ಒಟ್ಟು 1850 ಕಡೆಗಳಲ್ಲಿ , 111 ದಾಸರು , 1558 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಕಜ ಪತಿ | ಪಂಕಜ ಸಖ ಸಂಕಾಶಾನೇಕಾ | ಸಂಕಟಳಿದು ನಿಃಶಂಕನ ಮಾಡೊ | ಅಂಕೆಯವನೆಂದು || ಪ ಬಂದೆ ಎದುರಿಲಿ ನಿಂದೆ ಸಿರಬಾಗಿ | ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ | ತಂದೆ ನಿನಗ ಇಂದೆ ಅಂದದನು | ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ | ಎಂದೆಗೆಂದಿಗೆ ಮುಂದೆ ಜನನಗಳು 1 ನೋಡು ಎನ್ನ ಕೂಡಾಡು ದಯವನ್ನು | ಮಾಡು ಮುದದಿಂದಲಾಡು ಮಾತನು | ನೀಡು ಕರುಣವ | ಹೋಡುಗಾರರು ಬೀಡಿನೊಳಗಿದ್ದು | ಕಾಡುವದು ನಾನಾಡಲೇನು | ಈಡು ನಿನಗೆಲ್ಲಿ ನಾಡೊಳು ಕಾಣೆ ಮೂಡಲಾದ್ರಿ ನಿಲಯಾ 2 ಸಾರಿದೆನೊ ಮನಸಾರ ನಿನ್ನಂಘ್ರಿ ಸಾರಾ| ಸಾರವೆಂಬದಾಸಾರವನು ನೂಕಿ | ಸಾರ ಹೃದಯರ ಸಾಲೆಲಿರಸೆನ್ನ | ಕಂಸಾರಿ ಪ್ರತಿದಿನ | ಸಾರಥಿಯಾಗೊ ಸಾರಿಸಾರಿಗೆ | ಸಾರಬೋಕ್ತಾ ವಿಜಯವಿಠ್ಠಲ ಕೆಲಸಾರದೆ ಸಾರಲಿರೊ 3
--------------
ವಿಜಯದಾಸ
ಪಚ್ಚೆಯ ಬಂದೀಗ ಶ್ರೀ ಪುಲಿಗಿರಿ ಪಚ್ಚೆಯ ನೋಡಿ ಬೇಗ ಪ ಸಚ್ಚಿದಾನಂದರೂಪಚ್ಚರಿಯಾದಂಥ ಮುಚ್ಚುಮರೆಯಿಲ್ಲದಚ್ಚುತನೆಂಬುವ ಅ.ಪ ಕೈಗೆ ಸಿಕ್ಕುವುದಲ್ಲವೈ ತಕ್ಕಡಿಯಲ್ಲಿ ತೂಗಿ ನೋಡುವುದುಲ್ಲ ವೈ ಯೋಗಿ ಹೃದಯದಲ್ಲಿ ಭಾಗವತರೊಳನುರಾಗದಿ ಮೆರೆಯುವ 1 ಬೆಲೆಯ ಕಟ್ಟುವದಲ್ಲವೈ ಈ ಪಚ್ಚೆಯ ನೆಲೆಯ ಕಂಡವರಿಲ್ಲವೈ ನಲಿದು ಧ್ಯಾನಿಪರಿಗೆ ಒಲಿದು ತೋರುವ ದಿವ್ಯ ಜಲಧರವರ್ಣದ ಜಲಜಾಕ್ಷನೆಂಬುವ 2 ಧರೆಯೊಳುತ್ತಮವಾಗಿಹ ಶ್ರೀ ಪುಲಿಗಿರಿಯೆಂಬ ಗಿರಿಯೊಳು ನೆಲೆಯಾಗಿಹ ಚರಣವ ನಂಬಿದ ಶರಣರ ಪೊರೆಯುವ ವರದವಿಠಲ ದೊರೆ ವರದೆನಂದೆಸರಾದ3
--------------
ವೆಂಕಟವರದಾರ್ಯರು
ಪಚ್ಚೆಯು ಬಂತೀಗ-ಶ್ರೀಪುಲಿಗಿರಿ ಪಚ್ಚೆಯ ನೋಡಿ ಬೇಗ ಪ ಮುಚ್ಚುಮರೆಯಿಲ್ಲದಚ್ಚುತ ನೆಂಬುವ ಅ.ಪ ಕೈಗೆ ಸಿಕ್ಕುವದಲ್ಲವೈತ-ಕ್ಕಡಿಯಲ್ಲಿ-ತೂ ಗಿನೋಡುವದಲ್ಲವೈ ಯೋಗಿ ಹೃದಯದಲ್ಲಿ ಭಾಗವತರೊಳನುರಾಗದಿಮೆರೆಯುವ 1 ಬೆಲೆಯ ಕಟ್ಟುವದಲ್ಲವೈ ಈ ಪಚ್ಚೆಯ ನೆಲೆಯಕಂಡವರಿಲ್ಲವೈ ನಲಿದು ಧ್ಯಾನಿಪರಿಗೆ-ಒಲಿದು ತೋರುವ ದಿವ್ಯ ಜಲಧರವರ್ಣದ ಜಲಜಾಕ್ಷನೆಂಬುವ 2 ಗಿರಿಯೊಳು ನೆಲೆಯಾಗಿಹ ವರದವಿಠಲ ಧೊರೆವರದನೆಂದೆಸರಾದ 3
--------------
ಸರಗೂರು ವೆಂಕಟವರದಾರ್ಯರು
ಪಂಢರಿನಾಥ ವಿಠಲ | ತೊಂಡನನು ಸಲಹೊ ಪ ಅಂಡಜಾದಿಪತುರಗ | ಕುಂಡಲಿಯ ಶಯನಾ ಅ.ಪ. ಭವ ಸಮುದ್ರಕೆ ಪೋತ | ತವಪಾದವಾಶ್ರಯಿಸಿಬವಣೆಗಳ ಕಳೆವೆನೆನೆ | ತವಕದಿಂದಿರುವಾ |ಇವನ ಕೈ ಪಿಡಿಯುತ್ತ | ಧೃವವರದ ಸಲಹೋಮಾಧವನೆ ಭಿನ್ನವಿಪೆ ಶ್ರೀ | ಪವನ ವಂದಿತನೇ 1 ಅಂತರಂಗದ ದೈತ್ಯ | ಸಂತತಿಯು ಕೊಡುತಿಪ್ಪಸಂತಾಪ ಹರಿಸಿ ಮ | ಧ್ವಾಂತರಾತ್ಮಾ ಹರಿಯೆಸಂತತವು ತವನಾಮ | ಚಿಂತೆಯಲ್ಲಿರಿಸುತ್ತಸಂತಸವ ಬಡಿಸೊ ಶ್ರೀ | ಕಂತುಹರಸಖನೇ 2 ಇಂದು | ಆಶಿಸುತ್ತಿಹನೇ |ಲೇಸಾದ ಸತ್ಪಂಥ | ದಾಶಯವ ತಿಳಿಸುತ್ತದಾಸನಾಗೆಂದೆನುತ | ಆಶಿಷವನೀವೇ 3 ಹರಿಗುರೂ ಸದ್ಭಕ್ತಿ | ಪರತತ್ವ ಸುಜ್ಞಾನಮರುತ ಮತ ದೀಕ್ಷೆಯನು | ವಿಷಯ ವೈರಾಗ್ಯ |ಕರುಣಿಸುತ ತರಳನ್ನು | ಪೊರೆಯೆಂದು ಬಿನ್ನೈಪೆಕರಿವರದ ಕಮಲಾಕ್ಷ | ಕಾರುಣ್ಯ ನಿಧಿಯೇ 4 ಗಾನಲೋಲನೆ ಇವಗೆ | ಧ್ಯಾನ ಸಾಧನ ಕೊಟ್ಟುಕಾಣಿಸೋ ಹೃದ್ಗುಹದಿ | ಮೌನಿಜನವಂದ್ಯ |ಜಾಣಗುರೂಗೋವಿಂದ | ವಿಠಲ ಮಧ್ಭಿನ್ನತವನೀನಾಗಿ ಸಲಿಸೆಂದು | ಆನಮಿಸಿ ಬೇಡ್ವೆ5
--------------
ಗುರುಗೋವಿಂದವಿಠಲರು
ಪತಿ ಗೋಪಾಲ | ವಿಠಲ ಕಾರುಣಿಕಾ ಪ ನೀನಾಗಿ ಒಲಿದಿವನ | ಪೊರೆಯೆ ಪ್ರಾರ್ಥಿಸುವೇ ಅ.ಪ. ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸುತ ಸರ್ವಕರ್ತೃ ನಿನ್ನಯ ಸೇವೆ | ಅರ್ಥಿಯಂ ಗೈವೆ |ಅರ್ಥಿಸುವ ನಿನ್ನ ದಾಸತ್ವ ದೀಕ್ಷೆಯನೂಸುಪ್ರೀಶ ತೋರ್ದಪರಿ | ಇತ್ತಿಹೆನೊ ಅದಗೇ 1 ಕರ್ಮನಾಮಕನೆ ದುಷ್ಕರ್ಮಗಳ ಪರಿಹರಿಸಿನಿರ್ಮಲ ಸುಸಾಧನಕೆ | ಸನ್ಮಾರ್ಗ ತೋರೋ |ಮನ್ಮಥನ ಜನಕ ತವ | ನಾಮಸ್ಮರಣೆಯ ಕವಚಪೇರ್ಮೆಯಿ ತೊಡಿಸಿ ಸ | ದ್ಧರ್ಮರಥನೆನಿಸೋ 2 ವೃದ್ಧ ಜನಗಳ ಸೇವೆ | ಬುದ್ಧಿಪೂರ್ವಕಗೈದುಮಧ್ವಮತ ಸಚ್ಛಾಸ್ತ್ರ | ತಿದ್ದಿ ಪೇಳುವಲೀ |ಶುದ್ಧಬುದ್ದಿಯನಿತ್ತು | ಉದ್ದರಿಸಬೇಕಿವನಹದ್ದುವಾಹನದೇವ | ಮಧ್ವಾಂತರಾತ್ಮಾ 3 ಅಧಿಭೂತ ಅಧ್ಯಾತ್ಮ | ಅದಿದೈವದೊಳು ನಿನ್ನಅದುಭೂತ ವ್ಯಾಪ್ತಿಯನೆ | ವದಗಿಸಿ ಮನಕೇ |ಬುಧ ಜನೇಢ್ಯನೆ ದೇವ | ಸದಯದೀ ತರಳಂಗೆಹೃದಯದಲಿ ಮೈದೋರಿ | ಮುದವನೇ ಬೀರೋ 4 ದೀರವನು ಎಂದೆನಿಪ | ಪಾವಮಾನೀಯ ಪ್ರಿಯಕೇವಲಾನಂದಮಯ | ಮಾವಿನೋಧೀಸಾವಧಾನದಿ ತರಳ | ಭಾವುಕಗೆ ಒಲಿಯೆಂದುಓದಿ ಭಿನ್ನವಿಪೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಪತಿ ವಿಠಲ | ಉದ್ದರಿಸೊ ಇವಳ ಪ ಮೋದದಾಯಕನಾಗಿ | ಶ್ರೀದ ಶ್ರೀಹರಿಯೇ ಅ.ಪ. ದಾಸರಾಯರ ಕರುಣ | ವಾಶ್ರಯಿಸಿ ದಿನದಿನದಿಲೇಸು ಕೊಂಡಾಡುತಲಿ | ಮೇಶ ದಾಸರನೂಭಾಸುರ ಸುಗಾನ ಉ | ಲ್ಲಾಸದಲಿ ಮೈಮರೆದುಕೇಶವನ ಗುಣವನಧಿ | ಈಸುವಂತೆಸಗೋ 1 ವ್ಯಾಜ ಕರುಣೀಮಾಜದಲೆ ವೆಂಕಟನ | ನೈಜ ರೂಪವ ಕಂಡವ್ಯಾಜದಲ್ಲಿಂಕಿತಳು | ವಾಜಿ ಮುಖ ಹರಿಯೇ 2 ವಲ್ಲಭೆಯು ಶ್ರೀ ತುಳಸಿ | ಚೆಲ್ವಶಿಲೆ ಸುತ್ತುತಲಿನಲ್ಲ ಹರಿಪರಿ ಪೂರ್ಣ | ಎಲ್ಲೆಡೆಯಲೆಂಬಾಸೊಲ್ಲನಿವಳಿಗೆ ತೋರಿ | ಸಲ್ಲಿಸಿಹ ಹರಿಸೇವೆಬಲ್ಲವರ ಬಲ್ಲರೋ | ಘುಲ್ಲಕರಿಗಲ್ಲಾ 3 ಹರಿಗುರೂ ಸದ್ಭಕ್ತಿ | ಗುರು ಹಿರಿಯರ ಸೇವೆ ಕರುಣಿಸುತ ಕನ್ಯೆಯನು | ಪೊರೆಯುವುದು ಸತತಗಿರಿಜೆ ದರ್ಶನ ಫಲಕೆ | ಸರುವ ಮಂಗಳವಿತ್ತುನಿರುತ ಸಲಹೆಂದಿವಳ | ಪ್ರಾರ್ಥಿಸುವೆ ಹರಿಯೇ 4 ಮಧ್ವರಾಯರ ಮತದಿ | ಶುದ್ಧ ಬುಧಿಯನಿತ್ತುಮಧ್ವೇಶ ಹರಿಪಾದ | ಹೃದ್ಗುಹದಿಕಾಂಬಅಧ್ಯಾನಲ್ಲಿವಳ | ಬದ್ಧಳನೆ ಮಾಡಿ ಪೊರೆಮಧ್ವಾಂರಾತ್ಮ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಪತಿ ವಿಠಲ | ಬುಧಜನೇಡ್ಯಾಮುದದಿಂದ ಲೀಕೆಯನು | ಸಲಹೊ ಶ್ರೀ ಹರಿಯೇ ಪ ನೊಂದು ಭವದಲಿ ಬಹಳ | ಇಂದಿರಾರಮಣ ತವಅಂದ ಪದದಾಸ್ಯ ಮನ | ಮಂದಿರದಿ ಬಯಸೀ |ಬಂದು ಬೇಡ್ದಳಿಗೆ ನಾ | ನೊಂದು ಅಂಕಿತವಿತ್ತೆತಂದೆ ತೈಜಸನೆ ನೀ | ನಂದೆ ಪೇಳ್ದಂತೇ 1 ಬಹಳ ಭಕ್ತಿಯಲಿಂದ | ವಿಹಿತ ಕರ್ಮಾಸಕ್ತೆಅಹಿಶಯ್ಯ ಕೃಪೆಯಿಂದ | ಮಹಿಮೆ ತೋರೀ |ಅಹಿತ ವಿಹಿತಗಳೆರಡ | ಸಹನೆ ದಯಪಾಲಿಸುತಮಹಮಹಿಮ ಪೊರೆ ಇವಳ ಸುಹೃತ ಜನರ ಬಂಧೋ2 ಜ್ಞಾನಾಯು ರೂಪನಿಗೆ | ನೀನಿವಳನೊಪ್ಪಿಸುತಸಾನುಕೂಲಿಸು ಮುಕುತಿ | ಜ್ಞಾನ ಭಕುತಿಗಳಾ |ಕಾಣೆ ತವ ಕಾರುಣ್ಯ | ಕೆಣೆಯು ತ್ರೈಭುವನದಲಿಮಾಣದಲೆ ಪೊರೆ ಇವಳ | ದೀನ ಜನ ಪಾಲಾ 3 ಪತಿ ಕೃಷ್ಣ | ಕಾಳಿಪತಿನುತ ಹರಿಯೆಕಾಳಘಾವಳಿಗಳನು | ಕಳೆದು ಪೊರೆ ಇವಳಾ4 ಪಾವನಾತ್ಮಕ ದೇವ | ಪಾವಮಾನಿಯ ಪ್ರೀಯಜೀವ ಪರತಂತ್ರತೆಯ | ಭಾವ ಅನುಭವದೀದೇವ ಸಾಧನಗೈಸಿ | ಜೀವಿ ಇವಳನು ಪೊರೆಗೋವಿಂದಾಂಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪತಿ ವಿಠಲ ನೀನಿವಳ ಕಾಯಬೇಕೊ ಪ ಕರುಣಾದ್ರ್ರ ಹೃದಯ ನಿನ್ನಡಿಗೆ ಮೊರೆಯಿಡುವೇ ಅ.ಪ. ಮಾನವ ಸುಜನ್ಮದಲಿ ನೀನಿವಳ ತಂದಿರುವೆಜ್ಞಾನಸಾಧನವ ಮಾರ್ಗ ಕಾಣದಲೆ ಬರಿದೇ |ಮಾನಿನಿಯ ಆಯುಷ್ಯ ಬರಿದೆ ಪೋಯಿತು ಹರಿಯೆನೀನಾಗಿ ಸಲಹಿವಳ ದೀನಜನ ಬಂಧೋ 1 ಪಂಚಭೂತಾತ್ಮಕದ ಈ ದೇಹ ಸ್ಥಿರವಲ್ಲಕೊಂಚಮತಿಯನು ಕಳೆದು ಸರ್ವಾಂತರಾತ್ಮ |ಪಂಚಭೇದವನರುಹಿ ಮುಂಚೆ ತರತಮ ತಿಳಿಸಿಪಂಚ ಪಂಚಾತ್ಮಕನೆ ಸಲಹ ಬೇಕಿವಳಾ 2 ಹರಿಗುರೂ ಸದ್ಭಕ್ತಿ ಮರಳಿ ವೈರಾಗ್ಯವನೆ ಕರುಣಿಸೂವುದು ಹರಿಯೆ ದುರಿತಾಂಧ ರವಿಯೆ ಹರಿಗೋಲುಭವನಿಧಿಗೆ ಎಂದೆನಿಪ ತವನಾಮ ಸ್ಮರಣೆ ಸಂತತವಿತ್ತು ಪೊರೆಯ ಬೇಕಿವಳಾ 3 ಜೇನು ಸವಿಯಂತಿಪ್ಪ ಆನಂದಕರ ಶಾಸ್ತ್ರಮಾನನಿಧಿ ಮಧ್ವಾಖ್ಯ ಸಾನುರಾಗದಲೀ |ಕ್ಷೋಣಿಸುರರುದ್ಧಾರ ಕಿತ್ತಿಹುದ ನೀನರುಹಿಜ್ಞಾನಗಮ್ಯನೆ ಕಾಯೊ ಪ್ರಾಣಾಂತರಾತ್ಮ 4 ಇಂದೀವರಾಕ್ಷಹರಿ ದ್ವಂದ್ವಗಳ ಸಹನೆಯನುತಂದೆ ಕರುಣಿಸಿ ಕಾಯೊ ಕಂಜದಳ ನೇತ್ರಅಂದು ಇಂದಿಗು ಮುಂದೆ ಎಂದೆಂದು ಗತಿ ನೀನೆಎಂದು ನಂಬಿಹೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪತಿತಪಾವನ ಪರಮದಯಾಳು ಶ್ರೀನಾಥ ಅತಿಶಯಾನಂದಾತ್ಮ ಸದ್ಗುರು ಭಕ್ತಹೃತ್ಕಮಲಾಂಕಿತ ಧ್ರುವ ನಿತ್ಯಾನಂದ ನಿಜಗುಣ ನಿರ್ಗುಣರೂಪ ಶ್ರೀದೇವ ಉತ್ತಮೋತ್ತಮ ಸತ್ಯಶಾಶ್ವತ ಭಕ್ತಜನ ಉದ್ಧಾರಕ ಯತಿಜನಾಶ್ರಯಾನಂತಮಹಿಮ ಕೃಪಾಲ ಅತೀತ ತ್ರಿಗುಣ ಸತತ ಸುಪಥದಾಯಕ 1 ಅಚ್ಯುತಾನಂತ ಮುಚುಕುಂದವರದ ಮುಕುಂದ ನಿಶ್ಚಯಾನಂದೈಕ್ಯ ನಿರ್ಗುಣ ನಿಶ್ಚಲಾತ್ಮ ಕನುಪಮ ಸಚ್ಚಿದಾನಂದ ಸದ್ಗುಣ ಸಾಂದ್ರ ಸರ್ವಾತ್ಮ ಮಚ್ಛ ಕೂರ್ಮಾನಂತರೂಪ ಭಕ್ತವತ್ಸಲ ಶ್ರೀಧರ 2 ಅಚ್ಯುತ ಪಕ್ಷಪಾಂಡವ ಪಕ್ಷಿವಾಹನ ರಕ್ಷರಕ್ಷ ಜನಾರ್ದನ ಮೋಕ್ಷದಾಯಕ ಕರಿರಾಜವರದ ಕೇಶವಾಲಕ್ಷ ನಿಜ ಸು- ಬಿಕ್ಷ ಮಹಿಪತಿಗಿತ್ತು ಕಾಯೋ ಲಕ್ಷ್ಮೀಪತೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪತಿಯೆ ಪರದೇವತೆಯು ಸತಿಯರಿಗೆ ಜಗದಿ ಮತಿಯರಿತು ಭಜಿಸಿ ಪರಗತಿಯ ಸಾರುವುದು ಪ. ಉದಯಕಾಲದೊಳೆದ್ದು ಸದಮಲ ಶುಧ್ಧಿಯಲಿ ಪಾದ ಮನದಿ ಸ್ಮರಿಸುತಲಿ ಪತಿ ಹೃದಯದಲಿರುವನು ಎಂದು ಪತಿ ಪದಕರ್ಪಿಸುವುದು 1 ಆದರದಲಿ ಪತಿಯ ಪಾದವನೆ ತೊಳೆದು ಆ ಸ್ವಾದೋದಕವ ಪಾನಗೈದು ಸುಖಿಸುವುದು ವೇದಗೋಚರ ಹರಿಯೆ ನೀ ದಯವ ಮಾಡೆಂದು ಆದರದಿ ಪತಿಯ ಮನವರಿತು ನುಡಿಯುವುದು 2 ಸ್ವಚ್ಛದಲ್ಲಿ ಮನದ ತುಚ್ಛ ವಿಷಯವ ತೊರೆದು ಇಚ್ಛೆಯಿಂದಲಿ ಹರಿಯ ನಾಮಗಳ ಭಜಿಸಿ ಅಚ್ಯುತಾನಂತ ಗೋವಿಂದನೆನ್ನುತ ಸತತ ಮಚ್ಚಾದ್ಯನೇಕ ಅವತಾರ ನೆನೆಯುವುದು 3 ಪತಿಯೆ ಹರಿಯೆಂದರಿತು ಪತಿಯೆ ಗುರುವೆಂದರಿತು ಪತಿಯ ಪೂಜೆಯನು ಅತಿ ಹಿತದಿ ಗೈಯ್ಯುವುದು ಪತಿಯಂತರ್ಗತನೆ ಎನ್ನತಿಶಯದಿ ಪೊರೆಯೆಂದು ಪತಿವ್ರತವ ನಡೆಸುತಲಿ ಹಿತದಿ ಬಾಳುವುದು 4 ಪತಿಯ ನಿಂದಕಳಿಗೆ ಗತಿಯಿಲ್ಲ ಪರದಲ್ಲಿ ಅತಿ ಬಾಧೆಪಡಿಸುವನು ಯಮನು ನಿರ್ದಯದಿ ಪತಿವ್ರತವ ಸಾಧಿಸುವ ಸತಿಯರಿಗೆ ಅನವರತ ಚ್ಯುತರಹಿತ ಪದವೀವ ಗೋಪಾಲಕೃಷ್ಣವಿಠಲ5
--------------
ಅಂಬಾಬಾಯಿ
ಪದಯುಗಳಂ ಪ ರಾಮಸುಂದರ ಘನ ಶ್ಯಾಮರಘೂದ್ವಹ ಅ.ಪ. ದಶರಥ ಹೃದಯಾನಂದಕರಂ ತ್ರಿದಶಗಣಚಿತ್ತಾಮೋದಕರಂ 1 ಪೂರಿತ ಕೌಶಿಕಯಜನಂ ಸಂತಾರಿತಗೌತಮ ಲಲನಾಂ 2 ಖಂಡಿತ ಶಂಕರ ಚಾಪಂ ಪರಿ-ದಂಡಿತ ಭಾರ್ಗವ ಕೋಪಂ 3 ಪಾತಕ ನಿಚಯಂ 4 ಮುನಿಜನ ಸ್ತುತಿರಚನಂ5 ಭಾರದ್ವಾಜಾರ್ಪಿತ ಭೋಜ್ಯಂ 6 ಉದ್ದಂಡ ವಿರಾಧಪಾತಕ ಹರಣಂ 7 ನಿರ್ಜಿತರಾಕ್ಷಸಷಂಡಂ8 ಧೃತಜಗದುಲ್ಲಾಸಂ 9 ವಿವಿಧಾಯುಧಜಾಲಂ 10 ಶೂರ್ಪನಖಾಂಗಂ 11 ನರವರಮುನಿಗಣ ಪರಿಪಾಲಂ12 ಮಾಯಾಮೃಗಾರ್ಪಿತ ಬಾಣವರಂ- ಜಟಾಯುಸಂಪಾದಿತ ಲೋಕವರಂ 13 ರಾವಣಹೃತ ನಿಜ ಪತ್ನೀಕಂ ಲೋಕಾವನಗತ ಕೋಪೋದ್ರೇಕಂ 14 ಬಂಧನ ಮೋಚನ ಚತುರಂ 15 ವಾತತನೂಭವ ಕೃತಸ್ತೋತ್ರಂ-ಪಂಪಾತಟಿನಿರ್ಮಿತ ಸುಕ್ಷೇತ್ರಂ16 ಶಿಕ್ಷಿತ ಸಂಕ್ರಂದನ ತನುಜಂ-ಸಂರಕ್ಷಿತ ಚಂಡ ಕಿರಣ ತನುಜಂ17 ಸೀತಾಲೋಕನ ಕೃತಕಾಮಂ-ನಿಜಧೂತಾಮೋದನ ಸುಪ್ರೇಮಂ18 ಯವನಾಲಯ ಪರಿವಾರಂ19 ಧೂತಾಹೃತ ಶುಭದೃಷ್ಟಾಂತಂ-ವಿಜ್ಞಾತನಿಜಸ್ತ್ರೀ ವೃತ್ತಾಂತಂ20 ಭೀಷಣ ಜಲನಿಧಿ ಬಂಧಕರಂ-ವಿಭೀಷಣ ಸಂರಕ್ಷಣ ಚತುರಂ21 ಶೋಷಿತ ರಾವಣ ಜಲದಿಂ-ಸಂತೋಷಿತ ದೈವತ ಪರಿಧಿಂ22 ಪಾತಕ ನಿಜ ನಾಮಾಂಕಂ 23 ಸ್ವೀಕೃತ ಸಾಕೇತವಾಸಂ-ಅಂಗೀಕೃತ ಮಾನುಷ್ಯ ವಿಲಾಸಂ24 ವಿಠಲಮತಿಶಯರುಚಿರಂ25
--------------
ಸರಗೂರು ವೆಂಕಟವರದಾರ್ಯರು
ಪದ್ಮನಾಭ ಪದ್ಮನಾಭ ಉಡುಪಿನ ಶ್ರೀಕೃಷ್ಣಜಯ ದುರ್ಜನರಿಗೆ ಅತಿದೂರ ಸುವ್ವಿಸುವ್ವಿ ಸುವ್ವಾಲೆ ಪ. ಸುರರ ಶಿರೋರನ್ನ ಗರುಡವಾಹನನೆ ಕರುಣಸಂಪನ್ನ ಉಡುಪಿನಕರುಣಸಂಪನ್ನ ಉಡುಪಿನ ಶ್ರೀಕೃಷ್ಣಶರಣಾಗು ಧನ್ಯ ಜನರಿಗೆ1 ಮುಖ್ಯಪ್ರಾಣ ಭಾರತೀರಮಣಗೆ ಎರಗುವೆ 2 ರಾಮನಂಘ್ರಿಯ ಸೇವೆ ಪ್ರೇಮದಿಂ ಮಾಡಿದಶ್ರೀಮಂತ ನಮ್ಮ ಹನುಮಂತಶ್ರೀಮಂತ ನಮ್ಮ ಹನುಮಂತನೆಂದವಗೆಕಾಮಿತಾರ್ಥಗಳ ಕೊಡುವನೆ 3 ಭಾರತ ಯುದ್ಧದಲಿ ಬಾಹುಬಲ ತೋರಿದಧಾರಿಣೀಶ್ವರ ತಿಲಕನೆಧಾರಿಣೀಶ್ವರ ತಿಲಕನೆ ಶ್ರೀ ಭೀಮಸಾರಿದ ಜನರ ಸಲಹುವ 4 ಶುದ್ಧಶಾಸ್ತ್ರಗಳಿಂದ ಗೆದ್ದು ವಾದಿಗಳನು ಹೊದ್ದಿದ ಜನರ ಕರುಣದಲಿಹೊದ್ದಿದ ಜನರ ಕರುಣದಲಿ ಹೊರೆವ ಶ್ರೀಮಧ್ವಮುನಿಪನ ಭಜಿಸುವೆ 5 ಹರಿಯ ಸತ್ಕರದಲ್ಲಿ ಕರುಣಂಗಳೊಡನೆದುರುಳ ವಾದಿಗಳ ಗೆಲಿದನೆÀದುರುಳ ವಾದಿಗಳ ಗೆಲಿದನೆ ಹೃಷಿಕೇಶಗುರುಗಳಂಘ್ರಿಗೆ ನಮಿಸುವೆ 6 ದೇಶ ದೇಶದೊಳುಳ್ಳ ದೂಷಿವಾದಿಗಳನ್ನು ದೂಷಿಸಿ ಹರಿಯ ಮಹಿಮೆಯನುದೂಷಿಸಿ ಹರಿಯ ಮಹಿಮೆಯ ಮೆರೆದ ಶ್ರೀನೃಸಿಂಹತೀರ್ಥಯತಿರಾಯ7 ಅದ್ವೈತವಾದಿಗಳ ಗೆದ್ದು ನಿರ್ಮಲವಪ್ಪಮಧ್ವಮಾರ್ಗವನು ಜಗಕೆಲ್ಲಮಧ್ವಮಾರ್ಗವನು ಜಗಕೆಲ್ಲ ತೋರಿದ ಜ-ನಾರ್ದನತೀರ್ಥಯತಿರಾಯ8 ಇಂದಿರೆಯರಸನ ಎಂದೆಂದು ಪೂಜಿಸಿಮಂದಮಾಯಿಗಳ ಕುಮತವಮಂದಮಾಯಿಗಳ ಕುಮತವ ಗೆಲಿದ ಉ-ಪೇಂದ್ರÀತೀರ್ಥಯತಿರಾಯ9 ಈ ಮಹಿಯೊಳಗುಳ್ಳ ತಾಮಸ ಜನರನ್ನುಶ್ರೀಮಧ್ವ ಮುನಿಪನ್ನ ಮತದಿಂದಶ್ರೀಮಧ್ವಮುನಿಪನ್ನ ಮತದಿಂದ ಖಂಡಿಸಿವಾಮನತೀರ್ಥರೆಸೆದರು 10 ಧೀರ ತಾಪಸರಾಗಿ ಗುರುಮಧ್ವಮುನಿಯಚಾರುಚರಣಂಗಳ ಪಿಡಿದಿರ್ದಚಾರುಚರಣಂಗಳ ಪಿಡಿದಿರ್ದ ಶ್ರೀವಿಷ್ಣು-ತೀರ್ಥರಡಿಗೆ ನಮಿಸುವೆ11 ಕಾಮನ ನೆರೆ ಅಟ್ಟಿ ಶ್ರೀಮಹಾವಿಷ್ಣುವೇ ಸ್ವಾಮಿ ಎಂಬುದನು ಜಗಕ್ಕೆಲ್ಲ ಸ್ವಾಮಿ ಎಂಬುದನು ಜಗಕ್ಕೆಲ್ಲ ತೋರಿದ ರಾಮತೀರ್ಥಯತಿರಾಯ12 ಮನುಮಥನಯ್ಯನ ಘನತೆಯ ತೋರಿಸಿನರ ಮೋಹಗಳ ಬಿಡಿಸಿದಜನರ ಮೋಹಗಳ ಬಿಡಿಸಿದ ಅಧೋಕ್ಷಜಮುನಿಕುಲಾಗ್ರಣಿಗೆ ನಮಿಸುವೆ13 ಮಧ್ವಕಿಂಕರರಾದ ಪದ್ಮನಾಭಾರ್ಯರವಿದ್ಯಾವೈಭವಗಳ ಪೊಗಳುವವಿದ್ಯಾವೈಭವಗಳ ಪೊಗಳುವ ಕವಿಯಾರುಶುದ್ಧ ಮುನಿಗಳಿಗೆ ಅಳವಲ್ಲ 14 ಸ್ವದೇವ ಹಯವದನನ ಆವಾಗ ಪೂಜಿಪ ಪಾವನ್ನ ಮಧ್ವಮುನಿಪನಪಾವನ್ನ ಮಧ್ವಮುನಿಪನ ಶಿಷ್ಯರಾದದೇವತೆಗಳ ಮರೆಹೊಕ್ಕೆ 15
--------------
ವಾದಿರಾಜ
ಪದ್ಮಾಕ್ಷಿ - ಪದ್ಮಾಕ್ಷಿ ಪ ಪದ್ಮಜ ಜನನಿಯೆ | ಪದ್ಮಾನನೆ ಶಿರಿಪದ್ಮ ಭವೆಯೆ ಹೃ | ತ್ಪದ್ಮದಿ ನೆಲೆಸೈ ಅ.ಪ. ಗುಣಕಾರ್ಯಗಳನು | ಕ್ಷಣ ಬಿಡದಲೆ ನೀವಿನಿಮಯ ಗೈಧರಿ | ಗನುಕೂಲೆನಿಸಿದೆ 1 ನೀ ವೊಲಿಯಲು ತವ | ಭ್ರೂ ವಿಲಾಸದಲಿಆ ವಿಪ ಮುಖರಿಗೆ | ತೀವ್ರ ಪದಪ್ರದೆ 2 ನಂದ ನಂದನೇ ಆ | ಬೃಂದಾರಕ ಮುನಿವಂದಿತ ಪದಯುಗೆ | ವಂದಿಪೆ ಪಾಲಿಸು 3 ಸಿಂಧು ಶಯನ ಹರಿ | ವಕ್ಷೊನಿವಾಸಳೆಕುಂದನು ಎಣಿಸದೆ | ನಂದವ ನೀವುದು 4 ಅಸಮನೆನಿಪ ಗುರು | ಗೋವಿಂದ ವಿಠಲಗೆಬಿಸರು ಹಾಂಬಕೆ ಸ | ಮಾಸಮಳೆನಿಪಳೆ 5
--------------
ಗುರುಗೋವಿಂದವಿಠಲರು
ಪದ್ಮಾಪತಿ ವಿಠಲ ನೀನಿವಳ ಸಲಹ ಬೇಕೋ ಪ ಪದ್ಮ ಸಂಭವ ಜನಕ ಪದ್ಮದಳ ನೇತೃ ಹೃತ್ಪದ್ಮ ದೋಷಗಳ ತಿದ್ದಿ ಕಾಪಾಡೊ ಹರಿಯೇ ಅ.ಪ. ಜನ್ಮಜನ್ಮಾಂತರದ ಪುಣ್ಯ ಸಂಚಯದಿ ಶ್ರೀಮನ್ಮಧ್ವಮತದಲಿ ಜನ್ಮ ತಾಳಿಹಳೋ |ಕರ್ಮನಾಮನೆ ಅನಾದ್ವವಿದ್ಯಾಕಾಮಕರ್ಮಗಳನೆ ಕಳೆವ ಸನ್ಮಾರ್ಗವನೆ ತೋರೊ 1 ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರವನೆ ತಿಳಿಸಿ ಸಂಸಾರನಿಧಿ ದಾಟಿಸೋಕಾರುಣ್ಯ ನಿಧಿ ಮೂಲ ಕಾರಣನು ನೀನೆಂದುಸಾರಿಬೇಡುವೆ ನಿನ್ನ ಪಾರು ಮಾಡಿವಳಾ 2 ಪತಿಸುತರು ಹಿತರಲ್ಲಿ | ಮತಿಮತಾಂವರಲ್ಲಿಕೃತಿಪತಿಯ ವ್ಯಾಪ್ತಿ ಸನ್ಮತಿಯನೇ ಕೊಡುತಹಿತದಿ ಸೇವೆಯಗೈಸು ಕೃತಕಾರ್ಯಳೆಂದೆನಿಸುಗತಿ ವಿಹೀನರಿಗೆಲ್ಲ ಗತಿಪ್ರದನೆ ಸ್ವಾಮೀ 3 ನಿನ್ನ ಸ್ಮøತಿಗಿಂದಧಿಕ ಅನ್ಯಸಾಧನ ಕಾಣೆಘನ್ನ ಈ ಕಲಿಯುಗದಿ ಪ್ರಾಣಾಂತರಾತ್ಮ |ಪುಣ್ಯ ಫಲದಾತ ಪ್ರಪನ್ನ ಪರಿಪಾಲಕನೆನಿನ್ನ ಸಂಕೀರ್ತನವ ಸರ್ವದಾ ಕೊಡು ಹರಿಯೇ 4 ಭಾರ ನಿನ್ನದೊಸ್ವಾಮಿಮಧ್ವಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪನ್ನಗಾಚಲವಾಸ-ಪ್ರಪÀನ್ನರ ಪಾಲಕ ಶ್ರೀಶಾ-ಸರ್ವೇಶಾ ಕನಕ ರತುನಮಯ ಮುಕುಟಾಧಾರ ಘನ ನವಮಣಿಮಯ ಕುಂಡಲಧರ ಇನಕೋಟಿಪ್ರಭಕೌಸ್ತುಭಹಾರ ಮನಸಿಜಧನುಸಮ ಭ್ರೂಸಮಾಕಾರ ಘನ ಚಂಪಕಗೆಣೆ ನಾಸ ಗಂಭೀರ ವನಜದಳಾಯತೇಕ್ಷಣಾಕಾರ ವನರುಹಾ ಘನ ಸ್ಮಿತ ಸುಗಂಭೀರ ಮುನಿಮಾನಸಮಂದಿರ ಸುವಿಹಾರ ಅಪ್ರಾಕೃತ ಶರೀರ ತನುಮನ ವಚನದಿ ಅನವರತದಿ ಕಿನ್ನರ ಸುರಮುನಿಗಣ ತನುಸದನದಿ ಹೃದ್ವನಜದಿ ಘನಪದ ವನರುಹ ಧೇನಿಸಿ ದೃಢಸ್ನೇಹದಿಂದಿರುವ ಕರ್ಮ ಒಪ್ಪಿಸುವ ಘನಮೋದದಿಂದಲಿರುವಾ ನುತಿಸುವಾ ಬೇಡುವಾ ಜನುಮ ಸ್ಥಿತಿ ಮೃತಿಗೆ ಬೆದರದಿರುವಾ ನಿನ್ನವರೊಳು ತನ್ನಿರವ ತೋರಿಸುಹ ಘನ್ನಪಾತಕವ ಕಳೆದುನ್ನತ ಸಾಧನವನ್ನೆ ಕೊಟ್ಟು ನನ್ನಿಯಿಂದಲೆ ಪೊರೆವಾ ತನ್ನಧಾಮದಿ ಕಾಪಿಡುವಾ 1 ಉತ್ತಮ ಮೌಕ್ತಿಕ ಸರಿಗೆ ನ್ಯಾವಳ ಒತ್ತೊತ್ತಾಗಿಹ ತ್ರಿವಳಿಯ ಮಾಲಾ ರತುನ ಪದಕದಾ ಸರದ ವಿಹಾರ ಅತಿಮನೋಹರ ಹೃದಯ ವಿಶಾಲ ಸಲೆಸಿರಿವತ್ಸ ವಕ್ಷದಿ ಲೋಲ ಸುತ್ತಿದ ಭಾಪುರಿ ಭುಜದ ವಿಸ್ತಾರ ಸಿತಾನಿಸಿತ ಉಪವೀತದಿ ಲೊಲ ದಾತಾಪಿತ ತವನಾಭಿಯ ಕಮಲ ಉತ್ತಮಕಮಲ ಕಲ್ಹಾರದ ಮಾಲ ಹಸ್ತಾಭರಣದಿ ಮೆರೆಯುತ ಪೊತ್ತಿಹ ಚಕ್ರಾಧ್ಯಾಯುಧನೆತ್ತಿ ದುರುಳೊನ್ಮತ್ತರ ಸದೆದು ತ್ವದ್ಭಕ್ತರ ಮನೋರಥ ಪೂರ್ತಿಗೈವ ಪುರುಷೋತ್ತಮ ಭವಭಯಹಾರೀ ನಿತ್ಯನೂತನವಿಹಾರೀ-ಪ್ರಣವಸ್ತನೆ ನೀ ಕಂಸಾರೀ ಪೃಥಕ್ ಪೃಥಕ್ ತದಾಕಾರೀ-ನರಹರೀ-ಶ್ರೀಹರೀ ಹೃತ್ಪುಷ್ಕರದಳ ವಿಹಾರೀ ಭಕ್ತವತ್ಸಲ ಅವ್ಯಕ್ತನೆ ಜಗದುತ್ಪತ್ತಿ ಸ್ಥಿತಿಲಯ ಕರ್ತ ವ್ಯಾಪ್ತ ನಿರ್ಲಿಪ್ತ ಸತ್ಯಸು- ಹೃತ್ತಮ ನೀನೆ ಮುರಾರೀ ಉತ್ತಮ ಸಮರಹಿತ ಶೌರೀ 2 ಪಕ್ಷಿಧ್ವಜ ಸುಖಭರಿತ ವಿಹಾರ ಕುಕ್ಷಿಯೊಳು ಅಬ್ಜಾಂಡಕೋಟಿಗಾಧಾರ ತ್ರಕ್ಷಾದ್ಯಮರನುತ ಗುಣಾಧಾರ ಸಾಕ್ಷಿಮೂರುತಿ ಸರ್ವಕಾಲಾಧಾರ ವಕ್ಷದೊಳು ಶ್ರೀವತ್ಸ ಗಂಭೀರಾ ಮು- ಮುಕ್ಷುಗಳೊಡೆಯನೆ ವೈಕುಂಠಾಗಾರ ಅಕ್ಷರಕ್ಷರರವಿಲಕ್ಷಣಧೀರ ರಕ್ಷಕ ಭಕುತಜನರುದ್ಧಾರ ದಕ್ಷಿಣಾಕ್ಷಿಕಂಠ ಹೃದಯವಿಹಾರ ರಕ್ಷಕ ತ್ರಿಜಗದಾಧ್ಯಕ್ಷ ಕರುಣಕಟಾಕ್ಷದಿ ಈ ಜಗ ವೃಕ್ಷದೊಳು ನಿರಪೇಕ್ಷನಾಗಿ ಫÀಲಭಕ್ಷಿಪ ಜೀವರ ಲಕ್ಷಕೋಟಿ ನೀ ಸಾಕ್ಷಿಯಾಗಿಹೆ ನೀ ರಕ್ಷ ಕಮಲಾಕ್ಷ ಪಕ್ಷಿವಾಹನನೆ ನಿನ್ನ ಪರೋಕ್ಷಾಪೇಕ್ಷಿಗಳಿಗೆ ನಿನ್ನ ಕ- ಟಾಕ್ಷವೀಕ್ಷಣದಿಂದ ಪ್ರತ್ಯಕ್ಷ ರಿಪುಶಿಕ್ಷ ಅಧ್ಯಕ್ಷ ಸಾಕ್ಷಿಯಾಗಿಹೆ ನೀ ರಕ್ಷಾ ಮೋಕ್ಷ ಜೀವರಿಗಪರೋಕ್ಷವನಿತ್ತು ನಿ- ಷ್ಪಕ್ಷನಾಗಿ ಜಗರಕ್ಷಿಸುತ್ತ ಸುರಪ ದಕ್ಷ ಚತು- ರಾಕ್ಷರಸ್ಥ-ನರಹರ್ಯಕ್ಷ ಶರಣಜನರ ಕಲ್ಪವೃಕ್ಷ3 ಪಟುತರಾಂಗ ಸುಕಟಿಯ ವಿಸ್ತಾರ ತೊಟ್ಟಿಹÀರತುನದ ಪಟ್ಟವಿಹಾರ ಉಟ್ಟಿಹ ಪಟ್ಟೆ ಪೀತಾಂಬರ ಧಾರಾ ಬಟ್ಟ ಜಾನುದ್ವಯ ಜಂಘಾಶೂರ ಇಟ್ಟಿಹ ಸಾಲಿಗ್ರಾಮದ ಹಾರ ದಟ್ಟವಾಗಿಹ ಕಾಲಂದಿಗೆಯ ವಿಹಾರ ಇಟ್ಟಿಹ ಬೆರಳಲಿ ರತ್ನದುಂಗುರ ಶ್ರೇಷ್ಟಪದದಿ ಧ್ವಜಚಿಹ್ನಾಕಾರ ದಿಟ್ಟಿ ನಖಾಗ್ರದಿ ತಟಿತ ಪ್ರಭಾಕರ ಪಟುತರ ಕರಪಾದ ಚಟುಲರೂಪ ಮನ- ತಟದಿ ಇಟ್ಟು ಲವತೃಟಿಯು ಬಿಡದೆ ಸುರ- ನಿತ್ಯ ಕರಪುಟದಿ ನಮಿಸಿ ಉತ್ಕಟದಿ ಗುಣಗಳ ಪಠಣದಿಂದಿರೆ ಮುದದಿ ಪಟುತರ ಭಕುತಿಯ ಭರದೀ ನಟಿಸುತ ತನು ಮರೆದಾತುರದಿ ಉ- ತ್ಕಟದಲಿ ನುತಿಸುತ ಭರದೀ ನಟಿಸುವಾ ಸ್ಮರಿಸುವಾ ಭಕುತಜನರ ಕಂಟಕವಾ ಆ ಧಿಟರು ನೀತ ಭಟರಂದು ನಿಜ ಜಠರಾಲಯದಿ ಇಂ- ಬಿಟ್ಟು ಭಕುತರ ಕಟಕಪೊರೆದು ಭವಾಬ್ಧಿಯ ಕಂಟಕ ಜಗಶಿಕ್ಷಾ 4 ಸ್ವಗತಭೇದವಿವರ್ಜಿತಶೂನ್ಯ ನಿಗಮಾತೀತ ದೇವವರೇಣ್ಯ ಬಗೆಬಗೆ ಸ್ವರ ಶಬ್ದವಾಚ್ಯವರೇಣ್ಯ ಅಗಣಿತಗುಣಗಣಪೂರ್ಣ ಸಂಪೂರ್ಣ ಯೋಗಿಗಳ್ ಪೊಗಳುವ ಸವಿತೃವರೇಣ್ಯ ಬಗೆಗಾಣರೊ ಸಾಕಲ್ಯದಿ ನಿನ್ನ ತ್ರಿಗುಣ ವಿರಹಿತನಾಗಿಹನ್ನ ನಗಜಾಧವ ಪಿಕನುತಪಾವನ್ನ ದುರ್ಗಾ ಶ್ರೀ ಭೂದೇವಿಯರಮಣ ಯುಗ ಯುಗದೊಳು ಜಗಕಾರ್ಯದಿ ಧರ್ಮ ಪ್ರಘಟ- ನೆಗೋಸುಗ ಸ್ವಗತರೂಪ ತಾ ನೆರಹಿ ಕ್ರೂರ ಪಾ- ಪೌಘರ ಮಡುಹಿ ಜಗದೇಕ ವೀರ ಮಿಗೆ ಜನಿಸಿದೆ ಜಗದೀಶಾ ಸುಗುಣ ಸಾಕಾರ ಸರ್ವೋತ್ತಮ ಶ್ರೀಶಾ ಜಗಜ್ಜಾಲ ಲೀಲಾವಿಲಾಸ ಜಗವೆಲ್ಲಾ ಈಶಾವಾಸ್ಯ ಸೃಜಿಸಿ ನೆಲೆಸೀ ಸ್ವಪ್ರಯೋಜನ ರಹಿತನೆನಿಸೀ ಖಗವರೂಥÀ ಶ್ರೀ ವೇಂಕಟೇಶ ಪನ್ನಗಗಿರಿಯೊಳು ನೆಲೆಸಿ ಜೀವರ ಯೋಗ್ಯಸಾಧನೆ ಇತ್ತು ಮನೋಭೀ-ಷ್ಟವನ್ನೆ ಸಲಿಸಿ ಉರಗಾದ್ರಿವಾಸವಿಠಲನೆನಿಸೀ 5
--------------
ಉರಗಾದ್ರಿವಾಸವಿಠಲದಾಸರು