ ಕಣ್ಣದೆರೆದು ಸ್ವ ಹಿತದ ಉಪಾಯಾ ಪ ನಾನಾ ಜನ್ಮದಲ್ಲಿ ಬಂದು ಧರೆಯಲ್ಲಿ ಸುಖ | ವೇನು ಪಡೆದಿ ಹರಿಯ ಸ್ಮರಣೆ ಮರೆದಿಲ್ಲಿ 1 ಶರಗೊಡ್ಡಿ ಬೇಡಿಕೊಂಬೆ ನಾನೀಗಾ | ಸ್ಥಿರವಾದರಿಲ್ಲ ದೂರ ಶಿವಯೋಗಾ 2 ಇಂದು ನಾಳೆವೆನ್ನಬೇಡಿ ನಿಶ್ಚಯಾ ನಿನಗ | ಮುಂದ ಮತ್ತ ದೊರೆಯದಿದ ನರದೇಹಾ 3 ತಂದೆ ಮಹಿಪತಿಸ್ವಾಮಿ ದಯದಿಂದ | ನಂದವ ಪಡೆದು ಗೆಲಿಯೋ ಭವದಿಂದಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನಾರೆ ನೆರೆ ತಿಳಿ ನಿಜ ಹಿತವನು ಪ ಇನ್ನಾರೆ ನೆರೆ ತಿಳಿ ನಿಜ ಹಿತವನು | ನಿನ್ನೊಳು ನೀನು ಮರಳು ಮನವೇ | ತನ್ನ ಹಿತವ ತಾ ನರಿಯದೆ ಮರೆದು | ದಣ್ಣನೆ ದಣಿವುದು ಸುಖದನುವೇ 1 ಸಂತರಿಗೆರಗಿ ಶರಣವ ಮಾಡಿ | ಸದ್ಭೋಧ ಕೇಳಲು ಬೇಸರಿಕೆ | ಪಂಥದಿ ಲೆತ್ತ ಪಗಡಿ ಜೂಜೂ ಮಂಡಿಸಿ | ಎಂದಿಗೆ ದಣಿಯೇ ನೀ ವಂದಿನಕೆ 2 ಒಂದರೆ ಘಳಿಗೆಯ ಹರಿಕಥೆ ಮಾಡುವ | ಸ್ಥಳದಲಿ ಕೂಡಲು ತೂಕಡಿಕೆ | ಛಂದದಿ ಹಾಸ್ಯ ಕುವಿದ್ಯಗಳಾಟವ | ನೋಡುದರಲಿ ಮಹಾ ಎಚ್ಚರಿಕೆ 3 ಪಥ | ಅನುಸರಣಿಯೊಳಗೆ ನಿರ್ಭಯವು | ಧನ ಧರ್ಮದಂಧರ ಮನಸವ ಹಿಡಿಯಲು | ಕಾಶಿನ ಆಶೆಗೆ ಬೆಜ್ಜರವು 4 ತೃಷೆಯದ ಕಾಲಕೆ ಬಾವಿ ತೋಡುವೆನೆಂಬಾ | ವನ ಪರಿಯಲಿ ಮತಿವಿಡಿಯದಿರು | ವಸುಧಿಲಿ ಮಹಿಪತಿ ನಂದನ ಪ್ರಭುವಿನ | ಶರಣ ಹುಗಲು ದಿನ ಗಳೆಯದಿರು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನುಪೇಕ್ಷೆಯ ಮಾಡೆ ಎನ್ನ ಕಾಯುವರಿಲ್ಲ ಮನ್ನಿಸಿ ಸಲಹೊ ದಯದಿ ಪ ಆಪನ್ನ ಪರಿಪಾಲ ಶ್ರೀನಿವಾಸ ಅಖಿಳಾಮರೇಶ | ಶ್ರೀಶಾ ಅ.ಪ ಕ್ರೂರತರ ಸಂಸಾರ ದಾವಾಗ್ನಿ ಮೇರೆಯಿಲ್ಲದೆ ಸುಟ್ಟು ಘೋರ ದುಃಖ ಬಿಡಿಸುತಿಹುದೊ ವಾರಿಜಾಕ್ಷ ನಿನ್ನ ನಾಮಾಮೃತವೆಂಬ ಮಳೆಗರೆದು ಹರಸಿ ಪೊರೆಯಯ್ಯ | ಜೀಯ 1 ಸತಿಸುತರ ಹಿತಕಾಗಿ ಅತಿ ನೀಚವೃತ್ತಿಲಿ ನಡೆದು ಪತಿತ ನಾನಾದೆನಯ್ಯ ಪತಿತಪಾವನ ನಿನ್ನ ಕಥೆಗಳನು ನುಡಿಸಿ ಸ- ದ್ಗತಿಯ ಪಾಲಿಸಯ್ಯ | ಪ್ರೀಯ 2 ಆರು ಮಂದಿಗಳೆಂಬ ವೈರಿಗಳೆನ್ನನು ಸೇರಿ ಗಾರು ಮಾಡುತಲಿಹರೊ ಕಂಸಾರಿ ಸೇರಿದೆ ಪರಿಹರಿಸೊ ಕಷ್ಟ | ನಿನ್ನಿಷ್ಟ 3 ಪಶುಪತಿ ಘುಡುಘುಡಿಸಿ ವ್ಯಸನದಿಂ ಕೊಲ್ಲುತಿಹುದೋÀ ಶ್ವಸನ ಅಂತರ್ಯಾಮಿ ನಿಶಾಚರ ವೈರಿ ವಶಮಾಡಿ ಎನ್ನ ಪೊರೆಯೊ | ಕಾಯೊ 4 ಅತಿತ್ತ ಪೋಗದಲೆ ಹಿತವಾದ ಚಿಂತೆಯೊಳು ರತನಾಗಿ ಖತಿಗೊಳ್ಳುತಿಹೆನೊ ಸ್ಮøತಿಯಿತ್ತು ಪಾಲಿಸೊ | ಸಲಿಸೊ 5 ಒಂದು ಕ್ಷಣವಾದರು ಕುಂದು ಮಾಳ್ಪಾಲೋಚನೆ ಯಿಂದ ಮನ ಹಿಂದಾಗದೊ ಆನಂದ ಮುನಿವಂದ್ಯ ದ್ವಂದ್ವತಪ ಪಾದದಿ ಮನ ಹೊಂದುವಂದದಿ ಮಾಡೊ | ಎನ್ನ ಕೂಡೊ 6 ಐಹಿಕ ಸುಖ ಬಯಸಿ ಲೋಕದ ವಿಹಿತಗಳೆಲ್ಲ ಮರೆದೆ ತಲ್ಪ ವಿಜಯರಾಮಚಂದ್ರವಿಠಲ ಪಾಹಿ ಸತತಯೆನ್ನ | ಮುನ್ನ 7
--------------
ವಿಜಯ ರಾಮಚಂದ್ರವಿಠಲ
ಇನ್ನೂ ನೆಲೆಯ ನೋಡುವರೆ | ಮುನ್ನ ಮಾಡಿದ್ದಾಡುವರೇ ||ಉನ್ನತ ಮಹಿಮ ನಿನ್ನ ನಂಬಿದವರನು ಕಾಡುವರೇ ಪ ಕರವ ನೀಡುತ ನೋಡುತಲಿ 1 ಘಾಸಿ ಆದೆ ಕಾಸಿಗಾಗಿ |ದಾಸ ಪಾಲಕ ಲಕ್ಷ್ಮೀಶ ತಪ್ಪದಿರೋ ಭಾಷೆಗಾಗಿ 2 ಮನ್ನಿಸೆನ್ನ ಮಾತು ಹರಿಯೇ | ಇನ್ನು ಮಾತೊಂದು ನಾನರಿಯೆ | ಬೆನ್ನು ಬಿದ್ದವರ ಕಾಯೋ ರುಕ್ಮೇಶ ನಾರಾಯಣ ದೊರೆಯೇ 3
--------------
ರುಕ್ಮಾಂಗದರು
ಇನ್ನೆಲ್ಲಿತನಕ ಇವಗೆ ದುರ್ಬವಣೆ ಹರಿಯೆ ನಿನ್ನ ಉನ್ನತವಾದ ಮರೆಬಿದ್ದ ಬಳಿಕ ಪ ಮಂದಮತಿ ತೊಲಗದು ಕುಂದು ನಿಂದೆ ಅಳಿವಲ್ಲದು ಮಂದಿಮಕ್ಕಳ ಮೋಹವೊಂದು ಕಡಿವಲ್ಲದು ಸಿಂಧುಶಯನನೆ ಗೋವಿಂದ ನಿಮ್ಮ ಚರಣ ವೊಂದೆ ಮನದಲಿ ಭಜಿಸಾನಂದಪಡಿವಲ್ಲದು 1 ಮೋಸಮರವೆ ಹರಿವಲ್ಲದು ಆಶಪಾಶ ಬಿಡವಲ್ಲದು ಹೇಸಿ ಸಂಸಾರದ ದುರ್ವಾಸನೆಯು ಹಿಂಗದು ದೂಷಣೆಗೆ ನೋಯುವುದು ಭೂಷಣೆಗೆ ಹಿಗ್ಗುವುದು ದೋಷದೂರನೆ ನಿನ್ನ ಧ್ಯಾಸನಿಲ್ಲವಲ್ಲದು 2 ಕಪಟ ಮತ್ಸರಬುದ್ಧಿ ಚಪಲತನ ಅತಿಕ್ರೋಧ ಕಪಿಮನದ ಚೇಷ್ಟೆ ಅಪರೋಕ್ಷ ನಿಲ್ಲವಲ್ಲದು ಅಪ್ಪ ಶ್ರೀರಾಮ ನಿಮ್ಮ ಜಪತಪ ಸಿದ್ಧಿಸವಲ್ಲದು 3
--------------
ರಾಮದಾಸರು
ಇನ್ನೇನ ಮಾಡುವೆ ಇನ್ನಾರ ಬೇಡುವೆ ಪ್ರ-ಸನ್ನ ಚೆನ್ನಕೇಶವ ಎನ್ನ ಬಿನ್ನಪವಮನ್ನಿಸಿ ದಿನದಿನದಲ್ಲಿನಿನ್ನನರ್ಚಿಪಂತೆ ಮಾಡು ಪ. ಮೊಲೆಯುಂಬ ಹಸುಗೂಸು ಮಾತನಾಡಿ ತನ್ನಮನದಭೀಷ್ಟವ ಪೇಳ್ವುದೆಚೀರಿ ಅಳುವದೈಸೆ ಅದನರಿತು ಅದರ ತಾಯಿಅಪ್ಪ್ಪಿಮುದ್ದಾಡಿಸುತ್ತಬಳಲಿಕೆÀ ಪೋಪಂತೆ ನಸುಬಿಸಿಪಾಲನುಬಾಯೆಂದು ಕುಡಿಸುವಳುಸಿರಿಲಲನೆಯರಸ ನಮ್ಮ ಈ ಪರಿಯಲಿನೀನು ಲಾಲಿಸಿ ಸಲಹಬೇಕು 1 ಕರಿ ಕರೆಯಲುಪೊರೆದಂತೆ ಪೊರೆಯೆನ್ನನುಮಕರಿಯ ಕೊಂದು ಪೊರೆದಂತೆ2 ಹುಲಿಯ ಕಂಡೋಡುವ ಹುಲ್ಲೆಯ ಮರಿಯಂತೆಭವದ ಬೇಗೆಯಲಿ ಬೆಂದೆ ವಿಘಳಿಗೆ ಘಳಿಗೆಯೊಳು ಅಲಸದೆ ಪಾಪವಗÀಳಿಸುವ ಗÀಸಣೆಗಂಜೆತುಳಸಿಯ ದಳದಿಂದ ಸಂತುಷ್ಟನಹ ನಿನ್ನಒಲಿಸುವ ಭಾಗ್ಯದಲ್ಲೆ ಈ ಇಳೆಗೆ ಭಾರವಾದೆಇಹಪರ ದುಃಖದ ಹಂಬಲಿಕೆ ಎಳ್ಳಷ್ಟು ಇಲ್ಲಸನ್ಮಾರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ ಅಪವರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ3 ಹೆಂಡಿರ ಸಾಕಲಾರದೆ ಹೆಣ್ಣು ಮಕ್ಕಳುಗಳಕಂಡ ಕಂಡವಗೆರ್À ಮಾರಿ ಜಗಭಂಡನೆನಿಸಿಕೊಂಡೆ ಬಡತನ ಹಿಂಗದೆಕೊಂಡೆಯಗಳ ಪೇಳುವೆಉಂಡುಡುವರ ಕಂಡು ಮತ್ಸರ ಮಾಡುವೆತಂಡ ತಂಡÀದವರಿಂದ ಕಡಗೊಂಡರ್ಧನ ಕೊಡದೆ ಕಲ್ಲಪೊರುವೆನು ಕೋ-ದಂಡವೇರಿಸಿ ಕೊಂಡೆನು 4 ದಂಡವಿಡಿದು ವೇಷಧಾರಿಯೆಂಬುದ ಕೈಕೊಂಡು ರಾವಣನಂತೆ ಚರಿಸಿ ಎನ್ನಮಂಡೆ ಬೋಳು ಮಾಡಿ-ಕೊಂಡು ಇಳೆಯೊಳು ಪರಸತಿಯರ ಮೋಹಿಪೆಪುಂಡರೀಕಾಕ್ಷ ಈ ಪರಿಯ ಕ್ಲೇಶಗಳನುಉಂಡರೆÀ ವೈರಾಗ್ಯ ಬಾರದು ಎಲೆಪಾಂಡವಪ್ರಿಯ ಇನ್ನಾರಿ ಗುಸುರುವೆನು ಉ-ದ್ದಂಡಭಕ್ತರ ಸೇರಿಸೊ ಕೈ-ಕೊಂಡು ನಿನ್ನುದ್ದಂಡಭಕ್ತರ ಸೇರಿಸೊ5 ತಪ್ಪಿದರೆ ತಾಯಿ ತನ್ನ ಮಕ್ಕಳುಗಳತಕ್ಕೈಸಿಕೊಂಬವೊಲು ಕಾಮ-ನಪ್ಪ ಎನ್ನಪ್ಪ ಒಂದು ಕೊರತೆಯ ಕಾಣದೆಕರುಣದಿ ಕಾಯಬೇಕುಅಪಾರಮಹಿಮ ನೀನಾಶ್ರಿತ ಜನರನುಅತ್ತ ಹೋಗೆನ್ನೆ ಗಡ ನೀನ-ಪ್ರತಿಮಹಿಮನೆನಿಸಿಕೊಂಡೆ ಅದರಿಂದಅಮರರ ಶಿರೋರನ್ನವೆ ಅರ್ಜುನಸಖಅಮರರ ಶಿರೋರನ್ನವೆ 6 ಸರಿಮಿಗಿಲಿಲ್ಲದ ಸರ್ವೇಶ ಹರಿಯೆಂದುಸಿರಿಹಯವದನರಾಯ ನಿನ್ನಪರಮ ಮುನಿಗಳೆಲ್ಲಪರೀಕ್ಷೆಮಾಡಿ ನೋಡಿಮುನ್ನ ನಿರ್ಣೈಸಿದರುಹಿರಿಯರ ಮಾತನು ಪಾಟಿಮಾಡದನಗೋತ್ರ ಸೂತ್ರಗಳು ಪೋಕುಪ್ರವರ ಗೋತ್ರ ಋಷಿಮೂಲಯೆಂದು ಪ್ರಸಿದ್ಧ ಇನ್ನಾರು ನಿನ್ನಂಥವರು 7
--------------
ವಾದಿರಾಜ
ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ಧ್ರುವ ಎನ್ನೊಳು ಗುರು ತನ್ನ ಮರ್ಮವು ತೋರಿದ ಇನ್ನೇನಿನ್ನೇನು 1 ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು 2 ಎನ್ನೊಳು ಘನಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು 3 ನಾನು ನಾನೆಂಬುದು ನೆಲಿಯು ತಾನಾಯಿತು ಇನ್ನೇನಿನ್ನೇನು 4 ಏನೆಂದು ತಿಳಿಯದ ಅನುಮಾನ ಗಳೆಯಿತು ಇನ್ನೇನಿನ್ನೇನು 5 ಪರಮ ತತ್ವದ ಗತಿ ನೆಲೆ ನಿಭ ತೋರಿತು ಇನ್ನೇನಿನ್ನೇನು 6 ಎನ್ನೊಳಾತ್ಮ ಖೂನ ಕುರುಹವು ತಿಳಿಯಿತು ಇನ್ನೇನಿನ್ನೇನು 7 ಕನಸು ಮನಸು ಎಲ್ಲ ನಿನ್ನ ಸೇವೆ ಆಯಿತು ಇನ್ನೇನಿನ್ನೇನು 8 ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು 9 ಅರಹು ಮರಹಿನ ಇರುವು ತಿಳಿಯುತು ಇನ್ನೇನಿನ್ನೇನು 10 ಭಾವದ ಬಂiÀiಲಾಟ ನಿಜವಾಗಿ ದೋರಿತು ಇನ್ನೇನಿನ್ನೇನು 11 ಜೀವಶಿವನ ಗತಿ ಸೋಹ್ಯವು ತಿಳಿಯಿತು ಇನ್ನೇನಿನ್ನೇನು 12 ಆಯವು ದಾಯವು ಸಾಹ್ಯವು ದೋರಿತು ಇನ್ನೇನಿನ್ನೇನು 13 ಜೀವನ್ನ ಜಾತಿಯ ಕೀಲವು ತಿಳಿಯಿತು ಇನ್ನೇನಿನ್ನೇನು 14 ಜನ್ಮ ಮರಣದಾ ಜಂತ್ರವು ಮುರಿಯಿತು ಇನ್ನೇನಿನ್ನೇನು 15 ಸಂದೇಹ್ಯ ಸಂಕಲ್ಪ ಸೂಕ್ಷ್ಮವು ಹರಿಯಿತು ಇನ್ನೇನಿನ್ನೇನು 16 ಮರಣದ ಗತಿಗಳ ಮಂತ್ರವು ತಿಳಿಯಿತು ಇನ್ನೇನಿನ್ನೇನು 17 ಸುಷಮ್ನ ನಾಳದ ಸೂಕ್ಷ್ಮವು ದೋರಿತು ಇನ್ನೇನಿನ್ನೇನು 18 ಇಮ್ಮನವಿದ್ದದು ಒಮ್ಮನವಾಯಿತು ಇನ್ನೇನಿನ್ನೇನು 19 ಆಧಾರಚಕ್ರದ ಹಾದಿಯು ತಿಳಿಯಿತು ಇನ್ನೇನಿನ್ನೇನು 20 ಸದ್ಗುರು ಕೃಪೆಯಾದಾ ಸಾಧನವಾಯಿತು ಇನ್ನೇನಿನ್ನೇನು 21 ಇನ್ನೇನಿನ್ನೇನು 22 ಅಂತರಾತ್ಮನ ಸೂತ್ರಾಂತ್ರವು ತಿಳಿಯಿತು ಇನ್ನೇನಿನ್ನೇನು 23 ಇನ್ನೇನಿನ್ನೇನು 24 ಎನ್ನೊಳು ಭಾಸ್ಕರ ಗುರು ತಾನೆಯಾದನು ಇನ್ನೇನಿನ್ನೇನು 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ನೇನು ಕೇಳುತಿ ಛೀ ಹುಚ್ಚ ಮರುಳೆ ಪ ಆರನು ಕಟ್ಟಿನ್ನು ಆರನು ಬಿಟ್ಟಿನ್ನು | ಆರಕ ಆರಿಟ್ಟು ಆರಳಿದು | ಆರು ಚಕ್ರವ ಮೀರಿರುವ | ಮೂರು ಗುಣಕೆ ದೂರಿರುವವನ 1 ಅನುದಿನ | ಸಾಧು ಪುರುಷರ ಸಂಗದಲಿ |ಭೇದವ ಬಿಟ್ಟು ನಾದವನಾಲಿಸಿ | ಬೋಧದೊಳಗೆ ಲಯಗೊಂಡ ಮಹಾತ್ಮನ2 ನಿತ್ಯ ಪೂಜಿಸಿ ಶಾಂತಿ ಪೊಂದಿದವನ3
--------------
ಭಾವತರಕರು
ಇನ್ನೇನು ಗತಿ ಎನಗೆ ಈ ಉದರಪೋಷಣಕೆನಿನ್ನ ಸೇವೆಯನಿತ್ತು ಸಲಹೊ ರಾಮೇಶ ಪ ಊರೂರ ತಿರುಗಿ ಭಿಕ್ಷವ ಬೇಡಲಾರೆ ನಾಂಘೋರ ವಿಷವನು ಮೊದಲೆ ಕುಡಿಯಲಾರೆನೀರ ಹೊರಲಾರೆ ಬಾಗಿಲ ಕಾಯಲಾರೆ 1 ಧರಿಸುವರೆ ವಸ್ತ್ರವಿಲ್ಲದೆ ಲೋಕದೋಳ್ ದಿಗಂ-ಬರನಾಗಿ ನಿನ್ನಂತೆ ಚರಿಸಲಾರೆಕರಿ ವ್ಯಾಘ್ರಚರ್ಮವನು ಪೊದೆದು ವರ್ತಿಸಲಾರೆಧರೆಯರಿಯೆ ನಟನಾಗಿ ಕುಣಿದಾಡಲಾರೆ 2 ಭಂಗ ರಾಮೇಶಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಇನ್ನೊಬ್ಬರಿಗೆ ಇದು ಏನು ತಿಳಿದೀತು ಧ್ರುವ ವೇದಾಂತಕಿದು ಸನ್ಮತಗೂಡುವ ಮಾತು ಸಾಧುಜನರಿಗೆ ಸಾಕ್ಷಿಯಾಗಿ ದೋರುವ ಮಾತು ಸಾಧನಕೆ ಸಾಧಿಸುವ ಮಾತು ಬೋಧಿಸಿದವಗೆ ಬಲವಾಗುವ ಮಾತು 1 ಕೋಟಿ ಜನ್ಮದಾ ಪುಣ್ಯವಂತಗಿದಿರಿಡುವ ಮಾತು ನೋಟ ನಿಜವಾದವಗೆ ನೀಟವಾಗಿಹ ಮಾತು ಸೂಟಿಗಿದೆ ಘನಕೂಟ ಮಾತು ನಾಟಿಮನದೊಳು ಮಥಿüಸುವ ಮಾತು 2 ದ್ವೈತ ಅದ್ವೈತಕ ಆಧಾರವಾಗುವ ಮಾತು ತ್ರಯಗುಣಕ ಮೀರಿ ಮಿಗಿಲಾಗಿ ದೋರುವ ಮಾತು ಮಹಿಪತಿಯ ಗುರುಗೂಢ ಮಾತು ತ್ರಯಲೋಕಕಿದೆ ತಾರಿಸುವ ಮಾತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ಯಾಕೆ ದೇವಿ ಮುನಿಸು ಮಾತಾಡೇ| ನಿನ್ನ ಹಿಡಿದ ಛಲ ಗೆಲಿಸಿದ ಬಳಿಕ ಪ ಘನ ಮಳೆಗರವ ಜೀಮ್ಯೂತಮ್ಯಾಲೇ|ತಾ| ಮುನಿಪ ಕೋಪದಿ ಪೋಗುತಲಿಹ| ಮನ ದೊಳಗಿದ್ದ ಚಾತಕನಂತೆ ನಿನ್ನ ಮ್ಯಾಲೆ| ವನರುಹ ನೇತ್ರ ನಾ ಮುನಿದುದು ಕಾಣೆ 1 ಸಂಗತಿಲ್ಲದೆ ನಿನ್ನಾಂಗ ನಟ್ಟುಳಿಯಿಂದ| ಭಂಗ ಗೊಂಡಿಹುದು| ತುಂಗ ಪಯೋಧರೆನ್ನಂಗ ತೋಷಿಸುವ ತಾ| ಲಿಂಗನ ಗೈಯೆ ನೀ ಮಂಗಳವದನೇ 2 ನಿನ್ನಿಂದಾಗಲಿ ಮತ್ತ ನನ್ನಿಂದಾಗಲಿ ಇನ್ನು ಮುನ್ನಾದ ಮನದ ಗಂಟು ಬಿಟ್ಟು| ಪನ್ನಗವೇಣಿ ಮಾತಾಡೇ ಸದ್ಗುಣದ ಸಂ| ಪನ್ನೇ ಮಹಿಪತಿ ಸುತಗೊಲಿದ ಶ್ರೀದೇವಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ಯಾಕೆ ಭವಬಾಧೆ ಇವಗೆ ಪನ್ನಂಗಶಯನನಡಿ ಚೆನ್ನಾಗಿ ಭಜಿಪವಗೆ ಪ ದುರಿತ ದುರ್ಗುಣಗಳನು ತರಿದೊಟ್ಟಿ ನ ಶ್ವರದ ಸಿರಿಯನಾಪೇಕ್ಷಿಸಿದೆ ನಿರುತ ಮಾನಸದಿ ಪರಕೆ ಪರತರವೆನಿಪ ಹರಿಯಂಘ್ರಿ ಎಡೆಬಿಡದೆ ಸ್ಮರಿಸುತ ಮನದೊಳಗೆ ಹರುಷಬರುವವಗೆ 1 ಹೀನಸಂಸಾರದ ನಾನಾ ಸಂಪದವೆಲ್ಲ ಶ್ವಾನನ ಕನಸಿನಂತೇನಿಲ್ಲವೆನುತ ಜ್ಞಾನದೊಳಳವಟ್ಟು ಜಾನಕೀಶನ ಧ್ಯಾನ ಮಾನಸದಿ ಒಲಿಸಿಕೊಂಡಾನಂದಿಸುವವಗೆ 2 ಹೇಸಿಯ ಪ್ರಪಂಚದ್ವಾಸನವನಳುಕಿಸಿ ದಾಸಜನ ಸಂಪದವೆ ಶಾಶ್ವತವೆನುತ ಶ್ರೀಶ ಶ್ರೀರಾಮನ ಸಾಸರನಾಮಗಳ ಧ್ಯಾಸದ್ಹೊಗಳುತ ಸಂತೋಷದಿರುವವಗೆ 3
--------------
ರಾಮದಾಸರು