ಒಟ್ಟು 24320 ಕಡೆಗಳಲ್ಲಿ , 137 ದಾಸರು , 9123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರದೇವರ ಸ್ತುತಿ ಪರಾಕು ಸಜ್ಜನಪ್ರೇಮಿಪ. ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ- ಕರ ಮಕುಟಲಲಾಮಅ.ಪ. ಭೋಗೀಂದ್ರ ಫಣಾಮಣಿಮಂಡನ ಸ- ದ್ಯೋಗೀಂದ್ರ ಮನೋವಿಶ್ರಾಮಿ ಭಾಗೀರಥಿ ಸುತರಂಗೊತ್ತುಂಗ ಮಹಾ ಸಾಗರ ತೇ ನೌಮಿ1 ಕೇವಲ ಪಾಪಿ ಸದಾವ್ರತಹೀನನ ಕಾವುದು ಗೋಪತಿಗಾಮಿ ನೀನೊಲಿದರೆ ಮತ್ತಾವುದು ಭಯ ಮಹಾ- ದೇವ ವಶೀಕೃತಕಾಮಿ2 ಲಕ್ಷ್ಮೀನಾರಾಯಣದಾಸಾರ್ಯ ಮ- ಹೋಕ್ಷಧ್ವಜ ಸುರಸುಕ್ಷೇಮಿ ದಕ್ಷಾಧ್ವರಹರ ವರಪರಮೇಶ ಮು- ಮುಕ್ಷುಜನಾಂತರ್ಯಾಮಿ3
--------------
ತುಪಾಕಿ ವೆಂಕಟರಮಣಾಚಾರ್ಯ
ರುದ್ರದೇವರು ಇಂದು ಶೇಖರ ಶಿವ ನಂದಿವಾಹನ ಶೂಲಿ ಸ್ಕಂಧಗಣಪರ ತಾತ ದಂದಶೂಕಕಲಾಪ ಪುರಂದರ ಮುಖಸುರ ವೃಂದವಿನುತ ಪಾದಾದಿಂದ ಶೋಭಿತ ದೇವ ಕಂದು ಕಂಧರ ತ್ರಿಪುರ ಸಂದೋಹಹರ ಹರ ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ ಇಂದು ಪೂರ್ತಿಸೋ ಗುರೋ ಗಂಧವಾಹನ ತನಯಾ ಇಂದಿರಪತಿ ಗುರುಜಗನ್ನಾಥವಿಠಲಾ ನಂದಾ ಬಡುವನಿದಕೆ ಸಂದೇಹ ಇನಿತಿಲ್ಲಾ
--------------
ಗುರುಜಗನ್ನಾಥದಾಸರು
ರುದ್ರದೇವರು ಉಮೇಶಾ ಪರಿಪಾಲಿಸೊ ಪ ಉಮೇಶ ಪಾಲಿಸು ರಮೇಶನ ಪಾದ ಕಮಲಗಳಿಗೆ ಭ್ರಮರನೆನಿಸಿ1 ಕಾಲನಿಯಾಮಕ ನೀನಾಗಿ ಜಗವನು ಲೀಲೆಯಿಂದಲಿ ಕಾವ ಶೂಲ ಪಾಣಿಯೆ 2 ಸಿರಿ ಶೇಷಾವಿಠ್ಠಲನ ದಾಸನೆನಿಸಿ ಸಂತೋಷಗೊಳಿಸೊ 3
--------------
ಬಾಗೇಪಲ್ಲಿ ಶೇಷದಾಸರು
ರುದ್ರದೇವರು ಕರುಣ ಬಾರದೇ ನಿನಗೆ ಅಕಟಕಟಪಾರ್ವತೀ ಧೊರೆಯೇ ಕಾಳಿಯ ಮರಿಯೇ ಪ ತರುಳನಾ ತರುಳಿಯ ಭವದೊಳಗೆ ಬಲು ದಿವಸ ಬಹು ವ್ಯಾಧಿಯಲಿ ನೊಂದು ಬಾಯ್ತೆರದು ಮೊರೆಯಿಡುವುದಕಂಡು 1 ಸಾರ ಚರಣಕ್ಕೆ ಬಿದ್ದಿಹನೆಂದು ಉದಾಸಿಸದೆ ಸಲಹೋ ಕರುಣೀ 2 ಏಸೇಸು ಜನುಮದೊಳು ದಾಸ ನಾನಿನಗಯ್ಯ ಈಶ ನೀನೆಂದು ಮರೆಪೊಕ್ಕೆ ಜೀಯ್ಯಾ 3 ಅಭಯ ನೀನಿತ್ತು ಭಯ ಪಾಲಿಸದಿರೆ ಗತಿ ಯಾರೋ ಎನಗೆ ಇಂದ್ರಾದ್ಯಮರ ಗಣಗಳಿಗೆ ದಾತನೆನಿಪ ಗುರು-ತಂದೆವರದಗೋಪಾಲವಿಠಲನ ದೂತಾ 4
--------------
ಗುರುತಂದೆವರದಗೋಪಾಲವಿಠಲರು
ರುದ್ರದೇವರು ಪಾಲಿಸೊ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ಪ ವೇದವೇದಾಂತ ಪುರಾಣಗಳೆಲ್ಲನೀದಯಾಳುವೆಂದು ಪೊಗಳುತಿರೆಹಾದಿಬೀದಿ ದೇವತೆಗಳಿಗೆರಗಿ ನಾಖೇದಬಟ್ಟು ನಿನ್ನ ಮೊರೆ ಹೊಕ್ಕೆ ಮಹದೇವ 1 ತುಂಗಾ ಕುಮದ್ವತಿ ಸಂಗಮೇಶ್ವರ ನಿನ್ನಕಂಗಳಿಂದಲಿ ನೋಡೂ ಕರುಣದಿಂದಕಂಗೆಟ್ಟು ಕಳವಳಿಸುತಿರೆ ನೀ ನೋಡಿಭಂಗಪಡಿಸಿದರೇನು ಭಾಗ್ಯವು ಬರುವದು 2 ಆಪತ್ತು ಕಳೆದು ಸಂಪತ್ತು ನೀಡಿ ನಿನ್ನರೂಪವ ತೋರಿಸೋ ತ್ವರಿತದಲಿಗೋಪತಿಕೃಷ್ಣವಿಠಲನೆಲ್ಲ ಲೋಕವವ್ಯಾಪಿಸಿರಲು ಸಂದೇಹ ವ್ಯಾತಕಯ್ಯಾ 3
--------------
ಗೋಪತಿವಿಠಲರು
ರುದ್ರದೇವರು ಶಿವನೆ ನಾ ನಿನ್ನ ಕರೆಯುವೆ ಬಾರೊ ಪ ಗಿರಿಜಾಮನೋಹರನೆ ಶಂಕರನೆ ಅ.ಪ. ನೀಲ ಹರಳಿನಂತ್ಹೊಳೆವುದು 1 ಬಾಲಮುನಿಯು ತನ್ನ ಕೇಳಿ ಮೃತಿಯನುನೀಲ ಲೋಹಿತಾ ನಿನ್ನ ಸೇವೆಯ ಮಾಡಿದನುಕಾಲನ ಜೈಸುತ ಬಹಳ ಆಯುಷ್ಯವಿತ್ತವ್ಯಾಳಚಲಾಂತಕ ಶ್ರೀಶೈಲದಿ ನಿಂತೆ 2 ಮಂದರುಗ್ಮಿಯು ತಪದಿಂದ ಒಲಿಸಲುಬಂದು ಶಾಪವ ನೀಡಿ ತಂದಿ ಕ್ಷಿತಿಯೊಳುಇಂದಿರೇಶನ ದ್ವೇಷ ಎಂದು ಮಾಡುವಿ ಶಾಪಅಂದೇ ಬರುವದು ಮಂದಿರಕೋ ಇತಿ 3
--------------
ಇಂದಿರೇಶರು
ರುದ್ರದೇವರು ಶಿವನೆ ನಾ ನಿನ್ನ ಸೇವಕನಯ್ಯ ದುಮ್ಮಾನ ಬಿಡಿಸಯ್ಯ ಸುಜನ ಸಹಾಯ ಸಿರಿಧರನರಮಯ್ಯ ಪ ಭಾಗವತ ಶಾಸ್ತ್ರವನು ಅವನೀಶಗೆ ಪೇಳ್ದವ ನೀನಲ್ಲವೆ ಅ.ಪ. ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ ಸಾಂಬ ಸುರಪಾದ್ಯರ ಬಿಂಬ ವೈಕಲ್ಯಾಸ್ಪದವನು ಕಳೆದೊಮ್ಮೆಲೆ ವೈಕುಂಠಕೆ ಕರೆದೊಯ್ಯೊ ಕರಿಗೊರಳಾ 1 ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳ ಕಾವ ಸ್ತುತ್ಯಾದ್ರಿಜಾಪತಿ ಜತತೀವನದಾವ ದುರಿತಾಂಬುಧಿ ನಾವ ಕೃತ್ತಿವಾಸ ಉನ್ನತ್ಯವರಾಧಗ - ಳೆತ್ತಿಣಿಸದೆ ಕೃತಕೃತ್ಯನ ಮಾಡೈ 2 ಗಂಗಾಧರ ಷಣ್ಮುಖ ಗಣಪರ ತಾತ ತ್ರೈಲೋಕ್ಯಖ್ಯಾತ ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ ತುಂಗ ಮಹಿಮ ನಿಸ್ಸಂಗ ಹರಿಯದ್ವತೀ ಯಂಗ ಡಮರು ಶೂಲಂಗಳ ಧರಿಸಿಹ 3 ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ ಸಂಚಿಂತನ ಮಾಡುವ ಸಂತತ ನೇಮ ಶ್ರೀರಾಮನಾಮ ಪಂಚಶರಾರಿ ವಿರಿಂಚಿಕುವರ ನಿ - ಷ್ಕಿಂಚನರೊಡೆಯನ ಮಂಚಪದಾರ್ಹನೆ4 ಸ್ಪಟಿಕಾಭ ಕಪಾಲಿ ಕಾಮಿತಫಲದ ಫಲ್ಗುಣಸಖ ಶ್ರೀದ - ವಿಠಲಾಶ್ರಯವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ ಕುಟಿಲರಹಿತ ಧೂರ್ಜಟಿ ವೈಷ¨sಕಧ್ವಜ ನಿಟಿಲನಯನ ಸಂಕಟವÀ ನಿವಾರಿಸೊ 5
--------------
ಶ್ರೀದವಿಠಲರು
ರುದ್ರದೇವರು ಹರಿ ಭಕುತಿಯ ಪೊಂದಿಸೆಲೋ ಕರುಣದಿ ಗಿರಿಜಾರಮಣ ಪ ದುರುಳ ಜನರು ಅ.ಪ ಗಂಗೆಯ ಶಿರದಲಿ ಧರಿಸಿ ಭುಜಂಗವ ಕೊರಳಲ್ಲಿ ಪೊಂದಿದ ಮಂಗಳ ವರಶೈಲಜೆಯ ಅಪಾಂಗರಸ ಅನಂಗವೈರಿ1 ಶ್ರೀಹರಿಯಾಜ್ಞೆಯನು ವಹಿಸಿ ಮೋಹಶಾಸ್ತ್ರಗಳನು ರಚಿಸಿ ಈ ಮಹಿಯೊಳು ದುರುಳರನ್ನು ಮೋಹಿಸಿದ ಮಹಾದೇವ 2 ಪನ್ನಗಭೂಷಣ ಶಂಕರ ಷಣ್ಮುಗಪಿತ ಚಂದ್ರಮೌಳಿ ಸನ್ನುತಿಸುವೆ ನಿನ್ನ ಮನವಿ ಎನ್ನಲಿ ದಯದಿಂ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ರುದ್ರಾ ವೀರಭದ್ರ ಅದ್ರಿನಂದನೆ ರಮಣಾ ಪ ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ ಅ. ಪ. ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿ ಸರ್ಪಭೂಷಣ ಮೃತ್ಯು ನಿವಾರಣ ವಾಕು 1 ಸದ್ಯೋಜಾತ ಭೂತನಾಥ ಭಕುತರದಾತ ಖದ್ಯೋತ ಲಾವಣ್ಯ ಸುರಜ್ಯೇಷ್ಠನ ಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದ ಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ2 ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ ಜನಿಸಿ ಕಾಡುವ ರೋಗ ಕಳೆಯೊ ಬೇಗ ಅನುಪಮ ವಿಜಯವಿಠ್ಠಲನ ನಾಮಾಮೃತವ ಎನಗುಣಿಸುವುದೋ ಸಾಂಬು ಮರುತ ಪ್ರತಿಬಿಂಬ 3
--------------
ವಿಜಯದಾಸ
ರೂಪನ ಗುಡಿನಿ¯ಯಾ ವೇಂಟಕರಾಯಾ ರೂಪನ ಗುಡಿ ನಿಲಯಾ ವ್ಯಾಪಕ ಜಗತ್ರಯ ಕಾಪಾಡುವ ಭಾರತರ್ಕನು ದಾಸರ ಪ ದಂಡಿ ದಾನವಮರ್ದನ ಸಕಲಜಗ ಉ- ದ್ದಂಡ ರಕ್ಷಕ ಪಾವನಾ ಚಂಡ ಪ್ರ- ಚಂಡ ಮಾರ್ತಾಂಡ----ದ್ಭವ ಕುಂಡಲಿ ಶಯನ ಕೋದಂಡ ಪಾಣಿ ಹರಿ 1 ಗಂಗಾಜನಕ ದೇವಾ ಸಕಲಮೋಹ- ನಾಂಗನಾ ಪಡೆದನಾ ಶೃಂಗಾರದಲಿ ಕುಜ ರಂಗ ಮಂಟಪದಲಿ ಮಂಗ ಳಾಂಗಿಯ ಬಿಡದೆ ಮಡಗಿಸಿ ಇರುವಂಥಾ 2 ಮಂದರಾದ್ರಿಯ ಧರಿಸಿ ಸುಜನರಿಗೆ ಆ- ನಂದದಿ ಸುಧೆಯನುಣಿಸಿ ಅಂದು ಭಕ್ತರ ಆನಂದದಿ ಸಲುಹಿದ ತಂದೆ 'ಹೊನ್ನ ವಿಠ್ಠಲ’ ದಯಮಾಡಿ ಸಲಹಯ್ಯಾ 3
--------------
ಹೆನ್ನೆರಂಗದಾಸರು
ರೋಗವನು ಪರಿಹರಿಸೊ ಗುರು ರಾಘವೇಂದ್ರಾ ಪ ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ ಅ.ಪ. ಅರಿಯದಾ ತರಳ ತನ್ನ ನಿಜಮತಿಯಿಂದ ದೂಷಿಸಲಿಲ್ಲ ಪರರ ಮಾತನು ಕೇಳಿ ದೂಷಿಸಿದನಲ್ಲದೇ 1 ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು ಇನ್ನುಂಟೆ ಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ 2 ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡುಬೆಂಡಾದಾತಂದೆವರದಗೋಪಾಲವಿಠ್ಠಲ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ ಮಾದ್ರಿಯುದ್ಭವಿಗೆ ನಮೋ ನಮೋ ಪ ರುದ್ರರೂಪೆ ದಾರಿದ್ರ್ಯಮರ್ದನಿ ರುದ್ರನರ್ಧಾಂಗಿಗೆ ನಮೋ ನಮೋ ಅ.ಪ ನಿಗಮಾತೀತೆ ಮಹದಾಗಮನುತೆ ತ್ರೈ ಜಗದ ಮಾತೆಗೆ ನಮೋ ನಮೋ ಸುಗುಣಸಂತಜನರಘನಾಶಿನಿ ಸುಖ ಸ್ವರ್ಗಾಧಿಕಾರಿಗೆ ನಮೋ ನಮೋ 1 ಮೃಡಮೃತ್ಯುಂಜನನೆಡದೊಡೆಯೊಳು ಕಡುಸಡಗರವಾಸಿಗೆ ನಮೋ ನಮೋ ದೃಢತರ ಭಕ್ತರ ದೃಢದ್ವಾಸಿನಿ ಜಗ ದೊಡೆಯ ಮೃಡಾಣಿಗೆ ನಮೋ ನಮೋ 2 ಕಮಲೆ ಕಾತ್ಯಾಯಿನಿ ಉಮೆ ಶಿವೆ ಸಾವಿತ್ರಿ ಕಮಲನೇತ್ರೆಗೆ ನಮೋ ನಮೋ ಸುಮನ ಸೌಭಾಗ್ಯ ಶಮೆ ದಮೆ ದಯಾನ್ವಿತೆ ವಿಮಲ ಚರಿತ್ರೆಗೆ ನಮೋ ನಮೋ 3 ಭಂಡದನುಜಕುಲ ರುಂಡ ಚೆಂಡಾಡಿದ ಪುಂಡ ಉದ್ದಂಡೆಗೆ ನಮೋ ನಮೋ ಖಂಡ ಕಿತ್ತು ಖಳರ್ಹಿಂಡು ಭೂತಕಿತ್ತ ಚಂಡಿ ಚಾಮುಂಡಿಗೆ ನಮೋ ನಮೋ 4 ರಕ್ತಬೀಜರೆಂಬ ದೈತ್ಯರ ಮದ ಮುರಿ ದೊತ್ತಿದ ವೀರೆಗೆ ನಮೋ ನಮೋ ಮತ್ತೆ ಶುಂಭರ ಶಿರ ಮುತ್ತಿ ಕತ್ತಿರಿಸಿದ ಶಕ್ತಿ ಶಾಂಭವಿಗೆ ನಮೋ ನಮೋ 5 ಓಂಕಾರರೂಪಿಣಿ ಹ್ರೀಂಕಾರಿ ಕಲ್ಯಾಣಿ ಶಂಕರಿ ಶರ್ವಾಣಿಗೆ ನಮೋ ನಮೋ ಮ ಹಂಕಾಳಿ ನತಸುಖಂಕರಿ ಪಾರ್ವತಿ ಶಂಕರನರಸಿಗೆ ನಮೋ ನಮೋ 6 ಶೌರಿ ಔದರಿಯ ಶಾರದೆ ಶ್ರೀಕರಿ ಶೂರ ಪರಾಂಬೆಗೆ ನಮೋ ನಮೋ ಪಾರಾವಾರ ದಯೆಕಾರಿ ನಿರಾಮಯೆ ಧೀರ ಚಿದ್ರೂಪೆಗೆ ನಮೋ ನಮೋ 7 ಉಗ್ರರೂಪಿ ಭವನಿಗ್ರಹ ದುಷ್ಟ ಸ ಮಗ್ರ ಹರಿಣಿಗೆ ನಮೋ ನಮೋ ಆಗ್ರಭಕ್ತರಿಷ್ಟ ಶೀಘ್ರ ಕೊಡುವ ಜೈ ದುರ್ಗಾದೇವಿಗೆ ನಮೋ ನಮೋ 8 ಹೈಮಾವತಿಯೆ ನಿರ್ಮಾಯೆ ಮೂರುತಿ ಕೋಮಲ ಹೃದಯೆಗೆ ನಮೋ ನಮೋ ಭೀಮಪರಾಕ್ರಮಿ ರಾಮದಾಸಜನ ಪ್ರೇಮಪೂರ್ಣಿಗೆ ನಮೋ ನಮೋ 9
--------------
ರಾಮದಾಸರು
ಲಕುಮಿ ಸಾಮ್ರಾಜ್ಯ ಶರಧಿಗಮೃತಾಂಶು ನೇತ್ರ ಪ ಸೂತ್ರ ಅ.ಪ. ನಿತ್ಯ ಕಲ್ಯಾಣ ಸಾಗರನೆ ಶಶ್ವದೇಕ ಸಿಂಧು ಕೊಡು ಭಕ್ತಿಪಾಕ ಭಕ್ತವತ್ಸಲನೆ ಕೃಪಾಪೂರ್ಣಾವಲೋಕ ದುರಿತ ತಿಮಿರಾರ್ಕ 1 ನಿರುತ ಪರಿಪೂರ್ಣ ಸೌಲಭ್ಯ ಸುಗುಣವನಧಿ ನಿತ್ಯ ಸ್ವಾನಂದ ಪೂರ್ಣ ಮೋದಿ ಕರೆವ ಭಕ್ತರಾತುರಕೆ ಬರುವನವಸರದಿ ಗರೆವ ಸರ್ವಾರ್ಥ ಸಲಹಿ ಶರಣರನು ಛಲದಿ 2 ವಿಮಲ ಲಾವಣ್ಯ ಶೃಂಗಾರ ಸಿಂಧುಕಾಯ ಅಮಿತ ಉತ್ತಮ ಜಯೇಶವಿಠಲರಾಯ ಕಮಲಭವ ವಾಯು ರುದ್ರಾದಿ ದೇವ ಧÉ್ಯೀಯ ಅಮೃತ ಸೌಭಾಗ್ಯ ಸ್ವೀಯ 3
--------------
ಜಯೇಶವಿಠಲ
ಲಕುಮಿವಲ್ಲಭ ಹರಿಯ ಮಂದಿರದಿಂದ ಬಕುಳೆ ಬಂದ ಪರಿಯ ನಗುತ ಸದ್ಯುಕುತಿಯಿಂದಲಿ ಪೇಳ್ದಳು ಪ. ಯಾರು ಬಲ್ಲರಿವನ ಸಂಸ್ಥಿತಿಯನ್ನು ನೀರೆ ನೀ ಪೇಳ್ವದನ ದಾರಿಯ ಪೇಳೆ ಜಾಣೆ 1 ಕ್ಷೀರಾಂಬುಧಿವಾಸನ ಸಕಲಗುಣ ವಾರುಧಿ ವರದೇಶನ ಸಾರಿ ಸಾರಿಗೆ ಸರ್ವ ಸುರಮುನೀಶ್ವರರೆಲ್ಲ ಸೇರಿ ಬಾಳುವರೀತನ 2 ಮಾತಿಗೆ ದೊರೆಯನಂತೆ ಮನೋಗತಿ ನೀತಿಯು ನಡೆಯದಂತೆ ಜಾತಿ ಗೋತ್ರ ಬಂಧು ಜನರಿಲ್ಲದವನಿಗಿನ್ಯಾತಕೆ ಪರಿಣಯವು 3 ಭೂತೇಂದ್ರಿಯ ಮನವು ಬಲಿಷ್ಠ ಮಹಾತತ್ವ ಹಂಕೃತಿಯು ಶ್ರೀ ತರುಣಿಯ ಗುಣ ತ್ರಯಮುಖ ತತ್ವ ಸಂಘಾತವೀತನಿರಲು 4 ಮನೆಯ ಕಟ್ಟಿದನೆಂಬೊರು ನಿಜವಾಗಿ ಪೇಳು 5 ಸಕಲ ಜಗನ್ನಿವಾಸ ಸಾಂಗೋಪಾಂಗ ಮುನಿಗಳ ಸರಿವನಂತೆ ತನುಮನದಲಿ ತನ್ನ ನೆನೆವರ ಕೃತ್ಯಗಳನು ತಾನೆ ಮಾಳ್ಪನಂತೆ 6 ಮನೆವಾರ್ತೆಗಳ ಬಿಟ್ಟು ಸಂಚರಿಸುವ ಮುನಿಗಳ ಸರಿವನಂತೆ ತನುಮನದಲಿ ತನ್ನ ನೆನೆವರ ಕೃತ್ಯಗಳನು ತಾನೆ ಮಾಳ್ಪನಂತೆ 7 ದಾಸರ ಪಾಲಿಪುದು ಎಂದೆಂದಿಗು ಶ್ರೀಶನ ಮಹಬಿರುದು ದೋಷದೂರನಾದರಿಂದ ಮೌನಿ ಮನೋವಾಸನಾಗಿಹ ನೆರದು 8 ಕುಲಹೀನನಾಗಿ ಕಲ್ಪಾಂತದೊಳಿರುವಗೆ ಲಲನೆಯ ನಿಪ್ಪುದೆಂತೆ 9 ಸುಧೆಯನು ತಾನೆ ತಂದ ಮುದವ ತೋರಿದ ಮುಕುಂದ 10 ಹೊಡದಾಡಿ ಬರುವನಂತೆ ಕೊಡುವದೆಂತೆ 11 ಮಗುವಿನ ಮಾತ ಕೇಳಿ ತಕ್ಷಣ ನರಮೃಗನಾಗಿ ಕೋಪತಾಳಿ ಬಗೆದು ಬಲಿಷ್ಠ ದೈತ್ಯನು ಸುಲಭದಿ ಬೇಗ ತೆಗೆದನು ಕರುಳನಂತೆ 12 ಸಿರಿಯನಾಳುವನಾದರೆ ದೈತ್ಯರ ಮುಂದೆ ತರಿವುದು ಸರಿಯೆ ನೀರೆ ಮರುಳು ಮಾತುಗಳಾಡಲ್ಯಾತಕೆ ಸುಮ್ಮನೆ ಥರವಲ್ಲ ಹಿಂದೆ ಸಾರೆ 13 ಕೃತ್ರಿಮ ದ್ವಿಜನಿವನು ಭೂಭಾರಕ ಕ್ಷತ್ರ ಸಮೂಹವನು ಶಸ್ತ್ರ ಪಿಡಿದು ಬುಡ ಕತ್ತ್ರಿಸಿ ಮಡುಗಳ ನೆತ್ರದಿ ರಚಿಸಿದನು 14 ದಾನವರನು ಗೆಲಲು ಚಪಲ ಬುದ್ಧಿ ವಾನರರನು ಒಲಿಸಿ ಪೇಳ್ವ ಹೀನವಾರ್ತೆಗಳೇನಿದು 15 ಧರೆಯ ಭಾರವನಿಳುಹಿ ಸಕಲ ಸುರವರ ಮುನಿಗಳ ಸಲಹಿ ತೆರವ ತೋರಿದ ಕೃಷ್ಣನು 16 ಜೈನರ ಸಭೆಯೊಳಗೆ ಮೈಯೊಳು ವಸ್ತ್ರಹೀನನಾಗಿರುವ ಬಗೆ ನಾನರಿಯೆನೆ ಬಹು ಮಾನ ಬಿಟ್ಟವನಿಗೆ ಏನೆಂದು ಮಗಳೀವನೆ 17 ಕೊಲುವನು ಖಡ್ಗದಲಿ ನಿಖಿಳ ಕುಲವನುದ್ಧರಿಸುವನು 18 ಏನೆಂದರು ಮನದಿ ನಿರ್ಣಯ ತೋರದೇನು ಮಾಡಲಿ ಕೆಳದಿ ಮಾನಿನಿ ಶಿರೋಮಣಿಯೆ 19 ದೋಷ ಲೇಶಹೀನನು ಸಕಲಗುಣ ಭೂಷಿತ ಶ್ರೀವರನು ಶೇಷ ಗಿರೀಶನೆನಲು ತನ್ನ ಮಗಳೀವ ಭಾಷೆಕೊಟ್ಟಳು ಧರಣಿ 20
--------------
ತುಪಾಕಿ ವೆಂಕಟರಮಣಾಚಾರ್ಯ
ಲಂಕೆ ನಿರ್ಧಾಮ ಮಾಡಲು ಇಲ್ಲದೆ ಈ ಸೀತಾ ಲಲನೆ ಕ್ಷೇಮವು ತರಲು ಶಂಕೆಯಿಲ್ಲದ ಬಿರುದಾಂಕನ ಸೇವಕರು ಅಂಕರಲಿ ಪೇಳಿರಲಧಿಕ ಬಲವಂತರೆಲ್ಲಾ ಪ ಭೇದಿಸಿ ದೈತ್ಯರ ಹಿಡಿಯಲೊ ಆಪುರಿಸೇರಿ ಹೊಡೆದು ಮಾರಿಯ ಮಾಡಲು ದೃಢವು ಎನ್ನಯಮಾತುಬಿಡದೆ ಆರಾವಣನಾ ಹೊಡೆದು ಹೆಡ ಮುಡಿ ಕಟ್ಟಿ ----ಲ್ಲಿ ತರಲು ಇಲ್ಲದೆ 1 ವಾರಿಧಿ ಲಂಘಿಸಲು ಒಳಹೊಕ್ಕು ದೈತ್ಯ ವಂಶವೇ ಭೇದಿಸಲೆ ಸಾರಿ ಹೇಳುವೆ ಇನ್ನು ಸರಸಜ್ಞರೆಲ್ಲ ಕೇಳಿ ವಾರೆಲ್ಲ ಎನ್ನ ಮಾತು ಒಂದೇ ನಿಮಿಷದಿ ಹೇಳಿನ್ನೂ 2 ನಿಟ್ಟಾಗಿ ಒಳಹೋಗಲು ಹೋಗುತಲಿ ನಗರಸುಟ್ಟು ಬೂದಿಯ ಮಾಡಲು ಘಟ್ಟ್ಯಾಗಿ ಕೇಳಿರಿನ್ನು ಘನ 'ಹೊನ್ನವಿಠ್ಠಲ 'ನಾದ ಧಿಟ್ಟ ಶ್ರೀರಾಮರ ಭಂಟ ಹನುಮಂತನಾನು 3
--------------
ಹೆನ್ನೆರಂಗದಾಸರು