ಸ್ಮರಿಸುವ ದಾಸರ ಮೊರೆ ಕೇಳದಿರೆ ಹರಿ
ಕರುಣಾಳು ನೀನೆಂಬ ಭರವಸಿನ್ಹ್ಯಾಗೆ ಪ
ಕರಿಧ್ರುವ ಬಲಿ ಪಾಂಚಾಲಿಯ ಪೊರೆದಂತೆ
ಸ್ಮರಿಪರ ಬಿಟ್ಟರೆಘಳಿಗಿರಲಾರಂತೆ
ಅರಿತು ವಿಚಾರಿಸು ನೋಡಿದವರಿಗಿದು
ಸರಿಬರುವುದೆ ನರಹರಿಯೆ ನೀನರಿಯೆ 1
ಕರುಣಾಕರನು ನೀ ನಿಜವಾಗಿರ್ದರೆ
ತ್ವರಿತದಿ ಬಂದೆನ್ನ ಮೊರೆ ಪಾಲಿಸೆಲೊ
ದುರಿತಭಯನಿವಾರ ನೀನಾದರೆ
ದುರಿತರಾಶಿ ಗಡ ಪರಿಹರಿಸಭವ 2
ಧರೆವರ ಧರ್ಮಗರಣ್ಯದಿ ಮುಗಿದ
ಪರುಷದನ್ನವನಿತ್ತು ನೀ ರಕ್ಷಿಸಿದೆ
ವರ ಬಿರುದು ನಿನಗಿರಬೇಕಾದರೆ
ತ್ವರಿತದಿ ಸಲಹೊ ಶ್ರೀಗುರು ರಾಮ 3