ಒಟ್ಟು 32858 ಕಡೆಗಳಲ್ಲಿ , 139 ದಾಸರು , 10357 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಧವ ಸ್ವಾಮಿ ಪ. ಬಿಕ್ಕಿ ಬಿಕ್ಕಿಯಳುತ ಬಂದ ಗೋಪಿಯ ಕಂದಉಕ್ಕಿಹರಿವ ಕಣ್ಣನೀರ ತೊಡೆದಳೆಶೋದೆಅಕ್ಕರದಿಂದಲಿ ಮಗನ ಅತಿಮುದ್ದನಾಡಿಮಕ್ಕಳ ಮಾಣಿಕ್ಯವೆ ನೀ ಮನೆಯೊಳಗಾಡೈ 1 ಹಳ್ಳಿಯ ಮಕ್ಕಳು ಎನ್ನ ಬೈದರಮ್ಮಕಳ್ಳನೆಂದು ಎನ್ನಕೂಡೆ ಆಡಲೊಲ್ಲರುಮೆಲ್ಲನೆ ಬೈಯುತ್ತ ಬರಲು ಕಲ್ಲಲಿಟ್ಟರಮಯ್ಯಅಲ್ಲಿಂದಂಜಿ ಅಳುತ ನಾನು ಓಡುತ ಬಂದೆ 2 ಬಾಗಿಲ ಗೊಲ್ಲರು ಗೋಪಗೋಪಿಯರೆಲ್ಲಹಗಲುಗಳ್ಳ ಹಾಲು ಬೆಣ್ಣೆ ಚೋರನೆಂದರುಮಗುವೆಂದೆನಿಸಿಕೊಂಡು ಮನೆಯೊಳಗಾಡೈಹೋಗುನ್ನಂತ ಉಡುಪಿಯಲ್ಲಿ ಮುದ್ದು ಹಯವದನರಾಯ 3
--------------
ವಾದಿರಾಜ
ಮಾಧವ ಅಂಗಜನಯ್ಯ ಪಾಂಡುರಂಗ ವಿಠಲನಿಗೆ ಪ. ಪುಂಡರೀಕವರಗೆ ಪೂರ್ಣಾತ್ಪೂರ್ಣಗೆ ಪಂಡರಿಪುರವರ ಪುಂಡರೀಕಾಕ್ಷಗೆ 1 ನಾಮದೇವಾದಿ ಸಂತಸ್ತೋಮ ಪರಿಣಾಮ ಶ್ರೀ- ರಾಮದಾಸನ ಪ್ರಿಯ ಶ್ರೀರಾಮಗೆ 2 ಏಕನಾಥನಾಲಯ ಚಾಕರನಾದವಗೆ ಗೋಕುಲಪಾಲಗೆ ಗೋಮಿನಿಲೋಲಗೆ 3 ಮಂದರಧಾರಗೆ ಮಥುರಾನಾಥಗೆ ಕಂದರ್ಪ ಶತಕೋಟಿ ಸುಂದರರೂಪಗೆ 4 ರುಕುಮಿಣಿಕಾಂತಗೆ ರುಜುಗಣಾಧೀಶಗೆ ಭಕ್ತವತ್ಸಲನಿಗೆ ಲಕ್ಷುಮಿನಾರಾಯಣಗೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಧವ ಕಮಲ ಪಾ ದವ ತೋರಿಪಾಲಿಸೋ ಬಾಲಗೋಪಾಲ ಪ ದಿವಿಜೇಶ ವನಜಸಂಭವ ನಿತ್ಯನೇಮ ರಾ ಧೆವಲ್ಲಭ ಸಂಗೀತ ಲೋಲಾ ಅ.ಪ ನೆಂಬುದು ನಿಜವೆಂಬುದ ತೋರೋ ಅಂಬುದ ಶ್ಯಾಮರೋಲಂಬನಂದದೆ ಪಾ ದಾಂಬುಜಯುಗಳವ ನಂಬಿದೆನಯ್ಯ 1 ತಂದೆ ಕರೆಯಲೈತಂದೆ ಕರಿಯು ಕೂಗೆ ಒಂದು ನಿಮಿಷಾರ್ಧದಿ ಬಂದೆ ಕೃಪಾಳು ಇಂದಿರೆಯರಸ ಗೋವಿಂದ ಮಾಂಗಿರಿರಂಗ ಮಂದರಧರ ಬಾರೆಂದು ಬೇಡುವೆನಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಧವ ಗೀತೆ ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ ಮಾಧವ 1 ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು ವರರ ವಚನ ಮಣಿಗಳನ್ನು ಮನದೊಳಾರಿಸಿ ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ ಮಾಧವ 2 ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ- ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು ಮನೆಯ ದಾಸಿ ಸುರನಿ ಮಾಧವ 3 ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ ಭೋಕ್ತ ಮಾಧವ 4 ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು ನೀನೆ ಧೃತಿಯು ನೀನೆ ಸ್ಮøತಿಯು ನೀನೆ ಮತಿಯು ಮಾಧವ 5 ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ ಮಾಧವ 6 ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು ಏನ ಬಲ್ಲೆನೈಯ ನಾನು ಜ್ಞಾನಪೂರ್ಣನೈಯ ನೀನು ಮಾಧವ 7 ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ ಮಾಧವ 8 ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ ನೀನೆ ಕೃಪೆಯಿನೊಲಿಯದಿರಲು ಜ್ಞಾನ ಬಾರದು ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ ಮಾಧವ 9 ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು ನಿತ್ಯ ನಿನ್ನ ಭಜಿಸುತಿಪ್ಪ ಮಾಧವ 10 ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು ಮಾಧವ 11 ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ ಮಾಧವ 12 ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ ಮಾಧವ 13 ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ ಮಾಧವ 14 ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ ಮಾಧವ 15 ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು ತರಣಿ ಮುಣಗ ದುಡಿದು ಬಡಿದು ಮಾಧವ 16 ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ ನರಕ ಭಾಗಿ ಪಾಮರಂಗೆ ನಿನ್ನ ನಾಮವು ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ ಮಾಧವ 17 ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು ಬಾರದವರಿಗೆಂದು ಕರುಣ ಘೋರತನದ ದನುಜರವರು ಶೌರಿ ಮಾಧವ 18 ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು ದಾಳಿ ಮಾಳ್ಪ ವಿಷಯಗಳನು ಹೂಳಿ ಜ್ಞಾನ ಭಕ್ತಿಯನ್ನು ಮಾಧವ 19 ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ ಮಾಧವ 20 ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ ಮಾಧವ 21 ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು ಮಾಧವ 22 ಉಂಡ ಮನೆಗೆ ಬಗೆವರೆರಡನವರು ಭಂಡರು ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ ಮಾಧವ 23 ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ ಮಾಧವ 24 ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು ನೋಡರೊಮ್ಮೆಗಾದರವರು ಬಡವರೆಂಬುದ ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು ಮಾಧವ 25 ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ ಮಾಧವ 26 ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು ಕಾಮಲೋಭ ಮೋಹಗಳನು ಬಿಡಲು ಬಾರದು ನಿತ್ಯ ಪರರ ಮಾಧವ 27 ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ ಮಾಧವ 28 ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು- ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು ದುರುಳ ವಿಷಯಗಳಿಗೆ ಮನವ ಮಾಧವ 29 ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ ಮಾಧವ 30 ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ ಮಾಧವ 31 ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ ಮುಂದ ನೊಂದನರಿಯೆ ಮಾಧವ 32 ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ
--------------
ಲಕ್ಷ್ಮೀನಾರಯಣರಾಯರು
ಮಾಧವ ಗುರುವರ ಬೋಧಿಸು ಸುಖಸಾರ ಪಾದವ ಸ್ತುತಿಪೆನು ದಯವಾಗೊ ಸುಖಕರ ಪ ನಶಿಸಿಪೋಗುವ ಈ ವಿಷಮಸಂಸಾರದ ವಿಷಯದಾಸ್ಹರಿಸೆನಗೆ ಅಸಮಸುಖದ ಮಾರ್ಗ 1 ಅನುದಿನ ತ್ರಿಮಲಮೋಹಂಗಳ ಕ್ರಮದಿ ಖಂಡ್ರಿಸಿ ಮಹ ವಿಮಲಪದವಿ ಮಾರ್ಗ 2 ಮರವೆ ಮಾಯವ ತರಿದು ಅರಿವಿನಾಲಯದಿರಿಸಿ ಪರಮ ಶ್ರೀರಾಮನ ಚರಣಕಮಲಭಕ್ತಿ 3
--------------
ರಾಮದಾಸರು
ಮಾಧವ ಜಯ ಜಯ ರಾಘವ ರಾಮ ಖರಾರೇ ಪ ಜಯತು ಸೀತಾಧವ ಪಾವನ ಶೌರೇ ಅ.ಪ ಜಯತು ಪೀತಾಂಬರಧರ ಶಕಟಾರಿ ಜಯ ಕನಕಾಂಬರಧರ ವಿಕಟಾರಿ ಜಯ ಜಯ ಮುರಳೀಧರ ಕಂಸಾರಿ ಜಯ ಜಯ ಶರಧರ ದಶಶಿರವೈರಿ 1 ಜಯತು ಗೋಪೀಜನಪ್ರಿಯ ಗೋಪಾಲ ಜಯತು ತಪೋಬಲ ಮುನಿಜನಪಾಲ ಜಯತು ಜಯತು ಕೌಸ್ತುಭಮಣಿಮಾಲ ಜಯ ಜಯತು ಭೂಪಾಲ ಸುಶೀಲಾ 2 ಸನ್ನುತ ನಾಮ ಜಯ ಜಯಾನತ ಮುನಿಜನ ಪ್ರೇಮಾ ಜಯತು ಜಯತು ರಾಮ ಮಾಂಗಿರಿಧಾಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಧವ ನಮ್ಮ ಶ್ರೀಧವ ಬಾಧೆಪಡಿಸದೆ ತನ್ನ ಪಾದದಾಸರ ಕಾಯ್ವ ಪ ನಿರುತ ನೀರೊಳು ನಿಂದ ಈತ ಚಾರು ನಿಗಮಗಳ ತಂದ ಬಲು ಭಾರ ಪೊತ್ತನು ಬೆನ್ನಲಿಂದ ಆಹ ಕೋರೆದಾಡೆಯಲಿಂದ ಘೋರದೈತ್ಯನ ಸಂ ಹಾರವ ಮಾಡಿ ಭೂಭಾರವನಿಳುಹಿದ 1 ಅರಮನೆಕಂಬದಲಿಂದ ಕಡು ಘೋರ ರೂಪವ ತಾಳಿ ಬಂದ ಮಹ ದುರುಳನುದರ ಬಗಿದುಕೊಂದ ಆಹ ಧರೆಯನೀರಡಿ ಮಾಡಿವ ದನುಜನ ತುಳಿದು ಚರಣದಾಸರ ಮನದೊರವಿತ್ತು ಸಲಹಿದ 2 ವೀರತನದಿ ಕೊಡಲಿಪಿಡಿದ ಧರೆಯ ಸಾರಕ್ಷತ್ರಿಯಮೂಲವಳಿದ ದೇವ ಧಾರುಣಿಯೊಳು ನರನಾದ ಅಹ ತೋರಿ ವಿಪಿನವಾಸ ಮೀರಿದಸುರನ ಕೊಂದು ಮೂರುಲೋಕದ ಕಷ್ಟ ದೂರಮಾಡಿದ ಶೂರ 3 ಗೊಲ್ಲಕುಲದಿ ಜನಿಸಿದ ಪುಂಡ ಬಿಲ್ಲಿನಾಟವ ರಚಿಸಿದ ವೀರ ಖುಲ್ಲ ಕಂಸನ ಮದ ಮುರಿದ ಆಹ ನಲ್ಲೇರ್ಹದಿನಾರು ಸಹಸ್ರಬಲ್ಲಿದತನದಾಳಿ ಎಲ್ಲ ಭಕ್ತರ ಇಷ್ಟಸಲ್ಲಿಸಿ ಪೊರೆದನು 4 ಸಾರಿಬತ್ತಲೆ ಕದಲಿದ ಪರಮ ನಾರಿಯರ ವ್ರತ ಭಂಗಿಸಿ ಮೆರೆದ ಮೂರುಪುರದ ಗರ್ವಮುರಿದ ಆಹ ಪಾರುಮಾಡಿದ ಸುರರ ಘೋರಕಂಟಕದಿಂದ ಏರಿದ ಹಯ ನಮ್ಮ ಧೀರ ಶ್ರೀ ಗುರು ರಾಮ 5
--------------
ರಾಮದಾಸರು
ಮಾಧವ ಮಧುಸೂದನ ಗೋವರ್ಧನ ಪ ದೋಷನಿವಾರಣ ಶೇಷಾರಿಗಮನ ವಾಸುಕಿಗಿರಿಶಯನ 1 ಕೀಟಕ ಸಂಹರ ಹಾಟಕಾಂಬರ ತಾಟಕಿಪ್ರಾಣಹರಣ 2 ಕೌಸ್ತುಭಮಾಲಾ ಕುಜನರ ಕಾಲ ಕಂಸಾಸುರಾದಿ ಮರ್ದನ 3 ಗೋಕುಲವಾಳಿದ ಗೋಪಿಯರ್ವರದ ಗೊಪ ಗೋಪತಿ ನಂದನ 4 ಮಂದರ ನಿಲಯ ಸಿಂಧುಜಾಪ್ರಿಯ ಬಂಧುವೆ ಅನಾಥಜನ 5 ಜಗದೋದ್ಧಾರಣ ಜಗತ್ರಯಮೋಹನ ಜಗಜೀವನ ಪಾವನ 6 ಶಂಖಚಕ್ರಾಂಕಿತನೆ ಕಿಂಕರಜನ ಪ್ರೀತ ಶಂಖಸುರಾದಿ ಮರ್ದನ 7 ಯದುಕುಲಸಂಭವ ಸದಯ ಯಾದವ ಸದಮಲಸುಖಸದನ 8 ಹರಿಗೋವಿಂದ ಪರಮಾನಂದ ನರಹರಿ ಸಿರಿರಮಣ 9 ಸಿರಿನರಸಿಂಗ ಪರಿಭವಭಂಗ ಪರತರ ಗಿರಿಧಾರಣ 10 ನಿತ್ಯನಿರಾಮಯ ನಿರ್ಗುಣ ನಿರ್ಭಯ ನಿರಂಜನ 11 ಪರಮಪುರುಷ ಹರಿ ಸರ್ವೇಶ ಸುರಮುನಿನುತಚರಣ 12 ನಿಮಗೋಚರ ಜಗದಾಧಾರ ಅಘನಾಶ ಭಜಕಜನ 13 ವೇದಾದಿನಮಿತ ವೇದವೇದಾತೀತ ಸಾಧುಸಜ್ಜನಪ್ರಾಣ 14 ವರದಶ್ರೀರಾಮ ನಿರತರ ಪ್ರೇಮ ಪರಿತರ ಪರಿಪೂರ್ಣ15
--------------
ರಾಮದಾಸರು
ಮಾಧವ ಮಧುಸೂದನ ತೇರಾ ಚರಣ ಭಜಿಪೆ ಪಾಲೋ ಮೇರಾ ಪ ಹರಿಯೆ ತುಮ್ಹಾರೇ ಚರಣಭಜನ ಕರುಣಾಕರ ಮುಝೇ ಸಿರಿಯರಮಣ ದುರಿತ ಮೇರೇ ಪರಿಹಾರ ಕರ್ಕರ್ ಪಾರಕರ್ ಪರಿಭವಸೇ ದೇವ 1 ರಕ್ಷ ಮೇರೇ ಕೋಯೀ ನಹೀ ಹೈ ಪಕ್ಷಿಗಮನ ತೇರೇ ಶಿವಾಯ ಲಕ್ಷಿಸಿ ಮೊಕ್ಕೆಮೇಸೇ ಪಾರಕರ್ ರಕ್ಷ ತೇರಾ ಗೋಷ್ಮೇ ಲೇಕರ್2 ಸೀತಾಪತೇ ಶ್ರೀರಾಮ ತೂಹೀ ಪಾತಕ ವಿಮೋಚನ ಹೈ ಪ್ರೇಮಸೇ ದೇಖಕೇ ಮುಝಕೋ ಪಾಪಕೂಪಸೇ ಉಠಾ ಲೀಜೀಯೇ 3
--------------
ರಾಮದಾಸರು
ಮಾಧವ ಮಧುಸೂದನ ಹರಿ ಜೋ ಜೋ ಯಾದವ ರಾಯ ಶ್ರೀರಂಗನೆ ಜೋ ಜೋ ಪ ವಸುದೇವ ದೇವಕಿ ಸುತನಾಗುದಿಸಿ ವಸುಧÉಯ ಭಾರವನಿಳುಹಿದೆ ಜೋ ಜೋ1 ಶುಕಶೌನಕ ನಾರದಮುನಿ ವಂದ್ಯ ಅಕಳಂಕ ಚರಿತ ಅಚ್ಚುತಾನಂತ ಜೋ ಜೋ2 ಶಿಶುರೂಪನೆತ್ತುತ ಮುದ್ದಿಸುತಿಹ ಅಸುರೆ ಪೂತಣಿ ಅಸುಹೀರಿದೆ ಜೋ ಜೋ 3 ಬಂಡಿಯ ರೂಪದಿ ಬಂದಸುರನ ಸಿರ ಚಂಡಾಡುತ ನಲಿದಾಡಿದೆ ಜೋ ಜೋ 4 ಪೊಂಗೊಳಲೂದುತ ಗಂಗೆಯೊಳಿಹ ಕಾ- ಳಿಂಗನ ಪೆಡೆ ತುಳಿದಾಡಿದೆ ಜೋ ಜೋ 5 ಗೋಪಾಲಕರೊಡನಾಡುತ ನಲಿಯುತ ಪಾಪಿ ಖಳನ ತರಿದಾಡಿದೆ ಜೋ ಜೋ 6 ಸಾಧಾರಣ ವತ್ಸರದಲಿ ಸಲಹುವ ಶ್ರೀದ ಕಮಲನಾಭ ವಿಠ್ಠಲ ಸುಜನರ 7
--------------
ನಿಡಗುರುಕಿ ಜೀವೂಬಾಯಿ
ಮಾಧವ ಮುರಾರಿ ಶ್ರೀಹರಿ ರತಿಪತಿಪಿತ ಪೊರಿ ಪ ಸನಕನಂದನ ಮನುಮುನಿವಂದಿತ ತನುಮನಧವನು ನಿನಗಿತ್ತು ಮಣಿಯುವೆ 1 ಪರಮಕರುಣಾಕರ ಪರಮಾತ್ಮನೆ ಎನ್ನ ಪರಿತರ ದುರಿತವ ಪರಿಹರಿಸಭವ 2 ಹರಿಶರಣರ ಸಂಗ ಕರುಣಿಸು ಮುದದಿ ವರಶರಣದೊಳೆನ್ನ ಪೊರೆಯೊ ಶ್ರೀರಾಮನೆ3
--------------
ರಾಮದಾಸರು
ಮಾಧವ ಮೊರೆ ಹೊಕ್ಕೆನೋದೇವ ಪÀ ಕರಿರಾಜವರದನೇ ಶರಣಾರ್ತಿಹರಣನೇ ಅ.ಪ ಆರೊಂದುವ್ಯಸನದಿ ಈರೊಂದು ತಾಪದಿ ಗಾರಾದೆ ಮೋಹದಿ ಕಾರುಣ್ಯವಾರಿಧಿ 1 ಅನುಮಾನವೇತಕೈ ಮನಸೇಕೆ ಬಾರದು2 ಸುರವಂದ್ಯ ಚರಣನೆ ಸರಿಯಾರೊ ನಿನಗೆಣೆ ಪರಿಪಾಲಿಸೆನ್ನನೆ 3
--------------
ಗುರುರಾಮವಿಠಲ
ಮಾಧವ ರಕ್ಷಿಸು ಮಧುಸೂದನ ವೃಥಾ ಕ್ರೋಧವ್ಯಾಕೊ ಸುರ ಸೌಖ್ಯ ಸಾಧನ ಪ. ದೇಹದಲ್ಲಿ ಬಲ ಕುಂದುತಲಳುವೆ ಮುಂದ- ಕ್ಕಾಹ ರೀತಿ ತಿಳಿಯದೆ ಬಳಲುವೆ ಮೋಹ ಪಾಶದಲಿ ಸಿಕ್ಕಿ ನರಳುವೆ ಚಿತ್ಸಂ- ದೋಹ ಎಂದು ತವಪಾದ ನೆಳಲೀವೆ 1 ಯಾತಕಿಂತು ಸಾವಕಾಶ ಮಾಡುವಿ ದೀನ ನಾಥ ಬಹು ಪರಿಕಿಸಿ ನೋಡುವಿ ಪಾತಕಾಂಶವಿರಲು ನೀಡಾಡುವಿ ಎನ್ನ ಮಾತನ್ಯಾಕೆ ಮರೆತು ಮುಂದೋಡುವಿ 2 ನಿತ್ಯವಾದ ನಿನ್ನ ಸೇವೆ ನಡೆಸಲು ತಕ್ಕ ಶಕ್ತಿಯಿಲ್ಲ ಸ್ವರವನ್ನೆತ್ತರಿಸಲು ಒತ್ತಿ ಬಹ ವಿಧ ವಿಧ ಕೊರೆತವು ಗಂಡ ಕ್ಲೇಶ ಭರಿತವು 3 ಸಿರಿನಲ್ಲ ಹೀಗೆ ಭೃತ್ಯನನ್ನು ಬಿಡುವುದು ಥರವಲ್ಲ ದತ್ತ ಸ್ವಾತಂತ್ರ್ಯವರಿಯದ ಕ್ರಮವೆಲ್ಲ ತೀರಿ ಕತ್ತಲೆ ಮುಸುಕಿದಂತಿರುವುದಲ್ಲ 4 ಮಾಯಕ ಮೋಹದಿ ಸಿಕ್ಕಿ ನೊಂದೆನು ತಿಮ್ಮ ರಾಯ ಶೇಷ ಗಿರೀಶ ಕೇಳ್ಮುಂದೇನು ಬಾಯ ಬಿಟ್ಟು ಬಿರಿನುಡಿಯಂದೆನು ಲಕ್ಷ್ಮೀ ಪ್ರೀಯನೆಣಿಸದಿರದ ನೊಂದೆನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಧವ ವಿಠಲ ನೀದಯದಿ ಕಾಪಾಡೊ ಇವಳ ಪ ಯಾದವೇಶನೆ ಸ್ವಾಮಿ | ಹೇಸದಾಗತಿವಂದ್ಯಪಾದ ಸೇವಕಳ ಮನದಾಶೆ ಸಲಿಸುತ್ತ ಅ.ಪ. ತೂಲ | ರಾಶಿಗಳನ ಪರಿಯಗೈಸಿ ನೀನಾಗಿ ತವ | ದಾಸಿ ಎಂದೆನಿಸೋ 1 ನೀಚೋಚ್ಚ ತರತಮದಿ | ಯೋಚನೆಯ ನೆಲೆಗೊಳಿಸಿಪ್ರಾಚೀನ ಕರ್ಮಾಳಿ | ಮೋಚನೆಯ ಗೈಯ್ಯೇ |ಖೇಚರೊತ್ತಮ ವಾಹ | ಕೀಚಕಾರಿ ಪ್ರಿಯನೆಯಾಚಿಸುವೆನೋ ಸವ್ಯ | ಸಾಚಿ ಸಖ ಕೃಷ್ಣ 2 ಜ್ಞಾನಗಮ್ಯನೆ ದೇವ | ಜ್ಞಾನಿಜನ ಸುಪ್ರೀಯಆನಂದ ತೀರ್ಥ ಮತ | ದಾನಂದ ಉಣಿಸೀಗಾನಲೋಲನೆ ಇವಳ | ಗಾನಕೊಲಿಯುತ ನೀನುಧ್ಯಾನ ಗೋಚರನಾಗೊ | ಹೃತ್ಕಂಜದೊಳಗೇ 3 ಸುಸ್ವತಂತ್ರನೆ ದೇವ | ಅಸ್ವತಂತ್ರಳ ಕಾವಸರ್ವ ಭಾರವು ನಿಂದೆ | ಶರ್ವವಂದ್ಯಾಸರ್ವವ್ಯಾಪಕನಾಗಿ | ಸರ್ವಜ್ಞ ನೀನಿರಲುಅಶ್ವಮೊಗನೇ ಕಾಯೊ | ವಿಶ್ವಸೃಜಿ ದೇವ 4 ತೈಜಸನೆ ನೀನಾಗಿ | ಯೋಜಿಸಿದ ಪರಿಯಂತೆಭ್ರಾಜಿಸುವ ಅಂಕಿತವ | ನೈಜ ಭಕ್ತಳಿಗೇಯೋಜಿಸಿಹೆ ಮರುತನಿಂ | ಪೂಜ್ಯನೇ ಪರಿಪೂರ್ಣತೇಜಾತ್ಮನಾದ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮಾಧವ ಸಾಧುಜನ ಕಾದಿರುವರೊ ಪ ಆದರದಿಂದ ನಿನ್ನ ನೋಡುವುದಕೆ ಅ.ಪ ಶಾಸ್ತ್ರಗಳಿಂದಲು ಅರಿಯದ ನಿನ್ನ ಪ ವಿತ್ರ ರೂಪವನು ನೋಡಲೋಸುಗ 1 ಘೋರತಪಗಳಿಂದ ಸೇರದೆÀ ನಿನ್ನನು ಚಾರಿಯೊಳ್ ಪೊಂದಲು ಕೋರುತಿಹರೊ 2 ದಾನ ಧರ್ಮಗಳಿಗೂ ಸುಲಭದಿ ದೊರೆಯದ ನೀನೆ ಬಂದಿರಲು ವಿನೋದಿಸುವರೊ 3 ತೀರ್ಥಯಾತ್ರೆಯು ಮನ ಮಾತ್ರ ಶೋಧಿಪುದೆಂದು ಮೂರ್ತಿ ನೋಡಲು ನಿನ್ನ ಪ್ರಾರ್ಥಿಸುವರೊ4 ಅನ್ನದಾನವ ಮಾಡೆ ಹೊನ್ನು ಇವರಿಗಿಲ್ಲ ಮನ್ನಣೆ ಮಾಡಿ ಪ್ರಸನ್ನನಾಗೆಲೊ 5
--------------
ವಿದ್ಯಾಪ್ರಸನ್ನತೀರ್ಥರು