ಒಟ್ಟು 171 ಕಡೆಗಳಲ್ಲಿ , 56 ದಾಸರು , 159 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ಕಷ್ಟದಿ ತನಗೆ ದೊರಕುವುದು ಹಾಗ ಉನ್ನಂತ ಭಾಗ್ಯಗಳು ಹರಿಯ ವಿನಿಯೋಗ ಪ ಕಟ್ಟಿಗೆಯ ಹೊರೆ ತಂದು ಪಟ್ಟಣದೊಳಿಳುಹಿದರು ಉಟ್ಟ ಬಹಿರ್ವಾಸವನು ಬಿಗಿದಿಟ್ಟರು ಮೊಟ್ಟೆಯನು ಕೊಂಡೊಯ್ದು ಇಟ್ಟದನು ಮಾರಿದರು ಹೊಟ್ಟೆ ತುಂಬಿಸಿ ಕಡೆಗೆ ಕಟ್ಟುವನು ಹಾಗ 1 ಪದಪದ್ಯಗಳ ಹೇಳಿ ಕುಣಿದಾಡಲು ಹದಿನಾರನೆಯ ವಿಧಿಯ ಸದನದೊಳು ಸವಿದುಣಲು ಕದನ ಕರ್ಕಶನಾಗಿ ಕಡಿದು ಬರೆ ಹಾಗ 2 ಸೂಜಿ ನೂಲನು ಕೊಂಡು ಬಾಜಾರದೊಳು ಕುಳಿತು ಸೋಜಿಗದ ಹೊಲಿಗೆಯನು ಮಾಡಿಕೊಡಲು ಕಾಜು ಬಳೆಗಳ ಹೊತ್ತು ದಣಿದು ಮಾರಿದರವಗೆ ರೋಜು ಉಳಿವುದು ಅಸ್ತಮಯಕೆ ಒಂದ್ಹಾಗ 3 ಭಾಗ್ಯವುಳ್ಳವನನ್ನು ಬಾಧಿಸಲು ಅವ ತನಗೆ ಕಾಗೆ ಕರಿದೆನಿಸಿ ತಾ ಕಸ್ತೂರಿ ಹೋಲುವುದೆ ಮೊಗೆಮೊಗೆ ಮಲ್ಲಿಗೆಯು ಪರಿಮಳಿಪುದೆ 4 ಹರಿಯ ಸೇವೆ ಮಾಡೆ ಇಹಪರದ ಸೌಖ್ಯಗಳು ಹರನ ಸೇವೆಯ ಮಾಡೆ ಪರಮ ಪದವು ಸಿರಿಯರಸ ವರಾಹತಿಮ್ಮಪ್ಪ ನಿನ್ನಡಿಯ ಕರುಣರಸ ಹೊರತಾಗಿ ಸಿರಿಯು ಸೇರುವಳೆ 5
--------------
ವರಹತಿಮ್ಮಪ್ಪ
ತಾಳು - ತಾಳು - ತಾಳಬೇಕೆನ್ನುವಿರೋ ಗುರುವೇ ಪ ಇನ್ನೆಷ್ಟುದಿನ ತಾಳಬೇಕೋ ತಿಳಿಯಾದೋ ಅ.ಪ. ಆಶ್ರಿತಜನ ರಕ್ಷಕನೆಂದೂ ನಂಬಿದೇನೊ ಪ್ರಭುವೇ | ಪಾದ ಶ್ರೀ ರಾಘವೇಂದ್ರ ಪ್ರಭವೇ 1 ತನುವಿನೊಳಗೆ ಬಲವು ಇಲ್ಲಾ ಮನದೊಳಗೆ ಧೃಡಾವಿಲ್ಲ ಇನ್ನಾದರು ದಯಮಾಡಿ ಸಲಹಯ್ಯ ಪ್ರಭವೇ2 ದುರಿತ ರಾಶಿಗಳ ನಾಶಗೊಳಿಸೆ ನಿನ್ಹೊರತ್ಯಾರಿಲ್ಲ ಪ್ರಭುವೇ ತ್ವರಿತದಿ ಕರುಣ ಕಟಾಕ್ಷದಿ ನೋಡು ಶ್ರೀ ರಾಘವೇಂದ್ರ ಗುರುವೇ 3 ಈ ಸಂಸಾರ ಶರಧಿಯೋಳ್ ಮುಳುಗಿ ಬಳಲಿದೆ ಗುರುವೇ ಘಾಸಿಗೊಂಡಿಹೆ ಕೃಪೆಮಾಡೈ ಶ್ರೀ ರಾಘವೇಂದ್ರ ಗುರುವೇ 4 ತಡೆಮಾಡದೆ ಕಡೆಹಾಯಿಸೋ ಶ್ರೀ ರಾಘವೇಂದ್ರ ಪ್ರಭವೇ 5
--------------
ರಾಧಾಬಾಯಿ
ತಿಂದು ಹೋಗುವರೆಲ್ಲ ಹೊರತು ತಂದು ಕೊಡುವರಿಲ್ಲ ಪ ಕಷ್ಟಪಡುವೆವು ಅ.ಪ ಊರಿನ ಜನವಷ್ಟು | ಒಳ್ಳೆಯ ಶೀರೆ ಕುಪ್ಪಸ ತೊಟ್ಟು ನೀರಿಗೆ ಪೋಗುವ ದಾರಿಯಲಿ ಬಹರು ವಾರಿಗೆಯವರಂತಿಹುದಾನೆಂದಿಗೂ 1 ಹಿತವಾದಡಿಗೆಯ ಮಾಡಿಡಬೇಕು ಗತಿಗೆಟ್ಟ ರೋಗಿಗಳಿಗೆ ಅಕಟಾ 2 ಗಂಡನ ಕಡೆಯವರ | ಸೇವಿಸಿ ಬೆಂಡಾಯ್ತು ಶರೀರ ಯಾವ್ಯಾವ ಊರಿಗೊ ರೋಕಲಾರೆ ಹಾ 3 ನೀರು ಸೇದಲಾರೆ | ವುಂಡು ದೂರುವರು ಬೇರೆ ಸೋರುವುದು ಮನೆಯು ಸುಖವು ಕಾಣೆ ತೌರುಮನೆಯಾಸೆ ತಪ್ಪೆ ಹೋಯಿತು 4 ಅಕ್ಕಿಬೇಳೆಯಿಲ್ಲ | ಮುಗಿದಿತು ರೊಕ್ಕಮೂಲವೆಲ್ಲ ಇಕ್ಕಿ ಇಕ್ಕಿ ಕೈಬರಿದಾಯಿತು ಪೊಂ- ಬಕ್ಕಿದೇರ ಗುರುರಾಮ ವಿಠಲ 5
--------------
ಗುರುರಾಮವಿಠಲ
ತಿಳಿಯೋ ಮನವೇ ನಿಜ ಘನವಾ | ಕಳಿಯೋ ಹಮ್ಮಿನ ಅವಗುಣವಾ ಪ ಸದ್ಗುರು ಶರಣವ ನೀ ಬ್ಯಾಗ | ಸದ್ಗುಣದಲಿಹುದು ಜಗದೊಳಗ | ತದ್ಗತ ಬೋಧವರೆದು ಈಗ | ಸದ್ಗತಿ ಕಾಣಿಸುವದು ನಿನಗ 1 ಪಿಡಿಯದೆ ನಾನಾ ಬಯಕೆಯನು | ತಡೆಯದೆ ಬಿಡು ಕುಜನಾಶ್ರಯನು | ಇಡು ಗುರು ಪದ ಭಕುತಿಯನು | ಪಡೆ ದೃಷ್ಟಿಯ ಘನ ಸಮತೆಯನು 2 ಬ್ಯಾರೆ ಬ್ಯಾರೆ ನಗದಾಕಾರಾ | ತೋರಿದರೇನದು ಬಂಗಾರಾ | ಈ ರೀತಿ ಮಾಯದ ವ್ಯವಹಾರಾ | ಈರೇಳು ಜಗ ಚಿನ್ಮಯ ಸಾರಾ 3 ಗೋಡಿಯಿಂದಲಿ ಚಿತ್ರಗಳೆಲ್ಲಾ | ರೂಢಿಸಿ ದೋರಿತು ಜನರೆಲ್ಲಾ | ಆಡಲು ಯರಡಕ ಹೊರತಿಲ್ಲಾÀ | ನೋಡಲಾಯಿತು ತಾನೇಯಲ್ಲಾ 4 ಹಾಲುಕ್ಕಿದ ಸೋರೆಯ ಪರಿಯಾ | ಜ್ಯಾಳಿಸಬ್ಯಾಡಾ ಯುವ ಬರಿಯಾ | ಕೇಳಿಕೋ ಮಹಿಪತಿ ಸುತ ಧೋರಿಯಾ | ಬಾಳು ಗಳೆದು ದುಸ್ತರಿಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತೊರೆದು ಜೀವಿಸಬಹುದೆ ಗುರು ನಿಮ್ಮ ಚರಣವ ಪ. ಬರಿಯ ಮಾತಲ್ಲವಿದು ಜರಿದು ನುಡಿವೆ ಕರಕರೆಗೊಳಿಸದೆ ಕಾಯಬೇಕಿನ್ನು ಗುರು ಅ.ಪ. ಅತಿಶಯ ಮಹಿಮೆಯ ಹಿತದಿಂದ ತೋರಿದ ಪಿತನಂತೆ ಪೊರೆಯುವಚ್ಯುತ ದೂರ ಪದವೀವ ಮತಿವಂತರೆ ನಿಮ್ಮ ಕ್ಷಿತಿಯೊಳಗಲಲಾರೆ1 ನೀತಿಯ ಬೋಧಿಪ ಖ್ಯಾತಿ ಶ್ರೀ ಗುರುಗಳೆ ದೂತರಾದವರನು ಈ ತೆರ ಮಾಳ್ಪರೆ ಪಾತಕರಹಿತರೆ ಪ್ರೀತಿಯ ತೋರಿರಿ2 ಬಂದಿರಿ ಮಮತೆಲಿ ಕಂದರಂದದಿ ತಿಳಿದು ಇಂದಿರೇಶನ ತತ್ವಾವೃಂದಗಳರುಹುತ ಮಂದಿಗಳಿಗೆ ಆನಂದವನೆ ತೋರ್ದಿರಿ 3 ಎಲ್ಲಿ ಭಕ್ತರು ಕರಿಯೆ ಅಲ್ಲಿಗೆ ಬರುವ ಗುರುವೆ ಇಲ್ಲಿ ನಿಮ್ಮ ಹೊರತು ಇಲ್ಲವು ಇನ್ನೊಂದು ಒಲ್ಲೆನು ಈ ಜಗದ ನಿಲ್ಲದ ವಸ್ತುಗಳು 4 ಗೋಪಾಲಕೃಷ್ಣವಿಠ್ಠಲ ತಾ ಪರಿಪರಿ ಲೀಲ ವ್ಯಾಪ್ತ ಶ್ರೀ ಗುರು ಸಹ ಶ್ರೀಪತಿ ಹೃದಯದಿ ತೋರ್ಪಂತೆ ಕೃಪೆ ಮಾಡಿ ಕಾಪಾಡಬೇಕೊ ದೊರಿ 5
--------------
ಅಂಬಾಬಾಯಿ
ತೊರೆದು ಪೋಗುವುದುಚಿತವೇ | ಶ್ರೀ ಗುರುವರ ಹರಣ ನೀಗುವುದುಚಿತವೇ ಪ. ಕಮಲ ನಂಬಿ ಇರುವಂಥ ತರಳೆಯ ಜರಿದು ಮೋಸದಿ ಇಂತು ಅ.ಪ. ಆರನಾ ಪೂಜಿಸಲಿ | ಪರಿಪರಿಯಿಂದ ಆರನಾ ಸ್ತುತಿಗೈಯ್ಯಲಿ | ಪೇಳೆನ್ನ ಗುರುವೆ ತೋರದು ಮನಸಿಗೆ ಬೇರೊಂದು ಮತಿ ಇನ್ನು ಕಾರುಣ್ಯಮೂರ್ತಿ ಮತ್ತಾರ ಸೇವಿಸಲಿನ್ನು ಧಾರುಣಿಯೊಳ್ ನಿಮ್ಮ ಹೊರತಿ ನ್ನಾರು ಕಾಯುವರಿಲ್ಲವೆಂದು ಸೇರಿದವಳನು ಬಿಟ್ಟು ಶ್ರೀ ಗುರು ಮಾರನಯ್ಯನ ಪುರಕೆ ಪೋಪರೆ 1 ತುಪ್ಪ ಸಕ್ಕರೆ ಸವಿದಾ | ಶುಭತನುವಿನ್ನು ಒಪ್ಪವಾಯಿತೆ ಶಿಖಿಗೆ | ಕ್ಷಣ ಮಾತ್ರದಲ್ಲಿ ಅಪ್ಪಾವು ಅತಿರಸ ಮೆಲ್ಲುವ ಇಚ್ಛೆಯು ತೃಪ್ತಿಯಾಯಿತೆ ಪೇಳಿ ಅಪ್ಪಯ್ಯ ನಿಮಗಿನ್ನು ಅಪ್ಪ ಅಮ್ಮ ಸರ್ವಬಳಗವು ತಪ್ಪದಲೆ ನೀವೆಂದು ನಂಬಿದೆ ಒಪ್ಪಿಕೊಂಡೊಂಬತ್ತು ವರುಷವು ಇಪ್ಪ ರೀತಿಯ ಬಯಲು ಮಾಡಿ2 ಕಡುಕೃಪೆಯಿಂದಲಿ | ಪೇಳಿದ ಗೋಪ್ಯ ಒಡಲೊಳು ನೆನೆಯುತಲಿ | ಕುಣಿದಾಡುತಿದೆ ಒಡಲೊಳು ದೃಢಭಕ್ತಿಯೊಳ್ ನಂಬಿ ಬಿಡದೆ ನಿಮ್ಮಡಿಗಳು ನಡುವೆ ಬಂದೆಡರುಗಳ್ ಕಡೆಹಾಯ್ದು ಮಿಡುಕದೆ ಅಡಿಗಡಿಗೆ ಬೆಂಬಿಡದೆ ಚರಣವ ಪಿಡಿದು ಕೇಳಲು ಅಭಯವಿತ್ತ ನುಡಿಗಳೆಲ್ಲವು ಎತ್ತ ಪೋಯಿತೊ ಕಡಲಶಯನನ ಮಾಯವಕಟಾ 3 ಹಿಂದೊಬ್ಬರನು ಕಾಣೆನೊ | ನಿಮ್ಮಂದದಿ ಮುಂದೊಬ್ಬರನು ಕಾಣೆನೊ | ಈ ಕರುಣದವರ ಒಂದೊಂದು ಗುಣ ಗಣ ಬಂದು ಸ್ಮರಣೆ ಮನಕೆ ಕಂದಿ ಕುಂದಿಸುತಿದೆ ನೊಂದು ಬೆಂದು ಪೋದೆ ಚಂದವೇ ಇದು ಪೋಪ ತೆರವು ತಂದೆ ಸೈರಿಸಲಾರೆ ಗುರುವರ ತಂದೆ ಮುದ್ದುಮೋಹನರೆನಿಸಿದ ಸುಂದರಾತ್ಮಕ ಸುಗುಣಪೂರ್ಣ 4 ಎನ್ನಂತೆ ಬಳಲುವರು | ನಿಮ್ಮಯ ಶಿಷ್ಯ ರುನ್ನಂತೆ ಇರುತಿಹರೊ | ಬಹು ಭಕ್ತಿ ಉಳ್ಳವರು ಮನ್ನಿಸುತವರ ಸಂಪನ್ನ ಸಲಹಬೇಕು ಬಿನ್ನಪವಿದು ಕೇಳು ಮನ್ನಿಸು ಕೃಪಾಳು ಇನ್ನು ಸೈರಿಸೆ ಸೈರಿಸೆನು ನಿಮ್ಮ ಘನ್ನ ಮೂರ್ತಿಯ ಮನದಿ ತೋರೈ ಇನ್ನು ಗೋಪಾಲಕೃಷ್ಣವಿಠ್ಠಲನು ಭವ 5
--------------
ಅಂಬಾಬಾಯಿ
ದಧಿವಾಮನ ವಿಠಲ ಉದ್ಧರಿಸೊ ಇವನ ಪ ಅಧಿ ಭೂತ ಅಧ್ಯಾತ್ಮ ಅಧಿದೈವಗತ ದೇವವಿಧಿ ಜನಕ ವಿಶ್ವಾತ್ಮ ಮಧು ಮಥನ ಹರಿಯೆ ಅ.ಪ. ವಿದ್ಯಾಯುಗಳನಿತ್ತು ಮಧ್ವಮತ ದೀಕ್ಷೆಯಲಿಶ್ರದ್ಧೆ ಬುದ್ಧಿಯ ನೀಯೊ ಮಧ್ವಾಂತರಾತ್ಮಾ |ಕೃದ್ಧಖಳರ್ಹಾವಳಿಯ ಒದ್ದು ಪೋಷಿಸುತಿಪನಶುದ್ಧಗೈವುದು ಮನವ ಸಿದ್ಧಜನ ವಂದ್ಯಾ 1 ತಾರತಮ್ಯ ಜ್ಞಾನ ಮೂರೆರಡು ಭೇದಗಳವಾರ ವಾರಕೆ ತಿಳಿಸಿ ಪೊರೆಯಬೇಕೋ |ಸಾರತಮ ನಿನ್ಹೊರತು ಆರು ಕಾಯುವರಯ್ಯಪೋರಗಿಹ ದುರಿತಾಳಿ ಪಾರುಮಾಡೈದೇವ 2 ಕಾರಣಿಕ ಕರುಣಾಬ್ಧಿ ತಾರೇಶ ಶ್ರೀ ಹರಿಯೆನೀರ ಜಾಸನವಂದ್ಯ ನೀರಜಾಕ್ಷಾ |ತಾರಕನು ಕುಭವ ಕೂಪಾರ ದಾಟಿಸಲುಧೀರ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ದಾಸನಾದ ಮೇಲೆ ಈಶ ದೂರುಂಟೆ ಆಸೆನೀಗಲು ಸುಖದ ರಾಶಿ ಬೇರುಂಟೆ ಪ ದೋಷಕ್ಕಂಜಿದಮೇಲೆ ಸನ್ಮಾರ್ಗ ಬೇರುಂಟೆ ಕ್ಲೇಶ ನೀಗಿದಮೇಲೆ ಪುಣ್ಯ ಇನ್ನುಂಟೆ ಹೇಸಲು ಪ್ರಪಂಚಕೆ ಸತ್ಸಂಗ ಬೇರುಂಟೆ ವಾಸನ್ಹಿಂಗಿದಮೇಲೆ ವೈರಾಗ್ಯವುಂಟೆ 1 ಜ್ಞಾನಗೂಡಿದಮೇಲೆ ಮತ್ತೆ ತೀರ್ಥಗಳುಂಟೆ ಧ್ಯಾನವಿಡಿದಮೇಲೆ ಅನ್ಯಮೌನುಂಟೆ ಹೀನಗುಣ ತೊಳೆದಮೇಲಿನ್ನು ಸ್ನಾನಗಳುಂಟೆ ಮಾನಸವು ಶುದ್ಧಿರಲು ಬೇರೆ ಮಡಿಯುಂಟೆ 2 ಕೈವಲ್ಯ ಇನ್ನುಂಟೆ ಶರಣು ಪೊಂದಿದಮೇಲೆ ಪರಮಾರ್ಥ ಬೇರುಂಟೆ ಅರಿವನರಿತರೆ ಬೇರೆ ಪರಲೋಕ ಇರುಲುಂಟೆ ಶರಣರೊಲಿದಮೇಲ್ಹರಿಚರಣ ಹೊರತುಂಟೆ 3 ಸಫಲನಾದಮೇಲೆ ವ್ರತನೇಮ ಬೇರುಂಟೆ ಗುಪಿತವರಿತಮೇಲೆ ಪರತತ್ವವುಂಟೆ ಅಪರೂಪ ಧ್ಯಾನಿರಲು ತಪ ಬೇರೆ ಇರಲುಂಟೆ ಅಪರೋಕ್ಷಜ್ಞಾನ್ಯಾದ ಮೇಲೆ ಮಿಕ್ಕಸಾಧನುಂಟೆ 4 ಮಾನಹೋದಮೇಲೆ ಮರಣ ಬೇರಿರಲುಂಟೆ ನಾನತ್ವ ಪೋದಮೇಲೆ ಸತ್ಕರ್ಮವುಂಟೇ ಧ್ಯಾನದಾಯಕ ಮಮಪ್ರಾಣ ಶ್ರೀರಾಮನಡಿ ಖೂನ ತಿಳಿದ ಮೇಲೆ ಮುಕ್ತಿ ಬೇರುಂಟೆ 5
--------------
ರಾಮದಾಸರು
ದೂರ ನೋಡುವರೆ ರಂಗಯ್ಯ ಎನ್ನ ಪ ದೂರ ನೋಡುವರೇನೋ ಸಂಸಾರ ಶರಧಿಯೊಳಗೆ ಮುಳುಗಿ ದಾರಿಗಾಣದೆ ನೀನೆ ಗತಿ ಮು-ರಾರಿಯೆಂದು ಸಾರಿದ ಮೇಲೆ ಅ.ಪ ಆಸೆ ಬಿಡದೆಲೊ ಕಾಸುವೀಸಕೆ-ಕ್ಲೇಶ ಘನ್ನವೆಲೊ ಈಶ ಯಾರಿಗೆ ಪೇಳಲೊಶವೆಲೊ-ಶ್ರೀಶ ಎನ್ನ ಮನಸಿನಲ್ಲಿ ಬಹಳ ಘಾಸಿಪಟ್ಟೆನೊ-ದಾಶರಥಿ 1 ಭಕುತಿಯಿಲ್ಲವೊ ಅದರ ಹೊರತು-ಮುಕುತಿಯಿಲ್ಲವೊ ಯುಕುತಿಯಿಂದಲಿ ವಲಿವನಲ್ಲವೊ- ಮುಕುತಿದಾಯಕ ನಿನ್ನ ಕಾಣದೆ ಭಕುತಿಗೋಸುಗ ಪರರ ತುತಿಸಿ, ಕಕುಲಾತಿಯಿಂದಲೆನ್ನ- ಶಕುತಿಯೆಲ್ಲ ನಷ್ಟವಾಯಿತು 2 ಪೊರೆಯದಿರುವರೆ ಕರುಣಾಳುಯೆಂಬ-ಬಿರುದ ಬಿಡುವರೆ ಹರಿಯೆ ಯೆನ್ನ ಮರೆತು ಬಿಡುವರೆ- ಕರಿಯು ಹರಿಯೇ ಎಂದು ಕರೆಯೆ ಸಿರಿಗೆ ಪೇಳದೆ ಭರದಿ ಬಂದು, ಪೊರೆದೆಯೆಂಬ ವಾರ್ತೆಕೇಳಿ -ಮರೆಯ ಹೊಕ್ಕೆನೊ ವಿಜಯವಿಠ್ಠಲ 3
--------------
ವಿಜಯದಾಸ
ದೇವಿ ಪಾಲಿಸು| ಅಂಬ| ದೇವಿ ಪಾಲಿಸು ಪ ದೇವಿ ಪರಮಪಾವನೆ ಶಂಕರಿ ಅ.ಪ ಸುರರ ಮೊರೆಯನಾಲಿಸುತಲಿ| ದುರುಳನಾದ ಅರುಣಾಸುರನ ಹರಣ ಹೀರಿ ಮೆರೆವನುಪಮ| ಚರಿತೆ ಎನ್ನಿಷ್ಟಾರ್ಥವೀಯುತ 1 ನಂದಿನಿನದಿಯ ಮಧ್ಯದಿ ನೆಲೆಸಿ | ಬಂಧುಭಾವದಿಂದ ಶರಣ|| ವೃಂದವನ್ನಾನಂದದಿಂದ | ಕಂದರಂತೆ ಸಲಹುತಿರುವೆ 2 ವಿಮಲಚರಿತೆ ಸುಗುಣಭರಿತೆ| ಅಮರವಿನುತೆ ಲೋಕಮಾತೆ|| ಕ್ಷಮಿಸುತೆನ್ನಪರಾಧಗಳನು| ಕಮಲನೇತ್ರೆ ಪರಮಮಂಗಳೆ3 ನಿನ್ನ ಹೊರತು ಪೊರೆವರಿಲ್ಲ| ನಿನ್ನ ಭಜಿಸುತಿರುವೆನಲ್ಲ|| ಎನ್ನನು ಪೊರೆವ ಭಾರವೆಲ್ಲ| ನಿನ್ನ ಪದಕೊಪ್ಪಿಸಿದೆನಲ್ಲ 4 ಪಂಕಜಾಕ್ಷಿ ಪಾಪರಹಿತೆ| ಕಿಂಕರಜನನಿ ಶಂಕರಪ್ರಿಯೆ|| ಶಂಖಚಕ್ರಧಾರಿಣಿ ದೇವಿ| ವೆಂಕಟರಮಣನ ಸೋದರಿ ಶಂಕರಿ5
--------------
ವೆಂಕಟ್‍ರಾವ್
ಧೀರತನವ ಪಾಲಿಸೋ ಪ ಭವ ತೀರಕ್ಕೆನ್ನನು ಸೇರಿಸೋ ಅ.ಪ ತೊಳಲುತ ಖಿನ್ನನಾಗಿ ವರ್ಣಶ್ರೇಷ್ಠರಕುಲದಿಬಹು ಪುಣ್ಯದಿ ಇನ್ನು ಪುನರಪಿ ಜನ್ಮವಿಲ್ಲ ನಿನ್ನ ಕಿಂಕರನನ್ನು ಸೇರಿಸಿ ಪಾಲಿಸಿ ||ನಾರಾ|| 1 ಅಷ್ಟಯೋನಿಗಳಲ್ಲಿ ಹುಟ್ಟಿಸಾಯುತ ಬಲು ಮೊರೆಯಿಟ್ಟು ಬೇಡಲಿ ಎಳ್ಳಿನಷ್ಟು ಕಾರುಣ್ಯವು ಪುಟ್ಟದೇನೋ ಸೃಷ್ಟಿಗೈಯುವೇ ಪುಷ್ಠಿಗೈಯುವೆ ಕಟ್ಟಕಡೆಯೊಳು ನಷ್ಟಪಡಿಸುವೆ ಸೃಷ್ಟಿಯೊಳು ಜೊತೆಗಟ್ಟಿನೋಡುವ ದಿಟ್ಟರಾರೈ ವಿಷ್ಟಮೂರುತಿ2 ಧರೆಯ ರಾಜ್ಯವನೊಲ್ಲೆ ಸಿರಿಯಸಂಪದ ವೊಲ್ಲೆ ಸುರರು ಭೋಗಿಪ ಸುರಪುರವಾನೊಲ್ಲೆ ನಿನ್ನ ಹೊರತಾದಕೈವಲ್ಯ ಸ್ಥಿರವೊಲ್ಲೆನು ನಾನಾ ತೆರದಿ ಭಕ್ತಿಯೊಳಿರಲಿ ಯನ್ನಯ ಕರಣವೃತ್ತಿಯು ಪರಮ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ನರಜನ್ಮ ವ್ಯರ್ಥವಲ್ಲವೇ | ಈ ಮೂಢರ | ನರಜನ್ಮ ವ್ಯರ್ಥವಲ್ಲವೇ ಪ ಗುರುಗಳ ಶರಣ್ಹೊಕ್ಕು ದಯ ಪಡಿಲಿಲ್ಲಾ | ತರಣೋಪಾಯದ ನಿಜ ತಿಳಿದವನಲ್ಲಾ 1 ಘಟ್ಟಿಸಿ ಒಬ್ಬರ ಮನಿಯ ಮುಣಗಿಸಿ | ಹೊಟ್ಟೆಯ ಬಿಟ್ಟನು ಅನ್ಯಾಯ ಘಳಿಸಿ 2 ಉತ್ತಮರಲ್ಲಿ ಅರಕ್ಷಣವಕ್ಕುಳ್ಳಿರನು | ಲೆತ್ತ ಪಗಡಿಯಾಡಿ ಹೊತ್ತು ಗಳೆವನು 3 ವಾಸುದೇವನ ಸೇವೆಗಾಲಸ್ಯ ಹಿಡಿದಾ | ಕಾಸಿನ ಆಶೆಗೆ ಎತ್ತಾಗಿ ದುಡಿವಾ 4 ಮಹಿಪತಿ ನಂದನ ಪ್ರಭುವಿನ ಮರತಾ | ಸ್ವಹಿತದ ಹಾದಿಗೆ ಅವನು ಹೊರತಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರಹರಿಯ ಹೊರತಿನ್ನಾರಿಗಿಲ್ಲವೋ ಸ್ವತಂತ್ರದಾವುದು ಇಲ್ಲವೊ ನರರಿಗೆ ಸ್ವತಂತ್ರ ಪ ಗಳಿಸಿದ ಧನವು ನಳಿನಾಕ್ಷೀಯರಿಗೀವ ಸೆಳೆದು ವಯ್ಯುವಾಗುಳೀವರಿಲ್ಲವೋ 1 ನಾನು ನನ್ನದೆಂಬುವ ಈ ದೇಹವು ಹಾನಿಯಾಗುವಾಗದನ್ನುಳಿಸುವ ಸ್ವತಂತ್ರ 2 ಜೀವವು ಕಾಯವ ತ್ಯಜಿಸಿ ಪೋಗುವಾ ಗಾವಾಪ್ತರಿಗವನ್ನುಳಿಸಿಕೊಳ್ಲುವ ಸ್ವತಂತ್ರ 3 ಮಾಡಿದ ಧರ್ಮಾಕರ್ಮವೆಜೀವನ ಕೂಡ ಮಂತ್ರ ಸಂಗಡ ಬಾಹುದು 4 ದೋಷ ರಹಿತ ಹನುಮೇಶವಿಠಲನೇ ಈಶನೆಂದು ನಿಜ ದಾಸನಾಗೋ ಸ್ವತಂತ್ರ 5
--------------
ಹನುಮೇಶವಿಠಲ
ನಾನಾನಂತಪರಾಧಿ ಎನ- ಗೇನಿಲ್ಲವು ದೃಢಬುದ್ಧಿಪ. ನೀನೇ ಗತಿ ನಿನ್ಹೊರತು ಕಾವರನು ಕಾಣೆನು ಕರುಣಾಂಬೋಧಿಅ.ಪ. ಹಂದಿಯಂತೆ ತಿಂದು ಬೆಳದೆ ಎನ್ನ ಮುಂದಣ ಗತಿಯನು ಮರೆತೆ ಹಿಂದಿಲ್ಲವು ಮುಂದಿಲ್ಲವು ಲೋಕದಿ ನಿಂದ್ಯಾಪಾತ್ರ ತಾನಾದೆ1 ಮುತ್ತಿತು ಯೆನಗಜ್ಞಾನ ಎನ್ನ ಚಿತ್ತದಿ ಕೊಡು ನಿನ್ನ ಧ್ಯಾನ ನಿತ್ಯ ತವಚರಣ ಭಕ್ತಿಜ್ಞಾನವ ನಿತ್ತು ಕಾಯೊ ಸುತ್ರಾಣ2 ಗತಿಯಾರಿಲ್ಲನ್ಯತ್ರ ಶ್ರೀ- ಪತಿಯೆ ಕಾಯೊ ಸುಚರಿತ್ರ ಕ್ರತುಪಾಲ ಲಕ್ಷ್ಮೀನಾರಾಯಣ ಭಾ- ರತಿಪತಿನುತ ಸುರಮಿತ್ರ3
--------------
ತುಪಾಕಿ ವೆಂಕಟರಮಣಾಚಾರ್ಯ
ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ-ನಾರಾಯಣ ನಿನ್ಹೊರತು ಪೊರೆವ ದೈವವೆಲ್ಲಿದೆ ಪ ನಾ ಮೀರಿ ದುಷ್ಕರ್ಮವ ಮಾಡಿದೆಅಪಾರಮಹಿಮ ದಯಾನಿಧೇ ಅ.ಪ ನಾನಾ ಯೋನಿಗಳಿಂದ ಬಂದೆನೋಮಾನತಾಳಲಾರದೆ ಬಲು ನೊಂದೆನೋದೀನರಕ್ಷಕ ಎನ್ನ ಗತಿ ಮುಂದೇನೋಮಾನದಿಂದಲಿ ಪಾಲಿಸುವಂಥ ದೊರೆ ನೀನೋ1 ದಾಸರ ಮನ ಉಲ್ಲಾಸನೆಶ್ರೀಶ ಆಶ್ರಿತ ಜನರ ಪೋಷನೆಸಾಸಿರ ಅನಂತಮಹಿಮನೆಕ್ಲೇಶನಾಶ ಮಾಡಿಸೋ ಶ್ರೀನಿವಾಸನೆ 2 ರಂಗನಗರ ಉತ್ತುಂಗನೆಗಂಗಾಜನಕ ಗರುಡತುರಂಗನೆ ಉ-ತ್ತುಂಗ ಗುಣಗಳಂತರಂಗನೆ ಅ-ನಂಗನ ಪೆತ್ತ ರಂಗವಿಠಲನೆ 3
--------------
ಶ್ರೀಪಾದರಾಜರು