ಒಟ್ಟು 322 ಕಡೆಗಳಲ್ಲಿ , 44 ದಾಸರು , 256 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗರ್ವಿಸುವದು ತರವೆ ಗರ್ವಿಸುವದು ತರವಲ್ಲ ನೀವಿದ ಕೇಳಿ ಸರ್ವೇಶನೊಪ್ಪನೀ ನಡತೆಯ ಕಂಡರೆ ಪತೊಗರಿ :ಬೆಲ್ಲವೆ ಬಾ ನಾನು ತೊಗುರಿಬೇಳೆಯು ನನಗುಲ್ಲಾಸದಿಂದೊಂದು ಯೋಚನೆ ತೋರಿತುಎಲ್ಲರು ಒಬ್ಬಟ್ಟು ಒಳ್ಳಿತೆಂದೆಂಬರುಬಲ್ಲವರಾದರೆ ವಿವರಿಸದಿರುವರೆಸಲ್ಲದ ಮಾತನಾಡಲಿಬೇಡ ಸತ್ಯವನಿಲ್ಲಿ ನನ್ನೊಳು ಪೇಳು ಮತ್ತೆ ನಾಲುವರಿರುವಲ್ಲಿ ನ್ಯಾಯವ ತಿದ್ದಿಕೊಂಬ ನಾವಿಬ್ಬರುಇಲ್ಲದ ಬಳಿಕ ಗೋಧಿಯ ದೆಸೆುಂದೇನುಸಲ್ಲದ ತುಪ್ಪವನೇನ ಮಾಡಲಿಬೇಕುಒಳ್ಳೆಯತನ ನಿನ್ನೊಳು ಇರುವುದಿದನೆಲ್ಲವನೆನಗೆ ಪೇಳು ಸಟೆಯ ಪೇಳಬಲ್ಲೆನೆ ನಾ ನಿನ್ನೊಳು ನಿಮ್ಮೊಳು ನಾನೆಬಲ್ಲಿದನಲ್ಲವೆ ಕೇಳು ನನ್ನನೆ ಯೆಲ್ಲಾಕೊಳ್ಳುವರವನಿಯೊಳು ನೀನೂ ಸ್ವಲ್ಪವಲ್ಲವೆ ನಿಜ ನಮ್ಮೊಳು ಕೋಪಿಸಬೇಡಸಲ್ಲದ ವಸ್ತುಗಳು ಗೋಧಿಯು ಎಣ್ಣೆಯಲ್ಲವೆ ನಿತ್ಯದಲ್ಲೂ ತುಪ್ಪವ ಬಿಡುಪೊಳ್ಳುನುಡಿದರೆನ್ನ ಮಾತೆಲ್ಲ ಪಾಳು 1ಬೆಲ್ಲ :ಏನೆಲೆ ತೊಗುರಿಬೇಳೆಯೆ ನನ್ನ ಸ್ವಲ್ಪವೆಂದೇನು ಕಾರಣವನು ಕಂಡು ನನ್ನೊಡನೀಗನೀನುಸುರಿದೆ ಮಾತು ಹೆಚ್ಚಿ ಬರುತಲಿದೆುೀ ನಡೆ ನಿನ್ನಯ ಶ್ರೇಷ್ಠವದೆನಿಟಷ್ಟೂನಾನಿಲ್ಲದಿರಲು ಸೀಯಾಗುವದೆಂತುರೆನೀನು ಸುಮ್ಮನೆ ಹೇಳಿಕೊಂಬೆ ತನ್ನಯ ಸ್ತುತಿತಾನೆ ಮಾಡಿಕೊಂಬ ಮನುಜಗೆ ನರಕವೆಂಬೀನಿಗದಿಯನರಿತರೆ ಪರನಿಂದೆಯನೀನೆಚ್ಚರಂಗೆಟ್ಟು ಮಾಳ್ಪೆಯ ಇನ್ನಭಿಮಾನವನೀಗ ುರುಯೆನ್ನೆಡೆಯೊಳುನೀನಿರಬೇಡ ಸಾರು ಹೆಚ್ಚುಗೆ ನಿನ್ನದೇನದನೆನಗೆ ತೋರು ದುರ್ಜನರು ತಾವೀನುಡಿ ನಿಜವೆಂಬರು ಸತ್ಪುರುಷರುಮಾನಸದಲಿ ಒಪ್ಪರು ನಿನಗೆ ಅಭಿಮಾನ ಮೊದಲು ಇದ್ದರೂ ಹಾರು ಮುಂದುಜಾಣತನವೆಯಾದರೂ ಹೆದರದಿಪ್ಪೆಹೀನಾಯವೆ ಬಂದರೂ ನಾಲುವರೆನ್ನದೀನಡೆಯೆನ್ನುವರು ಎಂಬುದನೀಗನೀನರಿಯದೆ ಬಂದೆುದು ಪಾಪ ಬೇರು 2ಗೋಧಿ :ಹೋಗಲೆ ತೊಗುರಿ ಬೆಲ್ಲಗಳಿರ ನನ್ನನುಕೂಗಿ ಬೈವಿರಿ ಗೋಧಿ ಯೋಗ್ಯದ ವಸ್ತು ತಾನಾಗದು ಎಂದು ಕೊಬ್ಬಿದ ಮಾತನಾಡುತ ನೀಗಿಕೊಂಬಿರೆ ನಿಮ್ಮ ಮಾನವ ಸದರ ನಿಮಗಾಗಿದೆ ಕೊರಗಿಪರೆ ಮಾತಿನ ಪರಿಯೇಗುವುದೆನಿಸದಿರೆ ನಿಮ್ಮನು ತೃಣಕಾಗಿ ನಾ ಕಾಣುವರೆ ಕಾಣೆನು ಮಾನಹೇಗೆ ನಿಮ್ಮೊಳು ಹೋಗೆ ಯೆನಗೆ ಸಮನಾಗಲು ನೀವು ಬಲ್ಲಿರೆ ುೀ ಯಾಳೆಗೆಹೋಗಿ ನೀವು ಕೊಬ್ಬಿದರೆ ಈಶ್ವರ ಕೃಪೆಯಾಗುವದೆಂತೆನ್ನು ಮರೆಯೊಗಲೊಲ್ಲಿರೆ 3ಎಣ್ಣೆ :ಹರಟಿಕೊಂಬಿರೆ ನೀವೆ ನಿಮ್ಮೊಳು ನನ್ನನುಜರೆಯುತಲೆಣ್ಣೆುಂದೇನೆಂದು ನಾನಿಲ್ಲದಿರಲು ನೀವೆಂತೊಂದು ಗೂಡಿ ಬಾಳುವಿರಿದನರಿಯದೆ ಮುಂಗೆಟ್ಟು ನುಡಿದರೇನಾುತೀಪರಿಯಹಂಕಾರ ಲೇಸಲ್ಲ ಹೀನಾಯವುಬರುವದು ಪರರ ನಿಂದಿಸಿ ಜೀವಿಸುವುದುತರವಲ್ಲ ಸದ್ಗತಿಗೆಟ್ಟು ಕೊನೆಗೆ ಬರದಿರದು ನರಕ ಬೆಂಕಿುಂ ಮೂರುವೇಳೆ ನೀಕೊರಗುವೆ ಬೆಲ್ಲವೆ ಕೇಳು ತೊಗುರಿಯೆ ನೀನಿರದೆ ಸಾರಿಯೊಳು ಬೇಯುವೆ ಗೋಧಿಕೊರಗುವೆ ಕಲ್ಲಿನೊಳು ಚಚ್ಚಿಸಿಕೊಂಡುಇರುವದೆ ನಿಮ್ಮವೊಲು ಕಷ್ಟವದೆಂಬದರಿುರೆ ನೀವು ನನ್ನೊಳು ುಂಥಾ ನಡೆಬರುವುದೆ ಬಹು ಕೇಳಾ ಹೀನಾಯವುಬರದಿರದೀ ಬಾಳು ಯಾತಕೆ ಸುಖಕರ ಮಾರ್ಗ ತಾ ನಿಮ್ಮೊಳು ುಲ್ಲವು ುದನರಿಯದೆ ನಿಮ್ಮಳಲು ಬಿಡದು ನನ್ನಮರೆಯೊಕ್ಕು ಬದುಕುವದಿದು ಬಹುಮೇಲೂ 4ತುಪ್ಪ :ಜಗದೊಳು ನೀವೆ ಬಲ್ಲಿದರೆಂದು ನಿಮ್ಮೊಳುನಿಗದಿಯ ಮಾಡಿಕೊಂಬಿರಿ ಗರ್ವ ಹೆಚ್ಚಿತೆಸುಗುಣವಂತರು ನೀವಾದರೀಪರಿಯಲ್ಲಿಬಗುಳಿಕೊಂಬಿರೆ ತುಪ್ಪವಂ ಬಿಡುಯೆನ್ನುತಮಿಗೆ ಸುರತತಿ ಮೊದಲಾಗಿ ನನ್ನಿಂದಲಿಸೊಗಸಾಗಿ ಕೃಪೆವಡೆವರು ನಾನಿಲ್ಲದೆಮಿಗೆ ಶುದ್ಧರಾಗುವಿರೆಂತು ಬರಿದೆ ನಿಮ್ಮನಿಗದಿಯ ಪೇಳಿಸಿಶಾನಿಗೆ ನನ್ನ ನೀವಗಲಲು ರುಚಿಕರವೆಂತು ನಾನೊಪ್ಪೆನುನಿಗಮದ ಮಾತಿದುವೆ ಸಟೆಯ ಮಾಡಿಸೊಗಸಾಗಿ ಬಾಳಿ ನೀವೆ ಅನ್ಯಾಯಗಳಗಣಿತವಾಗಿುವೆ ನನ್ನಯ ನ್ಯಾಯನಿಗದಿಯಾದರೆ ಹೋಗುವೆ ತಪ್ಪಿದರೆ ಈಜಗದೊಳಗ್ನಿಯ ಪೊಗುವೆ ನಿಮಗೆ ಆಣೆಯಗಲಿದರಿಲ್ಲಿಂದವೆ ಪೋಟಾಟವೆಜಗದೊಳುತ್ತಮ ವಸ್ತುವೆ ನಾನೆಂಬರುಬಗೆುರೆನ್ನನು ನೀವೆ ಮೊಂಡರುಯೆಂದುಖಗವಾಹನಗೆ ಪೇಳುವೆ ಚಿಕ್ಕನಾಗನಗರಕೆ ನಡೆುರಿ ನ್ಯಾಯವ ತಿದ್ದುವೆ 5ಒಟ್ಟಾಗಿ :ದೇವ ಭಕ್ತಾವನ ಪಾವನ ಚರಿತ ಸುರಾವಳಿನುತಪಾದಭಾವಜ ಜನಕ ರಮಾವಲ್ಲಭಾನಂತ ಗೋವಿಂದ ಮಾಧವನೀವರಿಯದೆ ಪೋಗಲಾವಗತಿ ನಮಗೀ ವಸುಧೆಯೊಳ್ಮುನಿಭಾವಿತ ಚರಣನೆಸಾವಧಾನದೊಳು ಪರಾಮರಿಸಿುಂತಪ್ಪದಾವಲ್ಲಿುದ್ದಡಲ್ಲಿಗೆ ತಕ್ಕ ಶಿಕ್ಷೆಯನೇ ವಿರಚಿಸಿ ಗುಣವಿದ್ದಲ್ಲಿ ರಕ್ಷಿಪುದಾವ ಪರಿಯಲಾದರು ಜಗನ್ನಾಥನೆುೀವ್ಯವಹಾರವನು ನಿಗದಿಗೈದುನೀವೊಲಿದೆಮ್ಮುವನು ರಕ್ಷಿಸಬೇಕು ದೇವಾದಿದೇವ ನೀನು ಅನಾಥರ ಕಾವಲ್ಲಿ ದಯಾವಂತನುಸುಜನಪತಿ ಭಾವಿತ ಪಾದಪದ್ಮನು ನೀನೆ ಗತಿನಾವರಿದನ್ಯರನು ಬಾಳುವೆವೆಂತುರಾವಣಾರಿಯೆ ನೀನು ಕೈಪಿಡಿ ಗತಿುವರೆದಿಕ್ಕು ನೀನು ಮಾಡಿನ್ನೇನುಭಾವಿಸೆವನ್ಯರನು ನಮ್ಮಿಂದಲಿಸೇವೆಗೊಳುವ ನೀನಿರಲು ಭಜಿಸದೆ ನಾವು 6ಬರಿದೆ ಜಗಳವಾಡಬೇಡವೀಚೆಗೆ ಬನ್ನಿಒರೆಯುವೆ ಬುದ್ಧಿಯ ಕೇಳಲಿಚ್ಛಿಸಿದರೆತರುಣನಾಗಾಖ್ಯಪುರದ ವೆಂಕಟೇಶನುಗುರುವಾಸುದೇವಾವತಾರವ ತಾಳಿಯೆಕರುಣದಿಂ ತಿಮ್ಮದಾಸನ ಬಹುದೋಷವ ಪರಿದಾಳ್ದನೆಂಬ ಬಿರುದಪೊತ್ತು ನಾನೀಗಮೆರೆಯುವೆನೀವೆಲ್ಲ ಬರಿ ಮಾತ ಮಾಡದೆಶಿರದಲಿ ಹೊತ್ತು ನನ್ನಯ ನುಡಿಗೇಳಲುಬರುವುದು ಕೀರ್ತಿ ಮೂಜಗದೊಳಗದರಿಂದನೆರೆುೀಗ ನೀವೆಲ್ಲರೂ ಒಂದಾಗಿಯೆುರಲು ಸೌಖ್ಯವದೆಂಬರು ವಿಂಗಡದಿ ನೀವಿರಲು ಜನರು ಬೈವರು ಕೂಡಲು ನನ್ನಗುರುದಯ ಬಹುದೆಲ್ಲರು ಹಿಗ್ಗುವರು ಮತ್ತರಿತು ಸಾರವ ಕೊಂಬರು ಬಹಳ ಶ್ರೇಷ್ಠರುವದರಿಯದಿದ್ದರೂ ಹೊಣೆಯ ನೀವೆನೆರೆ ನಿಮ್ಮನೀ ಜನರು ಬೈಯದ ಹಾಗೆಉರು ಶಿಕ್ಷೆಯನೆ ಮಾಳ್ಪರು ಯಾರೆಂಬಿರೆಅರಿುರಿ ಗಂಗಪ್ಪ ಹೊಣೆ ಹೋಗಿನ್ನಾದರು7
--------------
ತಿಮ್ಮಪ್ಪದಾಸರು
ಗೃಹಸಮರ್ಪಣೆ ಪುರುಷಾರ್ಥದಾಯಿ ಶ್ರೀವರ ನೀ ನಿಲಯದಿ ಸ್ಥಿರವಾಗು ಕರುಣಾನಿಧೆ ವರದೇಶ ನಿಜಪಾದ ಸರಸೀಜ ಮಕರಂದ ನಿತ್ಯ ಪ. ಆವ ಕಾಲಕು ಸಿರಿದೇವಿಯರಸ ನೀನೆ ಕಾವಲಾಗಿರುವಿ ಎಂದು ಭಾವಶುದ್ಧದಿ ನಿನ್ನ ಸೇವಾರತಿಯನಿತ್ತು ಪಾವನಗೊಳಿಪ ಬಂಧು ಕಾರುಣ್ಯಸಿಂಧು ವಿರಿಂಚಿ ಭವಾಹಿ ವಿಪತಿ ಸು- ರಾವಳೀಶಯವೆಂದು ರವಿಮುಖ ದೇವ ಋಷಿಗಣ ದೇವ್ಯ ನಿನ್ನ ಕ- ನಿತ್ಯ ಬಯಸುವೆ 1 ನಿನ್ನ ಕಟಾಕ್ಷ ಸಂಪೂರ್ಣವಾಗಿರಲೆನ- ಗನ್ಯರ ಭಯವಿಲ್ಲವು ಪರಮ ಸುಗು- ಣಾರ್ಣವ ನಿನಗೆಲ್ಲವು ತಾ ಸೇರಿರುವವು ಪನ್ನಗಾರಿ ಧ್ವಜ ಪರೇಶ ಮ- ಹೋನ್ನತಿ ಪ್ರದ ಮೂಜಗದ್ಭವ ನಿನ್ನ ದಾಸರದಾಸನೆಂದರಿ- ದೆನ್ನ ಮೇಲ್ಕಡೆಗಂಣನಿರಿಸುತ 2 ಪಂಕಜಾಲಯ ಭೂವರ ಕಿಂಕರಾಧಾರನಿ:- ಶಂಕ ಕೃಪಾಕರ ಅಂಕಿತ ಕೊಡು ಸಾದರ ಬಲಭದ್ರ ಸೋದರ ಶಂಕರನೆ ಶುಭಕರ ಕಮಲವನು ಶಂಕಿಸಿದೆ ಶಿರದಲ್ಲಿ ಕಲ್ಪಿಸಿ ಅಂಕುರಿತ ಭಯ ಬಿಡಿಸು ಸಕಲಾ- ಶಂಕವಾರಣ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಚಾರು ಹಸ್ತಾಯ 1ಹೃದಯಶೋಭಿತ ಮಹಾ ಕೌಸ್ತುಭಾಭರಣಾಯವಿಧಿಜನಕ ನಾಭಿಪಂಕಜ ಭಾಸುರಾಯಸದಮಲಾಯತ ಕಾಂಚಿದಾಮಯುತ ವಸನಾಯಬುಧಜನಮನೋವೇದ್ಯ ಪಾದಪದ್ಮಾಯ 2ಲಕ್ಷ್ಮೀಕಳತ್ರಾಯ ಸೂಕ್ಷ್ಮಸ್ವರೂಪಾಯಕುಕ್ಷಿಗತಭುವನ ಪರಿಪಾಲಕಾಯಪಕ್ಷೀಂದ್ರಕಂಧರಾರೂಢಾಯ ದುಷ್ಟಜನಶಿಕ್ಷಾಸಮರ್ಥಾಯ ಸಾಕ್ಷಿ ಚೈತನ್ಯಾಯ 3ವಿಶ್ವಸ್ವರೂಪಾಯ ವಿಶ್ವತರು ಮೂಲಾಯವಿಶ್ವಗುಣ ಸಂಹಾರಕಾರಣಾಯವಿಶ್ವನಾಟಕಸೂತ್ರಧಾರಾಯ ನಿತ್ಯಾಯವಿಶ್ವಕೃತ ಸುಕೃತದುಷ್ಕøತ ಲೇಪರಹಿತಾಯ 4ಧರಣಿಕಮಲಾಲಯಾಶ್ರಿತ ದಿವ್ಯ ಪಾಶ್ರ್ವಾಯಸುರಮುನಿ ಸ್ತುತಿ ಘೋಷಪೂರಿತಾಯಪರಮಪಾವನಪುಣ್ಯ ಶೇಷಾದ್ರಿನಿಲಯಾಯಸ್ಮರಜನಕ ಸುರಶಿಖಾಮಣಿ ವೆಂಕಟೇಶಾಯ 5ಓಂ ಅನಘಾಯ ನಮಃಕಂ||ಗಣಪತಿ ನಿನ್ನಾಗ್ನೇಯದಲಿನ ತಾ ನೈರುತ್ಯದೆಶೆಯೊಳಂಬಿಕೆಮರುತನೊಳನುಪಮ ಶಂಕರನೀಶಾನ್ಯನೋಳರ್ಚಿತರಾರೈಯ್ಯ ತಿರುಪತಿಯೊಡೆಯಾನೀನೇ ಗಣಪತಿ ಸೂರ್ಯನುನೀನೇ ಶಿವ ನಿನ್ನ ಶಕ್ತಿ ದೇವಿಯು ನಾನೂನೀನಾಗಿ ನಿನ್ನ ಭಜಿಸಿದೆನೀ ನಿರ್ಣಯ ನಿನ್ನ ವಚನ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಚಾರು ಕೋರಿ ಸ್ಮರಿಸುವೆನು ಹರಿಯೆ ಪ ಕಾರುಣ್ಯ ಸಾಗರ | ಪರಮಕೃಪಾಕರ | ಸಾರಸುಗುಣ ಗಂ | ಭೀರ ರಮಾವರ|| ಠಾರ ಭುವನೋ | ದ್ಧಾರ ದೀನೋ | ದ್ಧಾರ ಹತ್ತವ | ತಾರ ಶ್ರೀಹರಿ1 ಚಂದದಿ ಪೂಜಿಸಿ ದೇವ || ಕಂದರ್ಪನಯ್ಯನೆ | ಮಂಧರಧರನೆ ಮು | ಕುಂದ ಗೋವಿಂದ | ಬೃಂದಾರಕ ವಂದ್ಯ || ನಂದಕಂದನೆ | ಸಿಂಧುಶಯನನೆ | ಹರಣ ಜಗದಾ | ನಂದಮೂರುತಿ | ವೆಂಕಟೇಶನೆ 2
--------------
ವೆಂಕಟ್‍ರಾವ್
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ಜಯ ಜಯಾ ಶ್ರೀ ವೆಂಕಟೇಶ ಜೀಯ ಪ ಜಯ ಶ್ರೀ ವೆಂಕಟೇಶಜೀಯ ನೀನೆ ಭಯಪ್ರದಾಯಕನಯ್ಯ ||ಆಹಾ|| ಭಯಕೃದ್ಭಯನಾಶನ ನೀ ಎನ್ನ ಕೈಬಿಡದೆ ಕಾಯೊ ಎನ್ನೊಡೆಯನೆ ವೇಂಕಟರಾಯ ಅ.ಪ ಮಂಕುಮಾನವನಾದ ಎನ್ನ ಮನದ ಡೊಂಕು ತಿದ್ದಿದಿ ಸ್ವಪನವನ್ನ ನಿನ್ನ ಅಂಕಿತದಂತೆ ನುಡಿಸೆನ್ನ ಇನ್ನು ಮಂಕುಹರಿಸಿದೆ ಪ್ರಸನ್ನ ||ಆಹಾ|| ಬಿಂಕದಿಂದ ಇಹ ಶಂಕೆ ಹರಿಸಿ ನಿನ್ನ ಕಿಂಕರ ಕಿಂಕರ ಕಿಂಕರನೆನಿಸಿದೆ 1 ಹಿಂದನೇಕ ಪರಿಯಿಂದ ಮನ ಬಂದಂತೆ ನುಡಿಸಿದ್ದರಿಂದ ತಂದೆ ಮುದ್ದು ಮೋಹನ ವಿಠ್ಠಲಾನಂದ ಪೊಂದಿ ಸಂದೇಹ ಹರಿಸಿದ ಚಂದ ||ಆಹಾ|| ಇಂದು ಮುಂದು ಎಂದೆಂದಿಗೂ ನೀ ಭವ ಬಂಧ ಹರಿಸಿ ಕಾಯಬೇಕು ಇಂದಿರೆರಮಣ2 ತ್ವರಿತಾದಿ ದಯಮಾಡೋ ಹರಿಯೆ ನೀನೆ ನಿರುತ ಎನ್ನಯ ಕುಲದ ದೊರೆಯೇ ಭಕ್ತ ಪರಿಪಾಲ ಮೋಕ್ಷದ ಹರಿಯೇ ನಿನ್ನ ಹೊರತು ರಕ್ಷಕರ ನಾನರಿಯೆ ||ಆಹಾ|| ಪರಮಕರುಣಿ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸವಿಠಲ ಜಗದೀಶನೆ 3
--------------
ಉರಗಾದ್ರಿವಾಸವಿಠಲದಾಸರು
ಜಯಜಯಾ ಶ್ರೀನಿವಾಸಾ ಜಗದೀಶಾ ವೆಂಕಟೇಶಾ ದಯದಿಂದಲಿ ಪಾಲಿಸೆನ್ನಾ ದೋರಿನಿಜ ಪ್ರಕಾಶಾ ಪ ಉರಗಾದ್ರಿಯಲ್ಲಿ ಬಂದು ಭೂವೈಕುಂಠಿದೇಯಂದು ಕರದಿಂದ ಮಹಿಮೆದೋರಿ ತಾರಿಸುವ ಜನದಿಂದು 1 ಧರ್ಮಾರ್ಥ ಕಾಮ್ಯ ಚತುರ್ವಿಧಮುಕ್ತಿಗಳು ಧರ್ಮವರಿತೆಸಾಧುರಿಗೆ ನೀಡುತಿಹೆ ದಯಾಳು 2 ಕುಲಧರ್ಮದಿಂದಲೆನೆಗೆ ಮಾನ್ಯತಾನಬಂದ್ಹಾಂಗೆ ವಲಮೆಯಿಂದ ಪರಗತಿಗೆ ಕುಡುಮಾನ್ಯತೆನವೀಗ 3 ಮಂದರೊಳು ಮಂದನಾನು ಜ್ಞಾನಭಕ್ತಿಯರಿಯೆನು ತಂದೆ ಮಹಿಪತಿಸ್ವಾಮಿ ಇಂದು ಉದ್ಧರಿಸುನೀನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯ ವೆಂಕಟೇಶಾ| ಶ್ರಯ ಸುಖದಾಯಕ ಸ್ವಾಮಿ ಉರಗಾಚಲವಾಸಾ ಪ ಕರುಣಾಕರ ರತ್ನಾಕರ ಕನ್ಯಾ ಮನೋಹಾರಿ| ಸುರವರ್ಧನ ಮುರಮರ್ದನ ಗೋವರ್ಧನಧಾರಿ| ವರಮಂದಿರ ಧೃತಕುಂದರ ಸುಂದರ ಸಹಕಾರಿ| ಶೌರಿ 1 ಜಗಕಾರಣ ಪರಿಪೂರಣ ಸುಂದರಸಾಕಾರಾ| ಅಘಹರಣಾ ಮುನಿ ಸ್ಫರಣಾತ್ರಯ ಭುವನಾಧಾರಾ| ನಗಧರಣಾ ತವಶರಣಾಭರಣಾ ಮಯೂರಾ| ಭೃಗುಚರಣಾಂಕಿತ ಚರಣಾಂಬುಜ ಶೋಭಿತ ಧೀರಾ 2 ಸುಖಕರ್ತಾ ದುಃಖಹರ್ತಾ ಸರಸೀರುಹ ನಯನಾ| ಸಕಲಾತ್ಮ ಪರಮಾತ್ಮಾ ಫಣಿಕುಲವರ ಶಯನಾ| ನಿಖಿಲಾಸುರ ತಮಭಾಸುರ ದುರಿತಾವಳಿ ಶಮನಾ| ಮಕರಾಂಕಿತ ಪಿತಮಹೀಪತಿ ನಂದನಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಮಂಗಳಂ ಶುಭೋದಯ ಮಂಗಳಂ ಭಯಹರಗೆ ತಿರುಪತಿಯ ವೆಂಕಟೇಶ್ವರಗೆ ಪ ಸುರಲೋಕವನು ಪಡೆದ ಶಿರದಮಕುಟದ ಪ್ರಭೆಗೆ ಸ್ಮರಚಾಪವನು ಪೋಲ್ವ ಪುರ್ಬುಗಳ ಚೆಲುವಿಕೆಗೆ ತುಂಬಿ ತುಳುಕುವ ನಯನಗಳಿಗೆ 1 ಕನಕಕುಂಡಲಗಳಿಗೆ ಘನ ನಾಸಿಕದ ಮಣಿಗೆ ಮಿನುಗುತಿಹ ಮುಗುಳುನಗೆಯೊಗುವ ಮುಖಕೆ ಇನಕೋಟಿಪ್ರಭೆಗೆ ಮಿಗಿಲೆನಿಪ ಕೌಸ್ತುಭಮಣಿಗೆ ವನಮಾಲೆಯನು ಧರಿಸಿ ಶೋಭಿಸುವ ಕಂಠಕೆ 2 ಭುಜವೆರಡರಲಿ ಶಂಖಚಕ್ರಗಳನುರೆ ಧರಿಸಿ ಅಜಸುರಾದ್ಯರು ಬಿಡದೆ ಭಜಿಪ ಪದವ ಭಜಿಪರಿಗೆ ಭವಶರಧಿ ಕಟಿಪ್ರಮಾಣವಿದೆಂದು ಅಜಪಿತನು ತೋರುತಿಹ ಕರಚತುಷ್ಟಯಕೆ 3 ಹದಿನಾಲ್ಕು ಲೋಕಕಾಶ್ರಯವಾಗಿ ತೋರುತಿಹ ಪದುಮಭವನನು ಪಡೆದ ನಾಭಿಸಹಿತ ಉದರಮಂಡಲಕೆ ಮತ್ತದರಡಿಯ ಶೋಭಿಸುವ ಹದಿನಾರು ಬಣ್ಣದಪರಂಜಿ ಕಟಿಸೂತ್ರಕೆ 4 ಕಿರಿಘಂಟೆಸರದೊಡನೆ ಹೊಳೆವ ಪೀತಾಂಬರಕೆ ಗರುಡನಂಸದಿ ಮೆರೆವ ಊರುಗಳಿಗೆ ಸುರನದಿಯ ನೆರೆ ಪಡೆದ ಚರಣದುಂಗುಟಗಳಿಗೆತಿರುಪತಿಯ ವೆಂಕಟನ ದಿವ್ಯ ಮೂರುತಿಗೆ 5
--------------
ತಿಮ್ಮಪ್ಪದಾಸರು
ಜೋ ಜೋ ಜೋ ಜಗತ್ರಾಣ ಸುತ್ರಾಣ ಜೋ ಜೋ ಜೋ ಶುಭವಾಣಿಯ ರಮಣ ಜೋ ಜೋ ವೈಷ್ಣವ ಸಿದ್ಧಾಂತಿ ಶರಣ ಮುಖ್ಯಪ್ರಾಣ ಕಲ್ಯಾಣ ಪ. ಲೋಕಾ ಲೋಕ ಪರ್ವತಗಳ ಮ್ಯಾಲೆ ಏಕಾಕಾರದಿ ಪಾದಗಳೂರಿ ವ್ಯಾಕರಣಗಳ ದಿವಾಕರನಿದಿರಕಲಿ ಸ್ವೀಕರಿಸಿದ ಕರುಣಾಕರ ಮೂರ್ತಿ ಶ್ರೀಪತಿ ಕೃಷ್ಣನ ಸೇವಾನುಸಾರದಿ 1 ಕೋಪಾಟೋಪವ ಸಮರತಿ ತೋರಿ ಪಾಡಿದುಶ್ಯಾಸನ ವಕ್ಷೋವಿಧಾರಿ ದ್ರೌಪಧಿ ಕುಚಕಂಜ ಕುಟ್ಮಲಧಾ 2 ಸ್ವಾನಂದ ಪರಿಪೂರ್ಣ ಕೃಷ್ಣನ ದಾಸ ಆನಂದತೀರ್ಥ ತೋರುವ ಮಂದಹಾಸ ಶ್ರೀನಿಧಿ ವೆಂಕಟೇಶನ ನಂಬಿದವರ ತಾನೆ ಬಂದೊದಗಿ ಪಾಲಿಪ ದೇವಪ್ರವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಂದೆ ಮುದ್ದು ಮೋಹನ್ನ ತವ ಚರಣ ಕಾನಮಿಪೆಬಂದೆನ್ನ ಸಲಹ ಬೇಕೋ ಪ ಎಂದೆಂದಿಗೂ ನಿಮ್ಮ ಪದ ಧ್ಯಾನವಿತ್ತು ಭವಬಂಧನವ ಬಿಡಿಸಬೇಕೋ | ಕರುಣೀ ಅ.ಪ. ಅಂಕಿತವನಿತ್ತೆ ಮನಪಂಕ ಹರಿಸೀ ಹರಿಕಿಂಕರರ ಸಂಗ ಸಲಿಸೋ |ಸಂಕಟವ ಪರಿಹರಿಪ ವೆಂಕಟೇಶನ ಪಾದಪಂಕಜಕೆ ಮಧುಪ ನೆನಿಸೋ |ಶಂಕೆಗಳು ಎಂದೆನಿಪ | ಸೊಂಕು ಜಾಡ್ಯವ ಹರಿಸೆಡೊಂಕು ಮನ ವೈದ್ಯನೆನಿಸೋ |ಮಂಕುಮತಿಯಾದೆನಗೆ ಅಕಲಂಕ ಮಹಿಮನನಲೆಂಕತನವನೆ ಇತ್ತು ಕಾಯೋ | ಕರುಣೀ 1 ಪರಿ ಮಾನವ ಎನ್ನ | ಮರುಕದಿಂದಲಿ ನೋಡಿವಿರಕುತಿಯನಿತ್ತು ಸಲಹೋ | ಕರುಣೀ 2 ಲೆಕ್ಕವಿಲ್ಲದ ದೇಹ ಗೇಹಾದಿಗಳ ಪೊಕ್ಕುಸಿಕ್ಕಿನಿಂದಲಿ ನೊಂದೆನೋ |ಕಕ್ಕಸದ ಸಂಸಾರ | ಅಕ್ಕರವು ಎಂದೆನುತಮರ್ಕಟನ ತೆರನಾದೆನೋ |ಸೊಕ್ಕು ಮೂರೈದನ್ನ | ಮುಕ್ಕಿ ಕಾಡುತ್ತಿರಲುನಕ್ಕು ನೀ ನೋಳ್ಪುದೇನೋ |ಪಕ್ಕಿವಹ ದೇವ ಗುರು ಗೋವಿಂದ ವಿಠ್ಠಲನಅಕ್ಕರದಿ ತೋರಯ್ಯಾ | ಕರುಣೀ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಾತ್ಸಾರಕಿದು ಕಾಲವಲ್ಲ ರಂಗಯ್ಯ ಶ್ರೀ- ವತ್ಸಲಾಂಛನ ಸುಖ ಚಿನ್ಮಯನೆ ವತ್ಸನ ಧ್ವನಿ ಕೇಳಿ ಒದಗುವ ಗೋವಂತೆ ಭೃತ್ಯರ ಸಲಹುವ ಬಿರುದುಳ್ಳ ನರಸಿಂಹ ಪ. ಹುಚ್ಚಾಗೆಲ್ಲರ ಕಚ್ಚುವ ನಾಯಂತೆ ತುಚ್ಛವಾದ ಬಗುಳುಚ್ಚರಿಸಿ ಇಚ್ಛಾನುಸಾರದಿಂದಿರುವ ಹೂಣನ ಬಾಯಿ ಮುಚ್ಚಿಸಿ ಮೂಲೆಯೊಳ್ಮುರಿದೊತ್ತು ಮುರಹರ 1 ನಿನ್ನ ಸೇವೆಯನ್ನು ನಿರುತದಿ ನಡೆಸುತ ಅನ್ಯರ ಲಕ್ಷಿಸದಿರಲೆನ್ನನು ಭಿನ್ನ ಭಾವದಿ ಭೀತಿ ಬಡಿಸುವ ದುಷ್ಟನ ಇನ್ನುಪೇಕ್ಷಿಸಿ ಸುಮ್ಮನಿರುವೆ ಯಾತಕೆ ಸ್ವಾಮಿ 2 ದುಷ್ಟ ಹಿರಣ್ಯಚರ್ಮಾದಿದಮನ ನಿನ- ಗೆಷ್ಟೆಂದು ಪೇಳಲಿ ವಿಧಿಜನಕ ಸೃಷ್ಟಿಗೊಡೆಯ ವೆಂಕಟೇಶನ ಹೂಣನ ಮಾಧವ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ ಎನ್ನಯ ಪ್ರೇಮನ ವಾರಿಜಸಖಶತಕೋಟಿತೇಜನ ಹೊಂತ- ಕಾರಿಯ ನೀ ಕರತಾರೆ ಸೈರಿಸಲಾರೆ ಪ. ವೃಂದಾವನದೊಳಗಾಡುವ ಶ್ರೀ- ಗಂಧವ ಮೈಯೊಳು ತೀಡುವ ಚಂದದಿ ಕೊಳಲೂದಿ ಪಾಡುವ ನಮ್ಮ ಕಂದರ್ಪ ಜಲಕ್ರೀಡೆಯಾಡುವ ನಂದ ನಂದನ ಗೋವಿಂದನ ಕಾಣದೆ ಒಂದು ನಿಮಿಷ ಯುಗವಾಗಿ ತೋರುತಲಿದೆ 1 ಉಡುವ ಸೀರೆಯ ಸೆಳೆದೋಡುವ ದೊಡ್ಡ ಕಡಹದ ಮರವೇರಿ ನೋಡುವ ಕೊಡಲೊಲ್ಲದೆ ಬಹುಕಾಡುವ ಲಜ್ಜೆ- ಗೆಡಿಸಿ ಮಾನಿನಿಯರ ಕೂಡುವ ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿ ಎ- ನ್ನೊಡೆಯನ ಕರತಾರೆ ಅಡಿಗೆರಗುವೆ ನಾ 2 ನೀಲವರ್ಣನ ನಿಜರೂಪನ ಶ್ರೀ- ಲೋಲ ಹೆಳವನಕಟ್ಟೆವಾಸನ ಜಾಲಿ ಹಾಳ ವೆಂಕಟೇಶನ ಭಕ್ತ- ಪಾಲಕ ಪರಮವಿಪೋಷನ ಆಲಸ್ಯವ್ಯಾಕೆನ್ನ ಇನಿಯನ ಕರೆತಾರೆ ಬಾಲೆ ನಿನಗೆ ಕಂಠಮಾಲೆಯ ಕೊಡುವೆ. 3
--------------
ಹೆಳವನಕಟ್ಟೆ ಗಿರಿಯಮ್ಮ
ತಿರುಪತಿಯ ಶ್ರೀ ವೆಂಕಟೇಶ ಕಮಲ ಪ ಹೇಮಮುಖದೀ ನದಿಯ ಕಂಡೇ ಗೋಮಿನೀ ಪದ್ಮಾವತಿ ಕಂಡೆಭೂಮಿಸುರರ ಮೇಳವ ಕಂಡೆ ಆ ಮಹಾ ಗಾಳಿಗೋಪುರ ಕಂಡೆ 1 ಸ್ವಾಮಿ ಪುಷ್ಕರಿಣೀಯ ಕಂಡೆ ಭೂಮಿ ವರಹಾ ದೇವರ ಕಂಡೆರಾಮದೂತನ ಪಾದವ ಕಂಡೆ ಸ್ವಾಮಿಯ ಮಹಾದ್ವಾರವ ಕಂಡೆ 2 ಹರಿಯು ಅಡಗಿದ ಹುತ್ತನು ಕಂಡೆ ಹರಿಯಧ್ವಜದ ಸ್ತಂಭವ ಕಂಡೆಪರಿಪರಿ ವೈಭವವನು ಕಂಡೆ ಪರಮಪುರುಷನಾ ಮೂರ್ತಿಯ ಕಂಡೆ 3 ಹರಿಹರಿ ಎನ್ನುವರನು ಕಂಡೆ ಹರಿದು ಒಳ ಪೋಗುವರನು ಕಂಡೆಹರಿಣಾಂಜನದ ತಾಡನ ಕಂಡೆ ಮಣಿಮಯಿಮುಕುಟವನು ಕಂಡೆ 4 ಹಣೆಯಲ್ಲಿಯ ನಾಮವ ಕಂಡೆ ಅನುಪಮಾದಂಗವನೂ ಕಂಡೆಕೊರಳ ಸರಗೀ ಸರಗಳ ಕಂಡೆ ಹರಳು ರತ್ನದಾಭರಣಗಳನು ಕಂಡೆ 5 ಉರದಿ ಶ್ರೀ ಭೂದೇವಿಯರ ಕಂಡೆ ಕರದಿ ಶುಭಶಂಖ ಚಕ್ರಗಳ ಕಂಡೆಗುರು ಶ್ರೀವಾದಿರಾಜರ್ಪಿಸಿದ ವರ ಶಾಲಿಗ್ರಾಮ ಹಾರವ ಕಂಡೆ 6 ಉದಗಿ ಪೀತಾಂಬರವ ಕಂಡೆ ನಡುವಿನೊಡ್ಯಾಣವನು ಕಂಡೆಜಡಿದ ಮಣಿಗಣ ಭೂಷಣನ ಕಂಡೆ ಜಡಜನಾಭನ ಮೂರ್ತಿಯ ಕಂಡೆ 7 ಅಂದದೀ ಕಾಲ್ಗಡಗವ ಕಂಡೆ ಸುಂದರ ಪಾದಗಳ ಕಂಡೆಮಂದಹಾಸ ಮುಖಾಬ್ಜ ಕಂಡೆ ಇಂದಿರೆಯ ರಮಣನ ಕಂಡೆ 8 ಆಗಮ ಶೃತಿ ಘೋಷವ ಕಂಡೆ ಭಾಗವತರಾ ಮೇಳವ ಕಂಡೆಬಾಗಿಲಾ ಬಲ ಹಸ್ತವ ಕಂಡೆ ಭಾಗೀರಥಿಯಾ ಪಿತನವ ಕಂಡೆ 9 ಚಿನ್ನದ ಕೂಪವನೂ ಕಂಡೆ ಅನ್ನಪೂರ್ಣಾದೇವಿಯ ಕಂಡೆರನ್ನದ ಹರಿವಾಣವ ಕಂಡೆ ಉಂಬುವ ವೈಭವವನು ಕಂಡೆ 10 ಕಪ್ಪದ ಕಣಜವನೂ ಕಂಡೆ ತಪ್ಪದೇಹಾರುವವರನು ಕಂಡೆಇಪ್ಪತ್ತು ದುಡ್ಡಿಗೆ ತೀರ್ಥ ಒಪ್ಪಿಲೇಮಾರುದನುರನು ಕಂಡೆ 11 ಸಾಸಿರ ನಾಮಗಳ ಒಡೆಯಾ ವಾಸುದೇವಾಚ್ಯುತನ ಕಂಡೆಕಾಸಿಗೆ ಕೈಚಾಚುವಂಥ ಕೇಸಕ್ಕ ತಿಮ್ಮಪ್ಪನ ಕಂಡೆ 12 ಆವ ಜನುಮದ ಸುಕೃತವೋ ಎನಗೆ ಭೂವೈಕುಂಠವನ್ನೇ ಕಂಡೆಶ್ರೀವಿಧಿಭವಾದಿ ವಂದ್ಯ ಐಹೊಳಿ ವೆಂಕಟೇಶನ ಕಂಡೆ 13 ಶುಭ ಮಂಗಲಂ ಸಿರಿಗೆಜಯ ಪುದವೀ ಪದ ಕೇಳಿ ಪೇಳಿದರೆ ಒಲಿದು ಫಲವೀವ ಕುಲಸ್ವಾಮಿ ಅವರೀಗೆ 14
--------------
ಐಹೊಳೆ ವೆಂಕಟೇಶ
ದಣಿಯಾ ನೋಡಿದೆ ನಿನ್ನಾ ಪ. ಋಜಗಣದೊಡೆಯನೆ ಬಿಡುವಿಲ್ಲದೆ ನಿನ್ನ ಅಡಿಗಳಿಗೆ ವಂದಿಪೆ ಅ.ಪ. ಮಹದ್ವಾರ ಬಾಗಿಲಾದಲ್ಲಿ ಇರುತಿರುವೋರು ಜಯವಿಜಯರಿಲ್ಲಿ ವಾರವಾರಕ್ಕೆ ನಿನ್ನ ಬ್ರಹ್ಮಾದಿ ದ್ವಿಜರು ಹಾರೈಸಿ ಹರುಷದಿ ಪೂಜೆಗೊಂಬೊರೆ 1 ಯಡಬಲದಲ್ಲಿ ನಿನ್ನ ಮಡದಿಯರಿಂದ ಒಡಗೂಡಿ ಸಡಗರದಲ್ಲಿ ಇಂದಿರೇಶ ಗರುಡವಾಹನೆ ರಂಗಾ ಉರಗಾದ್ರಿನಿವಾಸ ಶೇಷಾಚಲವಾಸ ಶ್ರೀ ವೆಂಕಟೇಶಾ 2 ಸೃಷ್ಟ್ಯಾದಷ್ಟ ಕರ್ತಾ ಶ್ರೀವಿಠಲ ನಿನ್ನಾ ಗುಣಯೆಷ್ಟೆಂದು ವರ್ಣಿಪೆನಾ ಅಷ್ಟ ಮಹಿಷಿಯರ ಆಳದ ಮದವೆಷ್ಟೊ ಕಾಳಿಮರ್ದನಕೃಷ್ಣ ಬಲು ಜೋರಾ ದಿಟ್ಟಾ ಆನಂದ ಕೊಟ್ಟಾ3
--------------
ಕಳಸದ ಸುಂದರಮ್ಮ