ಒಟ್ಟು 2010 ಕಡೆಗಳಲ್ಲಿ , 113 ದಾಸರು , 1571 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನಿಸುವ ಸುಜನರಿಳೆಯೊಳೇನು ಧನ್ಯರೊ ಪ ಶ್ರೀನಿಧಿ ನಮ್ಮ ನಾರಾಯಣನ ಚರಣಕಮಲವ ಅ.ಪ ಬ್ರಹ್ಮ ರುದ್ರ ಪ್ರಮುಖ ಸುರರಿಗೇನು ಮೂಲವೊ ಸಮ್ಮತಿ ವೇದ ಶಾಸ್ತ್ರ ಪುರಾಣವೇನು ಪೇಳ್ವುದೊ 1 ಕಾಲಕರ್ಮ ಜೀವ ಮಾಯ ಯಾರಧೀನವೊ ಮೇಲೆ ಅನುಭವದಲಿ ತಿಳಿವುದದುವೆ ಜ್ಞಾನವೊ 2 ಅರ್ಥ ಚತುಷ್ಠಯವ ಕೊಡುವ ಪಾರ್ಥಸಾರಥಿ ಕರ್ತಾ ಭೋಕ್ತಾ ಗುರುರಾಮವಿಠಲ ಮೂರುತಿ3
--------------
ಗುರುರಾಮವಿಠಲ
ನಗಬಹುದು ನೀ ಮುಗುಳು ನಗೆಯಾ ಗುರುರಾಯಮಿಗೆ ಕಂಡು ದೇಹಾಭಿಮಾನಿಗಳ ಬಗೆಯಾ ಪತನ್ನ ತಾನರಿಯಲೀಸದ ಮಾಯೆಗೊಳಗಾಗಿಅನ್ಯರೇತೋಜಾತಮಾದ ದೇಹವ ನೋಡಿತನ್ನಿಂದ ತಾ ಕಾಣಪಡುತಿಹುದಿದಲ್ಲವೆಂದೆನ್ನಲಾರದೆ ದೋಷದಿಂದಾಉನ್ನತದ ಮಾಂಸ ರಕ್ತಾಸ್ತಿಮಲ ಮೂತ್ರಂಗಳಿನ್ನೆನೆದುನಾರುವ ನವದ್ವಾರ ಮಾರ್ಗದಿಂತನ್ನ ಮರಸುವದೇಹವೆತನ್ನದೆಂದು ಮರೆದುಣ್ಣುರಿವಾತಗಳ ಕಂಡೂ ಮಾಯೆ ಭಾಪೆನ್ನುತ್ತ ಬೆರಳೊಲದು ಕೊಂಡು ಬಗೆಗಂಡೂ 1ಬಿಟ್ಟ ಮನೆ ಜನ ಧನಂಗಳಲಿ ಮತ್ತೂ ಮನವನಿಟ್ಟು ವಾಂತ್ಯಾಶನವನುಂಬ ನಾಯಂದದಲಿಪಟ್ಟಣಂಗಳಲಿ ತಿರುಗುತ ಪರರ ಬಾಧಿಸುತಕೆಟ್ಟ ಬುದ್ಧಿುಂದ ಧೃತಿಗುಂದಿಕೊಟ್ಟಪುದು ಕರ್ಮವೆಂಬುದ ಮರೆತು ಗೇಣುದ್ದಹೊಟ್ಟೆ ಬಟ್ಟೆಗೆ ದೈನ್ಯ ಬಟ್ಟು ಮೂಢತೆುಂದಕೆಟ್ಟೆನಿನ್ನಾರು ರಕ್ಷಿಪರೆಂದು ಚಿಂತಿಸುವಹೊಟ್ಟೆಹೊರಕರನು ನೋಡುತ್ತಾ ಕಟಕಟಾಕೆಟ್ಟರಿವರೆಂದು ಹಾಸ್ಯವನು ಮಾಡುತ್ತಾ 2ತಾನಾತ್ಮನೆಂಬುದನು ಕೇಳಿದ್ದುದೃಷ್ಟಾನುಮಾನಂಗಳಿಂ ನಂಬಿಗೆಯೆುಲ್ಲದದರಲ್ಲಿಮಾನಾವಮಾನಂಗಳಿಂ ಹರುಷ ಶೋಕಾದಿಹೀನಬುದ್ಧಿಗಳ ಮಾಡುತ್ತಾಜ್ಞಾನಮಾರ್ಗದಲಿ ವಿಶ್ವಾಸವಿಲ್ಲದೆ ತನ್ನ ಕಾಣಲಾರದೆ ಭೇದ ಬುದ್ಧಿುಂ ವ್ರತತೀರ್ಥಸ್ನಾನಾದಿುಂದ ಮುಕುತಿಯ ಪಡೆಯಬೇಕೆಂಬಮಾನವರ ಭ್ರಾಂತಿಯನು ತಿಳಿದೂ ಇವರ್ಗಳಿಗೆಸ್ವಾನುಭವವಿಲ್ಲೆಂದು ಸಮತೆಯಲಿ ನಿಂದೂ 3ರಾಗವನು ಬಿಡಲಾರದಾಶಾಪಿಶಾಚಕೊಳಗಾಗಿ ಸತ್ಸಂಗ ಸತ್ಕಥೆಯ ಕೇಳಿಕೆಗಳನುನೀಗಿ ಧನಿಕರೊಳಿಚ್ಚಿತವನಾಡಿ ಸದ್ಧರ್ಮತ್ಯಾಗಿಯಾಗ್ಯನೃತಕ್ಕೆ ಪೊಕ್ಕೂಹೀಗೆ ತಿರುಗುತ ಪರಾನ್ನಾದಿ ಭೋಗಕ್ಕಾಗಿಕಾಗೆಯಂದದಲಲ್ಲಿಗಲ್ಲಿಗೆ ಸದ್ಗತಿುೀವಯೋಗ ಮಾರ್ಗವ ಬಿಟ್ಟುಭ್ರಾಂತರಾದಿರಿ ಮಹದ್ರೋಗಿಗಳ ಕಂಡು ಬೆಸಗೊಂಡು ಇವರ್ಗೆ ಭವರೋಗ ಬಿಡದೆಂದು ನಿಜಪದದಲ್ಲಿ ನಿಂದೂ 4ಇಂತರಿವ ಜನರಲ್ಲಿ ನಿಂತು ಸನ್ಮತಿುತ್ತುಚಿಂತೆಗಳ ಬಿಡಿಸುತ್ತಲಂತರಾತ್ಮಕನಾಗಿಸಂತಗೋಪಾಲಾರ್ಯ ಗುರುವರ್ಯನಾಗಿ ವೇದಾಂತದರ್ಥವನು ಬೋಧಿಸುತಾಅಂತವಿಲ್ಲದ ನಿಜವ ತೋರಿ ಪಾಲಿಸಿ ಮುದವಂತಾಳ್ದು ಸಕಲ ಸಂಶಯಗಳನು ಪರಿಹರಿಸಿಶಾಂತರಾದಿರಿ ಮೋಹಹೋುತ್ತು ನಿತ್ಯ ಸ್ವಾತಂತ್ರ್ಯವಾುತು ಗೆದ್ದಿರೆನುತಾಸಂತತಾನಂದಕನುಗೈದು ಕೈ ಹೊುದೂ 5
--------------
ಗೋಪಾಲಾರ್ಯರು
ನಡತೆ ನನ್ನದು ಕೇಳಿರಯ್ಯ ಪ ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ. ಒಡವೆ ತರದಿಹನೆಂದು ಕೋಪ ಮಡದಿನಟಿಸುತ ಹೆದರೀ ಒಡನೆ ಸ್ನಾನವ ಮಾಡಿತಂದು ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು ಭೂರಿ ನೋಡುವೆನೆಂತೆಂಬೆ 1 ಒರಿಸೆ ಸಾಲಿಗ್ರಾಮ ಗೃಹದಿ ಅರಿವೆ ಹರಕು ಸಹ ಇಲ್ಲವೆನ್ನೇ ತರುವೆನೆನುತ ತಿಂಗಳಾರು ಕಾಲ ಬರಿದೇ ಆಹಾ ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ 2 ಹರಿಗೆ ದೀಪವ ಹಚ್ಚೆ ತೈಲ ಇರದು ತಾರೆನೆ ಹಡೆದ ತಾಯಿ ಬರಲಿ ಸಂಬಳ ತರುವೆ ಕೊಡುವಿ ಉರಿವ ಕಾಟವನೆಂದು ನುಡಿವೆ ಆಹಾ ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ ಹರಕು ಜಿಹ್ವೆಂiÀi ಚಪಲ ಪೂರ್ಣಮಾಡುವೆ ನಿರುತ 3 ವೃತ್ತಪತ್ರಿಕೆಯಲ್ಲಿ ಹೆಸರು ಎತ್ತಿಹಾಕುವರೆನೆ ಒಡನೆ ವಿತ್ತದಾನವಗೈವೆ ಬರಿ ಉ- ನ್ಮತ್ತಕಾರ್ಯಕಾದರು ಸರಿಯೇ ಆಹಾ ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ4 ಕಂಡು ಕರೆಯುತ ಭಾರಿ ಊಟ ತೊಂಡನಂದದಿ ನೀಡಿ ಮನದಿ ಉಂಡು ಹರುಷವ ನೆನೆವೆ ಧನ್ಯ\ ಆಹಾ ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ5 ದಾನಗೈದರು ಒಮ್ಮಿಂದೊಮ್ಮೆ ಮಾನಪಡೆಯಲು ಊರ ಒಳಗೆ ನಾನೆಂಬ ಹಂಕಾರ ಬಿಡದೆ ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ ಸ್ವಾನುಭವ ಕಾಣದೆಲೆ ಜ್ಞಾನ ಭಾಸ್ಕರನಂತೆ ಪು- ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ6 ನೂರಿತ್ತು ಸಂಬಳ ಹಿಂದೆ ಮನದಿ ಊರಿತ್ತು ಹರಿಭಕ್ತಿ ಎಲ್ಲಿ ಈಗ ನೂರ್ಹತ್ತು ಕೊಟ್ಟರು ದೇವ ಬೆ- ನ್ಹತ್ತಿದೆ ತಾಪತ್ರಯ ಬಹಳ ಆಹಾ ಸಿರಿ ಕೃಷ್ಣವಿಠಲನೆ ದೃಷ್ಟಿ ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ7
--------------
ಕೃಷ್ಣವಿಠಲದಾಸರು
ನಡುನೀರೊಳಗೆ ಕೈಯ್ಯ ಬಿಡುವುದೆ ಸಿರಿನಲ್ಲ ಕಡೆ ಹಾಯಿಸದೆ ಮೋಸ ಕೊಡುವುದು ತರವಲ್ಲ ಪ. ನಾನಾ ವಿಧದ ನೀಚಯೋನಿಗಳನು ದಾಟಿ ಮಾನುಷೋತ್ತಮ ಮಧ್ವಮತದಿ ಪುಟ್ಟಿ ನೀನೆ ಮುಕ್ತಿದನೆಂಬೊ ಜ್ಞಾನವಂತರ ಭೇಟಿ ನಾನೈದಬೇಕೆಂದು ಧ್ಯಾನಗೊಂಡಿಹೆನೆಂದು 1 ವೇದ ವಿಹಿತಕರ್ಮವಾದರು ಕ್ರಮವಾಗಿ ಸಾಧಿಸಲಿಲ್ಲ ಸಂತತಿಗಳಿಲ್ಲ ಪಾದ ಪದ್ಮ ಪರಾಗ ಮೋದಾನುಭವದಿ ಶುಭೋದಯಗೊಳಲಿಲ್ಲ 2 ಕೆಲವು ಕಾಲವ ಬಾಲ್ಯದಲಿ ಕಳೆದೆನು ಮತ್ತೆ ಲಲನೇರ ಮೋಹದಿ ಬಳಲಿದೆನು ಬಲವು ಕುಂದುತ ದೇಹ ಗಳಿತವಾಗುವುದಿನ್ನು ನಳಿನಾಕ್ಷ ಪದಪದ್ಮ ನೆಳಲನೈದದ ಮುನ್ನು 3 ಮೂರೊಂದು ಪುರುಷಾರ್ಥ ತೋರುವ ಪುರುಷ ಶ- ರೀರವ ಕರುಣಿಸಿದವನೆ ನೀನು ಮೂರಾರು ವಿಧ ಭಕ್ತಿ ಸಾರುವ ತಿಳಿಸಿ ಕಂ ಪಾದ ಪರಿಯಂತ 4 ಸಂಚಿತಾಗಾಮಿ ದುಷ್ಕøತಗಳನಳಿಸಿ ಪ್ರಾ ಪಂಚಿಕ ಭೋಗ ಪೂರಣಗೊಳಿಸಿ ಪಂಚಭೌತಿಕ ಹರ ವಂಚನೆ ಮಾಡದೆ ಶ್ರೀ ವಿ ರಿಂಚಿವರದ ದೇವ ವೆಂಕಟೇಶ ನೀ ಕರುಣಿಸು 5
--------------
ತುಪಾಕಿ ವೆಂಕಟರಮಣಾಚಾರ್ಯ
ನಡೆದು ಬಾರಯ್ಯ ಕೃಷ್ಣ ನಡೆದು ಪ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ- ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1 ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ- ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ ಕರಿ ಸರ್ವೋತ್ತಮ ಹರಿಯೆ 2 ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ ಶೂರ ಸುತಗೆ ಸುಕುಮಾರನೆನಿಸಿದಂಥ ಅ- ಸಮೀರಜ ಭವ ಸುರ ನಾರದಪ್ರಿಯನೆ ಉದ್ಧಾರಮಾಡು ಎನ್ನನು 3 ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ ನಿಜವಾಗಿ ನೋಡೆನ್ನ ರಜತಮ ಕಳೆಯುವ 4 ಕಡಲಶಯನನಾದ ಉಡುರಾಜ್ವದನ ಬಿಟ್ಟು ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು ಕೊಡು ವರಗಳ ಪೊಡವಿ ಪಾಲಿಪನೆ 5
--------------
ಹರಪನಹಳ್ಳಿಭೀಮವ್ವ
ನಡೆಯೇ ತೀರ್ಥವು ನುಡಿ ಪ್ರಸಾದವುಕೊಡುವುದೇ ತಾನೀಗನುಗ್ರಹವುಹಿಡಿವುದೇ ತತ್ವವು ಬಿಡುವುದೇ ವೈರಾಗ್ಯದೃಢದಲಿ ತನ್ನ ತಿಳಿದಾ ಮಹಾತ್ಮನಾ ಪ ಮೆಟ್ಟಿದ್ದೆ ಕಾಶಿಯು ಮಲಗಿದ್ದೆ ಶ್ರೀ ಶೈಲದಿಟ್ಟಾಗಿ ಕುಳಿತುದೇ ಕುರುಕ್ಷೇತ್ರವುಘಟ್ಟಿಯಾಗಿಹುದೇ ಗಯವೀಗ ಗೋಕರ್ಣಮುಟ್ಟಿಯೇ ತನ್ನತಾ ತಿಳಿದ ಮಹಾತ್ಮನಾ 1 ಉಂಡದ್ದೆ ಕೇದಾರ ಉಟ್ಟಿದ್ದೆ ಶ್ರೀ ಬದರಿಕಂಡದ್ದೆ ಕಂಚಿ ಕಾಳಹಸ್ತಿಮಂಡೆಗೆರಕೊಂಡುದೇ ಮೈಲಾರ ಮಧುರೆಯುಖಂಡಿಸಿ ತನ್ನತಾ ತಿಳಿದ ಮಹಾತ್ಮನಾ 2 ಸುಧಾ ಶರಧಿಯು ಆತ ಸಾಕ್ಷಾತ್ತು ದೈವವುವಿಧ ವಿಧದ ಜಗ ತಾನೆಯಾದಾತನುಮದಕಾಮ ಕ್ರೋಧ ಪಾಶ ಶೋಕ ವರ್ಜಿತಚಿದಾನಂದ ಗುರುವೇ ತಾನಾದ ಮಹಾತ್ಮನಾ 3
--------------
ಚಿದಾನಂದ ಅವಧೂತರು
ನಂದ ತೀರಥರಾಯ ಅಸ್ಮದ್ಗುರೋರ್ಗುರು ಕಾಯ ಪೊರೆಯಯ್ಯ ಜೀಯಾ ಪ ಪಾದ ಕಮಲಕೆ ನಂದ ಮಧುಕರ ನಂದದಲಿ ನಿಜ ಮಂದ ಜನರಿಗೆ ನಂದ ಕೊಡುವಾ ಮೂರ್ತಿ ಆನಂದಕಾರಿಯೆ ಅ.ಪ ಮಧ್ಯಮನಿ ದ್ವಿಜನಲ್ಲಿ ಉದ್ಭವಿಸಿ ನೀನೂ ಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ - ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾ ಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ ಶುದ್ಧ ಶ್ರೀ ಹರಿಮತದ ಶುಭ ಸಿದ್ಧಾಂತ ಸ್ಥಾಪಿಸಿ ಜಗದಿ ಜೀವರ ಸಿದ್ಧಗಣಕಧಿನಾಥನೆಂದೂ ಪ್ರ - ಸಿದ್ಧಗೈಸಿದಿ ಶುದ್ಧ ಮೂರುತಿ 1 ಬದರಿಕಾಶ್ರಮವನ್ನು ಐದಿದ್ಯೊ ಮುದದಿ ಪದುಮನಾಭನನ್ನು ಬಲಗೈಸಿ ನಿನ್ನ ಬದಿಗ ಜನರಿಗಿನ್ನೂ ಸುವಾಕ್ಯ ದಿಂದಲಿ ಪೇಳಿದದು ನಿಜ ಪದುಮನಾಭನೆ ಪರಮದೈವನು ಪದುಮೆ ಮೊದಲು ಬ್ರಹ್ಮಾಂತ ಜೀವರ ಪದದಿ ಗುಣದ ತಾರತಮ್ಯವ ಹೃದಯ ಮಂದಿರದಲ್ಲಿ ಪೇಳಿದ 2 ಘನ್ನಮಹಿಮನೆ ಎನ್ನಮನ ವಚನ ಕಾಯದಿ ಇನ್ನು ಮಾಡುವುದನ್ನು ಸ್ವೀಕರಿಸಿ ಹರಿಗೆ ಮುನ್ನ ನೀಡೆಲೊ ಚೆನ್ನವಾಗಿ ನಿಜಫಲ ನಿನ್ನ ಜನರೀಗಿನ್ನ ನೀಡಯ್ಯ ಮುನ್ನ ನಿನ್ನ ಒಳಗೆ ನಿರುತ ಇರುವ ಘನ್ನ ಗುರುಜಗನ್ನಾಥವಿಠಲನ ಎನ್ನ ಮನದಲಿ ತೋರಿಸೆಂದು ನಿನ್ನ ಪದಯುಗವನ್ನು ಭಜಿಸಿದೆ 3
--------------
ಗುರುಜಗನ್ನಾಥದಾಸರು
ನಂದಪುತ್ರನ ಆಜ್ಞೆಯಿಂದಲುದ್ಧವ ಬ್ಯಾಗ ಬಂದು ಗೋಕುಲ ಹೊಕ್ಕಾನಂದದಿಂದಲಿ 1 ಬಾಲನ್ವಾರ್ತೆಯ ಕೇಳೆಶೋದ ಗೋಪನು ಕೊಂ- ಡಾಡಿ ಗುಣಗಳ ಮನಕೆ ತಾಳಿದರ್ಹರುಷವ 2 ತಾಪ ಬಿಡದಲೆ ಅಗಲಿ ಶ್ರೀಪತಿ ಕಾಣದೆ ಸಂತಾಪದಿಂದಿರೆ 3 ಸತಿಯರೆಲ್ಲರು ಗೋಪಿಸುತನ ಪಾಡುತ ದಧಿಯ ಮಥಿಸಿ ಕದವನೆ ತೆಗೆಯೆ ರಥವ ಕಂಡರು 4 ದಾವ ಕಾರಣ ನಮ್ಮ ಭಾವಭಕ್ತಿಗೆ ಸ್ವಾಮಿ ತಾನೆ ಬಂದಾನೋ ತನ್ನಕ್ರೂರನ ಕಳಿಸ್ಯಾನೊ 5 ಭದ್ರೆರೆಲ್ಲರೂ ಕೂಡಿ ಎದ್ದು ಬರುತಿರೆ ಮಧ್ಯಮಾರ್ಗದಿ ಅಲ್ಲುದ್ಧವನ ಕಂಡರು 6 ಕಾಂತೇರೆಲ್ಲರು ಕೂಡೇಕಾಂತ ಸ್ಥಳದಲ್ಲಿ ನಿಂತು ಕಂತುನಯ್ಯನು ಲಕ್ಷ್ಮೀಕಾಂತ ಕ್ಷೇಮವೆ 7 ಇಂದಿರೇಶನ ಬಿಟ್ಟಗಲಿ ವ್ರಜದೊಳು ಕಾಲ ಹಿಂದೆ ಕಳೆವೋದ್ಹ್ಯಾಗಿನ್ನ ್ಹಗಲು ಇರುಳನೆ 8 ಮುಂದೆ ಕಾಣದೆ ನೇತ್ರ ಅಂಧಕರಂದದಿ ಮು- ಕ್ಕುಂದನಿಂದಲಿ ರಹಿತರೆಂದಿಗಾದೆವೊ 9 ತೊಡಿಗೆ ಬಂಗಾರ ಶಿರದಿ ಮುಡಿವೊ ಮಲ್ಲಿಗೆ ದೇಹ- ಕ್ಕುಡಿಗೆ ಭಾರವೊ ಬಿಟ್ಟು ಪೊಡವಿಗೊಡೆಯನ 10 ಉದ್ಧವ ನಾವು ಜಾಳು ಸ್ತ್ರೀಯರು ಒಲ್ಲದೆ ಕಾಳಿಮರ್ದನ ಕಾಲಲೊದ್ದು ಪೋದನು 11 ಜಾರಸ್ತ್ರೀಯರುಯೆಂದು ನಗದಿರುದ್ಧವ ಬಿಗಿದ ಮೋಹಪಾಶದಿ ಈ ವಿಚಾರ ಮಾಡಿದ 12 ಬಲೆಯಗಾರಗೆ ಸಿಕ್ಕು ಬಳಲಿದಾಕ್ಷಣ ಅದರ ಕೊ- ರಳ ಕೊಯ್ಯದೆ ಅವಗೆ ಕರುಣ ಬರುವುದೆ 13 ಎಷ್ಟು ಹೇಳಲೊ ಅವನ ಗಟ್ಟಿಯೆದೆಗಳ ಒಲ್ಲದೆ ಬಿಟ್ಟು ನಮ್ಮನು ಮಧುರಾಪಟ್ಟಣ ಸೇರಿದ 14 ಭ್ರಮರಕುಂತಳೆ ಒಂದು ಭ್ರಮರಕಾಣುತ ಬ್ಯಾಡ ಕಮಲನಾಭನ ವಾರ್ತೆ ಕಿವಿಗೆ ಸೊಗಸದು 15 ಮದನಮೋಹನ ಹೋಗಿ ಮಧುರಾಪುರಿಯಲಿ ಅಲ್ಲಿ ಚÉದುರೆರಿಂದಲಿ ಅವಗೆ ಸೊಗಸು ಸಮ್ಮತ 16 ಕ್ರೂರನೆನ್ನದೆ ಇವಗಕ್ರೂರನೆನುತಲಿ ದಾರ್ಹೆಸರಿಟ್ಟರೋ ನಮಗೆ ತೋರಿಸೊ ಅವರನು 17 ಯಾತಕ್ಹೇಳುವಿ ಅವನ ವಾರ್ತೆ ಸೊಗಸದು ಹರಿಯು ಪ್ರೀತಿ ವಿಷಯನು ನಮಗೆ ಘಾತಕನೆನಿಸಿದ 18 ಜಲನ ಭೇದಿಸಿ ಹಯನ ಕೊಂದು ವೇದವ ಹ್ಯಾಗೆ ಹರಣ ಮಾಡಿದ 19 ಕ್ಷೀರ ಮಥನವ ಮಾಡಿ ಸ್ತ್ರೀಯರೂಪದಿಂದಸುರರ ಮೋಹಿಸಿದ್ವಂಚನೆ ನಮಗೆ ಪೂರ್ಣ ತಿಳಿಸಿದ 20 ಭೂಮಿ ಬಗಿದನು ತನ್ನ ಕ್ವಾರೆಯಿಂದಲಿ ನಮ್ಮನ್ನು ಸೀಳಿ ಪೋದರೆ ಇನ್ನೀ ಘೋರ ತಪ್ಪುವುದು21 ಕಂದ ಕರೆಯಲು ಕಂಬದಿ ಬಂದು ಸಲಹಿದನೆಂದು ನಂಬಿ ಕೆಟ್ಟೆವೊ ಇನ್ನಿವನ ಹಂಬಲ ಸಾಕಯ್ಯ 22 ಕೊಟ್ಟ ದಾನವ ಬಲಿಯ ಕಟ್ಟಿ ಪಾಶದಿಂದವನ ಮೆಟ್ಟಿದ ಪಾತಾಳಕಿಂಥಾಕೃತ್ಯಮರುಂಟೇನೊ 23 ಕೊಡಲಿ ಕೈಯ್ಯೊಳು ಪಿಡಿದು ಹಡೆದ ಮಾತೆಯ ಶಿರವ ಕಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 24 ಬಂದ ಸತಿಯಳ ಮೋರೆ ಅಂಗ ಕೆಡಿಸಿದ ತ- ನ್ನಂಗನೆ ಕಾಣದೆ ತಿರುಗಲೆಮಗೆ ಸನ್ಮತ 25 ಪತಿಯ ಸುತರನೆ ಬಿಟ್ಟೆವಶನ ವಸನವ ಅಗಲಿದ್ವಸುನಂದನಗೆ ನಮ್ಮೆಲ್ಲರುಸುರು ಮುಟ್ಟಲ್ಯೊ 26 ಬೌದ್ಧರೂಪದಿ ಸ್ತ್ರೀಯರ ಲಜ್ಜೆಗೆಡಿಸಿದನೆಂಬೊ ಸುದ್ದಿ ಬಲ್ಲೆವೊ ನಾವಿಲ್ಲಿದ್ದವರುದ್ಧವ 27 ಕಲಿಯ ಮನಸಿರೆ ಇವಗೆ ಕಲ್ಕ್ಯನೆಂಬೋರೊ ಕತ್ತಿ ಪಿಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 28 ಬ್ಯಾಡವೆನುತಲಿ ಅವಗೆ ಬೇಡಿಕೊಂಡೆವೊ ಗಾಡಿಕಾರನು ನಮ್ಮ ನೋಡದ್ಹೋದನು 29 ನಮ್ಮ ವಚನವ ಹೋಗಿ ಮನ್ನಿಸುದ್ಧವ ಪನ್ನಂಗಶಯನನ ಪಾದಕ್ಕಿನ್ನು ನಮಿಸೆವೊ 30 ಬಿಟ್ಹ್ಯಾಗಿರುವೊಣೋ ಭೀಮೇಶಕೃಷ್ಣನ ನಮ್ಮ ದೃಷ್ಟಿಗೆ ತೋರಿಸೊ ಮುಕ್ತಿ ಕೊಡುವೊ ದಾತನ31
--------------
ಹರಪನಹಳ್ಳಿಭೀಮವ್ವ
ನಂಬಿ ಕೆಟ್ಟವರಿಲ್ಲವೊ ಸದ್ಗುರುವಿನ ನಂಬಿ ಕೆಟ್ಟವರಿಲ್ಲವೊ ನಂಬದೆ ಗುರುವಿನ ಜ್ಞಾನದ ಬೋಧವ ಹುಂಬತನವ ಮಾಡಿ ಕೆಟ್ಟರೆ ಕೆಡಲಯ್ಯ ಪ ಕೇಳಬೇಡೆಲೊ ದುಃಖವಾ ಏಳು ಎಚ್ಚರಗೊಳ್ಳು ಕೀಳುತನವ ಬಿಡು ಹೇಳಿಕೊಡುವೆನೆಂಬ ಗುರುವಿನ ನುಡಿಯನು 1 ದೇಹಬುದ್ಧಿಯ ಬಿಡಿಸಿ ವಿವೇಕದಿ ದೇವಬುದ್ದಿಯನಿರಿಸಿ ಸೋಹವೆಂಬುವ ಮಹಾಮಂತ್ರವ ಬೋಧಿಸಿ ಮೋಹವನೋಡಿಸಿ ಕಾಯುವ ಗುರುವಿನ 2 ಸಂಚಿತ ಮೊದಲಾದ ಕರ್ಮವ ನೀಗಿಸಿ ಹಂಚಿಕೆಯಿಂದಲಿ ಮುಕ್ತನ ಮಾಡುವ ಪಂಚಕಸಾಕ್ಷಿ ಶ್ರೀಗುರುವಿನ ಬೋಧವ 3 ಸ್ವಾನುಭವನೀಡುವಾ ಏನೊಂದು ಬಯಸದೆ ಜ್ಞಾನದಾನವ ಮಾಳ್ಪ ಜ್ಞಾನಿ ಶಂಕರಗುರುರಾಯನ ನುಡಿಯನು 4
--------------
ಶಂಕರಭಟ್ಟ ಅಗ್ನಿಹೋತ್ರಿ
ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ ನಂಬದೆ ಕೆಡುವುರುಂಟೋ ಪ ನಂಬಿದ ಜನರಿಗೆ - ಬೆಂಬಲ ತಾನಾಗಿ ತುಂಬಿ ಕೊಡುವರನ್ನ ಅ.ಪ ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ ಚಲುವ ಸುತನ ಪಡೆದಲಲನೆಗೆ ತ್ವರದಿಂದ ಪುಲಿನ ಗರ್ತದಿ ದಿವ್ಯ - ಜಲವ ನಿತ್ತವರನ್ನ 1 ಮೃತ್ಯುದೂತರು ತನ್ನನು ಪೊಂದಿದ ನಿಜ ಭೃತ್ಯನ ಕರೆದೊಯ್ಯಲು ಸತ್ತ ದ್ವಿಜನ ತಾನು - ಮತ್ತು ಧsರೆಗೆ ತಂದು ಮೃತ್ಯು ಬಿಡಿಸಿ ಸುಖ - ವಿತ್ತು ಪೊರೆದಿಹರನ್ನಾ 2 ಧಿಟ ಗುರುಜಗನ್ನಾಥ ವಿಠಲನೊಲಿಮೆ ಘಟನವಾದುದರಿಂದ ಘಟನಾಘಟನ ಕಾರ್ಯ - ಘಟನಾ ಮಾಡುವ ನಮ್ಮ ಪಟು ಗುರುವರ ಹೃ - ತ್ಪುಟ ದಿರುವೋರನ್ನ 3
--------------
ಗುರುಜಗನ್ನಾಥದಾಸರು
ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ ನಂಬಿದ ಭಕ್ತರಿಗೆ ಬೆಂಬಲನಾಗಿರುವನೆ ಪ. ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ ಪೊರೆದ ಮಹಾನುಭಾವ ಮುರಹರನೆ ನಿನ್ನ 1 ಶಕ್ತನೆ ನಿನ್ನ ನಾ ಭಕ್ತಿಯಿಂ ಭಜಿಸುವೆ ಭಕ್ತರಿಗೆಲ್ಲ ನೀನು ಮುಕ್ತಿಯ ಕೊಡುವನೆ 2 ಗಿರಿಯೊಳು ನೆಲಸಿಹ ಪರಮಪುರುಷ ರಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ನಂಬಿದೆನೇ ನಿನ್ನ ಅಂಬುಜನಯನೆ ನಂಬಿದೆ ನಿನ್ನ ಪ. ನಂಬಿದೆ ನಿನ್ನನು ಅಂಬುಧಿಶಯನನೆನ್ನ ಡಿಂಬದಿ ನಿಲುವಂಥ ಸಂಭ್ರಮ ಕೊಡು ತಾಯೆ ಅ.ಪ. ಆರು ಮೂರೆರಡೊಂದು ಮೇರೆ ಇಲ್ಲದೈದು ಜಾರರು ಸೇರಿದರೆ ತಾಯಿ ತೋರುತ ಕರುಣವ ಬೀರುತ ವರ ಸಂಗ ದೂರಮಾಡಿಸಿ ಪಾರುಗಾಣಿಸು ತಾಯೇ 1 ಅಗಣಿತ ಮಹಿಮನ ಬಗೆಬಗೆ ಪೂಜಿಸಿ ಜಗದಾಖ್ಯಾನ ನೀ ಮಿಗೆ ವಲಿಸಿಹೆ ತಾಯೆ ಮಗುವೆಂದು ಭಾವಿಸಿ ಚಿಗಿದು ಕಂಬದಿ ಬಂದ ನಗಧರ ನರಹರಿ ಸಿಗುವ ಪರಿಯ ತೋರೆ2 ಕಲಿಯುಗದಲಿ ಶ್ರೀ ಶ್ರೀನಿವಾಸನ ಜ್ಹಾಯೆ ವಲಿದು ಭಕ್ತರ ಕೊಲ್ಹಾಪುರ ಮೆರೆಸಿಹೆ ತಾಯೆ ಕಲಿಮಲ ಕಳೆದು ನಲಿದು ಭಕ್ತರ ಕಾಯೆ ಛಲವ್ಯಾಕೆ ಹರಿ ಸಹ ನÀಲಿಯುತೆ ಬಾರೆ 3
--------------
ಸರಸ್ವತಿ ಬಾಯಿ
ನಂಬಿದೆನೊ ನಿನ್ನ ಪಾದಾರವಿಂದಾ ಇಂಬು ಈವದು ಎನಗೆ ವೈಕುಂಠಪುರದೊಳಗೆ ಪ ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ ಉಳಿವದಕುಪಾಯವನು ಒಂದರೆ ಕಾಣೆನೊ ಎಲೊ ಬಲುದೈವ ನೀನೆ ದಯಾಳು ಎಂದೂ 1 ಕೈವಲ್ಯ ಕೊಡುವಲ್ಲಿ ಮಂಡಲದೊಳು ಎಣಿಯಾರು ನಿನಗೆ ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು ನಿತ್ಯ ಎಳೆನೋಟದಲಿ ನೋಡು 2 ಯದುಕುಲಲಲಾಮ ಸುರಸಾರ್ವಭೌಮ ಮಹಿಮ ಮದನಪಿತ ಕಾಳಿಂಗಭಂಗ ರಂಗಾ ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ 3
--------------
ವಿಜಯದಾಸ
ನಂಬಿದೇ ಗುರುವರಾ ನಂಬಿದೇಪ ನಂಬಿದೆ ಗುರುಸಾರ್ವಭೌಮಾ ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ ಅಂಬುಜೋದ್ಭವಪಿತನ ಕಂಭದಿ ತೋರಿದ ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ. ದಾಸನೆಂದಡಿಗೆ ಬಿದ್ದೆನೋ ಈಗ ದೋಷ ನಾಶಮಾಡೋ ಎನಗೆ ಬೇಗ ಆಹಾ ವಾಸುಕಿಶಯನನ ಬ್ಯಾಸರದೆ ಸ್ತುತಿಸಿ ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1 ಪಾತಕರೊಳಗೆ ಅಗ್ರೇಸರನಾನು ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ 2 ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3 ಮಧ್ವಶಾಸ್ತ್ರಗಳ ಮಂದರರಿಯದಿರಲು ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ ಆದರದಿಂದಲಿ ಪುರಂದರಕನಕರಿಗೆ ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4 ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ ಕತ್ತಲೆ ಅದ್ವೈತವಾದಗಳಿಗೆಲ್ಲಾ ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5 ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ ಅಪ್ಪ ಶ್ರೀರಾಮರ ಪೂಜಿಸಬೇಕೆಂದು ಒಪ್ಪಿಸನ್ಯಾಸವ ರಾಘವೇಂದ್ರನಾದ 6 ಮುದದಿ ದೇಶ ದೇಶವ ಚರಿಸಿದೇ ಸಮಯದಿ ಸುಜನರಕ್ಲೇಶಗಳಳಿದೇ ಆಹಾ ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ7 ಪರಿಪರಿ ಮಹಿಮೆಯ ತೋರುವ ಗುರುವೇ ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ ಮೂರೆರಡು ಒಂದುನೂರು ವರುಷ ಪರಿಯಂತ ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು8 ದಯದಿಂದ ನೋಡೆನ್ನ ದೀನೋದ್ಧಾರ ಭವ ಬಿಡಿಸು ಕರುಣಾಸಾರ ಆಹಾ ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ- ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9
--------------
ಕೃಷ್ಣವಿಠಲದಾಸರು
ನಭಕೀಶ - ನಭಕೀಶ ಪ ಇಭಮೊಗ ನಿನ್ನಡಿ | ಗಭಿ ವಂದಿಸುವೆನುಇಭವರದನ ಮನ | ನಭದಲಿ ತೋರೋ ಅ.ಪ. ಮೂಷಕ ವಾಹಾಹಿ | ಭೂಷನೆ ತ್ರೈಜಗತೋಷ ಗಣಾಧಿಪ | ಪಾಶಾಂಕುಶಧರ 1 ಶುಭ ಗುಣ ಭಜನೆಯಸುಭಗನೆ ಪಾಲಿಸಿ | ಕುಭವನೆ ಹರಿಸೋ 2 ಅಂಬುಜಾಂಡದಿ ತವ | ಶುಭಗುಣ ಪ್ರಸರಣಸುಭುಜಾಹ್ವಯ ಗೈ | ದ ಭಯವ ನಿತ್ತನು 3 ಅಬುಧಿಗೆ ಸೇತುವೆ | ವಿಭವದಿ ಗೈವಾಗಬುಜಾಂಡೋದರ | ಭಜಿಸಿದ ನಿನ್ನಾ 4 ಕ್ರತು ರಾಜಸೂಯ 5 ರಕ್ತವಾಸ ಅನು | ರಕ್ತ ಹರಿಯಲಿಭಕ್ತಿಯ ಪಾಲಿಸೋ | ಭಕ್ತಾಶ್ರಯನೇ 6 ಅಸಮಾಧಿಕ ಪ್ರಿಯ | ಶಶಿಭೂಷಣ ಸುತಶಶಿ ದ್ವಿಟ್ ಮರ್ಭವ | ಪಾಶವ ಕಳೆಯೋ 7 ಎಕಮೇವ ನಲಿ - ವಿ | ವೇಕವ ಕೊಡುವುದುಏಕದಂತ ಚಾ | ಮೀಕರ ಕೃತ ಭೂಷಾ 8 ಮೋದಕೇಕವಿಂಶ | ಸಾದರ ಸ್ವೀಕೃತಮೋದ ತೀರ್ಥ ಮತ | ಭೋದಿಸು ಗುರುವೇ 9 ಚಾರುದ್ವೇಷ್ಣಾಭಿಧ | ಚಾರ್ವಾಂಗನೆ ಹರಿಚಾರು ಚರಿತೆ ಸತ್ | ಸ್ಫೋರಣ ಕೊಡುವುದು 10 ಭಾವಜಪಿತ ಗುರು | ಗೋವಿಂದ ವಿಠಲನಭಾವದಿ ತೋರಿಸೊ | ಭಾವಜ ಭ್ರಾತಾ11
--------------
ಗುರುಗೋವಿಂದವಿಠಲರು