ಒಟ್ಟು 2552 ಕಡೆಗಳಲ್ಲಿ , 114 ದಾಸರು , 1940 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಶವಿಧ ನಾದವು ಭಕ್ತರಿಗೆ ಕೇಳುತಿದೆದಶವಿಧ ನಾದವು ಭಕ್ತರಿಗೆ ಕೇಳುತಿದೆದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲುಯೋಗಿಯ ಕಿವಿ ಎರಡರಲಿ ಪ ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕøತಿಯಾಗಿ ಚಿಮ್ಮತಿರೆಝಣಝಣವೆಂಬ ಝಿಲ್ಲಿಯ ನಾದವು ಝೇಂಕಾರದಿ ಝೇಂಕರಿಸುತಿದೆಎಣಿಕೆಯಿಲ್ಲದೆ ನಾಗಸ್ವರದ ಧ್ವನಿ ಎಡೆದೆರೆಪಿಲ್ಲದೆ ಕೂಗುತಿದೆಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಾಟ್ಟಾಗಿಯೆ ನುಡಿಯುತಿದೆತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆಘನಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ2 ಭೇರಿಯ ನಾದವು ಧಮಧಮ ಎನುತಲಿ ಬಹಳಾಗಿಯೆ ಭೋಂಕರಿಸುತಿದೆಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ3
--------------
ಚಿದಾನಂದ ಅವಧೂತರು
ದಶವಿಧ ನೌಬತ್ತಾಗುತದಣ್ಣದಶವಿಧ ಸೌಬತ್ತಾಗುತದೆದುಸುಮಾನರ ಎದೆ ಇಬ್ಬಗೆಯಾಗಲುದೆಸೆ ಬಿರಿಯಲು ಯೋಗಿಯ ಕಿವಿಯೆರಡಲ್ಲಿ ಪ ಚಿಣಿ ಚಿಣಿ ಎಂಬ ಸಿಂಜಿಣಿನಾದವುಚಿತ್ಕøತಿಯಾಗಿ ಚಿಮ್ಮುತಿದೆಝಣಝಣಕೃತವೆಂಬ ಝಿಯಾನಾದವುಝೇಂಕಾರದಿ ಝೇಂಕರಿಸುತಿದೆಎಣಿಕೆಯು ಇಲ್ಲದೆ ನಾಗಸ್ವರ ಧ್ವನಿಎಡದೆರಪಿಲ್ಲದೆ ಕೂಗುತಿದೆಘಣಘಣ ಎನಿಪ ತಾಳದ ನಾದವುದಟ್ಟಣೆಯಲಿ ತಾ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಟ್ಟಾಗಿಯೆ ನುಡಿಯುತಿದೆ ತನನಾ ಎಂಬವೀಣಾ ಸ್ವನವು ತಂಪಾಗೆಲ್ಲವ ಮುಚ್ಚುತಿದೆಘನ ಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ 2 ಭೇರಿಯ ನಾದವು ಧಮಧಮ ಎನುತಲಿಧಾಂಧಮ ಧಾಂಧಮ ನುಡಿಯುತಿದೆಘೋರದಿ ಮೇಘದ ನಾದವು ಗರ್ಜಿಸುತಿದೆಘುಡಿ ಘುಡಿಸುತಿದೆ ನೂರಾರು ಸಿಡಿಲಂತೆನೂಕು ನುಗ್ಗಡಿಸುತಿದೆ ವೀರ ಚಿದಾನಂದವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3
--------------
ಚಿದಾನಂದ ಅವಧೂತರು
ದಶಾವತಾರ ಭವ ದೀನಾತ್ಮ ಜನಗಳಿಗೆ ಜ್ಞಾನಾರ್ಥವಾಗಿ ನದಿಯೋಳ್‍ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತ ಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆ ಭೂಸ್ಥಾನವಾಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿ ರವಿ ಸೂನುನ ಮಾಡಿಹನು 1 ವೃಂದಾರಕಾರು ಬಲ ವೃಂದಾವ ಕೂಡಿ ಗಿರಿಯಿಂದಾಲೆ ಕ್ಷೀರಧಿಯನೂವಂದಾಗಿ ಮಥಿಸುತಿರೆ ಸಿಂಧೂವಿನೋಳ್ ಜರಿದು ಪೊಂದೀತು ತತ್ತಳವನೂಮಂದಾತ್ಮರಾದುಭಯ ಮಂದೀಯ ನೋಡಿ ಬೆನ್ನಿಂದಾಲೆಯೆತ್ತಿ ಸುಧೆಯಾತಂದ್ಯೋರು ರೂಪನಮರಿಂದ್ರಾರಿಗಿತ್ತು ದಿತಿಜೇಂದ್ರಾರಮೋಹಿಸಿದನು 2 ಕ್ಷೋಣೀಶ ಕ್ಷೋಣೀಯನೆತ್ತಿ ಪಥಿ ದಾನಾವತಡಿಯುತಿರಲೂನಾಸವಾತ್ಮನವನ್ಹಾನೀಯ ಮಾಡಿ ನಿಜ ಸೂನೂಗೆಒಪ್ಪಿಸಿದನುಣೇಶ ಜಾತ ನಿಜಮಾನಿನೀ ಸಹಿತ ಸಂಸ್ಥಾನಾದಿ ಕೂತುಸುಖದೀತಾನವರಾನ ಪಡಿಸಿದಾನಂದ ಭೋಗಿಸಲು ತಾ ನೋಡಿಮೋದಿಸಿದನು 3 ಶುಭ ಭರಾತೀಯ ತತ್ಸುತಗೆ ಪ್ರೀತೀಲಿಪಾಲಿಸಿದನೂ 4 ದುಷ್ಟಾತ್ಮರಿಂದ ಬಹು ದುಷ್ಟಾತ್ಮರಾಗಿ ಸುರರಿಷ್ಟಾವ ಸ್ವರ್ಗ ಸುಖವಾಬಿಟ್ಟಾವನಲ್ಲ ನಿಜ ಪೊಟ್ಟೀಯಗೋಸುಗದಿ ಕಷ್ಟಾದಿಸಂಚರಿಸಲೂದೃಷ್ಟಿಂದ ಕಂಡದಿತಿ ತುಷ್ಟೀಸುತಿರಲವಳ ಪೊಟ್ಟೀಯೊಳವತರಿಸಲೂಪುಟ್ಟಾತ್ಮ ಬಲಿಗೆ ಸುತಲಿಷ್ಟಾವ ನೀಡಿ ಸುರರಿಷ್ಟಾವಪಾಲಿಸಿದನೂ 5 ಭೂತೇಶನೊಬ್ಬ ತನ ತಾತಾನ ಕೊಂದುನವ ಮಾತೇಯನಪಹರಿಸಲೂಭೀತೀಲಿ ತಾಯಿಯುರ ಘಾತಕ್ಕ ಸದೃಶ ಭುವಿ ಧಾತ್ರೀಶದುಷ್ಕಲವನೂಘಾತೀಶಿ ಪೂರ್ವಜರ ಪ್ರೀತೀಯ ಪಡೆದು ಮುನಿ ಪೋತಾನ ರಕ್ಷಿಸುತಲೇಪಾಥೋದಿ ತಟದಿ ರಘುನಾಥೇಷ್ಟದಾತ ನಿಜ ಶಾಪಾವಭೋಗಿಸುವನೂ6 ತಾಪ ರಘುನಾಥಾನುನೋಡಿ ವಿಥಿಲಾಜಾತಾಸಮೇತ ಸಹಜಾತಾನ ಕೂಡಿ ವನಜಾತಾದಿಸಂಚರಿಸುತಾಘಾತೀಸಿ ರಾಕ್ಷಸರ ಪ್ರಿಯನಿತ್ತು ಮುನಿಪಾತ್ಮರಿಗೆಲ್ಲ ಪುರದೀಸೀತಾಸಮೇತ ಕಪಿ ಪೋತಾನ ಕೂಡಿ ನಿಜ ಭೂತಿಯಭೋಗಿಸಿದನು 7 ಕಾರಾಳಯಾದಿ ನಿಜ ನಾರೀಯ ಕೂಡುತಲೆಶೂರಾತ್ಮಜಾತನಿರಲೂನಾರಾಯಣಾತ್ಮತನು ತೋರೀಸಿ ಬಾಲವಪುಗೋರಾಜನಾಲಯದಲೀಶೀರೀಯ ಕೂಡಿ ಸುರವೈರಿಗಳಳಿದು ನದಿ ತೀರಾದಿಕೊಳಲನೂದಿನಾರೇರಿಗೆಲ್ಲ ನಿಜ ಜಾರಾಟ ಸೌಖ್ಯವನು ತೋರೀಸಿತೋಷಿಸಿದನು 8 ವೃಷ್ಣೀಯ ಮಧುರೆಯಲಿ ಪುಟ್ಟೂತ ಗಾರ್ಗಸುತನಟ್ಟೂಳಿಗಾಗಿಜಲದೀಪಟ್ಟಣ ನಿರ್ಮಿಸುತಲಿಷ್ಟಾಪ್ತ ಜನರುಗಳ ನಿಟ್ಟಲ್ಲೆ ಪಾಲಿಸಿದನುಸೃಷ್ಟೀಶಮಕ್ಕಳನು ಮುಟ್ಟೂತ ಕರದಿ ತದಭಿಷ್ಟಾರ್ಥಗಳನುಸುರಿದೂತೃಷ್ಣೇಶ ಪಾಂಡವರ ಕಷ್ಟಾವ ಕಳಿದು ಗಜಪಟ್ಟಣವಸಾಧಿಸಿದನು 9 ಪಾರ್ಥಾರ ಶಾಲೆಯೊಳು ಪೂತಾತ್ಮರಿಂದ ಹರಿ ಭೂತೀಶುಕೇಳಿ ಮನದೀಪ್ರಾತಃ ಸಮಾರಭಿಸಿ ರಾತ್ರೀಯತನಕ ಹರಿ ಮೂರ್ತೀಯಪೂಜಿಸುತಿಹಾದೈತ್ಯಾರ ನೋಡಿ ಸುರನಾಥರ ಜಯಿಸಿ ಜಿನ ಪೋತಾತ್ಮ ಮಲಗಿ ತೊಡಿಯೋಳ್‍ಶಾಸ್ತ್ರಾವ ಬೋಧಿಶ್ಚವರಾತ್ಮಾವ ಕೆಡಿಸಿ ಸುರವೈತಾವತೋಷಿಸಿದನೂ10 ಶುಭ ಸತಿ ಮಿಷ್ಟಾತ್ಮಹಯವ ಮಾಡಿಅಷ್ಟಾಷ್ಟ ಖಡ್ಗವನು ಮುಷ್ಟೀಲಿ ಪಿಡಿದು ಬಹು ಶಿಟ್ಟೀಲಿಸುತ್ಲೆ ಚರಿಸೀವಿಪ್ಲವಾತ್ಮಕ ಕಲ್ಕಿ ಖಳರ್ಹೊಟ್ಟೀಯವಡೆದು ಶುಭಪಾಲಿಸಿದನು11 ವೆಂಕಟನಾಥ ಭವಪರಿಕವ ಹರಿಸೂತ ಕಿಂಕರನಾಗಿರುವೆನೂಶಂಬಾಸುರೋದರಜ ಶಂಖಾವಪಿಡಿದು ಮುಖ ಪಂಕೇಜದಿಂದೂದುತಾಹುಂಕಾರ ಮಾಡುತಲೆ ಕಿಂಕಿರನೆಂದು ಭುವಿ ಸಂಕರ್ಷಣದಿಸುರರೂಶಂಕೀತರಾಗುತ ಭಯಂಕಾರವೆಂದು ಮಹಾತಂಕಾದಿಸಂಸ್ಮರಿಪರೂ 12 ದಂಷ್ಟ್ರೇಶ ಬ್ರಹ್ಮಾನಾಸಿ ಪುಟ್ಟೂತವಾರಿನಿಧಿ ಮೆಟ್ಟೂತಘರ್ಘವಿಸಲೂದೃಷ್ಟೀಲಿ ನೋಡಿ ಕಿವಿಗೊಟ್ಟಾಲಿಸೂತ ನಿಜಪೊಟ್ಟೀಯರಾಂತರದಲೀಯಷ್ಟೇನೊ ಸನ್ನಾವಿದು ಪುಟ್ಟೂತಲ್ಹಂದಿ ಮರಿಬೆಟ್ಟೇಶದಂತಿರುವದೂಧಿಷ್ಟ್ಯಾದಿ ಕೂತು ಪರಮೇಷ್ಠೀಯ ಮಹಿಮೆಯನು ತುಷ್ಟಿಸಿ ಪಾಡುತಿಹನು 13 ತರೂನ ಮೂಲದಿ ಕೂತು ಬೋರೆಯಾ ಹರಿಯ ಶಾಸ್ತ್ರವ ಪೇಳೆ ಮುನಿಪನ ಸ್ವರವ ಸ್ಮರಿಸಿರಿ ಮನುಜರೇ ಭವದರವು ಪೋಗುವದು 14 ಚಿಕ್ಕ ಹುಡುಗೆಯು ತನ್ನಾಗತ ಚಕ್ರದಲಿ ಬ್ರಹ್ಮಾಂಡ ಕಟಹವ ಟೊಕ್ಕ ವೆನಿಸುತ ಜೀವ ಸಂಸ್ಕಾರ ಮುಕ್ಕು ಮಾಡುವಳು ಮೋಘ ಸೌಖ್ಯ ನೀಡುವಳು 15 ಧ್ವಾನ ಮಾಡಲುಧರ್ಮರಾಜಗೆಮಾನವಾದಿಗಳೆಲ್ಲ ಮುಖಭವ ಶೋಣಿತಾಗುವದು 16 ತತ್ವ ದಿವಿಜರು ನಮ್ಮ ದೇಹದಿ ನಿತ್ಯದಲಿ ಹರಿಸ್ಮರಿಸಿ ತುತಿಸುತಸತ್ವ ದಿವಿಜರಿಗೆತ್ತುವೆನು ಕರವಾ17 ದುರಿತ ಹರಿಸುವನೂ 18 ಯಲ್ಲಿ ಬ್ರಹ್ಮಾಂಡದಲಿ ಶಿರಿ ವರವಲ್ಲಭವ ಸಂಸ್ಮರಿಸಿ ಹಿಗ್ಗುವಫುಲ್ಲನಾಭನ ಭಕ್ತರನು ಮನದಲ್ಲಿ ಸ್ಮರಿಸುವೆನೂ 19 ಶ್ರೀಶಾನು ಭಕ್ತಜನದಾಶೀಯ ಪೂರೈಸಲು ಕೂಸಾಗಿದೇವಕಿಸುತಾಯೇಷಾದಿಗಳ ದಿಶುಭರಾಶೀಲಿ ಪುಟ್ಟುತವನೀಶಾರ ವಂಶಬೆಳೆಸಿ 20 ದೋಷಾತ್ಮಾ ದೈತ್ಯಕುಲ ಘಾಶೀಶಿ ಭೂದೇವಿ ಕ್ಲೇಶಾವನೆಲ್ಲಕಳೆದೂ ದಾಶೀಜ ನಾಗಿ ನಿಜ ಕೋಶಾದಿ ಮೋಕ್ಷಾ ಪದಮೀರೇಶ ತೋರಿಸಿದನು ಇಂದಿರೇಶನ ಸಾಧಿಸಿದನು 21 ನಾರದರ್ಷಿಯ ಕರುಣದಲಿ ಶನಿವಾರ ಮಾಡೀದ ಪರಮತುತಿಯನುಭೂರಿ ಪಠಿಸಲು ಇಂದಿರೇಶನುದಾರ ನೋಡುವನು 22
--------------
ಇಂದಿರೇಶರು
ದಾಮೋದರ ವಿಠಲನೆ | ಸಲಹ ಬೇಕಿವಳಾ ಪ ಸನ್ನುತ ಹರಿಯೆ | ಸ್ವಾಮಿ ಪಾಲಿಪುದೊ ಅ.ಪ. ತರಳೆ ದ್ರೌಪತಿ ವರದ | ಕರಿಯು ಮೊರೆಯಿಡೆ ಕಾಯ್ದವರ ಅಹಲ್ಯೆಯ ಪೊರೆದ | ತರಳ ಧ್ರುವ ವರದಕರುಣದಿಂದಲಿ ಮನದ | ಪರಿಪರಿಯ ಸತ್ಕಾಮಗರೆದು ಪಾಲಿಪುದಿವಳ | ಶಿರಿ ರಾಮಚಂದ್ರಾ 1 ಪತಿ ಸೇವೆ ಪರಳೆನಿಸು | ಗತಿಗೋತ್ರ ನೀನೆನಿಸುಸತತ ನಿನ್ನಯ ನಾಮ | ಸ್ಮøತಿಗೊದಗಿಸೊತತುವೇಶರೊಲಿಮೆಯಲಿ | ಸತತ ಗೈಯ್ಯುವ ಕಾರ್ಯವಿತತವಾಗಲಿ ನಿನ್ನ | ಹಿತಸೇವೆ ಎಂದೂ 2 ಕಾಲ ಕಾಲಕೆ ನಿನ್ನಓಲಯಿಪ ಭಾಗ್ಯದಲಿ | ಕೀಲಿಪುದು ಮನವಾ 3 ಮೂರೆರಡು ಭೇದಗಳ | ತಾರತಮ್ಯವನರುಹಿತೋರೊ ತವರೂಪ ಹೃ | ದ್ವಾರಿಜದನಡುವೇಕಾರುಣಿಕ ನೀನೆಂದು | ಸಾರುತಿವೆ ವೇದಗಳುಮಾರಾರಿ ಸಖ ನಿನ್ನ | ಕಾರುಣ್ಯ ತೋರೋ 4 ಪಾವಮಾನಿಯ ಪ್ರೀಯ | ಭಾವದಲಿ ಪ್ರಾರ್ಥಿಸಲುಪೂವನಿತ್ತಭಯವನು | ಓದಿ ಪಾಲಿಸಿಹೇಕೇವಲಾ ನಂದಮಯ | ಗೋವಿದಾಂಪತಿಯೆ ಗುರುಗೋವಿಂದ ವಿಠ್ಠಲನೆ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ದಾರಿ ದೋರೆನಗ ಮುಕುಂದಾ ಪ ದಾರಿ ತೋರೆನಗೆ ಶ್ರೀ ಹರಿ ನಿನ್ನ ಭಕುತಿಯಾ| ಸಾರಿದೆ ನಿನ್ನವನಾನು ಮುಕುಂದಾ ಅ.ಪ ಜನುಮಾನುಜನುಮದಲಿ|ನಾಮವಾ| ನೆನೆಯದ ತಪ್ಪಿನಲಿ|| ಜ್ಞಾನದೃಷ್ಟಿಯಲಂಧನಾದೆನು ಹರಿ ನಿಮ್ಮ| ಕಾಣದ ಕಂಗಳನಾ ಮುಕುಂದಾ1 ಭ್ರಾಂತತನವ ಬಿಡಿಸಿ|ವಿವೇಕ| ಶಾಂತಿಯ ನೆಲೆಗೊಳಿಸಿ| ಅಂತರಂಗದ ನಿಜ ಸುಖವ ಸೂರ್ಯಾಡುವ| ಸಂತರೊಳಗ ಕೂಡಿಸೋ ಮುಕುಂದಾ2 ಅರಹುನಯನ ದೆರಿಸಿ|ನಿಜರೂಪ| ಗುರುತದ ನೆಲೆ ತೋರಿಸೀ| ಗುರುವರ ಮಹಿಪತಿ ನಂದನ ಪ್ರಭು ನಂದನ ಪ್ರಭು ನಿಮ್ಮ| ಸ್ಮರಣೆ ಪಡೆಯ ನಡಿಸೋ ಮುಕುಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾವನಿಹನೈಯ್ಯಾ ಕೃಷ್ಣಾ ಎನ್ನ ಕಾವವನು ನೀನಲ್ಲದೆ ಪ ನಾರಿ ದ್ರೌಪದಿ ನೆನೆಯಲು ಸಭೆಯಲ್ಲಿ ಶೀರಿ ದಾನವ ಮಾಡಿದೀ ಕೃಷ್ಣಾ ಘೋರ ದೂರ್ವಾಸ ಮುನಿಯು ನಡುವಿರುಳೆ ಹಾರೈಸಿ ಬರೆಯನ್ನವಾ ದೇವಾ ನಾರಿ ದ್ರೌಪದಿಯ ಮೊರೆಯ ದೊರೆಯು ಆಲಿಸೇ ಆ ರಾತ್ರಿ ಕಾಯ್ದ್ಯೋಬಲೆಯಾ 1 ಪರಿವಾರದಿಂದ ಕೂಡಿ ಕರಿರಾಜನಂಗ ನಾಟಕಂದೈದಲು ಭರದಿನೆಗಳಿಯು ಪಿಡಿಯಲು ಕಾಲನು ಇರದೆ ನಿನ್ನನು ಸ್ಮರಿಸಲು ದೇವಾ ಗರುಡವಾಹನನಾಗಿ ನೀನೈತಂದು ಕರುಣಿಸಿದ್ಯೋ ಕೊನೆಯ ಗತಿಯ 2 ದುರುಳ ಹಿರಣ್ಯಕನ ಶೀಳಿ ನರಹರಿಯೆ ತರಳ ಪ್ರಲ್ಹಾದನ ಪೊರೆದ್ಯೋ ದೇವಾ ಮರೆಯದಜಮಿಳ ನೆನೆಯಲು ಕೇಳ್ದು ನೀ ಪರಿಹರಿಸಿದೆ ಯಮಬಾಧೆಯ ದೇವಾ ನರಸಿಂಹವಿಠಲ ಸ್ವಾಮಿ ಧ್ರುವನನ್ನು ಪೊರೆದಂತೆ ರಕ್ಷಿಸೆನ್ನಾ 3
--------------
ನರಸಿಂಹವಿಠಲರು
ದಾಸ ದಾಸರು ಪೇಳುತಿಹರಲ್ಲಾ ಕೇಶವಾ ಎಂದು ತಾಸು ತಾಸಿಗೆ ಪೇಳುತಿಹರಲ್ಲಾ ಪ ರಾಮನೆಂಬರು ನಿಮಿಷ ನಿಮಿಷಕೆ ನೇಮದಿಂದಲಿ ಹರಿಯ ಭಜಿಪರು ರಾಮನಾಮವ ಹಲವು ವಿಧದಲಿ ಪ್ರೇಮದಿಂದಲಿ ಸ್ಮರಿಸುತಿಹರು 1 ಮಾತು ಮಾತಿಗೆ ಕೃಷ್ಣಯೆಂಬರು ನೀತಿ ನೀತಿಗೆ ವಿಠಲಯೆಂಬರು ಸೇತು ಬಂಧನ ಸ್ವಾಮಿ ನಾಮವ ನಿತ್ಯ ನುಡಿಯಲಿ ನೆನೆಯುತಿಹರು 2 ಕಾಲ ಕಾಲಕೆ ಶೇಷಶಾಯಿಯ ನೀಲರೂಪನ ನಾಮ ಸವಿಯುತ ಮೂರ್ತಿ ಕೀರ್ತನೆ ವೇಳೆ ವೇಳೆಗೆ ಮಾಡುತ 3 ನಿತ್ಯ ಮಾರ್ಗದಿ ನಾವೆ ರೂಪವ ಧರಿಸಿ ಭವದೊಳು ರಾವಣಾಂತ ಕನಡಿಯ ಸೇರುವ 4
--------------
ಕರ್ಕಿ ಕೇಶವದಾಸ
ದಾಸ ನಾನೆಂಬೇ ಗುರು ಭಕುತರಾ ಪ ಗುರುವೇ ಜನಕ ಘನ ಗುರುವೇ ಜನನಿಯ | ಗುರುವೇ ಗೆಳೆಯ ನಿಜ ಗುರುವೇ ಆತ್ಮನು | ಗುರುವೇ ಬಂಧುವು ಗುರುವೇ ಇಷ್ಟನು | ಗುರುವೇ ಗತಿಮತಿ ಗುರುವೆಂದವರಾ 1 ಗುರುವೇ ಚತುರ್ಮುಖ ಗುರು ಕಮಲಾಂಬಕ | ಗುರುವೇ ಸದಾಶಿವ ಗುರುವೇ ಸಂತರು | ಗುರುವೇ ಸುರಭಿಯ ಗುರು ಚಿಂತಾಮಣಿ | ಗುರು ಧನದ್ರವ್ಯನು ಗುರುವೆಂದವರಾ 2 ಗುರು ವಚನವೇ ಶೃತಿ ಗುರುದಯ ಮುಕ್ತಿಯು | ಗುರು ಗೃಹ ಕ್ಷೇತ್ರವು ಗುರು ನೋಟ ಪರಸವು | ಗುರು ಸ್ಮರಣೆಯೇ ಜಪ ಗುರು ಮಹಿಪತಿ ಪ್ರಭು | ಗುರು ಭಕ್ತಿಯೇ ತಪ ಗುರುವೆಂದವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸಕೂಟ ವರ್ಣನೆ ಸಾಟಿಯುಂಟೆ ಶ್ರೀನಿವಾಸನ ದಾಸಕೂಟದ ಮ್ಯಾಳಕೆ ಬೂಟಕದ ಮಾತಲ್ಲ ಕೇಳಿರಿ ಭಜನೆ ಮಾಡುತ ತಾಳಕೆ ಪ. ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರು ದಾಸಜನರ ಸಮೂಹದೊಳಗಾವಾಸವಾಡುತ ನಲಿವರು ಸೂಸುತಿಹ ಗಂಗಾದಿನದಿಗಳು ಬ್ಯಾಸರದೆ ಬಂದಿರುವವು ಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದೆ ಮಧುರವು 1 ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತ ಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತಾ ವಾರಿಜಾಕ್ಷನ ಪರಮಮಂಗಳ ಮೂರುತಿಯ ಮುಂದಿರಿಸುತ ಮಾರುತನ ಮತವರಿತು ಬಹುಗಂಭೀರ ಸ್ವರದಿಂದರುಹುತಾ 2 ಹಿಂದೆ ಗಳಿಸಿದ ಹಲವು ದುರಿತವು ಕುಂದುವುದು ನಿಮಿಷಾರ್ಧದಿ ಅಂದಿನಂದಿನ ದೋಷದುಷ್ಕøತವೊಂದು ನಿಲ್ಲದು ಕಡೆಯಲಿ ಇಂದಿರಾಧವ ಶೇಷ ಭೂಧರ ಮಂದಿರನು ಮಹ ಹರುಷದಿ ಮುಂದೆ ನಲಿವುತ ಮನಕೆ ಪೂರ್ಣಾನಂದವೀವನು ನಗುತಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸಗೆ ಭಯವೆಲ್ಲಿ ದಾಸಗೆ ಭಯವೆಲ್ಲಿ ಪ ದಾಸನಾಗದವಗೆ ಭಯವೆಂದಿಗು ತಪ್ಪದು ದಾಸನಾಗಿಹಗೆ ಭಯವೆಂದಿಗು ಬಾರದು 1 ತರಳ ಪ್ರಹ್ಲಾದಗೆ ಭಯವೆಂದಿಗು ಸೋಂಕಲಿಲ್ಲ ತರಳನ ಪಿತಗೆ ಭಯವೆಂದಿಗು ತಪ್ಪಲಿಲ್ಲ 2 ಲಂಕೆಯೊಳಿದ್ದರೂ ದಶಕಂಠನಿಗತಿ ಭಯ ಲಂಕೆಯ ಬಿಟ್ಟ ವಿಭೀಷಣನಿಗಭಯ 3 ಹರನ ಪೀಡಿಸಿದಾ ಭಸ್ಮಾಸುರಗೆ ಭಯ ಹರಿಯ ಸ್ತುತಿಸಿದ ಮಹಾದೇವನಿಗಭಯ 4 ರಾಜೇಶ ಹಯಮುಖನೊಲಿದವನಿಗಭಯ 5
--------------
ವಿಶ್ವೇಂದ್ರತೀರ್ಥ
ದಾಸನಾಗುವೆ ಭಜಿಪ ಭಕ್ತಿಯನು ನೀಡೆನ್ನ ನಾನೇನೂ ಮಾಡಲಾರೆ ರಂಗಯ್ಯ ನೀನೆನ್ನ ಸಲಹ ಬೇಕು ಪ ಗಾನಲೋಲನ ನಾಮ ಭಜನೆಯೊಂದುಳಿದು ನಾ ನನ್ಯರೀತಿಯ ಕಾಣೆ ಸಲಹಯ್ಯ ಹರಿಯೇ ಅ.ಪ. ತರಳಾ ಧ್ರವನಂತೆ ತಪನ ನಾನರಿಯನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಹರಿದಾಸರಂತೆ ದಾಸತ್ವ ನಾನರಿಯೆನು ಪರಮ ಸೇವಕರಂತೆ ಸೇವೆಯ ನರಿಯೇ 1 ಅಸುರನಂದನನಂತೆ ಕೀರ್ತನೆಯರಿಯೆನು ವಸುಧೀಶನಂತೆ ನಾ ವ್ರತಗಳನರಿಯೇ ವಸುಮತಿಯಂತೆ ನಾ ಯಾಚನೆಯರಿಯೆನು ಋಷಿ ವೃಂದದಂತೆ ನಾ ಭಕ್ತಿಯನರಿಯೇ 2 ಸಿರಿಯಂತೆ ನಿನ್ನನು ಸೇವಿಸಲರಿಯನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೆ ಸುರಮುನಿಯಂತೆ ನಾ ಗಾಯನವರಿಯೆನು ಸಿರಿ ಚನ್ನಕೇಶವ ಭಜನೆಯನರಿವೇ 3
--------------
ಕರ್ಕಿ ಕೇಶವದಾಸ
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ದಾಸನು ನಾ ನಿನ್ನಯ ಬೇಸರಿಸದ ಸೇವಾ ವಾಸುದೇವನೆ ಮಾಡುವ ಮನವಾ ವಾಸುಕಿಶಯನ ನೀ ನೀಡು ದೃಢವಾ ಪ ಭಾಸುರಾಂಗಿಯ ಶ್ರೀಶನೆ ಬಡ ದಾಸನ ಸೇವೆಯು ಮನಕ್ಹ್ಯಾಂಗೆ ಬಂತು ಶ್ರೀಶನ ಕೌಸ್ತುಭಕೆ ಆಶೆ ತಂತು ಅ. ಪ. ಅನುಗಾಲದ ನಿನ್ನ ನಾಮದ ಸ್ಮರಣೆಯಾ ಮನಸಿಜ ಪಿತಗೆ ಮೆಚ್ಚು ಬಾ ಧ್ಯಾನ ಕೇಳಲು ಕಿವಿ ನಿಮಿರಿಸಿದಾ ಘನ ಪ್ರಲ್ಹಾದನ ಸ್ಮರಣೆಗೆ ನಿಂತಿರ್ದಾ- ಘನ ಸಂಪ್ರೀತನ ಎನ್ನೊಳ್ಯಾಂಗ ಕರುಣಿಸಿದಾ ಮೇಣ್ ಕರಣದಿಂದ ಗಾಯನ ಎನ್ನಯ ಕಾಯಜ ಪಿತಾ ನಿನಗೆ ಶ್ರಾವ್ಯವಾದುದು ಅರಿಯೆನು ನಾ 1 ಮೇಣ್ ಪ್ರೀಯವಾದುದು ಹರಿಯೇ ಸುರ ಮಾನಿಯೆ ಮಾಯೆಯ ಹರಿದು ರಕ್ಷಿಸೇಯಾ ನಿನ್ನ ಮನಕಾನಂದವಾಗುವುದಯ್ಯಾ 2 ಮತಿವಂತನೆ ನೀ ಮಾಡುವ ಹರಿಪೂಜೆ ಚಿತ್ತಜಪಿತ ಹರಿಗಾಯ್ತು ಕೇಳ್ ಮುದದಿ ಹೃದಯ ತುಂಬೀತು ಅತಿ ಮಾನಿನಿಯೆ ವಿಧಿಪೂಜಿತನಿಗೆ ಸರಿ ಪಾತೆನ್ನ ಪೂಜೆಯಾಯ್ತು ಶ್ರೀ- ಪತಿ ಶ್ರೀಹರಿಯ ಮನಕೆ ಬಂದೀತು 3 ಮಾನವ ನಿನ್ನಯ ಹರಿಧ್ಯಾನವ ರಮಾಧ- ವನು ತಾ ಕೈಕೊಂಡಾ ತನ್ನ ಹೃದಯಾರವಿಂದದೆಡೆಗೆ ಸೆಳೆಕೊಂಡಾ ಮುನಿಶುಕ ಮುಖ್ಯರ ಧ್ರುವಾದಿ ಭಕ್ತರಾ ಮನಗೊಂಡ ಹರಿಯೆನ್ನ ಧ್ಯಾನಕಿಂಬುಗೊಂಡಾ ಮನದೊಳಗೆಂತು ಆತುಕೊಂಡಾ 4 ಪುರುಷೋತ್ತಮ ಹರಿ ಪರಮ ದಯಾರ್ಣವ ಕರುಣದಿ ನಿನ್ನ ಕೈಪಿಡಿದಾ ನಿಜದಾಸನೆಂದೊಡಬಡಿದಾ ವರಮಹಾಲಕುಮಿಯೆ ಸಿರಿಹರಿಸತಿಯೆ ಅನುದಿನ ಎನ್ನ ಮನದಿ ನೆಲೆಸೆ 5
--------------
ನರಸಿಂಹವಿಠಲರು
ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ಪ ತುಂಬಿ ಸೂಸುತಲಿದೆ ಅ.ಪ ಭೂಸುರ ಜನುಮದಿ ಬಂದು ಬೆಳೆದು ಉಪ- ದೇಶಗೊಂಡು ಮಧ್ವಮತ ಪೊಂದಿ ಲೇಸಾಗಿ ಭಕ್ತಿ ವಿರಕ್ತಿ ಜ್ಞಾನದ ವಿ- ಶೇಷವಾಗಿ ನಾ ಬಾಳುವದೆಲ್ಲ 1 ಸಜ್ಜನ ಸಂಗತಿ ಮಾಡಿ ದುರುಳಜನ ವರ್ಜನಗೈದು ಸತ್ಕರ್ಮಗಳ ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ ರ್ಲಜ್ಜನಾಗಿ ನಾ ಬಾಳುವುದೆಲ್ಲ 2 ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ ತವಕದಿಂದ ನುಡಿಯುವ ಕವನ ನವನವ ವಚನವು ಮಂತ್ರ ಸಂಕಲ್ಪವು ಸವಿದು ಸ್ಮರಿಸಿ ನಾ ಬಾಳುವುದೆಲ್ಲ 3 ಯಾತ್ರೆ ತೀರ್ಥ ದಿವ್ಯ ದಾನಧರ್ಮಂಗಳು ಕ್ಷೇತ್ರ ಮೆಟ್ಟಿ ಬಹ ಸಂಭ್ರಮವು ಮಿತ್ರರ ಕೂಡಾಡಿ ಹರಿಪರನೆಂದು ಸ- ತ್ಪಾತ್ರನಾಗಿ ನಾ ಬಾಳುವುದೆಲ್ಲ 4 ಹರಿದಿನದುಪವಾಸ ಜಾಗರಣೆ ಪಾರಣಿ ಗುರು ಹಿರಿಯರಲಿ ವಿಹಿತಸೇವೆ ಹಿರಿದಾಗಿ ಮಾಡೋಡು ಪರಿಪರಿಯಿಂದಲಿ ಹರುಷದಿಂದಲಿ ನಲಿದಾಡುವುದೆಲ್ಲ 5 ಷಡುರಸಭೋಜನ ದಿವ್ಯವಸನ ನಿತ್ಯ ಉಡುವುದು ಹೊದೆವುದು ಹಸನಾಗಿ ತಡೆಯದೆ ಜನರಿಂದ ಪೂಜೆಗೊಂಡು ಸುಖ- ಬಡಿಸುತಿರುವ ವಿಚಿತ್ರಗಳೆಲ್ಲ 6 ಮನವೆ ಹಿಗ್ಗದಿರು ಹಿಯ್ಯಾಳಿಕೆಯಿಂದ ಗುಣಿಸಿಕೊ ಸುಖವಾವುದು ಲೇಶ ನಿನಗೆ ಸ್ವತಂತ್ರ ಎಂಬುದು ಕಾಣೆನೆಂದಿಗು ಗುಣನಿಧಿ ವಿಜಯವಿಠ್ಠಲನ ಪ್ರೇರಣೆಯೆಲ್ಲ 7
--------------
ವಿಜಯದಾಸ
ದಾಸರ ಶಿಶು ನಾನು ಶ್ರೀಹರಿ ದಾಸರು ಶಿಶು ನಾನು ಪ ಹೇಸಿ ಪ್ರಪಂಚದ ವಾಸನಳಿದು ಜಗ ದೀಶನ ಶ್ರೀಪಾದದಾಸಾನುದಾಸರ ಅ.ಪ ಮರವೆ ಮಾಯ ತರಿದು ಲೋಕ ದರಿವಿನೊಳಗೆ ಬೆರೆದು ಪರಿಪರಿಯಿಂದಲಿ ನರಹರಿ ಚರಣವ ಸ್ಮರಣೆಯೊಳಿಟ್ಟು ಬಲು ಹಿರಿಹಿರಿ ಹಿಗ್ಗುವ 1 ಮೋಸಕ್ಲೇಶವನಳಿದು ಭವದ ಆಶಾಪಾಶತುಳಿದು ಸೋಸಿಲಿಂದ ಅನುಮೇಷ ಬಿಡದೆ ಹರಿ ಸಾಸಿರ ನಾಮಮಂ ಬೇಸರದ್ಹೊಗಳುವ 2 ಸತ್ಯ ಸನ್ಮಾರ್ಗಬಿಡದೆ ಮನವಂ ಎತ್ತ ಕದಲಗೊಡದೆ ನಿತ್ಯ ನಿರ್ಮಲಾತ್ಮ ಕರ್ತು ಶ್ರೀರಾಮನ ಅರ್ತು ಭಜಿಸುವಂಥ 3
--------------
ರಾಮದಾಸರು