ಒಟ್ಟು 2158 ಕಡೆಗಳಲ್ಲಿ , 105 ದಾಸರು , 1685 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನು ನಿನ್ನ ಅಂಬುಜನಯನ ಬೆಂಬಿಡದೆ ಕಾಯೆನ್ನ ಶಂಬರಾರಿಪಿತನೆ ಪ ಇಂದು ನೀ ಗೆಲಿಸಯ್ಯ ಮಂದರಧರಗೋವಿಂದ ಎರಗುವೆ ಪದಕೆ 1 ಜಡಜಾಕ್ಷ ನಿಮ್ಮಡಿಗೆ ದೃಢದಿಂದ ಬೇಡುವೆನು ತಡೆಯೆನ್ನನು ಕಡೆಹಾಯ್ಸು ದುರಿತದಿಂ 2 ಜಗದೊಳಗೆ ಎನ್ನನು ನಗೆಗೇಡು ಮಾಡದೆ ಮಗನನ್ನ ಸಲಹಯ್ಯ ಖಗಗಮನ ಶ್ರೀರಾಮ 3
--------------
ರಾಮದಾಸರು
ನಂಬಿದೆನೊ ನಂಬಿದೆನೊ ಅಂಬುಜಾಕ್ಷ ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ ಪ ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ ಮುದದಿಂದ ನಿತ್ರಾಣನಾದೆನಯ್ಯಾ ಪದುಮನಾಭನೆ ನಿನ್ನಭಯದೊಂಬಲನಿತ್ತು ವದನ ಚೇತನನಾಗುವಂತೆ ದಯಮಾಡೊ 1 ವಿಷವ ಸೇವಿಸಿದ ತರುಣನಂತೆ ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ2 ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು ಜೀವವೇ ನಿನ್ನ ಪಾದದಾಧೀನವೋ ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ ಹುದು ತೊಂಬಲನಿತ್ತು ಪೊರಿಯೊ 3
--------------
ವಿಜಯದಾಸ
ನಂಬಿದೆನೊ ನೀರೇರು ಹಾಕ್ಷ ನಿನ್ನ ನಂಬಿದೆನೊ ನಿನ್ನ ನಂಬಿದೆ ಯನ್ನ ಸಲಹುವದಿನ್ನು ಮನ್ನಿಸೊ ಹೆನ್ನೆ ವಿಠ್ಠಲ ಪ ಸಿಂಧು ಗಂಭೀರ ಶ್ರೀ ವೇಣುನಾದ ಮಂದರಾದ್ರಿಧರ ನಂದನಂದನ ಕುಂದರದನ ಗೋವಿಂದ ಪರಮಾ- ನಂದ ವಿಗ್ರಹ 1 ಜಾನಕೀರಮಣ ಸರ್ವೇಶ ಈಶವಿನುತ ಚರಣ ದೀನಬಾಂಧವ ದೇವರದೇವ ಪುರಾಣಪುರುಷ ಮಹಾನುಭಾವ ಹರಿ 2 ಬಾಲಗೋಪಾಲ ಭಾಸುರ ಗುಣಶೀಲ ಶ್ರೀಲೋಲ ನೀಲವರ್ಣ ಹೆನ್ನೆಪುರೀಶ ಕುಚೇಲವರದ ಮಾಧವ 3
--------------
ಹೆನ್ನೆರಂಗದಾಸರು
ನಂಬಿದೆನೊ ರಂಗ ಗೋವಿಂದ ರಂಗ ಪ. ಇಳೆಸೃಷ್ಟಿಗಾಧಾರನೆಂಬ ಬಿರುದುಳ್ಳಡೆ ಜಗನ್ಮಯನೆ ಚಿನ್ಮಯರೂಪ ರಂಗ ನೀನಾದ್ಯಯ್ಯ ರಂಗ 1 ಸುಜನಮಂದಾರ ಸರಸಿಜಭವಪಿತ ನಿನ್ನ ಪ್ರಜೆಗಳು ಪೊಗಳುತ್ತಿಹರೆ ರಂಗ ಮುರಹರನೆ ರಂಗ 2 ಸುಜನರೊಳಗೆನ್ನ ಕುಹಕವ ಮಾಡದೆ ನಿನ್ನ ಭಜಕನೆಂದಿರಲಾಗಿ ರಂಗ ಭುಜಗೇಂದ್ರಶಯನ ಶ್ರೀರಂಗ 3 ಧಾತ್ರಿಗಾಧಾರ ಅನಾಥರಕ್ಷಕನೆ ದಯವ್ಯಾತಕೆನ್ನೊಳಿಲ್ಲ ರಂಗ ಕಡೆಹಾಯಿಸೊ ರಂಗ 4 ನೋಡೆ ಶ್ರೀ ಹರಿಯೆ ನೀನಲ್ಲದನ್ಯತ್ರ ದಾತ್ರರಿಲ್ಲವೊ ರಂಗ ಮಹಿಮ ಶ್ರೀರಂಗ 5 ಕೋಪವನು ಬಿಡು ಎನ್ನ ಕುಂದನೆಣಿಸದಿರಯ್ಯ ಆಪತ್ಬಂಧು ಶ್ರೀರಂಗ ಸಲಹಯ್ಯ ರಂಗ 6
--------------
ಹೆಳವನಕಟ್ಟೆ ಗಿರಿಯಮ್ಮ
ನಂಬು ನಂಬು ಶ್ರೀನರಹರಿ ಪಾದವÀ ನರನೇ ಪಾಮರನೆ ಪಾತಕ ಕೃಷ್ಣಾ ಮೂರ್ತಿಯನ್ನೇ ಪ ಸಾಧು ಸಜ್ಜನ ಸಂತರ ಸಲಹುವ ಸಕಲ ಲೋಕ ಕರ್ತನಾ ಮೇದಿನಿ ಭಕ್ತರ ಮನದಲಿ ಚರಿಸುವ ಮಂಗಳ ಮಹಿಮನ ಆದಿಮೂರುತಿ ಆನೇಕ ಚರಿತಾ ಅನಂತ ಅವತಾರನಾ ಅನುದಿನ ಮರೆಯದೆ ನೀ ಯಿನ್ನಾ 1 ಶ್ರೀನಿವಾಸ ಆಶ್ರಿತ ಜನಪೋಷಕ ಶಾಶ್ವತನಾಗಿಹನಾ ಗಾನಲೋಲ ಶ್ರೀವೇಣುನಾದನ ಕರಿರಾಜ ವರದನ ದಾನವಾಂತಕನ ದಶರಥತನಯನ ದೇವಾದಿದೇವನ್ನ ಮಾನವ ಮದನ ಜನಕನಾದನಾ 2 ಭೂಸುರ ನಾಯಕನ ಮಾಧವ ಗೋವಿಂದನ ಮುಕ್ಕುಂದನಾದ ಅವನಾ 'ಹೆನ್ನೆವಿಠ್ಠಲನಾ’ 3
--------------
ಹೆನ್ನೆರಂಗದಾಸರು
ನಂಬು ನಮ್ಮ ಹರಿಯ ನಂಬಿದ- ರಿಂಬುದೋರುವ ದೊರೆಯಾ ವಿಶ್ವ ಕು- ಟುಂಬಿ ವಾಯು ಪೂಜ್ಯಾಂಬುಜ ಪಾವನ ಪ. ಕಾಮಧೇನು ಕಲ್ಪತರು ಚಿಂತಾಮಣಿಯಿಂದಪ್ಪ ಕಾಮಿತಾರ್ಥವೆಲ್ಲ ನಿರವಧಿ ಪ್ರೇಮಿಸಿ ಕೊಡಬಲ್ಲ ನಿತ್ಯ ಕಥಾಮೃತ ಸೇವಿಸಲು ಪಾಮರ ಜನಕೆ ಸ್ವಧಾಮವನೀವನ 1 ದುರಿತರಾಶಿಗಳನು ನಿಮಿಷದಿ ತರಿವನು ಮಾಧವನು ಸ್ಮರಿಸುವ ದಾಸರನು ಮರೆಯದೆ ಕರುಣಿಸಿ ಸಲಹುವನು ಚರಣಾಂಬುಜ ಕಿಂಕರಾಗಿರುವರು ಕರೆದಲ್ಲಿಗೆ ಬಂದಿರುವ ಮಹಾತ್ಮನ 2 ಶ್ರೀ ಭೂಮಿಸಹಿತ ಕೈವಶನಾಗುವ ಗುಣಭರಿತಾ ಯೋಗಿ ಮನೋನುಗತ ಶ್ರೀಮದ್ಭಾಗವತಾಂತಗತಾ ನೀಗಿ ನಿಖಿಳಭವ ರೋಗವ ಶರಣ ಮ- ನೋಗತ ಸಲಿಸುವ ಭೋಗ ಗಿರೀಶನ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಮಃ ಓನ್ನಮಃ ಮಮದೇಶಿಕ ತಿರುವಡಿಗಳೆ ಶರಣಂ ಪ ಶ್ರೀ ಪರಾತ್ಪರನೆ ಭಾಪದನಿಸರಿ ಕೋಪವ್ಯಾತಕೆ ಸಲಹೊ ಮುನಿಕುಲ ದೀಪ ನೀನಹುದಯ್ಯ ಅಡಿಯೇನ್ನಮಃ 1 ಸಾನಿಧಾಪ ಮದಾಪದದಿ ಸರಿ ಶ್ರೀನಿವಾಸ ದಯಾಳೊ ಅಡಿಯೇನ್ ನಮಃ 2 ವಾಸವಾರ್ಚಿತ ಶ್ರೀಗುರು ಹರಿ ದೋಷಗಳೆದೀಗೆನ್ನ ಆ ನಿಜ ಶೇಷಭೂತನ ಮಾಡೊ ಅಡಿಯೇನ್ ನಮಃ 3
--------------
ಚನ್ನಪಟ್ಟಣದ ಅಹೋಬಲದಾಸರು
ನಮಿಪೆನು ಗುರುರಾಯನೆ | (ನಾ ನಿನ್ನನು)| ನಮಿಪೆನು ಗುರುರಾಯನೆ ಪ ಕುಮತಿಯಾಗಿರ್ದೆನ್ನ ಮಮತೆಯೊಳ್ ಪೊರೆಯೆಂದು ಅ.ಪ ಪಾದ ಕಂದನ ಸಲಹೆಂದು 1 ಇನ್ನು ನೀ ವೇದಾಂತವನ್ನು ಬೋಧಿಸೆಂದೆನುತ 2 ದೆನ್ನಯ ನಿಜದರಿವ ಚೆನ್ನಾಗಿ (ಪೇಳೆಂದು) 3 ಸಾಗರದೊಳಗೈಕ್ಯವಾಗುವಂತೆಸಗಯ್ಯ 4 ಗುರು ಪಾರ್ವತೀಶ ಸದ್ಗುರುವೆ ತ್ರೈಜಗದೀಶ 5 ಇಂದೆನ್ನ ಹೃದಯದೊಳ್ ನಿಂದು ಮೈದೋರೆಂದು 6 ನಾದ ಸ್ವರೂಪನೆಯಾದ ಸದಾನಂದ 7
--------------
ಸದಾನಂದರು
ನಮಿಸುವೆನು ಭಕ್ತಿಯಲಿ ಚನ್ನಕೇಶವನೇ ಮೂರ್ತಿ ಅಜಸುರಾರ್ಚಿತನೇ ಪ ಕರಿರಾಜ ಖಲನಕ್ರ ಭಾಧೆಯಿಂ ಮರೆಹೊಗಲು ಕರಿಯನ್ನು ಸಲಹಿ ನಕ್ರಕೆ ಮೋಕ್ಷವವಿತ್ತೇ ಕರು ನೃಪತಿಯನುಜ ದ್ರೌಪದಿ ಮಾನ ಕಳೆಯುತಿರೆ ಶರಣೆಂದ ಮಾನಿನಿಗೆ ಅಕ್ಷಯವನಿತ್ತೇ 1 ಮಂದರವ ಪೊತ್ತೆ ನೀ ಸುರರಿಗಮೃತವ ನಿತ್ತೆ ಚಂದದಿಂದಜಮಿಳಗೆ ಅಂತ್ಯದಲಿ ವಲಿದೇ 2 ದಾಸಗೊಲಿಯುವಿಯಂತೆ ಭಕ್ತಜನರಿಗೆ ನಿತ್ಯ ಭಾಸವಾಗುವಿಯಂತೆ ವಿಶ್ವರೂಪದಲ್ಲಿ
--------------
ಕರ್ಕಿ ಕೇಶವದಾಸ
ನಮೋ ನಮೋ ಕಮಲಾಲಯೆ ಸರ್ವೋ ತ್ತುಮ ನಾರಾಯಣನಂಕದ್ವಯ ಸಮುಪಸ್ಥಿತೆ ಸುಂದರ ಮದಗಜ ಗಮನೆ ಗುಣಪೂರ್ಣೆ ಶೋಭಾನೆ ಪ ಕಂಗಳ ಕುಡಿನೋಟದಿ ಕಂಜಜ ಗಂಗಾಧರ ಸುರಮುಖ ಸುಜನರ ಇಂಗಿತ ಫಲ ಪೂರೈಸಿಕೊಡುವ ಮಂಗಳ ಸುಚರಿತ್ರೆ ಭೃಂಗಾಳಿಗಳಂದದಿ ಸೊಗಯಿಪ ಮುಂಗುರುಳಿಂದೊಪ್ಪುವ ನಿಜಪತಿ ಸಂಗಡ ಬಾ ಹಸಿಯ ಜಗಲೀಗೆ 1 ಜಲಜಾಕ್ಷನ ವಿಮಲಾಂಗದಿ ಪ್ರತಿ ಫಲಿಸಿದ ರೂಪಗಳನೆ ನೋಡುತ ಪುಳಕೋತ್ಸವದಿಂದಲಿ ಪಾಡುತ ಹೊಲಬು ಗಾಣದಲೆ ತಲೆದೂಗುತ ಮಿಗೆ ಸಂತೋಷದಿ ಗಳರವದಿಂ ಪಾಡುತ ಶ್ರೀ ಭೂಲಲನೆ ಬಾ ಹಸಿಯ ಜಗಲೀಗೆ 2 ಪ್ರತಿಫಲಿಸಿಹ ರೂಪಗಳೆನ್ನವು ಕತಿಪಯರೂಪಗಳೆನಗಿಂದಲಿ ಅತಿಶಯವೆ ತೋರುತಲಿಪ್ಪವು ಪ್ರತಿ ಪ್ರತಿಕ್ಷಣದಿ ಶ್ರುತಿ ಪ್ರತೀಕನು ದಯದಿಂದೆನ ಗ್ಹಿತದಿಂದಲಿ ತೋರಿದನೆನುತಲಿ ನತಿಸುತ ನಗುತಿಪ್ಪ ಲಕ್ಷ್ಮೀ ಹಸಿಗೇಳು 3 ಆ ಬ್ರಹ್ಮಾಂಡಗಳೊಳ ಹೊರ ಗುಪಮರು ನಿನಗಿಲ್ಲವಾಗಲು ಅಪರಾಜಿತನಮಲ ಸುರೂಪ ಗಳಪರೋಕ್ಷಣದಿ ಕಾಂಬ ಚಪಲಾಂಬಕ ಕೃಪಣರ ಸಲಹಲು ಸ್ವಪತಿಯ ಶಿಪಿವರನಂಸಗೆ ಸುಫಲದೆ ಬಾಹಸಿಯ ಜಗುಲೀಗೆ 4 ವೀತಭಯನ ವಕ್ಷಸ್ಥಳವೆ ಪು ರಾತನ ಮನೆಯೆನಿಪುದು ಅವಿನಾ ಭುತರು ನೀವಿರ್ವರು ಅಮೃತಾ ಜಾತರು ಎಂದೆಂದೂ ಭೌತಿಕ ಮಂದಿರದೊಳು ನೆಲೆಸಿ ಪು ನೀತರ ಮಾಳ್ಪುದೆಮ್ಮ ಜಗ ನ್ನಾಥ ವಿಠಲನರ್ಧಾಂಗಿ ಜಗ ನ್ಮಾತೆ ವಿಖ್ಯಾತೆ ಬಾಹಸಿಯ ಜಗುಲೀಗೆ 5
--------------
ಜಗನ್ನಾಥದಾಸರು
ನಮೋ ನಮೋ ಕಾಲಭೈರವ ಹರಿಯ ಚರಣ- ಸಮೀಪದೊಳಗಿದ್ದು ಮೆರೆವ ಪ. ಸಮೀಚೀನಜ್ಞಾನಭಕ್ತ- ಸಮೂಹವ ಕಾವ ಲಕ್ಷ್ಮೀ- ರಮಣನ ಕಾರ್ಯಮಂತ್ರಿ- ಯು ಮಾಧವನ ಸಮಾನಬಲ ಅ.ಪ. ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ- ಮುಟ್ಟಿ ಭಜಿಪ ವೈರಿಮರ್ದನ ಸೃಷ್ಟಿ ಮೂರರಲ್ಲಿ ಕೀರ್ತಿ- ಪಟ್ಟ ದಿಟ್ಟ ಧೀರ ಪರಮ ನಿಷ್ಠ ಪುಷ್ಪ ತುಷ್ಟಿಪ್ರದ ಬ- ಲಿಷ್ಠ ಶ್ರೇಷ್ಠ ಭೂತಪತಿಯೆ 1 ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ- ಧಾನ ಕಾರ್ಯ ನಿನ್ನದೆಂಬುದೆ ತಾನು ಕಿಂಚಿದರಿತು ಸನ್ನಿ- ಧಾನವನ್ನೋಲೈಸಿ ಬಂದೆ ದೀನಬಂಧು ಸುಗುಣಸಿಂಧು ಮಾನತ್ರಾಣವಿತ್ತು ಸಲಹೊ 2 ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ ಸ್ವಂತ ಬಂದು ಮಾಡು ರಕ್ಷಣೆ ಅಂತ್ಯಕಾಲದಲ್ಲಿ ಹರಿಯ ಚಿಂತನೆಗೆ ವಿಘ್ನ ಬಾರ- ದಂತೆ ಕಾವ ಮಹಾ ತೇಜೋ- ಸೂರಿ 3 ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ ಪಾಲಿಸುವ ಚಂದ್ರಶೇಖರ ಖೂಳ ಜನರ ಗರ್ವಮುರಿವ ಶೂಲಪಾಣಿ ಸುಗುಣಶ್ರೇಣಿ ಮೂಲಪತಿಯ ಪಾದಪದ್ಮ ಮೂಲದೊಳಗೆ ನಲಿವ ಚೆಲುವ 4 ಭೂರಿ ಮಹಿಮೆಯ ಭಕ್ತರಿಂಗಾ- ಧಾರವಾಗಿ ರಾಜಿಸಿರುವೆಯ ಧೀರ ಲಕ್ಷ್ಮೀನಾರಾಯಣನ ಸೇರಿದಾನತರ್ಗೆ ಮಂ- ದಾರ ಮಹೋದಾರ ಗಂ- ಭೀರ ಧೀರ ಚಾರುಚರಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋ ನಮೋ ನಮೋ ಎಂಬೆ ನಿನಗೆ ಸ್ವಾಮಿ ರಘುರಾಮಾ| ಶಮಲ ಹಾರಿಸಿ ವಿಮಲ ಮತಿಯ ಕೊಡುವ ಪುಣ್ಯ ನಾಮ ಪ ಮುನ್ನ ಮಾಡಿದ ಕೋಟಿ ಜನುಮದ ಪುಣ್ಯ ಒದಗಿತೆಂದು| ಕಮಲ ಕಂಡೆ ಧನ್ಯನಾದೆನಿಂದು 1 ಪರಮ ಪುರುಷನೆಂಬುದರಿಯ ಮಾಡಿದಪರಾಧವ ಕರುಣದಿಂದ ಕ್ಷಮಿಸಿ ಹೊರಿಯಬೇಕು ಪೂರ್ಣಬೋಧಾ 2 ಇಂದು ಮೊರೆಯಹೊಕ್ಕೆ ಸಲಹು ನಿಮ್ಮ ಸೇವೆಯಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ನಾರಾಯಣನೇ ಓಂ ನಮೋ ಚನ್ನಕೇಶವನೆ ಪ ಅಚ್ಯುತ ಪಾದದಿ ಸೇರಿಸೊ ಅನಂತ ಅ.ಪ ನಮೋ ನಮೋ ವೆಂಕಟರಮಣನೆ ಸಂಕಟಹರಿಸೋ ಶ್ರೀವರನೆ 1 ನಮೋ ನಮೋ ವರದರಾಜನೆ ವರವ ನೀಡೋ ಪುರುಷೋತ್ತಮನೆ 2 ನಮೋ ನಮೋ ಶ್ರೀರಂಗನಾಥನೆ ಸುರಕ್ಷೆಯ ಕೊಡೊ ಭಕ್ತವತ್ಸಲನೆ 3 ನಮೋ ನಮೋ ಸಂಪತ್ಕುಮಾರನೆ ಸಂಪತ್ತನು ಹರಿಸೋ ಶ್ರೀಹರಿಯೆ 4 ನಮೋ ನಮೋ ಮುದಿಗೆರೆ ರಂಗನೆ ಮುದದಿ ಕಾಪಾಡೋ ಮಾಧವನೆ 5 ನಮೋ ನಮೋ ಯದುಗಿರಿ ಚಲುವನೆ ಸದಯದಿ ಸಲಹೋ ದಾಮೋದರನೆ 6 ನಮೋ ನಮೋ ಜಾಜಿಪುರೀಶನೆ ನೀ ಜೋಪಾನಮಾಡೆನ್ನ ಪರಮಪಾವನನೆ 7
--------------
ನಾರಾಯಣಶರ್ಮರು
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ನಮ್ಮ ಗೋವಿಂದನ ಭಜಿಸುವೆ ಸತ್ಯ ನಿತ್ಯ ಪ ಹಿಂದಿನ ಜನ್ಮದಿ ಕಾಯ್ದ ಶ್ರೀಧರನ ಚಂದದಿ ನರಜನ್ಮಕ್ಕೆಳತಂದ ಪರಿಯ 1 ಜನನಿಯ ಜಠರದಿ ಕಾಯ್ದ ಶ್ರೀಧರನ ಜನನ ಕಾಲಕೆ ಬಂದೊದಗಿದ ಪರಿಯ 2 ಕಾಲಕಾಲಕೆ ಬಂದು ಸಲಹಿದ ಪರಿಯ 3 ದುಷ್ಟ ಜನರ ಕಾಟ ಬಿಡಿಸುವ ಪರಿಯ4 ದೀನರಿಗೊದಗುತ್ತ ಕಾಯ್ವ ಶ್ರೀಧರನ ಚನ್ನಕೇಶವ ದೇವನೆಂಬ ಶ್ರೀ ಹರಿಯ5
--------------
ಕರ್ಕಿ ಕೇಶವದಾಸ