ಒಟ್ಟು 11785 ಕಡೆಗಳಲ್ಲಿ , 132 ದಾಸರು , 6311 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲವೆಲ್ಲವು ಹರಿಸೇವೆಯೆನ್ನಿರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿನಡೆವುದೆಲ್ಲವು ಹರಿಯಾತ್ರೆಯೆನ್ನಿ ||ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ 1ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿಕುಸುಮ ಪರಿಮಳವು ಕಂಜನಾಭಗೆನ್ನಿ ||ಎಸೆವಾಭರಣವು ಯಶೋಧೆನಂದನಗೆನ್ನಿಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ 2ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿಕೋಟಲೆ ಸಂಸಾರ ಕಪಟನಾಟಕಗೆನ್ನಿ 3ನಿದ್ರೆ ಜಾಗರವು ಸಮುದ್ರಶಯನಗೆನ್ನಿಭದ್ರಗಜನಿಧಿ ವರದಗೆನ್ನಿರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀಮುದ್ರೆ ಧರಿಸಿದವ ಹರಿದಾಸನೆನ್ನಿ 4ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿಎಣಿಸಬಾರದನಂತ ಮಹಿಮನೆನ್ನಿಸೆಣಸುವ ರಕ್ಕಸರ ಶಿರವ ಚಂಡಾಡುವಪ್ರಣವಗೋಚರ ಪುರಂದರವಿಠಲರಾಯನೆನ್ನಿ 5
--------------
ಪುರಂದರದಾಸರು
ಸಕ್ಕರೆ ಸವಿ ಸಮ ತತ್ವರಸಿಕಸುಖತೀರ್ಥರಲ್ಲದೆ ಶುನಿಕುತರ್ಕ ಪರ್ಣಾಶನ ನರಗುರಿ ಬಲ್ಲವೆಮುಕ್ತಿಪಥದಹವಣಪ.ಪಯಸ ಪಯವ ನಿರ್ಣೈಸಿ ಸೇವಿಪ ಹಂಸಚಯವಲ್ಲದೆ ಮಲವಬಯಸಿ ಮೆಲ್ಲುವ ವೃದ್ಧ ವಾಯಸ ತಾ ಬಲ್ಲದೆನಯರುಚಿಹೇಳಾ1ದ್ವಿಪಶಿರ ಪೀಯೂಷವ ಸಾಮಭೇದಜÕ ಮೃಗಾಧಿಪ ಬಲ್ಲಾಮೇಧ್ಯ ಆಮಿಷಚಪ್ಪರಿದುಂಬೊಶೃಗಾಲಶ್ವಾನತಾವು ಬಲ್ಲವೆಆ ಪರವಿಡಿಯ ಸುಖವ 2ಮಂಗಳಾಂಬುಜ ಮಕರಂದ ಭೋಜಕಶುಭಭೃಂಗವಲ್ಲದೆ ಅಶುಭಗುಂಗಿ ತಾ ಬಲ್ಲದೆಸುರಭಿಅಸುರಭಿ ಗುಣಂಗಳ ಬಗೆಗಳನು 3ಸುರತರುವಿಂಧನಸುರಭಿಪಶು ಪಾಮರಗೆ ಮಣಿಯೆ ಕಲ್ಲುವರಪೇಯ ವಿಷಗುರುಗುರುಕೃಪೆ ಹಿತದುರುಳನಿಗಪಕಾರ 4ಸಲ್ಲ ಕರುಧಿ ಗಿ? ರುಣೆ ಪಾಲ್ಗರಿದುಣ್ಣಲುಬಲ್ಲ ಪೂರಣಬೋಧರುಫುಲ್ಲನಾಭಪ್ರಸನ್ನವೆಂಕಟಪತಿಯಆಹ್ಲಾದ ಕಾರಣರು 5
--------------
ಪ್ರಸನ್ನವೆಂಕಟದಾಸರು
ಸಂಕ್ಷಿಪ್ತ ವಿರಾಟಪರ್ವಕೇಳು ಜನಮೇಜಯರಾಜ ಭೂಮಿ-ಪಾಲ ಪಾಂಡವರ ಸತ್ಕಥೆಯ ಪ.ಶ್ರೀಲಲಾಮನ ನೆನೆದುಭೂರಿವ-ನಾಳಿಯನು ಸಂಚರಿಸಿ ಸಜ್ಜನಕೇಳಿಯಲಿ ವನವಾಸದವಧಿಯಕಾಲವನು ಕಳೆಕಳೆದು ಬಂದರು ಅ.ಪ.ದರ್ವೀಧರಹಸ್ತನಾಗಿ ಮಹಾಪರ್ವತದಂತುರೆ ಮಸಗಿನಿರ್ವಹಿಸಿ ಸೂದತ್ವವನು ಸಲೆಗರ್ವಿತಾಧಮ ಕೀಚಕನ ಕುಲಸರ್ವವನು ಸಂಹರಿಪ ಭೀಮ ಪೆ-ಸರ್ವಡೆದ ಗುರುವರ್ಯ ಬಂದನು 1ಕಡುಗಲಿ ಕಲಿಮಲಧ್ವಂಸ ಎದ್ದುನಡೆದು ಬಂದನು ಪರಮಹಂಸನಿಡುಕಿ ಮನದಿ ವಿರಾಟರಾಯನಪೊಡವಿಗಿಡೆ ಪದ ಕೀಚಕಾಖ್ಯನಎಡದ ಭುಜ ಕಂಪಿಸಿತು ಮೂಜಗದೊಡೆಯನುಡುಪತಿಕುಲಶಿಖಾಮಣಿ 2ಗಂಗಾದಿ ನದಿಗಳ ತೀರ ಪಟ್ಟಣಂಗಳ ಗೈದ ಸಂಚಾರತುಂಗಬಲ ಮಲ್ಲರುಗಳನು ಸಲೆಸಂಘಟಿಸಿ ಜೀಮೂತವೀರಪ್ಪಸಂಗದಲಿ ವೈರಾಟಪುರ ರಾಜಾಂಗಣಕೆ ಭದ್ರಾಂಗ ಬಂದನು 3ಇಂತು ಮಲ್ಲರನೆಲ್ಲ ಸದೆದು ಬಲವಂತರಿರಲು ನೃಪಗೊಲಿದುಸಂತಸವ ಬಡಿಸುತ್ತಲಿರಲ್ವಾಕುಂತಿತನಯರು ಹರಿಯ ನಾಮವಚಿಂತಿಸುತ ದಶಮಾಸ ಕಳೆದಾನಂತರದ ವೃತ್ತಾಂತವೆಲ್ಲವ 4ಕಥೆಯಂತೆ ಹಿಂದೆ ರಾವಣನ ಕೆಟ್ಟಗತಿಗನುಚರ ಕೀಚಕನಸ್ಥಿತಿಯು ದ್ರುಪದಜೆಗಾದಮಾನಚ್ಯುತಿಗೆ ಕಾರಣನಾದ ಜಡ ದು-ರ್ಮತಿ ಖಳಾಧಮನೊಂದು ದಿನನೃಪಸತಿಸಭೆಗೆ ಅತಿ ಹಿತದಿ ಬಂದನು 5ಪಾಪಿ ಕೀಚಕನಿಗಿಂತುಸುರಿ ದ್ರುಪದಭೂಪಾಲಕನ ಕಿಶೋರಿಶ್ರೀಪತಿಯ ನಾಮವನು ಸ್ಮರಿಸುತ-ಲಾ ಪತಿವ್ರತೆ ತೊಲಗಲಂಗಜತಾಪತಪ್ತಾಂತಃಕರಣನಾ ಪರಿಯ ಮತಿ ವ್ಯಾಪಿಸಿದನು 6ಲಾಲಿಸಿ ಮಾಲಿನಿವಚನ ತೋಷತಾಳಿದ ದುರ್ಗುಣಸದನಕಾಲಪಾಶದಿ ಬಿಗಿವಡೆದು ಹೇ-ರಾಳ ಮುದಕೀಲಾಲ ಸಲೆ ಕ-ಲ್ಲೋಲಜಾಲದಿ ಮುಳುಗಿ ನರ್ತನಶಾಲೆಗಾಗಿ ಕರಾಳ ಬಂದನು 7ಮಥಿಸಿ ಕೀಚಕನ ಮಂಟಪದಿ ದ್ರುಪದಸುತೆಗೆ ತೋರಿಸಲತಿ ಮುದದಿಸತಿಶಿರೋಮಣಿ ಕಂಡು ಮನದೊಳ-ಗತುಳ ಹರುಷವನಾಂತು ಸರ್ವೋನ್ನತಭುಜನ ಚುಂಬಿಸಿದಳುಪತಿವ್ರತೆಯರ ಶಿರೋರತುನೆ ಪಾವನೆ 8ಇತ್ತ ವಿರಾಟನಗರದ ಸರ್ವವೃತ್ತಾಂತವೆಲ್ಲವ ತಿಳಿದಧೂರ್ತದುರ್ಯೋಧನ ದುರಾಗ್ರಹಚಿತ್ತಗ್ರಹಿಸಿದ ಕಾರ್ಯಕಾರಣವೃತ್ತಿಯಲ್ಲಿ ಪಾಂಡವರು ನಿಜವೆಂ-ದಾಪ್ತಜನರೊಳು ವಿಸ್ತರಿಸಿದನು 9ಸುರನದೀಸುತಕರ್ಣದ್ರೋಣ ಕೃಪಾದ್ಯರು ಕೂಡಿ ಕುಜನಪ್ರವೀಣಪೊರಟ ಪರಮೋತ್ಸಾಹ ಸಾಹಸಭರತಿ ಕೌರವರಾಯ ಮತ್ಸ್ಯನಪುರವರ ಸಮೀಪದಿ ಸುಶರ್ಮನಕರೆದೊರೆದ ಭೂವರ ನಿರ್ಧರ 10ನುಡಿಯ ಕೇಳುತಲಿ ಸುಶರ್ಮ ನಿಜಪಡೆಯ ನೆರಹಿ ವೈರಿವರ್ಮದೃಢಕರಿಸಿ ದಿನಮಣಿಯು ಪಶ್ಚಿಮ-ಕಡಲ ಸಾರುವ ಸಮಯ ಗೋವ್ಗಳಪಿಡಿದು ಗೋಪರ ಕೆಡಹಿ ಬೊಬ್ಬಿ-ಟ್ಟೊಡನೊಡನೆ ಪಡಿಬಲವನರಸಿದ 11ಹಾರಿಸಿದನು ರಥ ಪಾರ್ಥನರನಾರಿವೇಷದ ಪುರುಷಾರ್ಥತೋರಿಸುವೆನೆಂಬುತ್ಸಾಹದೊಳುಬ್ಬೇರಿ ಮನದೊಳು ಕೃಷ್ಣನಂಘ್ರಿಸ-ರೋರುಹಕೆ ಮಣಿದುತ್ತರನ ಸಹಸೇರಿ ನಗರದ್ವಾರ ದಾಟಿದ 12ಭೀತಿಯ ಬಿಡು ಬಾರೆಂದು ಪುರುಹೂತಸುತನು ಎಳತಂದುಘಾತಿಸುವೆ ರಿಪುಬಲವನೆಂದು ವ-ರೂಥದಲಿ ಕುಳ್ಳಿರಿಸಿ ನೃಪತನುಜಾತಸಹ ಪಿತೃವನದ ಮಧ್ಯ ಶ-ಮೀತರುವಿನೆಡೆಗೋತು ಬಂದರು 13ಇಂತು ತಿಳಿಸುತಲರ್ಜುನನು ಬಲವಂತನು ಧನುಶರಗಳನುತಾಂ ತವಕದಿಂ ಧರಿಸಿವಿಜಯಮ-ಹಾಂತ ವೀರಾವೇಶಭೂಷಣವಾಂತು ಶಂಖನಿನಾದದಿಂರಿಪುತಿಂಥಿಣಿಯ ಭಯಭ್ರಾಂತಗೊಳಿಸಿದ 14ಹೂಡಿ ಬಾಣವನುರ್ಜುನನು ಚೆಂ-ಡಾಡಿದ ರಿಪುಬಲವನ್ನುಮೂಢ ದುರ್ಯೋಧನನ ಕಣೆಗಳಜೋಡಣೆಗಳಿಂ ಬಿಗಿದು ತನ್ನೋಶಮಾಡಿಕೊಂಡನು ಗೋಪಗೋವ್ಗಳನಾಡಲೇನದ ಪ್ರೌಢತನವನು 15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಂಗವಿಡಿಸು ರಂಗಾ ವಿಬುಧರಹಿಂಗದೆ ನಿನ್ನಯ ನಾಮ ಪಾಡ್ವ ಭಕುತರ ಪ.ಸಂಗವಿಡಿಯೆಭವಹಿಂಗುವ ಲೆಕ್ಕದಅಂಗವಣೆಯನರಿತಂಗವಿವೇಕದಿಲಿಂಗವಪುವಿಭಂಗ ವಿಚಾರಕೆರಂಗಿ ವಿಷಯಭಯ ನುಂಗುವರ 1ಹರಿದಿನ ನಿಶಿಜಾಗರದ್ಯಶನಂಗಳಮರೆದಂಬುಜಾಕ್ಷನ ಬಿರುದೊಕ್ಕಣಿಸುತಮರುದಂಶರ ಮತವರಿದಿತರಾಗಮಜರಿದುವಿರತಿಯಲಿ ಪಿರಿದಪ್ಪರ2ಬೆನ್ನಬಿಡದೆ ಊರು ಬನ್ನವಬಡಿಸಲುತನ್ನ ವಿಮಲಮತಿಯನ್ನು ಬಿಸಾಡದೆಅನ್ಯವಧುವಿಗೆ ಬಿನ್ನವಿಸದೆ ಪಾವನ್ನವ ಮಾಳ್ಪ ಮಾನವರ 3ಸರಿಸ ಸಮನಿಹ ಹರುಷಪಡೆನುತಲಿಸುರಸಂಪದಕೆ ಮನವಿರಿಸಿ ಪರಂಪರಾಅರಸಪದವಿ ಓಕರಿಸಿ ಪರೇಶನಸ್ಮರಿಸಿ ಪದಾಬ್ಜವ ಸ್ಮರಿಸಿಪ್ಪರ 4ಅರಿಸಖರೊಳು ಸಮವೆರಸಿ ನೋಡುತಹರಿಯಿರಿಸಿದೊಲಂಗೀಕರಿಸಿ ನಿರಂತರಪರಸನ್ನ ವೆಂಕಟಗಿರೀಶ ನಾಮಾಸ್ತ್ರವಧರಿಸಿ ಸಂಸಾರವ ಉತ್ತರಿಸುವರ 5
--------------
ಪ್ರಸನ್ನವೆಂಕಟದಾಸರು
ಸಂಜೆಯೊಳಿಂತು ಬರುವರೆ | ಶಬ್ದ ಹೊರುವರೆ | ಜನಕಂಜದಲಿಹರೆ ಪಸಂಧ್ಯಾಕಾಲವು ಗೋವು ಬಾರವೆ,ವತ್ಸಬಳಲವೆ, ಹೀಗೆ ಬರುವುದು ಥರವೆ |ಅಂದಾರು ಅತ್ತಿ ಅತ್ತಿಗೆಯರು, ಇಷ್ಟು ಸಹಿಸಾರು, ಪತಿಗಳು ಸುಮ್ಮನಿರರು ||ಕಂದಗಳೆರೆವ ಸಮಯವಿದು, ಬಿಟ್ಟು ಬರುವುದು, ಚರ್ಯೆ ನೋಡಲ್ಕರಿದು |ಬಂದೊಂಧೆಳಲೆ ಮನೆಯೊಳು ದೀಪ, ಹಚ್ಚದಿರೆ ಪಾಪ, ಮಾಡಬೇಡಿರಿ ಕೋಪ 1ಗಂಡನೇ ದೈವ ಹೆಂಗಸರಿಗೆ, ತಿಳಿಯದೆ, ಹೀಗೆ ಬರುವರೆ ಯನ್ನ ಬಳಿಗೆ |ಬಂಡುಇದೇನಿರೆ ಬತ್ತಲೆ, ಬಂದಿರೆಲ್ಲೆಲೆ, ಆಭರಣವೆಲ್ಲಿವಲ್ಲೆ ||ಕಂಡ ಕಂಡಲ್ಲೆ ಹುಡುಕುವರು, ನಿಮ್ಮನ್ನಾಳ್ವರು, ಕಾಣದಲೆ ಮಿಡುಕುವರು |ತುಂಟಾಟ ಕಲಿಯಬಾರದು ಇಷ್ಟು, ಪೇಳುವಿನೆ ಒಟ್ಟು, ಕೇಳಿರೆ ಮನವಿಟ್ಟು 2ಆಯಿತು ನಾ ಗಂಡನಾದೇನೆ, ತಿಳಿಯದರೇನೆ, ಕಂಡವರು ನಗರೇನೆ |ಕಾಯೋ ಪ್ರಾಣೇಶ ವಿಠಲ ಎಂದು, ಯನ್ನ ಪದರೆಂದು, ನಮಸ್ಕರಿಸಿರೆ ಬಂದು ||ಈಯಾಟ ಸಲ್ಲ, ನಿಮ್ಮನೆಗೀಗ, ಸಾಗಿರೆ ಬೇಗ, ಪತಿಗಳ ಕೂಡಭೋಗ|ಆಯಾಸವಿಲ್ಲದೆ ಮಾಡಿರೆ, ಮಾತು ಕೇಳಿರೆ, ಭ್ರಾಂತರಾಗಬೇಡಿರೆ 3
--------------
ಪ್ರಾಣೇಶದಾಸರು
ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪಕುಹಕರ ಸಂಗವ ಮಾಡದೆಖೇಚರ|ವಹನನಾಳುಗಳ ಆಳಾಗೀ ||ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ 1ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತವಿಜ್ಞಾನಘಳಿಸುವದೆ 2ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ 3ತತ್ವಭಿಮಾನಿಗಳೆಲ್ಲಸಮೀರಪ್ರ- |ವರ್ತಿಸಿದಂದದಿ ವರ್ತಿಪರೂ ||ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯಶಿವಾದ್ಯರು ಛಿನ್ನರು ಎಂಬುದೆ 4ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ 5ಚೇತನಚೇತನವಾದ ಜಗತ್ಯವು |ವಾತನಧೀನದೊಳಿರುತಿಹದೂ ||ಆತನು ರಮೆಯಧೀನವಳುಹರಿ|ದೂತಳೆಂದು ನಿಶ್ಚಯ ತಿಳಕೊಂಬುದೆ 6ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದಹರಿಮಾರುತ ಮಾತ್ರಾ ||ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭಪ್ರಮುಖರಿಗೊಂದಿಸುತಿಪ್ಪುದೆ 7ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನುಹರಿಎಂಬುದೆ 8ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||ಹರಿವಿಧಿಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ 9ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗಭೂಷಣನೊಳಿದ್ದು ಲಯಾ ||ದ್ವಿಜರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ 10ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||ಮಂದರಧರಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ 11ಜ್ಞಾನಾನಂದಾದಿ ಗುಣಭರಿತಹರಿ|ಹೀನತನವನೆಂದಿಗ್ಯು ಅರಿಯಾ ||ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ 12ಝಷಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ 13ಆಪಗ ವನಧಿಯನಳನಿಳಶಶಿರವಿ|ಈ ಪೊಡವೀವನನಿರಂತರದೀ ||ಶ್ರೀಪತಿಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ 14ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||ಹುಸಿಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ 15ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||ಏನು ನೋಡೆ ನಿರ್ಮಲನಾಗಿಹಹರಿ|ಭಾನುಸಖ ಜಲದೊಳಿರುವಂತೆಂಬುದೆ16ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ17ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ 18ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನಗುಣಮಹತ್ಮಿಯನೂ ||ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇಕೇಳಿವಿಜ್ಞಾನಘಳಿಸುವದೆ 19ಕಾಲಿಲ್ಲದೆ ನಡಿಯಲು ಬಲ್ಲನುಹರಿ|ಕೇಳುವ ಕಿಂವಿಯಿಲ್ಲದೆ ತನ್ನಾ ||ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿಅಹಿಮಾಡಿಹನೆಂಬುದೆ 20ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜÕವು ಯಿದು ಎಂದರಿವುದೆ 21ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||ಮೃತ್ಯುಂಜಯಸಖಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ 22ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿಶಯನಗೆ ಎಂದೆಂದೂ ||ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ 23ಬ್ರಹ್ಮಾದಿಗಳಿಗೆ ಜನಕನು ಶ್ರೀಪರ|ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ 24ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ 25ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ 26ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವಕುಟುಂಬಿಯು ಕೈಕೊಂಬಾ ||ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ27ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ 28ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜದಳಾಕ್ಷನ ಒಲಿಸಿರೊ ಎಂಬುದೆ 29ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ 30ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ31ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ 32ಈ ಕರ್ಮವ ಮಾಡಿದೆ ಯನಗೀಪರಿ|ಸಾಕಲ್ಲ್ಯೆವು ಆಯಿತು ಎಂದೂ ||ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ 33ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ 34ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀಪರಿಲೀಲಗಳೆಂಬುದೆ 35ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ 36ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||ಲೋಪವ ಮಾಡದೆ ನಿರ್ಜಲ ಜಾಗರ- |ವಾಪರಮಮುದದಿ ನಡಸುತಲಿಪ್ಪುದೆ 33ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ 38ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲಹರಿಅವಗೆಂದೂ ||ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತಸರ್ವಜÕ ಸುಗುಣ ಪೂರ್ಣೆಂಬುದೆ 39ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ 40ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||ತೃತಿಯದಿ ಸತ್ತೀಥ್ರ್ಯಾತ್ರಿಗಳನುಮಾ|ಡುತಲಲ್ಲೆಲ್ಲಿಹ ಮಹಿಮಿ ಕೇಳುವದು 41ಘೋರತರ ಕುಸಂಸಾರವೆಂಬ ಈ |ವಾರಿಧಿತ್ವರದಾಟುವದಕ್ಕೇ ||ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ 42ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ 43ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ 44ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ 45ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ 46ಗುರುಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||ಮರುತಾಂತರ್ಗತನೋಲ್ಗವನಲ್ಲದೆ |ನರಸ್ತೋತ್ರವ ಸ್ವಪ್ನದಿ ಮಾಡದಿಹದೆ 47ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ 48ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ 49ಹೊತ್ತರಾದಿನಿಶಿಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ 50ಹಾನಿ ಲಾಭ ಜಯ ಅಪಜಯ ಮಾನಪ- |ಮಾನಸುಖಾಸುಖ ಸಮ ಮಾಡೀ ||ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ 51
--------------
ಪ್ರಾಣೇಶದಾಸರು
ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆಅಂತರ್ಬಾಹ್ಯಾರ್ಥವು ತೋರುವುದೊಂದರಿದೆ ಪ.ಅಂತ್ಯಜಾತಿಯಳಂಗಸಂಗದಿ ಮತಿಗೆಟ್ಟುಅಂತ್ಯವಸಾನದೊಳೊಯ್ಯ ಬಂದಅಂತಕನವರ್ಗಂಜಿಅಣುಗನಾರಾಯಣನೆಂತೆಂದಜಾಮಿಳನ ಕಾಯ್ದೆ ಕರುಣಾಬ್ಧಿ 1ಕಾಂತಾರತಿರುಗಿ ಕ್ರೀಡೆಗೆ ಜಲದೊಳು ಪೊಕ್ಕದಂತಿಅಂಘ್ರಿಯನಕ್ರನುಂಗೆಳೆಯೆಚಿಂತಿಸಿ ತುದಿಯಲ್ಲೆ ಹರಿಯೆಂದು ಕೂಗಲನಂತಾಸನವ ಬಿಟ್ಟು ಬಂದೆತ್ತಿ ಹೊರೆದೆ 2ಕಂತುವೈರಿಯ ಭಕ್ತ ಸೊಕ್ಕಿ ನೃಪರನೌಸೆಕಾಂತ ನಿಮ್ಮಡಿಗೆ ಬಿನ್ನಹ ಕಳುಹೆಕುಂತಿಯ ತನುಜನಿಂದವನ ಕೊಲ್ಲಿಸಿ ಭೂಕಾಂತರಿಗೊಲಿದ್ಯೊ ಪ್ರಸನ್ನವೆಂಕಟಕೃಷ್ಣ 3
--------------
ಪ್ರಸನ್ನವೆಂಕಟದಾಸರು
ಸತತ ಸ್ಮರಿಸೆಲೊ ಹರಿಯಾ ಪಪತಿತ ಜನತತಿಯ ಪೊರಿಯಾ ಖರಿಯಾ ಅ.ಪದ್ವಿತೀಯಯುಗದಲಿ ಜನಿಸಿ ಕ್ಷಿತಿಜೆ ದೇವಿಯ ಸ್ತುತಿಸಿಶ್ರಿತಜನರ ಮನ ಪೂರ್ತಿಸೀ ಸಲಿಸೀ 1ಕುರುಕುಲೋದ್ಭವನಾಗಿದುರುಳಕುರುಗಳನೀಗಿವರಯಾಗ ಯಾಜಿಯಾಗಿ ಯದುವರನಪರಮಐಶ್ವರ್ಯ ಭೋಗಿಯಾಗಿ2ಶ್ರುತಿಸ್ಮøತಿಗಳರ್ಥ ಪೇಳಿ ಸತ್ಯವತಿಸುತನ ವಾರ್ತೆಯನೆಕೇಳಿಬದರಿಗೆಧ್ರುತಗಮನವನ್ನೆ ತಾಳಿ ಪೇಳಿ 3ಬದಲೆಂದಿಗಿಲ್ಲವೆಂದುನಿಂದು4ಆರುನೂರೆನಿಪ ಜಪವಾ - ನಿತ್ಯದಲಿಪಾರಸುಖಾಸುಖ ಮಿಶ್ರವಾ ನೀಡುತಲಿವಾರಿಭವಭವಕಲ್ಪವಾ ದೇವಾ5ಚುತುರವದನನ ಸ್ಥಾನವಾ ತಾಳುವಾ 6ತಾನು ಮಾಡಿದಕರ್ಮನಾನಾ ಸಾಧನ ಶ್ರೇಷ್ಠತಾನಿದನು ತಿಳಿಸನಲ್ಲಿ ಇಲ್ಲೀ 7ಎಲ್ಲ ಸ್ಥಾನಗಳಲ್ಲಿ ಫುಲ್ಲನಾಭನÀರೂಪಸೊಲ್ಲಕೇಳಲ್ಲಿ ಬರುತಾ ಇರುವ ಹೃ -ತ್ಫುಲ್ಲದಲಿಹರಿತೋರುತಾ ಭಕ್ತರನುಎಲ್ಲಿ ಪೋದರು ಪೊರೆಯತಾ ಇರುತಾ 8ಭೂಮಂಡಲಾವನ್ನಾಳಿದಾ ಶ್ರೀದಾ 9ಭಾರತೀದೇವಿ ಕಾಂತಾ ಶಾಂತಾ 10ನಿಗಮವೇದಿತಪಾದಸುಗುಣಗಣಪೂರ್ಣಗುರು-ಸುಗತಿಯನೆ ಕೊಡುವದಾತಾಖ್ಯಾತಾ11ಸರಸ್ವತಿ -ಭಾರತಿನತಿಸಿ ಬೇಡಿದೆಜನನಿಎನ್ನಾತತಿಪರಿಹರಿಸ್ಯನ್ನಾನ್ನಾಥಾವಿಠಲನ್ನಾ ನಿಜ ವಿ -
--------------
ಗುರುಜಗನ್ನಾಥದಾಸರು
ಸತತಕಲ್ಯಾಣಅಚ್ಯುತಭಟರಿಗೆರತಿಪತಿಪಿತನಂಘ್ರಿರತ ಮಹಾತ್ಮರಿಗೆ ಪ.ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲಖೇದಮನಕಿಲ್ಲ ಖಿನ್ನತೆಯು ಮುಖಕಿಲ್ಲಶ್ರೀಧವನ ನವ ಭಕುತಿಶೀಲ ಜೀವರಿಗೆ 1ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕುಉರಗಪೂಮಾಲೆಯಕ್ಕು ಉರಿ ತಣ್ಣಗಕ್ಕುಶರಧಿಗೋಷ್ಪದವಕ್ಕು ಶರಘಾತ ಬೆಂಡಕ್ಕುನರಹರಿಯ ನಾಮವನು ನಂಬಿ ತುತಿಪರಿಗೆ 2ಪಾಪ ತಾಪಗಳ್ಗೋಟ ಪರಿದುಬಹ ಎಡರ್ಗೋಟಆಪತ್ತುಗಳಿಗೋಟ ಆಲಸ್ಯಕೋಟಕೋಪದಾರಿದ್ರ್ರ್ಯಕೋಟ ಕಲಿವ್ಯಸನ ಮದಕೋಟಶ್ರೀ ಪ್ರಸನ್ವೆಂಕಟನ ಭಜಿಪ ಭಕ್ತರಿಗೆ 3
--------------
ಪ್ರಸನ್ನವೆಂಕಟದಾಸರು
ಸಂತರವರೆ ನೋಡಿರೈ ಕೈವಲ್ಯದಸಂತರವರೆ ನೋಡಿರೈ ಪ.ಸತ್ಯ ರಮೇಶನ ಸೃಷ್ಟಿಯೆ ಸತ್ಯಹತ್ತೆರಡೈದು ತತ್ವವೆ ಸತ್ಯಸತ್ಯಾತ್ಮೇಶರ ಭೇದವೆ ಸತ್ಯಸತ್ಯಾತ್ಮಕನ ಪದ ಸತ್ಯೆನುವ 1ಹರಿಭಕ್ತರ ಕಂಡಪ್ಪುತ ನಿರುತಹರಿಸಲ್ಲಾಪ ಕಥಾಶ್ರಯ ಬಲಿದಹರಿಭೃತ್ಯರಿಗನ್ನೋದಕನೀವರುಹರಿಸಂಕೀರ್ತನೆ ಮನಮನೆಯವರು2ಆನಂದಕೆ ಕವಲಿಲ್ಲದ ಸುಖದು:ಖಾನಂದವನನುಭವಿಸಿ ಬಿಡುವರುಆನಂದಮುನಿಯ ಮತಪ್ರಿಯನಿತ್ಯಆನಂದ ಪ್ರಸನ್ವೆಂಕಟಪತಿಯವರು 3
--------------
ಪ್ರಸನ್ನವೆಂಕಟದಾಸರು
ಸಂತರೆ ಭವದೂರರು ಹಿತಕಾರ್ಯರು ಪ.ಸಂತರ ಸೇವೆ ಶ್ರೀಹರಿ ಸೇವೆಸಂತರ ಮತವೆ ಹರಿಸಮ್ಮತವುಸಂತರ ಮತಿಯೆ ಮುಕುತಿಯ ಗತಿಯುಸಂತರಪಾದಚಿಂತನೆಗಾಹ್ಲಾದ1ಸಂತರಗಾತ್ರಭುವನಪವಿತ್ರಸಂತರ ನೋಟ ಪಾಪಗಳೋಟಸಂತರ ವಚನ ಧರ್ಮವಿರಚನಸಂತರ ಸಂಗ ತೋಷತರಂಗ 2ಸಂತರಿಂದೈಹಿಕಾಮುಷ್ಮಿಕ ಸೌಖ್ಯಸಂತರ ಅಭಯವಿರಲಾವಭವಸಂತರ ಕಂಡವ ನಿಜ ಸುಖ ಕಂಡಸಂತ ವಿಯೋಗ ತಮಸಿನಭೋಗ3ಸಂತರಖೇದವಂಶ ವಿಚ್ಛೇದಸಂತರ ಪ್ರೀತಿ ಶುಭಪದಪ್ರಾಪ್ತಿಸಂತರ ವಾರ್ತಾಖಿಳ ಪುರುಷಾರ್ಥಸಂತರ ಮಹಿಮಿ ಹೊಗಳ್ವಾತ ಪ್ರೇಮಿ 4ಸಂತರ ಊರೆ ಎನ್ನ ತವರೂರುಸಂತರ ಗತಿಗೋತ್ರರು ಎನಗಾಗಿಸಂತರ ಪದವನಪ್ಪಿದರೊಲಿವಸಂತರಿಗರಸ ಪ್ರಸನ್ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಸತಿಗೆ ಸ್ವಾತಂತ್ರ್ಯವ ಕೊಡದಿರಿ - ನೀವುಮತಿಗೆಟ್ಟು ಭ್ರಮೆಯ ಬಡದಿರಿ ಪ.ಪತಿಗೆ ಬಣ್ಣನೆ ಮಾತನಾಡ್ಯಾಳು - ತಾನುಮತಿಯಿಲ್ಲದೆ ಮೆಚ್ಚನಾಡಳುಅತಿ ಹರುಷದಲಿ ಬಂದು ಕೂಡ್ಯಾಳು ಕೂಡಿಖತಿಕರಕರೆಯನು ಮಾಡ್ಯಾಳು1ತಂದೆ - ತಾಯ್ಗಳನೆಲ್ಲ ತೋರಿಸ್ಯಾಳು - ನೀಒಂದೆಡೆ ಬಾಯಿಂದು ಬರಿಸ್ಯಾಳುನಿಂದಿಸಿ ಬೆಯ್ಯುತ್ತ ಬೆರೆಸ್ಯಾಳು ನಿನ್ನನೊಂದಪಡಿಭತ್ತಕೆ ಬಾಯ ತೆರೆಸ್ಯಾಳು2ತಂದಿದ್ದರೊಳಗರ್ಧ ಕದ್ದಾಳು ಕದ್ದುತಂದು ಸುಳ್ಳಹೇಳಿ ಮೆದ್ದಾಳುಮುಂದಿದ್ದ ಕೂಸಿನ ಹೊದ್ದಳು - ಹತ್ತುಮಂದಿ ಮುಂದೆ ಅಡ್ಡಬಿದ್ದಾಳು 3ಉಂಡ ಊಟವನೆಲ್ಲ ನೆನೆಸ್ಯಾಳು - ತನ್ನಮಂಡೆ ಕೆದರಿಕೊಂಡು ಸೆಣಿಸ್ಯಾಳುಭಾಂಡು ಮಾಡಿ ಬಾಯಿ ತೆರಿಸ್ಯಾಳು - ನಿನ್ನಕೊಂಡಕೋತಿಯಂತೆ ಕುಣಿಸ್ಯಾಳು4ಕರೆತರೆ ಸಂಸಾರ ಸ್ಥಿರವಲ್ಲ - ಈದುರುಳ ಹೆಣ್ಣಿನ ಸಂಗ ಸುಖವಿಲ್ಲನೆರೆದೊರೆಯವರು ನಗುವರೆಲ್ಲ - ನಮ್ಮಪುರಂದರವಿಠಲನು ತಾ ಬಲ್ಲ 5
--------------
ಪುರಂದರದಾಸರು
ಸತಿಸುತಗೆಷ್ಟು ತನಗೆಷ್ಟು ಮಾಡಲು ಬೇಕುಮಿತಿ ಮೀರಿ ಮಾಡಿದರೆ ಅಧೋಗತಿ ಮರುಳೆಪಅವರಸ್ವಾಸ್ತಿಯನೀಗ ಇವರಿಗೆ ಮಾಡಿದರೆಅವರು ಬಾರದೆ ಇವರು ಬಹರೇ ಮರುಳೇಅವರಾರು ಇವರಾರು ನಿನ್ನೊಳಗೆ ನೀ ತಿಳಿಯೋಜವಕರೆಯೆ ತೆರಳುವೆಯೋ ಸಂಗಡಲೆ ಮರುಳೆ1ಮನ ಕಂಡರೆ ಇಲ್ಲ ಮೋಕ್ಷ ಕಂಡರೆ ಇಲ್ಲಮಾನಿನಿಯ ಒಡವೆಯಲಿ ಚಿಂತೆ ಮರುಳೆಜ್ಞಾನಿಗಳ ಗುರುತರಿಯನಿನಗೆ ಸ್ಥಿರವೆಂತೆಂಬೆನೀನು ಹೊಗದೆನಿತ್ಯನೀನೆಂತು ಮರುಳೆ2ಕದನಮಾಡುವೀ ನಿನ್ನದೀಗ ಎನ್ನದು ಎಂದುಕದನವಾಡಲಿಕೆ ನೀನಾರೋ ಮರುಳೆಮುದಸುಖವನು ಆಗದಿರು ನೀನು ವಸ್ತಿಯಂಕುರಚಿದಾನಂದ ಬಗಳೆಯ ಚಿಂತೆಯನು ಮಾಡುತಲಿ3
--------------
ಚಿದಾನಂದ ಅವಧೂತರು
ಸಂತೋಷ ಕಂಡ್ರೀ ಸ್ವಾಮಿ ಸಂತೋಷ ಕಂಡ್ರೀ ಪಚಿಂತೆ ಚಿಂತೆ ಬಿಟ್ಟೀ ಶಾಂತದೂತನಾಗಿಕಂತುಪಿತನ ಚಿಂತಿಸುವಗೆ ಸಂತೋಷ ಕಂಡ್ರೀ1ಕೆಟ್ಟ ದುಷ್ಟ ಕಾರ್ಯ ಮಾಡೀ ಕಷ್ಟ ನಷ್ಟಗಳಿಗೆ ಸಿಕ್ಕಿಹೊಟ್ಟೆಹೊರೆವದುಷ್ಟಗೆಲ್ಲ ಸಂತೋಷ ಕಂಡ್ರಿ2ಆಶಾಪಾಶ ತ್ಯಜಿಸಿ ಹಲವು ಲೇಸು ಶ್ರೇಯ ಕಾಯಗೈದಈಶನಂಘ್ರಿ ದಾಸರಿಗೆ ಸಂತೋಷ ಕಂಡ್ರಿ3ತರುಣಿ ತರುಣರಿದ್ದರೇನು ಧರಣಿಗರನಾದರೇನುಹರಿಯ ಕರುಣವಿಲ್ಲದುಂಟೇ ಸಂತೋಷ ಕಂಡ್ರೀ4ಕಾಯದಲ್ಲಿ ಮೋಹ ತೊರೆದುಜೀಯಕೃಷ್ಣರಾಯನೆಂದುನ್ಯಾಯವಂತ ಜೀವರೀಗೆ ಸಂತೋಷ ಕಂಡ್ರೀ5ಯುಕ್ತಾಯುಕ್ತ ಯೋಚಿಸದೆ ಪಕ್ತ ಕಾಮಸಕ್ತನಾದರಕ್ತಮದದ ಶಕ್ತಗಿಹುದೆ ಸಂತೋಷ ಕಂಡ್ರಿ6ತಂದೆ ತಾಯಿ ನೀನೆಂದೆಂಬ ಬಂಧು ಬಳಗ ನೀನೆಂದೆಂಬಗೋವಿಂದನಾ ದಾಸರ್ಗೆಲ್ಲ ಸಂತೋಷ ಕಂಡ್ರೀ7<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಸತ್ಕರ್ಮವೆಂಬುದು ಸಾಧನವಲ್ಲದಲೆಸತ್ಕರ್ಮವೀಗ ಶುದ್ಧಬ್ರಹ್ಮವಲ್ಲವುಸತ್ಕರ್ಮ ಭಕ್ತಿಭಾವ ಸುಗುಣವಾದ ಮಾರ್ಗವುಸತ್ಕರ್ಮತ್ಯಾಗ ನಿಶ್ಯಬ್ದ ವಸ್ತುಪಗಾರುಡಿಯನರಿವೆನೆಂದು ಮಹೋರಗನ ಮೇಳವೇಆರು ನಂಬಲು ಬಹುದು ವಿಕಾರ ಮನವನುನಾರಿ ಪುತ್ರರೊಳಗೆ ಕೂಡಿ ನಾನು ಮುಕ್ತನು ಎನಲುಸೇರುವುದು ಎಂತು ಪೂರ್ಣ ಬ್ರಹ್ಮ1ಬ್ರಹ್ಮನರಿದು ಸಂಸಾರವಮಾಡುಈಗ ಎಂಬನುಬ್ರಹ್ಮಘಾತನು ಅವನು ಮಿಥ್ಯವಲ್ಲವುನಿಮ್ಮ ಮನಕೆ ತಿಳಿದು ನೋಡಿ ನಿಶ್ಚಿತದ ಮಾತ ಪೇಳ್ವೆಸುಮ್ಮನೆ ಬಿಡಲಿಬೇಕುಸತಿಸುತರನು2ವಾಸನಾಕ್ಷಯವು ವಸ್ತು ಎಂಬ ಮಾತು ದಿಟವದಿರಲುವಾಸನಾಕ್ಷಯವು ಎಂತು ಸಂಸಾರದಿಗೋಪನಾರಬೇಡವೆನಲು ನಾರುವುದು ಬಿಡುವುದೇಕಾಸ ವೀಸಿಯಲ್ಲದಲೆ ನಿಶ್ಚಯಿಲ್ಲವು3ಸಾಕ್ಷಿ ತಿಳಿದ ಬಳಿಕ ಸಂಸಾರವನೀಗ ತ್ಯಜಿಸಿದೆಅಕ್ಕಿನೀರುವಗ್ಗಿದಂತೆ ಆಗಬಾರದುರಕ್ಷಕನು ಇಲ್ಲದಲೆ ಸಂಸಾರವ ಬ್ರಹ್ಮವೆನಲುಭಕ್ಷಣಹುದುಬ್ರಹ್ಮಜ್ಞಾನಬಿಡುವುದಿಲ್ಲವು4ಸಂಸಾರದಿಮುಕ್ತನಾನು ಎನಲುತಿಲಾಂಶ ಮಾತ್ರ ಅನ್ನವಾಸನ ಅಂಟದಿಹುದೇಸಂಸಾರವ ತ್ಯಜಿಸಿದರೆ ಸಾಧ್ಯವಹುದು ವಸ್ತುಹಂಸಪರಮ ಚಿದಾನಂದ ತಾನೆಯಾಹನು5
--------------
ಚಿದಾನಂದ ಅವಧೂತರು