ಒಟ್ಟು 2062 ಕಡೆಗಳಲ್ಲಿ , 101 ದಾಸರು , 1654 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವರತ್ನದ ಮಂಟಪದಿ ಮೆರೆವೊ ಸುಖಾಸನಕೆ ಈಗ ನವಮೋಹನ ರಘುರಾಮನೆ ನೀನು ಬಾ ಬೇಗ ಪ. ದಶರಥನುದರದಿ ಜನಿಸಿ ಅಸುರ ತಾಟಕಿಯನು ಸಂಹರಿಸಿ ಋಷಿಗಳ್ಯಾಗವ ಕಾಯ್ದದು ನೀನು ಋಷಿ ಪತ್ನಿಯರನು ಉದ್ಧರಿಸೀ ಪತಿವ್ರತೆಯೆನಿಸಿದ ಅತುಳ ಮಹಿಮ ಶ್ರೀರಾಮ ಬಾ ಬೇಗ ಅತುಳ ಮಹಿಮ ಶ್ರೀರಾಮ ಬಾ ಬೇಗ1 ಶಿವಧನುವೆತ್ತಿದ ಧೀರ ಸೀತಾದೇವಿಯ ಕರವನೆ ಪಿಡಿವಾ ತವಕದಿ ಮುರಿದಾಯೋಧ್ಯಯಾಳಿದ ಶ್ರೀ ಶ್ರೀನಿವಾಸನೆ ನೀನು ಬಾ ಬೇಗ ಸುಖಾಸನಕೆ 2
--------------
ಸರಸ್ವತಿ ಬಾಯಿ
ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನಬದುಕು ಆಗಲಿಲ್ಲ ಪ ಹೆಂಡರಿಚ್ಛೆಯಿಲ್ಲ ಹೀನವೆಂಬುದಿಲ್ಲಪಂಡಿತತ್ವದ ಪರಮಾರ್ಥಕಿಲ್ಲಉಂಡೆ ಉಟ್ಟೆನೆಂಬ ಊಹೆ ಮೊದಲಿಗಿಲ್ಲಕಂಡ ಕಂಡಂತೆ ಚರಿಸುವಂತಾಯಿತೆ 1 ಅರಿವು ಮರೆವು ಇಲ್ಲ ಆಸೆಗಳೇನಿಲ್ಲಇರುಳು ಹಗಲು ಎಂಬುದೆರಡಿಲ್ಲವೋಶರೀರ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಮರುಳು ಮರುಳು ಆಗಿ ತಿರುಗುವಂತಾಯಿತು 2 ಚಿದಾನಂದ ಗುರುವಿನ ಚಿತ್ತದಿ ಪಿಡಿದರೆಒದವಿದ ಬ್ರಹ್ಮಾನಂದವ ಸವಿದುವಿಧವಿಧವಾದ ಬೆಳಕಿನೊಳಾನಡಗಿರೆಇದರಿಂದಲಿ ಇಂತಾದುದಿದೆಲ್ಲವು3
--------------
ಚಿದಾನಂದ ಅವಧೂತರು
ನಾ ನೋಡಿ ಬಂದೆ ಕೇಳಮ್ಮ ಗೆಳತಿ ಪ ನಾನಿಲ್ಲ ನೀನಿಲ್ಲ ಏನಂದರೇನಿಲ್ಲ ಕಾಣುವ ಮಾತಲ್ಲ ಜಾಣೆ ಸುಳ್ಳಲ್ಲ ಅ.ಪ ಹಸುರಿಲ್ಲ ಕೆಂಪಿಲ್ಲ ಪಶುವಿಲ್ಲ ಪಕ್ಷಿಲ್ಲ ವಸುಧಿಲ್ಲ ಉದಧಿಲ್ಲ ವ್ಯಸನಿಲ್ಲ ಬಂಧವಿಲ್ಲ ಹಸಿವಿಲ್ಲ ತೃಷೆಯಿಲ್ಲ ದೆಸೆಯಿಲ್ಲ ದಿಕ್ಕಿಲ್ಲ ನಿಶೆಯಿಲ್ಲ ದಿವಯಿಲ್ಲ ಕುಸುಮಾಕ್ಷಿ ಸುಳ್ಳಲ್ಲ 1 ಜಲವಿಲ್ಲ ಗಗನಿಲ್ಲ ನೆಲವಿಲ್ಲ ಗಿರಿಯಿಲ್ಲ ಕುಲವಿಲ್ಲ ಚಲವಿಲ್ಲ ಮಲಿನಿಲ್ಲ ಶೀಲಿಲ್ಲ ಜಳಕಿಲ್ಲ ಊಟಿಲ್ಲ ಬೆಳಕಿಲ್ಲ ಕಾಳಿಲ್ಲ ತಳಿಯಿಲ್ಲ ತಮಯಿಲ್ಲ ಲಲನೆ ಸುಳ್ಳಲ್ಲ 2 ಕೃಪೆಯಿಲ್ಲ ಕಪಟಿಲ್ಲ ಜಪವಿಲ್ಲ ತಪವಿಲ್ಲ ಗುಪಿತಿಲ್ಲ ಬೈಲಿಲ್ಲ ನೆಪ್ಪಿಲ್ಲ ಮರೆವಿಲ್ಲ ವಿಪಿನಿಲ್ಲ ಸದನಿಲ್ಲ ರಿಪುವಿಲ್ಲ ಸ್ನೇಹವಿಲ್ಲ ಅಪ್ಪಯಿಲ್ಲ ಅವ್ವಯಿಲ್ಲ ನಿಪುಣೆ ಸುಳ್ಳಲ್ಲ 3 ರಾಗಿಲ್ಲ ರಚನಿಲ್ಲ ಯಾಗಿಲ್ಲ ಯಜ್ಞಿಲ್ಲ ತ್ಯಾಗಿಲ್ಲ ತ್ಯಜನಿಲ್ಲ ಭೋಗಿಲ್ಲ ಭಾಗ್ಗ್ಯಿಲ್ಲ ರೋಗಿಲ್ಲ ಶ್ರಮವಿಲ್ಲ ಬೈಗಿಲ್ಲ ಬೆಳಗಿಲ್ಲ ಯಾಗಿಲ್ಲ ಪಾಪವಿಲ್ಲ ಭಗಿನಿ ಸುಳ್ಳಲ್ಲ 4 ಹೋಮವಿಲ್ಲ ವಿಪ್ರಿಲ್ಲ ಧೂಮವಿಲ್ಲ ಧೂಳಿಲ್ಲ ಭೂಮಿಲ್ಲ ಜನನಿಲ್ಲ ಕಾಮಿಲ್ಲ ಮರಣಿಲ್ಲ ನೇಮಿಲ್ಲ ಕ್ರಿಯವಿಲ್ಲ ನಾಮಿಲ್ಲ ರೂಪಿಲ್ಲ ಸ್ವಾಮಿ ಶ್ರೀರಾಮ ಬಲ್ಲ ಭಾಮೆ ಸುಳ್ಳಲ್ಲ 5
--------------
ರಾಮದಾಸರು
ನಾ ಬೇಡುವೆನೋ ನಿನ್ನ ಸೌಭಾಗ್ಯಸಾಗರ ಶ್ರೀ ಭೂ ನೀಳಾವರ ಭಾಗವತೋದ್ಧಾರ ಪ ಯಾವಾಗಲು ನಿನ್ನ ಬಳಿಯೊಳು ನಾನಿದ್ದು ಭಾವಿಸಿ ಕುಶಲದ ಮಾತನಾಡೀ ದೇವ ನಿನ್ನಯ ಪಾದಯುಗಳವನೊತ್ತುತೆ ಸೇವಿಸಿ ಸುಖಿಪಂತೆ ಕರುಣಿಸು ಮುರಹರ1 ಮುಂಗಡೆ ಕುಣಿ ಕುಣಿದಾಡಿ ಸ್ತೋತ್ರವ ಮಾಡಿ ಕಂಗಳೊಳಾನಂದಭಾಷ್ಪಗೂಡೀ ಅಂಗವ ಮರೆತೆನ್ನ ಕಂಠಗದ್ಗದವಪ್ಪ ಮಂಗಳಕರ ಭಕ್ತಿ ಕೃಪೆ ಮಾಡು ಶ್ರೀರಂಗ 2 ಹೆಜ್ಜಾಜಿಯ ಚೆನ್ನಕೇಶವ ಮಾಧವ ಹೆಜ್ಜೆ ಹೆಜ್ಜೆಗೆ ನಿನ್ನ ಸ್ಮರಣಿಯಿತ್ತು ಸಜ್ಜುಗೊಳಿಸಿ ಎನ್ನ ಹೃದಯಪೀಠದಿ ಕೂಡೊ ಅರ್ಜುನಸಾರಥಿ ಶ್ರೀಕೃಷ್ಣ ಪರಮಾತ್ಮ 3
--------------
ಶಾಮಶರ್ಮರು
ನಾ ಮಾಡಿದತಿಶಯ ಅಪರಾಧ ಅಹಾ ಸ್ವಾಮಿದ್ರೋಹವೆ ಮಾಡಿದೆ ಪ ನೇಮವಿಲ್ಲದೆ ಪಾಪ ಕಾಮಿಸಿ ಮಾಡಿ ಹರಿ ಪ್ರೇಮಕ್ಕೆ ದೂರಾದೆ ಪಾಮರತನದಿ ಅ.ಪ ಗುರುನಿಂದೆ ಮಾಡಿದೆ ಸ್ಮರಿಸಿದೆನನುದಿನ ಸ್ಮರಿಸಬಾರದ ಸ್ತ್ರೀಯರ ಶರಣಜನರು ಕಂಡು ಶಿರವ ಬಾಗದೆ ಮಹ ಗರುವದಿಂ ಚರಿಸಿದೆ ಪರಿಪರಿ ಜಗದಿ 1 ಲಕ್ಷಿಸದೆ ಪರರರ್ಥ ಭಕ್ಷಿಸಿ ಇಲ್ಲೆನುತ ಪಕ್ಷಿಗಮನನ ಸಾಕ್ಷಿಟ್ಟು ಲಕ್ಷದಶಶತಪಾಪ ಲಕ್ಷ್ಯವಿಲ್ಲದೆ ಗೈದು ಶಿಕ್ಷೆಗೆ ಗುರಿಯಾದೆ ಮೋಕ್ಷವನರಿಯದೆ 2 ಪಿತಮಾತೆಯರ ನೂಕಿ ಇತರರ ಜತೆಯೊಳು ಮತಿಗೆಟ್ಟು ಮಮತಿಟ್ಟಿಹೆ ಮಿತಿಯಿಲ್ಲದನೃತ ಕ್ಷಿತಿಯೊಳು ಸರಿಧರ್ಮ ಹಿತಚಿಂತನಿನಿತಿಲ್ಲದತಿಭ್ರಷ್ಟನಾದೆ 3 ಮಣಿದು ದೈನ್ಯೆಂಬರಿಗೆ ಘನಹಾಸ್ಯಗೈಯುತ ಮನವ ನೋಯ್ಸಿದೆ ಬೆನ್ನ್ಹಚ್ಚಿ ಕನಿಕರೆಂಬುದು ಎನ್ನ ಕನಸಿನೊಳಿನಿತಿಲ್ಲ ಮನಸಿನಂತ್ವರ್ತಿಸಿ ಘನಕರ್ಮಿಯಾದೆ 4 ಇಂತು ಪಾಪಿಗೆ ಸುಖವೆಂತು ತ್ರಿಜಗದೊಳು ಕಂತುಜನಕ ಶ್ರೀರಾಮ ಭಕ್ತವತ್ಸಲ ನೆಂಬ ಬಿರುದು ವಹಿಸಿದಿ ಎನ್ನ ದೆಂಥ ತಪ್ಪಿರೆ ಕ್ಷಮಿಸಿ ಸಂತಸದಿಂ ಪೊರೆ 5
--------------
ರಾಮದಾಸರು
ನಾಗಶಯನ ವರಯೋಗಿ ನಿಕರಪ್ರಿಯ ಬಾಗಿದೆ ಶಿರ ಅನುರಾಗದಿ ನೋಡೆಲೊ ಪ ಆಗ ನಿನ್ನ ಮರೆತೆನೆಂದು ಈಗ ಎನ್ನ ಮರೆಯದಿರೆಲೋ ಅ.ಪ ಶ್ರೀರಮಣ ನಿನ್ನ ಪ್ರೇರಣೆಯಿಲ್ಲದೆ ಯಾರು ನಡೆಯುವರು ಈ ಧರೆಯೊಳಗೆ ಕಾರಣ ಕಾರಣ ನಿನ್ನೊಳಗೆ ಮನ ಸೇರಿಸಿ ಪೊರೆಯೋ ಸಮೀರಸಖ 1 ಸುಂದರರೂಪ ಮುಕುಂದ ಪರಾತ್ಪರ ಸಿಂಧುಶಯನ ನಿನ್ನ ಶುಭಗುಣಗಳಲಿ ಸಂದೇಹ ಬಾರದೆ ಕರುಣಿಸೆಲೋ ಮುಚು ಕುಂದ ವರದ ಗೋವಿಂದ ಹರೇ 2 ನಿನ್ನ ಕರುಣದಿಂದ ಕಣ್ಣು ತೆರದಿಹೆನೊ ಪೂರ್ಣವಿಮಲ ಸುಖ ಜ್ಞಾನ ಸುಕಾಯ ಮಾನ್ಯ ಪ್ರಸನ್ನ ಸದಾ ಪೊರೆಯೋ ಸರ್ವ ಭಿನ್ನ ಸಮೀಚೀನ ಸುಖವೀಯೊ 3
--------------
ವಿದ್ಯಾಪ್ರಸನ್ನತೀರ್ಥರು
ನಾಚಿಸಿದೆಯ ದೇವಯನ್ನ ಎಲ್ಲಈ ಚರಾಚರ ತುಂಬಿಹ ವ್ಯುತ್ಪನ್ನ ಪ ಶ್ರೀಗಿರಿ ನೋಡುವೆನೆಂದು ನಾಸಾಗಿ ಪಯಣಗೊಂಡು ಬಂದುರಾಗವುದಿಸಿ ಮನಕಿಂದು ಮುಂದೆಭೋಗ ತರದ ಮನ ತೂರಿತು ನಿಂದು 1 ಮಧ್ಯಾಹ್ನ ಬಿಸಿಲೊಳು ನಡೆಯೆ ನಾನುಅದ್ವಯವಿಲ್ಲದೆ ಹಾದಿ ನೀರ್ಗುಡಿಯೆಇದ್ದ ಚೈತನ್ಯ ತಾ ನುಡಿಯೆ ಇಂತುಹೊದ್ದ ಶರೀರ ಬಳಲಿ ನೆಲಕೆಡೆಯೆ 2 ಧರಣಿಯ ಸುರರೂಪ ತಾಳಿ ನೋಡೆವರಣ ವರಣ ರುದ್ರಾಕ್ಷಿ ಚಾಳಿಚರಣ ಕಿರಣದಲ್ಲಿ ಹೂಳಿ ನಾನುಗುರುವೆ ಎಂದು ನುಡಿವುದ ಕೇಳಿ 3 ಎಲ್ಲಿ ಪೋಗುವೆ ಎಂದು ಕೇಳೆಮಲ್ಲಿಕಾರ್ಜುನನ ನೋಡಿಯೇ ಬಹೆನೆಂದುಸೊಲ್ಲುಡುಗಲು ನಾನಿತ್ತೆಂದು ಗುರುಸುಳ್ಳು ಆದನೆ ಸರ್ವ ಪೂರಿತನಿಂದು 4 ಸರ್ವರೂಪದು ಮೃಷೆಯಾಯ್ತು ಎಲ್ಲಸರ್ವಜನರಿಗೆ ಬೋಧಿಸುವಡೇನಾಯ್ತುಸರ್ವತಾನೆನಿಪುದೇನಾಯ್ತು ಎಲ್ಲಸರ್ವರನುಳಿದು ಬಂದಿಹುದೊಳಿತಾಯ್ತು 5 ಇಂತು ಬುದ್ಧಿಗಳಿಂದ ಝಡಿಯೆ ಎಲ್ಲಅಂತು ಕೇಳುತ ನೀವು ಆರೆಂದು ನುಡಿಯೆನಿಂತಲ್ಲಿ ದೃಶ್ಯವ ಪಡೆಯೆ ಕಂಡುಸಂತೋಷದಿಂ ನಾ ಸಾಷ್ಟಾಂಗವೆರಗೆ 6 ಆನಂದ ತೊರೆಯೊಳು ಮುಳುಗಿ ಚಿ-ದಾನಂದ ಗುರುವ ಕಾಣದೆ ಮನಮರುಗಿಧ್ಯಾನದಿ ಕಂಗಳು ತಿರುಗಿ ನೋಡಿತಾನೇ ತಾನಾದ ಘನದಿ ಮನ ಕರಗಿ7
--------------
ಚಿದಾನಂದ ಅವಧೂತರು
ನಾಟ್ಯವಾಡಿದನು ರಂಗ ಮಂಗಳಾಂಗ ಪ. ನಾಟ್ಯವಾಡಿ ಶಕಟಾಂತಕ ಕೃಷ್ಣ ನೋಟಕರಿಗೆ ತನ್ನಾಟ ತೋರಿ ಭಂಗ ಜಗದಂಗ ಧಿಕಿಟದಿಂ ತದಾಗಿಣ ತೋಂ ತರನಾನಂದದಿ ಸುಂದರನಾಟ್ಯ ಅ.ಪ. ಅಪ್ರಮೇಯ ಹರಿ ತನುಭವ ಬಲರಾಮರ ಜತೆ ಸೇರಿ ಅನುನಯದಲಿ ಗೋವನು ಕಾಯುತಲಿರೆ ಪೀತಾಂಬರಧರನಾಟವ ನೋಡುವೆನೆಂದು ಸಾಟಿಯಿಲ್ಲದ ವಿಷಮಡುವಿಲಿ ಕಾಳಿಂಗ ನೀಟಿಲಿ ಕುಳ್ಳಿರೆ ಓಟದಿ ಪಶುಗಳು ನೀರಾಟದಿ ಕುಡಿಯಲು ನಾಟಿ ಗಾರಾದ ನೆಲಕುರುಳಲು ರಂಗ ಕೋಟಿಪ್ರಕಾಶ ಕಾಳಿಂಗನಾಟ ತೋರುವೆನೆಂದೂ ಧಿಕಿಟ1 ದುಷ್ಟನ ವಿಷಮಯ ನೀರನು ಕುಡಿದು ಉತ್ಕøಷ್ಟ ಗೋವು ಮೂರ್ಛೆಯ ಪೊಂದೆ ಪುಟ್ಟ ಬಾಲಕರು ಕೃಷ್ಣಗೆ ಪೇಳಲಾ ತಟ್ಟನೆ ಕಡಹದ ಮರವೇರುತ ಧುಮುಕೆ ಪುಟ್ಟ ರಂಗನೆಂದು ಬಿಟ್ಟನೆ ದುಷ್ಟನು ಸುತ್ತಿ ಬಾಲ ಕುಟ್ಟುಪ್ಪಳಿಶಿದನು ಕಷ್ಟವೆ ರಂಗಗೆ ನಿಷ್ಟುರ ಭಕ್ತರು ಶಿಷ್ಟಾಚಾರದಿ ಮೆಟ್ಟಿ ಬಾಲ ಕೈಗಿಟ್ಟು ತವಕದಿ ದಿಟ್ಟ ಶ್ರೀ ಕೃಷ್ಣ ಥಕಥೈ ತದಿಗಿಣಝಂ ಆನಂದ ನಾಟ್ಯ 2 ಅಂಬುಜೋದ್ಭವನ ನಾಟ್ಯವ ನೋಡೆ ಕುಂಭಿಣಿ ತಳದಾಕಾಶದಿ ಸುರರು ತುಂಬುರು ನಾರದ ಸಂಭ್ರಮಗಾನ ರಂಭಾದ್ಯಪ್ಸರ ಸ್ತ್ರೀರಂಭರ ನಾಟ್ಯ ಅಂಬರದಿಂ ಪೂಮಳೆ ರಂಗಗೆರೆಯೆ ಜಗಂಗಳು ನೋಡೆ ಶ್ರಿಂಗರ ಶ್ರೀ ಶ್ರೀನಿವಾಸಗೆ ಗೋಪಿ ರಂಗ ಬಾರೆನುತಲೆ ಮಂಗಳಾರುತಿ ಮೂರ್ತಿ ಕಾಳಿಂಗಭಂಗ ನಾಟ್ಯ 3
--------------
ಸರಸ್ವತಿ ಬಾಯಿ
ನಾನಾ ಚಿಂತನೆ ಎನಗಿಲ್ಲ ಹರಿ ನಿನ್ನ ಚಿಂತನೆ ಎನಗನುಗಾಲ ಪ ಮಾನಾಪಮಾನದ ಭಯವಿಲ್ಲೆನಗೆ ತವ ಧ್ಯಾನವೊಂದೆ ನೀಡು ಬಹು ಮಿಗಿಲ ಅ.ಪ ಉಪವಾಸಬಿದ್ದರೆ ಆಡ್ಡಿಯಿಲ್ಲ ಎನ ಗಪರೂಪ ಊಟಾದರ್ಹಿಗ್ಗಿಲ್ಲ ಕಪಟದಿ ಬೈದರೆ ಅಹಿತಿಲ್ಲ ಜನ ನಿಪುಣನೆಂದರೆ ಎನಗ್ಹಿತವಿಲ್ಲ ಸುಪಥದಿ ನಡೆಸೆನ್ನ ಸಫಲನೆನಿಸಿ ನಿಮ್ಮ ಗುಪಿತ ಮಂತ್ರ ಮಾಡನುಕೂಲ 1 ಪರಮ ಬಡತನವಿರೆ ಪರವಿಲ್ಲ ಬಲು ಸಿರಿ ಸಂಪದವಿರೆ ಹರುಷಿಲ್ಲ ಸಿರಿವರ ನಿಮ್ಮಯ ಚರಣ ಸ್ಮರಣೆವೊಂದೆ ಸ್ಥಿರಮಾಡು ಮರೀದಂತೆ ಗೋಪಾಲ 2 ಕಾಮಿನಿಯರ ಪ್ರೇಮ ನಿಜವಿಲ್ಲ ಮತ್ತು ಹೇಮ ಮುತ್ತು ರತ್ನ ಇರೋದಲ್ಲ ಭೂಮಿಸೀಮೆಯ ಸುಖವಿಲ್ಲ ಇದು ನೇಮವಲ್ಲೊಂದಿನ ಬಟ್ಟಬೈಲ ಕ್ಷೇಮಮಂದಿರ ಭಕ್ರಪ್ರೇಮದಿ ಕೊಡು ಶ್ರೀರಾಮ ನಿಮ್ಮಡಿ ಭಕ್ತಿ ನುತಪಾಲ 3
--------------
ರಾಮದಾಸರು
ನಾನಿನ್ನ ಧ್ಯಾಸದೊಳಿರುವೆ ಹರಿ ನೀನೆನ್ನ ಧ್ಯಾಸದೊಳಿರಬೇಕು ಸತತ ಪ ಬೆಳಗು ನಿನ್ನೊಳಗಯ್ಯ ಬೆಳಗಿನೊಳಗೆ ನೀನು ಕಳೆಯೊಳಗೆ ನೀನಯ್ಯ ಕಳೆಯು ನಿನ್ನೊಳಗೆ ಇಳೆಮೂರು ನಿನ್ನೊಳಗೆ ಇಳೆಯೊಳು ನೀನಯ್ಯ ಒಲಿದು ನೀ ಎನ್ನನು ಸಲಹಯ್ಯ ಸತತ 1 ವೇದದೊಳಗೆ ನೀನು ವೇದ ನಿನ್ನೊಳಗಯ್ಯ ನಾದ ನಿನ್ನೊಳು ದೇವ ನಾದದಿ ನೀನು ಬೋಧ ನಿನ್ನೊಳು ಪ್ರಭು ಮಾಧವ ಸತತ 2 ನೀನಿಟ್ಟ ಸೂತ್ರದಿಂ ನಾನಾ ಸೃಷ್ಟಿಗಳೆಲ್ಲ ನಾನುತಾನೆನ್ನುತ ಕುಣೀತಿಹ್ಯವೊ ನಾನು ನಿನ್ನೊಳು ಜೀಯಾ ನೀನು ನಿನ್ನೊಳು ತಂದೆ ಧ್ಯಾನದಾಯಕ ಶ್ರೀರಾಮಯ್ಯ ಸತತ 3
--------------
ರಾಮದಾಸರು
ನಾನು ಸಜ್ಜನನಾದೊಡೆಹೀನವಿಷಯಂಗಳಿಗೆ ಎರಗುವೆನೇನಯ್ಯ ಪ. ಚಿತ್ತವÀ ಪುರುಷೋತ್ತಮನಲ್ಲಿಡದೆಉತ್ತಮರಾದವರೊಡನಾಡದೆತತ್ವವಿಚಾರವೊಂದರಿಯದೆ ನಾನು-ನ್ಮತ್ತರಸಂಗವ ಮಾಡುವೆನೇನಯ್ಯ1 ನಿರುತವು ಪರನಿಂದೆಗಳ ಮಾಡುತಲಿಗುರುಹಿರಿಯರನು ವಿಚಾರಿಸದೆಗುರುವೆ ದೈವವೆಂದರಿಯದೆ ನಾನುಪರರ ಒಡವೆಯನು ಬಯಸುವೆನೇನಯ್ಯ 2 ಹೇಯಶರೀರವ ಪೋಷಿಸುವೆನೆಂದು-ಪಾಯವನು ಮಾಡಿ ನಾ ಬಳಲುತಿಹೆರಾಯರು ಮಾಡಿದ ಶರಣರ ಹೊರೆವಹಯವದನ ನಿನ್ನ ನಾ ಮರೆತಿಹೆನೇನಯ್ಯ 3
--------------
ವಾದಿರಾಜ
ನಾನೇ ಸಜ್ಜನನಾದಡೆ ಇಂಥ ಹೀನ ವಿಷಯಗಳಿಗೆರಗುವೆನೇನಯ್ಯ ಪ. ನಿರುತದಿ ಪರರ ನಿಂದಿಸುತಿಹೆನೆಗುರುಹಿರಿಯರು ಸಜ್ಜನರೆನ್ನದೆಹರಿ ಪರದೈವವೆಂದರಿತು ಭಜಿಸದೆಪರರ ವಡವೆಗಳ ಬಯಸುವೆನೇನಯ್ಯ 1 ಚಿತ್ತವ ಪುರುಷೋತ್ತಮನ ಮನದಲ್ಲಿಡದೆಉತ್ತಮರಾದವರೊಡನಾಡದೆತತ್ವ ವಿಚಾರವ ಮಾಡದೆ ನಾನು ನ್ಮತ್ತರ ಸಂಗವ ಮಾಡುವೆನೇನಯ್ಯ 2 ಹೇಯ ಶರೀರವ ಪೋಷಿಸಿಕೊಂಡುಪಾಯವ ಚಿಂತಿಸಿ ಬಳಲುವೆನುರಾಯರ ಶರಣರ ಸಲಹುವರಂಗವಿಠಲನ ಬಿಡುವೆನೇನಯ್ಯ 3
--------------
ಶ್ರೀಪಾದರಾಜರು
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ ಪ ದುರುಳ ಕರ್ಮಿಯು ನಾನುಪರಂಜ್ಯೋತಿಯು ನೀನು ಪಾಮರನು ನಾನು 1 ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕರ್ಮಿ ನಾನುವನಜಸಂಭವನಯ್ಯ ವೈಕುಂಠಪತಿ ನೀನುತನುವು ಸ್ಥಿರವಲ್ಲದ ನರಬೊಂಬೆ ನಾನು 2 ದುರಿತ ಮಾಯಾ ಶರೀರಿ ನಾನು 3 ಭೂರಿ ಕಾರುಣ್ಯಪತಿ ನೀನುಘೋರತರ ಕಾಮಕ್ರೋಧಿಯು ನಾನುಈರೇಳು ಲೋಕವನು ಪೊಡೆಯಲಿಟ್ಟವ ನೀನುಸಾರಿ ಭಜಿಸದ ದುಷ್ಟ ಕರ್ಮಿ ನಾನು 4 ತಿರುಪತಿಯೊಳು ನೆಲಸಿದ ವೆಂಕಟೇಶನು ನೀನುಚರಣಕೆರಗುವ ಕನಕದಾಸನು ನಾನುಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ5
--------------
ಕನಕದಾಸ
ನಾನೇನು ಬೇಡಿದೆನೋ ರಂಗಯ್ಯ ನೀನೆನ್ನ ನೋಡವಲ್ಲ್ಯಾಕೋ ಪ ಹಾನಿ ಮಾಡೆ ಮಹಹೀನಭವಸಾಗರ ಮಾನದಿಂ ಗೆಲಿಸೆಂದು ನಾನಿಷ್ಟೇ ಬೇಡುವೆ ಅ.ಪ ನಿಗ್ರಹಿಸಿ ಸ್ಥಿರಪದನುಗ್ರಹಿಸಿ ಪೊರೆಯೆಂದೆನೆ ಸುಗ್ರೀವನಂತೆನ್ನ ಆಗ್ರಜನ ಕೊಂದು ಕಪಿ ದುರ್ಗಕ್ಕಧಿಪತಿಯೆನಿಸೆಂದಾಗ್ರಬಟ್ಟೆನೊ ನಿನಗೆ 1 ಕುಲವ ನಿರ್ಮೂಲ ಮಾಡಿ ಇಳೆ ಪಟ್ಟಕ್ಕೆ ಸ್ಥಿರವಾಗಿ ನಿಲಿಸು ಎನಗೆಯೆಂದು ಸುಲಭದಿಂ ಬೇಡಿದೆನೆ ಒಲಿದು ಸಾರಥಿಯಾಗಿ ಕುಲದವರ ಸವರೆಂದು ನಳಿನಾಕ್ಷ ತವಪಾದದೊಳು ಬೇಡಿದೆನೇನೋ 2 ಚಿತ್ತಜಪಿತ ನಿನ್ನ ಸತ್ಯ ಬಿರುದುಗಳು ನಿತ್ಯ ನಿತ್ಯದಿ ಬಿಡದೆ ಶಕ್ತಿಯಿಂ ಪೊಗಳುವೆ ಭಕ್ತಿದಾಯಕ ನಿನ್ನ ಯುಕ್ತ್ಯಾರುಬಲ್ಲರು ಮುಕ್ತಿ ದಯಮಾಡೆಂದು ಪ್ರಾರ್ಥಿಪೆ ಶ್ರೀರಾಮ 3
--------------
ರಾಮದಾಸರು
ನಾನೊಂದು ಮಾಡಲು ತಾನೊಂದಾದಮೇಲಿನ್ನೇನಿನ್ನೇನು ದೇವರೆಂದು ನಮಿಸಲು ದೆವ್ವಾಗಿ ಬಡಿದ ಮೇಲಿನ್ನೇನಿನ್ನೇನು ಜೀವದಾಪ್ತರೆ ತನ್ನ ಕೊಲ್ಲಲೆತ್ನಿಸಿದರಿನ್ನೇನಿನ್ನೇನು 1 ತಾಯ್ತಂದೆಗಳೆ ಸುತರಿಗ್ವಿಷವನೆರೆದ ಮೇಲಿನ್ನೇನಿನ್ನೇನು ಕೈಯೊಳು ಪಿಡಿದ ಬೆತ್ತ ಹಾವಾಗಿ ಕಚ್ಚಲು ಇನ್ನೇನಿನ್ನೇನು 2 ಕಣ್ಣಿಲ್ಲದವನಿಗೆ ಮಾರ್ಗ ತಪ್ಪಿದ ಮೇಲೆನ್ನೇನಿನ್ನೇನು 3 ಹಾಲೆಂದು ಸವಿದರೆ ಹಲ್ಲು ಮುರಿದಮೇಲಿನ್ನೇನಿನ್ನೇನು ಮಾಲ್ಯೆಂದು ಧರಿಸಲು ಉರುಲು ಬಿದ್ದ ಮೇಲಿನ್ನೇನಿನ್ನೇನು 4 ಬೇಲ್ಯೆದ್ದು ಹೊಲದ ಬೆಳೆಯ ತಾ ಮೇಯಲಿನ್ನೇನಿನ್ನೇನು ಮಾಳಿಗೆ ಮನೆಯೆ ತಾ ಗಾಳಿಗೆ ಸಡಲಿದರರಿನ್ನೇನಿನ್ನೇನು 5 ಭೂಪತಿಗಳತಿನೀತಿತಪ್ಪಿದ ಮೇಲಿನ್ನೇನಿನ್ನೇನು ಪಾಪಿಗಳತಿಶಯಯಕೋಪ ತಾಳಿದ ಮೇಲಿನ್ನೇನಿನ್ನೇನು 6 ನೋಪಿದ ಗೌರಿಯೆ ಶಾಪವಿತ್ತ ಮೇಲಿನ್ನೇನಿನ್ನೇನು ದೀಪವೆ ಕಾಲಾಗ್ನಿಯಾಗಿ ಉರಿದಮೇಲಿನ್ನೇನಿನ್ನೇನು 7 ಹೂಳಿಟ್ಟ ಹಣವೆಲ್ಲ ಚೇಳಾಗ್ಹರಿದ ಮೇಲಿನ್ನೇನಿನ್ನೇನು ಅಳಿದ ಗೋವುಗಳು ಹುಲಿಯಾಗ್ಹಾರಿದ ಮೇಲಿನ್ನೇನಿನ್ನೇನು 8 ಆಳುವ ಒಡೆಯರೆ ಅಹಿತರಾದ ಮೇಲಿನ್ನೇನಿನ್ನೇನು ಬಾಳುವುದೆಂತಯ್ಯ ಶ್ರೀರಾಮ ನೀಮುನಿದರಿನ್ನೇನಿನ್ನೇನು 9
--------------
ರಾಮದಾಸರು