ಒಟ್ಟು 2997 ಕಡೆಗಳಲ್ಲಿ , 118 ದಾಸರು , 2044 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಜೋ ಜೋ ಗೋಪಿಯ ಕಂದಾಜೋ ಜೋ ಜೋ ಜೋ ಸಚ್ಚಿದಾನಂದಾಜೋ ಜೋ ಜೋ ಜೋ ಮಲಗೋ ಮುಕುಂದಾಜೋ ಜೋ ಇಂದಿರಾರಮಣ ಗೋ'ಂದಾ ಜೋ ಜೋ ಪಅಣುರೇಣು ತೃಣಕಾಷ್ಠ ಪರಿಪೂರ್ಣ ಜೋ ಜೋಪ್ರಣತಕಾಮದ ಪದ್ಮಜಾರ್ಜಿತ ಜೋ ಜೋಜಾಣೆರುಕ್ಮಿಣಿಯರಸಿ ಶ್ರೀಕೃಷ್ಣ ಜೋ ಜೋಜಾನಕಿ ಜೀವನ ಶ್ರೀರಾಮ ಜೋ ಜೋ 1ಸ್ಟೃಸ್ಥಿತಿಲಯ ಕಾರಣ ಜೋ ಜೋಇಟ್ಟಿಗೆ ಮೇಲ್ನಿಂತ 'ಠ್ಠಲ ಜೋ ಜೋಬೆಟ್ಟದ ತಿಮ್ಮಪ್ಪ ಶೆಟ್ಟಿಯೆ ಜೋ ಜೋದಿಟ್ಟ ಶ್ರೀ ಉಡುಪಿಯ ಕೃಷ್ಣನೆ ಜೋ ಜೋ 2ಜೋ ಜೋ ಶ್ರೀರಾಮದೂತ ಹನುಮಂತಾಜೋ ಜೋ ಜೋ ಭೀಮ ದ್ರೌಪದಿಕಾಂತಾಜೋ ಜೋಯತಿವರ ಆನಂದತೀರ್ಥಾಜೋ ಜೋ ಮೂರಾವತಾರ 'ಖ್ಯಾತ ಜೋ ಜೋ 3ಜೋ ಜೋ ಮಧ್ವ ಸಂತಾನ ಮುನಿವೃಂದಾಜೋ ಜೋ ಪ್ರಲ್ಹಾದ ವ್ಯಾಸ ರಾಜೇಂದ್ರಾಜೋ ಜೋ ಗುರುಸಾರ್ವಭೌಮಯತೀಂದ್ರಾಭೂಪತಿ'ಠ್ಠಲನ ಮೋಹದಕಂದಾ ಜೋ ಜೋ 4
--------------
ಭೂಪತಿ ವಿಠಲರು
ಜೋ ಜೋ ಜೋ ಜೋ ದೇವರದೇವನೆ ಜೋ ಜೋ ಪ ಶರಣ ಹೃತ್ಕು ಮುದನಿಶಾಮಣ ಜೋ ಜೋ ದುರಿತಾವಳಿತಮದ್ಯುಮಣೀ ಜೋ ಜೋ ಸುರಮುನಿಜನ ಚಿಂತಾಮಣಿ ಜೋ ಜೋ ಚೂಡಾಮಣಿ ಜೋ ಜೋ 1 ಬಾಲಕಲೀಲಾಲೋಲನೆ ಜೋ ಜೋ ಮೂಲೋಕಜೀವನಪಾಲನೆ ಜೋ ಜೋ ಕ್ಷುಲ್ಲಕರಿಪುಕುಲ ಶಾಲನೆ ಜೋ ಜೋ ತಿಲಕಸ್ತೂರಿ ಬಾಲನೆ ಜೋ ಜೋ 2 ಮೋಹನ ಮಾನಸ ಮೂರ್ತಿಯೆ ಜೋ ಜೋ ಮಹಿಮನುಪಮ್ಯದ ಕೀರ್ತಿಯೆ ಜೋ ಜೋ ಇಹಪರದಲಿ ಭಕ್ತ ಸಾರ್ಥಿಯೆ ಜೋ ಜೋ ಮಹಿಪತಿನಂದ ನಿಷ್ಟಾರ್ಥಿಯೆ ಜೋ ಜೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ಜೋ ಜೋ ಧ್ರುವ ತೊಟ್ಟಿಲ ಕಟ್ಟಿ ನಟ್ಟನಡುಮಧ್ಯ ಜಗಜಟ್ಟಿ ತೊಟ್ಟಿಲ ತೂಗಿರೆ ಮನಮುಟ್ಟಿ 1 ಧ್ಯಾನಧಾರಣದರಳೆಲೆ ಮಾಡಿ ಕರ್ನಕುಂಡಲ ಲಯಲಕ್ಷವಿಡಿ ಕರುಣನ ಪಾಡಿ 2 ತೋಳತಾಯಿತವಿಡಿ ನೋಡಿ 3 ಜಡಿತಾಭರಣದುಡುಗಿಯ ನೀಡಿ ಶ್ರೀ ಸರ್ವೋತ್ತಮನ ಪಾಡಿ 4 ನಿತ್ಯ ಆನಂದಮೂರ್ತಿಯ ತೂಗಿ ಪತಿತ ಜೀವನಪಾವನ್ನವಾಗಿ ಚಿತ್ತಮನಬುದ್ಧಿ ಏಕತ್ವವಾಗಿ ಭಕ್ತವತ್ಸಲನ ತೊಟ್ಟಿಲ ತೂಗಿ 5 ಅದೃಷ್ಟದಲಿ ಸದೃಷ್ಟವಾಗಿ ಸದ್ಬ್ರಹ್ಮಾನಂದ ಸದ್ಗುರುಯೋಗಿ ಮೂರ್ತಿಯ ತೂಗಿ 6 ಜೀವನಮೂರ್ತಿಯ ಪಾಡಿ ಘನ ಕೂಡಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೋ ಜೋ ಸುಖಸಾರ ಪ ಜೋ ಜೋ ಜೋಜೋ ದೋಷ ವಿದೂರ ಅ.ಪ ಸುಮ್ಮನೆ ಸಾಗೆಲೊ ಮುಂದೆ ನಮ್ಮ ಮಗುವು ತಾ ಮಲಗಿಹನಿಂದು ನಿಮ್ಮ ಮಂದಿಗೆ ಈ ಶಿಶುವು ಬೊಮ್ಮನು ಫಣಿಯಲಿ ಬರೆದಿಹನೇನೊ 1 ನಿದ್ರೆಯ ಸುದ್ದಿಯ ಕಾಣದ ನಾನು ನಿದ್ರೆಯ ಮಾಡುವ ಸಡಗರವೇನು ಮುದ್ದು ಮಾತುಗಳಲಿ ಫಲವೇನು ನಿದ್ರೆ ನಾ ಮಾಡಲು ಎದ್ದಿರುವರ್ಯಾರು2 ನಿದ್ರೆ ಮಾಡುವುದೆಂತು ಬೇಕಾದ ಜೋಗುಳ ಪಾಡುವೇನೊ ಏಕಮನದಿ ನೀ ಪ್ರಾಜ್ಞನ ಕೂಡೊ ದಧಿ ಕ್ಷೀರಗಳು ನಾಕು ನಿಮಿಷದಲಿ ಜೀರ್ಣವಾಗುವುವೊ 3 ಕಣ್ಣನು ಮುಚ್ಚಿದೆ ಪ್ರಾಜ್ಞ ನಾನು ಚನ್ನಾಗಿ ತಬ್ಬಿದೆ ನೋಡಮ್ಮ ಎನ್ನಯ ಕುಕ್ಷಿಯು ಬರಿದಾಯ್ತು ಇನ್ನು ಪ್ರಸನ್ನಳಾಗುಣಬಡಿಸಮ್ಮ 4
--------------
ವಿದ್ಯಾಪ್ರಸನ್ನತೀರ್ಥರು
ಜೋಕೆ ಎನ್ನ ವಿಚಾರ ನಾಕು ಜನರಂತಲ್ಲ ಸ್ವೀಕರಿಸಬೇಕು ಕ್ಷಣದಿ ಪ ನಾಕಾರು ವಿಧಗಳಲಿ ನೀಪೇಳಿದುದನೆಲ್ಲ ಏಕಮನದಲಿ ಮಾಡಿದೆ ಕೃಷ್ಣ ಅ.ಪ ಬಾಲತನದಲಿ ಬಹಳ ಲೋಲನಾಗಿರು ಎಂದು ಪೇಳಲಿಲ್ಲವೆ ಯೋಚಿಸು ಕೀಳುಜೀವನದಲ್ಲಿ ಕಾಲವನು ಕಳೆ ಎಂದು ಪೇಳಿದುದ ನೀ ಮರೆತೆಯಾ ಶ್ರೀ ಲಕುಮಿಪತಿ ನಿನ್ನ ಕೀಲುಗೊಂಬೆಯ ತೆರದಿ ಪೇಳಿದುದ ಮಾಡಿರುವೆನೊ 1 ಶ್ರೀಪತಿಯೆ ನಿನ್ನ ಪ್ರೇರಣೆಯಲ್ಲವೆ ಸರ್ವ ಪಾಪ ಪುಣ್ಯಕೆ ಕಾರಣ ಈ ಪರಿಯ ನಿನ್ನ ಸಂಕಲ್ಪವನು ಮೀರಲು ತಾಪಸೋತ್ತಮರಿಗಳವೆ ಆಪತ್ತು ಸಂಪತ್ತು ನಿನ್ನಧೀನಗಳೆಂದು ತಾಪತ್ರಯವ ಸಹಿಸಿದೆ 2 ಇಂದಿರಾಪತಿ ನಿನ್ನ ಒಂದೊಂದು ದಿನದಲಾ ನಂದ ಪೂಜೆಗೈಯಲು ಹಿಂದಿನಾ ಲೆಕ್ಕವು ಸಂದಿಲ್ಲವೆಂದು ನೀ ಇಂದು ಮಾಡುವರ್ಯಾರು ಸಂದೇಹವಿಲ್ಲವೆನಗೆ 3 ಇಂತಹುದು ಬೇಕೆಂಬ ಚಿಂತೆಯಿಲ್ಲದೆ ಬಹಳ ಸಂತಸದಿ ಮುಳುಗಿರುವೆನೊ ಕಂತುಜನಕ ಎನಗೆ ಭ್ರಾಂತಿ ನೀಡದೆ ಮನಕೆ ಶಾಂತಿಯನು ದಯಮಾಡೆಲೊ ಸಂತತ ನೀನು ಎನ್ನಂತರಂಗದಲಿರಲು ಕಂತೆಯಂದದಿ ಕಾಂಬೆನೊ ಜಗವ 4 ಧೋರಣೆಯ ನುಡಿಗಳಿಗೆ ಕಾರಣನು ನೀನಿರಲು ಯಾರ ಭಯವೆನಗಿಲ್ಲವೊ ನೀರಜಾಕ್ಷನೆÉ ನಿನ್ನ ಪ್ರೇರಣೆಯನೆಳ್ಳಷ್ಟು ಮೀರಿ ನಡೆಯುವುದಿಲ್ಲವೊ ಸಾರಗುಣ ಸಂಪನ್ನ ಧೀರಭಕ್ತ ಪ್ರಸನ್ನ ಯಾರಿರುವರೊ ಜಗದಲಿ ನಿನ್ಹೊರತು 5
--------------
ವಿದ್ಯಾಪ್ರಸನ್ನತೀರ್ಥರು
ಜೋಕೆ ಮಾಡೆನ್ನ ನಮ್ಮಯ್ಯ ರಂಗ ಜೋಕೆ ಮಾಡೆನ್ನ ಪ ಲೋಕನಾಥನೆ ಜೋಕೆ ಮಾಡೆನ್ನ ಕಾಕುಬವಣೆಯ ಸಾಕುಮಾಡಿ ಏಕಚಿತ್ತದಿ ನಿಮ್ಮ ಭಜನೆ ಜೋಕಿನೊಳು ಇರಿಸು ದೇವ ಅ.ಪ ನಿಗಮಗೋಚರನೆ ಜಗದಯ್ಯ ವಿಜಯ್ಯ ಖಗಪತ್ವಾಹನನೆ ಅಗಧರನೆ ಈರೇಳು ಜಗವ ರಕ್ಷಿಪನೆ ರಘುಕುಲಾರ್ಯನೆ ಮಗನಬಗೆ ಕೇಳು ಕರುಣದಿಂದಲಿ ನಿಗಮಾತೀತನೆ ಮುಗಿವೆ ಕರಮಂ ಹಗಲು ಇರಲು ಸುಗುಣಿ ಸಂತರ ಸಂಗಸುಖ ಎನಗಗಲಿಸದೆ ಹರಿ 1 ಮೆರೆವವೇದವ ವರಸ್ಮøತಿಶಾಸ್ತ್ರವ ಕರುಣಿಸೈ ದೇವ ಪರಿಹರಿಸು ಎನ್ನ ಮರವೆ ಮಾಯವ ವರಭಕ್ತ ಜೀವ ಮರವೆ ಮಾಯದಿ ಸಿರಿಯವರ ತವಪರಮ ಚರಿತವ ಅರಿವು ನಿಲ್ಲಿಸಿ ಕರುಣದಿಂ ತವ ಚರಣಕುರುಹನು ಕರುಣಿಸಭವ 2 ದೃಢದಿ ಬೇಡುವೆನು ತಡಿಯೆನೀಭವ ಎಡರುತೊಡರನು ಗಡನೆ ಬಿಡಿಸೆನ್ನ ಕಡೆಗೆ ಮಾಡೆನ್ನ ನಿಮ್ಮಡಿಗೆ ಬಾಗುವೆನು ನುಡಿಸು ಎನ್ನ ಮೆಲ್ನುಡಿಯೊಳನುದಿನ ಬಿಡದೆ ತವ ಕೊಡು ಗೂಢಮಂತ್ರವ ಬಿಡದೆ ಕೊಡು ನಿನ್ನಡಿಯ ದಾಸರ ಸಡಗರದ್ಯನ್ನೊಡೆಯ ಶ್ರೀರಾಮ 3
--------------
ರಾಮದಾಸರು
ಜ್ಞಾನ ಪ್ರದಾಯಕ ಪ್ರಾಣದೇವ ಪ ಕಾಣೆ ನಿನಗೆ ಸಮಸತ್ಪ್ರಭಾವ ಅ.ಪ ಈ ಶರೀರದೊಳು ವಿಭೀಷಣನ ತೋರೊ 1 ಕೋಪ ಕುಜನತ್ವ ದುರ್ ವ್ಯಾಪಾರಾದಿಗಳನ್ನೆಲ್ಲ ರೂಪಡಗಿಸಿದೆ ನೀನೇ ಭೂಪನೈಯ್ಯ 2 ಇಪ್ಪತ್ತೊಂದು ವಿಧದ ತಪ್ಪುಗಳ ತಿದ್ದಿದೆ ತಿ- ಮ್ಮಪ್ಪ ವೇದ ವ್ಯಾಸರ ಶಿಷ್ಯಾವರ್ಯಾ 3 ಕಲಿಮಾರ್ಗದಲಿ ಪೋಪ ಹೊರೆ ಬುದ್ಧಿನಾಶಗೈಸಿ ಒಳಗೆ ನೀ ಪೊಳೆವುದು ಜಲಜಾಪ್ತ ಪ್ರಿಯ4 ರಂಜೀತವಾದ ಕಣ್ಣ್ಣಿಗೆ ಮಂಜು ಮುಚ್ಚಿಹುದು ದಿ- ವ್ಯಾಂಜನ ಹಚ್ಚೈ ವೀರಾಂಜನೇಯಾ5 ಯೇಳಾರೊಳಗೆ ಹದಿನೇಳಾನೆಯವರನು ಪಾಲಿಪ ದೊರೆ ನೀನು ಜಾಲವೇನು?6 ಸಿರಿಗುರುರಾಮ ವಿಠಲನ ಶರಣಾರಾಭರಣ ನೀನೆ ಕರುಣೀಸದಿದ್ದರೆಮ್ಮನು ಕಾವರಾರೈ 7
--------------
ಗುರುರಾಮವಿಠಲ
ಜ್ಞಾನವಾವುದು ಅಜ್ಞಾನವಾವುದು ಮಾನವಾವುದು ದುಮ್ಮಾನವಾವುದು ಪ ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲವೆ ಪರರ ಸತಿಯ ತೊರೆವುದೊಂದು ಮಾನವಲ್ಲವೆ ಪರರ ಸೇವೆಗಿರುವದವಮಾನವಲ್ಲವೆ 1 ಧನ್ಯರನ್ನು ಮನ್ನಿಸುವುದು ಜ್ಞಾನವಲ್ಲವೆ ಹೊನ್ನ ಹುದಿದು ಅನ್ನ ತೊರೆವುದಜ್ಞಾನವಲ್ಲವೆ ಅನ್ಯರೊಡವೆ ಕಳುವುದವಮಾನವಲ್ಲವೆ 2 ಹಸಿದವರನು ಕಂಡು ಯಿಕ್ಕಲು ಜ್ಞಾನವಲ್ಲವೆ ಹುಸಿಕನಾಗಿ ಅಸತ್ಯ ಮಾಳ್ಪುದು ಅಜ್ಞಾನವಲ್ಲವೆ ಹಸನವಾಗಿ ನಡೆವ ಕೃತ್ಯ ಮಾನವಲ್ಲವೆ ಎಸೆವ ಜೂಜು ತಪ್ಪಲವಮಾನವಲ್ಲವೆ 3 ಸ್ಥಿರವಿದಲ್ಲವೆಂಬ ಜೀವಿ ಜ್ಞಾನಿಯಲ್ಲವೆ ನರಕ ಭಯವ ಮರೆವ ಜಡನಜ್ಞಾನಿಯಲ್ಲವೆ ಹಿರಿಯರಿಂದ ಅನಿಸಿಕೊಂಬುದು ಮಾನವಲ್ಲವೆ ಬರಿಯ ಕ್ಷುದ್ರವೆಸಗಲವಮಾನವಲ್ಲವೆ 4 ಕ್ರೋಧವನ್ನು ತೊರೆದ ಮನುಜ ಜ್ಞಾನಿಯಲ್ಲವೆ ವೇದವನ್ನು ಜರೆದ ನರನಜ್ಞಾನಿಯಲ್ಲವೆ ಸೋದರರು ಕೂಡಿಯಿರಲು ಮಾನವಲ್ಲವೆ ಮಾದಿಗರ ಸಂಗವದವಮಾನವಲ್ಲವೆ 5 ಗುರು-ಹಿರಿಯರನುಸರಿಸೆ ಜ್ಞಾನವಲ್ಲವೆ ಸಿರಿಯ ವೇಶ್ಯಸ್ತ್ರೀಗೆ ಕೊಡಲಜ್ಞಾನವಲ್ಲವೆ ದೊರೆಯು ಕರೆದು ಉಚಿತವೀಯೆ ಮಾನವಲ್ಲವೆ ತಿರುಕರಂತೆ ತಿರಿವುದು ಅವಮಾನವಲ್ಲವೆ 6 ವರಾಹತಿಮ್ಮಪ್ಪ ಒಲಿದರದು ಜ್ಞಾನವಲ್ಲವೆ ಮರೆದು ಕ್ಲೇಶಕೆರಗುವುದಜ್ಞಾನವಲ್ಲವೆ ಕರೆದು ಪರರಿಗಿಕ್ಕುವುದು ಮಾನವಲ್ಲವೆ ಕರೆಕರೆಯ ಮಾತು ಅವಮಾನವಲ್ಲವೆ 7
--------------
ವರಹತಿಮ್ಮಪ್ಪ
ಜ್ಞಾನಶೂನ್ಯಗಾತ್ಮದನುಭವವ್ಯಾಕೆ ಹೀನ ಸಂಸಾರಿಗೆ ಪರದ ಸುದ್ದ್ಯಾಕೆ ಪ ಕತ್ತೆಗೆ ಬೆಲೆಯುಳ್ಳ ಉತ್ತಮ ಜೀನ್ಯಾಕೆ ಕೃತ್ರಾಮಗೆ ಸತತ ಸತ್ಪಥದ ಬೋಧ್ಯಾಕೆ ತೊತ್ತಿಗ್ಹೋಗುವಗರಸೊತ್ತಿಗಧಿಕಾರವ್ಯಾಕೆ ಮಿಥ್ಯೆಮತಿಗ್ಯಾತಕ್ಕೆ ಉತ್ತಮರ ನೆರೆಯು 1 ನಂಬಿಗಿಲ್ಲದವಗ್ಯಾಕೆ ಗುಂಭದ ಮಾತುಗಳು ಜಂಬಕೊಚ್ಚುವವಗ್ಯಾಕೆ ಗಂಭೀರತನವು ಅಂಬುಜಾಕ್ಷನ ಚರಿತ ಡಂಭನಿಗ್ಯಾತಕ್ಕೆ ಗೊಂಬೆಯಾಟಗಾರಗ್ಯಾಕೆ ತಂಬೂರಿ ತಬಲ 2 ದಾನಧರ್ಮದ ಮಹಿಮೆ ಜೀನನಿಗೆ ಏತಕ್ಕೆ ಗೋಣು ಮುರಿವವಗ್ಯಾಕೆ ದೈನ್ಯಮಾತುಗಳು ನಾನಾ ಬಯಕೆಯುಳ್ಳ ಮಾನವಗೆ ಭಕ್ತಜನ ಪ್ರಾಣ ಶ್ರೀರಾಮ ನಿಮ್ಮ ಧ್ಯಾನವಿನ್ಯಾಕೆ 3
--------------
ರಾಮದಾಸರು
ಜ್ಞಾನಸುಧೆಯ ಪಾನಮಾಡಿ ಸ್ವಾನುಭವದಿ ಲೀನನಾದೆ ಹೀನ ಭವದ ತಾಪವೆನಗೆ ಬಾಧಿಸುತಿರೆ ಗುರು ನೀಡಿದ ಪ ಜೀವನ ಸುಖದುಃಖದಾ ಭಾವ ಜೋಲಿಗಳನು ಮರೆದು ದೇವ ನಾನೆ ಎಂದು ತಿಳಿದು ಪಾವನಾತ್ಮನೊಳಗೆ ಬೆರೆದು 1 ನಾನು ನೀನು ಎಂಬ ಭೇದ ಏನು ಮೋಜು ಮಾಯವಾಯ್ತು ಕಾಣದಾಯ್ತು ಜೀವಭಾವ ಜ್ಞಾನಬೋಧದಾ ಪ್ರಭಾವ2 ಭಾನ ಮರೆದು ದೇಹಮನದ ಜ್ಞಾನಗೀತೆಗಳನು ಪಾಡಿ ತಾನೆ ತಾನಾಗಿರುವ ಜ್ಞಾನಿ ಗುರುವಿನೊಳಗೆ ಕೂಡಿ 3 ಕಲ್ಪನಾವಿಲಾಸ ಪೋಗಿ ಅಲ್ಪನೆಂಬ ಮತಿಯ ನೀಗಿ ಅಲ್ಪನಾತೀತನಾದನಲ್ಪನಾದ ಶಂಕರನಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಜ್ಞಾನಾಮೃತ ಭುಜಿಸು ಜೀವ ಮಾನವಜನುಮದ ಗುರಿಯಿದು ಪ ಶುದ್ಧಮನದ ಪಾತ್ರೆಯಲ್ಲಿ ಸದ್ಗುರುವಿನ ಬೋಧದನ್ನ ಶುದ್ಧ ಚೈತನ್ಯಾತ್ಮ ನೀನೆ ಬದ್ಧಜೀವನಲ್ಲವೆಂಬ 1 ಶಿವರೂಪನು ಸಚ್ಚಿದಾತ್ಮ ಭವಬಂಧನವೆನ್ನೊಳಿಲ್ಲ ಆವಿನಾಶಿಯೆ ನಾನು ಎಂಬ ಸುವಿಚಾರದ ಬಾಯಿಯಿಂದ 2 ಸದ್ ರೂಪದ ಆರೋಗ್ಯ ಚಿದ್ ರೂಪದ ಪರಮ ಭಾಗ್ಯ ಆನಂದದ ನಿಧಿಯಾಗುವಿ ಬೋಧ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಜ್ವರಹರಾಹ್ವಯನೆ ಶ್ರೀನಾರಸಿಂಹಪೋರನಾಮಯ ಕಳೆದು - ಆರೋಗ್ಯವೀಯೊ ಪ ಭೋಗಿ ಭೋಗಿ ಶಯನನೆ ದೇವರೋಗ ಹರಿಸುವುದರಿದೆ _ ರೋಗಾರ್ತ ಶಿಶುಗೇ 1 ಯೋಗಿ ಭಾಗವತ ಪ್ರಿಯ 2 ಈ ವಸುಮತಿಯ ಸಕಲ - ಜೀವರಂತರ್ಯಾಮಿದೇವ ನರಹರಿ ಜ್ವರ ಹ - ರಾಹ್ವಯನು ಯೆನಿಸೀ |ಕಾವುತಿರೆ ಭಯವೇನು _ ತೀವ್ರ ಪಾಲಿಪುದಿವನಗೋವ ಪಾಲಿಪ ಗುರು - ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ಪ ಬಟ್ಟೆ ಕಾಣದು1 ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರುಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ 2 ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದುಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲಮಣ್ಣುಪಾಲು ಆದಮೇಲೆ ಯಾರಿಗಾಹುದೊ 3 ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡುಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತುಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು 4 ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನುಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ 5
--------------
ಕನಕದಾಸ
ತಗಲಿ ತಗಲದೆ ಈ ಜಗದೊಳು ಜೀವಿಸೊ ಕಮಲ ಪತ್ರದಲ್ಲಿಹ ಜಲದ ಕಣಗಳಂತೆ ಪ ತಗಲುತ ನಿರತ ಸುಖವನೀವ ಕರ್ಮಕ್ಕೆ ತಗಲದೆ ಭವದಲಿ ಬಿಗಿವ ವಿಷಯಗಳಿಗೆ ಅ.ಪ ಪರಿಪರಿ ಕ್ಷಣಿಕ ಸುಖದ ಮೋಹದೊಳತಿ ದುರಿತಗಳಿಗೆಳೆವ ದುರುಳರ ಅಗಲೆಲೋ ಹರಿದಾಸರ ಸಹವಾಸಕ್ಕೆ ತಗಲುತ್ತ ಹರಿಗುಣ ಪೊಗಳುವ ಪರಮ ಸುಖವ ಬಯಸೊ 1 ಸತಿ ಸುತರೆಲ್ಲ ಶ್ರೀಪತಿಯ ಸೇವೆಯೊಳತಿ ಹಿತ ತೋರಲು ಅವರೊಳಾಮತಿಯನು ತಗಲಿಸೊ ಕ್ಷಿತಿಯೊಳವರು ನಿನ್ನ ಭೋಗವಸ್ತುಗಳೆಂದು ಮಿತಿ ಮೀರಿರುವ ಮಮತೆಗೆ ತಗಲದಿರೊ 2 ದುರ್ಮಾರ್ಗದೊಳು ದುಷ್ಟಕರ್ಮಗಳನೆ ಮಾಡಿ ಹೆಮ್ಮೆಯಿಂದಲಿ ಪಾಪ ಫಲಗಳ ಬಯಸದೆ ಧರ್ಮದಿ ಸುಖಗಳನನುಭವಿಸುವುದಕೆ ಸಮ್ಮತಿ ಈ ಯುವ ನಮ್ಮ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು