ಒಟ್ಟು 11400 ಕಡೆಗಳಲ್ಲಿ , 137 ದಾಸರು , 6177 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಕ್ಕಿದೆಯೋ ಎಲೆ ಜೀವ-ನಿನ್ನ-ಕುಕ್ಕಿ ಕೊಲ್ಲದೆ ಬಿಡರು ಪಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
--------------
ಪುರಂದರದಾಸರು
ಸಿಂಧುಶಯನನೆ ಬಾರೊ ಇಂದಿರಾರಾಧ್ಯನೆ ಬಾರೊಮಂದಿರಜನಯ್ಯನೆ ಬಾರೊ ಇಂದೆನ್ನ ಮನಮನೆಗೆ ಪ.ಬಾರೊ ಭಕ್ತರ ಪಾಲಕ ವೆಂಕಟರನ್ನ ಬಾರೊ ಅ.ಪ.ರಾತ್ರಿನಾಮನರಿಯೆ ಬಾ ಗೋತ್ರಧರ ಬಾರೊಹೇಮನೇತ್ರನ ಸದೆದು ಧರಿತ್ರಿ ತಂದೆ ಪೋತ್ರಿರೂಪಬಾರೊ1ಹರಿಮೊಗದವ ಬಾರೊ ಹರಿಯನುಜನೆ ಬಾರೊಕರಜರ ಸವರಿದ ಹರಿಕುಲೋತ್ತಮರನ್ನ ಬಾರೊ 2ಚೆನ್ನನಾಗಿ ಮೆರೆದೆ ಬಾ ಚೆನ್ನೆವಾಸ ಜರಿದೆ ಬಾಉನ್ನತ ಹಯವೇರಿ ಪ್ರಸನ್ನವೆಂಕಟಾದ್ರಿವಾಸ ಬಾರೊ 3
--------------
ಪ್ರಸನ್ನವೆಂಕಟದಾಸರು
ಸಿರಿಅರಸಂಗೆ ನಮೋಗುರುಮಧ್ವವರಿಯ ವರಸ್ತುತಿ ಪ್ರಿಯ ಪ.ನಿಗಮಾಗಮಾಗಣಿತ ಸುವಿದಿತ ಸುಗುಣ ವಿಹಗಗಮನಘರಿಪು ಉರಗಶಯನ 1ಅಜನುತ ರಾಜರವಿ ವಿಜಿತ ಪ್ರತೇಜಕುಜರಜನೀಚರಹನನಮೂಜಗಜೀವನ2ತನ್ನ ವಂದಿಪರನ್ನು ಹೊರೆವನ್ಯಭಯವನ್ನೋಡಿಪಎನ್ನಯ್ಯ ಪ್ರಸನ್ನವೆಂಕಟನಾಥ ದಾತಾರ 3
--------------
ಪ್ರಸನ್ನವೆಂಕಟದಾಸರು
ಸಿರಿಪತಿ ಧರಾಪತಿ ದುರ್ಗಾಪತಿ ಫಣಿಗಿರೀಶ ಪ.ಅರಿದರಧರಕರ ವರಾಭಯಕರ ಶಿರಾಭರಣಸಿರಿವತ್ಸ ಕೇಯೂರ ಕೌಸ್ತುಭೋರು ಹರೆ ಹರೆ ನಮೋ1ಖಗಾಸನ ಪನ್ನಗಾಸನ ದಿಗೇಶನುತಗಣಿತದ್ಯುಗಸನ್ನಿಭ ಸುಗಾತ್ರ ಸಾಮಗ ಘೋಷಿತಪಾಹಿಪಾಹಿ2ಪರಾತ್ಪರಪಾರಾವಾರವರಹೇಮಾಂಬರಚಾರುಚಿರ ಪ್ರಸನ್ನವೆಂಕಟರಮಣ ಕರುಣಾಳುತ್ರಾಹಿತ್ರಾಹಿ3
--------------
ಪ್ರಸನ್ನವೆಂಕಟದಾಸರು
ಸಿರಿಸೊಕ್ಕಿ ಮರೆಯದೆ ಮುರವೈರಿಯಮರೆಹೋಗು ಮೊರೆಯಿಡು ಮರೆಯದೆ ಮನವೆ ಪ.ಶರೀರವು ಸೆರೆಮನೆ ಸರಿಕಾಣ ಜೀವಕ್ಕೆಸಿರಿಪಂಚಶರನವಸರಕೆ ಮೆಚ್ಚಿಸಿರಿಪತಿ ಶರಣಾನುಸರಣೆ ಭಕುತಿಜ್ಞಾನಸರಕಿಲ್ಲ ಸರಿಯಿತಾಯುಷ್ಯಿರವು ವ್ಯರ್ಥಾಯಿತು 1ಸತಿಸ್ನೇಹ ಸುತಮೋಹಾಶ್ರಿತ ಜನರನು ಬೇಡಿಸ್ಯಾತನೆಯ ಸುತ್ತಿಕೊಂಡು ಶಿಥಿಲಿಪಾಗಸತಿಇಲ್ಲ ಸುತರಿಲ್ಲಾಶ್ರಿತ ಸಹಾಯವಿಲ್ಲವೈವಸ್ವತ ಭೃತ್ಯಶತಕೆ ಈಷತ್ತೂ ಕೃಪೆಯಿಲ್ಲ 2ಪುಸಿನುಡಿ ಪಿಸುಣರ ಪೆಸರಿಸದಲೆನಿತ್ಯಪ್ರಸಾದರ ಪ್ರಸಾದವ ಪ್ರಸನ್ನೀಕರಿಸೆಪೊಸತಾಪೋಪಶಮನ ಪ್ರಸನ್ನವೆಂಕಟಪತಿಯಪ್ರಸಿದ್ಧರ ಪ್ರಸರದ ಪ್ರಸಂಗದೆ ಮುಕುತಿ 3
--------------
ಪ್ರಸನ್ನವೆಂಕಟದಾಸರು
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿಬಿಸಜದ್ವಯವ | ನೇ ಭಜಿಸಲು ಜ್ಞಾನ- ||ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ 1ಮಾಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀಕಕುಲಾತಿಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕುದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ 2ದಾತಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆಭಾಸ್ಕರಕಾಂತೆ ||ಭೂತಳದೊಳಗೆ ಅ | ನಾಥರಿಗೆವರಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತಪೂಜಿತೆ ರಮೆ | ಪಾತು ಪ್ರತಿಕ್ಷಣದಿ 3
--------------
ಪ್ರಾಣೇಶದಾಸರು
ಸುಕಾಲಕೆ ಧರ್ಮವ ಮಾಡುವುದೆ ಲೇಸುದುಷ್ಕಾಲಕೆ ಮಾಡಗೊಡದಲ್ಪಾಯು ಪ.ಯೌವನವೆಂಬ ಸುಕಾಲಕೆ ಸುರಮುನಿಸೇವ್ಯನ ಭಾಗವತರ ಮೆಚ್ಚಿಪದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕುಹವ್ಯಾಸ ನಡೆಯದು ಮುಪ್ಪು ದುಷ್ಕಾಲ 1ಧನದಾಗಮದ ಸುಕಾಲಕೆಸತ್ಪಾತ್ರರನು ಕರೆದರ್ಚಿಸಿ ಉಣಿಸಿ ಕೃಷ್ಣಾರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕುತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ 2ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮಸಾರ್ಥಕ ಮಾಡಿ ಸಂತೋಷದಲ್ಲಿರಬೇಕುತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ 3ಸಂಸಾರಾವಸ್ಥೆಯವರಿಗೀ ಸುಕಾಲಕೆಹಂಸವಾಹನಪಿತನಂಘ್ರಿ ಪದುಮಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿಸಂಶಯ ಭಕ್ತಿಯವನಿಗೆ ದುಷ್ಕಾಲ 4ಮುಕ್ತಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿರಕ್ತಿಯೆ ಭಾಗ್ಯವಿಜಯಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾಸಕ್ತಿಲ್ಲದವಗಾವಕಾಲ ದುಷ್ಕಾಲ 5
--------------
ಪ್ರಸನ್ನವೆಂಕಟದಾಸರು
ಸುಪುತ್ರನು ಎಂಬುವನಿವನುಸುಪುತ್ರನನು ಹೇಳುವೆ ನಾನುಪತಂದೆ ತಾಯಿಗಳ ಪೂಜಿಸುವಬಂಧುಗಳಿಗೆ ಬಹು ಪ್ರಿಯನಾಗಿ ಇರುವಎಂದಿಗೂ ಕೆಟ್ಟದ್ದ ನುಡಿಯ ಆವ-ಬಂದವರಿಗೆಲ್ಲ ಅನ್ನವ ಕೊಡುವ1ಕುಲದ ಆಚಾರವ ತಪ್ಪಿಸನುಹಲವು ವ್ರತಗಳನವ ತಾ ಬಿಡನುಬಲು ತಿಳುವಳಿಕೆಯನು ತಿಳಿದಿಹನುನೆಲೆಯಿಲ್ಲದ ತಪಮಾಡುವನು2ಅಣ್ಣ ಅತ್ತಿಗೆಗೆ ಉತ್ತರಕೊಡನುಪುಣ್ಯ ಕಥೆಯನು ಕೇಳ್ವುದ ಬಿಡನುತನ್ನ ದೇಹವ ಪೋಷಣೆ ಮಾಡನುಭಿನ್ನ ಬುದ್ಧಿಯನೆಂದಿಗು ತೋರನು3ತತ್ವ ವಿಚಾರವೆಂಬುದೆ ಜೀವನಿತ್ಯಅನಿತ್ಯವ ತಿಳಿದು ಅವನೀವಸತ್ಪುರುಷರೊಳು ಒಡನಾಡುವಎಲ್ಲಮಿಥ್ಯೆಎಂದರಿವ4ಸಂಶಯ ಸಂಕಲ್ಪನೀಗಿಧ್ವಂಸ ಮಾಡಿ ವಾಸನೆಯೆಲ್ಲವಶಿಂಶುಮಾರದ ಚಕ್ರಕೆ ಹೋಗಿಹಂಸ ಚಿದಾನಂದ ಗುರುವಾಗಿ5
--------------
ಚಿದಾನಂದ ಅವಧೂತರು
ಸುಬ್ಬರಾಯ ಸುಜನಪ್ರಿಯ ಕರ್ಬುರಾಂತಕನಿರ್ಭಯವನು ಪಾಲಿಸಯ್ಯ ನಿರ್ಗತಮಾಯ ಪ.ಗೌರೀಕುಮಾರ ಪಾರಾವಾರಗಭೀರಮಾರನವತಾರ ತಾರಕಾರಿ ಶ್ರೀಕರ 1ಪಂಕಜಾಕ್ಷ ಪಾಹಿಮಾಂ ಶ್ರೀಶಂಕರಾತ್ಮಜಕುಂಕುಮಾರುಣವರ್ಣ ಪೂರ್ಣಾಲಂಕೃತವಿರಜ2ಪೃಥ್ವಿಗುತ್ತಮ ಪಾವಂಜಾಖ್ಯ ಕ್ಷೇತ್ರಮಂದಿರಕರ್ತಲಕ್ಷ್ಮೀನಾರಾಯಣಭೃತ್ಯ ಸುಂದರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸುಬ್ರಹ್ಮಣ್ಯ163ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ಪ.ದೇಹಿ ದೇಹಿ ತವ ಸ್ನೇಹ ಸುಖ ವಚಂಬ್ರೂಹಿ ಸುವಚನಂ ಗಹನ ಜ್ಞಾನಂ 1ಅಭ್ರೋಡುಪ ನಿಭ ಶುಭ್ರಶರೀರಾದಭ್ರ ದಯಾನಿಧೆ ವಿಭ್ರಾಜಿತಶಂ 2ವಾಸವಸೇನಾಧೀಶ ಖಳಾನ್ವಯನಾಶ ಸ್ವಜನ ಪರಿಪೋಷ ಸುತೋಷಂ 3ಭೂರಿಫಲದ ಭಯದೂರ ಕುಮಾರ ಕುಮಾರಸುಧಾರಾತೀರಗ ಸುಮತಿಂ4ಪನ್ನಗನೃಪಸುಪನ್ನಗನಗಪ ಪ್ರಸನ್ನವೆಂಕಟಪತಿ ಚಿನ್ಮಯ ಭಕ್ತಿಂ 5
--------------
ಪ್ರಸನ್ನವೆಂಕಟದಾಸರು
ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪಐದು ಮುಖ ಐದು ಈರೈದು ಕಣ್ಣುಗಳಿಂದ |ಐದು ಪಣೆಯೊಳಗಗ್ನಿ ಕಿಡಿಯುದುರುತ ||ಐದೆರಡು ತೋಳು ಭುಜಗಳ ಒಲೆದಾಡಿಸುತ |ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ 1ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |ಮೇಲೆ ಒರಲುವ ಭೂತಗಣ ಸಹಿತದಿ ||ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ 2ಲಂಡದಾನವರ ಶಿರಗಳ ತರೆದು ಬಿರುದಿನ |ರುಂಡಮಾಲೆಯ ಧರಿಸಿ ಆರ್ಭಟಿಸುತ ||ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |ಪುಂಡರೀಕಾಕ್ಷನ ತೋರು ತೋರೆನುತ 3ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |ಕರಿಜಡೆಗಳನೆಲ್ಲ ಕೆದರಿಕೊಳುತ ||ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|ಭರಣಸಹಿತಾಗಿ ಬಾಗಿಲಿಗೆ ಬಂದಿದೆಕೊ4ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |ಮದನಾರಿಯೆಂಬಂಥ ಬಲಭೂತವು ||ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |ಒದಗಿ ಬಂದಿಹನಿದೊ ಪುರಂದರವಿಠಲ 5
--------------
ಪುರಂದರದಾಸರು
ಸುಮ್ಮನೆ ಕಾಲವ ಕಳೆವರೆ - ಯಮ - |ಧರ್ಮರಾಯನ ದೂತರೆಳೆಯರೆ ಪ.ನರಿ - ನಾಯಿ ಜನುಮವು ಬಾರದೆ - ಹಾಗೆ - |ನರಜನ್ಮದಲಿ ಬಂದು ಸೇರದೆ ||ಹರಿಯ ಸ್ಮರಣೆ ಮಾಡಲಾರದೆ - ಸುಮ್ಮ |ನಿರಲು ಪಾಪದ ವಿಷವೇರದೆ 1ಬಾಲನಾಗಿದ್ದಾಗ ಬಹುಲೀಲೆ - ಮುಂದೆ |ಲೋಲನಾಗಿ ಬಾಳಿದ ಮೇಲೆ ||ಮೂಳ ವೃದ್ಧಾಪ್ಯ ಬಂತಾಮೇಲೆ - ಇನ್ನು - |ಬಾಳುವುದೆಲ್ಲ ನೂಲಮಾಲೆ 2ಮಡದಿ - ಮಕ್ಕಳ ಕೂಡಣ ಬಾಳು - ತನ್ನ |ಒಡಲಿಗಾಗೆ ತಾನು ಕರವಾಳು ||ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕ - |ನುಡಿದ ನುಡಿಗಳೆಲ್ಲವು ಬೀಳು 3ಮನೆಮನೆ ವಾರ್ತೆಯು ಸ್ಥಿರವಲ್ಲ - ಈ |ಮನುಜರ ಮಾತೇನು ಘನವಲ್ಲ ||ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ |ಹನುಮಂತ ಪಟ್ಟಕೆ ಬಹನಲ್ಲ 4ಇಂದಿನಹಮ್ಮು ನಾಳೆಗೆ ಇಲ್ಲ -ಭವ |ಬಂಧನದೊಳು ಸಿಕ್ಕಿ ನರಳಿದೆನಲ್ಲ ||ಮುಂದನರಿತು ನಡೆದುದಿಲ್ಲ - ಮೃತ್ಯು |ಬಂದಾಗ ಬಿಡಿಸಿಕೊಳ್ಳುವರಿಲ್ಲ 5ಮರಣವುಆವಾಗ ಬರುವುದೋ - ತನ್ನ |ಶರೀರವುಆವಾಗ ಮುರಿವುದೊ ||ಕರಣಂಗಳೆಲ್ಲವು ಜರಿವುದೊ - ತನ್ನ |ಗರುವದುಬ್ಬಸವೆಲ್ಲ ಮುರಿವುದೊ 6ಮರಣಕಾಲಕೆ ಅಜಮಿಳನಾಗ - ತನ್ನ |ತರಳನನಾರಗನೆಂದು ಕರೆದಾಗ ||ಕರುಣದಿ ವೈಕುಂಠ ಪದವೀಗ -ನಿತ್ಯ - |ಪುರಂದರವಿಠಲನ ನೆನೆ ಬೇಗ 7
--------------
ಪುರಂದರದಾಸರು
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ಶಿವನಿಂದ್ಯ ಗೈವಿರಿಪಬ್ರಹ್ಮ ಸುಜ್ಞಾನದಿ ಹರಿಹರರಾರೆಂಬಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾಅ.ಪಗರುಡವಾಹನನು ಶ್ರೀವರನು ನೋಡಿಉರಗಭೂಷಣನು ಗೌರೀಶ್ವರಗೂಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ1ಸ್ಮರನ ತಾತನು ನಾರಾಯಣನುಕೇಳಿಸ್ಮರನ ವೈರಿಯು ತ್ರಿಗಣೇಶ್ವರನುಹರಿನಿಂದನೆ ಶಿವ ಶಿರದಿ ತಾನ್ ಧರಿಸಿದಹರನ ಲಿಂಗವನಿತ್ಯಪೂಜಿಸಿ ನಮಿಸುವಾ2ಕ್ಷೀರಾಬ್ಧಿ ವಿಷ್ಣುಗೆಸತಿಗೃಹವೊ ಶಿವನನಾರೀ ಮಂದಿರ ಹಿಮಾಲಯವೂನಾರೀ ರಮೆಯ ಹೃದಯದಿ ಧರಿಸಿದವಿಷ್ಣುಮಾರನಂತಕ ಉಮೆಗಿತ್ತನರ್ಧಾಂಗವ3ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣಗೊಲಿದು ದ್ವಾರದಿ ನಿಂತ ಹರನೂಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣುಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ4ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾನಿರ್ವಾಣಿಬೌದ್ಧನುಶರ್ವದಿಗಂಬರಹರಿಯು ಜಾರನು ಜಗಪೀಠ ಶಂಕರಗೆಂದು5ರುದ್ರಾಕ್ಷಿ ಭಸ್ಮಲೇಪನವು ಶಿವಗೆಮುದ್ರೆಯು ತುಳಸಿಮಣಿ ಸರವುಊಧ್ರ್ವ ಪೌಂಡ್ರಕಗೋಪಿಕೃಷ್ಣಾಜಿನಾಸನರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು6ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯಮೂರ್ತಿಯೊಳ್ ಸಮದೆ ಯೋಚಿಸದೇವ್ಯರ್ಥ ಕೆಡುವಿರಿ ಗೋವಿಂದನ ದಾಸರುಸ್ವಾರ್ಥವಾಗದು ಕಾರ್ಯ ಹರನ ಭಕ್ತರುಕೇಳಿ7
--------------
ಗೋವಿಂದದಾಸ
ಸುಮ್ಮನೆ ವೈಷ್ಣವನೆಂದಿರಿ -ಪರ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬ್ರಹ್ಮ ಸುಜ್ಞಾನವನರಿಯದ ಮನುಜನ ಪ.ಮುಖವ ತೊಳೆದು ನಾಮವಿಟ್ಟವನಲ್ಲದೆ |ಮಿಕ್ಕ ಶಾಸ್ತ್ರಂಗಳ ನೋಡಿದನೆ ? ||ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ |ಭಕುತಿಯ ರಸದೊಳು ಮುಳುಗಿದನೇನಯ್ಯ 1ಊರ ಮಾತುಗಳೆಲ್ಲನಾಡಿದನಲ್ಲದೆ |ನಾರಾಯಣ ಕೃಷ್ಣ ಶರಣೆಂದನೆ ? |ನಾರಿಯರಿಗೆ ಮೆಚ್ಚಿ ಮರುಳಾದನಲ್ಲದೆ |ಗುರುಹಿರಿಯರಿಗೆಲ್ಲ ಎರಗಿದನೇನಯ್ಯ 2ಗಂಗೆಯಲಿ ಮಣ್ಣು ತೊಳವವನಲ್ಲದೆ |ಹಿಂಗದೆ ಸ್ನಾನವ ಮಾಡಿದನೆ ? |ರಂಗ ಶ್ರೀ ಪುರಂದರವಿಠಲನ ದಾಸರ |ಸಂಗಡ ಕೂಡಾಡಿ ತಿರುಗಿದನೇನಯ್ಯ 3
--------------
ಪುರಂದರದಾಸರು
ಸುರತಸುಖಕೆ ಅಂಗನೆಯರ ಮೇಳದಲಿಇಹಗೆ ಆಧ್ಯಾತ್ಮದಗೊಡವೆಏತಕೆಪಭಂಗಿ ಮಧ್ಯದಿ ಕೂಡಿ ಇಹಗೆ ಭಜನೆ ಸಾಧನೆಗಳೇತಕೆರಂಗುರಾಗದಿ ಮುಳುಗುವವನಿಗೆ ರೇಚಕ ವಿದ್ಯೆಯಾತಕೆಶೃಂಗಾರದ ಪದವಿಡಿದ ಮನುಜಗೆ ಸುಷುಮ್ನದ ಮಾರ್ಗವಿದೇತಕೆ1ನಲ್ಲೆಯರ ನುಡಿಯಿಂದ ಕೇಳುವಗೆ ನಾದಧ್ವನಿ ತಂಪೇತಕೆಚೆಲ್ಲೆಗಣ್ಣರ ಕುಚದಲೊರಗುವಗೆ ಚಿತ್ಕಳ ವಿಷಯವೇತಕೆಜೊಲ್ಲು ಕುಡಿಯುತಲಿಹ ಜಡನಿಗೆ ಜ್ವಲಿಸುತಿಹ ಅಮೃತವದೇತಕೆಹಲ್ಲು ತೆರೆವಹೊತ್ತಿಲಿರುವನಿಗೆ ಹಂಸದ ಕೂಟವದೇತಕೆ2ಭಾಮಿನಿಯರ ಸಭೆಯಲಿದ್ದವನಿಗೆ ಭ್ರೂಮಧ್ಯದ ಸದರೇತಕೆವಾಮಲೋಚನೆಯ ಅಂಗಸಂಗಗೆ ಹೃನ್ಮನ ಚಿಂತನವೇತಕೆಕಾಮಿನಿಯ ಕಣ್ಬಲೆಗೆ ಬಿದ್ದವಗೆ ಕಡೆಹಾಯುವ ಚಿಂತನೆಯೇತಕೆಸ್ವಾಮಿ ಚಿದಾನಂದ ಗುರುವಿನ ಸ್ಮರಣೆಯದು ಅವಗೇತಕೆ3
--------------
ಚಿದಾನಂದ ಅವಧೂತರು