ಒಟ್ಟು 1200 ಕಡೆಗಳಲ್ಲಿ , 102 ದಾಸರು , 1063 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾಂಬಕೀ ವರಲಕ್ಷ್ಮೀ ಮಂಗಳಂ ಜಯ ಪ ಅಂಗಜಾದಿ ಪ್ರೇಮಜನನಿ ಭೃಂಗವೇಣಿಯೆ ಜಯ ಅ.ಪ. ಬಿಂಬರದನವಸನ ಭೂಷ್ಯೆ ಅಂಬುಜಾಂಬಕಿ ಅಂಬ ಪಾಹಿಮಾಂ ಜಯ 1 ಕುಂಕುಮಾಕ್ತ ಫಾಲಶೋಭೆ ಕಿಂಕಿಣೀರವೆ ಪಂಕಜಾತ ಶೋಭಮಾನ ಹಸ್ತಪಲ್ಲವೆ ಜಯ 2 ರತ್ನನಿಚಯ ಭಾಸಮಾನ ರತ್ನಕಿಂಕಿಣೀ ರತ್ನರಾಜಪುತ್ರಿ ಕಮಲೆ ಭಕ್ತವತ್ಸಲೆ ಜಯ 3 ನಿತ್ಯ ನಿನ್ನನು ಯತ್ನದಿಂದ ಧೇನುನಗರ ವಾಸೆ ಪಾಲಿಸು 4
--------------
ಬೇಟೆರಾಯ ದೀಕ್ಷಿತರು
ಮಂಗಳೆಂದು ಪಾಡಿಕೆ ಶ್ರೀರಂಗನಿಗೀಗ ಭೃಂಗಾಲಕಿಯರು ಕೂಡಿ ಶೃಂಗಾರದಿ ಬೇಗ ಪ ದೇವಾಧಿದೇವ ಹರಿಗೆ ದೇವೌಷ ವಂದ್ಯಗೆ ಗೋವರ್ಧನಾದ್ರಿಧರಗೆ ಗೋವೃಂದ ಪಾಲಗೆ ಪವಳಿಸಿದವಗೆ ಭೃಂಗಾಲಕಿಯರು 1 ಮೀನಾಗ ಫಾಣಿಕಿಟಗೆ ಶ್ರೀನಾರಿಸಿಂಹಗೆ ಕ್ಷೋಣಿಯ ತೊರೆದ ದಶಾನನಾರಿಗೆ ಸ್ಥಾಣು ಬಾಣ ಘೋಟಕಧ್ವಜಗೆ ಭೃಂಗಾಲಕಿಯರು 2 ಪ್ರೇಮಾಬ್ಧಿ ಪವನ ಪಿತಗೆ ಹೇಮಾಂಬಕಾರಿಗೆ | ಸಾಮಜೇಂದ್ರ ಪ್ರಿಯಗೆ ತ್ರಿಧಾಮ ದೇವಗೆ ಶಾಮಸುಂದರ ವಿಠಲ ಸುಧಾಮ ಸಖಗೆ ಭೃಂಗಾಲಕಿಯರು 3
--------------
ಶಾಮಸುಂದರ ವಿಠಲ
ಮಂಗೀಶಾ ಮಂಗೀಶಾ ಮಮ ಪ್ರಾಣಲಿಂಗೇಶಾ ಶಿವಹರ ಪ ಕುಟುಂಬ ರಕ್ಷಕ ನೀನು ಎನಗೆ ಸಟೆಂಬ ಸ್ವತಂತ್ರವೇನು ಶಿವಹರ 1 ರಾಮನ ಹೃದಯದಿ ನಲಿದೆ ನೀ ಬಲು ಪ್ರೇಮದಿ ಲಕ್ಷ್ಮಣಗೊಲಿದೆ ಶಿವಹರ 2 ಬೆಳೆಸಿದೆ ಈ ಸಂಸ್ಥಾನಾ ಇಂದಿಗೆ ಉಳಿಸಿದೆ ಎನ್ನಭಿಮಾನಾ ಶಿವಹರ 3 ಎನಗಿನ್ಯಾವುದು ಬೇಕು ನಿನ್ನಯ ನೆನಹಿನೊಳಿರುವದೆ ಸಾಕು ಶಿವಹರ 4 ಕುಶಸ್ಥಲದೆಡೆಯಲಿ ನಿಂದಾ ಶ್ರೀಗುರು ಪಶುಪತಿ ವಿಮಲಾನಂದಾ ಶಿವಹರ 5
--------------
ಭಟಕಳ ಅಪ್ಪಯ್ಯ
ಮಂಜುಳಾ ಪಾಶಾಂಕುಶದ ರಂಜಿತವರ ಬಾಹುದಂಡಮಂಜುಳಹಾರ ಕೇಯೂರಾದಿಭೂಷಮೌಂಜಿ ಕೃಷ್ಣಾಜಿನಧರನಿತ್ಯತೋಷಕಂಜ ಬಾಂಧವ ಶತರೂಪಿಸಂಕಾಶಕುಂಜರವದನಾ ಹಸೆಗೇಳು 1 ಪಾದ ಪಯೋಜರಾವಣಾಸುರಗರ್ವಹರ ಗಾನಲೋಲಪಾವನತರಸುರಕಾರ್ಯಾನುಕೂಲಗ್ರಾವತನೂಜೆಯ ಪ್ರೇಮದ ಬಾಲಶ್ರೀ ವಿಘ್ನರಾಜ ಹಸೆಗೇಳು 2 ಸೂರ್ಯ ಸು-ತ್ರಾಮಾಚ್ಯುತ ಚಂದ್ರ ವಂದ್ಯಹೇಮಾದ್ರಿಸನ್ನಿಭ ಕೋಮಲಗಾತ್ರರಾಮಣೀಯಕ ಕಾಂಚನಯಜ್ಞ ಸೂತ್ರಸೋಮಶೇಖರನ ಸಮ್ಮೋಹದ ಪುತ್ರಶ್ರೀಮದ್ಗಣೇಶ ಹಸೆಗೇಳು 3 ಕಾಮಕರ್ಮಾತೀತ ಸನ್ಮುನಿಜಾಲ ಮಾನಸರಾಜಹಂಸಬಾಲಾರ್ಕಶತರೂಪಿಕಾಂತಿ ಶರೀರಸ್ಥೂಲಕಂಧರ ದುಃಖದುರಿತವಿದೂರಫಾಲಲೋಚನ ಚಂದ್ರಗರ್ವಾಪಹಾರಬಾಲವಟುರೂಪ ಹಸೇಗೇಳು4 ಸಂತತ ಬಹುವಿಧಲೀಲಾಸಂತತ ಮುದಿತಾದ್ರಿಬಾಲಾಅಂತರಹಿತ ಶುಭಗುಣಗಣಸಾಂದ್ರದಂತದೀಧಿತಿನಿರ್ಜಿತಶರಶ್ಚಂದ್ರಕಾಂತವಿಗ್ರಹವಿಪದದ್ರಿಮಹೇಂದ್ರಚಿಂತಿತಾರ್ಥಪ್ರದನೇ ಹಸೆಗೇಳು 5
--------------
ಕೆಳದಿ ವೆಂಕಣ್ಣ ಕವಿ
ಮಂದರ ಧರನೆಂಬೊ ಕೋಲಸುಂದರಾಂಗನೆಂಬೊ ಯಾದವೇಂದ್ರಚಂದ್ರನೆಂಬೊ ಕೋಲ ಪಿಡಿದು ನಿಂತಾರು ಪ. ಹದಿನಾರು ಸಾವಿರ ಮಂದಿಮುದದಿಂದ ಹೆಜ್ಜೆಯನಿಕ್ಕುತ ಚದುರೆಯರು ಕೋಲಾಟಕ್ಕಾಗಿಒದಗಿ ನಿಂತಾರು1 ನೂರು ಮಂದಿ ನಾರಿಯರೆಲ್ಲಹಾರಭಾರ ಅಲಿಯುತಲೆಮುರಾರಿಯ ಮುಂದೆಲ್ಲಸಾಲು ಸಾಲಿಲೆನಿಂತರು 2 ನೀಲ ವರ್ಣನ ಮಡದಿಯರೆಲ್ಲಮೇಲಾದ ಕೋಲಾಟಕ್ಕಾಗಿಬಾಲೆಯರು ಬಂದೆಲ್ಲಸಾಲಾಗಿ ನಿಂತರು3 ಚಕ್ರಧರನ ಮಡದಿಯರೆಲ್ಲಚಕ್ಕನೆ ಕೋಲಾಟಕ್ಕಾಗಿನಕ್ಕು ಮುಗುಳನಗೆಯಸಖ್ಯದಲೆ ನಿಂತರು 4 ಪ್ರೇಮದಿಂದ ನಾರಿಯರೆಲ್ಲಭಾವೆ ರುಕ್ಮಿಣಿಗೆ ಎರಗಿಶ್ರೀಮಂತ ಧೀಮಂತ ನಮ್ಮಸ್ವಾಮಿ ಗೆಲಿಸೆಂದು 5 ಅಂಗನೆಯರು ರಾಮೇಶನ ಮಂಗಳ ಮಹಿಮೆಯಬೆಳದಿಂಗಳ ತುಂಬಿದರುಮೋಹನಾಂಗ ಚಂದ್ರಗೆ 6
--------------
ಗಲಗಲಿಅವ್ವನವರು
ಮಧುರವು ಮಧುರನಾಥನ ನಾಮವು ಪ ದಧಿ ಮಧು ದ್ರಾಕ್ಷಾ ಸುಧೆರಸಗಳಿಗಿಂತ ಅ.ಪ ನಂದಕುಮಾರನ ಚಂದದ ನಾಮವು 1 ಯದುಕುಲ ತಿಲಕನ ಸದÀಮಲ ಚರಿತನ ಮದನ ಪಿತನ ನಾಮ ಮುದದಲಿ ಪಾಡಲು2 ಗಾನವಿಲೋಲನ ದಾನವ ಕಾಲನ ಲೀಲೆಗಳನು ಸದಾ ಲಾಲಿಸಿ ಪೊಗಳಲು3 ಹೇಮವಸನನ ಕೋಮಲ ರೂಪನ ಭಾಮಾಕಾಂತನ ಪ್ರೇಮದ ನಾಮವು 4 ಪನ್ನಗಶಯನನ ಚಿನ್ಮಯ ರೂಪನ ಸನ್ನುತಿಸಲಿಕೆ ಪ್ರಸನ್ನನ ನಾಮವು 5
--------------
ವಿದ್ಯಾಪ್ರಸನ್ನತೀರ್ಥರು
ಮಧ್ವರಾಯರ ಶುದ್ಧಸಿದ್ಧಾಂತ ಪದ್ಧತಿಯಲಿ ಇದ್ದ ಮನುಜಗೆ ಕರಸಿದ್ಧವೈಯ್ಯಾ ಮುಕುತೀ ಪ ಬಿದ್ದು ಪೋಗುವುದಘ ವೃಂದಗಳೆಲ್ಲವು ಶುದ್ಧಜ್ಞಾನದಿ ಸತ್ಯ ಉದ್ಭರಿಪ ಹರಿ ವೇದಸಿದ್ಧವಿದುಕಾಣೋ ಅ.ಪ. ಖ್ಯಾತಿಯಿಂದಲಿಲಂಕೆ ಸುಟ್ಟು ಪ್ರೀತಿಲಿ ರಾಮನ ಭಜಿಸಿದರೋ ವ್ರಾತಖಳಕುಲ ಘಾತಿ ಮಾಡಿಸಿ, ವೀತಿಹೋತ್ರಗೆ ತುತ್ತು ನೀಡುತ ನಾಥರಾಮನ ವರದಿ ಮುಂದಿನ ಧಾತನಾಗಿ ಬರುವ ನಮ್ಮ 1 ದ್ವಾಪರದಲಿವರು ಪಾಪಿ ದುರ್ಯೋಧನನ ಭೂಪನಂದದಿ ಅಳಿಸಿ ಶ್ರೀಪತಿಸೇವೆನಡಿಸಿದರೋ ಶ್ಯಾಮಸುಂದರ ಕೃಷ್ಣರಾಯನ ನೇಮದಿಂದಲಿನಾಮ ಪಠಿಸುತ ತಾಮಸಾರನು ಯಮಗೆ ಕಳಿಸಿ ಕಾಮವಿಲ್ಲದೆ ಯಜ್ಞವನಡೆಸಿದ ಭಾಮೆ ದ್ರೌಪದಿ ಪ್ರೇಮ ಪತಿಯಾದ2 ಕಲಿಯುಗ ಕಳ್ಳರು ಸಲ್ಲದರ್ಥಗಳನ್ನು ಸುರರು ಮೊರೆಯಿಡಲು ವಲ್ಲಭನು ಶ್ರೀನಲ್ಲ ನಲ್ಲದೆ ಇಲ್ಲ ಜಗದೊಳು ಎಂದು ಸ್ಥಾಪಿಸಿ ಎಲ್ಲವೇದದ ಎಲ್ಲನಾದವು ನಲ್ಲ ಹರಿ ಯಂತೆಂದು ತೋರಿದ 3 ಜೀವೇಶ ಬೇಧವು ಪಂಚಬೇಧವು ಸುಳ್ಳು ತಾವೆ ನಾಥರು ಜಗಕೆ ತಾರತಮ್ಯವು ಠಕ್ಕೂ ಶಿವನೆ ಸರ್ವೋತ್ತಮ ಬ್ರಹ್ಮನಿರ್ಗುಣನು ಈ ವಿಧವಾದವ ವೇದವ್ಯಾಸರ ಕಂಡು ಬದರಿಲಿ ಸೂತ್ರ ಭಾಷ್ಯವ ಮಾಧವನೆ ಜಗದಾದಿಕಾರಣ ಮೋದ ನೀಡಿದ 4 ಮಧ್ವರಾಯರವಾಣಿ ಶುದ್ಧವೇದದಸಾರ ವೇದವ್ಯಾಸರ ಮತವು ಇದುಸಿದ್ಧ ಹರಿ ಆಣೆ ಕೇಳಿ ಗದ್ದರಾಗದೆ ಬಿದ್ದು ಇವರಡಿ ತಿದ್ದಿ ಮನವನು ಒದ್ದುದುರ್ಮತ ಪದ್ಮನಾಭನ ಪಾದಧ್ಯಾನದಿ ಅದ್ದಿ ಚಿತ್ತವ ಸಿದ್ಧಮಾಡಿರೋ ಮುಕ್ತಿಪಥವ 5 ಪರಿಸರನೀತನು ಪರಮಾಪ್ತನುಹರಿಗೆ ಗುರುವೊ ಜಗಕೆಲ್ಲ ಬರುವ ಬ್ರಹ್ಮನು ಕಾಣೋ ಓಡಿಸುಮಾರಿಮತಗಳ ಇಲ್ಲವೊ ಹರಿಯ ಧಾಮವು 6 ಮೂರುಹತ್ತು ಎರಡು ಗುರುಲಕ್ಷಣ ಕಾಯರು ನಿರುತ ಹಂಸೋಪಾಸನೆ ಮೂರುವಿಧದಲ್ಲಿ ಮಾಳ್ವರು ಭಾರತೀಶನ ಸಾರಗುಣಗಳ ಸೂರಿಗಳಿಗಳವಲ್ಲ ಅರಿಯಲು ಚರಣಪಿಡಿಯಿರೋ 7 ದಶದಿಶೆಗಳ ವಳಗೆ ಬಿಸಜನಾಭನ ಕೀರ್ತಿ ಎಸೆದು ಹಿಗ್ಗುವ ನಮ್ಮ ಅಸಮ ಮಧ್ವರನೋಡೋ ನಾಶಮಾಡುತ ಭಾಸಕರು ಎಂದೆನಿಸಿದ 8 ಅನಿಲದೇವನ ನಾಮ ಕನಸಿಲಾದರು ಒಮ್ಮೆ ನೆನೆದವನೇ ಧನ್ಯ ಮಾನ್ಯನೋ ಜಗದೊಳಗೆ ದೀನನೆನಿಸುತಲಿ ದಾನಿ ಜಯಮುನಿ ಅನಿಲನಂತರ ಶ್ರೀನಿವಾಸ ಕೃಷ್ಣವಿಠಲಗೆ ಶರಣು, ಶರಣು, ಶರಣೆಂದು 9
--------------
ಕೃಷ್ಣವಿಠಲದಾಸರು
ಮಧ್ವಾಚಾರ್ಯರು ಮಧ್ವಮುನಿರಾಯ ಭಕ್ತೋದ್ಧಾರನೆ ಪ ಶುದ್ಧಮೂರ್ತಿಯಾದ ಕೃಷ್ಣ ದ್ವೈಪಾಯನರ ಶಿಷ್ಯ ಅ.ಪ ತಾಮಸರ ಮುರಿದು ಚೂ ಡಾಮಣಿಯ ಸ್ವಾಮಿಗಿತ್ತೆ 1 ಭೂಮಿ ಆಶೆಯುಳ್ಳ ದುರ್ಯೋಧನಾದ್ಯರ ನಿರ್- ನಾಮವ ಹೊಂದಿಸಿ ಕೃಷ್ಣನ ಪ್ರೇಮಕೆ ನೀ ಪಾತ್ರನಾದೆ 2 ಇಪ್ಪತ್ತೊಂದು ಭಾಷ್ಯಗಳಾ ಖಂಡಿಸೀ ಸರ್ಪಶಯನ ಸರ್ವೋತ್ತಮನೆಂದು ಸಾರಿಸಿ ಅಪ್ಪ ಗುರುರಾಮ ವಿಠಲನ ತಪ್ಪಾದೆ ಪೂಜಿಸುತಿರ್ಪ 3
--------------
ಗುರುರಾಮವಿಠಲ
ಮನನ ಮೋಹಿಯಲ ಮುರಲಿಧರಾ ಪ ಗೋಕುಲ ವಾಸಿ ಗೋಪ ವಿಲಾಸಿ | ಜನ್ಮಾನಿ ಯಾದವರೈಸಿ || 1 ಯಮುನಾಚ ತೀರಿ ಗೋಧನಚಾರಿ | ಪರಿ 2 ಸುಂದರಶ್ಯಾಮ ಸುಗುಣಾಭಿ ರಾಮ | ವಿಜಯವಿಠ್ಠಲ ನಿಜ ಪ್ರೇಮ ಮನ ಮೋಹಿಯಾಲ 3
--------------
ವಿಜಯದಾಸ
ಮನಮೋಹಮಂದಿರಾ ಶ್ರೀವರ ಘನಮಣಿ ತಾ ಹಾರಾ ಪ ಮಾಂಗಿರಿಧಾಮಾ ಮಂಗಳನಾಮಾ ಶರಣಾಗತ ಪ್ರೇಮಾ ಅ.ಪ ದಿವಿಜನಿಕರ ಪರಿವಾರಾ ದಯಾಪೂರಾ ಭುವನೇಶ್ವರ ಶೂರಾ ಆನಂದಲೀಲಾ ಆಗಮಮೂಲಾ ತುಳಸೀದಳ ವನಮಾಲಾ 1 ಭಾಗವತಪ್ರಿಯ ಸಾಗರತನಯಾ ಮನರಂಜನ ಸದಯಾ ಮುರಳೀಧೃತಕರ ಕುಂಜವಿಹಾರಾ ರಾಧಾಮನ ಮಣಿಹಾರಾ 2 ನಂದನ ಕಂದಾ ಜಗದಾನಂದ ಬೃಂದಾವನಾನಂದ ಗೋಪಿಕಾ ಜಾಲ | ಪ್ರೇಮಿತ ಬಾಲಾ ಬೃಂದಾವನ ಲೋಲಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನವೆ ಮಾಧವನೊಳು ಮಮತೆಯಿರಲಿ ತನು ಮನ ಧನಗಳು ತನವಾ ನೀಡಿದ ಮ್ಯಾಲೆ ಅನುದಿನ ಪೊರೆವ ಪ ಕಾಮ ಜನಕನು ಪ್ರೇಮದಿ ನೆನದರೆ ಮಾಮನೋಹರ ತನ್ನ ಧಾಮವ ಕೊಡುವ1 ಸಂತತ ನಿನ್ನನು ಚಿಂತಿಸುವಂ- ತೆನ್ನಂತ ಮಂಗಳ ಮತಿಯು ನೀಡು ನೀ ಮನವೆ 2 ಅಜಭವನುತ ವಿಜಯ ಸಖನ ಯಜಿಸುವ ಜನರಿಗೆ ನಿಜಪದವನೆ ಕೊಡುವಾ ವಿಜಯವಿಠ್ಠಲನಾ 3
--------------
ವಿಜಯದಾಸ
ಮನವೇ ಎಂದಿಗೆ ಇದು ಕೊನೆಯ ಕಾಣುವುದೊ ಪ ತನಗೆ ತಾನೆ ಚಿಂತೆಗೈಯ್ಯುತ ಜನರ ನೋಡಿ ಹಿಗ್ಗುತ ಅ.ಪ ಬಂಗಿತಿಂದ ಮಂಗನಂದದಿ ಭಂಗಕೆ ಒಳಗಾಗುವಿ 1 ಎಷ್ಟುದಿನಗಳಾದರೂ ಪುಟ್ಟುವುದಿಲ್ಲ ವಿರಕ್ತಿ ಭ್ರಷ್ಟನಾಗಿ ಕೆಟ್ಟು ಪೋಗುವೆ ಶ್ರೇಷ್ಠ ನೀನೆಂದು ಕೊಂಬುವೆ2 ಪ್ರೇಮದಿಂದಾ ಜಪಮಾಡದೆ ತಾಮಸರೊಳು ಸೇರಿದೆ 3
--------------
ಗುರುರಾಮವಿಠಲ
ಮನಸಿನ ಮಲಿನವ ಮನಸೀಜನೈಯನೆ ಹನನ ವೈದಿಸದಿರೆ ಬದುಕುವ ದೆಂತೊ ಪ ವನಜ ಸಂಭವ ಜನಕ ತನುಮನ ಪ್ರೇರಕ ಮಾನವ ನಾನು ಶರಣುಹೊಕ್ಕೆನೈಯ ಅ.ಪ ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ ದೀನಜನಮಂದಾರ ಕರುಣೋದಾರ ಮಹಿಮನೆ ಮಾನಮತ್ತವಮಾನ ನಿನ್ನಾಧೀನ ವಲ್ಲವೆ ತನುಮನೇಂದ್ರಿಯ ನಾಥ ನಾಯಕ ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ 1 ನೋಡಬಾರದ ನೋಟ ನೋಡಿ ಆಯಿತು ಜೀಯ ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು 2 ಮುಂದು ಮಾಡುತ ಹಿಂದೆ ಇಂದು ಕಂದನಲ್ಲವೆ ನಾನು ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ ಎಂದಿಗಾದರು ಸಾಧ್ಯವಾಹುದೆ ನನಗೆ ತಂದೆ ಜಯಮುನಿವಾಯು ಹೃದಯಗ ನಂದಮಯ ಶ್ರೀ ಕೃಷ್ಣವಿಠಲ ನಿಖಿಳ ವಿಶ್ವಕೆ ಕುಂದುಮಯ ಅಭಿಮಾನ ಮನಸಿಗೆ ತಂದಿಡದೆಯೆಂದೆಂದು ಸಲಹುತ ಕುಂದು ಗೈದವನೆಂದು ನುಡಿಯದೆ ಪಥ 3
--------------
ಕೃಷ್ಣವಿಠಲದಾಸರು
ಮನ್ನಿಸೆನ್ನ ಮಹಾಲಿಂಗ ದೇವೋತ್ತುಂಗ ಪುಣ್ಯಶ್ಲೋಕ ನಿನ್ನ ವರ್ಣಿಪೆ ಮುಕ್ಕಣ್ಣ ಪ. ಭಕ್ತಪಾರಿಜಾತ ಶಕ್ತಿದೇವಿಪ್ರೀತ ಸತ್ಯಧರ್ಮಯೂಥ ಸ್ವಾಮಿಲೋಕನಾಥ 1 ವಂದನೀಯ ಕೃಪಾಸಿಂಧು ದಿವ್ಯರೂಪ ಚಂದ್ರಚೂಡ ಸಾಂದ್ರಾನಂದ ವೈಷ್ಣವೇಂದ್ರ 2 ಮಾರವೈರಿ ಲಕ್ಷ್ಮೀನಾರಾಯಣಪ್ರೇಮಿ ಸಾರತತ್ತ್ವಬೋಧ ಸಾಧುಸುಪ್ರಸೀದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮನ್ಮನೋಜ್ಞಾ ಮನ್ನಿಸಿಲ್ಲಿಗೇ ಪ ಕಷ್ಟ ಪರಂಪರೆ ಕಳೆಯುವಾ ಇಷ್ಟಮೂರ್ತಿ ನಿನ್ನ ನೋಡದಾ 1 ಸಾಧುಗಳು ಸಾಧಿಸುತ್ತಿಹಾ ವೇದವೇದ್ಯ ಧನ್ಯನಾಗದಾ 2 ಪ್ರೇಮ ರೂಪಾ ಜಾಜೀಕೇಶವಾ ಸ್ವಾಮಿನಿನ್ನ ಪಾದಸೇರದಾ 3
--------------
ಶಾಮಶರ್ಮರು