ಒಟ್ಟು 798 ಕಡೆಗಳಲ್ಲಿ , 60 ದಾಸರು , 683 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು | ಇಂದೆನ್ನ ಜನುಮ ಸಫಲ | ಹಿಂದೆ ಅನಂತೇಶನೆಂದೆಂಬ ನಾಮದಲಿ | ಕಂಬು | ಕಂದರದ | ತಿಮ್ಮನ ಪ ಮಕರ ಕುಂಡಲಧಾರ | ಮಕ್ಕಳಾ ಮಣಿಸು ಕಾಮದಾ | ಅಕಳಂಕ ತುಲಸಿ ಸರ | ಕಮಲ ಅಕುಟಿಲ ಹೃದಯಮಂದಿರ | ಸಕಲಕಾಲದಲಿ ನಿಜ | ಭಕುತರಿಗೆ ಒಲಿದಿಪ್ಪ | ಅಖಿಳ ಲೋಕಾಧೀಶ ಮುಕುತಾರ್ಥ ಮುರವೈರಿ1 ಕರ ಮುಂಗೈಯ ಕಡಗ ಕಂಕಣ ಬಾಹು ಭುಜಕೀರ್ತಿ | ಮುಂಗೈಯ ಫಣಿಯ ತಿಲಕಾ | ಬಂಗಾರದಂಬರ ಭವದೂರಾ ಪದದಲ್ಲಿ | ಪೊಂಗೆಜ್ಜೆ ಸರ್ವಾಭರಣದಿಂದ ಒಪ್ಪುವಾ 2 ಪಾಂಡೆ ದೇಶವಾಸಾ ಪಾಂಡವರ ಸಂರಕ್ಷಕ | ಚಂಡ ಪ್ರಚಂಡ ಮಹಿಮಾ | ಗಂಡುಗಲಿಗಳ ಗಂಡಾ | ಕೊಂಡಾಡಿದವರಿಗೆ ತಂಡ | ತಂಡದ ವರವೀವಾ | ಉದ್ದಂಡ ವಿಜಯವಿಠ್ಠಲ| ಅಂಡಜಗಮನ ಕೃಷ್ಣಾ ತಿಮ್ಮಾ3
--------------
ವಿಜಯದಾಸ
ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾ ವಡಗಾಡಿ ವಸಡುಗ ಪಾವುಗೆ ಸುವರ್ಣದರ್ಪಣವಾ ಪ ಪಿಡಿದ ನಾರಿಯರು ಯಡಬಲದ ಕೈದೀವಿಗೆಯ ಕೊಡುತ ಕೈಲಾಗಿನವರಡಿಗಳೆಚ್ಚರಿಕೇ ಅ.ಪ ವೀಣೆ ದಂಡಿಗೆ ತಾಳ ಮೇಳ ಸನಕಾದಿ ಸುರ ನಾರಿಯರು ಗೀತ ಪ್ರಬಂಧ ನರ್ತನದ ಪು ರಾಣ ಕೋವಿದರು ಪಾಠಕನಿಕರ ಸಹಿತ ಗೀ ರ್ವಾಣರೈದಿರಲು ಅವಧಾನವೆಚ್ಚರಿಕೇ 1 ಗಂಧ ಪರಿಮಳ ಪುಷ್ಪ ತಾಂಬೂಲ ಫಲಗಳನು ತಂದು ಉಡುಗೊರೆಯ ಕಾಣೆಕೆಯಿಟ್ಟು ಜಯವೆನುತ ನಂದ ಮುಕುಂದ ಗೋವಿಂದ ಕೇಶವಯೆನುತ ವಂದನೆಗಳನೆ ಮಾಡಿ ನಿಂದರೆಚ್ಚರಿಕೇ 2 ಭಾಗವತ ಜನರು ಬಿರುದಾವಳಿಯ ಪೊಗಳೆ ಮುನಿ ಯೋಗಿಗಳು ತತ್ವ ಪ್ರಬಂಧದಧ್ಯಾಪಕರು ಮೇಘವಾಹನ ಪೂಮಳೆಗರೆಯೆ ಸಕಲ ವಿನಿ ಯೋಗದವರನು ಕಳುಹುವಾಗಲೆಚ್ಚರಿಕೇ3 ಸರಸಿಜೋದ್ಭವನು ದಿಕ್ಪಾಲನಾರದ ಧ್ರುವನು ಗರುಡ ಗಂಧರ್ವ ವಿದ್ಯಾಧರರು ಅನಿಲಜನು ಪರಮ ಭಕ್ತಿಯಲಿ ಊಳಿಗಕೆ ಬಂದೈದಾರೆ ಧರೆಗಧಿಕ ವೈಕುಂಠ ಚನ್ನ ಕೇಶವ ಚಿತ್ತೈಸೋ 4
--------------
ಬೇಲೂರು ವೈಕುಂಠದಾಸರು
ಹತ್ತು ಸಾರೆ ಬಾರದಲೆ ತೊಲಗೆನಮ್ಮಪ ನಿರಾಧಾರಾದಿ ನಿದ್ರೆ ಬಾರದಮ್ಮ ವಿ ಚಾರಿಸು ತಾಯಿ ಪಾಲುವಲ್ಲೆನಮ್ಮ ಧಾರುಣಿ ಸಂಬಂಧ ಎನಗಾಗದಮ್ಮ ಇದಕ್ಕೆ ಸಾರಿ ಸಾರಿಗೆ ಬಾಯಿ ತೆರೆವೆನಮ್ಮ 1 ದೇಹಿ ಎಂಬೊದೆನ್ನ ಜಾತಿಧರ್ಮವಮ್ಮ ನಾನು ಕರ ಚಾಚೆನಮ್ಮ ಆಹಾರಕ್ಕೆ ಬಲುದಿನ ಮೀರಿತಮ್ಮ ಸಂ ದೇಹವಿಲ್ಲದೆ ನಾರೇರು ಬಡಿಸಲಮ್ಮ 2 ಇದೇ ಕೇಳಿದೆನು ಇನ್ನು ಮೌನವಮ್ಮ ಬಲು ಸದಮಲ ಜ್ಞಾನಿಗಳಿಗೆ ಪ್ರೀತಿಯಮ್ಮ ಮಧುಹರಿ ವಿಜಯವಿಠ್ಠಲ ಪೂರ್ಣನಮ್ಮ ಸರ್ವರ ಹೃದಯದೊಳಗಾನಂದವಾಸನಮ್ಮ 3
--------------
ವಿಜಯದಾಸ
ಹದಿನಾಲ್ಕು ಲೋಕವನಾಳುವ ತಂದೆಗೆ | ಮುದದಿಂದ ನಾನೊಬ್ಬ ಭಾರವಾದೆನೆ ಪ ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ || ಭರದಿಂದ ಪೋಗಿ ಚೆನ್ನಾಂತು ಪೊತ್ತೆ || ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು | ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ 1 ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ | ಬೆರಳಲಿ ಧರಿಸಿ ಕಾಯ್ದು ನಿಜದೆ || ವರಮುನಿ ಪಸವನು ಬೇಡಲಾಗಿ ಬೆದರಿ ನರ- | ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ 2 ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ | ಸಲಹಬೇಕೆಂದು ಬೇಸರಿಸಲಿಲ್ಲಾ || ಸುಲಭದಲಿ ಶೇಷಾಚಲನಾಗಿಪ್ಪ | ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ 3
--------------
ವಿಜಯದಾಸ
ಹನುಮಂತ ದೇವನ ನೋಡಿ ಘನ ವಿಜ್ಞಾನ ಧನವನ್ನು ಬೇಡಿ ಪ ಅನುಮಾನ ಸಲ್ಲ ಸುರಧೇನುವೆನಿಸುವನು ತನ್ನ ನೆನೆವರಿಗೆ ಅ.ಪ. ಅಂಜನದೇವಿಯೊಳ್ ಪುಟ್ಟಿ | ಪ್ರ- ಭಂಜನ ಸುತ ಜಗಜಟ್ಟಿ | ಶ್ರೀ ಕಂಜನಾಭನನು ಕಂಡು ಭಜಿಸುತಲಿ ತಾನು ರಂಜಿಪನು 1 ಪಾಥೋದಿಯನು ನೆರೆದಾಟಿ | ರಘು - ನಾಥನ ಮಡದಿಗೆ ಭೇಟಿ | ಇತ್ತು ಖ್ಯಾತ ಲಂಕೆಯನು ವೀತಿ- ಹೋತ್ರನಿಗೆ ಕೊಟ್ಟ ಬಲುದಿಟ್ಟ 2 ಸಂಜೀವನಾದ್ರಿಯ ತಂದು | ಕಪಿ ಪುಂಜವನೆಬ್ಬಿಸಿ ನಿಂದು | ತುಸ ಅಂಜಕಿಲ್ಲದಲೆ ಅಸುರರನು ಭಂಜಿಸಿ ನಿಂತ ಜಯವಂತ 3 ಶ್ರೀರಾಮಚಂದ್ರನು ಒಲಿದು | ಮಹ ಪಾರಮೇಷ್ಠ್ಯವನೀಯೆ ನಲಿದು | ಮುಕ್ತಾ ಹಾರ ಪಡೆದ ಗಂಭೀರ ಶೂರ ರಣಧೀರ ಉದಾರ 4 ಎಂತೆಂತು ಸೇವಿಪ ಜಂತು | ಗಳಿ ಗಂತಂತೆ ಫಲವೀವನಿಂತು | ಶ್ರೀ - ಕಾಂತ ನಾಮವನು ಆಂತು ಭಜಿಪರಲಿ ಪ್ರೇಮ ಬಹುನೇಮ 5
--------------
ಲಕ್ಷ್ಮೀನಾರಯಣರಾಯರು
ಹನುಮಂತ ನೀ ಬಲು ಜಯವಂತನಯ್ಯ ಪ. ಅನುಮಾನವಿಲ್ಲವೊ ಆನಂದತೀರ್ಥಾರ್ಯ ಅ.ಪ. ರಾಮಸೇವಕನಾಗಿ ರಾವಣನ ಪುರವ ನಿ-ರ್ಧೂಮಮಾಡಿದ್ಯೊ ನಿಮಿಷದೊಳಗೆಭೂಮಿಪುತ್ರಿಗೆ ಮುದ್ರೆಯುಂಗುರವನಿತ್ತು ನೀಪ್ರೇಮಕುಶಲವ ರಾಮಪಾದÀಕÀರ್ಪಿಸಿದೆ 1 ಕೃಷ್ಣಾವತಾರದಲ್ಲಿ ಭೀಮನಾಗ್ಯವತರಿಸಿದುಷ್ಟ ದೈತ್ಯರನ್ನೆಲ್ಲ ಸಂಹರಿಸಿದೆದೃಷ್ಟಿಹೀನನಾದ ಧೃತರಾಷ್ಟ್ರವಂಶವನ್ನುಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಗರ್ಪಿಸಿದೆ 2 ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲುಮತಿಹೀನರಾಗೆ ಸಜ್ಜನರೆಲ್ಲಅತಿ ವೇಗದಲಿ ಮಧ್ವಯತಿಯಾಗಿ ಅವತರಿಸಿಗತಿಯ ತೋರಿಸಿದೆ ಹಯವದನ ನಿಜದಾಸ 3
--------------
ವಾದಿರಾಜ
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ
ಹನುಮಂತ ಬಲವಂತ ಅತಿ ದಯವಂತಾ | ಘನವಂತ ಕೀರ್ತಿವಂತ ಅತಿ ಜಯವಂತಾ || ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ | ಯ ನೀಯೋ ದನುಜ ಕೃತಾಂತಾ ಪ ಪಾವಮಾನಿ ಸತತ ಪಾವನ್ನ ಚರಿತಾ | ಪಾವಕಾಂಬಕನುತಾ ಪ್ಲವಂಗನಾಥಾ || ದೇವ ಕರುಣಪಾಂಗಾ ಭಾವುಕತುಂಗಾ | ಗ್ರೀವಾ ಶತಶೃಂಗ ಗ್ರಾವವೆ ಭಂಗಾ || ಕಾವಾ ವರವೀವಾ ಭೋದೇವ ಸಂಭವಾ | ಸು | ಗ್ರೀವ ಸಹಾಯ ಸರ್ವ ದೇವನರಸಿ ಯತಿವರ ಹಾರಿದಾ | ಕೋವಿದಾ ಕಪಿವರ ದೇವಕಿ ತನುಜನಾ || ಮಾವನ ಮಾವನಾ | ಜೀವಕೆ ಮುನಿದನೆ | ಜೀವೇಶ ಮತವನ ಪಾವಕಾ ಜಯ ಜಯ 1 ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ | ಗರಳ ದುರುಳರ ವರವದ್ದಾ | ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ | ಮರುತಾ ಸುಖ ಗುರುವೆ ಸುರತರುವೆ | ಫಲ | ನಿರ್ಜರ ಗಣದಲ್ಲಿ ಇಹ | ಪರದಲಿ ದೇವ | ಶರಧೀ ಬಾಗಿದ ಧೀರಾ | ಸೂನು ಆವಾಸ ಯೋಗಕೆ ಸಂ | ಸುರನದಿ ದಾಟಿದಾ ಪರಮಹಂಸ 2 ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ | ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ | ಕುರುಪತಿ ನಿಜ ತಮ್ಮ ಬರಲವನ ಹಮ್ಮು | ಬೊಮ್ಮ ಪೊರೆವನೆ ನಮ್ಮ | ಮರುತಾ ಸುಖ ಭರಿತಾ ಸಂಹರಗೈಸುವ | ಸಂ | ಕರ ಗರ್ವಹರ ಸರಯು ತೀರದಲ್ಲಿದ್ದಾ | ಪುರದಲ್ಲಿ ಮೆರದನೆ | ಕರ ಕಮಲೋದ್ಭವ | ವರ ವೃಕೋದರನೆ ವಿಜಯವಿಠ್ಠಲನ |ಶರಣರ ಪಾಲಾ ಬದರಿವಾಸಾ ಯಂತ್ರೇಶಾ 3
--------------
ವಿಜಯದಾಸ
ಹರಹರ ಮಹಾದೇವ ಮಹಾನುಭಾವಾ | ಭವ ಯ್ಯೋಮಕೇಶ | ಅಂಧಕ ಸುರರಿಪು ಜಾಣಾ | ಸುರವರ ಪುರ ಮುರಹರ ಪದವಿನುತಾ ಪ ಸಂಜೀವ | ವಿಷ ಕರ್ತುವಾಭರಣ ಜಗದ ಸೂತ್ರಾಣ | ಎಸೆವ ರುಂಡಮಾಲಾ ಪಾರ್ವತಿಯ ಲೋಲ | ಪಶುಪತಿ ಪಾವನ್ನ ವರಸುಪ್ರಸನ್ನ | ಅಸಮಾನಸಮಾ ಕುಸುಮಾಭಿಸಮ | ನಿಶಕರ ದಿನಕರ ಬಿಸಿ ನಯನ | ದಶಶಿರ ಪ್ರಸನ್ನ ಭಜಿಪರ 1 ಗುರುಕುಲೋತ್ತ,ಮ ತುಂಗ ವೃಷಭ | ಸುರನದಿ ಧರ ಧೀರ ಜಗದೋದ್ಧಾರ | ನಿರಂಜನ ಸುಂದರ ವದನ | ಕರಿ ಚರ್ಮಾಂಬರ ಶೋಭಾಂತರವಾದನಾ ಭಾ | ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ | ನರವರ ಶರಭೂತ ಪರಿವಾರ ಭಯಂಕರ | ದುರಿತ ವಿದೂರಾ 2 ಅಂಬರ ವ್ಯಾಘ್ರಾವಾಸಾ | ಯ್ಯೋಮ | ಕೇಶ ಸ್ಮಶಾನವಾಸ | ಭಾಸುರೋನ್ನತ ಲೀಲಾ | ಸುರಮುನಿಪಾಲಾ | ಚಾಪ ಪಿನಾಕಿ ಚಮುಪಾ | ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ | ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ | ಪುರಂದರ ದಾಸನ ದಾಸನ ಕ್ಲೇಶವಿನಾಶಾ 3 (ಔ) ಶ್ರೀತುಳಸೀ
--------------
ವಿಜಯದಾಸ
ಹರಿ ಎಂಬ ನಾಮ ಎರಡಕ್ಷರವ ದುರಿತ ಕಾನನ ಛೇದ ಪ ವೇದರಾಶೀ ಎಂಬ ಭೂಸುರನು ಯಮಪುರದ ಹಾದಿಯಲಿ ಪೋಗುತಿರೆ ಎಡಬಲದಲಿ ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ 1 ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ ಮೃತ್ಯು ನಡುಗೀ ನಿಂದು ಪೂಜೆ ಮಾಡೀ ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ 2 ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ ಅಂತಕ ಬಂದು ಕಾದೆ ಸ ಮರ್ಥನಾಗದೆ ಪೋದ ಏನೆಂಬೆ ಜಗದೊಳಗೆ3 ಹದಿನಾರು ಸಾವಿರ ತರುಣಿಯರು ಅಸುರನ್ನ ಸದನದಲಿ ಸೆರೆಬಿದ್ದು ಹರಿಯ ತುತಿಸೇ ಮುದದಿಂದ ಹರಿಪೋಗಿ ಖಳನ ಕೊಂದು ಆ ಸುದತಿಯರಿಗೆ ತನ್ನ ಅಂಗಸಂಗವನಿತ್ತ4 ಕಂಡವರ ಮನೆ ಉಂಡು ಚಾಂಡಾಲರ ಕೂಡ ಮಂಡಲದೊಳಗೆ ಪಾತಕನಾದರೂ ಗಂಡುಗಲಿ ವಿಜಯವಿಠ್ಠಲ ಹರೆ ಹರೇ ಎಂದುಕೊಂಡಾಡಿದರೆ ಮುಕುತಿ ಸುರರಿಗಿಂತಲೂ ವೇಗ5
--------------
ವಿಜಯದಾಸ
ಹರಿ ಪರದೈವ ಚತುರ್ದಶ ಲೋಕಕೆ | ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಪ ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ | ಮನ ಬಂದ ಹಾಗೆ ಅರ್ಪಿಸುತಿರಲು | ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ | ವನಜನಾಭನೆ ದೈವವೆಂದು ನಿರ್ಣೈಸಿದರು1 ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು | ಅಜ ಗಿರೀಶಾ || ಗೀರ್ವಾಣರಾದ್ಯರು ಪರಿಹರಿಲಾರದಿರೆ | ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು 2 ಕರಿ ಬಾಧೆಯನು ಬಡುತಲಿ | ಕಾವವಾತನೆ ದೈವ ಎಂದು ಕೂಗೆ || ನಾವು ತಾವು ಎಂದು ಎಲ್ಲರು ಸುಮ್ಮನಿರೆ | ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು 3 ಹÀಯಮುಖನು ವೇದಗಳು ಕದ್ದೌಯೆ ಸಕಲರು | ಭಯಬಿದ್ದು ನಿತ್ರಾಣರಾಗಿರಲು || ಜಯದೇವಿ ರಮಣನು ವೇದವನು ತಂದು ಜಗ | ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು 4 ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ | ಮದಡ ಮನುಜರೆಲ್ಲ ನೆಲೆಗಾಣದೆ || ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ | ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ5
--------------
ವಿಜಯದಾಸ
ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು ಸರಸಿಜಭವಾದ್ಯರಿಗೆ ಬಿಡದು ಪ ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ ದಿರದಾವ ಜನುಮವಾಗೆ ಪ್ರಾಣಿ ಅ.ಪ. ವಾರಿಜಭವನ ನೋಡು ಮುನಿಶಾಪದಿಂ ಧಾರುಣಿಯೊಳು ಪೂಜೆ ತೊರೆದ ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ- ತಾರವಿಲ್ಲದವನಾದನೋ ಪ್ರಾಣಿ1 ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು ಯುಗದೊಳಗೆ ಕೋತ್ಯಾದನಲ್ಲೋ ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ 2 ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ ಅವನಿಪತಿ ಮೊರೆ ಹೊಕ್ಕನಲ್ಲೊ ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ ಸ್ರವಿಸುವುದು ಶಿರಸಿನಲ್ಲೀ ಪ್ರಾಣಿ 3 ಇಂದ್ರ ತರ್ಕವನೋದಿ ನರಿಯಾದ ಪರಸತಿ- ಯಿಂದ ಮೇಷ ವೃಷಣನಾಭ ಕಂದರ್ಪ ಶರೀರದಿಂದ ನಾಶನನಾಗಿ ಬಂದ ಮೀನಿನ ಗರ್ಭದಿಂದ ಪ್ರಾಣಿ4 ಸೂರ್ಯ ಚಂದ್ರರ ನೋಡು ಮೂಲ ರೂಪದಿ ಪರ ಭಾರ್ಯರಿಗೆ ಶಿಲುಕಿ ತಮ್ಮಾ ವೀರ್ಯವನು ಕಳಕೊಂಡು ಬರಿದಾದರೋ ಕರ್ಮ- ಕಾರ್ಯ ವಾರಿಗು ಬಿಡದೆಲೋ ಪ್ರಾಣಿ 5 ಪಾವಕನು ಸರ್ವಭಕ್ಷಕನಾದ ಮಿಕ್ಕಾದ ಅವಾವ ಸುರರ ಕರ್ಮಂಗಳ ಯಾವತ್ತು ವರ್ಣಿಸಲಳವಲ್ಲ ಎಚ್ಚತ್ತು ಪಾವನ್ನ ನೀನಾಗೆಲೋ ಪ್ರಾಣಿ 6 ಆವಾವ ಸ್ಥಳದಲ್ಲಿ ಜನನ ಸ್ಥಿತಿಗತಿ ಮತ್ತೆ ಸಾವು ಸಾಕಲ್ಯದಿ ಮರೆಯದಲೆ ಕ್ಲುಪ್ತ ಮಾಡಿಪ್ಪನೋ ಅದನು ಆವನಾದರು ಮೀರಲೊಳÀವೇ ಪ್ರಾಣಿ 7 ಉಣಬೇಕು ಉಣಬೇಕು ಮತ್ತೆ ಉಣಲೀಬೇಕು ತ್ರಿ-ಗುಣ ಕಾರ್ಯರ ಭವಣೆ ಮನುಜ ತೃಣ ಜನ್ಮ ಬಂದ ಕಾಲಕ್ಕು ತ್ರೈತಾಪಗಳು ಅಣುಮಾತ್ರವೂ ತಪ್ಪವೋ ಪ್ರಾಣಿ 8 ಧೀರನಾಗಲಿ ಮಹಾಶೂರನಾಗಲಿ ಮತ್ತೆ ಧಾರುಣೀಪತಿ ಭಾಗ್ಯನಾಗೆ ಆರಿಗಾದರು ಬಿಡದು ಪರೀಕ್ಷಿತರಾಯನು ನೀರೊಳಗಿದ್ದ ತಿಳಿಯೋ ಪ್ರಾಣಿ 9 ಜಲಗಿರಿವನ ಪೊದೆ ಹೊದರು ಗಹ್ವರ ಹುತ್ತ- ಬಿಲ ಸಪ್ತದ್ವೀಪ ಪಾತಾಳದಿ ನಭ ಸ್ವರ್ಗಾದಿಲೋಕ ಜನನಿಯ ಜಠರ- ದೊಳಗಿರೆ ತಪ್ಪುವುದೆ ಬರಹಾ ಪ್ರಾಣಿ 10 ಅಣಿಮಾದಿ ಅಷ್ಟಾಂಗ ಯೋಗ ಮಾಡಲು ಮಹಾ ಗುಣವಂತ ಜನರು ಒಂದು ಕ್ಷಣವ ಮೀರಲುಬಹುದೆ ಮೃತ್ಯು ಬಂದೆದುರಾಗಿ ಸೆಣಸುತಿರೆ ಬೇರುಂಟೆ ಕಾರ್ಯ ಪ್ರಾಣಿ 11 ಎಲ್ಲೆಲ್ಲೆ ಅನ್ನ ಮತ್ತೆಲ್ಲೆಲ್ಲಿ ಉದಕ ಇ- ನ್ನೆಲ್ಲೆಲ್ಲಿ ನಿದ್ರೆ ಜಾಗರಣಿಯೊ ಎಲ್ಲೆಲ್ಲಿ ಹೆಜ್ಜೆಗಳನಿಡುವ ಪರಿಮಿತಿಯುಂಟೊ ಅಲ್ಲಿಲ್ಲಿಗೊಯ್ಯುವುದೊ ಬಿಡದೆ ಪ್ರಾಣಿ 12 ಧಿಕ್ಕಾರ ಸತ್ಕಾರ ನಿಂದೆ ವಂದನೆಗಳು ರೊಕ್ಕಾ ಸುಖ ದುಃಖ ಕಾರಣಗಳು ಉಕ್ಕೇರಿದಂತೆ ಬರುತಿಹುದೊ ನಮ್ಮ ದೇ- ವಕ್ಕಿ ಕಂದನ ಆಜ್ಞಯಿಂದ ಪ್ರಾಣಿ 13 ಕಾಶಿಯಲ್ಲಿರೆ ಮರಣ ಆವಲ್ಲಿ ಇಪ್ಪುದಾ- ದೇಶಕ್ಕೆ ಒಯ್ಯುವುದು ಕಾಲ ಕಾಶಿರಾಯನ ನೋಡು ಒಡನೆ ಅಪಮೃತ್ಯು ವೇದ- ವ್ಯಾಸರಿದ್ದರು ತಪ್ಪಲಿಲ್ಲ ಪ್ರಾಣಿ 14 ಮಾರುತ ಭಾರತಿ ಶೇಷ ಶಿವ ಪಾರ್ವತಿ- ಸರಸಿಜ ಬಾಂಧವಾಗ್ನಿ ಧರ್ಮ ಕಾಲ ಮೃತ್ಯು ಕಾಲನ ದೂತರು ಅರಸುತಿಪ್ಪರು ಲವ ತೃಟಿಯ ಪ್ರಾಣಿ 15 ಇವರಿವರಿಗುತ್ತಮರು ಇವರಿವರಗಧಮರು ಇವರೆಲ್ಲರಿಗೆ ಶ್ರೀ ಭೂಮಿ ದುರ್ಗಾ ಅವಳಿಗೆ ಶ್ರೀ ಹರಿಯು ತಾನೆ ನಿಯಾಮಕನು ವಿವರದಲಿ ತಿಳಿ ತಾರತಮ್ಯ ಪ್ರಾಣಿ 16 ಲಕುಮಿ ಮೊದಲು ಮಾಡಿ ಇವರೆಲ್ಲರಿಗೆ ಲೇಶ ಶಕುತಿಯಿಲ್ಲವೊ ಕಾಣೊ ಮರುಳೆ ಅಕಟಕಟ ಗುಣಪೂರ್ಣ ಸರ್ವ ಸ್ವಾತಂತ್ರ ವ್ಯಾ- ಪಕ ಸರ್ವಾಂತರ್ಯಾಮಿಯೆನ್ನೋ ಪ್ರಾಣಿ 17 ಕರುಣಾ ಕಟಾಕ್ಷವುಳ್ಳನಕ ಸುರ ನರೋರಗ ಯಕ್ಷಲೋಕದಲ್ಲಿದ್ದವರು ಬರಿದೆ ಕೂಗಿದರೇನು ಆಹುದೋ ಪ್ರಾಣಿ 18 ಕಾಲ ತಪ್ಪಿಸಿ ಕಾವ ಹರಿತಾನು ಸಾವ ಕಾಲವ ಮಾತ್ರ ತಪ್ಪಿಸನೋ ಕಾವ ಕೊಲ್ಲುವ ಸ್ವಾಮಿ ಕಾಲನಾಮಕ ಪುರುಷ ಜೀವಿಗಳು ಮುಖ್ಯವಲ್ಲ ಕಾಣೋ ಪ್ರಾಣಿ 19 ಭಗವವÀಸ್ವತಂತ್ರವನು ತಿಳಿಯದೆ ಮರುಳಾಗಿ ಜಗದೊಳಗೆ ಚರಿಸದಿರೊ ಮಾನವ ಅಘ ದೂರನಾಗೊ ನಾನಾ ಬಗೆಯಿಂದಲ- ನ್ಯಗರ ಚಿಂತೆಗಳಲ್ಲಿ ಬಿಟ್ಟು ಪ್ರಾಣಿ 20 ಹಲವು ಮಾತೇನಿನ್ನು ದಾಸಭಾವವ ವಹಿಸಿ ಕಲಿಯುಗದೊಳಗೆ ಸಂಚರಿಸೆಲೊ ಬಲವಂತ ವಿಜಯವಿಠ್ಠಲನ ಪಾದಾಂಬುಜವ ನಿಲಿಸಿ ವಲಿಸಿಕೊ ಮನಸಿನಲ್ಲಿ ಪ್ರಾಣಿ 21
--------------
ವಿಜಯದಾಸ
ಹರಿ ವಿಠಲ - ವಿಠಲ ಜಯ ವಿಠಲಾ ಹರಿ ವಿಠಲ - ಜಯ ವಿಠಲ ಪ ಜಯವಿಠಲಾ ನಮೋ ವಿಠಲಾ ಅ.ಪ ಹೇ ಮುರಾರೀ ಶ್ರೀ ಹರೀ ಬಾರೈ ಕೃಪಾಶರನಿಧಿ ಶೌರೀ ಶರಣಾಭರಣನೆಂದೆ ಬಿರುದನ್ನು ಕೇಳಿ ಬಂದೆ ಅರಿಯೆ ಇನ್ನೊಂದ ತಂದೆ ನೀನಾಗಿ ಪೊರೆಯೆಂದೆ ಇನ್ನು ಮುಂದೇ 1 ಇಂದಿರಾ ಮಂದಿರಾ ಹೇ ಸುಂದರಾನಂದ ಕುವರ ವರಾ ಇಂದೀವರಾಕ್ಷ ನಿನ್ನಾ ಸಂದರುಶನವೆನ- ಗೆಂದಿಗಾಹುದೋ ಮನವಾ ನಂದ ಹೊಂದುವುದು ಅಂದೇ 2 ಸರ್ವೇಶಾ ಶಾಶ್ವತ ಸರ್ವೋತ್ತಮ ಪರಮೋದಾರವರ ಸರ್ವಕಾರಣ ಕರ್ತಾ ಸರ್ವಸ್ವತಂತ್ರ ಶಕ್ತ ಸರ್ವತ್ರದಲಿ ವ್ಯಾಪ್ತ ಸರ್ವಾಂತರ್ಯಾಮಿ ಗುಪ್ತ ಶಿರಿಕಾಂತ 3
--------------
ಲಕ್ಷ್ಮೀನಾರಯಣರಾಯರು
ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು 1 ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು 2 ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು 3 ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು ಕೋವಿದರೆ ಸಂಗಡ ಕೂಡ್ಯಾಡುತಿರಬೇಕು ಪಾವಕನಂತೆ ಇಂಪವ ಕಾಣಬೇಕು 4 ಅನ್ನಪಾನಾದಿಗಳಿಗವಸರ ಬೀಳದಿರಬೇಕು ಕಣ್ಣಿದ್ದು ಕುರುಡನೆಂದೆನಿಸಬೇಕು ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು ತನ್ನೊಳಗೆ ತಾ ತಿಳಿದು ನಗುತಲಿರಬೇಕು 5 ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು ಡಂಭಕ ಭಕುತಿಯ ಜರಿಯ ಬೇಕು ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು ನಂಬಿ ನರಹರಿಪಾದವೆನುತ ಸಾರಲಿ ಬೇಕು6 ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು ಮರುತನೆ ಜಗಕೆ ಗುರುವೆನಲಿ ಬೇಕು ಪುರಂದರದಾಸರೇ ದಾಸರೆಂದನ ಬೇಕು ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
--------------
ವಿಜಯದಾಸ
ಹರಿಧ್ಯಾನವೆ ಗಂಗಾಸ್ನಾನ ವಿಷ- ಯಾನುಭವ ಜಯವೆ ಮೌನ ಪ್ರಾಣೇಶನೆ ಸರ್ವೋತ್ತಮ ವೇದ ಪು- ರಾಣ ಪ್ರಮಾಣವೆ ಜ್ಞಾನ1 ಮತ್ತರ ಸಂಗ ಪ್ರವೃತ್ತಿಯೊಳಿರದೆ ನಿ- ವೃತ್ತಿಯೊಳಿರುವುದೆ ಮಾನ ಸತ್ಯಾತ್ಮನ ರೂಪದೊಳು ಭೇದರಾ- ಹಿತ್ಯವೆ ಸರ್ವಸಮಾನ2 ಕರ್ತ ಲಕ್ಷ್ಮೀನಾರಾಯಣನ ಪಾದ ಭಕ್ತಿ ವಿರಹಿತನೆ ಹೀನ ಚಿತ್ತಜೋದ್ಭವ ಪರಾತ್ಪರ ತ್ರಿಜಗವು ಪ್ರತ್ಯಗಾತ್ಮನಾಧೀನ 3
--------------
ತುಪಾಕಿ ವೆಂಕಟರಮಣಾಚಾರ್ಯ