ಒಟ್ಟು 12527 ಕಡೆಗಳಲ್ಲಿ , 133 ದಾಸರು , 6731 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆದರದಿರೊ ಬೋವು ಬರಲಿಲ್ಲ ನಿನ್ನಮೃದುಲ ಸವಿ ತೊದಲು ಮಾತಾಡೊ ಬಾಲ ಪ.ಕಣ್ಣೆವೆಯಿಕ್ಕದೆ ನೋಡಬ್ಯಾಡನಿನ್ನ ಮೈಮರವಿಟ್ಟಾಡ ಬ್ಯಾಡಗುನ್ನಗನ್ಯೆಳೆದಂಬೆಗಾಲಿಕ್ಕಬ್ಯಾಡಹೊನ್ನೋಲೆ ಕೆಂಪೇರೆ ಹುಯಿಲಿಡಬ್ಯಾಡ 1ನೆಲವಿದು ದೈನ್ಯವ ಬಿಡಬ್ಯಾಡಕೊಲ್ಲುವರ್ಯಾರಿಲ್ಲ ಕೊಲೆಗಂಜಬ್ಯಾಡನಲವ ಬಿಟ್ಟಡವಿಯನೈದ ಬ್ಯಾಡಕಳವಲಿ ಹುದುಗಿಕೊಂಡಿರಬ್ಯಾಡ 2ಹುಸಿಗೆ ಬೇಸರಬ್ಯಾಡ ಕೃಷ್ಣಮ್ಮಹೊಸ ಕಲ್ಕ್ಯಾಟಬ್ಯಾಡ ನಮ್ಮಮ್ಮಪ್ರಸನ್ನವೆಂಕಟಪತಿ ಪರಬೊಮ್ಮ ನಿನ್ನಕುಶಲಕ್ಕೇನೇನುಪಾಯವಿಲ್ಲಮ್ಮಾ 3
--------------
ಪ್ರಸನ್ನವೆಂಕಟದಾಸರು
ಬೇಡಬೇಡೆಲಾ ಕೊಡಬೇಡೆಲಾ ಸೀರೆಬೇಡಿದರೆ ದೇವರಾಣೆಲಾ ಪಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ 1ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||ಖೂಳಪೂತನಿ ಕೊಂದ ಧಾಳಿ ಬಲ್ಲರವರು |ಬಾಲಕನೆನ್ನರು ನಿನ್ನಗೆಲಾ 2ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |ವತ್ತಿ ನಮ್ಮನು ಕೊಲ್ಲರವರೆಲಾ ||ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |ನಿತ್ಯನಮ್ಮೊಳು ನಡತೆಲಾ 3ಕರಕರಿಗಾರದೆ ಮೈಮರೆದು ಊರಿಗೆ ಹೋಗಿ |ಭರದಿಂದೆಶೋದೆಗೆ ದೂರೆವೆಲಾ ||ತರುಣಿಯರೆಲ್ಲ ಹಿಂದೆ ಮೊರೆಯಿಡೆ ಲಾಲಿಸಿ |ಒರಳಿಗೆ ಕಟ್ಟಿಸಿದ್ದೆವೆಲಾ 4ಲಲನೆಯರೆಲ್ಲ ಕೂಡಿ ಜಲಬಿಟ್ಟು ಬಂದರೆ |ಕೊಳುವೆ ನಿನ್ನಯ ಪ್ರಾಣಾ | ತಿಳಿಯಲೊಗಳಿಸಿ ಸಂಸಾರವ ಸಲುಹುತಿಹರು ನಾವೇ |ಕಳವೇನೊ ಪ್ರಾಣೇಶ ವಿಠಲ 5
--------------
ಪ್ರಾಣೇಶದಾಸರು
ಬೇಡವೆನ್ನೆ ನೀನು ಗೋಪಮ್ಮ ಪಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಬೇವ ಬೆಲ್ಲದೊಳಿಡಲೇನು ಫಲಹಾವಿಗೆ ಹಾಲೆರೆದೇನು ಫಲ ? ಪ.ಕುಟಿಲವ ಬಿಡದಲೆ ಕುಜನರು ಮಂತ್ರವಪಠನೆಯ ಮಾಡಿದರೇನು ಫಲ?ಸಟೆಯನ್ನಾಡುವ ಮನುಜರು ಮನದಲಿವಿಠಲನ ನೆನೆದರೆ ಏನು ಫಲ ? 1ಮಾತಾ - ಷತೃಗಳ ಬಳಲಿಸುವಾತನುಯಾತ್ರೆಯ ಮಾಡಿದರೇನು ಫಲ ?ಘಾತಕತನವನು ಬಿಡದೆ ನಿರಂತರನೀತಿಯನೋದಿದರೇನು ಫಲ ? 2ಕಪಟತನದಲಿ - ಕಾಡುವರೆಲ್ಲರುಜಪಗಳ ಮಾಡಿದರೇನು ಫಲ ?ಕುಪಿತ ಬುದ್ಧಿಯನು ಬಿಡದೆ ನಿರಂತರಉಪವಾಸ ಮಾಡಿದರೇನು ಫಲ ? 3ಪತಿಗಳ ನಿಂದಿಸಿ ಬೊಗಳುವ ಸತಿಯರುವ್ರತಗಳ ಮಾಡಿದರೇನು ಫಲ ?ಅತಿಥಿಗಳೆಯಡೆಯಲಿ ಭೇದವ ಮಾಡಿ ಸದ್ಗತಿಯನು ಬಯಸಿದರೇನು ಫಲ ? 4ಹೀನ ಗುಣಂಗಳ ಬಿಡದೆ ನದಿಯೊಳುಸ್ನಾನವ ಮಾಡಿದರೇನು ಫಲ ?ಜಾÕನಿ ಪುರಂದರವಿಠಲನ ನೆನೆಯದೆಮೌನವ ಮಾಡಿದರೇನು ಫಲ? 5
--------------
ಪುರಂದರದಾಸರು
ಬ್ಯಾಡಿರವ್ವ ಎನ್ನ ಕಂದನ್ನ ದೂರಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿಪಿಡಿದು ತಂದು ದುರುಳನೆನ್ನ ಬ್ಯಾಡಿರೆ ಪ.ಹಸಿದೆ ಮಗುವೆ ಹಸಿದೆ ಚಿನ್ನಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುನಿಬಟ್ಟಲೊಳಿಟ್ಟ ಪಾಲಿನಬಿಸಿಗೆ ಬೊವ್ವೆಂದು ಬೆದರುವಮೊಸರ ಹರವಿಯೊಡೆದು ನಿಮ್ಮನೆಪೊಸಬೆಣ್ಣೆಗಳ ಮೆಲುವನೆಂದುಅಸಿಯರೊಂದುಗೂಡೆನ್ನ ಕೂಸಿಗೆಪುಸಿಯ ವಾಕನುಸುರಿ ದೂರ ಬ್ಯಾಡಿರೆ 1ಮುದ್ದು ತಾರೊ ರಂಗ ಎನಲುಎದ್ದು ತಪ್ಪಡಿಗಳನಿಡುತಬಿದ್ದು ಅಂಬೆಗಾಲನಿಕ್ಕಿಮುದ್ದು ನೀಡಲರಿಯನೆಕದ್ದು ನಿಮ್ಮನೆ ಕೆನೆವಾಲನುಗೆದ್ದು ನಿಮ್ಮ ಬಾಲರ ಬೆನ್ನಗುದ್ದಿ ಓಡಿ ಬರುವನೆಂತೆಬುದ್ಧಿ ಇಲ್ಲವೆ ನಿಮಗೆ ದೂರ ಬ್ಯಾಡಿರೆ 2ಎತ್ತಿಕೊಂಡು ರಂಬಿಸಿ ಬಾಯೊಳುತುತ್ತನಿಡಲು ಉಣ್ಣಲರಿಯಕತ್ತಲೆಯೊಳು ಹೆಂಗಳ ಪಿಡಿದುಚಿತ್ತ ಮೋಹಿಸಬಲ್ಲನೆಹೆತ್ತ ಮಕ್ಕಳಿಲ್ಲವೆ ನಿಮಗೆವ್ಯರ್ಥ ಜಾರನೆನ್ನುವಿರಮ್ಮಕರ್ತಪ್ರಸನ್ವೆಂಕಟರಾಯಗೆಭಕ್ತವತ್ಸಲನಲ್ಲೆಂದು ದೂರ ಬ್ಯಾಡಿರೆ 3
--------------
ಪ್ರಸನ್ನವೆಂಕಟದಾಸರು
ಬ್ರಹ್ಮಾದಿಕರನು ಪರಬ್ರಹ್ಮದಿಚ್ಛಿಲಿ ಪಡೆದಳಮ್ಮಪರಂಜ್ಯೋತಿ ಪರಬ್ರಹ್ಮಿಣೀಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಾಣಿ ಕಲ್ಯಾಣಿಫಣಿವೇಣಿ| ರುದ್ರಾಣಿಶರ್ವಾಣಿಸುವಾಣಿ ಗೀರ್ವಾಣಿ ವರದೆ | ಗಾಣಿತ್ರಿನಯನ ಅಜನ ರಾಣಿ ಶಂಕರ ಪ್ರಾಣಿ ಪುಸ್ತಕಪಾಣಿನಾರಾಯಣೀ1ಅಂಬೆ ಲೋಕಾಂಬೆ ಭ್ರಮರಾಂಬೆ ಮೂಕಾಂಬೆಹರಡಿಂಬೆ ಪ್ರತಿಬಿಂಬೆ ಕುಚಕುಂಭೆ ಸಾಂಬೆ |ರಂಭೆ ಹೇರಂಬೆ ಶರಣೆಂಬೆ ವರಗೊಂಬೆ ಭಕ್ತರಬೊಂಬೆ ಹೊಳೆವ ಗೊಂಬೆ2ಕಾಳೆ ಹಿಮ ಬಾಳೆ ಭೂ ಪಾಳೆ ಕುಸುಮಾಳೆವನಮಾಳೆಕಂದರಮೌಳೆ ಕುಟಿಲ ಕುರುಳೆ |ಕೇಳಿನಿನ್ನಯ ಲೀಲೆ ಕಾಲಿಗೆರಗುವರಘವ ಮೂಲಕೆತ್ತೆತ್ತಿಬಿಸುಟುವ ಕೃಪಾಳೆ3ಬೇಕೆಂಬೊ ಬಯಕಿತ್ತು ಸಾಕು ಸಾಕೆನಿಸುವರುಲೋಕದೊಳಗ್ಯಾರುಂಟು ನಿನ್ನ ಬಿಟ್ಟು |ಏಕೆ ವಿವೇಕೆ ಎನ್ನೀ ಕುಟಿಲಗುಣನೋಡ ಬೇಕೆಕ್ಷಮೆಮಾಡಿದರೆ ಮೈಯುಳಿಯುವದು4ಕಾಯಜನ ಮಾತೆ ಸಿತಕಾಯನರ್ಧಾಂಗಿ ಜಗಕಾರ್ಯನಿರ್ಮಿಸುವ ನರರುದಿಸಿ ಮೂರು || ಕಾಯಡಗಿ ಹೋದನಿಷ್ಕಾಯ ಪರಶಕ್ತ್ಯೆನ್ನ ಕಾಯ್ದುಕೊಳ್ಳೆಲೆತಾಯಿ ಸ್ತ್ರೀಯರನ್ನೆ5ಸಾರಿದರಹೊರೆವಸಂಸಾರದೊಳು ಮುಳುಗಿದರೆತಾರಿಸುವ ತವಕದಿಂತರುಳೆತರುಣೀ |ಸೇರಿಸುತ ತಿರುಗಿ ತನು ಬಾರದ್ಹಾದಿಗೆ ಒಯ್ದುತಾರಿಸುವ ಸ್ಥಿರದಿ ನೀ ತೋಯಜಾಕ್ಷಿ6ಕುಸುಮಸರ್ಪಾದಿಗಳು ಕುಸುಮಗಂಧಿಯ ಪದಕೆಕುಸುಮವೃಷ್ಟಿಗವು ದೇವಿಯ ಸುಕೃತಿಗಳೂ |ಕುಸುಮದೊಳು ಕರಕಂಜ ಕುಸುಮದೊಳುವರವಿಡಿದ ಕುಸುಮಶರರಿಪುಶಂಕರನ ಶಂಕರೀ7
--------------
ಜಕ್ಕಪ್ಪಯ್ಯನವರು
ಭಕ್ತರೆಂದರೆ ನೈಜ ಭಕ್ತರವರು ಪ.ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.ಅಧಿಯಾತ್ಮ ತಾಪಗಳುಅಧಿಭೂತ ಕ್ಲೇಶದನುಭವಅಧಿದೈವದಟ್ಟುಳಿಯನೆಣಿಸರತಿ ಬಲವಂತರ್ಮಧು ಮಥನಗಲ್ಲದರ ಬಗೆಗಂಜರು 1ವೇದತಂತ್ರವಾಕ್ಯದಿಂದುಪದೇಶಮಾಡಿದರೆ ಮೋಹನಕೊಳಗಾಗರುವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲುಕದಲದಂತಃಕರಣದ್ಹರಿದಾಸರು 2ಬದಿಗೆ ಬಂದಡಲಾವದುರಿತಕೋಟಿಗಳನ್ನುತುದಿಗಾಲಿಲೊದ್ದು ಸಲೆ ತಲೆವಾಗರುಹುದುಗೊಂಡು ಷಡುವರ್ಗ ರಿಪುಗಳನು ಗೆದ್ದುಹರಿಪದಲಂಪಟ ಜ್ಞಾನಾಂಬುಧಿಗಳು 3ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯಸುದಯಾರಸನುಂಬುವ ಬೋಧನವರುಸದಮಲ ಗುಣಾನಂತ ಪ್ರಸನ್ವೆಂಕಟಪತಿಯಹೃದಯವಲ್ಲಭರೆನಿಪಅಚಲಮತಿಯವರು4
--------------
ಪ್ರಸನ್ನವೆಂಕಟದಾಸರು
ಭಜಿಸಿ ಬಹು ಭಕುತಿಯಿಂದತ್ಯಜಿಪ ಭವಬಂಧನವ ಹರಿಯ ಪದವ ಪ.ಮನವೈರಿಯಂ ಪಿಡಿದು ಮಿತ್ರನಂ ಮಾಡಿ ಕೊಂಡನುನಯದಿ ವೈರಾಗ್ಯ ಘನಸಿರಿಯೊಳುದಿನದಿನಕೆ ಮುದವೇರಿ ತಾತ್ವಿಕರೊಡನೆ ಮಧ್ವಮುನಿರಾಯನೊರೆದಪರಿಹರಿಯ ಪಾದವ1ತುದಿಮೊದಲೆ ಸರ್ವಕಾಲಕೆ ಚಿಂತನೆಯ ಬಲಿದುಪದುಮಾಕ್ಷನಾಕೃತಿಯ ನೋಡಿ ದೃಢದಿಕದಲಗುಡದಂತಃಕರಣ ಸ್ನೇಹ ಸಾರವನುಹೃದಯ ಮಂಟಪದೊಳಗೆ ಹರಿಯ ಪದವ 2ಹರಿಪರಾತ್ಪರ ಲಕುಮಿ ಅರಸಿ ಅಜಕುವರ ಹರವರಪೌತ್ರ ಸುರಮುನಿಜನರು ದಾಸರುತರತಮದ ತಂತ್ರಸಾರ್ಥದಿಂನೆರೆನಂಬಿಅರಸ ಪ್ರಸನ್ವೆಂಕಟ ಶ್ರೀಹರಿಯ ಪದವ 3
--------------
ಪ್ರಸನ್ನವೆಂಕಟದಾಸರು
ಭಜಿಸುವೆ ಗಜಮುಖ ಸುಜನರಪಾಲನಿಜಮತಿ ಕರುಣಿಸು ನೀ ಪತ್ರಿಜಗದಿ ವಂದಿತ ನಿಜಪದದಾತನಿಜಮತಿದಾಯಕ ದ್ವಿಜಸುರ ಸೇವಿತ ಅ.ಪವಿಘ್ನಮೂರುತಿ ಎನ್ವಿಘ್ನಗಳನು ಕಡಿದಜ್ಞಾನ ದೂರಮಾಡೋಸುಜ್ಞಾನ ಪಾಲಿಸಿ ಶೀಘ್ರದಿ ಎನ್ನನುಪ್ರಾಜÕರೊಳಾಡಿಸು ಪ್ರೌಢಗಣಪತೆ 1ಇಂದುಎನ್ನ ಮಂದಮತಿತನ ಛಿಂದಿಸೋಸುಂದರಮೂರುತಿಯೆವಂದಿಸಿ ಬೇಡುವೆ ಕುಂದದ ವರಕೊಡುಚಂದ್ರ ಚೂಡಸುತಭಾನುಕೋಟಿತೇಜ2ವಿಮಲಗುಣಗಣ ಹಿಮಗಿರಿಜೆಯ ಕಂದಸುಮನಸರೊಂದಿತನೆಅಮಿತಮಹಿಮ ಶ್ರೀರಾಮ ಕರುಣಾಪಾತ್ರವಿಮಲಮತಿಯ ದಯಪಾಲಿಸಭವ 3
--------------
ರಾಮದಾಸರು
ಭಂಡನಾದೆನು ನಾನು ಸಂಸಾರದಿ |ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ಪಕಂಡ ಕಲ್ಲುಗಳಿಂಗೆ ಕೈಮುಗಿದು ಸಾಕಾದೆ |ದಿಂಢೆಗಾರರ ಮನೆಗೆ ಬಲು ತಿರುಗಿದೆ ||ಶುಂಡಾಲನಂತೆನ್ನ ಮತಿ ಮಂದವಾಯಿತೈ |ಪುಂಡರೀಕಾಕ್ಷನೀ ಕರುಣಿಸೈ ಬೇಗ1ನಾನಾವ್ರತಂಗಳನು ನಾ ಮಾಡಿ ಬಳಲಿದೆನು |ಏನಾದರೂ ಎನಗೆ ಫಲವಿಲ್ಲವು ||ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ |ನೀನಾದರೂ ಕೃಪೆಯನಿಡು ಬೇಗ ಹರಿಯೇ 2ಬುದ್ಧಿಹೀನರ ಮಾತಕೇಳಿನಾ ಮರುಳಾದೆ |ಶುದ್ಧಿ ಇಲ್ಲದೆ ಮನವು ಕೆಟ್ಟು ಹೋಯ್ತು ||ಮಧ್ವನುತಸಿರಿಪುರಂದರವಿಠಲ ತತ್ವದ |ಸಿದ್ಧಿಯನು ದಯೆಗೆಯ್ದು ಉಳುಹು ನೀ ಎನ್ನ 3
--------------
ಪುರಂದರದಾಸರು
ಭಂಡು ಮಾಡದಿರು ಬೆಣ್ಣೆಗಳ್ಳ ಈಪುಂಡತನ ನಿನಗೆ ಸಲ್ಲಪರಹೆಂಡಿರೆಳೆಯದಿರೊ ಹೀಗೆಲ್ಲ ಅತ್ತೆಕಂಡರೆ ಕೊಲ್ವಳೊ ಗೋಪಿನಲ್ಲ ಪ.ನೀರೆಯರಾಟವೆ ನಿನಗಲ್ಲನಗಬಾರದು ಪರಾಂಗನೆರೊಳು ಚೆಲ್ವವಾರಿಜಾಕ್ಷಿಯರಪ್ಪಿ ಎತ್ತಿಹ್ಯಲ್ಲ ಕೂಗದಿರೊ ಬಾಗಿಲೊಳು ಮಾವಹೊಲ್ಲ1ಹೆಜ್ಜೆ ಹೆಜ್ಜೆಗ್ಹುಚ್ಚ ಮಾಡಿದೆಲ್ಲ ನಿನ್ನಕಜ್ಜದೊಳು ಕರುಣಿನಿತಿಲ್ಲ ಧರ್ಮರಾಜ್ಯದೊಳು ಚಾರವೃತ್ತಿಯಿಲ್ಲ ನಮ್ಮಲಜ್ಜೆ ಸೂರ್ಯಾಡಿದೆ ಅಂಜಿಕಿಲ್ಲ 2ಬುದ್ಧಿ ಸತ್ಯ ಮಾತು ಮಿಥ್ಯವಲ್ಲ ಪೂರ್ಣಶುದ್ಧ ನಂಬಿದೆವೊ ಮೃದುಸೊಲ್ಲ ಇನ್ನುಸದ್ದು ಮಾಡದೆ ಕೂಡೆ ಠಾವಿಲ್ಲ ನಮ್ಮಮುದ್ದಿಸೊ ಪ್ರಸನ್ವೆಂಕಟ ನಲ್ಲ 3
--------------
ಪ್ರಸನ್ನವೆಂಕಟದಾಸರು
ಭಯ ನಿವಾರಣವು ಶ್ರೀ ಹರಿಯ ನಾಮ |ಜಯಪಾಂಡುರಂಗವಿಠಲ ನಿನ್ನ ನಾಮ ಪಧಾರಿಣೀದೇವಿಗಾಧಾರವಾಗಿಹ ನಾಮ |ನಾರದರು ನಲಿನಲಿದು ನೆನೆವ ನಾಮ |ಘೋರಪಾತಕಿ ಅಜಾಮಿಳನ ಸಲಹಿದ ನಾಮ |ತಾರಕವು ಬ್ರಹ್ಮ - ಭವರಿಗೆ ನಿನ್ನ ನಾಮ 1ಮೊರೆಯಲಾಲಿಸಿ ಮುನ್ನ ಗಜವ ಸಲಹಿದ ನಾಮ |ಕರುಣದಿಂ ದ್ರೌಪದಿಯ ಕಾಯ್ದ ನಾಮ |ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ |ಪರತತ್ತ್ವ ಇಹಕಲ್ಲವೇ ನಿನ್ನ ನಾಮ 2ಚರಣದಲಹಲ್ಯೆಯನು ಸೆರೆಯ ಬಿಡಿಸಿದ ನಾಮ |ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ |ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ |ಸ್ಮರಿಸ ಜನರಿಗೆ ಸಮಸ್ತವನಿತ್ತ ನಾಮ 3ಚಂದ್ರಶೇಖರ ಗಿರಿಜೆಗೊರೆದ ಸಿರಿಹರಿನಾಮ ||ಬಂದಾ ವಿಭೀಷಣನ ಪಾಲಿಸಿದ ನಾಮ |ಕಂದಮುಚುಕುಂದನಿಗೆ ಕಾಮಿತವನಿತ್ತ ನಾಮ |(ಸಂದ ಪಾಂಡಪಕ್ಷ ಪಾವನವು ನಾಮ ) 4ಅಖಿಳವೇದಪುರಾಣ ಅರಸಿಕಾಣದ ನಾಮ |ಸಕಲಯೋಗಿ - ಜನಕೆ ಸೌಖ್ಯ ನಾಮ ||ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ |ರುಕುಮಿಣೀಯರಸ ವಿಠಲ ನಿನ್ನ ನಾಮ 5ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ |ಮುಕ್ತಿ ಮಾರ್ಗಕೆ ಯೋಗ್ಯಹರಿ ನಿನ್ನ ನಾಮ |ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ |ಚಿತ್ತಜನ ಪೆತ್ತ ಶ್ರೀ ಹರಿಯ ನಾಮ 6ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ - |ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ ||ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ |ನಾರಾಯಣಾ ಕೃಷ್ಣಹರಿ ನಿನ್ನ ನಾಮ7ಹೊಂದಿದ್ದ ಭಕ್ತವೃಂದವ ಸಲಹಿದಾ ನಾಮ |ತಂದು ಅಮೃತವ ಸುರರಿಗೆರೆದ ನಾಮ ||ಅಂದಂಬರೀಷನನು ಕಾಯ್ದ ಶ್ರೀ ಹರಿನಾಮ |ತಂದೆ ಪುರಂದರವಿಠಲಹರಿ ನಿನ್ನ ನಾಮ8
--------------
ಪುರಂದರದಾಸರು
ಭಳಿ ಭಳಿರೆ ಬಲಭೀಮ ಭಳಿರೆ ಸದ್ಗುಣಧಾಮಭಳಿರೆ ದ್ರೌಪದಿನಾಥ ಭಳಿರೆ ಶ್ರೀಹರಿದೂತಭಳಿರೆ ಅಪ್ರತಿಚರಿತ ಭಳಿರೆ ಬಲದೇವಸುತಭಳಿರೆ ಭೂಮಿಪಲಲಾಮ ಭೀಮ ಪ.ಯೋಚಿಸಿ ಖಳರು ನೆರೆದು ಭೂಚಕ್ರವಾಕ್ರಮಿಸೆಶ್ರೀ ಚಕ್ರಿ ದಯದಿ ಅಮೃತ ರೋಚಕುಲಜಾತ ಪಾಂಡು ಚಕ್ರವರ್ತಿ ಕಮಲಲೋಚನೆಯ ಪೃಥೋದರಾಬ್ಧಿ ಚಂದ್ರನಂತೆ ಜನಿಸಿಆ ಚಕ್ಷುವಿಹೀನ ಭವಾಬ್ಧಿಚೋರರೆದೆಶೂಲಗೋಚರಿಸುವಂತಿಳೆಗೆ ಸೂಚಿಸಿ ಮುಖೋದಯವಕೀಚಕ ಹಿಡಿಂಬ ಬಕ ನೀಚಮಾಗಧಮುಖರವಾಚಿಸಗುಡದೆ ಬಡಿದೆ ಭೀಮ 1ಕೊಬ್ಬಿದ ಖಳರು ಧಾತ್ರಿಗುಬ್ಬಸವ ತೋರುತಿರೆಅಬ್ಬರದಿ ಕರದ ಗದೆಗ್ಹಬ್ಬದೌತಣವಿಡುತಒಬ್ಬೊಬ್ಬರೊಮ್ಮೆ ಹನ್ನಿಬ್ಬರನ ಕರೆದುಉಬ್ಬುಬ್ಬಿ ರಣದಿ ಕುಣಿದೆಹಬ್ಬಿ ಬಹ ನಾಗರಥನಿಬ್ಬರದ ಬಿಂಕದವರೆಬ್ಬಿಸಿ ನಭಕೆ ಚಿಮ್ಮಿ ಬೊಬ್ಬಿರಿದು ಕೌರವರನಿಬ್ಬಗೆದು ಡಾಕಿನಿಯ ಉಬ್ಬಿಸಿದೆ ನಿನಗೆಪಡಿಹೆಬ್ಬುಲಿಗಳುಂಟೆ ಜಗದಿ ಭೀಮ 2ನಿರ್ಧರ ಪರಾಕ್ರಮ ಧನುರ್ಧರರ ಬೀಳ್ಗೆಡಹಿಸ್ವರ್ಧಾಮಗರು ತುತಿಸೆ ದುರ್ಧಾರ್ತರಾಷ್ಟ್ಟ್ರರಂದುರ್ಧಾಮಕೆಬ್ಬಟ್ಟಿದುರ್ಧರ್ಷಗುರುರಥವನೂಧ್ರ್ವಕ್ಕೊಗೆದುಲಿದು ಚೀರ್ದೆದುರ್ಧರ ಖಳಾನುಜನ ಮೂರ್ಧ ಕಾಲೊಳು ಮೆಟ್ಟಿಶಾರ್ದೂಲನಂದದಿ ಕೆಡದೊಡಲಿನಅರುಣಜಲಪೀರ್ದಂತೆ ತೋರ್ದೆ ಗೋವರ್ಧನಧರನನುಜÕವಾರ್ಧೀಸ್ಯರ್ಪಿಸಿದೆ ಮಝರೆ ಭೀಮ 3ಕಡಲೊಡೆಯನೆಡೆಗೆ ಬಲುಕೆಡುನುಡಿಯ ನುಡಿದವರಪಿಡಿ ಪಿಡಿದು ಖಡುಗದಿಂ ಕಡಿಕಡಿದು ಕಡೆಗಾಲದಮೃಡಕೋಟಿಯಂದದಲಿ ಕಡುರೋಷದಡಿಗಡಿಗೆಘುಡುಘುಡಿಸಿ ಹುಡುಕಿ ತುಡುಕಿಷಡಕ್ಷೋಹಿಣಿ ಪಡೆಯ ಹುಡಿ ಹುಡಿಗುಟ್ಟಿ ಪೊಡವಿ ದಿಗ್ಗಡಣ ಜಯದಂತಿ ಧಿಮ್ಮಿಡಿಸಿ ಕರ್ಮಡು ಪೊಕ್ಕುಕಡುಗಲಿಯ ತೊಡೆಮುರಿಯೆ ನಡುಮುರಿಯೆ ಗದೆಯಿಂದಹೊಡೆದೆಶಸುಪಡೆದೆ ಜಗದಿ ಭೀಮ 4ಅಪ್ಪಳಿಸಿ ಕುರುಪತಿಯ ಚಿಪ್ಪೊಡೆಯೆ ತಲೆದುಳಿದುಬಪ್ಪುವಾರುಷವೆಂಬ ಸುಪ್ತಸೂತ್ರದಿ ಅಜನಬೊಪ್ಪ ಕೃಷ್ಣನ ಕಟ್ಟುವ ಪರಾಕ್ರಮಿಗೆನುತಸುಪ್ರಾಯಶ್ಚಿತ್ತವೆನುತತಪ್ಪುಗಳನೊಂದೊಂದ ನೆಪ್ಪೆತ್ತಿ ತನ್ಮತಿಗೆಹೆಪ್ಪೆನುವ ವಾಗ್ಬಾಣ ಕುಪ್ಪಳಿಸಿ ಕೊಂದು ಶ್ರೇಯಃಪತಿ ಪ್ರಸನ್ವೆಂಕಟಾರ್ಪಣವ ಮಾಡಿ ವೈಷ್ಣವ ಪ್ರತತಿಯನು ಪೊರೆದೆ ಭೀಮ 5
--------------
ಪ್ರಸನ್ನವೆಂಕಟದಾಸರು
ಭಳಿ ಭಳಿರೆ ಭಳಿರೆ ಹನುಮಭಳಿ ಭಳಿರೆ ಋಜುನಿಕರ ಮಕುಟಮಣಿ ಪ.ಅಂಜನಿಜಠರಸಂಜನಿತಪ್ರಾಜÕಮೌಂಜಿಯುತಕೋದಂಡಧೃತಕರಕಂಜನೆದುರಲಿ ಪ್ರಾಂಜಲಿತ ಬಹುಭಕುತಿ ಅಭಿನಯಅಚ್ಛಿನ್ನ ಅಚ್ಚಿನೊಳು ಶುಭಚಿಹ್ನಪಾವನ್ನಗುಣರನ್ನ ಪರಿಪೂರ್ಣಅ.ಪ.ತಾಟಕಾಂತಕ ಭಟರೊಳು ನೀಮೀಟೆನಿಸಿ ಧೀಂಕಿಟ್ಟು ಶರಧಿಯದಾಂಟಿದವನಿಜೆ ತೋಷಕಾರಿ ಅಶೋಕವನಹಾರಿಕೋಟಿ ಕೋಟಿ ನಿಶಾಟ ಹೃದಯಸ್ಫೋಟಕಕ್ಷಯ ಪಾಟವಕರಿತ್ತಟಕೇಸರಿಕಟಿತಟದಿ ಕರವಿಟ್ಟ ಹನುಮದಿಟ್ಟ ವಿಕಟ ಖಳಕಳ ಪಟಾರ್ಭಟಪಟು ಹರಿದ್ವಿಟ್ಟದ್ವಿಟ್ಟು ಚಟುಲವಟು 1ವೀರ ಸಮೀರಕುಮಾರ ಪಾರಾವಾರ ಚರಿತ ಮಾರಜಿತಘನವಾರಿಜೋದ್ಭವಶರಕೆ ಮನ್ನಿಸಿದೇರಿದೌದಾರಿಈರೈದು ಮುಖದವನ ಪುರಪ್ರಸರಾಗಾರವನುರುಹಿ ರಘುಜನಚಾರುಚರಣವ ಕಂಡ ಪ್ಲವಗಪ್ರಚಂಡಶುಭತುಂಡಬಾಲದಂಡಅಗಣಿತಲೆಂಡರ ಖಂಡಪುಂಡರಗಂಡಗಂಡಭೈರುಂಡುದ್ದಂಡ2ಜೀವಜಾಲರ ಜೀವ ವಿಪ ಮಹಾದೇವ ಮುಖ್ಯರ ದೇವ ಚತುರ್ದಶಭುವನಾಶ್ರಿತ ಭೂತಭರ್ಗಸದಾವಿರತಿಭರಿತಾಆವಜನುಮಜ್ಜನುಮ ಎನಗೆನೀ ಒಡೆಯನಾಗ್ಯಾಳುತ ನನಗೀವುದೆಲೆಗುರುಪರಮಭಾಗವತಾರ್ಯ ಆಚರಿಯಹರಿಯ ಕಾರ್ಯಕಕ್ಕರದ ಹಿರಿಯಪರಮವೀರ್ಯಾಚ್ಚರಿಯ ಸಚ್ಚರಿಯ3ಹರಿಸೇವ್ಯಂಗೀಕರಿಸಿ ಒಡನವತರಿಸಿ ಆಜÕಂವೆರಸಿ ಅಟ್ಟಿದಹರಸಿ ಮದಮತ್ತರಿ ಸಮೂಹ ಭಯಹರಿಸ್ಯಭಯ ಧರಿಸಿಹರಿಶುಭಚರಣ ಸರಸಿಜದಿ ಶಿರವಿರಿಸಿ ಸುಗಿರೋಚ್ಚರಿಸಿ ಅಖಿಳೊಪ್ಪಿರಿಸಿ ವಿಷಯ ಸ್ಪರ್ಶವಿಲ್ಲದ ಅರಸ ನೀನೆ ಕಣಾ ಜಾಣರೊಳು ಜಾಣ ಪ್ರಾಣಮುಖ್ಯಪ್ರಾಣಕೇಣಿಗರಗಂಟಲಗಾಣ ಪ್ರವೀಣ ಹನುಮ4ವಾಸವಾರಿಯ ಘಾಸಿಗಂದು ಕಪೀಶರಳಿದಿರಲಾಸಮಯದೊಳೌಷಧವ ತಂದಾಸಮರ್ಥರ ಪೊರೆದ ಕಪಿವರದಶ್ರೀಶ ವರದ ಪ್ರಸನ್ನವೆಂಕಟಾಧೀಶ ಭೃತ್ಯೋಲ್ಲಾಸ ಅಜಪದಧೀಶ ಮೂರವತಾರಿ ಸುಖಕಾರಿ ಸದಾಶೂರಿ ಸಮೀರ ಕುಮಾರ ಭಾರತ ಧೀರಸಾರಯಂತ್ರೋದ್ಧಾರ ತತ್ವವಿಚಾರ5
--------------
ಪ್ರಸನ್ನವೆಂಕಟದಾಸರು
ಭಾಗೀರಥಿ ದೇವಿ ನಮೋ ||ಭಾಗೀರಥಿ ದೇವಿ ಭಯ ನಿವಾರಣ ಗಂಗೆ |ಸಾಗರನರ್ಧಂಗೆ ಸುತರಂಗೆ ಪವಾಮನ ವಾಮ ಪಾದಾಂಗುಷ್ಟನಖಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ..... ||ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ... 1ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ.... ||ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ..... 2ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ.... ||ಉನ್ನತಧೃವಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ..... 3ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ.... ||ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ..... 4ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ.... ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದಸ್ಮøತಿಮಾತ್ರದಿಂದಲೀ | ಭಾಗೀ...... 5ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರಧರ ಪದಿ ಶ್ರೀಗಂಗೆ | ಭಾಗೀ...... ||ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆಜಾಹ್ನವಿತ್ರಿದಶೇಶ್ವರಿ | ಭಾಗೀ.... 6ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ.... |ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ.... 7ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ..... ||ಶಮದಮಾದಿಗಳಿತ್ತುಪೊರೆಅನುದಿನದಲ್ಲಿ |ಅಮರವಿನುತಪಾದಪಂಕಜೆ | ಭಾಗೀ.....8ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ...... ||ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ..... 9
--------------
ಪ್ರಾಣೇಶದಾಸರು