ಒಟ್ಟು 14849 ಕಡೆಗಳಲ್ಲಿ , 135 ದಾಸರು , 6533 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯ ನಿವಾರಣವು ಶ್ರೀ ಹರಿಯ ನಾಮ |ಜಯಪಾಂಡುರಂಗವಿಠಲ ನಿನ್ನ ನಾಮ ಪಧಾರಿಣೀದೇವಿಗಾಧಾರವಾಗಿಹ ನಾಮ |ನಾರದರು ನಲಿನಲಿದು ನೆನೆವ ನಾಮ |ಘೋರಪಾತಕಿ ಅಜಾಮಿಳನ ಸಲಹಿದ ನಾಮ |ತಾರಕವು ಬ್ರಹ್ಮ - ಭವರಿಗೆ ನಿನ್ನ ನಾಮ 1ಮೊರೆಯಲಾಲಿಸಿ ಮುನ್ನ ಗಜವ ಸಲಹಿದ ನಾಮ |ಕರುಣದಿಂ ದ್ರೌಪದಿಯ ಕಾಯ್ದ ನಾಮ |ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ |ಪರತತ್ತ್ವ ಇಹಕಲ್ಲವೇ ನಿನ್ನ ನಾಮ 2ಚರಣದಲಹಲ್ಯೆಯನು ಸೆರೆಯ ಬಿಡಿಸಿದ ನಾಮ |ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ |ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ |ಸ್ಮರಿಸ ಜನರಿಗೆ ಸಮಸ್ತವನಿತ್ತ ನಾಮ 3ಚಂದ್ರಶೇಖರ ಗಿರಿಜೆಗೊರೆದ ಸಿರಿಹರಿನಾಮ ||ಬಂದಾ ವಿಭೀಷಣನ ಪಾಲಿಸಿದ ನಾಮ |ಕಂದಮುಚುಕುಂದನಿಗೆ ಕಾಮಿತವನಿತ್ತ ನಾಮ |(ಸಂದ ಪಾಂಡಪಕ್ಷ ಪಾವನವು ನಾಮ ) 4ಅಖಿಳವೇದಪುರಾಣ ಅರಸಿಕಾಣದ ನಾಮ |ಸಕಲಯೋಗಿ - ಜನಕೆ ಸೌಖ್ಯ ನಾಮ ||ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ |ರುಕುಮಿಣೀಯರಸ ವಿಠಲ ನಿನ್ನ ನಾಮ 5ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ |ಮುಕ್ತಿ ಮಾರ್ಗಕೆ ಯೋಗ್ಯಹರಿ ನಿನ್ನ ನಾಮ |ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ |ಚಿತ್ತಜನ ಪೆತ್ತ ಶ್ರೀ ಹರಿಯ ನಾಮ 6ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ - |ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ ||ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ |ನಾರಾಯಣಾ ಕೃಷ್ಣಹರಿ ನಿನ್ನ ನಾಮ7ಹೊಂದಿದ್ದ ಭಕ್ತವೃಂದವ ಸಲಹಿದಾ ನಾಮ |ತಂದು ಅಮೃತವ ಸುರರಿಗೆರೆದ ನಾಮ ||ಅಂದಂಬರೀಷನನು ಕಾಯ್ದ ಶ್ರೀ ಹರಿನಾಮ |ತಂದೆ ಪುರಂದರವಿಠಲಹರಿ ನಿನ್ನ ನಾಮ8
--------------
ಪುರಂದರದಾಸರು
ಭಳಿ ಭಳಿರೆ ಬಲಭೀಮ ಭಳಿರೆ ಸದ್ಗುಣಧಾಮಭಳಿರೆ ದ್ರೌಪದಿನಾಥ ಭಳಿರೆ ಶ್ರೀಹರಿದೂತಭಳಿರೆ ಅಪ್ರತಿಚರಿತ ಭಳಿರೆ ಬಲದೇವಸುತಭಳಿರೆ ಭೂಮಿಪಲಲಾಮ ಭೀಮ ಪ.ಯೋಚಿಸಿ ಖಳರು ನೆರೆದು ಭೂಚಕ್ರವಾಕ್ರಮಿಸೆಶ್ರೀ ಚಕ್ರಿ ದಯದಿ ಅಮೃತ ರೋಚಕುಲಜಾತ ಪಾಂಡು ಚಕ್ರವರ್ತಿ ಕಮಲಲೋಚನೆಯ ಪೃಥೋದರಾಬ್ಧಿ ಚಂದ್ರನಂತೆ ಜನಿಸಿಆ ಚಕ್ಷುವಿಹೀನ ಭವಾಬ್ಧಿಚೋರರೆದೆಶೂಲಗೋಚರಿಸುವಂತಿಳೆಗೆ ಸೂಚಿಸಿ ಮುಖೋದಯವಕೀಚಕ ಹಿಡಿಂಬ ಬಕ ನೀಚಮಾಗಧಮುಖರವಾಚಿಸಗುಡದೆ ಬಡಿದೆ ಭೀಮ 1ಕೊಬ್ಬಿದ ಖಳರು ಧಾತ್ರಿಗುಬ್ಬಸವ ತೋರುತಿರೆಅಬ್ಬರದಿ ಕರದ ಗದೆಗ್ಹಬ್ಬದೌತಣವಿಡುತಒಬ್ಬೊಬ್ಬರೊಮ್ಮೆ ಹನ್ನಿಬ್ಬರನ ಕರೆದುಉಬ್ಬುಬ್ಬಿ ರಣದಿ ಕುಣಿದೆಹಬ್ಬಿ ಬಹ ನಾಗರಥನಿಬ್ಬರದ ಬಿಂಕದವರೆಬ್ಬಿಸಿ ನಭಕೆ ಚಿಮ್ಮಿ ಬೊಬ್ಬಿರಿದು ಕೌರವರನಿಬ್ಬಗೆದು ಡಾಕಿನಿಯ ಉಬ್ಬಿಸಿದೆ ನಿನಗೆಪಡಿಹೆಬ್ಬುಲಿಗಳುಂಟೆ ಜಗದಿ ಭೀಮ 2ನಿರ್ಧರ ಪರಾಕ್ರಮ ಧನುರ್ಧರರ ಬೀಳ್ಗೆಡಹಿಸ್ವರ್ಧಾಮಗರು ತುತಿಸೆ ದುರ್ಧಾರ್ತರಾಷ್ಟ್ಟ್ರರಂದುರ್ಧಾಮಕೆಬ್ಬಟ್ಟಿದುರ್ಧರ್ಷಗುರುರಥವನೂಧ್ರ್ವಕ್ಕೊಗೆದುಲಿದು ಚೀರ್ದೆದುರ್ಧರ ಖಳಾನುಜನ ಮೂರ್ಧ ಕಾಲೊಳು ಮೆಟ್ಟಿಶಾರ್ದೂಲನಂದದಿ ಕೆಡದೊಡಲಿನಅರುಣಜಲಪೀರ್ದಂತೆ ತೋರ್ದೆ ಗೋವರ್ಧನಧರನನುಜÕವಾರ್ಧೀಸ್ಯರ್ಪಿಸಿದೆ ಮಝರೆ ಭೀಮ 3ಕಡಲೊಡೆಯನೆಡೆಗೆ ಬಲುಕೆಡುನುಡಿಯ ನುಡಿದವರಪಿಡಿ ಪಿಡಿದು ಖಡುಗದಿಂ ಕಡಿಕಡಿದು ಕಡೆಗಾಲದಮೃಡಕೋಟಿಯಂದದಲಿ ಕಡುರೋಷದಡಿಗಡಿಗೆಘುಡುಘುಡಿಸಿ ಹುಡುಕಿ ತುಡುಕಿಷಡಕ್ಷೋಹಿಣಿ ಪಡೆಯ ಹುಡಿ ಹುಡಿಗುಟ್ಟಿ ಪೊಡವಿ ದಿಗ್ಗಡಣ ಜಯದಂತಿ ಧಿಮ್ಮಿಡಿಸಿ ಕರ್ಮಡು ಪೊಕ್ಕುಕಡುಗಲಿಯ ತೊಡೆಮುರಿಯೆ ನಡುಮುರಿಯೆ ಗದೆಯಿಂದಹೊಡೆದೆಶಸುಪಡೆದೆ ಜಗದಿ ಭೀಮ 4ಅಪ್ಪಳಿಸಿ ಕುರುಪತಿಯ ಚಿಪ್ಪೊಡೆಯೆ ತಲೆದುಳಿದುಬಪ್ಪುವಾರುಷವೆಂಬ ಸುಪ್ತಸೂತ್ರದಿ ಅಜನಬೊಪ್ಪ ಕೃಷ್ಣನ ಕಟ್ಟುವ ಪರಾಕ್ರಮಿಗೆನುತಸುಪ್ರಾಯಶ್ಚಿತ್ತವೆನುತತಪ್ಪುಗಳನೊಂದೊಂದ ನೆಪ್ಪೆತ್ತಿ ತನ್ಮತಿಗೆಹೆಪ್ಪೆನುವ ವಾಗ್ಬಾಣ ಕುಪ್ಪಳಿಸಿ ಕೊಂದು ಶ್ರೇಯಃಪತಿ ಪ್ರಸನ್ವೆಂಕಟಾರ್ಪಣವ ಮಾಡಿ ವೈಷ್ಣವ ಪ್ರತತಿಯನು ಪೊರೆದೆ ಭೀಮ 5
--------------
ಪ್ರಸನ್ನವೆಂಕಟದಾಸರು
ಭಳಿ ಭಳಿರೆ ಭಳಿರೆ ಹನುಮಭಳಿ ಭಳಿರೆ ಋಜುನಿಕರ ಮಕುಟಮಣಿ ಪ.ಅಂಜನಿಜಠರಸಂಜನಿತಪ್ರಾಜÕಮೌಂಜಿಯುತಕೋದಂಡಧೃತಕರಕಂಜನೆದುರಲಿ ಪ್ರಾಂಜಲಿತ ಬಹುಭಕುತಿ ಅಭಿನಯಅಚ್ಛಿನ್ನ ಅಚ್ಚಿನೊಳು ಶುಭಚಿಹ್ನಪಾವನ್ನಗುಣರನ್ನ ಪರಿಪೂರ್ಣಅ.ಪ.ತಾಟಕಾಂತಕ ಭಟರೊಳು ನೀಮೀಟೆನಿಸಿ ಧೀಂಕಿಟ್ಟು ಶರಧಿಯದಾಂಟಿದವನಿಜೆ ತೋಷಕಾರಿ ಅಶೋಕವನಹಾರಿಕೋಟಿ ಕೋಟಿ ನಿಶಾಟ ಹೃದಯಸ್ಫೋಟಕಕ್ಷಯ ಪಾಟವಕರಿತ್ತಟಕೇಸರಿಕಟಿತಟದಿ ಕರವಿಟ್ಟ ಹನುಮದಿಟ್ಟ ವಿಕಟ ಖಳಕಳ ಪಟಾರ್ಭಟಪಟು ಹರಿದ್ವಿಟ್ಟದ್ವಿಟ್ಟು ಚಟುಲವಟು 1ವೀರ ಸಮೀರಕುಮಾರ ಪಾರಾವಾರ ಚರಿತ ಮಾರಜಿತಘನವಾರಿಜೋದ್ಭವಶರಕೆ ಮನ್ನಿಸಿದೇರಿದೌದಾರಿಈರೈದು ಮುಖದವನ ಪುರಪ್ರಸರಾಗಾರವನುರುಹಿ ರಘುಜನಚಾರುಚರಣವ ಕಂಡ ಪ್ಲವಗಪ್ರಚಂಡಶುಭತುಂಡಬಾಲದಂಡಅಗಣಿತಲೆಂಡರ ಖಂಡಪುಂಡರಗಂಡಗಂಡಭೈರುಂಡುದ್ದಂಡ2ಜೀವಜಾಲರ ಜೀವ ವಿಪ ಮಹಾದೇವ ಮುಖ್ಯರ ದೇವ ಚತುರ್ದಶಭುವನಾಶ್ರಿತ ಭೂತಭರ್ಗಸದಾವಿರತಿಭರಿತಾಆವಜನುಮಜ್ಜನುಮ ಎನಗೆನೀ ಒಡೆಯನಾಗ್ಯಾಳುತ ನನಗೀವುದೆಲೆಗುರುಪರಮಭಾಗವತಾರ್ಯ ಆಚರಿಯಹರಿಯ ಕಾರ್ಯಕಕ್ಕರದ ಹಿರಿಯಪರಮವೀರ್ಯಾಚ್ಚರಿಯ ಸಚ್ಚರಿಯ3ಹರಿಸೇವ್ಯಂಗೀಕರಿಸಿ ಒಡನವತರಿಸಿ ಆಜÕಂವೆರಸಿ ಅಟ್ಟಿದಹರಸಿ ಮದಮತ್ತರಿ ಸಮೂಹ ಭಯಹರಿಸ್ಯಭಯ ಧರಿಸಿಹರಿಶುಭಚರಣ ಸರಸಿಜದಿ ಶಿರವಿರಿಸಿ ಸುಗಿರೋಚ್ಚರಿಸಿ ಅಖಿಳೊಪ್ಪಿರಿಸಿ ವಿಷಯ ಸ್ಪರ್ಶವಿಲ್ಲದ ಅರಸ ನೀನೆ ಕಣಾ ಜಾಣರೊಳು ಜಾಣ ಪ್ರಾಣಮುಖ್ಯಪ್ರಾಣಕೇಣಿಗರಗಂಟಲಗಾಣ ಪ್ರವೀಣ ಹನುಮ4ವಾಸವಾರಿಯ ಘಾಸಿಗಂದು ಕಪೀಶರಳಿದಿರಲಾಸಮಯದೊಳೌಷಧವ ತಂದಾಸಮರ್ಥರ ಪೊರೆದ ಕಪಿವರದಶ್ರೀಶ ವರದ ಪ್ರಸನ್ನವೆಂಕಟಾಧೀಶ ಭೃತ್ಯೋಲ್ಲಾಸ ಅಜಪದಧೀಶ ಮೂರವತಾರಿ ಸುಖಕಾರಿ ಸದಾಶೂರಿ ಸಮೀರ ಕುಮಾರ ಭಾರತ ಧೀರಸಾರಯಂತ್ರೋದ್ಧಾರ ತತ್ವವಿಚಾರ5
--------------
ಪ್ರಸನ್ನವೆಂಕಟದಾಸರು
ಭಾಗೀರಥಿ ದೇವಿ ನಮೋ ||ಭಾಗೀರಥಿ ದೇವಿ ಭಯ ನಿವಾರಣ ಗಂಗೆ |ಸಾಗರನರ್ಧಂಗೆ ಸುತರಂಗೆ ಪವಾಮನ ವಾಮ ಪಾದಾಂಗುಷ್ಟನಖಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ..... ||ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ... 1ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ.... ||ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ..... 2ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ.... ||ಉನ್ನತಧೃವಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ..... 3ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ.... ||ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ..... 4ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ.... ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದಸ್ಮøತಿಮಾತ್ರದಿಂದಲೀ | ಭಾಗೀ...... 5ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರಧರ ಪದಿ ಶ್ರೀಗಂಗೆ | ಭಾಗೀ...... ||ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆಜಾಹ್ನವಿತ್ರಿದಶೇಶ್ವರಿ | ಭಾಗೀ.... 6ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ.... |ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ.... 7ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ..... ||ಶಮದಮಾದಿಗಳಿತ್ತುಪೊರೆಅನುದಿನದಲ್ಲಿ |ಅಮರವಿನುತಪಾದಪಂಕಜೆ | ಭಾಗೀ.....8ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ...... ||ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ..... 9
--------------
ಪ್ರಾಣೇಶದಾಸರು
ಭಾಗ್ಯದ ಲಕ್ಷ್ಮೀ ಬಾರಮ್ಮಾ - ನಮ್ಮಮ್ಮಾ ನೀ ಸೌ-ಭಾಗ್ಯದ ಲಕ್ಷ್ಮೀ ಬಾರಮ್ಮಾ ಪಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ |ಗೆಜ್ಜೆಯ ಕಾಲಿನ ಧ್ವನಿಯ ಮಾಡುತ ||ಸಜ್ಜನ ಸಾಧು ಪೂಜೆಯ ವೇಳೆಗೆ |ಮಜ್ಜಿಗೆಯೊಳಗಿನ ಬೆಣ್ಣೆಯಂತೆ 1ಕನಕವೃಷ್ಟಿಯ ಕರೆಯುತ ಬಾರೆ |ಮನಕೆ ಮತಿಯ ಸಿದ್ದಿಯ ತೋರೆ ||ದಿನಕರಕೋಟಿ ತೇಜದಿ ಹೊಳೆಯುತ |ಜನಕರಾಜನ ಕುಮಾರಿ ಸೀತೆ 2ಸಂಖ್ಯೆಯಿಲ್ಲದಾ ಭಾಗ್ಯವ ಕೊಟ್ಟು |ಕಂಕಣ ಕೈಯಾ ತಿರುವುತ ಬಾರೆ ||ಕುಂಕುಮಾಂಕಿತೇ ಪಂಕಜಲೋಚನೆ |ವೆಂಕಟರಾಯನ ಮೋಹದ ರಾಣಿ 3ಅತ್ತಿತ್ತಗಲದೆ ಭಕ್ತರ ಮನೆಯಲಿ |ನಿತ್ಯಮಂಗಲವುನಿತ್ಯಮಹೋತ್ಸವ ||ಸತ್ಯವ ತೋರುವ ಸಜ್ಜನರಿಗೆ ನೀ |ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ 4ಸಕ್ಕರೆ ತುಪ್ಪದ ಕಾಲವೆ ಹರಿಸಿ |ಶುಕ್ರವಾರದ ಪೂಜೆಯ ಕೊಂಬೆ ||ಆಕ್ಕರವುಳ್ಳ ಅಳಗಿರಿ ರಂಗನಶಕ್ತಪುರಂದರವಿಠಲನ ರಾಣಿ5
--------------
ಪುರಂದರದಾಸರು
ಭಾಪುಬಲ್ಲಿದಹನುಮ ಭೂಪ ಹನುಮಶ್ರೀಪದ್ಮನಾಭನ ದಾಸ ಭಕ್ತರ ವಿಲಾಸ ಪ.ಹಾಟಕಯಜೊÕೀಪವೀತಕಚ್ಚುಟಕರ್ಣಕುಂಡಲ ಮುಖ್ಯಕೋಟಿಕಟಕ ಸಮಗಾತ್ರ ದಿಟ್ಟವಟು ಪಿಂಗಳನೇತ್ರದುಷ್ಟದಶಶಿರನಗರುವಮುಷ್ಟಿಯಿಂದಲ್ಹೊಡೆದೆ ಉರಕೆಕೋಟಿ ಪ್ಲವಗರ ಪೊರೆದಭಯ ಕೊಟ್ಟು ಪಾಲಿಸೆನ್ನಜೀಯ1ದುರುಳಕುನೃಪನಟ್ಟಿಘನಗರಳನುಂಗಿ ಪುರೋಚನನಉರುಹಿ ಧರ್ಮಾದ್ಯರನು ಪೊರೆದೆ ಕಿರ್ಮೀರಕರರಿದೆಕ್ರೂರ ಕೌರವನಪಾವಕಹರಿಶರಣ ಜನಪಾಲಕಮರೆಹೊಕ್ಕೆ ಬಿಡದಿರು ಕೈಯ ಧೀರ ಶ್ರೀ ಭೀಮಸೇನರಾಯ 2ಎಸೆವ ದಂಡಕಮಂಡಲವ ಧರಿಸಿ ಮಾರಶರವ ಜಯಿಸಿಬಿಸಜಾಕ್ಷನ ಪೊಳಲ ತೋರಿದೆ ಕಶ್ಮಲಮತವಳಿದೆವಸುಧೆಗೆ ವೈಷ್ಣವರೊಡೆಯ ನೋಯಿಸದೆಪೊರೆನಿನ್ನ ಪಡೆಯಶ್ರೀಶ ಪ್ರಸನ್ನವೆಂಕಟೇಶಾಂಘ್ರಿ ಸರೋಜರಜಭೃಂಗ 3
--------------
ಪ್ರಸನ್ನವೆಂಕಟದಾಸರು
ಭಾರತಿಭರತನ ರಮಣಿಶಿರಬಾಗುವೆ ತ್ರಿಜಗಜ್ಜನನಿ ಪ.ಭಾರತ ಭಾಗವತಾರ್ಥ ಬೋಧಿನಿಶಾರದೇಂದುನಿಭವದನಿ ಅ.ಪ.ಹರಿಗುರುಗಳಲಿ ಸದ್ಭಕ್ತಿ ದೃಢಕರುಣಿಸು ಸರಸಿಜನೇತ್ರಿಗಿರೀಶಾದಿ ಸರ್ವಸುರೌಘಪ್ರಣೇತ್ರಿಶರಣು ಶರಣು ಸುಪವಿತ್ರಿ 1ಕಾಳಿ ದ್ರೌಪದಿ ಸುನಾಮೆ ನಮ್ಮಪಾಲಿಸು ಭೀಮಪ್ರೇಮಶ್ರೀ ಲಕ್ಷ್ಮೀನಾರಾಯಣನ ಭೃತ್ಯೆಕಾಲತ್ರಯ ಕೃತಕೃತ್ಯೆ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭಾರತಿಭಾಗ್ಯವತಿ ಜಯತಿಪ.ಸೂರಿಜನೋದ್ಧರೆ ಸುಗುಣಾಲಂಕಾರಸಾರಸದಳನೇತ್ರಿ ಜಯತಿ 1ಚಿತ್ರಚರಿತ್ರೆ ಚಿತ್ಸುಖಗಾತ್ರೆಸೂತ್ರನಾಯಕನಸತಿಜಯತಿ2ಅನಘಲಕ್ಷ್ಮೀನಾರಾಯಣನ ಶ್ರೀಚರಣಾ-ವನತರ್ಗೆ ನೀನೆಗತಿಜಯತಿ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭಾರತೀ ದೇವೀ ನಿನ್ನನು ದಿನಾ | ಸಾರುವರ ಕಾಯ್ವೀ ||ಮಾರಮಣನಪಾದವಾರಿಜಯುಗದಲೀ |ಚಾರುಭಕುತಿ ಕೊಡು ನಾರೀ ಶಿರೋಮಣಿ ಪಇಂದ್ರಸೇನಳೆವಿಪ್ರಕನ್ನಿಕೆ | ಚಂದ್ರೇ ಶ್ರೀಕಾಳೆ |ನೊಂದೆನೆ ಬಹಭವ| ಬಂಧನದೊಳು ವೇಗಾ |ದಿಂದ ಕಾಯೆ ಕರುಣಾಸಿಂಧುದ್ರೌಪದಿ ದೇವಿ 1ಮಾತೆ ಕೇಳೆಲೆ ಭವಟವಗೆ | ವೀತಿಹೋತ್ರಳೆ ||ಮಾತು ಮಾತಿಗೆ ಜಲಜಾತನಾಭನ ಸ್ತುತೀ |ಆತುಕೊಂಡಿರಲೆ ಶ್ರೀ | ಮಾತರಿಶ್ವನಾ ರಾಣೀ 2ಪತಿತ ಪಾವನೆ | ಶಿವ ಕನ್ಯಾ ಜಗದ್ವಿತತೆ ಜೀವನೆ ||ನುತಿಸಿಬೇಡಿಕೊಂಬೆನೆ | ಕ್ಷಿತಿಯೊಳೆಲ್ಲರೂ ಸನು |ಮತವನೈದಿ ಈ ಕೃತಿಗೆ ಮಂಗಳವೀಯೆ 3ದೋಷ ದೂರಳೇ | ಹರಿಭಕ್ತಿಯಲ್ಲಿ ಮೋಸ ತೋರಳೆ ||ಕಾಶಿ ನಂದನೆಯನ್ನಾ | ಯಾಸ ಬಡಿಸದಲೀ |ಶ್ರೀಶನ ಕಥಿಗೆ ವಿಶೇಷ ಬುದ್ಧಿಯನೀಯೆ 4ಮಾನನಿನ್ನದೆ | ಸತತ ಪೇಳ್ವದೇನು ಮಾಣದೇ ||ಪ್ರಾಣೇಶ ವಿಠಲನ ಧ್ಯಾನದೊಳಿರುವಂತೆ |ಪೋಣಿಸುವದು ಮತಿ ಬಾಣ ವರದ ನುತೆ5
--------------
ಪ್ರಾಣೇಶದಾಸರು
ಭಾರತೀರಮಣ ನಂಬಿದೆ ಪಾದವಾರಿಜಾಕರುಣಾ ವಾರಿಧೆ ಯನ್ನನು |ದೂರ ನೋಡದೆ ನಿನ್ನ ಸಾರೆಗರೆದುಭಯ ನಿವಾರಿಸಿ ಸಲಹೋ ಪನೀಲಲೋಹಿತನ ಪಿತನೇ ಗೋಪಾಲನ ಸುತಾ |ಕಾಳಕೂಟ ಪಾನಿ ವಿಶಾಲಾಂಬಕಾ ಮಾರರಿಂದ ||ವೇಳೆ ವೇಳೆಗಳಲ್ಲಿ ವೋಲಗವ ಕೈಕೊಂಬುವ |ಕಾಳೀವಲ್ಲಭಭೇಶಭಾಸ್ಕರರೋಲು ಸನ್ನಿಭ ||ಈ ಲೌಕಿಕ ನರರಾಲಯ ಕಾಯಿಸದೆ |ವಾಲಯ ಸುಮತಿಯ ಪಾಲಿಪುದೊಲಿದು 1ಜಾನಕೀಪತಿ ಸೇವೆ ಮಾಡಿದೈ ಕಾಣೆನೋಪ್ರತಿ|ಯಾ ನಿನಗಾರಾರಾ ಭುವನದೊಳಗೆ ಗಂಧವಹನೆ ||ಮುದ್ರಿಯ ಕೊಂಡು ಕ್ಷಣದೊಳಗೆ ಜಲಧಿಯನ್ನೆ ಹಾರಿದೆ |ಸೀತೆಗುಂಗುರವನ್ನೆ ತೋರಿದೆ ||ಆ ನಗರವನು ದಹನಗೈಸಿ ಬಹು |ದಾನವರನಳಿದು ದಶಾನನನೊದ್ದೆ 2ಪಾಪದೂರನೆ ವೃಕೋದರ ಶ್ರೀ ದ್ರೌಪದೀಶನೇ |ವಿಪಿನಚರಿಸಿ ಕುರುಪತಿಯ ತರಿದು ||ಕ್ಷಿತಿಪರನ್ನು ಬಿಡಿಸಿದೆಯೈ ಪಾಂಡವರ (ಪರಿ) ಪಾಲಕ |ಕೋಪನಾಶನ ಉದ್ಧರಿಸೆನ್ನ ಚಾಪಭಂಜನ ||ಶ್ರೀಪತಿ ದ್ವಯ ಪದ ಆಪಜ ಭಜಿಸುವ |ನೇ ಪರಮೇಷ್ಠಿಯರೂಪಗುಣಾಢ್ಯ 3ದೇಶಿಕೋತ್ತಮ ಮಾರುತಿ ಇಂದಿರೇಶನ ಪ್ರೇಮ |ಸಂಪಾದಿಸಿಕೊಂಡತಿಶಯ ಭಕುತಿಯಿಂದಲೀ ಸಮೀಚೀನವಾಗಿ ||ತ್ರಿಂಶತಿ ಸಪ್ತ ಸಂಖ್ಯಾ ದರುಶನ ಗ್ರಂಥ ವಿರಚಿಸಿ ದು |ರ್ಭಾಷ್ಯವ ಸಂತರಾ ಸಲಹುವರನಾಭಾಸ ಮಾಡಿದೆ ||ವ್ಯಾಸಭಜಕ ನಿನ್ನ ದಾಸನೆನಿಸಿಕೊಳ್ಳೋ4ಅಂಜನಾಸುತ ಪ್ರಾಣೇಶ ವಿಠಲನೆಂಜಲನೊಯ್ಯುತ |ಭುಂಜಿಸಿದಿಯಲೊನಿರಂಜನಕಪಿ ಪ್ರ- ||ಭಂಜನಕೊಡು ಕೃತಾಂಜಲಿಯಿಂ ಬೇಡುವೆ |ಕಂಜನಾಭನ ಸ್ಮರಣೆ ದಿವಾ ಸಂಜೆಯಲಿಘನ||ಪುಂಜ ಸುಗುಣಮಣಿ ಮಂಜರಿ ಅರ್ಥ ಪ- |ರಂಜಳ ತಿಳಿಸೋ ಧನಂಜಯ ರಕ್ಷ 5
--------------
ಪ್ರಾಣೇಶದಾಸರು
ಭಾವಿಸಮೀರಶ್ರೀ ವಾದಿರಾಜ ಸ್ವಾಮಿ ಸ್ತೋತ್ರ108ಪಾಲಿಸೋ ಗುರುರಾಜ ಪಾಲಿಸೋಪಾಲಿಸೋಗುರುವಾದಿರಾಜ || ಪೊಗಳ-ಲಳವೇ ನಿನ್‍ಮಹಿಮೆ ಮಹೋಜ || ಅಹಹಂಸಹಯಾಸ್ಯವರಾಹಕೇಶವ ಪ್ರಿಯಹಂಸಾರೂಡ್ಯನೆ ನಮೋ ಶರಣು ಮಾಂಪಾಹಿ ಪವಾಗ್ವಿಭವನು ಗುರುವರ್ಯ || ಮಹಾಯೋಗಿವರನು ಯತಿವರ್ಯ || ಶಿರಿವಾಗೀಶಕರಪದ್ಮದುದಯ || ನಾಗಿಜಗತ್ತಲ್ಲಿ ಮಾಡಿ ದಿಗ್ವಿಜಯ || ಅಹಜಗವನಳೆದಮೂರ್ತಿತರಿಸಿ ನಿಲ್ಲಿರಿಸಿಪೊಗಳೆ ಮುಕ್ಕಣ್ಣಾದಿ ಸುರರೇಬಲ್ಲರು 1ಜೀವೋತ್ತಮವಿದ್ಯುತ್ಪತಿಯ ||ನಿತ್ಯಅವೇಶಯುತ ವ್ಯಾಸರಾಯ || ಮುನಿಸರ್ವಾಭೌಮರ ಸೇರಿ ದಿವ್ಯ || ವಾದಮಾಧ್ವ ವೈದಿಕ ಬ್ರಹ್ಮವಿದ್ಯ || ಅಹಸುವಿಚಾರ ಪ್ರವಚನರತನಾಗಿ ಭುವಿತತ್ವವಶ್ರುತಿಯುಕ್ತಿ ಯುಕ್ತದಿ ಬೋಧಿಸಿದ2ಕೂರ್ಮತೀರ್ಥವು ಧವಳಗಂಗೆ || ಅದರನಿರ್ಮಲ ಲಲಿತತರಂಗ|| ಲಿಪ್ತಚರ್ಮ ತೊಳೆದು ಪಾಪಭಂಗ || ಮಾಡಿಧರ್ಮ ಆಚರಣೆ ನಿಸ್ಸಂಗ || ಅಹ ||ಬುದ್ದಿಯ ಒದಗಿಸಿಗುರುಸೇವಾರತಿಯಿತ್ತುಮಧ್ವಾಂತರ್ಗತ ಶ್ರೀಶನಲಿ ಭಕ್ತಿ ತೋರ್ಪುದು 3ಧವಳಗಂಗೆಗೆ ಪೂರ್ವಾದೇಶ || ದಲ್ಲಿದೇವದೇವೋತ್ತಮ ವ್ಯಾಸ || ದೇವಅವಲೋಕಿಸುತ ಇಹ ಪಂಚ || ವೃಂದಾವನಮಧ್ಯದಲ್ಲಿ ಪ್ರವೇಶ || ಅಹ ||ಮಾಡಿದಿರಿ ತ್ರಿವಿಕ್ರಮನನಂತ ಗುಣಕ್ರಿಯದೃಢಧ್ಯಾನೋಪಾಸನ ಮಾಳ್ಪಮಹಂತ4ಪೂರ್ಣೇಂದು ಪೋಲುವ ಮುಖವ ||ಕಮಲಕರ್ಣಿಕೆವರ್ಣದಿ ಪೊಳೆವ ||ಗಾತ್ರಪೂರ್ಣಲಕ್ಷಣ ಸಂಯುತವ || ದಿವ್ಯಫಣಿಯಲ್ಲಿ ಪುಂಡ್ರವು ಊಧ್ರ್ವ || ಅಹಪೀತ ಸುವರ್ಣ ಸುರೇಶ್ಮಿವಸನಉಟ್ಟಪದ್ಮಜ ಪಾದಾರ್ಹನೆ ನಿನ್ನ ಕಂಡೆ ನಾ ಶರಣು 5ಗುರುವಾದಿರಾಜ ನಿನ್ ದೂತ || ವೀರಭದ್ರನೋಪಮ ಬಲವಂತ || ಬಾಧೆವಿದ್ರಾವ ಕ್ಷಣದಿ ಮಾಳ್ಪಂತ || ಅತಿಶೂರ ಅದ್ಬುತ ಶಕ್ತಿಮಂತ || ಅಹ ||ನಾರಾಯಣಾಹ್ವಯ ಭೂತರಾಜನು ಎನ್ನಸಂರಕ್ಷಿಸುವ ಗುರುರಾಜ ನಿನ್ ದಯದಿ 6ಒಡೆಯ ಶ್ರೀಪತಿಹಯವದನ || ತಾನೇಕಡಲೆ ಮಡ್ಡಿಯನ್ನು ನಿನ್ನ || ಕೈಯಿಂದಉಂಡದ್ದು ಚತುರ್ದೇಶಭುವನ|| ಖ್ಯಾತಿಈಡಿಲ್ಲ ಸ್ಮರಿಸೆಪಾವನ್ನ|| ಅಹ ||ಕುಸುಮಜಪಿತ ಉಕ್ತಅಭಯಪ್ರಸನ್ನ ಶ್ರೀನಿವಾಸನ್ನೊಲಿಸೋ ಎನಗೆ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಭಾಷೆ ಹೀನರ ಆಸೆ ಪ್ರಾಣಗಾಸಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇಸತ್ತು ಬೇಲಿ ಮೇಲೊರಗಿದಂತೆ ಪ.ಚಳಿಗೆ ನಡುಗುತ ಹೋಗಿ ಜಲದೊಳಗೆ ಪೊಕ್ಕಂತೆ |ಮಳೆಯ ರಭಸಕೆ ಮರವನೇರಿ ಕುಳಿತಂತೆ |ಹುಳುವನಟ್ಟುಳಿಗಂಜಿ ಹುತ್ತಿನೊಳು ಹೊಕ್ಕಂತೆ |ಎಳೆನರಿಯು ಒಂಟೆಯಾ ತುಟಿಗೆ ಜೋತಂತೆ 1ಹಸಿವೆಗಾರದೆ ಬೆಕ್ಕು ಹತ್ತಿಯನು ತಿಂದಂತೆ |ತೃಷೆಗಾರದವ ತೆವರ ತೋಡಿದಂತೆ ||ಬಿಸಿಲಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ |ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ 2ಹುಸಿಯನಾಡುವರಾಸೆ ಪುರುಷ ನಾರಿಯ ವೇಷಬಿಸಿಲುಗುದಿರೆಯಭಾವ ಒಂದೆ ಕಾಣೊ ||ಬಿಸಜಾಕ್ಷ ವರದ ಶ್ರೀ ಪುರಂದರವಿಠಲನ |ಎಸೆವ ಪಾದದ ಸೇವೆ ಪರಮಸುಖ ಮನುಜಾ 3
--------------
ಪುರಂದರದಾಸರು
ಭಾಷೆಯ ಪಡೆದಿಹೆನು ಭಾಷೆಯ ಪಡೆದಿಹೆನುಈಶಳಾದ ಬಗಳಾ ದೇವಿಯ ಕೈಯಲಿ ಕೈಯನು ಹೊಯ್ದುಪಎತ್ತ ಎತ್ತ ಹೋಗೆ ಬೆನ್ನಹತ್ತಿ ತಿರುಗು ಎಂಬಹತ್ತಿರಿರಬೇಕು ಕಾದು ನಿತ್ಯದಿ ಎಂದೆಂಬ ಹಾಗೆ1ಎಲ್ಲ ಕ್ಷೇಮ ಪರಾಮರಿಕೆ ನಿನ್ನದೀಗ ಎಂಬ ಹಾಗೆಎಲ್ಲ ಮಾನಾವಮಾನ ನಿನ್ನ ಹೊಂದಿತು ಎಂಬ ಹಾಗೆ2ದೇಹವಿದು ಎನ್ನದಲ್ಲ ನಿನ್ನದೀಗ ಎಂಬ ಹಾಗೆದೇಹಿ ಚಿದಾನಂದ ಬಗಳೆ ನೀನು ನಾನೆ ಎಂಬ ಹಾಗೆ3
--------------
ಚಿದಾನಂದ ಅವಧೂತರು
ಭಿಕ್ಷೆಬೇಡಿದವರು ರಾಜ್ಯ ರಕ್ಷಿಸ ಬಲ್ಲವರಲ್ಲಭಕ್ಷಿಸಿರೊ ಬಂಡಿ ತುಂಬ ಭಕ್ಷ್ಯ ತುಪ್ಪವೆಲ್ಲ ಪ.ಹಿಂದೆ ಧರ್ಮರಾಯ ರಾಜ್ಯ ಎಂದೂ ಕಂಡವನಲ್ಲಅಂದು ಕರಡಿ ಕುಲದವನಂತೆಂದು ರಾಯ ಬಲ್ಲ 1ಮಾತಿಲೆ ಜಾಣನು ಭೀಮ ಮಾತು ಮಾಯಾವಿಯಲ್ಲಖ್ಯಾತಿ ಹೇಳಲು ಒಂದು ಕೋತಿ ಕುಲದವನಲ್ಲ 2ಮ್ಯಾಲೆ ಗರವಿನ ಪಾರ್ಥನಿಗೆ ವಾಲಿಯೆಂಬೊ ಕೋತಿಮ್ಯಾಲೆ ತಮ್ಮನ ಮಡದಿಯ ಕೆಡಸಿದ ಏನು ಹೇಳಲಿ ಖ್ಯಾತಿ 3ಆತ ನಕುಲ ಸಹದೇವ ಬಲು ಕುಲಖ್ಯಾತಿಯ ಕೋತಿಗಳುಕುದುರೆ ಜಾತಿಯಲ್ಲಿ ಜನಿಸಿದ ಮ್ಯಾಲಿನ್ಯಾತರ ದೊರೆಗಳು 4ಅಕ್ಕ ಸಿಂಹಾಸನಕೆ ಇವರು ತಕ್ಕ ಪುರುಷರಲ್ಲನಕ್ಕಿಹನು ರಾಮೇಶ ಇದಕೆ ಮಿಕ್ಕ ರಾಯರೂ ಎಲ್ಲ 5
--------------
ಗಲಗಲಿಅವ್ವನವರು
ಭೂರಿಕರುಣಿ ಹನುಮ ಪಾಲಿಸುಪ.ಬೀರಕಬ್ಬಿಯ ಕೃಷ್ಣಾತೀರನಿವಾಸಭಾರತಮಲ್ಲ ಬುಧರ ಪರಿತೋಷ ಅ.ಪ.ಕರ್ತನ ನೇಮದಿ ಕಡಲ ಕಾಲುವೆ ಮಾಡಿಅರ್ತಿಲಿ ದಾಟಿ ರಕ್ಕಸರ ಪಟ್ಟಣದಿಕೀರ್ತಿಯ ಬೆಳಗಿದೆ ವನವ ಕಿತ್ತು ವಿನೋದಮೂರ್ತಿಬಲ್ಲಿದರಾಮನ ಬಂಟನಹುದೊ1ಭೀಕರಅಕ್ಷಮೊದಲಾದರೊದೆದುಏಕಜ್ವಾಲೆಯಲಿ ಲಂಕೆಯ ಸುಟ್ಟು ನಲಿದುಕಾಕುತ್ಸ್ಥನಿಗೆ ಸೀತೆ ಕುಶಲವ ಮುಟ್ಟಿಸಿದೆ ಮೂಲೋಕದಿ ನಿನಗೊಬ್ಬ ಸಮನೆನ್ನಬಹುದೆ 2ಅತಿ ಘಾತಿಸಿಕೊಂಡು ಕಪಿಗಳು ರಣದಲಿಮೃತ ವಿಕ್ರಮರಾಗಿ ಹರಣಗುಂದಿರಲುಮೃತ ಸಂಜೀವನವ ತಂದು ರಕ್ಷಿಸಿದೆ ಅಪ್ರತಿಮ ಪ್ರಸನ್ವೆಂಕಟೇಶಗರ್ಪಿಸಿದೆ 3
--------------
ಪ್ರಸನ್ನವೆಂಕಟದಾಸರು